ಮಾನವ ಎಷ್ಟು ರಾಜಕೀಯವನ್ನು ಒಳಗೆಳೆದುಕೊಂಡು ಹೋರಾಟ ನಡೆಸಿದರೂ ಜೀವನ್ಮುಕ್ತಿ ಸಿಗೋದಿಲ್ಲ. ಕಾರಣ ರಾಜಕೀಯ ಹೊರಗಿದೆ. ಜೀವ ಒಳಗಿದೆ. ಜೀವಾತ್ಮನನ್ನು ಪರಮಾತ್ಮನೆಡೆಗೆ ಸೇರಿಸಲು ರಾಜಕೀಯತೆ ಅಡ್ಡಲಾಗಿ ಮಲಗಿದೆ. ನಮ್ಮ ಜನ್ಮದ ಮೂಲ ಧರ್ಮ ಕರ್ಮ ಬಿಟ್ಟು ದೂರ ನಡೆದವರ ಹಿಂದೆ ನಡೆದರೆ ಅತಂತ್ರ ಜೀವನವೆ ಗತಿಯಾಗಿದೆ.ಇಂದಿನ ಅರಸ ಮುಂದಿನ ಆಳಾಗಬಹುದು.
ಆಳು ಅರಸನಾಗಬಹುದು. ಸರಸ್ವತಿ ಯನ್ನು ಲಕ್ಮಿಯಾಗಿಸೋದು ಮಾನವನ ರಾಜಕೀಯ. ಮೂಲ ಸ್ವರೂಪ ಬದಲಾಗೋದಿಲ್ಲ.
ವಿಪರ್ಯಾಸವೆಂದರೆ, ಭಾರತೀಯರು ಜ್ಞಾನದಲ್ಲಿ ಶ್ರೀಮಂತ ರಾಗಿ ಪರಮಾತ್ಮನ ಹತ್ತಿರ ಹೋದವರನ್ನು ಬಡವರೆಂಬ ಪಟ್ಟಿ ಕಟ್ಟಿ ಹೊರಗಿನ ರಾಜಕೀಯಕ್ಕೆ ಎಳೆದು ಸಾಲ,ಸೌಲಭ್ಯ
ಗಳನ್ನು ಉಚಿತವಾಗಿ ನೀಡಿ ಈಗ ಅವರುಗಳೆ ಸರ್ಕಾರದ ವಿರುದ್ದ ನಿಂತರೆ ?
ಇಲ್ಲಿ ರಾಜಯೋಗವೆಂದರೆ ರಾಜಕೀಯ ನಡೆಸೋದು ಎನ್ನುವ ಅಜ್ಞಾನವೇ ಮಾನವನಿಗೆ ದಾರಿ ತಪ್ಪಿಸಿದೆ.ಈ ಪರಿಸ್ಥಿತಿಯಲ್ಲಿ ಜೀವನ ನಡೆಸೋ ಹಾಗಾಗಿರೋದಕ್ಕೆ ಕಾರಣವೆ ಶಿಕ್ಷಣದಲ್ಲಿರುವ ರಾಜಕೀಯ ವಿಚಾರ. ಅಂದರೆ
ರಾಜ ಮಹಾರಾಜರ ಇತಿಹಾಸ,ಪುರಾಣಗಳ ರಾಜಕೀಯತೆ ಮಕ್ಕಳನ್ನು ಬೌತಿಕ ಜಗತ್ತಿನಲ್ಲಿ ಬೆಳೆಸಿ,ಅದು ಮಕ್ಕಳು ಮೊಮ್ಮಕ್ಕಳವರೆಗೂ ಮುಂದುವರೆಯಿತು.
