ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Wednesday, January 28, 2026

ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ಧರ್ಮದಿಂದ ದುಡಿದು ಗಳಿಸಿದರಲ್ಲಿಯೇ ದಾನ ಮಾಡಿ ಹೋಗಿದ್ದಾರೆಂದರೆ  ಆತ್ಮಜ್ಞಾನದ ನಂತರವೇ  ಪರಮಸತ್ಯದ ಅರಿವಾಗೋದು. ಅಜ್ಞಾನದ ಕಣ್ಣಿಗೆ ಎಲ್ಲವೂ ತನ್ನದೆಂದೇ ಕಾಣೋದು ಮಾಯೆಯಾಗಿದೆ. ಅದಕ್ಕೆ ಶ್ರೀ ಶಂಕರರು ತಿಳಿಸಿದಂತೆ ಜಗತ್ ಮಿಥ್ಯ ಬ್ರಹ್ಮನ್ ಸತ್ಯ. ಸತ್ಯವನ್ನು ಬಿಟ್ಟು ಜಗತ್ತಿನಲ್ಲಿ ನಡೆದರೆ ಭೂಮಿ  ಅತೃಪ್ತ ಆತ್ಮಗಳ ಸಾಮ್ರಾಜ್ಯವಾಗುತ್ತದೆ.
ಹಣಕೊಟ್ಟು ಬಡತನ ತೀರಿಸುವ ಅಜ್ಞಾನ ಬಿಟ್ಟು ಒಳಗಿನ ಸುಜ್ಞಾನ ಬೆಳೆಸೋ ಶಿಕ್ಷಣ ಕೊಟ್ಟು ನಡೆಯಲು ಸಹಕರಿಸಿದರೆ  ಸ್ವಂತ ಬುದ್ದಿ ಜ್ಞಾನ ಸ್ವಾತಂತ್ರ್ಯ ಎಲ್ಲವೂ ಆಸ್ತಿಯಾಗಿರುತ್ತದೆ.
ಕಾಲ ಬಂದಾಗ ನಮಗೆ ಸೇರಬೇಕಾಗಿದ್ದು ಸೇರುತ್ತದೆ.ಇದು ಜ್ಞಾನವೂ ಆಗಿರುತ್ತದೆ. ತಾಳ್ಮೆ ಇರಬೇಕಷ್ಟೆ.
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಬೋಗಿಗೆ ಎನ್ನುವುದು ಸತ್ಯ. ಯೋಗದಿಂದ ಋಣ ಕಳ ಎಸ್ ದರೆ ಭೋಗದಿಂದ ಋಣ ಹೆಚ್ಚುವುದಷ್ಟೆ ವ್ಯತ್ಯಾಸ.

Sunday, January 25, 2026

ಸತ್ಯಾನ್ವೇಷಣೆಗೆ ಆತ್ಮಾವಲೋಕನ ಅಗತ್ಯವಿದೆ.

ಜೀವನದಲ್ಲಿ ಸ್ವತಂತ್ರ ವಾಗಿ ಸತ್ಯಾನ್ವೇಷಣೆ ಮಾಡೋದು ಕಷ್ಟ.ಸತ್ಯವನ್ನು ಒಳಗೆ ಅನುಭವಿಸಲೂ  ಕಷ್ಟ. ಹೊರಗೆ ನೋಡಲೂ ಕಷ್ಟ. ಕಾಣದ ಸತ್ಯ ಕಾಣುವ ಸತ್ಯಕ್ಕಿಂತ ಬಹಳ ಆಳ ಅಗಲ ಎತ್ತರ ಇರುವುದರಿಂದ  ಸತ್ಯ  ಮರೀಚಿಕೆಯಂತಿರುತ್ತದೆ. ಎಲ್ಲೋ ಒಮ್ಮೆ ಅನುಭವಕ್ಕೆ ಬಂದರೂ ಹಿಡಿದಿಡಲಾಗದು. ಹೀಗಾಗಿ ಎಷ್ಟೋ ಮಹಾತ್ಮರು ಸಾದುಪುರುಷರು ಸತ್ಯವನ್ನು  ತೋರಿಸಲಾಗದೆ ಮುಂದೆ ಹೋಗಿರುವರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದು ಪ್ರಶ್ನೆ ಮಾಡೋದೇ ತಪ್ಪೆ? 
ತಪ್ಪು ಪ್ರಶ್ನೆ ಮಾಡೋದರಲ್ಲಿಲ್ಲ  ತೋರಿಸಲಾಗದ್ದನ್ನು  ನೋಡಿದೆ ಎನ್ನುವುದು ತಪ್ಪು. ಅನುಭವಿಸಿರೋದನ್ನು ಹೇಳಬಹುದಷ್ಟೆ ಆದರೆ ಅಂತಹ ಅನುಭವ ಎಲ್ಲರಿಗೂ ಆಗಲೇಬೇಕು ಆಗುತ್ತದೆ ಎನ್ನಲಾಗದು. 
ದೇವರ ವಿಷಯದಲ್ಲೂ ಇದೇ ನಡೆದಿದೆ. ದೈವತ್ವಕ್ಕೆ ಇತಿಮಿತಿಗಳಿಲ್ಲ ಇದು ಯಾವ ರೂಪದಲ್ಲಿ ಯಾರಲ್ಲಾದರೂ  ಇರಬಹುದು. ಹಾಗಂತ ಅವರೆ ದೇವರು ಎನ್ನಲಾಗದು.
ವ್ಯಕ್ತಿಗಿಂತ ಶಕ್ತಿ ದೊಡ್ಡದು. ಆ ಶಕ್ತಿ ದೈವೀಕ ,ಅಸುರಿ ಮಾನವೀಯ ಗುಣಗಳನ್ನು ಹೊಂದಿರುವಾಗ  ಅವರವರ ಕಾಯಕ ನಡೆ ನುಡಿಯಲ್ಲಿ  ಕಂಡರೂ  ಅದೂ ಯಾವ ರೂಪ ತಾಳಬಹುದೆನ್ನುವ  ಸ್ಪಷ್ಟವಿರದು. ಕೊನೆಯುಸಿರಿರುವರೆಗೂ ಮಾನಸಿಕ ಬದಲಾವಣೆ ಮನುಷ್ಯನಿಗಾಗುತ್ತದೆ.

ಒಬ್ಬ ಸಾಮಾನ್ಯ ವ್ಯಕ್ತಿ  ತನ್ನ ಸಾತ್ವಿಕ ಗುಣದಿಂದ ದೈವತ್ವಕ್ಕೆ ಏರಬಹುದು.ತಾಮಸಿಕ ಗುಣದಿಂದ  ಅಸುರರಾಗಬಹುದು .
ಹಾಗಾಗಿ ಇರುವ ಒಂದು ಸತ್ಯವ ಹಿಡಿದವರು ದೇವರೆಡೆಗೆ ನಡೆದರೆ  ಅರ್ಧ ಸತ್ಯ ಮಾನವನನ್ನು  ಎರಡೂ ಕಡೆ ಎಳೆಯಿತು.ಅಸತ್ಯವಂತೂ  ತೀರಾ ಕೆಳಮಟ್ಟದವರೆಗೆಳೆದು  ಅಜ್ಞಾನ ಬೆಳೆಸಿತು.‌ಹೀಗಾಗಿ ಸತ್ಯವೇ ದೇವರೆಂದರು. ಅದು ಆತ್ಮವಿಶ್ವಾಸ ಆತ್ಮಜ್ಞಾನ ಆತ್ಮಾವಲೋಕನ ದೆಡೆಗೆ  ನಡೆಸಿ ಆಧ್ಯಾತ್ಮ  ಸಾಧನೆಯಾಯಿತು. ಆಧ್ಯಾತ್ಮ  ಸಾಧನೆ ಅಂತರಂಗದ ಶುದ್ದಿಯಿಂದಾದರೆ  ಆಧ್ಯಾತ್ಮ ವಿಜ್ಞಾನ.
ಭೂಮಿಯ ಮೇಲಿದ್ದೇ  ಆಕಾಶಕಾಯ ಗ್ರಹ ನಕ್ಷತ್ರಗಳ ಚಲನ ವಲನಗಳನ್ನು ತಿಳಿಸೋದಕ್ಕೆ ಆತ್ಮಜ್ಞಾನಿಗಳಿಗೆ‌ಮಹರ್ಷಿಗಳಿಗೆ 
ಸಾಧ್ಯವಾಗಿದೆ ಎಂದರೆ  ಒಳಗಿರುವ ಆತ್ಮವೇ ದೇವರು. ಇದು ಅಸುರರೊಳಗಿದ್ದರೂ  ಸರಿ ಸುರರಲ್ಲಿದ್ದರೂ ಸರಿ ಪರಮಾತ್ಮನೊಬ್ಬನೆ  ಎಲ್ಲರನ್ನೂ ನಡೆಸೋದೆನ್ನುವುದೇ ಅಧ್ವೈತ. ಅಣು ರೇಣು ತೃಷಕಾಷ್ಟ ಪರಿಪೂರ್ಣ ಗೋವಿಂದ. ಎಂದರೆ ಅಣುಗಾತ್ರದ ಈ ಜೀವಾತ್ಮ ನಿಗೆ ಮೋಕ್ಷ ಸಿಗಲು ಗೋವಿಂದನ ನೆನೆದರಾಯಿತು. ಇದಕ್ಕೆ ಮೋಹದ ಕ್ಷಯವಾಗಬೇಕಿದೆ.

ಸ್ಮರಣೆಯೊಂದೇ ಸಾಲದೆ ಗೋವಿಂದನಾ....ನಾಮ ಒಂದೇ ಸಾಲದೇ.. ಎಂದು ದಾಸಶ್ರೇಷ್ಟರು ಹೇಳಿರುವರು.
ಪರಮಸತ್ಯ ಪರಮಾತ್ಮನ ಸತ್ಯ ಒಂದೇ ಆಗಿದ್ದರೂ  ನಾಮ ಹಲವು. ಒಂದೇ ನಾಮವಹಿಡಿದರೂ ಒಂದೇ ಸತ್ಯ.

