ಅಧ್ವೈತ ಸಂಶೋಧನೆ

ಅಧ್ವೈತ ಸಂಶೋಧನೆಯು  ಜ್ಞಾನಯೋಗದಿಂದ ಸಾಧ್ಯವಾದಂತೆ ಕರ್ಮ ಯೋಗದಿಂದ ಕಷ್ಟವಿದೆ. ಇದಕ್ಕೆ ಶ್ರೀ ಶಂಕರ ಭಗವತ್ಪಾದರು  ಜ್ಞಾನಯೋಗ ಕರ್ಮ ಯೋಗಕ್ಕಿಂತ ದೊಡ್ಡದು ಎಂದರು. ಯೋಗವಿಲ...

Friday, July 10, 2026

ಅಧ್ವೈತ ಸಂಶೋಧನೆ

ಅಧ್ವೈತ ಸಂಶೋಧನೆಯು  ಜ್ಞಾನಯೋಗದಿಂದ ಸಾಧ್ಯವಾದಂತೆ ಕರ್ಮ ಯೋಗದಿಂದ ಕಷ್ಟವಿದೆ.
ಇದಕ್ಕೆ ಶ್ರೀ ಶಂಕರ ಭಗವತ್ಪಾದರು  ಜ್ಞಾನಯೋಗ ಕರ್ಮ ಯೋಗಕ್ಕಿಂತ ದೊಡ್ಡದು ಎಂದರು. ಯೋಗವಿಲ್ಲದೆ  ಯೋಗಿಯಾಗಲಾರ. ಸಂನ್ಯಾಸಿಯಾದರೂ ಆಗಬಹುದು ಯೋಗಿಯಾಗೋದು ಕಷ್ಟ. ಸಂನ್ಯಾಸವೆಂದರೆ ಎಲ್ಲಾ ತೊರೆದು ಕಾವಿ ಧರಿಸೋದಷ್ಟೆ ಎನ್ನುವ  ಜನರ ಮುಂದೆ  ಯೋಗಿ ಕಾಣೋದಿಲ್ಲ. ಒಟ್ಟಾರೆ  ಅಧ್ವೈತ ಸಂಶೋಧನೆ ಓದಿನಿಂದ ಬರುವುದಿಲ್ಲ ಅನುಭವಸಾರದಿಂದ  ಅರಿಯುವುದಾಗಿದೆ.
ಭಾಗವತ ಪುರಾಣ ಭಗವಂತನ ವರ್ಣನೆ  ಮಾಡುತ್ತದೆ. ಅದರೊಳಗಿನ ಎಲ್ಲವೂ  ಅಧ್ವೈತ ದಂತೆ  ಕಂಡರೂ ಧ್ವೈತವೇ ಆಗಿರುತ್ತದೆ. ಕಾರಣ ಅಲ್ಲಿ ರಾಜಕೀಯತೆ ಎದ್ದು ಕಾಣುತ್ತದೆ.
ಆದರೆ ಭಗವಂತನೇ  ಹೇಳಿರುವ ಭಗವದ್ಗೀತೆ ಯಲ್ಲಿ ಯೋಗವಿದೆ. ಯಾವಾಗ ಭಗವದ್ಗೀತೆಯ  ಯೋಗದಿಂದ ಮಾನವ ಜೀವನದ ಸತ್ಯಾಸತ್ಯತೆಯನ್ನು  ಅನುಭವಿಸುತ್ತಾ ಸಾಗುವನೋ ಅಲ್ಲಿ ಮಹಾತ್ಮರ ದರ್ಶನ ಸಾಧ್ಯ. ಪರಮಾತ್ಮನ ಜೀವಾತ್ಮ ಸೇರಲು  ನಡೆಸೋ  ಧಾರ್ಮಿಕ ಕಾರ್ಯದಲ್ಲಿ ರಾಜಕೀಯ ಬೆರೆತಾಗ. ಭೋಗಕ್ಕೆ ತಿರುಗುತ್ತದೆ. ರಾಜಕೀಯದಲ್ಲಿ ಧರ್ಮ ವಿದ್ದರೆ  ಆತ್ಮನಿರ್ಭರವಾಗುತ್ತದೆ.
 ಇದನ್ನು ಕಲಿಕೆಯ ಹಂತದಲ್ಲಿಯೇ  ತಿಳಿಸಿ ಬೆಳೆಸುವುದು ಗುರುಹಿರಿಯರ ಧರ್ಮ ಕರ್ಮ. ಕಲಿಕೆಯೇ ಅಂತರ ಬೆಳೆಸಿದರೆ ಅಜ್ಞಾನವಾಗಿರುತ್ತದೆ. 
ಕೃಷ್ಣನೊಬ್ಬನೆ ಜಗದ್ಗುರು ಎನ್ನುವುದು ಸುಲಭ. ಆ ಕೃಷ್ಣನೇ ಎಲ್ಲರೊಳಗಿದ್ದು  ಜಗತ್ತನ್ನು ನಡೆಸುತ್ತಿರುವವನೆಂದು ಯಾರು ತಿಳಿಸಿದರೂ ನಾನೇ ಗುರು ಎನ್ನುವ ಅಹಂಕಾರವಿದ್ದರೆ  ಕತ್ತಲ ಜಗತ್ತೇ  ಸೃಷ್ಟಿ ಯಾಗುತ್ತದೆ.
ಒಂದು ದೇವರಿಗೆ ಹಲವಾರುಗುಡಿಗೋಪುರ ಕಟ್ಟಬಹುದು. ಆದರೆ ಆ ಒಂದು ದೇವರನ್ನು  ಹಲವಾರುಗುಡಿಯಲ್ಲಿ ನೋಡುವದೃಷ್ಟಿ  ಜ್ಞಾನಯೋಗದಿಂದ ಬರಬೇಕು. ಎಲ್ಲರ ಕರ್ಮ ಅಥವಾ ಕೆಲಸವೂ ಪರಮಾತ್ಮನ ಸೇವೆಯೇ ಎನ್ನುವ ಅರಿವು ಇದ್ದರೆ ಕರ್ಮಯೋಗಿ. ಹೀಗೇ ತನ್ನ ತಾನರಿತು ತನ್ನಾತ್ಮರಕ್ಷಣೆಗಾಗಿ  ನಡೆಸೋ ಯೋಗಿಯ ಚಿಂತನೆಯು ಸಂನ್ಯಾಸಿಗೂ ಬರದು.
ಕಾರಣ ಸಂನ್ಯಾಸಿ  ಹೊರಗಿನಿಂದ  ಎಲ್ಲಾ ತೊರೆದಿದ್ದರೂ ಒಳಗೆ  ಪರಮಾತ್ಮನ  ಅರಿತುನಡೆಯೋದರಲ್ಲಿ ಸೋಲಬಹುದು.
ಸಂನ್ಯಾಸಿ  ಆಗೋದಕ್ಕೆ  ಸುಲಭ ಯೋಗಿ ಆಗೋದು ಕಷ್ಟ.
ಯೋಗಿ ಪರಮಾತ್ಮನಿಗೆ ಶರಣಾದಾಗಲೇ ಏಕತ್ವ ಅಧ್ವೈತಿ ಎನಿಸಿಕೊಳ್ಳಬಹುದು.
ಯಾರು ಹೇಳಬೇಕು? ಯಾರೋ ಹೇಳಬೇಕೆಂದು  ಯೋಗಿ ಆಗೋದರಲ್ಲಿ ಅರ್ಥ ವಿರದು. ಹಾಗೆ  ಸಂನ್ಯಾಸಿಯೂ ಯಾವುದೋ ಆಸೆಯಲ್ಲಿದ್ದರೆ  ಮೋಕ್ಷವಿರದು.
ಎಲ್ಲಾ ಸಣ್ಣ ಪುಟ್ಟ ದೊಡ್ಡ ದೊಡ್ಡ ದೇವತೆಗಳ ಜೊತೆಗೆ ಅಸುರರೂ  ಪರಮಾತ್ಮನ ಅಧೀನವಿರೋವಾಗ  ಆ ಒಬ್ಬನ ಅರಿತು ನಡೆಯಲು  ಸ್ವತಂತ್ರ ಜ್ಞಾನವಿರಬೇಕು. ಯಾರಿಗೋ ಆದ ಅನುಭವವಾಗಲಿ ಯಾರೋ  ನಂಬಿದ ವ್ಯಕ್ತಿ ಶಕ್ತಿಯಾಗಲಿ ನಮ್ಮನ್ನು  ಪರಮಾತ್ಮನೆಡೆಗೆ  ನಡೆಸುವ  ಪ್ರಯತ್ನ ಮಾಡಬಹುದು. ಆದರೆ ಸ್ವಯಂ ಪ್ರಯತ್ನದಿಂದ ಸದಾಚಾರ ಸತ್ಯ ಸ್ವತಂತ್ರವಾಗಿ  ಜ್ಞಾನಪಡೆದ ಜ್ಞಾನಯೋಗಿಯನ್ನು ಪರಮಾತ್ಮನೇ ನಿಂತು ನಡೆಸುವಾಗ ಅವನಲ್ಲಿ  ನಾನೆಂಬ ಅಹಂ ಇರದು.ನಾನೆಂಬುದಿಲ್ಲ ಎನ್ನುವ ಸತ್ಯದ ಅನುಭವವೇ ಅಧ್ವೈತ.
ನಾನೇ ಎಲ್ಲಾ ಎನ್ನುವ ಅಹಂಕಾರ ದಿಂದ ಸರ್ವ ನಾಶ .

ಸಂಸಾರದೊಳಗಿದ್ದು ಯೋಗಿಯಂತೆ ಬದುಕುವವರಿದ್ದಾರೆ.
ಸಂನ್ಯಾಸ ಸ್ವೀಕರಿಸಿಯೂ ಸಂಸಾರಿಗಳ  ಹಂಗಿನಲ್ಲಿದ್ದವರೂ ಇದ್ದಾರೆ. ಯೋಗಿಗಳನ್ನು ಗುರುತಿಸೋರಿಲ್ಲ  ಸಂನ್ಯಾಸಿಗಳನ್ನು ಗುರುತಿಸುವವರೆ ಎಲ್ಲಾ  ಇದರಿಂದ ಭಗವದ್ಗೀತೆಯ ಯೋಗ  ಜನರಿಗೆ ಅರ್ಥ ವಾಗದೆ  ಹೋಗುತ್ತಿದೆ ಜೀವನ..ಜೀವಿಗಳ ವನ.

ಗುರುತಿಸಲು ಪರಮಾತ್ಮನಿರೋವಾಗ ಚಿಂತೆಯಾಕೆ?ನಮ್ಮ ಆತ್ಮಕ್ಕೆ ತೃಪ್ತಿ ಸಿಗುವ ಸತ್ಕರ್ಮ ಸ್ವಧರ್ಮ  ಬಿಡದೆ ನಡೆಯಬೇಕು
ಆಗಲೇ ಒಳಗಿರುವ ಸ್ವತಂತ್ರ ಜ್ಞಾನ ಸಿಗೋದು.
ಇಂದಿನ ಶಿಕ್ಷಣವೇ ಪ್ರಾಥಮಿಕ ಹಂತದಲ್ಲಿಯೇ ದಾರಿತಪ್ಪಿಸಿ ಆಳಲು ಹೊರಟಿರುವಾಗ ಎಲ್ಲಿಯ ಯೋಗ?ಎಲ್ಲಾ ರಾಜಕೀಯಮಯ..ಎಲ್ಲೋ ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ.
ಬೆಟ್ಟ ಏರೋದಕ್ಕೆ ಕಲ್ಲುಮುಳ್ಳುಗಳು ಬಿಡದಿದ್ದರೆ ಮುಂದೆ ನಡೆಯೋದೆ .
ಕಷ್ಟಪಟ್ಟು  ಒಳಗಿಳಿದವರಿಗೆ   ಮೇಲೇರಲು ಸಾಧ್ಯವಾಗಿದೆ. 

ಎಲ್ಲವೆ 14 ಲೋಕಗಳು?

ನಮ್ಮ ಸನಾತನ ಪುರಾಣದಲ್ಲಿ ಉಲ್ಲೇಖವಾಗಿರುವ 14 ಲೋಕಗಳು ವಾಸ್ತವವಾಗಿ ಅಸ್ತಿತ್ವದಲ್ಲಿ ಇವೆಯೇ?

ಅಧ್ಯಾಯ 1: 
ಲಿಫ್ಟ್‌ನ ಏಳನೇ ಮಹಡಿ ಮತ್ತು ಮೈನಸ್ ಏಳನೇ ಮಹಡಿ:

ಒಂದು ಕ್ಷಣ ಕಣ್ಣುಗಳನ್ನು ಮುಚ್ಚಿ, ನಿಮ್ಮ ಇಡೀ ಅಸ್ತಿತ್ವವನ್ನು ಕೇವಲ ಶೂನ್ಯಕ್ಕೆ ಕೊಂಡೊಯ್ಯಿರಿ. ನಿಮ್ಮ ಸುತ್ತಲೂ ಮೌನ ಆವರಿಸಿದೆ. ಆದರೆ, ಈ ಮೌನದ ಹಿಂದೆ ಏನೋ ಒಂದು ನಿಗೂಢ ಶಕ್ತಿ ಅಡಗಿದೆ ಎನಿಸುತ್ತಿಲ್ಲವೇ? ನೀವು ಕುಳಿತಿರುವ ಈ ಜಾಗ, ನಿಮ್ಮ ಪಾದಗಳಿಗೆ ತಾಗುತ್ತಿರುವ ಈ ನೆಲ, ನಿಮ್ಮ ತಲೆಯ ಮೇಲಿರುವ ಆಕಾಶ—ಇಷ್ಟೇನಾ ಈ ಸೃಷ್ಟಿ? ವಿಜ್ಞಾನದ ಪ್ರಯೋಗಾಲಯಗಳ ದೂರದರ್ಶಕಗಳು ಮತ್ತು ಪುರಾಣಗಳ ತಾಳೆಗರಿಗಳು ಒಟ್ಟಿಗೆ ಸೇರಿ ಒಂದು ರಹಸ್ಯ ಕೋಣೆಯ ಬಾಗಿಲನ್ನು ತಟ್ಟುತ್ತಿವೆ. ಆ ಬಾಗಿಲಿನ ಮೇಲೆ ಬರೆದಿದೆ: "ಚತುರ್ದಶ ಭುವನಗಳು" ಅಂದರೆ ಹದಿನಾಲ್ಕು ಲೋಕಗಳು.
ಸಾಮಾನ್ಯವಾಗಿ ನಮಗೆ ಬಾಲ್ಯದಿಂದಲೂ ಒಂದು ಕಲ್ಪನೆಯನ್ನು ಬಿತ್ತಲಾಗಿರುತ್ತದೆ. ಅದೇನೆಂದರೆ, ನಾವು ತಪ್ಪು ಮಾಡಿದರೆ ಸತ್ತು ಭೂಮಿಯ ಕೆಳಗಿರುವ ನರಕಕ್ಕೆ ಹೋಗುತ್ತೇವೆ, ಪುಣ್ಯ ಮಾಡಿದರೆ ಮೋಡಗಳ ಮೇಲಿರುವ ಸ್ವರ್ಗಕ್ಕೆ ಹೋಗುತ್ತೇವೆ ಎಂದು. ಈ ಕಲ್ಪನೆ ಎಷ್ಟು ಬಾಲಿಶವಾದುದು ಎನ್ನುವುದು ನಮಗೆ ಆಧುನಿಕ ಭೌತಶಾಸ್ತ್ರದ ಪುಟಗಳನ್ನು ತಿರುವಿದಾಗ ಅರ್ಥವಾಗುತ್ತದೆ. ಬ್ರಹ್ಮಾಂಡ ಎನ್ನುವುದು ನಾವಂದುಕೊಂಡಂತೆ ಕೇವಲ ಮೇಲಕ್ಕೊಂದು ಆಕಾಶ, ಕೆಳಗೊಂದು ಮಣ್ಣಿನ ಪದರ ಇರುವ ಸರಳ ರಚನೆಯಲ್ಲ. ಅದೊಂದು ಅತ್ಯಂತ ಸಂಕೀರ್ಣವಾದ, ಬುದ್ಧಿಭ್ರಮಣೆ ಉಂಟುಮಾಡುವ ಬಹು-ಆಯಾಮದ ವ್ಯವಸ್ಥೆ.
ಈ ಇಡೀ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ನಾವು ಒಂದು ಭಾರಿ ದೊಡ್ಡ ಬೃಹತ್ ಅಪಾರ್ಟ್‌ಮೆಂಟ್ ಅನ್ನು ಕಲ್ಪಿಸಿಕೊಳ್ಳಬೇಕು. ಈ ಅಪಾರ್ಟ್‌ಮೆಂಟ್‌ಗೆ ಯಾವುದೇ ಕೊನೆಯಿಲ್ಲ. ಇದರ ಮಧ್ಯದಭಾಗದಲ್ಲಿ, ಅಂದರೆ ನೆಲ ಅಂತಸ್ತಿನಲ್ಲಿ ನಾವಿದ್ದೇವೆ. ಈ ನೆಲ ಅಂತಸ್ತಿನ ಹೆಸರೇ 'ಭೂಲೋಕ'. ನಾವು ಪ್ರತಿದಿನ ನೋಡುವ ಕಲ್ಲು, ಮಣ್ಣು, ನದಿ, ಸಮುದ್ರ, ಗಾಳಿ ಮತ್ತು ಮನುಷ್ಯರು—ಇವೆಲ್ಲವೂ ಈ ನೆಲ ಅಂತಸ್ತಿನ ಮಿತಿಗೆ ಒಳಪಟ್ಟಿವೆ. ಆದರೆ, ಈ ಅಪಾರ್ಟ್‌ಮೆಂಟ್‌ನ ವಿಶೇಷತೆ ಇರುವುದು ಇಲ್ಲಿರುವ ಒಂದು ನಿಗೂಢವಾದ ಲಿಫ್ಟ್‌ನಲ್ಲಿ. ಈ ಲಿಫ್ಟ್ ನಾವಂದುಕೊಂಡಂತೆ ಕೇವಲ ಕೇಬಲ್ ಮತ್ತು ಕಬ್ಬಿಣದ ಪೆಟ್ಟಿಗೆಯಿಂದ ಮಾಡಲ್ಪಟ್ಟಿದ್ದಲ್ಲ; ಇದು ಕೇವಲ ಪ್ರಜ್ಞೆಯ ತರಂಗಾಂತರದ ಮೇಲೆ ಚಲಿಸುವ ಒಂದು ಕಾಸ್ಮಿಕ್ ಲಿಫ್ಟ್.
ನೀವು ಈ ಲಿಫ್ಟ್ ಹತ್ತಿ ಮೇಲಕ್ಕೆ ಚಲಿಸಲು ಪ್ರಾರಂಭಿಸಿದರೆ, ನಿಮಗೆ ಒಟ್ಟು ಏಳು ಮಹಡಿಗಳು ಸಿಗುತ್ತವೆ. ಇವುಗಳನ್ನೇ ಪುರಾಣಗಳು ಊರ್ದ್ವಲೋಕಗಳು ಎಂದು ಕರೆದವು. ಭೂಲೋಕದಿಂದ ಆರಂಭವಾಗುವ ಈ ಪಯಣ ಮೊದಲು ತಲುಪುವುದು 'ಭುವರ್ಲೋಕ'ವನ್ನು. ಇದು ಭೂಮಿ ಮತ್ತು ಸೂರ್ಯನ ನಡುವಿನ ಅಂತರಿಕ್ಷದ ಜಗತ್ತು ಎನ್ನಲಾಗುತ್ತದೆ. ಇದಕ್ಕಿಂತಲೂ ಮೇಲಕ್ಕೆ ಹೋದರೆ ಸಿಗುವುದೇ 'ಸ್ವರ್ಲೋಕ' ಅಥವಾ ಇಂದ್ರಲೋಕ. ದೇವತೆಗಳ ರಾಜ ಇಂದ್ರ ಆಳುವ, ಸುಖ ಭೋಗಗಳಿಗೆ ಹೆಸರಾದ ಜಗತ್ತಿದು. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಸ್ವರ್ಲೋಕಕ್ಕಿಂತಲೂ ಮೇಲಕ್ಕೆ ಹೋದಂತೆಲ್ಲ ಜಗತ್ತಿನ ಸ್ವರೂಪ ಭೌತಿಕತೆಯಿಂದ ಶಕ್ತಿಯ ರೂಪಕ್ಕೆ ಬದಲಾಗುತ್ತಾ ಹೋಗುತ್ತದೆ. ನಾಲ್ಕನೇ ಮಹಡಿಯಾಗಿ 'ಮಹರ್ಲೋಕ' ಸಿಗುತ್ತದೆ, ಅಲ್ಲಿ ಮಹರ್ಷಿಗಳು ಮತ್ತು ತಪಸ್ವಿಗಳು ವಾಸಿಸುತ್ತಾರೆ. ಐದನೇ ಮಹಡಿ 'ಜನಲೋಕ', ಆರನೇ ಮಹಡಿ 'ತಪೋಲೋಕ'—ಇಲ್ಲಿ ಕೇವಲ ಶಕ್ತಿಯುತವಾದ ಆತ್ಮಗಳು ಮತ್ತು ಬ್ರಹ್ಮಜ್ಞಾನಿಗಳು ಮಾತ್ರ ಇರಲು ಸಾಧ್ಯ. ಇನ್ನು ಎಲ್ಲಕ್ಕಿಂತ ಮೇಲಿರುವ ಏಳನೇ ಮಹಡಿಯೇ 'ಸತ್ಯಲೋಕ' ಅಥವಾ ಬ್ರಹ್ಮಲೋಕ. ಇದು ಸೃಷ್ಟಿಕರ್ತನಾದ ಬ್ರಹ್ಮನ ನಿವಾಸ, ಶುದ್ಧ ಜ್ಞಾನ ಮತ್ತು ಸತ್ಯದ ಪರಮಾವಧಿ.
ಈಗ ಲಿಫ್ಟ್‌ನ ದಿಕ್ಕನ್ನು ಬದಲಾಯಿಸೋಣ. ನೆಲ ಅಂತಸ್ತಿನಿಂದ ಕೆಳಗೆ, ಅಂದರೆ ಭೂಮಿಯ ಅಡಿಯಲ್ಲಿ ಏನಿದೆ? ನಮ್ಮ ಪುರಾಣಗಳು ಕೆಳಮುಖವಾಗಿ ಚಲಿಸುವ ಮತ್ತೊಂದು ಏಳು ಮಹಡಿಗಳ ಭೂಗತ ಸಾಮ್ರಾಜ್ಯವನ್ನು ವಿವರಿಸುತ್ತವೆ. ಇವುಗಳನ್ನೇ ಅಧೋಲೋಕಗಳು ಎನ್ನಲಾಗುತ್ತದೆ. ಭೂಲೋಕದ ತಕ್ಷಣದ ಕೆಳಗಿನ ಮಹಡಿಯೇ 'ಅತಲ'. ಅದಕ್ಕಿಂತ ಕೆಳಗೆ 'ವಿತಲ', ನಂತರ ಕ್ರಮವಾಗಿ 'ಸುತಲ', 'ರಸಾತಲ', 'ತಲಾತಲ', 'ಮಹಾತಲ' ಮತ್ತು ಎಲ್ಲಕ್ಕಿಂತ ಕೊನೆಯಲ್ಲಿರುವ ಮೈನಸ್ ಏಳನೇ ಮಹಡಿಯೇ 'ಪಾತಳ ಲೋಕ'. ನಮಗೆ ಪಾತಳ ಎಂದರೆ ಕೇವಲ ಕತ್ತಲೆ ಮತ್ತು ಹಾವುಗಳಿರುವ ಜಾಗ ಎಂಬ ಭಯಾನಕ ಚಿತ್ರಣವನ್ನು ನೀಡಲಾಗಿದೆ. ಆದರೆ ಪುರಾಣಗಳ ಆಳವಾದ ಅಧ್ಯಯನ ಮಾಡಿದರೆ ತಿಳಿಯುವುದೇನೆಂದರೆ, ಈ ಕೆಳಗಿನ ಕೆಲವು ಲೋಕಗಳು ಸ್ವರ್ಗಕ್ಕಿಂತಲೂ ಹೆಚ್ಚು ಐಷಾರಾಮಿ ಮತ್ತು ಭೋಗಗಳಿಂದ ಕೂಡಿವೆ! ಅದಕ್ಕೇ ಇವುಗಳನ್ನು ಬಿಲ-ಸ್ವರ್ಗ ಎಂದೂ ಕರೆಯುತ್ತಾರೆ.
ಇಲ್ಲಿಯೇ ಒಬ್ಬ ಸಾಮಾನ್ಯ ಓದುಗನಿಗೆ ಅತಿ ದೊಡ್ಡ ಗೊಂದಲ ಮತ್ತು ಕುತೂಹಲ ಆರಂಭವಾಗುತ್ತದೆ. ಈ ಲೋಕಗಳೆಲ್ಲ ಎಲ್ಲಿ ಇವೆ? ಇಂದಿನ ಆಧುನಿಕ ವಿಜ್ಞಾನ ಇಷ್ಟೊಂದು ಮುಂದುವರಿದಿದೆ, ಮಂಗಳ ಗ್ರಹಕ್ಕೆ ನೌಕೆ ಕಳುಹಿಸಿದ್ದೇವೆ, ಇಡೀ ಸೌರಮಂಡಲವನ್ನು ದಾಟಿ ನಮ್ಮ ನೌಕೆಗಳು ಮುನ್ನುಗ್ಗುತ್ತಿವೆ. ಆದರೂ ನಮಗೆ ಆಕಾಶದಲ್ಲಿ ಎಲ್ಲೂ ಇಂದ್ರಲೋಕವಾಗಲಿ ಅಥವಾ ಬ್ರಹ್ಮಲೋಕವಾಗಲಿ ಕಾಣಿಸಿಲ್ಲವೇಕೆ? ಇನ್ನು ಭೂಮಿಯ ಒಳಗಿನ ಪದರಗಳನ್ನು ಭೂವಿಜ್ಞಾನಿಗಳು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಭೂಮಿಯ ಕೇಂದ್ರಭಾಗದಲ್ಲಿ ಕರಗಿದ ಲಾವಾರಸ ಮತ್ತು ಕಬ್ಬಿಣದ ಗಟ್ಟಿ ಕೋರ್ ಇದೆಯೇ ಹೊರತು ಅಲ್ಲಿ ಎಲ್ಲೂ ಪಾತಳ ಲೋಕದ ನಾಗರಾಜನ ಅರಮನೆ ಪತ್ತೆಯಾಗಿಲ್ಲ! ಹಾಗಾದರೆ ಪುರಾಣಗಳು ಹೇಳುವುದೆಲ್ಲ ಬರಿ ಸುಳ್ಳೇ? ರೇಖಾಗಣಿತ ಮತ್ತು ಗಣಿತದ ಲೆಕ್ಕಾಚಾರಗಳು ಇಲ್ಲಿ ತಲೆಕೆಳಗಾಗುತ್ತವೆಯೇ?
ಇಲ್ಲ, ಇಲ್ಲೇ ವಿಜ್ಞಾನದ ಅತ್ಯಂತ ರೋಚಕ ಟ್ವಿಸ್ಟ್ ಅಡಗಿದೆ. ವಿಜ್ಞಾನದ ಪ್ರಕಾರ, ನಾವು ಯಾವುದನ್ನು 'ಜಗತ್ತು' ಎಂದು ಕರೆಯುತ್ತೇವೋ, ಅದು ಕೇವಲ ನಾವು ನೋಡಬಲ್ಲ ಮೂರು ಆಯಾಮಗಳಿಗೆ ಮಾತ್ರ ಸೀಮಿತವಾಗಿದೆ. ನಮಗೆ ಉದ್ದ, ಅಗಲ ಮತ್ತು ಎತ್ತರ ಮಾತ್ರ ಅರ್ಥವಾಗುತ್ತದೆ. ಆದರೆ ಗಣಿತ ಮತ್ತು ಕ್ವಾಂಟಮ್ ಭೌತಶಾಸ್ತ್ರದ ಪ್ರಕಾರ, ಈ ವಿಶ್ವದಲ್ಲಿ ಇಷ್ಟೇ ಆಯಾಮಗಳಿಲ್ಲ. ಈ 14 ಲೋಕಗಳು ಆಕಾಶದ ಮೇಲೋ ಅಥವಾ ಮಣ್ಣಿನ ಕೆಳಗೋ ಭೌತಿಕವಾಗಿ ಇಲ್ಲ; ಅವು ಇರುವುದು ಬೇರೆ ಬೇರೆ ಆಯಾಮಗಳ ಪದರಗಳಲ್ಲಿ!
ಇದನ್ನು ಒಂದು ಸರಳ ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ. ನಿಮ್ಮ ಮನೆಯಲ್ಲಿ ಒಂದು ದೂರದರ್ಶನ ಪೆಟ್ಟಿಗೆ ಇದೆ ಎಂದು ಕಲ್ಪಿಸಿಕೊಳ್ಳಿ. ನೀವು ನಿಯಂತ್ರಕದ ಬಟನ್ ಒತ್ತಿ ವಾಹಿನಿ 1 ಹಾಕಿದಾಗ ಅದರಲ್ಲಿ ಒಂದು ಸಿನಿಮಾ ಬರುತ್ತಿರುತ್ತದೆ. ಅದೇ ಕ್ಷಣದಲ್ಲಿ ವಾಹಿನಿ 2 ರಲ್ಲಿ ಒಂದು ಸುದ್ದಿ ಪ್ರಸಾರವಾಗುತ್ತಿರುತ್ತದೆ, ವಾಹಿನಿ 3 ರಲ್ಲಿ ಕ್ರಿಕೆಟ್ ಪಂದ್ಯ ಬರುತ್ತಿರುತ್ತದೆ. ಈಗ ಯೋಚಿಸಿ, ಸಿನಿಮಾ ನಡೆಯುತ್ತಿರುವಾಗ ಸುದ್ದಿ ಮತ್ತು ಕ್ರಿಕೆಟ್ ಪಂದ್ಯ ಎಲ್ಲಿ ಹೋಗಿರುತ್ತವೆ? ಅವುಗಳು ಅದೇ ಪರದೆಯ ಮೇಲಿವೆ, ಅದೇ ಗಾಳಿಯಲ್ಲಿ ತರಂಗಗಳ ರೂಪದಲ್ಲಿ ಹರಿದಾಡುತ್ತಿವೆ. ಆದರೆ ನಿಮ್ಮ ರಿಸೀವರ್ ಯಾವ ತರಂಗಾಂತರಕ್ಕೆ ಟ್ಯೂನ್ ಆಗಿದೆಯೋ, ಅದು ಮಾತ್ರ ನಿಮಗೆ ಕಾಣಿಸುತ್ತದೆ. ವಾಹಿನಿ 1 ರಲ್ಲಿರುವ ಪಾತ್ರಗಳಿಗೆ ವಾಹಿನಿ 2 ರಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದೆ ಎನ್ನುವುದೇ ಗೊತ್ತಿರುವುದಿಲ್ಲ!
ನಮ್ಮ ಇಡೀ ಬ್ರಹ್ಮಾಂಡದ ಕಲ್ಪನೆಯೂ ಇದೇ ಆಗಿದೆ. ನಾವು ಬದುಕುತ್ತಿರುವ ಈ ಭೂಲೋಕ ಎನ್ನುವುದು ಒಂದು ನಿರ್ದಿಷ್ಟ ವಾಹಿನಿ ಇದ್ದಂತೆ. ನಮ್ಮ ಕಣ್ಣುಗಳು, ಕಿವಿಗಳು ಮತ್ತು ಮೆದುಳು ಕೇವಲ ಈ ವಾಹಿನಿಯ ತರಂಗಗಳನ್ನು ಮಾತ್ರ ಸ್ವೀಕರಿಸಲು ವಿನ್ಯಾಸಗೊಳಿಸಲ್ಪಟ್ಟಿವೆ. ಪುರಾಣಗಳು ಹೇಳುವ ಇಂದ್ರಲೋಕವೋ ಅಥವಾ ಪಾತಳ ಲೋಕವೋ ಬೇರೆ ಎಲ್ಲೋ ದೂರದ ನಕ್ಷತ್ರಪುಂಜದಲ್ಲಿಲ್ಲ. ನೀವು ಈಗ ಕುಳಿತಿರುವ ಜಾಗದಲ್ಲೇ, ಅದೇ ಗಾಳಿಯಲ್ಲಿ, ಅದೇ ಜಾಗದಲ್ಲಿ ಸ್ವರ್ಲೋಕದ ಶಕ್ತಿಗಳೂ ಇವೆ, ಪಾತಳ ಲೋಕದ ತರಂಗಗಳೂ ಇವೆ. ಆದರೆ ಅವುಗಳ ಆಯಾಮ ಮತ್ತು ಕಂಪನಗಳ ವೇಗ ತೀರಾ ಭಿನ್ನವಾಗಿದೆ. ಹಾಗಾಗಿ ಅವು ನಮಗೆ ಗೋಚರಿಸುವುದಿಲ್ಲ.
ವಿಜ್ಞಾನದ ಇತಿಹಾಸದಲ್ಲಿ ನಾವು ಸ್ಥಳ ಮತ್ತು ಕಾಲ ಎನ್ನುವುದನ್ನು ಬೇರೆ ಬೇರೆ ಎಂದು ಭಾವಿಸಿದ್ದೆವು. ಆದರೆ ಆಲ್ಬರ್ಟ್ ಐನ್‌ಸ್ಟೈನ್ ಬಂದ ಮೇಲೆ ಇವೆರಡನ್ನೂ ಸೇರಿಸಿ ಸ್ಥಳ-ಕಾಲದ ಚೌಕಟ್ಟು ಎಂಬ ಪರಿಕಲ್ಪನೆಯನ್ನು ನೀಡಿದ. ಈ ಚೌಕಟ್ಟಿನಲ್ಲಿ ಉಂಟಾಗುವ ಸಣ್ಣ ಏರುಪೇರುಗಳೂ ಸಹ ಹೊಸ ಲೋಕಗಳನ್ನು ಸೃಷ್ಟಿಸಬಲ್ಲವು. ನಾವು ಲಿಫ್ಟ್‌ನ ಮೇಲಿನ ಮಹಡಿಗಳು ಎನ್ನುವುದನ್ನು ಹೆಚ್ಚಿನ ಶಕ್ತಿಯ ಆಯಾಮಗಳು ಎಂದೂ, ಕೆಳಗಿನ ಮಹಡಿಗಳನ್ನು ಕಡಿಮೆ ಶಕ್ತಿಯ ಅಥವಾ ಜಡತ್ವದ ಆಯಾಮಗಳು ಎಂದೂ ವಿಜ್ಞಾನದ ಭಾಷೆಗೆ ಭಾಷಾಂತರಿಸಬಹುದು.
ಪುರಾಣಗಳಲ್ಲಿ ಒಂದು ಮಾತಿದೆ—ಕೆಲವು ದೈವಿಕ ಶಕ್ತಿಗಳು ಅಥವಾ ಯೋಗಿಗಳು ಭೂಲೋಕದಿಂದ ನೇರವಾಗಿ ಬ್ರಹ್ಮಲೋಕಕ್ಕೆ ಪ್ರಯಾಣ ಬೆಳೆಸಬಲ್ಲರು ಎಂದು. ಇದನ್ನು ವಿಜ್ಞಾನದ ದೃಷ್ಟಿಯಿಂದ ನೋಡಿದರೆ, ಅವರು ಯಾವುದೇ ರಾಕೆಟ್ ಬಳಸುತ್ತಿರಲಿಲ್ಲ. ಬದಲಿಗೆ ಅವರು ತಮ್ಮ ಒಳಗಿನ ಶಕ್ತಿಯನ್ನು, ಅಂದರೆ ಪ್ರಜ್ಞೆಯನ್ನು ಕ್ರೋಢೀಕರಿಸಿ ತಮ್ಮ ಸ್ವಂತ ಕಂಪನಾ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಯಾವಾಗ ಅವರ ದೇಹ ಮತ್ತು ಮನಸ್ಸಿನ ತರಂಗಾಂತರವು ಮೇಲಿನ ಲೋಕದ ತರಂಗಾಂತರಕ್ಕೆ ಹೊಂದಿಕೆಯಾಗುತ್ತಿತ್ತೋ, ಆಗ ಅವರು ಈ ಭೂಲೋಕದ ಕಣ್ಣುಗಳಿಗೆ ಮಾಯವಾಗಿ ಆ ಲೋಕದಲ್ಲಿ ಪ್ರತ್ಯಕ್ಷರಾಗುತ್ತಿದ್ದರು. ಇದು ವಿಜ್ಞಾನದ ಕ್ವಾಂಟಮ್ ಟೆಲಿಪೋರ್ಟೇಶನ್ ಕಲ್ಪನೆಗೆ ಎಷ್ಟು ಹತ್ತಿರವಾಗಿದೆ ನೋಡಿ!
ಹೀಗಾಗಿ, ಈ ಚತುರ್ದಶ ಭುವನಗಳ ಕಲ್ಪನೆ ಎನ್ನುವುದು ಕೇವಲ ಕಲ್ಪನಾ ಲಹರಿಯಲ್ಲ. ಅದು ಬ್ರಹ್ಮಾಂಡದ ಬಹುಪದರಗಳ ಭೌತಿಕ ಮತ್ತು ಗಣಿತೀಯ ಸತ್ಯ. ನಾವು ಕೇವಲ ನಮ್ಮ ಐದು ಇಂದ್ರಿಯಗಳ ಮಿತಿಯಲ್ಲಿ ನಿಂತು ಇಡೀ ವಿಶ್ವವನ್ನು ಅಳೆಯಲು ಹೊರಟರೆ, ಅದು ಕತ್ತಲೆಯ ಕೋಣೆಯಲ್ಲಿ ನಿಂತು ಇಡೀ ಜಗತ್ತನ್ನು ಕೇವಲ ಒಂದು ಸಣ್ಣ ಬ್ಯಾಟರಿ ಬೆಳಕಿನಲ್ಲಿ ನೋಡಿದಷ್ಟೇ ಮಿತಿಯಾಗುತ್ತದೆ. ಈ ಕೋಣೆಯ ಕೊನೆಯ ಗೋಡೆಯ ಆಚೆ ಇನ್ನೂ ಏನೇನಿದೆ ಎನ್ನುವುದನ್ನು ತಿಳಿಯಲು ನಾವು ಆಯಾಮಗಳ ಮತ್ತು ಕಾಲದ ಆಳವಾದ ರಹಸ್ಯಗಳನ್ನು ಭೇದಿಸಬೇಕಾಗುತ್ತದೆ.
ಅಗೋಚರ ಶಕ್ತಿ ಯನ್ನು ಯೋಗದಿಂದ ಕಾಣಬಹುದು. ಭೂಮಿ ಭೋಗಕ್ಕೆ ಬಳಸಿದರೆ  ಕಾಣಲಾಗದು.