ಬೌತಿಕಾಸಕ್ತಿ ಬೆಳೆದಂತೆ ಹೊರಗಿನ ಶಿಕ್ಷಣವನ್ನು ಒಳಗೆಳೆದುಕೊಂಡು ಒಳಗಿದ್ದ ಸಾತ್ವಿಕ ಜ್ಞಾನವನ್ನು ಬಿಟ್ಟು ನಡೆದ ಜೀವಕ್ಕೆ ಮನರಂಜನೆ ಸಿಕ್ಕರೂ ಆತ್ಮವಂಚನೆಯ
ದು:ಖ ತಪ್ಪಿಲ್ಲ. ಆತ್ಮಜ್ಞಾನವನ್ನು ಓದಿ,ಕೇಳಿ, ಪ್ರಚಾರಮಾಡಿ
ಸಮಾಜ ಸುಧಾರಣೆ ಮಾಡುವ ಮಧ್ಯವರ್ತಿಗಳು ಅನುಭವ
ಜ್ಞಾನವಿಲ್ಲದೆ ಇತರರನ್ನು ಆಳಲು ಹೊರಟರೆ ಅರಸನಂತೆ
ಜೀವನ ನಡೆಸಬಹುದು.ಆದರೆ ಆಳಾಗಿ ಹಾಳಾಗಿ ಹೋದವರ ಆತ್ಮಕ್ಕೆ ಶಾಂತಿ ಸಿಗದಿದ್ದರೆ ಅದೇ ದೊಡ್ಡ ಸಮಸ್ಯೆ
ಯಾಗಿ ತಿರುಗಿ ಬರೋವಾಗ ಸತ್ಯ ಕಾಣೋದಿಲ್ಲ. ಇಲ್ಲಿ ಎಷ್ಟು
ಸುಳ್ಳು, ಮೋಸ,ವಂಚನೆ,ಭ್ರಷ್ಟಾಚಾರ ದ ರಾಜಕೀಯ ತಮ್ಮ
ಬೌತಿಕ ಜಗತ್ತನ್ನು ಬೆಳೆಸಿತೋ ಅಷ್ಟೇ ಧಾರ್ಮಿಕ ಜಗತ್ತು
ಹಿಂದುಳಿಯಿತು. ಕಾಲಚಕ್ರ ತಿರುಗಿದಾಗಲೇ ಮೇಲಿನದ್ದು
ಕೆಳಗೆ ಬರೋದು. ಬರೋವಾಗ ಮಧ್ಯದಲ್ಲಿ ಸತ್ಯ ತಡೆದರೆ
ಕಷ್ಟ ನಷ್ಟ. ಜೀವವೆ ಅನುಭವಿಸುವುದೆನ್ನುವ ಸಾಮಾನ್ಯಜ್ಞಾನ
ಮಾನವನಿಗಿದ್ದರೆ ಮಾತ್ರ ಸತ್ಯಕ್ಕೆ ಶರಣಾಗಿ ಧರ್ಮದ ಕಡೆಗೆ
ಬರಬಹುದು. ಸಾಮಾನ್ಯಜ್ಞಾನವಿಲ್ಲದೆ ರಾಜಕೀಯ ನಡೆಸಿದರೆ ಅದೇ ಮುಂದೆ ಆತ್ಮಹತ್ಯೆಯವರೆಗೆ ಎಳೆಯಬಹುದು. ಇತ್ತೀಚಿನ ದಿನಗಳಲ್ಲಿ ಎಷ್ಟೋ ಪ್ರತಿಭಾವಂತರೂ ,ಶ್ರೀಮಂತ ರೂ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ.ಎಂದರೆ ಅವರಿಗೇ ತಿಳಿಯದೆ ಅಧರ್ಮ
ಮಿತಿಮೀರಿದಾಗ ಒಳಗೇ ಅಡಗಿದ್ದ ಜೀವಾತ್ಮನಿಗೆ ತಡೆದುಕೊಳ್ಳಲು ಕಷ್ಟವಾಗಿ ಆತ್ಮಹತ್ಯೆಗೆ ಪ್ರಚೋಧನೆ ನೀಡಿ
ದೇಹದಿಂದ ಬಿಡುಗಡೆ ಪಡೆಯುತ್ತದೆ. ಇಲ್ಲಿ ಮಾನವನ ಮನಸ್ಸು ಬದಲಾಗಬಹುದು.ಆತ್ಮ ಬದಲಾಗೋದಿಲ್ಲ.