Friday, January 23, 2026

ಸಾಮಾನ್ಯಜ್ಞಾನ ಮಾನವನಿಗೆ ಅತ್ಯಗತ್ಯ

ಸಾಮಾನ್ಯ ಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಾಮಾನ್ಯರಂತೆ ನಡೆಯುವುದೇ ಪ್ರಜಾಪ್ರಭುತ್ವದ ವಿಶೇಷ ಜ್ಞಾನ.ಆದರಿದು ಕಷ್ಟಪಡುವ ಸ್ಥಿತಿಯಲ್ಲಿದೆ ಎಂದರೆ ನಮ್ಮ ಸಹಕಾರ ಅದಮಾನ್ಯರಿಗೆ ವಿಶೇಷ ವ್ಯಕ್ತಿಗಳಿಗೆ  ವಿಜ್ಞಾನಕ್ಕೆ ನೀಡುತ್ತಾ ನಮ್ಮನ್ನು ನಾವರಿತು ನಡೆಯಲಾಗದಿರುವುದೇ ಕಾರಣ.
ಇಂದಿಗೂ ಮಕ್ಕಳು ಮಹಿಳೆಯರಲ್ಲಿ ಅಡಗಿರುವ ಈ ಸಾಮಾನ್ಯ ಜ್ಞಾನಕ್ಕೆ ಪೂರಕವಾದ ಸಹಕಾರ ಸ್ವಾತಂತ್ರ್ಯ ವಿಲ್ಲ. ಮನೆಯೊಳಗಿನ ಗೃಹಿಣಿಯ ಸಾತ್ವಿಕತೆಗೆ ಬೆಲೆಕೊಡದವರು ಹೊರಗಿನ ಮಹಿಳೆಯರಿಗೆ ಬೆಲೆಕೊಡುವರು ಎಂದರೆ ಆತ್ಮಕ್ಕೆ ಬೆಲೆಯಿಲ್ಲ ಹಣಕ್ಕಿದೆ. 
ಇಲ್ಲಿ   ಭೂಮಿಯನ್ನು ಆಳೋದಕ್ಕಾಗಿಯೇ ಹರಸಾಹಸ ಮಾಡುವ ರಾಜಕೀಯವಿದೆ.ಆದರೆ ಭೂಮಿಗೆ ಬಂದ ಉದ್ದೇಶದ ಜ್ಞಾನವಿಲ್ಲದವರ ಹಿಂದೆ ‌ನಡೆದವರೆ ಹೆಚ್ಚಾಗಿ  ಭೂ ಭಾರ ಹೆಚ್ಚಾಗಿದೆ. ಭೂ ಕಂಪನದಿಂದ ಎಷ್ಟೋ ಜೀವ ಹೋಗುತ್ತದೆಂದರೆ  ಭೂಮಿಯನ್ನು  ಕಾಣುವ  ದೃಷ್ಟಿ ಬದಲಾಗಬೇಕಿದೆ.  ಭೂಮಿ ಒಂದು ಮಾಧ್ಯಮವಷ್ಟೆ.ಇದು ಮನುಕುಲಕ್ಕೆ ಆಶ್ರಯ ಕೊಟ್ಡಿರುವಾಗ ಅದರೊಂದಿಗೆ ಸಹಕರಿಸುತ್ತಿರುವ ಎಲ್ಲಾ ದೈವೀಕ ಶಕ್ತಿಯನ್ನು  ಆರಾಧಿಸುವುದು ಅಗತ್ಯವಿದೆ.  ಆದರೆ ಆರಾಧನೆಯು  ಸ್ವಾರ್ಥ ಅಹಂಕಾರದೆಡೆಗೆ ಸಾಗಿದರೆ ಭೂಕಂಪ,ಪ್ರಕೃತಿ ವಿಕೋಪಕ್ಕೆ ಜೀವಬಲಿಯಾಗುತ್ತದೆ. ಹೀಗಾಗಿ ಇರೋದೊಂದೆ ಭೂಮಿಯಲ್ಲಿ  ಜೀವನದ ಸತ್ಯಾಸತ್ಯತೆಯನರಿಯಲು ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ.
ಒಂದೆಡೆ ದೈವಶಕ್ತಿ ಇನ್ನೊಂದು ಕಡೆ ಭೋಗದೆಡೆಗೆ ಸೆಳೆಯುವ ಅಸುರ ಶಕ್ತಿಯ ನಡುವಿರುವ ಮಾನವನಿಗೆ ತನ್ನ ಶಕ್ತಿಯ ಸದ್ಬಳಕೆಯಾಗುವುದೋ ದುರ್ಭಳಕೆ ಆಗುವುದೋ ಎನ್ನುವ ಸಾಮಾನ್ಯ ಪ್ರಜ್ಞೆ ಇದ್ದರೆ  ಇತಿಮಿತಿಯಲ್ಲಿ  ಎರಡೂ ಶಕ್ತಿಯನರಿತು ಜೀವನ ನಡೆಸಬಹುದು. ಯಾವುದೇ ಇರಲಿ ಅತಿಯಾದರೆ ಗತಿಗೇಡು.ಅತಿಯಾದ ಆತ್ಮವಿಶ್ವಾಸ ವೂ ದಾರಿತಪ್ಪಿಸಬಹುದು. ಅಹಂಕಾರವೂ ಪಾತಾಳಕ್ಕಿಳಿಸಬಹುದು. ಇದನ್ನರಿತ ಮಾನವ ಪ್ರತಿ ಹೆಜ್ಜೆ ಮುಂದೆ ಇಟ್ಟಾಗ ಹಿಂದಿನ ಹೆಜ್ಜೆಯ ಗುರುತನ್ನು ನೆನಪಿಟ್ಟುಕೊಂಡರೆ ಹಿಂದಿರುಗಿ ಬರಬಹುದು.  ಹಿಂದೂಗಳ ಈ ಸ್ಥಿತಿಗೆ  ಅಪಾರ್ಥ ಮಾಡಿಕೊಂಡು ಮುಂದೆ ಓಡಿರೋರು ಕಾರಣ. ಓಡಿದವರೂ ಒಮ್ಮೆ ನಿಂತು ಆತ್ಮಾವಲೋಕನ ಮಾಡಿಕೊಂಡಿರಬಹುದು.ಆದರೆ ಕಾಲ ಮಿಂಚಿ ಹೋದಾಗ ಚಿಂತಿಸಿ ಫಲವಿಲ್ಲ. ಇದೀಗ ನಮಗೆ ಪುರಾಣ ಇತಿಹಾಸದ ಕಥೆ ಹೇಳುತ್ತದೆ. ಧರ್ಮ ಅಧರ್ಮದ  ಹೋರಾಟದಲ್ಲಿ ಮೊದಲು ಅಧರ್ಮದ ಬಲ ಹೆಚ್ಚಾಗಿ ಕಂಡರೂ ಕೊನೆಯಲ್ಲಿ ಗೆಲುವು ಧರ್ಮದ್ದೇ ಆಗಿರುವಾಗ ಈಗಲೂ ಸಾಮಾನ್ಯರಿಗೆ ಧರ್ಮ ದ ಹಾದಿಯಲ್ಲಿ ನಡೆಯಲು  ಸಹಕರಿಸಿದರೆ ಉತ್ತಮ. 
ಯಾರೋ ದೊಡ್ಡದಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದಾರೆಂದರೆ ಜನಬಲ ಹಣಬಲ ವೆಲ್ಲವೂ ಸಾಮಾನ್ಯರದ್ದೇ ಆಗಿರುತ್ತದೆ. ಹೆಸರು ಸ್ಥಾನ ಪದವಿ ಪಟ್ಟ ಮಾತ್ರ ಆಯೋಜಕರದ್ದು  ಎಂದಾಗ ಅಪರೋಕ್ಷವಾಗಿ ಪರೋಕ್ಷವಾಗಿ  ಸಹಕರಿಸಿರುವ ಜನರನ್ನು ಕಾಣುವ ದೃಷ್ಟಿ ಹೇಗಿರಬೇಕು? ಪ್ರಜಾಪ್ರಭುತ್ವದ. ಪ್ರಜಾಶಕ್ತಿಯನ್ನು ಸಾತ್ವಿಕವಾಗಿ  ನೋಡೋದಕ್ಕೂ ನಮ್ಮಲ್ಲಿ ಸತ್ವಗುಣವಿರಬೇಕು. ರಾಜಕೀಯದೆಡೆಗೆ ಎಳೆದು  ಮಹಿಳೆ ಮಕ್ಕಳನ್ನು ಹೊರಗೆ ತರುವುದರಿಂದ ಜನಸಂಖ್ಯೆ  ಕಂಡರೂ ಭಕ್ತರ ಸಂಖ್ಯೆ ಇರದು. ಇದೇ ಕಾರ್ಯಕ್ರಮ ಮನೆಯೊಳಗೆ ಮಾಡುವ ಶಕ್ತಿ ಸಹಕಾರವಿದ್ದರೆ ಎಲ್ಲರ‌ಮನೆಯೂ ದೇವಾಲಯವೇ. ಹಾಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ದಾಸೋಹವಿದ್ದರೆ  ಆತ್ಮನಿರ್ಭರ. ಕೇವಲ ಹೊಟ್ಟೆ ತುಂಬಿಸುವ ಕ್ಷಣಿಕ ಸುಖದ ಅನ್ನದಾಸೋಹ ಎಲ್ಲಾ ಕ್ಷೇತ್ರ ಮಾಡುತ್ತದೆ. ಆದರೆ ಜ್ಞಾನದಾಸೋಹಕ್ಕೆ ಸಾಮಾನ್ಯ ಜ್ಞಾನ ಅಗತ್ಯವಿದೆ.
ಆಗಿಹೋಗಿದ್ದನ್ನು ಕೆದಕಿ ಗಾಯ ಮಾಡಿ ಹುಣ್ಣು ಮಾಡಿಕೊಳ್ಳುವ ಬದಲು ಅದಕ್ಕೆ ನಮ್ಮ ಸಹಕಾರ ಎಷ್ಟಿತ್ತು ಯಾಕಿತ್ತು ಎಂಬ ಪ್ರಶ್ನೆ ಮಾಡಿಕೊಳ್ಳಲು  ನಮಗೆ ಸಮಯವಿಲ್ಲ ಎಂದಾಗಲೇ  ಪರರು ನಮ್ಮನ್ನು ಆಳೋದು.
ಇಲ್ಲಿ ಪರಕೀಯರಿಗೆ ಕೊಡುವ ಗೌರವ ಸ ಹಕಾರ ನಮ್ಮವರಿಗಿಲ್ಲ. ಎಂದರೆ ಹಣದಿಂದ ಪರರು ಕಾಣುವರು.ನಮ್ಮವರ  ಗುಣಜ್ಞಾನ ಕಾಣದೆ ಆಳುವವರು ನಮ್ಮವರೆನಿಸಿಕೊಂಡವರೆ. ಇದರಿಂದಾಗಿ ಮೂಲವೇ ಅರ್ಥ ಆಗದೆ ರೆಂಬೆಕೊಂಬೆಗಳನ್ನು ಹಿಡಿದು  ಜೋತಾಡಿದರೆ ಒಮ್ಮೆ ಕೆಳಗೆ  ಬಿದ್ದು ಹೋಗೋದು ಸಾಮಾನ್ಯಜ್ಞಾನ.ಇರೋವಾಗಲೇ ಮೂಲವನರಿತರೆ  ವಾಸ್ತವದಲ್ಲಿ ಎಷ್ಟು ಬೇಕೋ ಅಷ್ಟು ನಮ್ಮಲ್ಲಿದೆ.ಅದನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವೂ ಇದೆ. ಆದರೂ ಅದನ್ನು ಬಿಟ್ಟು ಹೊರಬಂದರೆ ಅಧೋಗತಿ.ಎಲ್ಲಾ ಋಣದ ಲೆಕ್ಕಾಚಾರ
ಋಣ ನಮ್ಮವರದ್ದೋ ಅನ್ಯರದ್ದೋ? ಶಿಕ್ಷಣವೇ ಅನ್ಯರದ್ದಾದರೆ  ನಮ್ಮ ಜ್ಞಾನ ಬೆಳೆಯುವುದೆ?
ಬದಲಾವಣೆ ಜಗದ ನಿಯಮ ಎಂದಾಗ ಸಾಮಾನ್ಯರಂತೆ ಬದುಕುವ ಕಲೆ ಇದ್ದರೆ ಇದ್ದಲ್ಲಿ ನಿಧಾನವಾಗಿ ಬದಲಾಗಬಹುದು.

Thursday, January 22, 2026

ಭಯದ ನಿವಾರಣೆ ಸಾಧ್ಯವೆ?