(ಮುಂದುವರಿಯುತ್ತದೆ..)

✍️ ಎಂ. ಕೃಷ್ಣಪ್ರಸಾದ್ ಭಟ್ ಮದ್ದಡ್ಕ

@highlight 
@followera

Tuesday, June 2, 2026

ಪರಮಾತ್ಮನ ಕಾಣೋದು ಹೇಗೆ?

ಪರಮಾತ್ಮನಿರೋದೆಲ್ಲಿ?

ಪರಮಾತ್ಮ ಎಲ್ಲರಲ್ಲಿಯೂ ಇದ್ದು ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯ‌ನಡೆಸುವನೆಂಬುದು ಅಧ್ವೈತ. ಪರಮಾತ್ಮನ‌ಜೊತೆಗೆ ಜೀವಾತ್ಮನು ಸೇರಿಕೊಂಡು  ಸೃಷ್ಟಿ ಸ್ಥಿತಿ ಲಯ ಕಾರ್ಯ ನಡೆಯುವುದೆನ್ನುವುದು ಧ್ವೈತ. 
ಈ  ನಾನು ನೀನು ಅವನು ಅವಳುಗಳ  ನಡುವಿರುವ ಮಾನವನ‌ ಮನಸ್ಸು  ಎಲ್ಲವನ್ನೂ ನಡೆಸಿರೋದು ಸತ್ಯ. ಕಾರಣ ಮನಸ್ಸಿನಂತೆ‌ ಮಾನವನಿರುವನು.ಹಾಗೆಯೇ ಇನ್ನೂ ಅಸಂಖ್ಯಾತ ಜೀವರಾಶಿಗಳೂ ಅವುಗಳ‌ ಮನಸ್ಸಿನಂತೆ ನಡೆಯುತ್ತವೆ.
ವ್ಯತ್ಯಾಸವಿಷ್ಟೆ ಮಾನವನಿಗೆ‌ ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಆತ್ಮಜ್ಞಾನವಿದೆ.ಪ್ರಾಣಿ ಪಕ್ಷಿಗಳಿಗಿಲ್ಲ ಇವು ಪ್ರಕೃತಿಗೆ ತಕ್ಕಂತೆ ಬದಲಾಗುತ್ತವೆ. ಅಂದರೆ‌ಪ್ರಕೃತಿಯನರಿತು ನಡೆಯೋ ಶಕ್ತಿ ಮಾನವನಿಗಿದ್ದರೂ ಪ್ರಕೃತಿ ವಿರುದ್ದ‌ನಡೆದಾಗಲೇ ವಿಕೃತ ಬುದ್ದಿವಂತಿಕೆಯಾಗುತ್ತದೆ. ಮಹಾಶಕ್ತಿಯ ಮುಂದೆ ಮಾನವನ ಆಟ ತಾತ್ಕಾಲಿಕ ವಷ್ಟೆ.ಜಗನ್ಮಾತೆಯನರಿತು‌ನಡೆದರೆ ಜಗಧೀಶ್ವರನ ದರ್ಶನವೂ ಆಗಬಹುದು. ಇಲ್ಲಿ  ಪ್ರಕೃತಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡು ಜಗತ್ತನ್ನು ಆಳುವುದರಲ್ಲಿ ಯೋಗವಿದ್ದರೆ  ಸರಿ.ಭೋಗವೇ ಪ್ರಧಾನವಾಗಿದ್ದರೆ ರೋಗದ ಅಂತ್ಯ. 
ಆರೋಗ್ಯ ಎಂದರೆ ಆರು ಯೋಗ್ಯವಾಗಿರೋದು.
ಯಾವಾಗಿದು‌ಮತಗಳ ಅಂತರದಿಂದ ಮನಸ್ಸು ಹಾಳಾಗುತ್ತಾ ಹೋಯಿತೋ ರೋಗದೆಡೆಗೆ ನಡೆಯಿತು. ಈಗ‌ ನಾವು ಸೇವಿಸುವ‌ಗಾಳಿ, ನೀರು, ಆಹಾರ ಶಿಕ್ಷಣವೇ ಕಲಬೆರಕೆ  ಆಗಿರುವಾಗ ಸ್ವಚ್ಚ  ಮನಸ್ಸು ಇರುವುದಾದರೂ ಎಲ್ಲಿ?
ಹೊರಗೆ ನಡೆದಷ್ಟೂ  ರಾಜಕೀಯ. ಒಳಗಿಳಿದರೆ ರಾಜಯೋಗ.
ಒಟ್ಟಿನಲ್ಲಿ ಮಧ್ಯವರ್ತಿ ‌ಮಾನವನಿಗೆ  ಈ ಕಡೆ ಸತ್ಯ ಇನ್ನೊಂದು ಕಡೆ ಮಿಥ್ಯ ಬಿಟ್ಟು  ನಡೆಯಲಾಗದ  ಅತಂತ್ರ ಸ್ಥಿತಿಯಲ್ಲಿ ಪರಮಾತ್ಮನ ಕಾಣಲು‌ಪರದೇಶದವರೆಗೂ‌ಹೋದರೂ ಕಾಣಲಿಲ್ಲ
ಅವನಿರೋದು  ನಮ್ಮ ಅಂತರಾತ್ಮದಲ್ಲಿ ಎಂದಾಗ ಒಳಗೆ ಹುಡುಕಿಕೊಳ್ಳುವ ಯೋಗಶಿಕ್ಷಣ, ಯೋಗ್ಯ ಗುರು ಪಡೆಯಲೂ ಯೋಗ್ಯತೆ‌ಬೇಕಿದೆ. ಕಲಿಗಾಲದ ಕಲಿಕೆಯೇ ಹೊರಮುಖವಾದಾಗ
ಒಳಮುಖದ ಪರಿಚಯ ಮಾಡಿಸೋದು ಯಾರು?
ಧಾರ್ಮಿಕ ಕ್ಷೇತ್ರ ಶಿಕ್ಷಣದ ಮೂಲಕ ತಮ್ಮ ಜ್ಞಾನಿಗಳನ್ನು ಶಿಕ್ಷಕರನ್ನಾಗಿಸಿ  ಭಕ್ತರ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಅಧಿಕಾರವಿರಲಿಲ್ಲವೆ? ಅಥವಾ ರಾಜಕೀಯವೇ‌ಮುಖ್ಯವಾಯಿತೆ? 
ಆಗೋದನ್ನು ತಡೆಯಲಾಗಿಲ್ಲ ಆಗಿದ್ದೆಲ್ಲಾ ಒಳ್ಳೆಯದಕ್ಕೆ ಮುಂದೆ ಆಗೋದಕ್ಕೆ ನಮ್ಮ ಸಹಕಾರವೇ ಕಾರಣವಾಗಿರುತ್ತದೆ.ಅದು ಒಳ್ಳೆಯದೋ ಕೆಟ್ಟದ್ದೋ ಇದು ನಮ್ಮ ಜ್ಞಾನದ ಮೇಲೆ ನಿಂತಿದೆ. ಶಿಕ್ಷಣವೇ ಇದರ‌ ಮೂಲಾಧಾರವಾಗಿರುತ್ತದೆ. 

ಭಾರತ ವಿಶ್ವಕ್ಕೆ ಗುರು.‌ವಿಶ್ವದ ಎಲ್ಲಾ ಗುರು ಒಂದೆ ಎನ್ನುವ ಹಂತಕ್ಕೆ ತಲುಪುವುದು ಕಷ್ಟ. ಕ್ಷೇತ್ರ
ಕ್ಷೇತ್ರಜ್ಞ ಯೋಗದ ಪ್ರಕಾರ ಮನೆಯೊಳಗೆ ಮನೆಯೊಡೆಯ ಇದ್ದಾನೋ  ಇಲ್ಲವೋ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಎಲ್ಲರಲ್ಲಿಯೂ ಅವನಿದ್ದರೂ ಎಲ್ಲರೂ ಅವನೊಳಗಿಲ್ಲ.ಅಂದರೆ‌ಮನಸ್ಸು ಹೊರಗಿರುವಾಗ ಒಳಗಿರುವ ಅವನು ಬೇರೆಯಾಗಿರುತ್ತಾನೆ. ಬೇರೆಯಾಗಿ ಕಂಡಾಗ  ಅಂತರ ಬೆಳೆಯುತ್ತದೆ.ಅಂತರದಿಂದ ಅವಾಂತರದ ಸೃಷ್ಟಿ ಯಾಗುತ್ತದೆ.ಅದಕ್ಕೆ ತಕ್ಕಂತೆ ಸ್ಥಿತಿ‌ಮತ್ತು ಲಯವೂ ನಡೆಯುತ್ತದೆ.

Monday, June 1, 2026

ಸತ್ಯವೇ ದೇವರಾದರೆ ಸತ್ಯ ಎಲ್ಲಿದೆ?