ಮನಸ್ಸನ್ನು ಆತ್ಮವೆಂದು ತಿಳಿಯುವುದು ಅಸತ್ಯ. ಮನಸ್ಸನ್ನು
ತಡೆಹಿಡಿಯುವುದೆಂದರೆ ಅಧರ್ಮ,ಅಸತ್ಯದಿಂದ ದೂರ ಇರುವುದು. ಆದರೆ, ತಿಳಿಯದೆ ಯಾವಾಗ ಅದರೊಂದಿಗೆ
ವ್ಯವಹಾರ ನಡೆಸಿ ಮುಂದೆ ಬಂದ ಮನಸ್ಸಿಗೆ ಒಮ್ಮೆ ಸತ್ಯ
ತಿಳಿಯುವುದೋ ತಿರುಗಿ ಬರಲಾಗದೆ ಜೀವವನ್ನು ತೆಗೆದುಕೊಳ್ಳುವ ಮಟ್ಟಿಗೆ ಬುದ್ದಿ ಓಡುತ್ತದೆ. ಹೀಗಾಗಿ ಶಿಕ್ಷಣದಲ್ಲಿಯೇ ಮಕ್ಕಳಿಗೆ ಮನಸ್ಸನ್ನು ತನ್ನ ಹತೋಟಿಯಲ್ಲಿ
ಇಟ್ಟುಕೊಳ್ಳಲು ಕಲಿಸಬೇಕಿದೆ. ಸತ್ಯದ ದಾರಿ ತೋರಿಸಿದರೆ
ಧರ್ಮವೂ ಬರುತ್ತದೆ. ಅಸತ್ಯದ ದಾರಿ ತೋರಿಸಿದರೆ ಅಧರ್ಮ ಜೊತೆಯಾಗುತ್ತದೆ. ಇರೋದು ಎರಡೇ ಮಾರ್ಗ
ಇವೆರಡರ ನಡುವೆ ನಿಂತರೆ ಜೀವನವೆ ಅತಂತ್ರವಾಗುತ್ತದೆ.
ಸ್ವತಂತ್ರ ವಾಗಿರುವ ಸತ್ಯಜ್ಞಾನ, ಸ್ವೇಚ್ಚಾಚಾರದ ಮಿಥ್ಯಜ್ಞಾನದ ಮಧ್ಯೆ ನಿಂತ ತಂತ್ರಜ್ಞಾನದಿಂದ ಮಾನವನಿಗೆ
ಮುಕ್ತಿ ಮೋಕ್ಷದ ಅರ್ಥ ತಿಳಿಯುತ್ತಿಲ್ಲವೆನ್ನಬಹುದೆ?
ಕಣ್ಣಿಗೆ ಕಂಡ ಹಾಗೆ ಭ್ರಷ್ಟಾಚಾರ ಇದ್ದರೂ ಹೇಳದ ಸ್ಥಿತಿಗೆ ಜೀವ ನಿಂತಿದೆ ಎಂದರೆ ಋಣಭಾರ. ಯಾರನ್ನು ಸರಿ ಎಂದು ನಂಬಿ ನಡೆದೆವೋ ಅವರೆ ಸರಿಯಿಲ್ಲವೆಂದಾಗ ವಿರೋಧಿಸುವ ಅಧಿಕಾರವಿಲ್ಲ.ಕಾರಣ ನಮ್ಮ ಸಹಕಾರದ
ಪ್ರತಿಫಲ. ಹಾಗಂತ ಜೀವಮಾನವಿಡೀ ಅವರ ಹಿಂದೆ ಇದ್ದರೆ
ತಪ್ಪು ದಾರಿ ದೊಡ್ಡದಾಗಿ ಶಿಕ್ಷೆ ಖಚಿತ.