ಭಯ ಭಕ್ತಿ ಇರಬೇಕು .ಆದರೆ ಯಾವುದಕ್ಕೆ ಯಾರಲ್ಲಿ ಎನ್ನುವ ಅರಿವಿರಬೇಕು. ಅರಿವು ಎಂದರೆ ತಿಳುವಳಿಕೆ ಜ್ಞಾನ ಎಂದಾಗ  ಎಲ್ಲರಲ್ಲಿಯೂ ತಿಳುವಳಿಕೆಯಿದೆ. ಕೆಲವರಿಗೆ ಹೊರಜಗತ್ತಿನ ಅರಿವು ಹೆಚ್ಚಾದರೆ ಕೆಲವರಿಗೆ ಒಳಜಗತ್ತಿನ ಅರಿವಿರುತ್ತದೆ. ಇವೆರಡರ ನಡುವೆ ನಮ್ಮ ಜೀವನ ಸಾಗುತ್ತಿದೆ.
ಯಾವಾಗಿದರ ಅಂತರ ಬೆಳೆದು ಮಧ್ಯವರ್ತಿಗಳ ಅರಿವಿನ ರಾಜಕೀಯಕ್ಕೆ ಜೀವನ ಬಲಿಪಶುವಾಗುವುದೆನ್ನುವುದರ ಅರಿವಿರದು. ಹೀಗಾಗಿ ಭಯೋತ್ಪಾದನೆ  ಹೆಚ್ಚಿಸುವವರು ಹೆಚ್ಚಾಗಿ ಮಧ್ಯವರ್ತಿಗಳೇ ಆಗಿರುವರು.
ಮಗು ಜನ್ಮತ: ಉತ್ತಮ  ಗುಣ ಹೊಂದಿದ್ದರೂ ಅದನ್ನು ಬೆಳೆಸುವ ಪೋಷಕರಲ್ಲಿ ಅಂತಹ ಗುಣ ಬೆಳೆಸುವ ಅಥವಾ ಗುರುತಿಸುವ ಜ್ಞಾನವಿಲ್ಲವಾದರೆ ಮಕ್ಕಳಿಗೆ ಭೂತ ದೆವ್ವ ಗಳ ನೆಪದಲ್ಲಿ  ತಮ್ಮೆಡೆ ಸೆಳೆದುಕೊಂಡು  ಸ್ವತಂತ್ರ ಬುದ್ಧಿಯಿಂದ  ಬೆಳೆಯದಂತೆ ಮಾಡುವುದೇ ಹೆಚ್ಚು. ಕಷ್ಟ ನಷ್ಟ ಬಂದಾಗ  ಸಹನೆಯಿಂದ  ಧೈರ್ಯದಿಂದ ಮುಂದೆ ಹೋಗುವುದಕ್ಕೂ ಆಗದೆ  ಸುಮ್ಮನಿರಲೂ ಆಗದೆ ಹೊರಗಿನ ಜಗತ್ತಿನಲ್ಲಿ ಬೇಡುವ ಸ್ಥಿತಿ ಬರುತ್ತದೆಂದರೆ ಇಲ್ಲಿ  ಭಯ ಒಳಗೇ ಇದ್ದು  ಒಳಗಿನ  ಶಕ್ತಿಯನ್ನು ಕಾಣದಂತೆ  ಮಾಡುತ್ತದೆ. ಕಷ್ಟದಿಂದ  ಬಿಡುಗಡೆ ಪಡೆಯಲು ಹೊರಗೆ ಬಂದವರಿಗೆ ಹಿಂದಿರುಗಿ ಹೋಗದಂತೆ ಭಯಪಡಿಸುತ್ತದೆ. 
ಇಂದಿನ ಹೆಚ್ಚಿನ  ಯುವಪೀಳಿಗೆಗೆ ತಮ್ಮ ಭವಿಷ್ಯದ ಭಯ ಕಾಡುತ್ತದೆ. ಕೆಲಸ ಸಿಗುವುದೋ ಇಲ್ಲವೋ ಸಿಕ್ಕರೂ ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವಷ್ಟು  ಸಂಪಾದನೆ ಆಗಬಹುದೆ? ಆದರೂ  ಮುಂದೆ ‌ಮದುವೆಯ ನಂತರದಲ್ಲಿ ಸಂಸಾರ ನಡೆಸಲು ಸಾಧ್ಯವೆ? ಮಕ್ಕಳ ಖರ್ಚು ವೆಚ್ಚ ಎಲ್ಲಾ ಒಬ್ಬರ ದುಡಿಮೆಯಿಂದ ಕಷ್ಟ...ಹೀಗೇ  ಭವಿಷ್ಯವನ್ನು ಕೇವಲ ಭೌತಿಕದಲ್ಲಿದ್ದೇ ಚಿಂತನೆ ನಡೆಸುವುದರಿಂದ ಭಯ ಹೆಚ್ಚಾಗುತ್ತಾ ಹೋಗುತ್ತದೆ.ಹಾಗೇ ಸಮಸ್ಯೆಗಳೂ ಎದುರಾಗುತ್ತದೆ. ಹಿಂದೆ ಒಂದು ಕುಟುಂಬದಲ್ಲಿ ಹಲವು ಸದಸ್ಯರಿದ್ದರೂ  ಹೊಟ್ಟೆ ಬಟ್ಟೆಗೆ ಕೊರತೆಯಾಗದಂತೆ ದುಡಿದು ಜೀವನ‌ನಡೆಸುತ್ತಿದ್ದರು.ಈಗ ಒಂದೇ ಮಗುವನ್ನು ಸಾಕಿ ಸಲಹಲು ಹೊರಗಿನವರ ಸಹಕಾರದ ಜೊತೆಗೆ ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆದರೂ ಊಟಕ್ಕೆ ಸಮಯವಿಲ್ಲ ಬಟ್ಟೆಗೆ ಗತಿಯಿಲ್ಲ ಎಂದರೆ  ಸಾಲದ ಪ್ರಭಾವ.ಅಜ್ಞಾನದಲ್ಲಿ  ಹೊರಗಿನ ಜಗತ್ತಿಗೆ ದಾಸರಾದಷ್ಟೂ ಒಳಗಿನ ಜಗತ್ತಿನ ದಾಸರ ಪರಿಚಯವಾಗದೆ ಆಸೆ ಬೆಳೆಯುತ್ತದೆ. ಆಸೆಯೇ ದು:ಖಕ್ಕೆ ಕಾರಣ ಎನ್ನುವ ಬದಲು ಅತಿಆಸೆಯೇ  ದುರಾಸೆಯೇ ದು:ಖಕ್ಕೆ ಕಾರಣವೆನ್ನಬಹುದು.

ಇದಕ್ಕೆ ಬದಲಾಗಿ ನಮ್ಮ ಜೀವನದ ಗುರಿ ಏನು ಯಾಕೆ ಭೂಮಿಗೆ ಬಂದೆವು? ಏನು ಮಾಡಿದರೆ ನಮ್ಮ ಋಣ ತೀರುವುದು.ಯಾವುದು ಸತ್ಯ ಮಿಥ್ಯ? ಎಲ್ಲಿಂದ ಎಲ್ಲಿಗೆ ಹೋಗಬೇಕು? ದೈವತ್ವ ಎಂದರೇನು? ದೇವರಿರೋದೆಲ್ಲಿ? ಧರ್ಮ ಯಾವುದು? ಅಧರ್ಮ ಎಲ್ಲಿದೆ? ..ಈ ರೀತಿಯಲ್ಲಿ ಆಧ್ಯಾತ್ಮಿಕದ ಜಗತ್ತಿನೆಡೆಗೆ ನಡೆದವರ ಭಯ ಕಡಿಮೆಯಾಗಿ ಗುರುಹಿರಿಯರಲ್ಲಿ ಭಯ ಭಕ್ತಿ ಯೋಗದಿಂದ ಬೆಳೆದಾಗ  ಒಳ ಮನಸ್ಸು ಜಾಗೃತವಾಗುತ್ತಾ  ಜೀವಭಯ ಬಿಟ್ಟು ಧರ್ಮ ಸತ್ಯದ ರಕ್ಷಣೆಗಾಗಿ  ಮುನ್ನುಗ್ಗುವ ಮಹಾತ್ಮರಾಗುವರು.
ಒಟ್ಟಿನಲ್ಲಿ ಜೀವನದಲ್ಲಿ ಹೋರಾಟ ಇರುತ್ತದೆ. ಹೋರಾಡಲು ದೈರ್ಯ ಅಗತ್ಯವಿದೆ. ಆದರೆ ಅನಾವಶ್ಯಕ ಕೆಳಮಟ್ಟದ ಆಸೆ ತೀರಿಸಿಕೊಳ್ಳುವ ಹೆಣ್ಣು ಹೊನ್ನು ಮಣ್ಣನ್ನು ವಶಪಡಿಸಿಕೊಳ್ಳಲು‌  ನಡೆಸುವ ಹೋರಾಟದಿಂದ  ಪಾರಮಾರ್ಥಿಕ ಸುಖ ಸಿಗದೆ ಜೀವ ಹೋಗುತ್ತದೆ. ಅಂತಹ ಹೋರಾಟ ಕಣ್ಣಿಗೆ ಕಾಣುವುದರಿಂದ ಜನಬಲ ಹಣಬಲ ಅಧಿಕಾರಬಲ ಎಲ್ಲಾ ಸಿಗಬಹುದು ಆದರೆ ಜ್ಞಾನದ ಬಲ ಇಲ್ಲದೆ ಧೈರ್ಯದಿಂದ  ಹೋರಾಟ ನಡೆಸಿದರೂ ಅಧರ್ಮ  ಆಗಿದ್ದರೆ  ವ್ಯರ್ಥ ಪ್ರಯತ್ನವಾಗುತ್ತದೆ.
ಎಲ್ಲರೂ ಒಮ್ಮೆ ಸಾಯೋರೇ ಎಲ್ಲರಲ್ಲಿಯೂ ದೈರ್ಯ ಶೌರ್ಯ ಇದ್ದರೂ ಅದನ್ನು ಯಾವುದಕ್ಕೆ ಬಳಸಬೇಕೆಂಬ ಸುಜ್ಞಾನ ಎಲ್ಲರಲ್ಲಿಯೂ ಇರದು.‌ಹೀಗಾಗಿ ಅಜ್ಞಾನದಲ್ಲಿ ಧೈರ್ಯದಿಂದ  ಹೋರಾಟ ಹಾರಾಟ‌ ಮಾರಾಟ ಮಾಡಿದರೂ  ಕಷ್ಟನಷ್ಟ ತಪ್ಪಿದ್ದಲ್ಲ.