ನನಗೆ ಸಣ್ಣ ವಯಸ್ಸಿನಿಂದಲೇ ಸತ್ಯ ಯಾವುದು ಸತ್ಯವೇ ದೇವರೆಂದಾಗ ಸತ್ಯ ಯಾಕೆ ಹೇಳಬಾರದು. ಹೀಗೇ ಮನಸ್ಸಿನಲ್ಲಿ ಪ್ರಶ್ನೆಗಳೇಳುತ್ತಿತ್ತು. ದೊಡ್ಡವರು ಸುಳ್ಳು‌ಹೇಳಬಹುದು ಸಣ್ಣವರು ಯಾಕೆ ಹೇಳಬಾರದು  ಎನ್ನುವ ವಿಚಾರದಲ್ಲಿ ಸಾಕಷ್ಟು ಬಾರಿ ಪ್ರಶ್ನೆ ಮಾಡಿ ಬೈಸಿಕೊಂಡಿದ್ದೆನಾದರೂ  ಎಲ್ಲೋ ಒಳಗೆ ಒಂದು ಕಡೆ ಸುಳ್ಳು ಹೇಳಬಾರದೆನ್ನುವ ಕೂಗಿಗೆ ಸ್ಪಂಧಿಸಿ ಮುಂದೆ ನಡೆದು ಸತ್ಯ ದ‌ ಹುಡುಕಾಟದಲ್ಲಿ  ವರ್ಷ ಕಳೆದೇ ಹೋಗಿತ್ತು. ಕೊನೆಗೂ ಸತ್ಯ ಸಿಕ್ಕಿದ್ದು ಒಳಗೆ ಹೊರತು ಹೊರಗಲ್ಲ. ಹೊರಗಿರೋದು ಸುಳ್ಳು
ಆದರೂ   ಮಾನವ ಜೀವನ ನಡೆಸೋದಕ್ಕೆ  ಧರ್ಮ ರಕ್ಷಣೆ ಮಾಡೋದಕ್ಕೆ ಸತ್ಯಕ್ಕೆ ತೇಪೆ ಹಾಕುವ ಸುಳ್ಳು ಹೊರಬರುತ್ತಲೇ ಇರುತ್ತದೆ. ಹಾಗಂತ ಜೀವ  ಸತ್ಯ ವನ್ನು ಗೆದ್ದು  ಹೋಗೋದಿಲ್ಲ.
ಶ್ರೀ ಶಂಕರಾಚಾರ್ಯರು  ತಿಳಿಸಿರುವ‌ಬ್ರಹ್ಮನ್ ಸತ್ಯ ಜಗತ್‌ಮಿಥ್ಯ.
ಕಣ್ಣಿಗೆ ಕಾಣದ ಬ್ರಹ್ಮ ಸತ್ಯವಾದರೂ ಕಾಣುವ‌ ಜಗತ್ ಮಿಥ್ಯ.
ಈ ಮಿಥ್ಯದಲ್ಲಿ ಸತ್ಯವನ್ನು ಅರಸಿದರೆ ಬದಲಾಗುತ್ತಲೇ ಇರುತ್ತದೆ.
ಇದು ಮನುಕುಲಕ್ಕೆ  ಅರ್ಥ ಮಾಡಿಸಿದರೂ ಅನುಭವಕ್ಕೆ ಬರಲು ಸತ್ಯದ ದಾರಿ ಹಿಡಿಯಲೇಬೇಕೆನ್ನುತ್ತದೆ ಆಧ್ಯಾತ್ಮ.
ಎಷ್ಟು ದೇವರನ್ನು ಸೃಷ್ಟಿ ಮಾಡಿದರೂ ಒಬ್ಬನೇ ದೇವರು.ಎಷ್ಟು ಅಸತ್ಯ‌ ಹರಡಿದರೂ ಮೂಲ ಸತ್ಯ ಬದಲಾಗದು.ಭ್ರಮೆಯಲ್ಲಿ  ಮಾಯೆಯಲ್ಲಿ  ಜೀವವಿರುವಾಗ ಸತ್ಯದ ಅರಿವಾಗದು. ಅದರಿಂದ ಹೊರಬರೋದೇ ಸಂಸಾರದಿಂದ ಹೊರಬಂದಂತೆ.
ಸಂಸಾರ ತೊರೆದು ಕಾಡಿಗೆ ಹೋದವರಿಗೂ ಸತ್ಯ ಕಾಣದು.
ಸಂಸಾರದಲ್ಲಿದ್ದು ಸತ್ಯವೇ ದೇವರು ಎಂದುಕೊಂಡವರಿಗೆ ದೇವರ ದರ್ಶನ ವಾಗಿದೆ. ಸತ್ಯಹರಿಶ್ಚಂದ್ರನಂತಿರಲಾಗದು. ಆದರೆ ಹರಿಯ ಸ್ಮರಣೆಯಲ್ಲಿರಬಹುದು.  
ಏನಾದರಾಗು ಮೊದಲು ಮಾನವನಾಗು. ಮಾನವನೊಳಗೇ ಅಡಗಿರುವ ಈ ಸತ್ಯ ಮಿಥ್ಯದ ವಿಜ್ಞಾನ  ಜೀವನಕ್ಕೆ ಆಧಾರ.
ಮೂಲಾಧಾರ‌  ಸತ್ಯದಲ್ಲಿದ್ದರೆ  ಸಹಸ್ರಾರ ಚಕ್ರದವರೆಗೂ ಸತ್ಯ ಬೆಳೆಯಬಹುದು.ಮೂಲಾಧಾರವೇ ಮಿಥ್ಯದೊಳಗಿದ್ದರೆ  ಸಾವಿರ ವರ್ಷ ವಾದರೂ ಸತ್ಯ  ಅರ್ಥ ವಾಗದು. 

Tuesday, May 26, 2026

ಸ್ಪರ್ಧೆ ಯಾರೊಂದಿಗೆ ನಡೆಸಬೇಕಿತ್ತು? ಹೇಗೆ?

ಬದಲಾವಣೆ ಹೇಗಿರಬೇಕಿತ್ತು ?ಹೇಗಾಗುತ್ತಿದೆ?

ಸ್ಪರ್ಧೆ ನಡೆಸೋದಾದರೆ ಆಧ್ಯಾತ್ಮಿಕವಾಗಿ ನಡೆಸಿದರೆ ಮಹಾತ್ಮರನ್ನು ಅರಿಯಬಹುದು ದೈವತ್ವದಲ್ಲಿ ನಡೆಯಬಹುದು ಪರಮಾತ್ಮನಲ್ಲಿ ಸೇರಲೂಬಹುದು. ಈಗಿನ ಸ್ಪರ್ಧೆ  ಕೆಳಮಟ್ಟದೆಡೆಗೆ  ನಡೆದಿರೋದು ‌ದುರಂತವಷ್ಟೆ.
ಮಹಿಳೆ ಮಕ್ಕಳನ್ನು  ಹೊರಗೆ ದುಡಿಸಿಕೊಂಡು ಸಾಧಿಸುವುದೇನಿದೆ?

ನಿಮ್ಮ ನಿಮ್ಮ ಮನೆಯ ಮನದ ಸಮಸ್ಯೆಗೆ ಕಾರಣವೇ ಅಜ್ಞಾನ. ಎಂದರೆ ಸತ್ಯದ ತಿಳುವಳಿಕೆಯಿಲ್ಲದ   ಜೀವನದಲ್ಲಿ ಹೊರಜಗತ್ತಿನ ದಾಸರಾದಷ್ಟೂ ಸಮಸ್ಯೆ ಒಳಗೇ ಬೆಳೆಯುತ್ತಾ ನಮ್ಮತನ ನಮವರ ನಡುವೆ ಅಂತರ ಸೃಷ್ಟಿ ಯಾಗಿ ಅತಂತ್ರಸ್ಥಿತಿಗೆ ಜೀವನ ತಲುಪಿದಾಗ ಹಿಂದಿರುಗೋದು ಕಷ್ಟ ಮುಂದೆ ನಡೆದರೂ ನಷ್ಟ ತಪ್ಪೋದಿಲ್ಲ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿದೆಯೆ? ಪರಮಾತ್ಮನಿರೋದೆಲ್ಲಿ ಎಂದರೆ ಆತ್ಮಾವಲೋಕನ ದಲ್ಲಿ .ವಿಪರ್ಯಾಸವೆಂದರೆ ಆತ್ಮದ ಅರಿವೇ ಇಲ್ಲದವರಿಗೆ ದೇವರು ಕಾಣೋದಿಲ್ಲ. ದೆವ್ವಗಳ ಸಾಮ್ರಾಜ್ಯ ದಲ್ಲಿ ಅತೃಪ್ತಿ ಕಾಡುತ್ತದೆ. ಈಗಂತೂ  ಸಾವಿರದ ದೇವರ ಹೆಸರಿನಲ್ಲಿ  ಸಾಯುವ  ಮಾನವರೆ ದೇವರಾಗಿರೋದು  ದೊಡ್ಡ ದುರಂತ. ಹಾಗಂತ ಮಾನವನ ದೈವಗುಣ ಬೆಳೆಸುವ ಶಿಕ್ಷಣ ಕೊಟ್ಟರೆ  ಪರಿಹಾರವಿದೆ ಆದರೆ ಅದರಲ್ಲಿ ರಾಜಕೀಯ ‌ಬೆರೆಸಿ ಆಳೋರೆ ಅಸುರರಾಗಿರುವಾಗ ಎಲ್ಲಿರುವುದು ಸತ್ಯ ಧರ್ಮ?
ಕಲಿಗಾಲ ಕಲಿಕೆಯ‌ಕಾಲ ಕಲಿಕೆಯಲ್ಲಿ ಸತ್ವ  ಸತ್ಯ ತತ್ವ ಇರಬೇಕಷ್ಟೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಕಾಲವಾಗುತ್ತಿದೆ  ಇದು ತಂತ್ರದ ಫಲ.ಕರ್ಮಕ್ಕೆ ತಕ್ಕಂತೆ ಫಲವಿದೆ.
ಬದಲಾವಣೆ ಜಗದ ನಿಯಮ. ಜಗತ್ತನ್ನು ಆಳಲು ಹೊರಟವರೂ ಆಳಾಗಿ ಜನ್ಮ ಪಡೆಯಲೇಬೇಕೆನ್ನುವ ಸತ್ಯದ ಅರಿವಿದ್ದರೆ  ಉತ್ತಮ ಜೀವನ ಇದ್ದಲ್ಲೇ‌ ನಡೆಸಬಹುದು. ಹೊರದೃಷ್ಟಿ ಒಳದೃಷ್ಟಿ ಯ ನಡುವೆ ಅಂತರ ಬೆಳೆದಾಗಲೇ ಸೃಷ್ಟಿ ಯ ನಿಗೂಡ ರಹಸ್ಯ ಅರಿಯದೆ ಜೀವ ಹೋಗುತ್ತದೆನ್ನುವುದು  ಸನಾತನಧರ್ಮ. ಆಳವಾಗಿರುವ ಸತ್ಯ‌ ಮೇಲ್ಮಟ್ಟದ  ಸತ್ಯದ ನಡುವಿನ ಅರ್ಧಸತ್ಯದ ವ್ಯವಹಾರದಲ್ಲಿ ಹಣದ‌ಲಾಭವಾಗುತ್ತಾ ಜ್ಞಾನದ‌ ನಷ್ಟ ಅನುಭವಿಸೋನೇ ಮಾನವ.  ಭಗವದ್ಗೀತೆ  ಪ್ರಸಾರ ಮಾಡೋದು ಸುಲಭವಾದರೂ ಅದರಲ್ಲಿನ ಯೋಗವನರಿತು‌  ನಡೆಯೋದು‌ ಕಷ್ಟ. ಅದಕ್ಕೆ ಶಿಕ್ಷಣದಿಂದ ತೆಗೆದು ಹಾಕುವ ಪ್ರಯತ್ನ ಆಗಿ ಮಕ್ಕಳ ಜ್ಞಾನ ಕುಸಿದರೂ ಸರಿ ನಾವು ಆಳಬೇಕೆನ್ನುವ ರಾಜಕೀಯ ಮುಗಿಲುಮುಟ್ಟಿರೋದು. ಏನೇ ಆದರೂ ಮಾನವನ‌ ಬುದ್ದಿವಂತಿಕೆ ಬೆಳೆದರೂ‌ ಸತ್ಯಜ್ಞಾನವಿಲ್ಲದ‌ಮಿಥ್ಯಜ್ಞಾನದಿಂದ ಭೂಮಿಯ ಋಣ ತೀರಿಸಲಾಗದೆನ್ನುವುದು ಆಧ್ಯಾತ್ಮಿಕ ವಿಜ್ಞಾನ. ಭೌತವಿಜ್ಞಾನ ‌ ಕಣ್ಣಿಗೆ ಕಾಣುತ್ತದೆ ಆಧ್ಯಾತ್ಮಿಕ ವಿಜ್ಞಾನ ಅನುಭವಿಸಿಯೇ‌ ಕಾಣಬೇಕು. 
ಬದಲಾವಣೆ ಅಂತರಂಗದ ಶುದ್ದಿಯ‌ಕಡೆಗಿರಬೇಕಿತ್ತು.
ದೇವರನ್ನು ಹೊರಗಿಟ್ಟು ಒಳಗೆ ಅಸುರರಿಗೆ ಸ್ಥಾನಮಾನ ಸನ್ಮಾನ ನಡೆದರೆ  ಬೆಳೆಯೋದು ಯಾರು?
ನಮ್ಮೊಳಗೇ ಅಡಗಿರುವ ಈ ಅಹಂ ಕಾರ ಸ್ವಾರ್ಥ ಪೂರ್ಣ ರಾಜಕೀಯತೆಗೆ ನಾವೇ ಬಲಿಯಾದರೆ ಕಾರಣರು ಯಾರು?
ಹೊರಗಿನಿಂದ  ಪಡೆದಷ್ಟೂ ಸಾಲ.
ಒಳಗಿರೋದನ್ನು  ಕೊಟ್ಟಷ್ಟೂ  ಸಾಲಮನ್ನಾ ಆದರೆ  ಇದು ಸತ್ವ ಸತ್ಯ ತತ್ವದಲ್ಲಿದ್ದರಷ್ಟೆ  ಆತ್ಮಕ್ಕೆ ತೃಪ್ತಿ ಮುಕ್ತಿ ಎನ್ನುವುದು ಆಧ್ಯಾತ್ಮ. ವಿರುದ್ದವಿದ್ದರೆ ಭೌತಿಕ ಪ್ರಗತಿಯಾದರೂ‌  ಮಾನವನ ದುರ್ಗತಿ  ಮನುಷ್ಯತ್ವದ ಅವನತಿ ಅಸುರರ‌ ಪ್ರಗತಿಯಾಗಿ ಅಧೋಗತಿ.ಇಷ್ಟೇ‌ಜೀವನ
ಯಾವ‌ಪಕ್ಷ ಬಂದರೇನು‌ ಜನರ ಅಜ್ಞಾನ  ಹೋಗುವುದೆ? ಅಜ್ಞಾನಿಗಳನ್ನು ಆಳೋದು ಪ್ರಗತಿಯೆ? ಇರುವ‌ಒಂದು ಭೂಮಿ ದೇಶವನ್ನು ಅರ್ಥ ಮಾಡಿಕೊಳ್ಳಲು ಸೋತರೆ  ಮತ್ತದೇ‌ ಸರಪಳಿಯಲ್ಲಿಯೇ ಜನ್ಮವಾಗುತ್ತದೆ. ಒಟ್ಟಿನಲ್ಲಿ ಜೀವನದ ಗುರಿ ಆತ್ಮಸಂಶೋಧನೆಯಿಂದ ಆತ್ಮಜ್ಞಾನದಿಂದ  ಜೀವನ್ಮುಕ್ತಿ ಪಡೆಯೋದೆಂದರೆ  ಇಲ್ಲಿ ಯಾರಿಗೆ‌ಮುಕ್ತಿ ಸಿಗುತ್ತಿದೆ  ದೇವರು ಇರೋದೆಲ್ಲಿ? ಪರಮಾತ್ಮನ ಸೇವೆ ಆಗುತ್ತಿದೆಯೆ?   ಜನ ಯಾರ ದಾಸರಾಗಿದ್ದಾರೆ? ಶರಣಾಗೋದೆಂದರೆ ಏನು?
ಸತ್ಯವಿಲ್ಲದ ಧರ್ಮ ಕುಂಟುತ್ತಿದೆ ಧರ್ಮ ವಿಲ್ಲದ ಸತ್ಯ ಕುರುಡು ಜಗತ್ತನ್ನು ಆಳುತ್ತಲೇ ಇದೆ.‌ಕಲಿಯುಗದ ಪ್ರಭಾವೋ ಕಲಿಕೆಯ ದುರಂತವೋ  ಇದರ‌ಬಗ್ಗೆ ಚರ್ಚೆ ಮಾಡದ ಮಧ್ಯವರ್ತಿಗಳು ‌ಮನರಂಜನೆಯೊಳಗೇ ಆತ್ಮವಂಚಕರಾಗಿ  ಮರೆದರೆ ಅದಕ್ಕೆ ತಕ್ಕಂತೆ  ಫಲ ಜನರ ಕಣ್ಣಿಗೆ ‌ಕಾಣುತ್ತಿದೆ  ಇದಕ್ಕೆ ಸರ್ಕಾರ ಕಾರಣವೆಂದರೆ ತಪ್ಪು ನಮ್ಮದೇ .ಕಾರಣ ನಮ್ಮದೇ ಸ ಹಕಾರ ಇಷ್ಟು ‌ಬೆಳೆಯಲು ಕಾರಣ. ಇದರ ಫಲ ಸರ್ಕಾರ ಅನುಭವಿಸೋದಿಲ್ಲ. ಅದು ಬದಲಾಗುತ್ತಲೇ ಇರುತ್ತದೆ. ಸಾಲದ ಹೊರೆ ಹೋಗೋದಷ್ಟೆ  ಜನರ ಜೀವನವಾಗಿದೆ. ಮಕ್ಕಳು ‌ಮೊಮ್ಮಕ್ಕಳಿಗಾಗುವಷ್ಟು ಆಸ್ತಿ‌ಮಾಡಿದರೆ ತೃಪ್ತಿ ಸಿಗೋದಿಲ್ಲ. ಎಂದರೆ ನಮ್ಮನ್ನು ಅತೃಪ್ತ ಆತ್ಮ ಆಳುತ್ತಿದೆ ಎಂದರ್ಥ. ಇದನ್ನು ದೆವ್ವ ಭೂತ‌ ಪಿಶಾಚಿ ಎಂದು‌ಹೆಸರಿಟ್ಟು ಕರೆದಿರುವರಷ್ಟೆ.ಯಾವ ಜನ್ಮದ‌ ಆಸೆಯೋ ಈ ಜನ್ಮದಲ್ಲಿ  ಸೇರಿಕೊಂಡು ಕುಣಿಸುತ್ತಿದೆ. ಕುಣಿದಷ್ಟೂ ನೋಡೋರಿಗೆ ‌ಮನರಂಜನೆಯಷ್ಟೆ ಆದರೆ ದೇಹಕ್ಕೆ ಸುಸ್ತು ಆರೋಗ್ಯ ಹಾಳು ನೆಮ್ಮದಿಯಿಲ್ಲದ ಬದುಕು ಹೀಗೇ ಎಷ್ಟೋ  ಜೀವಾತ್ಮನಿಗೆ  ಪರಮಾತ್ಮನ ಸತ್ಯದ ಪರಿಚಯ ಮಾಡಿಸದ ಶಿಕ್ಷಣ  ಶಿಕ್ಷೆಯಾಗಿ ಕಾಡುತ್ತಿದೆ. ಅದನ್ನು ಪ್ರಗತಿ ಎನ್ನುವ ಅಜ್ಞಾನಿಗಳಿಗೆ ಇದು ಒಂದು ವ್ಯವಹಾರವಾಗಿ  ಭ್ರಷ್ಟ ದುಷ್ಟರನ್ನು ಬೆಳೆಸೋದೆ ಕಾಯಕ.
ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರ,ಧಾರ್ಮಿಕ/ಕ್ಷೇತ್ರ, ಸಾಹಿತ್ಯ ಕ್ಷೇತ್ರ ಯಾವಾಗ ರಾಜಕೀಯದೆಡೆಗೆ  ನಡೆದವೋ ಆಗಲೇ ಆರ್ಥಿಕತೆಯು ಬೆಳೆದು  ಸಮಾಜದಲ್ಲಿ  ಜನಸಂಖ್ಯೆ ಬೆಳೆದರೂ ಸುಜ್ಞಾನ ಸತ್ಯಜ್ಞಾನ ಹಿಂದುಳಿಯುತ್ತಾ‌ ಹಿಂದುಳಿದವರ ಹೆಸರಿನಲ್ಲಿ  ತಮ್ಮ ಸ್ವಾರ್ಥ ಬೇಳೆ ಬೇಯಿಸಿಕೊಂಡು ತಿನ್ನುವವರು  ಜನರನ್ನು ದುರ್ಭಳಕೆ ಮಾಡಿಕೊಂಡರೂ ಕೇಳುವ ಸ್ವಾತಂತ್ರ್ಯ ಕಳೆದುಕೊಂಡಿರೋದು ಭಾರತದಂತಹ  ದೇಶಕ್ಕೆ ಆಗಿರುವ‌ ಮಹಾನಷ್ಟ.
ಪ್ರಜಾಪ್ರಭುತ್ವದ ಪ್ರಕಾರ ಪ್ರಜೆಗಳಿಗೆ ದೇಶೀಯ ಶಿಕ್ಷಣ ನೀಡುವುದು ಧರ್ಮ. ಈಗ ವಿದೇಶಿ ಶಿಕ್ಷಣವೇ ತಮ್ಮ ಸಾಮ್ರಾಜ್ಯಸ್ಥಾಪನೆ ಮಾಡಲು  ವಿದೇಶಿಗರಿಗೆ  ರಾಜಕಾರಣಿಗಳೇ ಸ್ವಾಗತಿಸಿರೋದು ಯಾವ ಪ್ರಗತಿ?
ಮೂಲ ಸರಿಪಡಿಸದೆ ರೆಂಬೆಗಳನ್ನು ಬೆಳೆಸಿದರೆ  ಬದಲಾವಣೆ ಸಾಧ್ಯವೆ?
ತತ್ವವಿಲ್ಲದ ತಂತ್ರ ಯಂತ್ರಮಾನವರನ್ನು ಸೃಷ್ಟಿ ಮಾಡುವ ಸ್ವತಂತ್ರ ಪಡೆದಾಗ ಜೀವವಿರುವ ಮಾನವನ‌ಗತಿ ಅಧೋಗತಿ. ಇವೆಲ್ಲವೂ ಸಾಮಾನ್ಯ ಜ್ಞಾನದ  ಕೆಳಮಟ್ಟದ ವಿಷಯವೆಂದು  ನಿರ್ಲಕ್ಷ್ಯ ಮಾಡಿದಷ್ಟೂ  ಭೂಮಿಯ ಮೇಲಿನ ಸಾಲ ತೀರದು. ಸಾಲ ತೀರದಿದ್ದರೆ‌ಮತ್ತದೇ ಜನನ‌ಮರಣದ ನಡುವೆ ಬರಲೇಬೇಕು.ಕಷ್ಟಪಟ್ಟು ಸಾಲ ತೀರಿಸುವ ಪರಮಾತ್ಮನ ಸೇವೆ ಮಾಡಲೇಬೇಕು. ಇದು ಯೋಗ‌ಮಾರ್ಗದಲ್ಲಿ ನಡೆಯಲು ಯೋಗಶಿಕ್ಷಣ ಯೋಗ್ಯ ಶಿಕ್ಷಣ ಬೇಕು.
ಈ ವಿಚಾರದ ಬಗ್ಗೆ ಎಷ್ಟೋ ಗುರುಹಿರಿಯರಿಗೆ  ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ  ಹಾಗು‌ಮಠ ಮಾನ್ಯರಿಗೆ  ಅರಿವಿದ್ದರೂ  ಅದರಲ್ಲಿ ರಾಜಕೀಯ ತೂರಿಸಿಕೊಂಡು ವ್ಯವಹಾರವೇ ಮುಖ್ಯ ಎಂದಿರುವಾಗ ಬದಲಾವಣೆ ಕಷ್ಟವಿದೆ.
ದೇಶದ ತುಂಬಾ ದೇವಸ್ಥಾನ ವಿದ್ದರೂ ಜನರಲ್ಲಿ ದೈವತ್ವದ ಗುಣಜ್ಞಾನವಿಲ್ಲದಿದ್ದರೆ ಮಕ್ಕಳು ಮಹಿಳೆಯರನ್ನು ಹೊರಗೆಳೆದು ಆಳುವರಷ್ಟೆ. ಇಡೀ ವಿಶ್ವ ಆಳುವ ವಿಶ್ವೇಶ್ವರನ ಜೊತೆಗೆ  ಈಶ್ವರಿಯೂ   ಇರಬಹುದು. ಈಶ್ವರನ ಧ್ಯಾನ ದಿಂದ ‌ಜ್ಞಾನದೇವತೆ ಒಲಿಯಬಹುದು. ಮನುಷ್ಯನ ಅಜ್ಞಾನಕ್ಕೆ ಮಹಿಳೆ ಒಲಿದರೆ  ಹಣ ಮಾತ್ರ ಸಿಗಬಹುದಷ್ಟೆ. ಹಣದಿಂದ ಹೆಣವನ್ನು  ಮಾರುವಷ್ಟು  ವ್ಯವಹಾರಜ್ಞಾನದಲ್ಲಿ  ದೇವರು ಕಾಣೋದಿಲ್ಲ.‌ಇದು ಅಸುರಿತನ.
ಜೀವ ಶಾಶ್ವತವಿರದು ಆತ್ಮ ಶಾಶ್ವತವೆನ್ನುವುದೇ ಸತ್ಯಜ್ಞಾನ.