ಹಿಂದಿನ ರಾಜರ ಕಾಲದಲ್ಲಿದ್ದ ರಾಜಧರ್ಮ ಇಂದಿಲ್ಲ. ರಾಜನೆ
ದೇವರು ಎಂಬುದಿಲ್ಲ. ಆದರೆ ರಾಜಕೀಯತೆ ಕಡೆಗೆ ಮುಖ
ಮಾಡಿಕೊಂಡು ರಾಜಯೋಗಿಗಳೆಂದರೆ ತಪ್ಪು. ಯಾರಲ್ಲಿ
ಇದನ್ನು ನಾವು ಕಾಣುವೆವೋ ಅವರಿಂದ ದೂರವಿರುವ ಸ್ವಾತಂತ್ರ್ಯ ನಮಗೆ ಇಂದಿನ ಪ್ರಜಾಪ್ರಭುತ್ವದಲ್ಲಿ ಇದ್ದರೂ
ಅವರಿಗೆ ಸಹಕರಿಸುತ್ತಾ ನನಗೇನೂ ಸಾಧ್ಯವಿಲ್ಲ ಎನ್ನುವ
ಪ್ರಜೆಗಳಿಂದಲೇ ಭ್ರಷ್ಟಾಚಾರ ಮುಗಿಲುಮುಟ್ಟಿರೋದು.
ಇಷ್ಟಕ್ಕೂ ನಾವು ನೀಡುವ ಸಹಕಾರದಿಂದ ಯಾವ ಧರ್ಮ ಉಳಿದಿದೆ? ಸತ್ಯ ಎಲ್ಲಿದೆ?
ಬದಲಾವಣೆ ಜಗದ ನಿಯಮ. ಬದಲಾವಣೆಗೆ ಸ್ಪಂದಿಸೋದು ಮಾನವ ಧರ್ಮ . ದೇವರನ್ನು ಗುಡಿ ಗೋಪುರಗಳಲ್ಲಿ ಇಟ್ಟು ಪೂಜಿಸಿದರೆ ದೈವಶಕ್ತಿ ಬರುವುದೆ?
ದೈವಗುಣವನ್ನು ಬೆಳೆಸಿಕೊಂಡರೆ ಸಾಧ್ಯ. ದೇವರ ಹೆಸರಿನಲ್ಲಿ
ರಾಜಕೀಯತೆ ನಡೆಸಿದರೆ ಅಸುರರನ್ನು ಸೃಷ್ಟಿ ಮಾಡಿದಂತೆ.
ಭೂಮಿತಾಯಿಯ ಋಣ ತೀರಿಸಲು ಬಂದ ಜೀವಕ್ಕೆ ಇನ್ನೂ
ಋಣವನ್ನು ಹೆಚ್ಚಿಸಿರೋದು ರಾಜಕೀಯ. ಇದರಿಂದ ಹೊರ
ಬರಲು ಬೇಕಿದೆ ಕಾಯಕವೆ ಕೈಲಾಸವೆಂಬ ಮಂತ್ರ.ನಾಮಜಪದಿಂದಲೇ ಕಾಯಕ ಮಾಡಿ. ಒಳಗೇ ಇದ್ದ ಪರಮಾತ್ಮನೆಡೆಗೆ ಸತ್ಯಜ್ಞಾನದಿಂದ ಹತ್ತಿರವಾಗೋದಕ್ಕೆ ಮನಸ್ಸು ಮನೆಯೊಳಗಿದ್ದರೆ ಉತ್ತಮ.
ಶಾಂತಿ ಒಳಗಿದೆ. ಕ್ರಾಂತಿ ಹೊರಗಿದೆ."ಯಾವುದಯ್ಯಾ ದಾರಿ
ವೈಕುಂಟಕ್ಕೆ" ಎನ್ನುವ ಹಾಗೆಯೇ ಯಾವುದಯ್ಯಾ ದಾರಿ ಕೈಲಾಸಕ್ಕೆ?" ಎನ್ನಬಹುದಲ್ಲವೆ?
ಶಿವಶಕ್ತಿಯ ಸಮಾನತೆಯಿಂದಲೇ ಭೂಮಿ ನಡೆದಿರುವುದು.
ಅಸಮಾನತೆಯಿಂದ ರಾಜಕೀಯತೆ ಬೆಳೆದಿರೋದು.