ನಮ್ಮಲ್ಲಿ ಎರಡೂ ರೀತಿಯ ಶಕ್ತಿಗಳಿವೆ. ಒಂದು ದೈವಶಕ್ತಿ ಇನ್ನೊಂದು ಅಸುರಿ ಶಕ್ತಿ.‌ಅಸುರಿಶಕ್ತಿಯ ವಿರುದ್ದ ದೈವೀ ಶಕ್ತಿ ಹೋರಾಡುವಾಗ  ಅಸುರರ ದೈಹಿಕಬಲ ಹೆಚ್ಚಬಹುದು ಸುರರ ಜ್ಞಾನಬಲ ಹೆಚ್ಚಬಹುದು. ಗೆಲ್ಲುವುದು ಜ್ಞಾನಬಲ.
ಕಾರಣವಿಷ್ಟೆ  ಶಾಶ್ವತ ವಾದ ಜ್ಞಾನದಿಂದ ಆತ್ಮಬಲ ಹೆಚ್ಚುವುದು. ಅಜ್ಞಾನದಿಂದ ಕುಸಿಯುತ್ತದೆ. ಹಿಂದಿನ ಯುದ್ದಗಳಲ್ಲಿ  ಇದನ್ನು  ನಾವು ತಿಳಿಯುತ್ತೇವೆ. 
ವಾಸ್ತವದಲ್ಲಿ ನಮ್ಮ ದೇಶದ  ಪ್ರಮುಖ ಪಕ್ಷಗಳು ಒಬ್ಬರಿಗೊಬ್ಬರು ವಿರುದ್ದದ ಹೇಳಿಕೆಗಳನ್ನು ಕೊಟ್ಟುಕೊಂಡು ಜನರಲ್ಲಿಯ  ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಮಾಡುತ್ತಿರುವರೋ ಅಥವಾ ಹೆಚ್ಚಿಸುವ‌ಕೆಲಸ ಮಾಡುತ್ತಿರುವರೋ ಎನ್ನುವುದೂ ನಮ್ಮ ಜ್ಞಾನದ ಮೇಲೇ ನಿಂತಿದೆ.ಇಲ್ಲಿ ರಾಜಕೀಯ ಯಾವತ್ತೂ ಹೊರಗೆ ಕಾಣುತ್ತದೆ.
ಜನರನ್ನು ಭಯಪಡಿಸಿ ಆಳೋದೇ ಬೇರೆ, ಆತ್ಮವಿಶ್ವಾಸ ಹೆಚ್ಚಿಸಿ ಸ್ವಾವಲಂಬನೆ ಕಡೆಗೆ ನಡೆಸೋದೇ ಬೇರೆ.ಆತ್ಮನಿರ್ಭರ ಎಂದರೆ ನಮ್ಮ ಆತ್ಮವಿಶ್ವಾಸ ದಿಂದ ಭಯವಿಲ್ಲದೆ  ದುಡಿದು ಸ್ವತಂತ್ರ ಜೀವನ ನಡೆಸೋದಾದರೆ ನಮ್ಮಲ್ಲಿ  ಯಾರ ಶಿಕ್ಷಣವಿದೆ? ಯಾರ ಕೈಕೆಳಗೆ ದುಡಿಯುತ್ತಿರುವುದು? ದೇಶ ಯಾರ ಕೈಯಲ್ಲಿದೆ? ನಮ್ಮನೆ ಮನಸ್ಸು  ಯಾರಿಂದ ನಡೆದಿದೆ? ಯಾವ ಕಡೆ ನಮ್ಮ ನಡೆ ನುಡಿಯಿದೆ? ಹೀಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಷ್ಟು ಸಮಯ ನಮಗಿದೆಯೆ? ಇದ್ದರೆ ಉತ್ತರವು ನಮ್ಮೊಳಗೇ ಸಿಗುತ್ತದೆ. ನಾವೀಗ ಭಯಪಡುತ್ತಿರುವುದು ನಮ್ಮವರಿಗೋ ಅಥವಾ ಹೊರಗಿನವರಿಗೋ?
ನಮ್ಮವರಿಂದಲೇ  ಭಯ ಎಂದರೆ ಯಾವ. ಕಾರಣಕ್ಕಾಗಿ ಭಯ ಸೃಷ್ಟಿ ಮಾಡಲಾಗಿದೆ? ದೇವರು ಧರ್ಮ. ಜಾತಿ ಪಕ್ಷಗಳ ರಾಜಕೀಯತೆಯಿಂದ  ನಮ್ಮ ಸ್ವಂತ ಬುದ್ದಿ ಜ್ಞಾನ ಬೆಳೆಯಿತೆ?
ಇಲ್ಲವೆ? ಹಾಗಾದರೆ ಭಯದಿಂದ ನಮಗೆ ನಾವೇ ಮೋಸ ಹೋಗಿರುವುದು ಸತ್ಯ.ಸತ್ಯ ಒಂದೇ ಇರೋದು.ಆ ಸತ್ಯದಿಂದ ದೂರವಾಗಿರುವ‌ಜೀವಾತ್ಮನಿಗೆ ಹಿಂದಿರುಗಲು ಭಯ ಎಂದರೆ  ಅಜ್ಞಾನವಾಗುತ್ತದೆ. ಆಗೋದನ್ನು ತಡೆಯಲಾಗಿಲ್ಲ, ಆಗಿದ್ದೆಲ್ಲಾ ಒಳ್ಳೆಯದೇ  ಎಂದಾಗ  ಭಯ ಬಿಟ್ಟು ಒಳ್ಳೆಯ ಕಾರ್ಯಕ್ಕೆ  ಒಗ್ಗಟ್ಟಿನಿಂದ ಮುಂದೆ ನಡೆದು ಸಹಕರಿಸುವಷ್ಟು ಧೈರ್ಯ  ಬೆಳೆಯಬೇಕಿದೆ.
ಸತ್ಯ ಬಿಟ್ಟು ಧರ್ಮ ಬಿಟ್ಟು  ದೂರ ಹೋಗೋದು ಸುಲಭ.ಆದರೆ‌ಹಿಂದಿರುಗೋದು‌ ಬಹಳ ಕಷ್ಟ. ಸುಲಭವಾದಕ್ಕೆ ಸಹಕರಿಸಿ ಕಷ್ಟಕ್ಕೆ ಸಹಕರಿಸದಿದ್ದರೆ  ಅದೇ ಮುಂದೆ ಇನ್ನಷ್ಟು ಕಷ್ಟ ನಷ್ಟಕ್ಕೆ ಕಾರಣವಾಗುತ್ತದೆ. 
ಕಲಿಗಾಲದ ಪ್ರಭಾವದಿಂದಾಗಿ ಸತ್ಯವನ್ನು ಸುಳ್ಳೆಂದು ಅದರ ಸುಳ್ಳನ್ನು   ಸತ್ಯವೆಂದು ಸಾಭೀತು ಮಾಡಲು ಧೈರ್ಯದಿಂದ ಮುಂದೆ ಹೋದರು. ಹಿಂದೆ ಇದ್ದವರೂ ಅವರನ್ನು ಅನುಸರಿಸಿ ಕೊನೆಯಲ್ಲಿ  ಕಷ್ಟ ನಷ್ಟವಾದಾಗ ಹಿಂದಿರುಗಲಾಗದೆ  ಇದೇ ಸತ್ಯ ಎಂದು ವಾದ ಮಾಡಿ ಸೋತವರು  ಇನ್ನೊಬ್ಬರ ನ್ನು ಭಯಪಡಿಸಿ  ಆಳಲು ಹೋದರೆ  ಮಂಗ ತಾನು ಕೆಟ್ಟು ವನವೆಲ್ಲಾ ಕೆಡಿಸಿದಂತೆ ಎಂದಾಗುತ್ತದೆ.
ಎಷ್ಟಾದರೂ ಮಂಗನಿಂದಲೇ ‌ ಮಾನವನಾಗಿರುವಾಗ  ನೆಗೆಯುತ್ತಾ ಹೋಗುವುದು ಸಹಜ. ಆ ನಗೆತದಿಂದ  ಹೊಟ್ಟೆ ತುಂಬಿಸಿಕೊಳ್ಳಬಹುದು   ಅದರೊಂದಿಗೆ ರೋಗವೂ ಇರುವ ವಿಷಯಜ್ಞಾನವನರಿತರೆ  ನಿಜವಾದ ಭಕ್ತಿಯೋಗವಾಗುತ್ತದೆ.
ವಾನರ ಸೇನೆಯ ಸಹಾಯದಿಂದ ಶ್ರೀ ರಾಮಚಂದ್ರನು  ಗೆದ್ದನು  ಎಂದರೆ ವಾನರರ  ಸಂಘಟನೆಯು ಧರ್ಮದ ಪರವಾಗಿತ್ತು. ಹೀಗಾಗಿ ಭಯವಿಲ್ಲದೆ  ಅಸುರ ಶಕ್ತಿಯ ವಿರುದ್ದ ಹೋರಾಡಿ ಗೆದ್ದರು. ಈಗಿನ ಸೇವಕರು ಭ್ರಷ್ಟರ ಅಧೀನದಲ್ಲಿದ್ದು  ಭಯದಿಂದ ಜೀವನ‌ ನಡೆಸೋ ಸ್ಥಿತಿಗೆ ಬರಲು ಕಾರಣ ಅಧರ್ಮಕ್ಕೆ ನೀಡಿದ ಸಹಕಾರ. ಸತ್ಯ ಕಠೋರವಾಗಲು ಕಾರಣವೇ ಅದನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಲಕ್ಷ  ಹಣನುಂಗಿರುವ ಭ್ರಷ್ಟಾಚಾರವಾಗಿದೆ. ಭ್ರಷ್ಟ ದುಷ್ಟರನ್ನು    ಅನುಸರಿಸಿದರೆ  ಭಯೋತ್ಪಾದಕರೂ ಬೆಳೆಯುವರು. 
ಏನನ್ನು ಬೆಳೆಸುವೆವೋ ,ಹರಡುವೆವೋ, ಹಂಚುವೆವೋ, ನೋಡಿ ಕೇಳಿ ಹೇಳುವೆವೋ ಅದೇ ಹೊರಗೆ ಒಳಗೆ ತುಂಬಿ ಆಳೋದು. 
ಸಾಧನೆ  ಅಂತರಂಗದ ಶುದ್ದಿಯೆಡೆಗೆ‌ ನಡೆದರೆ ಭಯವಿರದು.
ಬಹಿರಂಗದ ಶುದ್ದಿ  ಭಯದಿಂದ ಮಾಡಲಾಗದು.