ಬದಲಾವಣೆ ಮನೆಯೊಳಗೆ ಮನಸ್ಸಿನೊಳಗೇ  ಆಗಲು ಯೋಗ ಮಾರ್ಗ ಅಗತ್ಯವಿದೆ. ಯೋಗಿಗಳ ದೇಶವನ್ನು ಭೋಗಕ್ಕೆ  ಬಳಸಿದರೆ ರೋಗದ ಗೂಡಾಗುವುದು ಸಹಜ.
ಇದಕ್ಕೆ ಸರ್ಕಾರ ಹೈಟೆಕ್ ಆಸ್ಪತ್ರೆ ಗಳನ್ನು  ಪ್ರಾರಂಭಿಸಿದರೆ ಅದರೊಳಗೆ ಹೈಟೆಕ್  ವೈಧ್ಯರು  ದುಡಿಯಬಹುದು. ಆದರೆ ಸಾವನ್ನು ತಡೆಯಲಾಗದು. ಇದಕ್ಕೆ  ಮಾನವನಿಗೆ ಉತ್ತಮ ಸಂಸ್ಕಾರದ ಶಿಕ್ಷಣ ಮೊದಲೇ ನೀಡಿ ಆತ್ಮರಕ್ಷಣೆಯತ್ತ‌ನಡೆಸಿದ್ದರೆ ಎಲ್ಲರಲ್ಲಿಯೂ ಅಡಗಿರುವ ಒಬ್ಬನೇ ಪರಮಾತ್ಮನ ಅರಿತು ಹೊಂದಿ ಬಾಳುವ  ಮನುಷ್ಯರಾಗಬಹುದಲ್ಲವೆ? 
ಎಷ್ಟು ಇದ್ದರೂ ಸಾಲದು ಎಂದರೆ ಸಾಲವೇ ಅದು.ಅದು ಆತ್ಮತೃಪ್ತಿ ಕೊಡದು ಎನ್ನುವುದೆ ಆಧ್ಯಾತ್ಮ ಸತ್ಯ.
ನಾವಿರೋದೆಲ್ಲಿ? ಭೂಮಿ ಮೇಲೋ ಆಕಾಶದಲ್ಲೋ? ಮಾನವನಿಗೆ ಸಾಮಾನ್ಯ ಜ್ಞಾನ ಅಗತ್ಯವಿದೆ..
ಅಲ್ಲಿರುವುದು ನಮ್ಮನೆ ಇಲ್ಲಿ ‌ಬಂದೆ ಸುಮ್ಮನೆ. ಸುಮ್ಮನಿರಲಾಗದೆ ಮನೆ ಕಟ್ಟುವುದೆ‌  ಸಾಧನೆಯಾಗುತ್ತಿದೆ..ಮನೆ ಇರಲಿ ಅದು ದೇಗುಲವಾಗಿರಲಿ. ದೆವ್ವಗಳ ತಾಣವಾಗದಿರಲಿ.

Thursday, May 21, 2026

ಆತ್ಮನಿರ್ಭರ ಎತ್ತ ಸಾಗುತ್ತಿದೆ ?

ಆತ್ಮನಿರ್ಭರ ಸಾಧ್ಯವೆ?

ಸೂಕ್ಮವಾಗಿ ಗಮನಿಸಿದರೆ ಇಂದಿನ ರಾಜಕೀಯ ವ್ಯವಸ್ಥೆ ಹಿಂದೂ ಮುಸ್ಲಿಂ ನಡುವೆ ಅಂತರ ಬೆಳೆಸುವ ಮಧ್ಯವರ್ತಿಗಳ ಒಪ್ಪಂದ ದೆಡೆಗೆ  ನಡೆಯುತ್ತಿದ್ದರೂ ಇದನ್ನು ಪ್ರಗತಿ ಎಂದು ಸಾಲದೆಡೆಗೆ  ಹೊರಟಿರೋದು  ದುರಂತವೆಂದರೆ  ಮಾನವರಿಗೆ  ಅರ್ಥ ಆಗಬಹುದೆ?