ಸಂನ್ಯಾಸಿ ಯ ಹತ್ತಿರ ಹೋಗಿ ಸಂಸಾರದ ನೆಮ್ಮದಿ ಕೇಳಿದರೆ
ಸಂಸಾರಬಿಟ್ಟು ಹೊರಡು ಎನ್ನಬಹುದು. ಸಂಸಾರಿಯ ಕಷ್ಟ
ಸಂಸಾರಿಗಷ್ಟೆ ಅನುಭವಕ್ಕೆ ಬಂದಾಗ ಅವರವರ ಕಷ್ಟ ನಷ್ಟಕ್ಕೆ ಅವರೆ ಕಾರಣವೆನ್ನುವುದೇ ಆಧ್ಯಾತ್ಮ ಸತ್ಯ. ಸತ್ಯ ಧರ್ಮದ. ಮಾರ್ಗದಿಂದ ಮಾತ್ರ ಬಿಡುಗಡೆ ಎಂದಾಗ ಬೌತಿಕ
ಸತ್ಯವನ್ನು ಇದೇ ಧರ್ಮ ಎಂದು ಮೂಲ ಬಿಟ್ಟು ನಡೆದರೆ
ತಾತ್ಕಾಲಿಕ ವಷ್ಟೆ. ಈಗ ಕೊರೊನ ಹೇಗೆ ತಿರುಗಿ ಬಂದಿದೆಯೋ ಹಾಗೆಯೇ ಮಾಡಿದ ತಪ್ಪಿಗೆ ಶಿಕ್ಷೆಯಿದೆ. ಇಲ್ಲಿ
ಯಾರೂ ಪರಿಪೂರ್ಣರಲ್ಲ. ಹೀಗಾಗಿ ನಮ್ಮ ನಮ್ಮ ಮೂಲ
ನಮಗೆ ಶ್ರೀ ರಕ್ಷೆ. ಕಷ್ಟ ಎರಡೂ ಕಡೆಯಿದೆ. ಕಷ್ಟ ಪಟ್ಟರೆ ಸುಖವಿದೆ. ಎಲ್ಲಿಂದ ಬಂದಿತೋ ಜೀವ ಅಲ್ಲಿಗೆ ಹೋಗೋವರೆಗೂ ಕಷ್ಟ ನಷ್ಟ ತಪ್ಪಿದ್ದಲ್ಲ.ಇದಕ್ಕೆ ರಾಜಕೀಯ
ಬಿಟ್ಟು ರಾಜಯೋಗದೆಡೆಗೆ ನಡೆಯುತ್ತಿದ್ದರು ಹಿಂದಿನ ಮಹಾತ್ಮರುಗಳು. ಈಗಿನವರಲ್ಲಿ ಕೊನೆ ಉಸಿರಿರುವವರೆಗೂ
ರಾಜಕೀಯದ ದಾಹ ಬಿಡುತ್ತಿಲ್ಲ.ಇದಕ್ಕೆ ಕಾರಣ ಸಹಕಾರ.
ಇದು ಧಾರ್ಮಿಕ ಕ್ಷೇತ್ರದಲ್ಲಿಯೂ ಇರುವುದು ದೇಶದ ಧರ್ಮ
ರಕ್ಷಣೆಗೆ ತೊಡಕಾಗಿದೆ.ಪ್ರಜಾ ಧರ್ಮವೆ ಶ್ರೇಷ್ಠ.
ಪರಧರ್ಮದವರ ಶಿಕ್ಷಣ, ವ್ಯವಹಾರ,ಸಾಲ,ತಂತ್ರಜ್ಞಾನ, ವಿಜ್ಞಾನ ಎಲ್ಲಾ ಬೇಕು.ಅವರು ಬೇಡ ಎಂದರೆ?
ಹಾಗೆ ಭಾರತದ ನೆಲ ಜಲ ವ್ಯವಹಾರ,ಶಿಕ್ಷಣ,ಪ್ರಜಾಸರ್ಕಾರ
ಎಲ್ಲಾ ಪಡೆದು ಭಾರತವನ್ನೇ ಆಳಲು ಹೊರಟರೆ?