Friday, December 19, 2025

ಎಳ್ಳಮಾವಾಸ್ಯೆ

*✒️ಇಂದಿನ ನುಡಿ*

*ಈ ದಕ್ಷಿಣಾಯನ ಮಾರ್ಗಶಿರ ಮಾಸದ ಈ ದಿನ ಎಳ್ಳಮಾವಾಸ್ಯೆಯ ದಿನ.ಋಣ ತೀರಿಸುವ ದಿನ.ದೇವ ಋಣ,ಪಿತೃ ಋಣ,ಋಷಿ ಋಣ,ಮನುಷ್ಯ ಋಣ,ಭೂತದೈವಗಳಪ್ರಾಣಿ ಪಕ್ಷಿ ಪ್ರಕೃತಿಯ ಋಣ ನಮ್ಮ ಮೇಲಿದೆ.ಎಲ್ಲವನ್ನೂ ಉಪಯೋಗಿಸಿಕೊಂಡು ಈ ಭೂಮಿ ಮೇಲೆ ಜೀವಿಸುವವರು ನಾವು.ಬದುಕಿದರೆ ಸಾಕೇ?ಸಹಕಾರ ಪಡೆದದ್ದಕ್ಕೆ ಕೃತಘ್ನರಾಗದೆ,ಉಪಕಾರಕ್ಕೆ ಪ್ರತ್ಯುಪಕಾರ, ಕೃತಜ್ಞತಾ ಸಮರ್ಪಣೆ ಮೂಲಕ ಸ್ಮರಿಸುವ ಕೆಲಸವಾಗಬೇಕು.ರೈತಾಪಿ ವರ್ಗದವರಿಗೆ ಎಳ್ಳು,ನೆಲಕಡಲೆ ಫಸಲು ಮನೆಯಂಗಳಕೆ ಬಂದ ದಿನಗಳಿವು.ಭೂಮಿ ತಾಯಿಗೆ ಕೃತಜ್ಞತೆ ಸಮರ್ಪಿಸುವರು.ಎಳ್ಳು ಬೆಲ್ಲವನ್ನು ಬೆರೆಸಿ ಹೊಲಕ್ಕೆ ಚೆಲ್ಲುವರು(ಚರಗ ಚೆಲ್ಲುವುದೆನ್ನುವರು)ಮಣ್ಣನ್ನು ಮೃದುವಾಗಿಸುವ ಎರೆಹುಳಗಳು ಹೊಲದ ಮಣ್ಣಲ್ಲಿರುವುದು.ಹಾಗೆಯೇ ಬೆಳೆ ನಾಶ ಮಾಡುವ ಕಾಯಿಕೊರಕ ಹುಳಗಳನ್ನು  ಎಳ್ಳು ಬೆಲ್ಲದೊಂದಿಗೆ ತಿನ್ನುವ ಕೆಲಸವನ್ನು ಪಕ್ಷಿಸಂಕುಲ ಮಾಡುವುದು.ಹಬ್ಬ,ಆಚರಣೆಗಳ ಹಿಂದೆ ಇಂತಹ ವೈಜ್ಞಾನಿಕ ಕಾರಣಗಳು ಸಹ ಇದೆ.ನಮ್ಮ ಹಿರಿಯರು ಬುದ್ಧಿವಂತರು.ಐದು ಪಾಂಡವರ ಕಲ್ಲುಗಳನ್ನು ಇಟ್ಟು ,ತಾವು ತಂದ ವಿಶೇಷ ಖಾದ್ಯಗಳನ್ನು ಭೂಮಿತಾಯಿ ಸಹಿತ ನೈವೇದ್ಯ ಮಾಡಿ,ಬನ್ನಿ ಗಿಡ ನೆಟ್ಟು ಜೊತೆಗೆ ಪೂಜಿಸುವರು,ಮುಂದಿನ ದಿನಗಳಲ್ಲಿ ಅಧಿಕ ಫಸಲನ್ನು ನೀಡೆಂದು,ಶನಿದೋಷವಿದ್ದಲ್ಲಿ ಪರಿಹರಿಸೆಂದು ಪ್ರಾರ್ಥಿಸುತ್ತಾ ನಿವೇದಿಸಿಕೊಳ್ಳುವರು. ಈ ಮೂಲಕ ಕೃತಜ್ಞತೆ ಸಲ್ಲಿಸುವರು.ತಯಾರಿಸಿದ ವಿಶೇಷ ಅಡುಗೆಯನ್ನು ತಮ್ಮ ಎತ್ತಿನ ಬಂಡಿಯಲ್ಲಿಟ್ಟು,ಎತ್ತುಗಳನ್ನು ,ಗಾಡಿಯನ್ನು ಸಿಂಗರಿಸಿ,ಮನೆಮಂದಿಯೆಲ್ಲ ಚರಗ ಚೆಲ್ಲಿ ಪೂಜೆಯಾದ ಮೇಲೆ ಸಹಭೋಜನವನ್ನು ಪ್ರಸಾದರೂಪವಾಗಿ ಮಾಡುವರು.ಹೊಲ ಭೂಮಿ ರೈತರ ಬಾಂಧವ್ಯದ ಬೆಸುಗೆಯದು. ಎಲ್ಲೆಲ್ಲೋ ಇರುವ ಮನೆಯ ಸದಸ್ಯರೆಲ್ಲರೂ ಹಬ್ಬದ ಸಂದರ್ಭ ಒಟ್ಟು ಸೇರುವರು.ಹಾಗೆಯೇ ಇಂದು ಪಿತೃ ದೇವತೆಗಳ ಪ್ರೀತ್ಯರ್ಥ ಯಾಂತ್ರಿಕತೆ,ತೋರಿಕೆಯನ್ನು ಬಿಟ್ಟು ಶ್ರದ್ಧಾಭಕ್ತಿಯಿಂದ ಶ್ರಾದ್ಧ,ತಿಲತರ್ಪಣ,ಸತ್ಪಾತ್ರರಿಗೆ ಅನ್ನದಾನ,ಎಳ್ಳುದಾನ ಕೈಂಕರ್ಯಗಳನ್ನು ಮಾಡಬೇಕು.ಸಕಲ ವಿಧದ ಮಂಗಲವು ಉಂಟಾಗುವುದೆಂಬ ನಂಬಿಕೆ.ಸಮುದ್ರ,ನದಿ ಸ್ನಾನವನ್ನೂ ಮಾಡುವರು.ಸಮುದ್ರ ಸ್ನಾನವೆಂಬುದು ಚರ್ಮರೋಗಗಳ ನಿವಾರಣೆಗೂ ಕಾರಣವಾಗಬಹುದು.ಪಿತೃಗಳು ಸಂತುಷ್ಟರಾಗಿ ಹರಸುವರೆಂಬ ವಿಶ್ವಾಸ ಹಿರಿಯರ ಕಾಲದಿಂದಲೂ ಇದೆ.ಪೌರಾಣಿಕವಾಗಿ ನೋಡಿದರೆ ಮಹಾಭಾರತ ದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಮಡಿದವರಿಗೆಲ್ಲ ಈ ಶುಭದಿನದಂದು ತರ್ಪಣ ನೀಡಿ,ಅನ್ನದಾನ ಮಾಡಿದ್ದರಂತೆ.ಕುಟುಂಬದಲ್ಲಿ ಅಳಿದ ಪಿತೃಗಳನ್ನು ಸಂತೃಪ್ತಿಗೊಳಿಸುವ ಪದ್ಧತಿಯಿದೆ.ಇನ್ನೊಂದು ರೀತಿಯಲ್ಲಿ ತಂದೆ ಜಮದಗ್ನಿಯ ಆಣತಿಯಂತೆ ಹೆತ್ತಮ್ಮ ರೇಣುಕೆಯ ಶಿರ ಕತ್ತರಿಸಿದವ ಪರಶುಧರ ಭಾರ್ಗವ ರಾಮ.ಕೊಡಲಿಯ ಬಾಯಿಗಂಟಿದ ರಕ್ತ ಯಾವ ನದಿಯಲ್ಲಿ ತೊಳೆದರೂ ಒಂದು ಬಿಂದು ಉಳಿಯುತ್ತಿತ್ತಂತೆ.ಕೊನೆಗೆ ತುಂಗಾನದಿಯಲ್ಲಿ ಮುಳುಗಿಸಿದಾಗ ಕಲೆ ಹೋಯಿತಂತೆ.ಹಾಗಾಗಿ ಅದೇ ಸ್ಥಳ ಶಿವಮೊಗ್ಗ ಸಮೀಪದ 'ತೀರ್ಥಹಳ್ಳಿ'ಯೆಂದು ಪ್ರಸಿದ್ಧಿಯಾಯಿತೆಂದೂ,ಅಲ್ಲಿ ನದಿ ಸ್ನಾನ ಮಾಡಿ ಪುನೀತರಾಗುತ್ತಾರೆಂದೂ ಉಲ್ಲೇಖವಿದೆ.ಹೆತ್ತವರ ಋಣ ತೀರಿಸಲಾಗದಂತೆ.ಈ ರೀತಿಯಲ್ಲಾದರೂ ಸ್ವಲ್ಪಾಂಶ ತೀರಿಸಿ ಪುಣ್ಯ ಕಟ್ಟಿಕೊಳ್ಳೋಣ.*
.🤝🙏*(ಸಂಗ್ರಹ)*
೧೯-೧೨-೨೫
*✍️ರತ್ನಾ ಕೆ ಭಟ್*

ಜಗದಾದಿಜ: ಜಗತ್+ಆದಿ+ ಜ

ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ | ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ॥೧೬॥
ಇಂದಿನ ನಾಮ -

೧೪೭. ಜಗದಾದಿಜಃ ಜಗತ್ತಿನಲ್ಲಿ ಮೊತ್ತಮೊದಲು ಬಂದವನು.

ವಿವರಣೆ : ಜಗತ್+ಆದಿ+ಜ - ಹೀಗೆ ಮೂರು ಶಬ್ದಗಳು ಸೇರಿ ಒಂದು ನಾಮ ಆದದ್ದು. ಈ ಲೋಕಕ್ಕೆ ಮೊದಲು ಬಂದವನು ಎಂದರ್ಥ .ಶೇಷನ ಮೇಲೆಯೋ, ವಟಪತ್ರದ ಮೇಲೆಯೋ ರಾತ್ರಿಯಲ್ಲಿ ಅಂದರೆ ಪ್ರಲಯಕಾಲದಲ್ಲಿ ಮಲಗಿದವನು ನೀನು. ಬೆಳಗಾಗುತ್ತ ಬಂತು. ಸೃಷ್ಟಿ ಮಾಡಬೇಕೆಂದು ತೋರಿತು. ಎಲ್ಲರನ್ನು ಎಬ್ಬಿಸೋಣ ಅಂತ ತೋರಿತು. ಮಲಗಿದವರನ್ನು ಎಬ್ಬಿಸುವ ಕೆಲಸ ದೇವರದ್ದೇ. ಅದಕ್ಕಾಗಿಯೇ ಬೆಳಿಗ್ಗೆ ೫ ಗಂಟೆಗೆ ಸುಪ್ರಭಾತ ಹಾಕುವುದು. ಮಲಗಿದವರೆಲ್ಲ ಏಳಲಿ ಎಂದು. ಮೊದಲು ಕೃಷ್ಣ ದೇವರು ಏಳುವುದು. ಅದರಿಂದಾಗಿ ಅಕ್ಕಪಕ್ಕದವರೆಲ್ಲ ಏಳಲಿಕ್ಕೆ ಪ್ರಾರಂಭಿಸುವರು.

ಹೀಗೆ ಸೃಷ್ಟಿಯ ಸುಪ್ರಭಾತದಲ್ಲಿ ಎಲ್ಲರನ್ನೂ ಎಬ್ಬಿಸುವುದಕ್ಕಾಗಿ ದೇವರು ಮೊದಲು ತಾನು ಎದ್ದು ಬಂದ. ಹಾಗೆ ಎದ್ದು ಬಂದ ರೂಪವೇ "ಪುರುಷ'. ನಾರಾಯಣರೂಪದಿಂದ ಮಲಗಿದ ಪರಮಾತ್ಮ ಪುರುಷರೂಪದಿಂದ ಎದ್ದು ಬರುವನು. ಜಗತ್ತಿನ ಸೃಷ್ಟಿಗೆ ಅಡಿ ಇಡುವಾಗ ಮೊದಲು ಬರುವವನು ಭಗವಂತ. ಎಲ್ಲರಿಗಿಂತ ಹಿರಿಯ, ಮೊದಲಿಗ ಎಂಬುದು ಒಟ್ಟು ಅಭಿಪ್ರಾಯ. ಚತುರ್ಮುಖನಿಗಿಂತಲೂ ಮೊದಲು ಬಂದವನು. ಆದುದರಿಂದ ದೇವರು ಯಾರಿಂದ ಬಂದ? ಎಂಬ ಪ್ರಶ್ನೆಗೆ ಅವಕಾಶ ಇಲ್ಲ. ಯಾರೂ ಇಲ್ಲದಿದ್ದಾಗ ತನ್ನಿಂದಲೇ ಹೊರಬಂದವನು ಅವನು.