ದೇವರು ದೇಶ ಧರ್ಮ  ಭಾಷೆಗಳ ನಡುವೆ ಅಂತರ ಬೆಳೆದಿರೋದೆ ಮೂರನೆಯವರ ಪ್ರವೇಶದಿಂದ. ಆ ಪ್ರವಾಸಿಗರಿಗೆ‌ಕೊಡುವ ಗೌರವ ಸ್ವಾಗತ ಆತಿಥ್ಯಗಳು ಅವರನ್ನು ಇನ್ನಷ್ಟು ಮಧ್ಯೆ ನಿಂತು ಅಂತರ ಬೆಳೆಸುವಂತೆ ಮಾಡುತ್ತಾ ಅತಂತ್ರಸ್ಥಿತಿಗೆ ಜನಜೀವನ ತಲುಪಿದೆ. ತಮ್ಮ ಮೂಲದವರ ಶಿಕ್ಷಣವೂ ಇಲ್ಲ ಧರ್ಮ/ಕರ್ಮ ವೂ ಇಲ್ಲ ಅವರಲ್ಲಿದ್ದ ಒಗ್ಗಟ್ಟಿನ ತತ್ವಜ್ಞಾನವೂ ಇಲ್ಲ ಆದರೆ ಅವರ ಭೂಮಿ ಆಸ್ತಿ ಹೆಸರು ಹಣ ಹಿಡಿದು ಆಳೋರಿದ್ದಾರೆ. ಆಳೋದಕ್ಕೆ ‌ಬೇಕಾದ ಜ್ಞಾನವಿಲ್ಲದೆ  ಅನ್ಯರ ಜ್ಞಾನದೆಡೆಗೆ ನಡೆದರೆ ಇಲ್ಲಿ ಸ್ವತಂತ್ರ ಜ್ಞಾನಕ್ಕೆ ಬೆಲೆಯಿರದು.ಸ್ವತಂತ್ರ ಜ್ಞಾನವಿರದೆ ಬುದ್ದಿಯೂ ಇರದು. ಬುದ್ದಿವಂತಿಕೆ ಪುಸ್ತಕದ ಬದನೆಕಾಯಿಯಾದಾಗ ತಿನ್ನೋದೆ ಜೀವನ. ತಿಂದ ಮೇಲೆ ಬರುವ ರೋಗಕ್ಕೆ ಔಷಧವೂ ಹೊರಗಿನದ್ದೆ ಆಗಿರುತ್ತದೆ. ಹೀಗೇ  ಒಳಗಿನ ಶಕ್ತಿ ‌ಮತ್ತು ಹೊರಗಿನ ಶಕ್ತಿಯ ನಡುವೆ ನಿಂತು ಸ್ವಾರ್ಥ ಅಹಂಕಾರದ  ರಾಜಕೀಯ ನಡೆಸುವ ಮಧ್ಯವರ್ತಿಗಳಿಗೆ ಸಿಕ್ಕಿದ್ದೇನು?  ಎಲ್ಲರಂತೆ  ನಾವೂ ಮಾನವರು ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲದೆ ಹೋದರೆ  ಜೀವನಕ್ಕೆ ಅರ್ಥ ಇರದು.
ಭೌತಶಾಸ್ತ್ರ  ರಸಾಯನಶಾಸ್ತ್ರ  ಜೀವಶಾಸ್ತ್ರ ಸಂಖ್ಯಾಶಾಸ್ತ್ರ ಅರ್ಥ ಶಾಸ್ತ್ರ ಕ್ಕೆ  ಇಳಿದಾಗ ಆಧ್ಯಾತ್ಮಿಕ ಶಾಸ್ತ್ರ ಅರ್ಥ ವಾಗದೆ  ಶಸ್ತ್ರ ಹಿಡಿಯೋರೆ  ಹೆಚ್ಚಾಗುವರು. ಕ್ಷತ್ರಿಯ ಧರ್ಮ ರಾಜರ ಕಾಲಕ್ಕೆ  ಇತ್ತು.ಈಗ ಕ್ಷತ್ರಿಯರು ಯಾರು? ರಾಜಕಾರಣಿಗಳು ಶತ್ರುಗಳನ್ನೇ  ದೇಶದೊಳಗೆ  ವ್ಯವಹಾರಕ್ಕೆ ಕರೆಸಿಕೊಂಡರೆ ದೇಶ ಕಾಯುವ ಸೈನಿಕರಿಗೆ ಸ್ವಾತಂತ್ರ್ಯ ಇರುವುದೆ?
ಒಪ್ಪಂದಗಳು ಮೊದಲು ಒಳಗಿನ ಸಂಬಂಧ ದೊಳಗಾಗುತ್ತಿತ್ತು.
ಯಾವಾಗಿದು ಹೊರಗಿನವರೊಂದಿಗೆ ಬೆಳೆಯುತ್ತಾ ಹೋಯಿತೋ ಅಂತರ ಬೆಳೆಯಿತು. ಈಗ ಹಣವಿದ್ದರಷ್ಟೆ ಸಂಬಂಧ ಕ್ಕೆ ಬೆಲೆ ಎನ್ನುವ ಸ್ಥಿತಿಗೆ ಬಂದು ಗುಣಜ್ಞಾನವನ್ನು ನೋಡುವ ದೃಷ್ಟಿ ಮಾನವನಿಗೆ  ಕುಸಿದಿದೆ .ಇದರಿಂದ ಹೆಣ್ಣಿನ ಗುಣಕ್ಕೆ ಬೆಲೆಯಿಲ್ಲ‌ ಹಣಗಳಿಸಿದರಷ್ಟೆ ಬೆಲೆ ಇದರಿಂದ ಮಹಿಳಾ ಶಕ್ತಿ ಮನೆಯಿಂದ ಹೊರಬರುತ್ತಿದೆ. ಹೊರಬಂದವರು ಒಳಗಿನ ಸತ್ಯ ತಿಳಿಯದೆ  ಹೊರಗಿನವರಿಗೇ ತಲೆಬಾಗಿದಷ್ಟೂ  ದುರ್ಭಳಕೆ ಹೆಚ್ಚುವುದು.
ಯುವಪೀಳಿಗೆಯಂತೂ ದಾರಿತಪ್ಪಿದ ಹಳಿಗಳಾಗುತ್ತಿದ್ದರೂ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲದವರಿಗೆ ಧರ್ಮ ಪಾಠ ಕಲಿಸಲು  ಸಾಧ್ಯವೆ? 
ಇಬ್ಬರ ಜಗಳದಲ್ಲಿ ‌ಮೂರನೆಯವರಿಗೆ ಲಾಭ ಎನ್ನುವ ಹಾಗೆ ಹಣದಿಂದ ಲಾಭವಾದರೂ ಕಷ್ಟ ನಷ್ಟ ತಪ್ಪದು. ಬುದ್ದಿ ಕಲಿತರೆ ಜ್ಞಾನ ಬರುವುದೆ? ಬುದ್ದಿವಂತರೆಲ್ಲ ಜ್ಞಾನಿಗಳಾಗೋದಿಲ್ಲ. ಬುದ್ದಿ ನಮ್ಮ ಸ್ವಂತ ಶಕ್ತಿಯಿಂದ ಕಲಿಯಬೇಕು. ಇದಕ್ಕಾಗಿ ಸ್ವಂತಿಕೆ ಅಗತ್ಯವಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರೆ  ಎಲ್ಲಿ ಅಮ್ಮ ಎನ್ನುವವರೆ ಬೆಳೆಯೋದು.ಕಾಲುಬುಡವಿರುವ ಭೂ ತಾಯಿ, ಹೆತ್ತ ತಾಯಿ, ಭಾರತಾಂಬೆ, ಕನ್ನಡಮ್ಮನನ್ನು ಕಾಣಲು ಮಧ್ಯವರ್ತಿಗಳ ಅಗತ್ಯವಿದೆಯೆ? 
ಇದರಲ್ಲಿ ಅಡಗಿರುವ ಆಧ್ಯಾತ್ಮಿಕ ಸತ್ಯ ಭೌತಿಕ ಸತ್ಯದ ನಡುವಿರುವ ಸಾಮಾನ್ಯ ಸತ್ಯ ಅರ್ಥ ಆದರೆ ನಮಗೆ ನಾವೇ ಮೋಸಹೋಗಿರುವ ಸತ್ಯವೂ ಕಾಣಬಹುದು.ರಾಜಕೀಯದೃಷ್ಟಿ ಇದ್ದವರಿಗೆ ಅರ್ಥ ಆಗೋದಿಲ್ಲ. 

ಹೊರಗೆ ತಳುಕುಬಳುಕು ಒಳಗೆ ಹುಳುಕಿರುವಾಗ ಅಳುಕು ಇದ್ದೇ ಇರುತ್ತದೆ. ಭಯ ಭಕ್ತಿ ಎನ್ನುವ ಯೋಗಶಕ್ತಿ ಇಲ್ಲದಿದ್ದರೆ ಹೀಗೇ ಆಗುತ್ತದೆ. ಎಷ್ಟು ಹೊರಗಿನವರೊಂದಿಗೆ ಸಂಬಂಧ ಜೋಡಿಸಿದರೂ ಒಳಗಿನವರ ಸಂಬಂಧ ಹದಗೆಡುತ್ತಿದ್ದರೆ ಉಪಯೋಗವಾಗದು. ಅದನ್ನು  ಬಿಟ್ಟು  ಸ್ವಂತ ಬುದ್ದಿ ಜ್ಞಾನದಿಂದ ಆತ್ಮರಕ್ಷಣೆಯೆಡೆಗೆ ಹೊರಡೋದೆ ಉತ್ತಮ.
ಸಾಲ ಮಾಡಿಕೆಟ್ಟ ಸಾಲವೇ ಶೂಲ ಎನ್ನುವುದನ್ನು ಈಗಿನ ಜನ ಅರಿಯದೆ  ಸರ್ಕಾರದ ಹಿಂದೆ ‌ನಿಂತು ಬೇಡೋದು ವಿದೇಶಿಗಳ ಹಿಂದೆ ನಡೆಯೋದು  ಮೂಲ ಮರೆತು ಕುಣಿಯೋದು ಕಲಿಯೋದರಲ್ಲಿಯೇ ಕಾಲಹರಣ ಮಾಡಿದರೆ  ಕಾಲರಾಯ ಬರೋದನ್ನು ತಪ್ಪಿಸಲಾಗದು. ಇದನ್ನು ತಡೆಯೋದಕ್ಕೂ ಸಾಕಷ್ಟು ಸಂಶೋಧನೆಗಳಾಗುತ್ತಿದೆ.‌ಪುರಾಣ‌ಕಾಲದಿಂದಲೂ ಎಷ್ಟೋ ಅಸುರರು ವರ ಬೇಡಿದ್ದು ಸಾಯಬಾರದೆಂದಾಗಿತ್ತು ಆದರೆ ಅದನ್ನು ಪಡೆಯಲಾಗದ‌ಮೇಲೆ ಬುದ್ದಿವಂತಿಕೆಯಿಂದ ಸಾವನ್ನು ಮುಂದೆ ಹಾಕುವ ಪ್ರಯೋಗವಾಯಿತೇ ಹೊರತು  ಸಾವಿನ ಹಿಂದಿರುವ ಶಿವನನ್ನು ಕಾಣಲಾಗಿಲ್ಲ. ಹೀಗಿರುವಾಗ ಯಾರದ್ದೋ ಅಂಗಾಂಗಗಳನ್ನು ಜೋಡಿಸಿಕೊಂಡು ಬದುಕಿದರೂ ಒಳಗಿನ ಜ್ಞಾನ  ಬೆಳೆಸದಿದ್ದರೆ  ವ್ಯರ್ಥ ಜೀವನ. ಎಲ್ಲಾ ಸತ್ತವರೆ ಎನ್ನುವ ಸತ್ಯವರಿತರೂ ನಮ್ಮ ದೇಹದೊಳಗಿರುವ ಆತ್ಮಕ್ಕೆ ತೃಪ್ತಿ ಸಿಗುವ ಕರ್ಮ  ನಮ್ಮಿಂದ  ನಡೆಸಬೇಕಾದವರೆ  ಪರಮಾತ್ಮ. ಕೆಲವರಿಗೆ ಮೊದಲೇ ಅಧಿಕಾರ ಸ್ಥಾನ ಜ್ಞಾನ ಕೊಟ್ಟರೆ ಕೆಲವರಿಗೆ ಜೀವನದ ಮಧ್ಯದಲ್ಲಿ  ಸಿಗಬಹುದು ಕೆಲವರಿಗೆ ಕೊನೆಗಾಲದಲ್ಲಿ ಸಿಕ್ಕರೆ ಮತ್ತೆ ಕೆಲವರಿಗೆ ಮುಂದಿನ‌ಜನ್ಮದವರೆಗೂ ಕಾಯಬೇಕಾಗಬಹುದು.
ಒಟ್ಟಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಮಾಡುವ  ಅವಕಾಶ ವಿದ್ದರೂ  ಅ ದರ ಹಿಂದೆ ರಾಜಕೀಯ ಪಿತೂರಿಗಳದ್ದೆ ಸಾಮ್ರಾಜ್ಯ ವಾದಾಗ  ಯಾರೂ ಮುಂದೆ ಹೋಗಲಾಗದು. ಇದನ್ನರಿತು ಮಧ್ಯವರ್ತಿಗಳು  ಮುಂದೆ ನಡೆದರೆ  ಆಧ್ಯಾತ್ಮ ಪ್ರಗತಿಯಾಗಬಹುದು. ಹಿಂದೆ ತಳ್ಳಿದರೆ ಪಾತಾಳಕ್ಕೆ ಇಳಿಯಬಹುದು. ಎಲ್ಲಿ ಹೋದರೂ ಭೂಮಿ ಸಾಕ್ಷಿಯಾಗಿರುತ್ತದೆ.
ಅದಕ್ಕೆ ತಿಳಿಸಿರೋದು ಸ್ತ್ರೀ ಋಣ ತೀರಿಸೋದು ಕಷ್ಟ ಎಂದು.
ಹಾಗಂತ  ಭೂಮಿಗೆ ಬರದೆ ಋಣ ಕಳೆಯದು. ಇದು ಸೇವೆಯಾಗಿ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಿದವರಿಗೆ  ಸಾಧ್ಯವಾಗಿದೆ ಎಂದರೆ ಅವರು ಹೊರಗಿನ ಸಾಲದಿಂದ ದೂರವಿದ್ದು ರಾಜಕೀಯದಿಂದ ದೂರವಿದ್ದರು ಎನ್ನುತ್ತದೆ  ಆಧ್ಯಾತ್ಮ.  
ಕಟ್ಟಕಡೆಯ ಪ್ರಶ್ನೆ ಆತ್ಮನಿರ್ಭರ ಸಾಧ್ಯವೆ? 
ಭಗವತಿ
ಬೆಂಗಳೂರು

Wednesday, May 20, 2026

ಉಚಿತದ ಹಿಂದಿರುವ ಸಾಲ ಖಚಿತವಾಗಿದೆ

ಭೂಮಿಯಲ್ಲಿ ಯಾವುದೂ ಉಚಿತವಾಗಿರದು.‌ಪ್ರಕೃತಿಯೇನೋ  ಎಲ್ಲವನ್ನೂ ಉಚಿತವಾಗಿ ಕೊಡುತ್ತಿದೆ.ಆದರೆ ಅದನ್ನು ಆಳುವ ಮಾನವನು ಅದಕ್ಕೆ ಬೆಲೆ ಕಟ್ಟಿ ಪಂಚಭೂತಗಳನ್ನು  ಮರೆತು ನಡೆದಿರೋದರಿಂದ. ಸಾಲ ಮಿತಿಮೀರಿದೆ.
ಭೂ ಸಾಲ ತೀರಿಸಲು ‌ಬೇಕಾದ ಸತ್ಕರ್ಮ ಸ್ವಧರ್ಮ ಸದಾಚಾರ ಸರಳ ಜೀವನ ಸ್ವಾಭಿಮಾನ  ಸ್ವತಂತ್ರ ಬುದ್ದಿ ಇಂದಿನ ಜನರಲ್ಲಿ ಮರೆಯಾಗಲು ಕಾರಣವೇ ಅತಿಯಾದ ವ್ಯಾಪಾರೀಕರಣ.
 ಹೆಣ್ಣು ಹೊನ್ನು ಮಣ್ಣಿನ ಋಣ ತೀರದೆ ಆತ್ಮಕ್ಕೆ ತೃಪ್ತಿ ಶಾಂತಿ ಸಿಗದು ಎನ್ನುವ ಆಧ್ಯಾತ್ಮಿಕ  ಜಗತ್ತಿನಲ್ಲಿಯೇ  ಈ ವ್ಯವಹಾರ  ಅತಿಯಾದಾಗ  ಏನೂ ಅರಿಯದವರ ವ್ಯವಹಾರ ಹೇಗಿರಬಹುದು? ಇಲ್ಲಿ ಬೆಲೆ ಕಟ್ಟಬೇಕಾಗಿರೋದಕ್ಕೆ ಬೆಲೆ ಕಟ್ಟದೆ  ಅನಗತ್ಯವಾಗಿದ್ದಕ್ಕೆ ಬೆಲೆಕೊಟ್ಟು ಸಾಲ ಹೆಚ್ಚಿಸಿಕೊಂಡರೆ  ಅದಕ್ಕೆ ತಕ್ಕಂತೆ  ಜನ್ಮಗಳಾಗುತ್ತವೆ.
ದೇವರಿಗೆ ಬೆಲೆ ಕಟ್ಟಬಹುದೆ? ದೈವತ್ವದ ಶಿಕ್ಷಣಕ್ಕೆ ಬೆಲೆ ಕಟ್ಟಬಹುದೆ 
ಒಟ್ಟಿನಲ್ಲಿ ಯಾವುದೂ ಉಚಿತವಾಗಿ ಸಿಗದು. ನಮ್ಮ ಪಾಲಿಗೆ ಬಂದಿರುವುದನ್ನು  ಜ್ಞಾನದಿಂದ  ಬೆಲೆಕೊಟ್ಟು  ಸದ್ಬಳಕೆ ಮಾಡಿಕೊಂಡರೆ  ಧಾರ್ಮಿಕ ವ್ಯವಹಾರ ಇಲ್ಲ ಎಂದರೆ ಭೌತಿಕ ವ್ಯವಹಾರ. ಭೌತಿಕದಲ್ಲಿ ಸತ್ಯ ಧರ್ಮ ಕ್ಕೆ ಬೆಲೆಯಿರದು. ಇದರಿಂದ ಋಣ ಅಥವಾ ಸಾಲ ತೀರದು. ಹೀಗಾಗಿ ಮಾನವ ವ್ಯವಹಾರಕ್ಕೆ ಇಳಿದಾಗ  ಎಚ್ಚರಿಕೆಯಿಂದ  ಯಾರಿಗೆ ಯಾವುದಕ್ಕೆ ಯಾಕೆ ಎಷ್ಟು ಬೆಲೆಕೊಡಬೇಕೆಂಬ ಅರಿವಿದ್ದರೆ ಉತ್ತಮ ಪ್ರಗತಿ
ಋಣ ಮತ್ತು ಕರ್ಮಕ್ಕೆ ತಕ್ಕಂತೆ  ಜನನ ಜೀವನ ಮರಣಗಳು ಭೂಮಿಯಲ್ಲಾಗುತ್ತಲೇ ಇರುತ್ತದೆ. ಇದರಲ್ಲಿ ಹೆಚ್ಚು ಲಾಭ ಕಡಿಮೆ ಲಾಭ, ಹೆಚ್ಚು ನಷ್ಟ ಕಡಿಮೆ‌ನಷ್ಟ ಇದು‌ ಮಾನವನ‌ ಲೆಕ್ಕಾಚಾರ.

ಭೂ ಋಣ ತೀರಿಸುವ‌ ಸತ್ಕರ್ಮದಿಂದ  ಧರ್ಮ ರಕ್ಷಣೆ.‌ಇದರಿಂದ ಪುಣ್ಯ ಪ್ರಾಪ್ತಿ, ಪುಣ್ಯದಿಂದ ಸದ್ಗತಿ. 

