ನನಗೆ ಸಣ್ಣ ವಯಸ್ಸಿನಿಂದಲೇ ಸತ್ಯ ಯಾವುದು ಸತ್ಯವೇ ದೇವರೆಂದಾಗ ಸತ್ಯ ಯಾಕೆ ಹೇಳಬಾರದು. ಹೀಗೇ ಮನಸ್ಸಿನಲ್ಲಿ ಪ್ರಶ್ನೆಗಳೇಳುತ್ತಿತ್ತು. ದೊಡ್ಡವರು ಸುಳ್ಳುಹೇಳಬಹುದು ಸಣ್ಣವರು ಯಾಕೆ ಹೇಳಬಾರದು ಎನ್ನುವ ವಿಚಾರದಲ್ಲಿ ಸಾಕಷ್ಟು ಬಾರಿ ಪ್ರಶ್ನೆ ಮಾಡಿ ಬೈಸಿಕೊಂಡಿದ್ದೆನಾದರೂ ಎಲ್ಲೋ ಒಳಗೆ ಒಂದು ಕಡೆ ಸುಳ್ಳು ಹೇಳಬಾರದೆನ್ನುವ ಕೂಗಿಗೆ ಸ್ಪಂಧಿಸಿ ಮುಂದೆ ನಡೆದು ಸತ್ಯ ದ ಹುಡುಕಾಟದಲ್ಲಿ ವರ್ಷ ಕಳೆದೇ ಹೋಗಿತ್ತು. ಕೊನೆಗೂ ಸತ್ಯ ಸಿಕ್ಕಿದ್ದು ಒಳಗೆ ಹೊರತು ಹೊರಗಲ್ಲ. ಹೊರಗಿರೋದು ಸುಳ್ಳು
ಆದರೂ ಮಾನವ ಜೀವನ ನಡೆಸೋದಕ್ಕೆ ಧರ್ಮ ರಕ್ಷಣೆ ಮಾಡೋದಕ್ಕೆ ಸತ್ಯಕ್ಕೆ ತೇಪೆ ಹಾಕುವ ಸುಳ್ಳು ಹೊರಬರುತ್ತಲೇ ಇರುತ್ತದೆ. ಹಾಗಂತ ಜೀವ ಸತ್ಯ ವನ್ನು ಗೆದ್ದು ಹೋಗೋದಿಲ್ಲ.
ಶ್ರೀ ಶಂಕರಾಚಾರ್ಯರು ತಿಳಿಸಿರುವಬ್ರಹ್ಮನ್ ಸತ್ಯ ಜಗತ್ಮಿಥ್ಯ.
ಕಣ್ಣಿಗೆ ಕಾಣದ ಬ್ರಹ್ಮ ಸತ್ಯವಾದರೂ ಕಾಣುವ ಜಗತ್ ಮಿಥ್ಯ.
ಈ ಮಿಥ್ಯದಲ್ಲಿ ಸತ್ಯವನ್ನು ಅರಸಿದರೆ ಬದಲಾಗುತ್ತಲೇ ಇರುತ್ತದೆ.
ಇದು ಮನುಕುಲಕ್ಕೆ ಅರ್ಥ ಮಾಡಿಸಿದರೂ ಅನುಭವಕ್ಕೆ ಬರಲು ಸತ್ಯದ ದಾರಿ ಹಿಡಿಯಲೇಬೇಕೆನ್ನುತ್ತದೆ ಆಧ್ಯಾತ್ಮ.
ಎಷ್ಟು ದೇವರನ್ನು ಸೃಷ್ಟಿ ಮಾಡಿದರೂ ಒಬ್ಬನೇ ದೇವರು.ಎಷ್ಟು ಅಸತ್ಯ ಹರಡಿದರೂ ಮೂಲ ಸತ್ಯ ಬದಲಾಗದು.ಭ್ರಮೆಯಲ್ಲಿ ಮಾಯೆಯಲ್ಲಿ ಜೀವವಿರುವಾಗ ಸತ್ಯದ ಅರಿವಾಗದು. ಅದರಿಂದ ಹೊರಬರೋದೇ ಸಂಸಾರದಿಂದ ಹೊರಬಂದಂತೆ.
ಸಂಸಾರ ತೊರೆದು ಕಾಡಿಗೆ ಹೋದವರಿಗೂ ಸತ್ಯ ಕಾಣದು.
ಸಂಸಾರದಲ್ಲಿದ್ದು ಸತ್ಯವೇ ದೇವರು ಎಂದುಕೊಂಡವರಿಗೆ ದೇವರ ದರ್ಶನ ವಾಗಿದೆ. ಸತ್ಯಹರಿಶ್ಚಂದ್ರನಂತಿರಲಾಗದು. ಆದರೆ ಹರಿಯ ಸ್ಮರಣೆಯಲ್ಲಿರಬಹುದು.
ಏನಾದರಾಗು ಮೊದಲು ಮಾನವನಾಗು. ಮಾನವನೊಳಗೇ ಅಡಗಿರುವ ಈ ಸತ್ಯ ಮಿಥ್ಯದ ವಿಜ್ಞಾನ ಜೀವನಕ್ಕೆ ಆಧಾರ.