ಹರಿಹರರಲ್ಲಿ ಬೇಧವಿಲ್ಲ ಎನ್ನುವುದು  ಹರಿ ಬೇರೆ ಹರ ಬೇರೆ ಎನ್ನುವುದು. ಬ್ರಹ್ಮಾಂಡದ ಎಲ್ಲಾ ಆಗುಹೋಗುಗಳಿಗೆ ಪರಮಾತ್ಮನೇ ಕಾರಣವೆನ್ನುವುದು  ಎಲ್ಲದ್ದಕ್ಕೂ ನಾನೇ ಕಾರಣವೆನ್ನುವುದು, ನಾನೇ  ಎಲ್ಲರನ್ನೂ ಆಳುವುದು   ಎನ್ನುವ ಅಹಂಕಾರ  ನಾನೆಂಬುದಿಲ್ಲ ಎನ್ನುವ ನಿರಹಂಕಾರ
ಇವೆಲ್ಲವೂ ಪರಮಾತ್ಮನೇ ಶ್ರೇಷ್ಠ ಎನ್ನುವ ಸತ್ಯದೆಡೆಗೆ ನಡೆದಿದೆಯೆ ಅಥವಾ ನಾನೇ ಸತ್ಯ ಎನ್ನುವ ಕಡೆಗಿದೆಯೆ?
ಇಲ್ಲಿ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹಲವು. ಆದರೆ ನಾನಿಲ್ಲ ದೇವರೆ ಎಲ್ಲಾ ಎನ್ನುವ ಸತ್ಯ ಒಂದೇ. ಹಾಗಾಗಿ ಹಲವರಿಗೆ ಒಳಗಿರುವ ಸತ್ಯದ ಅರಿವಾಗದೆ ಹೊರಗಿನ ಸತ್ಯವೇ ಕಣ್ಣಿಗೆ ಕಾಣುತ್ತಾ ಆಗಿ ಹೋಗಿದ್ದನ್ನು ಕೆದಕಿ ಆಗಬಾರದ್ದನ್ನು ಸ್ವಾಗತಿಸುವ  ಮಟ್ಟಿಗೆ ಅಜ್ಞಾನ ಆವರಿಸಿದೆ. 
ಜಗತ್ತಿನಲ್ಲಿ ಮೊಟ್ಟ ಮೊದಲು ಬಂದವನು ಪರಮಾತ್ಮ ಎಂದಾಗ  ನಾವ್ಯಾರು? ಅವನ ಪ್ರತಿಬಿಂಬ ಎಂದಾಗ  ನನಗಿಂತ ಮೊದಲು ಬಂದವರ ಬಗ್ಗೆ ಅರಿವಿರೋದು ಅಗತ್ಯವಿದೆ. ‌ಕೇವಲ ರಾಜಕೀಯ ದಲ್ಲಿ ಮೈ ಮರೆತರೆ  ಮೂಲ ಸತ್ಯ ಅರಿವಾಗದು. ಹೀಗಾಗಿ ತನ್ನ ತಾನರಿಯದೆ  ಅನ್ಯರನ್ನು  ಒಲಿಸಿಕೊಂಡು ತನ್ನವರನ್ನೇ  ದೂರ ಮಾಡಿಕೊಂಡವರಿಗೆ  ಪರಮಾತ್ಮ ಅರ್ಥ ವಾಗದೆ ಅಂತರ ಬೆಳೆಯಿತು. ಆ ಅಂತರವೇ ಅವಾಂತರ ಸೃಷ್ಟಿ ಮಾಡುತ್ತಾ ಮೂಲ ಬ್ರಹ್ಮನನ್ನು  ಅಪಾರ್ಥ  ಮಾಡಿಕೊಂಡು ಆಳಲು ಸಹಕರಿಸಿತು. ಸಹಕಾರದ ಬಲವೇ  ಅಹಂಕಾರ ಕ್ಕೆ ದಾರಿ ಆಯಿತು.ಆ ಅಹಂಕಾರ ದಿಂದ ಸ್ವಾರ್ಥ  ಸೇರಿಕೊಂಡು ಸ್ವತಂತ್ರ ಜ್ಞಾನ ಮರೆಯಾಯಿತು. ಮರೆಯಾದವರು  ಮತ್ತೆ ಜನ್ಮ ಪಡೆದರೂ  ಗುರುತಿಸುವ. ಜ್ಞಾನವಿಲ್ಲದೆ ಅಜ್ಞಾನ ಬೆಳೆಯಿತು. ಅಜ್ಞಾನ ಎಂದರೆ ಅಸತ್ಯದ ತಿಳುವಳಿಕೆಯಾಗಿದೆ.
ಯಾವುದು ಸತ್ಯ? ಕಣ್ಣಿಗೆ ಕಾಣೋದೆಲ್ಲಾ ಸತ್ಯವೇ? ಸತ್ಯವಿದ್ದರೂ ತಾತ್ಕಾಲಿಕ ವಷ್ಟೆ.ಶಾಶ್ವತವಾಗಿರುವ ಯಾವುದಕ್ಕೂ ಅಂಟಿಕೊಳ್ಳದೆ ಸ್ವತಂತ್ರ ವಾಗಿದ್ದು ಜೀವಕೋಟಿಗಳ ಒಳಗಿರುವ ಆ ಮೂಲ ಪುರುಷ ಪರಮಾತ್ಮನೇ ಮೊಟ್ಟಮೊದಲು ಬಂದವನು.
ಜಗದಾದಿಜ:
ಪರಮಾತ್ಮನ ಒಂದೊಂದು ನಾಮವೂ ಅದ್ವೈತ ಸತ್ಯವನ್ನು ತಿಳಿಸುತ್ತದೆ. ‌ಆದರೆ ಅದು ಕಣ್ಣಿಗೆ ಕಾಣದು ಅನುಭವಕ್ಕೆ ಬರೋದೂ ಕಷ್ಟವಾದ್ದರಿಂದ ಮಾಯೆಯ ವಶದಲ್ಲಿ ಮನುಕುಲ  ಭೂಮಿಯನ್ನು ತನ್ನ ವಶದಲ್ಲಿ ಪಡೆಯಲು ಹೆಣವಾಗುತ್ತಿದ್ದಾನೆಂದರೆ ಭೂಮಿ ಪರಮಾತ್ಮನ ವಶವಿರೋವಾಗ ಹುಲುಮಾನವನಿಗೆ ಸಿಗುವಳೆ?
ಹೃದಯದ ಚಿಕಿತ್ಸೆ ಗೆ ಕೊಡುವ ಹಣವನ್ನು ಹೃದಯವಂತಿಕೆ ಬೆಳೆಸೋ ಶಿಕ್ಷಣಕ್ಕೆ ನೀಡಿದ್ದರೆ  ಭೂಮಿಯ ಋಣ ತೀರಿಸುವ ಸೇವಕನಾಗಿ ಪರಮಾತ್ಮನೆಡೆಗೆ ಸಾಗಬಹುದಿತ್ತು. 
ಕಲಿಕೆಯೇ ಋಣದೆಡೆಗೆ ಸಾಗಿರುವಾಗ  ಆ ಭಾರಹೊತ್ತವನಿಗೆ ಮೇಲಿರುವ  ಮೂಲ ಪುರುಷ ಅರ್ಥ ವಾಗೋದಿಲ್ಲ. 
ಕಾಲುಬುಡ ನೋಡದೆ ಮೇಲಕ್ಕೆ ನೋಡುತ್ತಾ ಓಡಿದರೆ ಎಡವೋದು ಸಹಜ. ಭೂಮಿಯ ಸತ್ಯ ಸತ್ವ ತತ್ವ ಬಿಟ್ಟು ಆಕಾಶದೆತ್ತರ ಹಾರುವ ವಿಜ್ಞಾನದಿಂದ ಆತ್ಮಕ್ಕೆ ತೃಪ್ತಿ ಸಿಗದು.
ಇಷ್ಟೇ ಜೀವನದ ಸತ್ಯ.ಇದನ್ನು  ನಾವೇ ಒಳಗಿದ್ದು ತಿಳಿದು ನಡೆಯಬೇಕಿದೆ. ಹೊರಗೆ ಹೋದರೆ ಅತಂತ್ರ ಜೀವನದಲ್ಲಿ  ಹಿಂದೆ ಬರಲೂ ಕಷ್ಟ ಮುಂದೆ ಹೋದರೂ ನಷ್ಟ.

Thursday, December 18, 2025

ದೇವರಿಗೆ ನಿದ್ರೆ ಅಗತ್ಯವೆ?

ದೇವರು ಶ್ರೀಮಂತನೆ ಬಡವನೆ?
ಶ್ರೀಮಂತನಾದರೆ ಬಡವರಿಗೆ ಸಹಕರಿಸುವನು.ಬಡವನಾದರೆ ಶ್ರೀಮಂತನಿಗೆ ನಿದ್ದೆ ಬಿಟ್ಟು ಸಹಕರಿಸುವನು.
ಎಂತಹ ವಿಪರ್ಯಾಸ ಶ್ರೀಮಂತರು ದೇವರನ್ನು ನೋಡಲು ಬರುವರೋ ಅಥವಾ ದೇವರೇ ಶ್ರೀಮಂತರನ್ನು ರಾತ್ರಿ ಕರೆಸಿಕೊಂಡು  ನೋಡುವನೋ ಒಟ್ಟಿನಲ್ಲಿ ಹಣ ಇಬ್ಬರಿಗೂ ಅಗತ್ಯವಿದೆ. ಹಣವಿದ್ದರಷ್ಟೆ ದೇವಸ್ಥಾನ ಅದಕ್ಕೆ  ಶರಣರು ಹೇಳಿರುವುದು ಉಳ್ಳವರು ಶಿವಾಲಯವ ಕಟ್ಟುವರು ನಾನೇನು‌ಮಾಡಲಿ ಬಡವನಯ್ಯ.
ಈಗಿನ‌ಕಾಲದಲ್ಲಿ ಪರಮಾತ್ಮನಿಗೆ ಶರಣಾಗದಿದ್ದರೂ ಸರಿ ಪರಕೀಯರಿಗೆ ಶರಣಾದರೆ ಹಣದ ಹೊಳೆ ಹರಿಯುವುದೆನ್ನುವವರು ದೇವಸ್ಥಾನ ಕಟ್ಟುತ್ತಿರೋದು  ದೈವಶಕ್ತಿ ಕ್ಷೀಣಿಸಲು ಕಾರಣವಾಗುತ್ತಿದೆ. 
ಜನಮರುಳೋ ಜಾತ್ರೆಯೋ ಎನ್ನುವುದು ಸರಿಯಾಗಿದೆ.
ಕಾಯುವ ದೇವರಿಗೆ‌ನಿದ್ರೆ ಬರುವುದೆ? ಬಂದರೆ ಕಾಯೋರು ಯಾರು?
ವಿಜಯವಾಣಿ ಪತ್ರಿಕೆಯಲ್ಲಿ  ಪ್ರಕಟವಾದ ಸುದ್ದಿ ದೇವರಿಗೆ ನಿದ್ದೆ ಮಾಡಲೂ ಪುರುಸೊತ್ತು ಕೊಡದೆ ಶ್ರೀಮಂತ ಭಕ್ತರು  ದೇವಸ್ಥಾನಕ್ಕೆ  ಹೋಗುತ್ತಿರುವರಂತೆ. ಹಾಗಾದರೆ ನಿದ್ರೆ ಮಾಡುತ್ತಿರುವ  ಭಕ್ತರು  ಬೆಳೆದಿರುವರೆ ಅಥವಾ ನಿದ್ರೆ ಬಿಟ್ಟು ದೇವರನ್ನು ನೋಡುವ ಭಕ್ತರು ಬೆಳೆದರೆ?

ಮನೆಯೊಡೆಯನು ಯಾರು? ಆಳು ಅರಸ ಯಾರು?