ಬಡವರಿಗೆ‌  ಉಚಿತ ಕೊಡಬಹುದು ಆದರೆ  ಯಾವ ರೀತಿಯಲ್ಲಿ ಬಡವರಾಗಿದ್ದಾರೆಂದು ಖಚಿತಪಡಿಸಿಕೊಂಡರೆ ಸರಿ.
ಜ್ಞಾನದಲ್ಲೋ‌ ಹಣದಲ್ಲೋ? ಜ್ಞಾನದ ಶ್ರೀಮಂತರ ಜ್ಞಾನ ಪಡೆದು ಹಣ ಕೊಟ್ಟರೆ ಧರ್ಮ. ಹಾಗೆ ಹಣ ಪಡೆದು‌ ಜ್ಞಾನ ದಾಸೋಹ ಆದರೆ ಧರ್ಮ. ಜ್ಞಾನದಲ್ಲಿ ಸತ್ಯ ಮಿಥ್ಯವಿದೆ. ಇದರ ಬಗ್ಗೆ ಯೂ  ಅರಿವಿರಬೇಕು.ಒಟ್ಟಿನಲ್ಲಿ ಕೊಟ್ಟು ತೆಗೆದುಕೊಳ್ಳುವ‌ ವ್ಯವಹಾರ ಜೀವನದಲ್ಲಿದೆ. ಜೀವನವೇ ವ್ಯವಹಾರವಾದಾಗ ಪಡೆಯೋದೇ ಹೆಚ್ಚಾಗುತ್ತದೆ. ಅಸತ್ಯ ಅಧರ್ಮ ಅನ್ಯಾಯಗಳಿಗೆ‌ಬೆಲೆ ಕಟ್ಟುತ್ತಾ‌ಹೋದಷ್ಟೂ ಭ್ರಷ್ಟಾಚಾರ.  ಲೆಕ್ಕಾಚಾರ ದ ಪ್ರಕಾರ ಪುಣ್ಯ ಕೂಡಬೇಕು, ಪಾಪ ಕಳೆಯಬೇಕು, 
ಹೆಚ್ಚು ಲಾಭವಾದರೆ ಹಿಂದೆ ನಷ್ಟವಿದೆ.

ಯಾವುದಕ್ಕಾದರೂ ಬೆಲೆ ಕಟ್ಟಬೇಕೆಂಬುದು ಇದರರ್ಥ. ಆದರೆ ಬೆಲೆ ಯಾರಿಗೆ ಎಷ್ಟು ಯಾಕೆ ಕಟ್ಟಬೇಕೆಂಬ ಜ್ಞಾನವೂ ವೇದಗಳಿಂದಲೇ ತಿಳಿಸುವುದು ಅಗತ್ಯವಿದೆ. ಇಂದಿನವರೆಗೂ ವರದಕ್ಷಿಣೆಯ ಅರ್ಥ ತಿಳಿಯದವರಿದ್ದಾರೆ. ವರಹ ದಕ್ಷಿಣೆ ಎನ್ನುವುದನ್ನೇ ಸ್ವಾರ್ಥಕ್ಕೆ ತಿರುಚಿಕೊಂಡು ವರದಕ್ಷಿಣೆ ಲಕ್ಷ ಕೋಟಿ ಕೊಟ್ಟಿರುವರಿದ್ದಾರೆ. ಧಾರ್ಮಿಕ  ವಿಚಾರದಲ್ಲಿ ಹಣಕ್ಕಿಂತ ‌ಮೊದಲು ಜ್ಞಾನದ ಅರಿವಿರುವಿದ್ದವರು ದಕ್ಷಿಣೆ ಸರಿಯಾಗಿ ಕೊಡುವರು.
ಕನ್ಯಾದಾನ‌ ಪದದ ಮೂಲ ಕನ್ಯಾ ಆದಾನ. ಹೀಗೇ ಎಷ್ಟೋ ಮೂಲ ಅರ್ಥ ತಿಳಿಯದೆ  ಆಚಾರ ವಿಚಾರ‌ಪ್ರಚಾರ ಬೆಳೆದು‌ಜನರು ಅಜ್ಞಾನದಲ್ಲಿ ‌ಕಣ್ಣಿಗೆ ಕಣೋ ಸತ್ಯವಷ್ಟೆ ಧರ್ಮ ಎನ್ನುವರು.  ಅದರಲ್ಲೂ  ಶಂಖದಿಂದ‌ಬಂದರಷ್ಟೆ ತೀರ್ಥ.
ಎಷ್ಟೋ ತೀರ್ಥ/ಕ್ಷೇತ್ರ  ಪ್ರವಾಸಿ ಕೇಂದ್ರವಾಗಿ  ವ್ಯಾಪಾರಕ್ಕೆ ತಿರುಗಿದೆಯಲ್ಲ  ‌ನಿಮ್ಮ ಅಭಿಪ್ರಾಯ ತಿಳಿಸಿ

Tuesday, May 19, 2026

ಸ್ವಾತಂತ್ರ್ಯ ಎಲ್ಲಿದೆ ಒಳಗೋ ಹೊರಗೋ?

ಸ್ವಾತಂತ್ರ್ಯ ಸಿಗೋದು ಅಂತರದಿಂದಲೋ ಸಮಾನತೆಯಿಂದಲೋ? ಇಲ್ಲಿ ಸಮಾನತೆಯ‌ವಿಚಾರ ಬಂದರೆ ಪರಮಾತ್ಮ‌ಜೀವಾತ್ಮರ  ವಾದ ವಿವಾದದ  ಮತಗಳಲ್ಲಿ ಅಂತರ ಬರುತ್ತದೆ. ಇವುಗಳ‌ನಂತರದಲ್ಲಿ ಸಂಸಾರ ಮತ್ತು ಸನ್ಯಾಸಿಗಳ‌ನಡುವೆ ಅಂತರ ಬೆಳೆಯುತ್ತದೆ. ಹೀಗೇ ಮುಂದೆ ಹೋದಂತೆಲ್ಲ ಮೂಲ ಮರೆತು  ಅಂತರವೇ  ಹೆಚ್ಚಾಗುತ್ತಾ‌ ಮಧ್ಯದಲ್ಲಿ   ನಿಂತು‌ನಡೆಸೋ ರಾಜಕೀಯ ಶಕ್ತಿಗಳು ಬೆಳೆದು  ಈ ಕಡೆ  ಸಮಾನತೆಯ ಮಂತ್ರ  ಇನ್ನೊಂದು ‌ಕಡೆ ಅಂತರಗಳ ತಂತ್ರಕ್ಕೆ ಜನರೊಳಗಿದ್ದ ಸ್ವತಂತ್ರ ‌ಬುದ್ದಿ‌ಜ್ಞಾನವನ್ನು  ಹಿಂದುಳಿಸಿ ಹಿಂದುಳಿದವರ  ಸಂಖ್ಯೆ‌ಬೆಳೆಯುತ್ತದೆ. ಈಗ ಸ್ವಾತಂತ್ರ್ಯ  ಪದಕ್ಕೆ ಅರ್ಥ ತಿಳಿಯಿತೆ ? ಎಷ್ಟು ಹೊರಗೆ ಹೋದರೂ ಸ್ವಾತಂತ್ರ್ಯ ಸಿಗದು.
 ಈಗ ಹೊರಗಿರೋದು ಸ್ವೇಚ್ಚಾಚಾರ.  ಅದಕ್ಕಾಗಿ ಹಣ ಅಧಿಕಾರ ಹೆಸರು ದುರ್ಭಳಕೆ ಆದರೂ  ಅವರಿಗೆ ಸ್ವಾತಂತ್ರ್ಯ ವಿದೆ.
ಆ ಸ್ವಾತಂತ್ರ್ಯ ಕೊಟ್ಟವರು ಎಲ್ಲಿರುವರು? ಹಿಂದುಳಿದರೆ‌  ಅಥವಾ ‌ಮುಂದುವರಿದರೆ? ಯಾವುದರಲ್ಲಿ ಹಿಂದುಳಿದರು ಎಂದರೆ ತತ್ವಜ್ಞಾನದಲ್ಲಿ‌ ಮುಂದುವರಿದವರು ತಂತ್ರಜ್ಞಾನಿಗಳಾಗಿ ಹೊರಗೆ‌ಹೋಗಿರುವರು. ಇವರಿಬ್ಬರ. ಮಧ್ಯೆ ‌ನಿಂತು ಪ್ರಚಾರ ಮಾಡುವವರ‌  ಕುತಂತ್ರದಿಂದ. ಅಂತರ ಹೆಚ್ಚಾಗಿ  ಮಾನವನ ದೈವಗುಣ ಅಸುರಗುಣದೆಡೆಗೆ‌  ಹೋಗಿದೆ. 
ಒಟ್ಟಿನಲ್ಲಿ  ದ್ವೇಷ ಯಾವತ್ತೂ ಶಾಂತಿ ಕೊಡದು.
ದ್ವೇಷಕ್ಕೆ ‌ಕಾರಣವೇ  ಅತೃಪ್ತ ಆತ್ಮಗಳಾಗಿ ವೆ
ಆತ್ಮ ಕಣ್ಣಿಗೆ ಕಾಣದಿದ್ದರೂ ಅತೃಪ್ತರನ್ನು  ನೋಡಿದಾಗ  ತಿಳಿಯಬಹುದು ಆ ದೇಹದಲ್ಲಿ ಅತೃಪ್ತಿ ಹೆಚ್ಚಾಗಿದೆ ಎಂದು.
ಎಷ್ಟು ದೊಡ್ಡ ಮನೆ ಒಳ್ಳೆಯ ಸಂಸಾರ ,ಅತ್ಯುತ್ತಮ ‌ ಕೆಲಸ ಇದ್ದರೆ ಪುಣ್ಯವಂತರೆನ್ನುವರು. ಇವು ಯೋಗದ ಮೂಲಕವೇ ಸಿಗಬೇಕೆಂದರೆ ಅದಕ್ಕೆ ಪೂರಕ ಶಿಕ್ಷಣವಿರಬೇಕಿತ್ತು.ಶಿಕ್ಷಣದಲ್ಲಿಯೇ ತೃಪ್ತಿ ‌ಕಾಣದ ಮಕ್ಕಳಿಗೆ  ತೃಪ್ತಿ ಸಿಗೋದು  ಸಾಧ್ಯವೆ?
ಎಲ್ಲದ್ದಕ್ಕೂ ಕಾರಣ ರಾಜಕೀಯ ವ್ಯವಸ್ಥೆ. ಇದು ಧಾರ್ಮಿಕ ಶಿಕ್ಷಣ ,ಸಾಹಿತ್ಯ, ಸಂಗೀತ ಕಲಾಕ್ಷೇತ್ರವನ್ನೂ ಬಿಡದೆ  ಆಳುತ್ತಿದ್ದರೂ  ಈವರೆಗೆ ಇದೇ ಸತ್ಯ ಶುದಗದವೆಂದರಿತು ಹಿಂದೆ ‌ನಿಂತು ಸಹಕಾರ ಕೊಟ್ಟವರು ಈಗ‌ಹಿಂದಿರುಗಲಾಗದೆ  ಅದನ್ನು ‌ಮತ್ತಷ್ಟು‌ಬೆಳೆಸಿ‌ಜನರಿಗೆ ಮೋಸ‌ಮಾಡಿದರೆ  ಪಾಪದ ಫಲ ಕೊಡುವ ಮೇಲಿನ‌ ನ್ಯಾಯಾಧೀಶನಿಂದ .ಬಿಡಿಸಿಕೊಳ್ಳಲು ಕಷ್ಟಪಡಲೇಬೇಕಲ್ಲವೆ?  ಅವತಾರ ಪುರುಷ  ಸ್ತ್ರೀ ಯರನ್ನೂ‌ ಬಿಡದ ಕರ್ಮ  ಹುಲುಮಾನವನನ್ನು ಬಿಡುವುದೆ?
ಎಲ್ಲಾ ತಿಳಿದರೂ  ಕೆಲಸದಲ್ಲಿ ತಪ್ಪಾಗಬಹುದು. ಆದರೆ ತಪ್ಪು ಮಾಡಿದ ಮೇಲೂ ಅದೇ ದಾರಿಯಲ್ಲಿ‌ನಡೆಯುವುದರಿಂದ ಸತಿ ಆಗಬಹುದೆ? 
ಕಂಬಾರ ನಿಗೆ ಒಂದು ವರುಷ ದೊಣ್ಣೆಗೆ ಒಂದೇ ‌ನಿಮಿಷ ಎಂದಂತೆ
ನಾವೆಷ್ಟು  ಉತ್ತಮದಾರಿಯಲ್ಲಿ‌  ನಡೆಯಲು  ಬಿಟ್ಟು  ಮಕ್ಕಳು ದೊಡ್ಡವರಾದಂತೆ  ದಾರಿತಪ್ಪಿಸುವವರೊಂದಿಗೆ  ಬಿಟ್ಟರೆ ವ್ಯರ್ಥ. ಇದು ಹೊರಗಿರುವ ರಾಜಕೀಯ ಶಕ್ತಿಯಾಗಿದೆ.‌

ಸತ್ಯದಿಂದ ರಾಜಕೀಯ ನಡೆಸಲಾಗದು ಎನ್ನುವುದೂ ಸತ್ಯವೇ ಆದರೂ  ರಾಜಕೀಯದಲ್ಲಿ ಸತ್ಯ ಹುಡುಕೋದನ್ನು ಬಿಡೋದಿಲ್ಲ

Monday, May 18, 2026

ಸ್ವಾತಂತ್ರ್ಯ ಯಾರಿಗೆ ಹೇಗೆ ಸಿಕ್ಕಿದೆ?