ನಾವೆಲ್ಲರೂ ಎಲ್ಲಿ ಸೋತಿರುವುದು? ಗೆದ್ದವರು ಯಾರು?
ಧರ್ಮ ಯಾವುದು? ಅಧರ್ಮ ಎಲ್ಲಿದೆ? ಸಾಲಗಾರರು ಯಾರು? ತೀರಿಸುವುದು ಹೇಗೆ? ಎಲ್ಲಾ ನಮ್ಮ ಜ್ಞಾನದಲ್ಲಿದೆ.
ಸರ್ಕಾರ ಏನೂ ಮಾಡಲಾಗದು. ನಮ್ಮ ಸಹಕಾರ ಸತ್ಯಕ್ಕೆ
ಇದ್ದರೆ ಸಾಲಮನ್ನಾ ಪರಮಾತ್ಮನೆ ಮಾಡಬಹುದು. ಇಲ್ಲವಾದರೆ ಪರದೇಶಿಗಳಾಗಿ ಹಿಂದೆ ನಿಲ್ಲುವುದಷ್ಟೆ ಹಿಂದೂ
ಧರ್ಮ ವಾಗಬಹುದು. ಹಿಂದುಳಿದವರು ಯಾರು?
ಅಲ್ಪಸಂಖ್ಯಾತರಲ್ಲಿ ಒಗ್ಗಟ್ಟು ಮುಖ್ಯ. ವಿಶ್ವದಲ್ಲಿ ಅಲ್ಪಸಂಖ್ಯಾತರು ಯಾರು? ಹೊರಗಿನಿಂದ ಪರರನ್ನು ಒಳಗೆ ಕರೆದು ಒಳಗಿದ್ದವರನ್ನು ಹೊರಗೆ ದೂಡಿದರೆ ಆಳೋರು ಯಾರು? ಇದು ನಮ್ಮ ಒಳಗಿನ ಜ್ಞಾನಕ್ಕೆ ತಿಳಿಸಿರುವುದಾಗಿದೆ.
ಮೂಲ ಜ್ಞಾನ ಬೆಳೆಸಿಕೊಂಡು ಹೊರಗಿನ ಜ್ಞಾನ ತಿಳಿಯಬಹುದು. ಕಾಲದ ಪ್ರಭಾವವಷ್ಟೆ.ಅನುಭವಿಸಿದ ಮೇಲೆ ಅರ್ಥ ಆಗಬೇಕು. ಕೆಲವರಿಗೆ ಮೊದಲೇ ತಿಳಿಯುತ್ತದೆ.ಕೆಲವರಿಗೆ ಹೇಳಿ ಕೇಳಿದ ಮೇಲೆ ,ಮತ್ತೆ ಕೆಲವರಿಗೆ ದಾರಿಯಿಲ್ಲದೆ ಇದ್ದಲ್ಲೇ ಇರುತ್ತಾರೆ. ಕೆಲವರು ಮತ್ತೂ ದಾರಿ ತಪ್ಪಿಸಿ ನಡೆಸುತ್ತಾರೆ. ಪರಮಾತ್ಮನೆ ಎಲ್ಲರನ್ನೂ ನಡೆಸಿದರೂ ಅವರವರ ಕರ್ಮಕ್ಕೆ ತಕ್ಕಂತೆ ಜೀವ
ನಡೆಯುತ್ತದೆ. ಸಮಸ್ಯೆಗಳು ಬೆಳೆದಿರೋದೆ ರಾಜಕೀಯದಿಂದ. ರಾಜಕಾರಣಿಗಳನ್ನು ಮುಂದಿಟ್ಟುಕೊಂಡು ಮಧ್ಯವರ್ತಿಗಳು ನಡೆಸುತ್ತಿರುವ ವ್ಯವಹಾರದಲ್ಲಿ ಧರ್ಮ ಎಲ್ಲಿದೆ? ಪ್ರಜಾಧರ್ಮ ಎಲ್ಲರಿಗೂ
ಒಂದೇ ಅಲ್ಲವೆ?