ಮಾನವರು ಯಾರನ್ನೂ ಆಳಲು ಒಡೆಯನಾಗಲು  ಬಯಸುವುದು  ಸಹಜ ಗುಣ ಆದರೆ ನಮ್ಮನ್ನು ಆಳುತ್ತಿರುವವನೊಬ್ಬ ಮೇಲಿದ್ದಾನೆನ್ನುವ ಅರಿವಿದ್ದರೆ  ನಾವು ನಮ್ಮ ಹಿಡಿತದಲ್ಲಿದ್ದು ಅನ್ಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಒಳ್ಳೆಯ ಹಾಗು ಕೆಟ್ಟ ಶಕ್ತಿಗಳೆರಡೂ ಒಳಗೇ ಇದ್ದು  ಜೀವವನ್ನು  ಉಳಿಸಿ ಬೆಳೆಸಲು ಸಹಕಾರಿಯಾಗಿದ್ದರೂ ಒಮ್ಮೆ ಜೀವ ದೇಹ ಬಿಟ್ಟು ಹೋಗೋದೇ ಎನ್ನುವ ಅರಿವಿದ್ದರೆ  ನಮ್ಮನ್ನು ನಾವರಿತು ಒಳ್ಳೆಯದಕ್ಕೆ ಸಹಾಯ ಮಾಡಿಕೊಂಡು  ಯಾರನ್ನೂ ಆಳದೆ ಸ್ವತಂತ್ರ ಜೀವನ‌ ನಡೆಸಬಹುದು. ಇದಕ್ಕೆ  ಯೋಗ ಅಗತ್ಯವಿದೆ. 
ಪರಮಾತ್ಮನ ಸತ್ಯವರಿಯದೆ ಜೀವಾತ್ಮನಿಗೆ ಯೋಗ ಸಿಗದು. ಒಟ್ಟಿನಲ್ಲಿ ತನ್ನವರನ್ನೇ  ತನ್ನತನವನ್ನೇ ಮರೆತು ಹೊರಗೆ ಆಳುವೆನೆಂದರೆ ಅದು ಅಜ್ಞಾನವಾಗುತ್ತದೆ. ಅದಕ್ಕೆ ತಕ್ಕಂತೆ ಅಸುರಿಗುಣವೂ ಸೇರುತ್ತದೆ.ಇದರಿಂದಾಗಿ  ಅಧರ್ಮ ಅನ್ಯಾಯ ಅಸತ್ಯಗಳು ಹೆಚ್ಚಾದರೆ  ತಾನೇ ಆಳಾಗಿರುವ  ಸತ್ಯ ತಿಳಿಯದೆ ಜೀವ ಹೋಗುತ್ತದೆ.
ಯಾರನ್ನೇ ಆಗಲಿ ಅತಿಯಾಗಿ  ಆಳಲೂಬಾರದು ಆಳಿಸಿಕೊಂಡಿರಲೂಬಾರದು.ಭೂಮಿಮೇಲೆ ನಿಂತು ಭೂಮಿಯೇ ನನ್ನದು ಎಂದರೆ ಹೇಗೋ ಹಾಗೆಯೇ ಸ್ತ್ರೀ ಶಕ್ತಿಯ ಸಹಾಯ ಪಡೆದು ಸ್ತ್ರೀ ಯನ್ನೇ ದುರ್ಭಳಕೆ ಮಾಡಿಕೊಂಡು  ಆಳುವುದು ಅಜ್ಞಾನ. ನಮ್ಮ ಸ್ವಂತ ಬುದ್ದಿ ಜ್ಞಾನ ಕೇವಲ ಸ್ವಲ್ಪ ಆದರೂ ನಮ್ಮ ಜೀವಕ್ಕೆ ಅದೇ ಅನ್ನ ಕೊಡಬಹುದು. ಇದನ್ನು ಬಿಟ್ಟು ಅನ್ಯರ ಬುದ್ದಿ ಜ್ಞಾನವನ್ನು ನನ್ನದೆಂದರೆ ನನ್ನ ಆಳುತ್ತಿರುವುದೇ ಅನ್ಯರು ನಾನು ಹೇಗೆ   ಸ್ವತಂತ್ರ? ಇತ್ತೀಚಿನ ದಿನಗಳಲ್ಲಿ ಯುವಶಕ್ತಿ ಹೊರಗಿನ ರಾಜಕೀಯದಲ್ಲಿ ಅನ್ಯರ  ವ್ಯವಹಾರದಲ್ಲಿ ಮುಳುಗಿ ಹಣಗಳಿಸಿ  ತನ್ನ ಸಂಸಾರದಲ್ಲಿ  ಸಮಸ್ಯೆಗಳನ್ನು ಎದುರಿಸಬೇಕಾದ  ಪರಿಸ್ಥಿತಿ ಹೆಚ್ಚಾಗಿದೆ. ಕಾರಣ ತನ್ನ ನಂಬಿ ಬಂದಿರುವ ಪತ್ನಿಯನ್ನು ಮತ್ತು ನನ್ನ ಸಾಕಿಸಲಹಿದ ಪೋಷಕರನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಿರುವುದು. ಹಣದಿಂದ ಯಾವುದೇ ಆತ್ಮಾವಲೋಕನ ಆಗೋದಿಲ್ಲ. ಹಣವನ್ನು  ಸದ್ಬಳಕೆ ಮಾಡಿಕೊಂಡು ಪರಮಾತ್ಮನ ಸೇವೆ ಮಾಡುವ ಮೂಲಕ ಜ್ಞಾನ ಬರುತ್ತದೆ. ‌ಹಾಗಾದರೆ‌ಲಕ್ಮಿ ಎಂದರೆ ಹಣ ಮಾತ್ರವೆ?
ಮಹಾವಿಷ್ಣುವಿನ ಹೃದಯವನ್ನು ಗೆದ್ದಿರುವ ಲಕ್ಮಿಗೆ ಹೃದಯವಂತಿಕೆ ಅಗತ್ಯವಿದೆ. ಎಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಗೌರವವಿರುವುದೋ ಅಲ್ಲಿ  ಜ್ಞಾನ ಲಕ್ಮಿಯ ವಾಸವಿರುತ್ತದೆ. ಜ್ಞಾನದ ನಂತರವೇ  ಹಣದ ಸದ್ಬಳಕೆ ಹೀಗಾಗಿ ಯಾರನ್ನೂ ಆಳೋದಕ್ಕೆ ಹಣವನ್ನು ವ್ಯರ್ಥ ಮಾಡುವ‌ಬದಲಾಗಿ ತನ್ನನ್ನು ಆಳಿಕೊಳ್ಳಲು  ಪರಮಾತ್ಮನ ಸೇವಾಕಾರ್ಯಕ್ಕೆ ಹಣ ಬಳಸಿದರೆ  ನಿಜವಾದ ಅರಸನಂತೆ ಬದುಕಬಹುದು.
ಹಿಂದಿನ ಕಾಲದಲ್ಲಿದ್ದ ಪತಿವ್ರತೆಯರಾಗಲಿ ಧರ್ಮ ಪತ್ನಿಯರಾಗಲಿ  ಪತಿಯಲ್ಲಿ ದೈವತ್ವವನ್ನು ಗುರುತಿಸುವಷ್ಟು ಜ್ಞಾನ ಪಡೆದಿದ್ದರು. ಈಗ ಪತಿಯೇ  ದಾರಿತಪ್ಪಿದ ಹಳಿಯಾಗಿದ್ದು‌ ಕೇವಲ ಆಸ್ತಿ ಅಂತಸ್ತು ಸೌಂದರ್ಯ ದಿಂದ ಸ್ತ್ರೀ ಯನ್ನು  ಅಳೆದು ಆಳಲು ಹೋದರೆ  ಅಧರ್ಮ ವಾಗುತ್ತದೆ. ಸ್ತ್ರೀ ಶಕ್ತಿಯನ್ನು  ಯಾವತ್ತೂ   ಅಜ್ಞಾನದಿಂದ ಕಡೆಗಣಿಸದೆ ಅವಳ  ಜ್ಞಾನವನ್ನು  ಗೌರವಿಸುವುದರಿಂದ ಮುಂದೆ ಬರುವ ಆಪತ್ತಿನಿಂದ ಪಾರಾಗಬಹುದು.

 ಸ್ತ್ರೀ ಯೂ ಹಾಗೆ ಪತಿಯ ಆಂತರಿಕ ಗುಣಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಲು  ಸಹಾಯ ಮಾಡಿದರೆ ಧರ್ಮದಿಂದ  ಸದ್ಗತಿ. ಯಾವಾಗ ಪತಿಯ ಅಧರ್ಮ ಅನ್ಯಾಯಕ್ಕೆ ಬೆಂಬಲವಾಗಿ ನಿಲ್ಲುವಳೋ ದುರ್ಗತಿ ಅನುಭವಿಸಲೇಬೇಕು. ಇದನ್ನು ಕರ್ಮ ಫಲ ಎನ್ನುವರು. ಕಣ್ಣಿಗೆ ಕಾಣದ ಸತ್ಯವನ್ನು  ಅರಿಯಲಾಗದವರಷ್ಟೆ ಈ  ಆಳುವ  ಅರಸನಾಗುವ  ಆಸೆಗೆ ಬಲಿಪಶುವಾಗೋದು.ಹಾಗಾದರೆ ರಾಜಕೀಯವಿಲ್ಲದೆ‌ ಭೂಮಿ‌ನಡೆದಿದೆಯೆ? ಭೂಮಿ ನಡೆದಿರೋದೇ ರಾಜಕೀಯದಲ್ಲಿ  ಆದರೆ ಅದರಲ್ಲಿ ಸತ್ಯ ಧರ್ಮ ವಿರಬೇಕಿದೆ.
ಇದಕ್ಕೆ ರಾಜರಿಗೆ ಧಾರ್ಮಿಕ ಪ್ರಜ್ಞೆ ಇರಬೇಕು. ಅಂತಹ ಶಿಕ್ಷಣ ಗುರುಹಿರಿಯರು ನೀಡಿರಬೇಕು. ಇಲ್ಲದಿದ್ದರೆ ‌ ಸಂಸಾರದಲ್ಲಿ ಕೇವಲ ರಾಜಕೀಯವೇ ಎದ್ದು ಕಾಣುತ್ತದೆ.ತನ್ನ ತಪ್ಪು ಅರ್ಥ ವಾಗದ ಮನಸ್ಸುಗಳಿಂದ ಇನ್ನಷ್ಟು ತಪ್ಪು ನಡೆದಾಗ ಅದನ್ನು  ತಡೆಯಲು  ಯಾರಿಂದಲೂ ಸಾಧ್ಯವಾಗದು. ತಪ್ಪು ಮಾಡೋದು ಸಹಜ ಆದರೆ ಅದನ್ನು ಸರಿ ಎಂದು ವಾದಿಸದೆ ಸರಿಪಡಿಸಿಕೊಂಡರೆ ಅದೇ ನಮ್ಮ ಸಾಮ್ರಜ್ಯಸ್ಥಾಪನೆಗೆ ಬಂಡವಾಳವಾಗುತ್ತದೆ.

ಯಾರನ್ನು ಯಾರೋ ಆಳುವುದರಲ್ಲಿ ಅರ್ಥ ವಿರದು.‌ ಒಟ್ಟಿನಲ್ಲಿ ಆಳುವವನು ಆಳಿಸಿಕೊಳ್ಳುವವನು ಒಂದೇ ಭೂಮಿಯನ್ನು  ಆಳಬಹುದೆ?  ರಾಜಕೀಯ ಎಂದರೆ ಇದೆಯೆ?
ರಾ ರಾವಣ ಜ ಜರಾಸಂಧ ಕೀ ಕೀಚಕ ಯ ಯಮ
ರಾವಣನಂತಹ ಮಹಾಜ್ಞಾನಿ ಶಿವಭಕ್ತ ಒಂದು ಸ್ತ್ರೀ ಯನ್ನು  ಅಪಹರಿಸಿದ ಫಲವೇ ಯಮನ ದರ್ಶನಕ್ಕೆ ಕಾರಣವಾಯಿತು. ಹಾಗೆ ಜರಾಸಂಧನೂ ಒಂದು ರಾಕ್ಷಸ ಸ್ತ್ರೀ ಇಂದ ಪುನರ್ಜನ್ಮ ಪಡೆದರೂ ಅಜ್ಞಾನದೆಡೆಗೆ ನಡೆಯುತ್ತಾ ಅಸುರನಾದ ಅಂದರೆ ಅಹಂಕಾರ ದ ಅಮಲಿನಲ್ಲಿಯೇ ಮರಣಿಸಿದ .ಕೀಚಕನೂ ದ್ರೌಪದಿಯನ್ನು ಕೆಣಕಿ ಮರಣ ಹೊಂದಿದ ಎಲ್ಲರಿಗೂ ಕೊನೆಯಲ್ಲಿ ಯಮನ ದರ್ಶ ನವಾಗಿರೋದು  ಸ್ತ್ರೀ ಯನ್ನು ದುರ್ಭಳಕೆ ಮಾಡಿಕೊಂಡಿರುವುದು ಕಾರಣವೆಂದರೆ ಭೂಮಿ ತಾಯಿ, ಹೆತ್ತತಾಯಿ,ಸ್ತ್ರೀ ಶಕ್ತಿಯನ್ನು  ಯಾರು  ಸರಿಯಾಗಿ ಅರಿತು ಗೌರವಿಸಿ  ಸಂಸಾರದ  ಜವಾಬ್ದಾರಿ  ಹೊತ್ತು ಧರ್ಮದಲ್ಲಿ ನಡೆಯುವರೋ ಅವರಿಗೆ ಸದ್ಗತಿ.

 ಶ್ರೀ ರಾಮಚಂದ್ರನಂತೆ ರಾಜನಾಗಿಯೂ ಸಾಮಾನ್ಯ ಪ್ರಜೆಯಂತೆ ರಾಜ್ಯಭಾರ ನಡೆಸೋದು ಕಷ್ಟ. ಕಲಿಯುಗದಲ್ಲಿ ಕಲಿಕೆಯೇ ಹೊರಮುಖ ಆಗಿರುವಾಗ ಅಜ್ಞಾನ.ಎಂದರೆ ಸತ್ಯದ ತಿಳುವಳಿಕೆ ,ಕಲಿಕೆ ಇಲ್ಲದೆ ಭೂಮಿಯನ್ನು ಆಳುವುದಾಗುತ್ತದೆ.ಇದಕ್ಕೆ ಸ್ವಯಂ ಸ್ತ್ರೀ ಶಕ್ತಿಯ ಬೆಂಬಲ ಸಹಕಾರ ಸಿಕ್ಕಿದರೆ ಮುಗಿಯಿತು ಕಥೆ.

ಎಲ್ಲಿಯವರೆಗೆ  ಗೃಹಲಕ್ಮಿ ಗೃಹಿಣಿಯಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಸನಾತನ ಧರ್ಮ ರಕ್ಷಣೆಯಾಗದು. ಅಂದರೆ ಸ್ತ್ರೀ  ಸತ್ಯಜ್ಞಾನಕ್ಕೆ  ಮನೆಯೊಳಗೆ ಬೆಲೆಯಿರುವುದಿಲ್ಲವೋ  ಅಲ್ಲಿ  ಸಂತೋಷ,ನೆಮ್ಮದಿ ತೃಪ್ತಿಇರದು.‌ ಮಿಥ್ಯಜ್ಞಾನ ಇಂದು ಮಿತಿಮೀರಿದ ಪ್ರಭಾವದಿಂದಾಗಿ ಮನೆಯೊಳಗೆ ವಸ್ತುಗಳು ಸೇರಿದೆ  ವಾಸ್ತು ಪುರುಷನಿಲ್ಲ. 