ಇತಿಹಾಸದ  ಸತ್ಯಘಟನೆಗಳಲ್ಲಿ ಸ್ವಾತಂತ್ರ್ಯ ಹೋರಾಟವು ಇಂದಿಗೂ  ಪ್ರಚಾರದಲ್ಲಿದೆ ಆದರೆ ಸ್ವಾತಂತ್ರ್ಯ ಪದಕ್ಕೆ ಅರ್ಥ ತಿಳಿಯದವರು ಇದನ್ನು ಪ್ರಸಾರ ಮಾಡುತ್ತಾ  ಸ್ವೇಚ್ಚಾಚಾರಕ್ಕೆ ಇಳಿದಿರೋದನ್ನು ನೋಡಿದಾಗ  ಆತ್ಮದುರ್ಭಲತೆ ಎದ್ದು ಕಾಣುತ್ತದೆ. ಅಂದಿನ ‌ದೇಶಭಕ್ತಿ ಯೋಗದಿಂದ ಕೂಡಿದ್ದರೆ ಈಗಿನ ದೇಶ ಭಕ್ತರು ಭೋಗದ ಜೀವನದಲ್ಲಿರೋದನ್ನು  ಜನ ಕಂಡೂ ಏನೂ ಮಾಡದ ಸ್ಥಿತಿಯಲ್ಲಿದ್ದಾರೆಂದರೆ  ಅಜ್ಞಾನ ಎನ್ನಬೇಕೋ  ಕಲಿಗಾಲ ಎನ್ನಬೇಕೋ ವಿಜ್ಞಾನ ಎನ್ನಬೇಕೋ?
ಅಜ್ಞಾನ ‌ಬೆಳೆದಿರೋದೆ ಕಲಿಕೆಯಿಂದ  ಆ ಕಲಿಕೆಯು  ಹೊರಸತ್ಯವನ್ನಷ್ಟೆ  ಅರ್ಥ ಮಾಡಿಸುತ್ತಾ ಒಳಗಿದ್ದ ಸತ್ಯವನ್ನು ಹಿಂದುಳಿಸಿ ಆಳುತ್ತಿದೆ. ಇದರಿಂದಾಗಿ  ದೇಶ ವಿದೇಶವಾಗುತ್ತಿದೆ. ಹೊರಗಿನ ಶಿಕ್ಷಣದಿಂದ  ದೇಶ ಮುಂದೆ ನಡೆದಿರಬಹುದಷ್ಟೆ ಆದರೆ ಯೋಗಶಕ್ತಿ‌ ಹಿಂದುಳಿದಷ್ಟೂ  ಮಾನವನಿಗೆ  ಮಹಾತ್ಮರ ನಡೆ ನುಡಿಯಲ್ಲಿದ್ದ ಭಕ್ತಿ ಕಾಣಿಸದು. ಜ್ಞಾನವೇ ಇಲ್ಲದೆ ಭಕ್ತಿ ಬರುವುದೆ?
ಭಕ್ತಿ ಆಂತರಿಕ ಶಕ್ತಿಯಾಗಿದೆ. ಇದನ್ನು ಯಾರೋ ಹೊರಗಿನವರು ಒಳಗೆ ತುಂಬಿಸಲಾಗದು. ದೇಶಭಕ್ತರ ದೇವರಭಕ್ತರ ಹೆಸರಿನಲ್ಲಿ  ಹಣ ಅಧಿಕಾರ ಸ್ಥಾನ ಪಡೆದು ಭೋಗದ  ಜೀವನ ನಡೆಸಬಹುದು. ಆದರೆ ಅವರ ಅನುಭವಜ್ಞಾನ ಸಿಗೋದಿಲ್ಲ.  ಇದೀಗ  ಬೇಲಿಯೇ ಎದ್ದು ಹೊಲ ಮೇಯುತ್ತಿರುವುದರ ಹಿಂದೆ  ಅಜ್ಞಾನ ಆವರಿಸಿದೆ. ಇಲ್ಲಿ ಅಜ್ಞಾನ ಎಂದರೆ ತಿಳುವಳಿಕೆಯಿಲ್ಲ ಎಂದರ್ಥ ವಾಗದು.‌ಪುರಾಣ ಇತಿಹಾಸದ ವಿಷಯಗಳನ್ನು ಓದಿ ಕೇಳಿ ನೋಡಿ  ತಿಳಿಯುವ. ಸ್ವಾತಂತ್ರ್ಯ ನಮಗಿದೆ. ಆದರೆ ಅದರಂತೆ  ನಡೆಯೋ ಸ್ವಾತಂತ್ರ್ಯ ಇಲ್ಲದ  ಕಾರಣದಿಂದ   ಕ್ರಾಂತಿ ನಡೆದಿದೆ. ಇದನ್ನು ಶಾಂತಿಯಿಂದ ಅರ್ಥ ಮಾಡಿಕೊಂಡರೆ ನಮ್ಮ ನಮ್ಮ ಸ್ವಾತಂತ್ರ್ಯ ಹರಣಕ್ಕೆ ಕಾರಣವೇ ನಮ್ಮದೇ ಸಹಕಾರ ಕಾರಣವಾಗಿದೆ. ಸರ್ಕಾರಗಳು ನಡೆದಿರೋದೆ ಜನಬಲ ಹಣಬಲ  ಅಧಿಕಾರ ಬಲದಿಂದ. ‌ಇದು ದೇಶವನ್ನು ಸ್ವಾತಂತ್ರ್ಯ ಗೊಳಿಸುತ್ತಿದೆಯೇ ಅಥವಾ  ಅತಂತ್ರಸ್ಥಿತಿಗೆ ತಂದಿದೆಯೆ? 
ವಿದೇಶದಲ್ಲಿ ಇದ್ದವರು  ಭಾರತ ಹೀಗಿರಬೇಕೆಂದು ತೀರ್ಮಾನ  ಮಾಡಿದರೆ  ಬೆಲೆಕೊಡುವ ನಾವು ನಮ್ಮವರ  ದೇಶಭಕ್ತಿಯನ್ನು ನಿರ್ಲಕ್ಷ್ಯ ಮಾಡಿಕೊಂಡು  ವಿದೇಶಿಗರ ಲಕ್ಷಕ್ಕೆ ತಲೆಬಾಗೋದನ್ನು ದೇಶಭಕ್ತಿ ಎನ್ನಬಹುದೆ?
ಮಕ್ಕಳು ಮಹಿಳೆಯರು ದುಡಿದು ಸಂಸಾರ ನಡೆಸೋ ಸ್ಥಿತಿಗೆ ಬಂದಿರೋದೆ  ದೊಡ್ಡ  ಪ್ರಗತಿ ಎನ್ನಬಹುದೆ? 
ಭಾರತದಂತಹ ‌ಮಹಾದೇಶ ನಡೆಸೋದೆ‌ಕಷ್ಟ. ಅದರಲ್ಲೂ ಇಲ್ಲಿನ  ಮೂಲ ಧರ್ಮ ಕರ್ಮ ವನರಿತು  ಜೀವನ ಸಾಗಿಸೋದು ಇನ್ನೂ ಕಷ್ಟ. ಇದಕ್ಕೆ ಬದಲಾಗಿ ಅನ್ಯರ  ಸಹಕಾರ ಸಹಾಯ ಪಡೆದು  ದೇಶದ ಮೂಲ ಧರ್ಮ ಬಿಟ್ಟು ಹೊರಗೆ ಹೋದರೆ ಅದೇ  ಮುಂದೆ  ಸಮಸ್ಯೆ ಗೆ ಕಾರಣವಾಗುತ್ತದೆನ್ನುವುದು ಈಗ ಸತ್ಯವಾಗಿ ಕಾಡುತ್ತಿದೆ.
ಅನ್ಯರ ವಶದಲ್ಲಿ ಲಕ್ಷ ಗಳಿಸಿದರೂ ನಮ್ಮವರನ್ನೇ ನಿರ್ಲಕ್ಷ್ಯ ಮಾಡಿದರೆ  ಸಾಲ  ಕಾಡದೆಬಿಡದು. ಇದೊಂದು ಅಗೋಚರ ಶಕ್ತಿ. ಜೀವನದ ಗುರಿ ಸಾಲ ತೀರಿಸುವುದಾಗಿದೆ ಎಂದಾಗ ಯಾರ ಸಾಲಯಾರು ತೀರಿಸಬೇಕೆನ್ನುವ ಅರಿವಿದ್ದರೆ ಹತ್ತಿರದ ಸಾಲ ತೀರಿಸುತ್ತಲೇ ಎತ್ತರಕ್ಕೆ ಏರಬಹುದು.
ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಂಡು ಭೌತಿಕದಲ್ಲಿ  ಬಾಳುವುದು  ಜೀವನ. ಇಲ್ಲಿ ಪೈಪೋಟಿ ಜಗಳ ತಾರತಮ್ಯ ಅಂತರದ ದ್ವೇಷ ಭಿನ್ನಾಭಿಪ್ರಾಯ ಗಳಿಂದ. ಮನಸ್ಸು ಹದಗೆಟ್ಟು  ಹೊರಗೆ ಸುತ್ತಿದರೆ ಒಳಗಿದ್ದ ಸತ್ಯವೂ ಅರ್ಥ ವಾಗದೆ ಧರ್ಮ ಸೂಕ್ಮವನರಿಯದೆಯೇ ವ್ಯವಹಾರದಲ್ಲಿ ಮಾನವ‌ಮುಳುಗಿ ಲಾಭ‌ನಷ್ಟಗಳ ಲೆಕ್ಕಾಚಾರವಷ್ಟೆ ಕಾಣುತ್ತದೆ. ಅದರ ಹಿಂದೆ ಇರುವ ಪಾಪ ಪುಣ್ಯಗಳ ಬಗ್ಗೆ  ಅರಿವಿದ್ದರೆ ಉತ್ತಮ ವ್ಯವಹಾರದಲ್ಲೂ ಧರ್ಮವಿರುತ್ತದೆ.

ದೇಶವನ್ನು ವಿದೇಶ ಮಾಡೋದಕ್ಕೆ  ಹಣ ಬೇಕು. ವಿದೇಶಿಗರನ್ನು ಸ್ವದೇಶಿ ಮಾಡೋದಕ್ಕೆ  ಜ್ಞಾನ ಬೇಕು.
ಪರರೆಲ್ಲಾ ನಮ್ಮವರಾದರೆ ಸ್ವರ್ಗ
ನಮ್ಮವರೆ ಪರಕೀಯರಂತಿದ್ದರೆ ನರಕ.
ಯಾರಿಗೆಗೊತ್ತು ಯಾರಲ್ಲಿ ಯಾವ ದೇಶದ ಧರ್ಮ ಸಂಸ್ಕೃತಿ ಭಾಷೆ ಇದೆಯೋ ಅದೇ ಅವರನ್ನು ನಡೆಸುತ್ತದೆ.ಆದರೆ ಸ್ವಾತಂತ್ರ್ಯ  ಎನ್ನುವ ಪದ  ಪವಿತ್ರವಾಗಿದ್ದರಷ್ಟೆ  ಯೋಗಿಗಳಾಗಿರಬಹುದು.

ವ್ಯಕ್ತಿತ್ವ ವಿಕಸನ ತತ್ವಜ್ಞಾನದಿಂದಾಗಬೇಕು

ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ವಾಗಬೇಕೇ ಹೊರತು ವ್ಯಕ್ತಿ ಬೆಳೆಯೋದಷ್ಟೆ ಅಲ್ಲ. ತತ್ವಜ್ಞಾನದಿಂದ ವ್ಯಕ್ತಿತ್ವ. ತಂತ್ರದಿಂದ ವ್ಯಕ್ತಿ ಬೆಳೆಯುವನು.
 ಸಾತ್ವಿಕ ಶಿಕ್ಷಣದ ಮೂಲ ಗುರಿ  ಸತ್ಯಾನ್ವೇಷಣೆ. ಆಧ್ಯಾತ್ಮ ಮತ್ತು ಭೌತಿಕ ಸತ್ಯದ ನಡುವಿರುವ ಮಾನವನಿಗೆ  ನಾನ್ಯಾರು ಎನ್ನುವ ಸತ್ಯದ ಪರಿಚಯವಾದ ನಂತರವೇ  ಮಹಾತ್ಮರಾಗೋದಕ್ಕೆ ಸಾಧ್ಯ. 
ಅಂತರಂಗದ ಸಂಸ್ಕಾರದ ನಂತರವೇ ಬಹಿರಂಗದ ಶುದ್ದಿ ಸಾಧ್ಯ.
ಬಸವಣ್ಣನವರು  ಕಲಬೇಡ ಕೊಲಬೇಡ...ಬೇಡವಾಗಿದ್ದನ್ನು ಬಿಟ್ಟು ಬೇಕಾದ್ದನ್ನಷ್ಟೆ ತಲೆಗೆ ತುಂಬಿದರೆ ಅದೇ ಸ್ವಚ್ಚ ಶಿಕ್ಷಣವಾಗುತ್ತದೆ.
ಒಟ್ಟಿನಲ್ಲಿ ಶಿಕ್ಷಣವು ವ್ಯಾಪಾರಿಕರಣವಾಗೋದಕ್ಕೆ ಕಾರಣವೇ  ಮಾನವನ  ಅಲ್ಪ ಜ್ಞಾನ ಎನ್ನಬಹುದು. ಮಕ್ಕಳಿಗೆ  ಕಲಿಸುವ ವಿಷಯಗಳು ಅಮೃತವಾಗಿದ್ದರೆ ಅಮೃತಪುತ್ರರು ವಿಷತುಂಬಿದ ದ್ವೇಷದ ವಿಷಯವಾದಷ್ಟೂ ವಿಷಜಂತುಗಳು. ಕೋಟ್ಯಾಂತರ ಜೀವರಾಶಿಗಳಲ್ಲಿ
ಮಾನವನಿಗೆ ಮಾತ್ರ ಈ ಆತ್ಮಜ್ಞಾನದೆಡೆಗೆ ಸಾಗುವ ಅವಕಾಶವಿರೋದು. ಇದರ ಮೂಲವೇ ಶಿಕ್ಷಣವಾಗಿದೆ. ಶಿಕ್ಷೆ ನೀಡುವ ಕ್ಷಣ ಶಿಕ್ಷಣ ಎಂದರೆ ಯಾವುದಕ್ಕೆ ಶಿಕ್ಷೆ ನೀಡಬೇಕು ಎಂದರೆ ತನ್ನ ಆತ್ಮಶುದ್ದಿಯತ್ತ ನಡೆಯಲು  ಮಗುವಿನಲ್ಲಿನ  ಹಲವು ದೋಷಗಳನ್ನು ತಿದ್ದಲು ಸ್ವಲ್ಪ ಮಟ್ಟಿಗೆ ಶಿಕ್ಷೆ ಅಗತ್ಯವಿದೆ. 
ಬುದ್ದಿವಂತನಿಗೆ ಮಾತನ‌ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎನ್ನುವರು. ಹಿಂದೆ
ಮಾತಿನಿಂದ ಕಲಿಯದಿದ್ದರೆ ದೊಣ್ಣೆ ಯ ಪ್ರಯೋಗವಾಗುತ್ತಿತ್ತು. 
ಆದರೆ ಇಂದಿನ ಶಿಕ್ಚಣದ ವಿಷಯಗಳೇ ಆತ್ಮತತ್ವಕ್ಕೆ ವಿರುದ್ದವಾಗಿ ಭೌತಿಕದೆಡೆಗೆ ನಡೆದಿದೆ. ಇದನ್ನು ಕಲಿಯದಿದ್ದರೆ  ಶಿಕ್ಷೆ ನೀಡುತ್ತಿರುವುದರಿಂದ ಮಕ್ಕಳು ಇನ್ನಷ್ಟು ಅಜ್ಞಾನದೆಡೆಗೆ ಸಾಗಿದ್ದಾರೆ.
ಅಜ್ಞಾನ ಎಂದರೆ ತಿಳುವಳಿಕೆ ಇಲ್ಲದಿರೋದೆಂದರ್ಥ ವಲ್ಲ.ಇಲ್ಲಿ ನಮ್ಮ ಸ್ವಂತ ಬುದ್ದಿ ಜ್ಞಾನದ ತಿಳುವಳಿಕೆಯಿಲ್ಲದಿರೋದೆಂದರ್ಥ.
ಯಾರೋ ಹೇಳಿದ್ದು ಕೇಳಿದ್ದು ಬರೆದದ್ದು ನುಡಿದದ್ದು  ತಿಳಿಯುವುದಷ್ಟೆ ಶಿಕ್ಷಣವಾಗದು. ಅದು ಇಂದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವೆ ಸಾಧ್ಯವೆ ಎಷ್ಟು ಅಗತ್ಯವಿದೆ ಎನ್ನುವ  ಬಗ್ಗೆ  ನಮ್ಮ ದೇ  ಪ್ರಯತ್ನಗಳು  ನಮ್ಮ ಆತ್ಮಕ್ಕೆ   ಸತ್ಯಕ್ಕೆ ಧರ್ಮಕ್ಕೆ ಚ್ಯುತಿಬರದಂತೆ  ನೋಡಿಕೊಳ್ಳುವ ಜ್ಞಾನ ಬೇಕು.
ವಿದ್ಯೆ ಕಲಿತರೆ ಜ್ಞಾನ ಬೆಳೆಯುತ್ತದೆ. ಜ್ಞಾನದಿಂದ  ವಿನಯವಂತಿಕೆ  ಬೆಳೆಯುತ್ತದೆ.ವಿನಯವು  ವಿಶಾಲ ಮನೋಭಾವನೆಗೆ   ಸಹಕರಿಸುತ್ತದೆ
ವಿಶಾಲವಾಗಿ ಹರಡಿರುವ ಈ ಇಡೀ ಬ್ರಹ್ಮಾಂಡವನ್ನು  ಅರ್ಥ ಮಾಡಿಕೊಳ್ಳಲು  ಆಧ್ಯಾತ್ಮ ದಿಂದಷ್ಟೆ ಸಾಧ್ಯವೆನ್ನುವುದೆ ನಮ್ಮ ಹಿಂದಿನ ಶಿಕ್ಷಣದ ಗುರಿ. ಕಾಲಾನಂತರದಲ್ಲಾದ  ಅಂತರಗಳ‌ಪ್ರಭಾವದಿಂದಾಗಿ ಎಷ್ಟೋ ಮೂಲ ಸತ್ಯ  ಹೊರಬರದೆ ಅರ್ಧ ಸತ್ಯದ ರಾಜಕೀಯ ವಿಚಾರಗಳು  ಪಠ್ಯ ಪುಸ್ತಕದಲ್ಲಿ  ಸೇರಿ ಮಕ್ಕಳು  ಸಣ್ಣ ವಯಸ್ಸಿನಲ್ಲಿಯೇ  ರಾಜಕೀಯ ಪ್ರವೇಶಮಾಡುವಂತೆ  ಮಾಡಿದಾಗ  ರಾಜಯೋಗ ಹಿಂದುಳಿಯುತ್ತದೆ.
ವಿವೇಕಾನಂದರ ನಿನ್ನ ಯ ಗುರಿಯು ಆತ್ಮದರುಶನ....
ಈಗಿಲ್ಲ.