ಇದು ವಾಸ್ತವ ಸತ್ಯ. ಇದಕ್ಕೆ ಪರಿಹಾರ  ಸತ್ಯಜ್ಞಾನದ ಶಿಕ್ಷಣವೇ ಹೊರತು ಇನ್ನಷ್ಟು ‌ಮಿಥ್ಯವನ್ನರಿತು ಮುಂದೆ  ನಡೆಯೋದಲ್ಲ. ಒಟ್ಟಿನಲ್ಲಿ ಸತ್ಯವಿಲ್ಲದ ಕಡೆ ಧರ್ಮ ವಿರದು.ಧರ್ಮ ಇರದ ಕಡೆ ಶಾಂತಿಯಿರದು. ಶಾಂತಿಯೇ ಇಲ್ಲದ ಜೀವಾತ್ಮನಿಗೆ ಮುಕ್ತಿ ಸಿಗದು.

ಹಿಡಿತವಿರಲಿ  ಆದರೆ ಅದರಲ್ಲಿ ಧರ್ಮವಿರಲಿ. ಇತಿಮಿತಿಯಿರಲಿ. ಅತಿಯಾದರೆ ಗತಿಗೇಡು.

ಪ್ರಜಾಪ್ರಭುತ್ವದ ವಾಸ್ತವ ಸತ್ಯ

" ಕಠೋರವೆನಿಸಿದರೂ ವಾಸ್ತವಸತ್ಯ ಇದಾಗಿದೆ. ಪ್ರಜಾಪ್ರಭುತ್ವ ರಾಜಪ್ರಭುತ್ವವಾಗೋ ಮೊದಲು ಎಚ್ಚರವಾದರೆ ಉತ್ತಮ ತತ್ವ  ಕಾಣಬಹುದಷ್ಟೆ. ಆಗೋದನ್ನು ತಡೆಯಲಾಗದು ಆಗಿದ್ದಕ್ಕೆ ಕಾರಣ ತಿಳಿಯಬಹುದು. ಬೇಡದ್ದು ಮಾಡಿದರೆ ಆಗಬಾರದ್ದೇ ಆಗೋದೆನ್ನುವುದು ಎಲ್ಲರಿಗೂ ಅನ್ವಯಿಸುತ್ತದೆ. ಇದನ್ನು ಹಣದಿಂದ ಸರಿಪಡಿಸಲಾಗದು. ಕರ್ಮಕ್ಕೆ ತಕ್ಕಂತೆ ಫಲ.

ಗಾಂಧಿ ಹೆಸರಿನಲ್ಲಿರುವ ಯೋಜನೆಗಳ ಹೆಸರನ್ನು ಬದಲಾಯಿಸಬಹುದು.ಆದರೆ ದೇಶದೊಳಗೆ ಚಲಾವಣೆಯಲ್ಲಿರುವ ನೋಟ್ ಗಳಲ್ಲಿ ಇರುವ ಗಾಂಧೀಜಿ ಚಿತ್ರ ಯಾರಾದರೂ ಅಳಿಸಬಹುದೆ?
ಪ್ರತಿಯೊಂದು ಮನೆಯಲ್ಲಿಯೂ ಪೂಜಿಸಲಾಗುತ್ತಿರುವ ಈ ಹಣವನ್ನು ಬದಲಾಯಿಸುವ ಯೋಜನೆ ಜಾರಿಗೆ ತರಲು ಸಾಧ್ಯವೆ?
ಹಣಕ್ಕಾಗಿಯೇ ರಾಜಕೀಯ ನಡೆಸುವವರನ್ನು ಜನರು ಆಯ್ಕೆ ಮಾಡಿಕೊಂಡು  ಯಾರೋ ವ್ಯಕ್ತಿಯಿಂದ ದೇಶ ಹಾಳಾಗಿದೆ ಎಂದು ಪ್ರಚಾರ ಮಾಡುತ್ತಿದ್ದರೆ ಸತ್ಯ ಹೊರಬರದೆ ಇನ್ನಷ್ಟು ಭ್ರಷ್ಟ ದುಷ್ಟರು ಬೆಳೆಯಬಹುದು.ಎಲ್ಲಿ ನೋಡಿದರೂ  ಹೆಸರಿಗೆ ಹಣಕ್ಕೆ ಅಧಿಕಾರಕ್ಕೆ ಪೈಪೋಟಿ ಇರೋವಾಗ ಜನರೊಳಗೇ ಅಡಗಿರುವ ಜ್ಞಾನವನ್ನು ಗುರುತಿಸದೆ ಅಜ್ಞಾನವೇ ತಾಂಡವವಾಡುತ್ತದೆ.ಇದು ಕಲಿಯುಗ ಬೇಲಿಯೇ ಎದ್ದು ಹೊಲಮೇಯ್ದರೂ ಅದನ್ನು ಕರ್ಮ ಫಲ ಎಂದು ಸುಮ್ಮನಿರಬೇಕೆನ್ನುವವರೆ ಭ್ರಷ್ಟಾಚಾರ ನಡೆಸಿ ಸಹಕರಿಸಿ ಮುಂದೆ ನಡೆಯುವಾಗ ನಮ್ಮ ಹೆಸರಿನಲ್ಲೇ ಅಡಗಿರುವ ದೈವಶಕ್ತಿ ಕಾಣೋದಿಲ್ಲ. ಅದಕ್ಕೆ ಅಸುರರ ಹೆಸರು ಪ್ರಸಿದ್ದವಾಗಿರೋದು.
ಸುಪ್ರಸಿದ್ದ ಕುಪ್ರಸಿದ್ದರಿಬ್ಬರೂ ಪ್ರಸಿದ್ದರೆ ಆದರೂ ಸಿದ್ದಿ ಯಾರಿಂದ ಸಿಕ್ಕಿದೆ ಎನ್ನುವ ಬಗ್ಗೆ ಚಿಂತನೆ ನಡೆಸೋದು ಕಷ್ಟ.
ಎಲ್ಲಿಯವರೆಗೆ ಸಿದ್ದಪುರುಷರ ಜ್ಞಾನದ  ಸದ್ಗುಣಗಳನ್ನು ಗುರುತಿಸುವ  ಆತ್ಮಜ್ಞಾನ ಮಾನವನಲ್ಲಿರದೋ ಅಲ್ಲಿಯವರೆಗೆ ಈ ರೀತಿಯ ನಾಟಕಗಳು ನಡೆಯುತ್ತಲೇ ಇರುತ್ತದೆ. 
ಉದ್ಯೋಗಂ ಪುರುಷಲಕ್ಷಣಂ ಎನ್ನುತ್ತಿದ್ದವರು ಉದ್ಯೋಗಂ ಸ್ತ್ರೀ ಲಕ್ಷಣಂ ಎನ್ನುವ ಹಂತಕ್ಕೆ ಬಂದಿರೋದೇ ಭಾರತೀಯರ ಈ ಸ್ಥಿತಿಗೆ ಕಾರಣ.
ಹಿಂದೆ ದೊಡ್ಡ ಕುಟುಂಬದ ಜವಾಬ್ದಾರಿ ಒಬ್ಬನೇ ಹೊತ್ತು ಹೋಗುತ್ತಿದ್ದರು ಈಗ ಸಂಸಾರ ಬಿಟ್ಟು ಸಮಾಜದ ಋಣದಲ್ಲಿ ಹಣದಲ್ಲಿ ಬಲದಲ್ಲಿ ತನ್ನ ಜೀವ ಉಳಿಸಿಕೊಳ್ಳಲು ಭ್ರಷ್ಟ ದುಷ್ಟರ ಹಿಂದೆ ನಡೆಯುವರೆಂದರೆ ಅಜ್ಞಾನ ಮಿತಿಮೀರಿದೆ.
ಸತ್ಯವನ್ನು ರಾಜಕೀಯದಲ್ಲಿ ತಿಳಿಯುವುದಕ್ಕೂ ರಾಜಯೋಗದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ಬಹಳ ಅಂತರವಿದ್ದು ಆ ಅಂತರದಲ್ಲಿ ಕಣ್ಣಿಗೆ ಮಣ್ಣೆರಚಿ ಆಳುವವಗೆ ಅನ್ಯದೇಶದವರಿಗೆ ನಮ್ಮಲ್ಲಿ  ಉಚಿತವಾಗಿ ಸನ್ಮಾನಗಳಾಗುತ್ತಿದೆ. ಯಾವುದೋ ಹೊರದೇಶದ ಪ್ರಸಿದ್ದ ವ್ಯಕ್ತಿಯನ್ನು ಕರೆಸಿಕೊಂಡು ಜನರನ್ನು ದಾರಿತಪ್ಪಿಸುವ ಸ್ವಾತಂತ್ರ್ಯ ರಾಜಕಾರಣಿಗಳು ಪಡೆದಿರುವರೆಂದರೆ ನಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಎಂದರ್ಥ. ಒಟ್ಟಿನಲ್ಲಿ ಎಲ್ಲವೂ ರಾಜಕೀಯದ ಪ್ರೇರಣೆಯಂತೆ ನಡೆದರೂ  ನಮ್ಮ ಸಮಸ್ಯೆ ಗೆ ಪರಿಹಾರ ಸಿಗೋದು  ನಮ್ಮ ಬದಲಾವಣೆಯಿಂದಷ್ಟೆ. ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿರದು. ಆತ್ಮವೆಂದರೇನೆಂಬುದರ ಅರಿವಿಲ್ಲದವರನ್ನು ಚೆನ್ನಾಗಿ ಆಳಬಹುದು.ಹೀಗಾಗಿ ಅಜ್ಞಾನದ ಜನರಿಗೆ ಇನ್ನಷ್ಟು ಅಜ್ಞಾನ ತುಂಬಿ ಹೊರಗೆ ಕುಣಿಸಿ ಕುಡಿಸಿ ಮೆರೆಸಿದರೆ ಸಂಸಾರ ಹದಗೆಟ್ಟುಹೋಗುವಾಗ ಯಾರೂ ಸರಿಪಡಿಸಲಾಗದು.ಹೊರಗಿನ‌ನ್ಯಾಯಾಲಯದಲ್ಲಿಯೂ ಹಣವಿಲ್ಲದೆ  ನ್ಯಾಯ ನೀಡೋದಿಲ್ಲ ಎಂದಾಗ ಮೇಲಿರುವ ನ್ಯಾಯಾಧೀಶನಿಗೆ ಶರಣಾಗೋದು ಉತ್ತಮ.ಆಗ‌ಹಣವೂ ಸದ್ಬಳಕೆಯಾಗುತ್ತದೆ. 
ಯಾರೋ ಒಬ್ಬ ವ್ಯಕ್ತಿಯಿಂದ ದೇಶ ಹಾಳಾಗೋದಿಲ್ಲ ಉಳಿಯೋದೂ ಇಲ್ಲ. ದೇಶದ ಒಳಗಿರುವ ಎಲ್ಲರ ಜ್ಞಾನಶಕ್ತಿಯಿಂದ  ಎಲ್ಲಾ ‌ನಡೆದಿರುವಾಗ ನಮ್ಮೊಳಗೇ ಇರುವ ವಿದೇಶಿ ವಿಜ್ಞಾನದ ಶಿಕ್ಷಣವು ವ್ಯವಹಾರಕ್ಕೆ ಸಹಕಾರ ಕೊಟ್ಟರೂ ಧರ್ಮದ ಪ್ರಕಾರ ನಮ್ಮ ಆತ್ಮರಕ್ಷಣೆಗೆ ಪೂರಕವಾಗಿದೆಯೆ? ಇದರ ಬಗ್ಗೆ ಧಾರ್ಮಿಕ ಕ್ಷೇತ್ರ ಶಿಕ್ಷಣ ಕ್ಷೇತ್ರ ಸಾಹಿತ್ಯ ಕ್ಷೇತ್ರ ಗಮನ ಕೊಡುವುದು ಅಗತ್ಯವಿದೆ.
ಅಲ್ಲಿಯೂ ಚುನಾವಣೆಯಲ್ಲಿ  ಹಣದ ಪ್ರಭಾವವೇ ಮೇಲುಗೈ ಸಾಧಿಸಿದರೆ ಜ್ಞಾನಿಗಳ ಗತಿ ಅಧೋಗತಿ.ಭಾರತ ವಿಶ್ವಗುರು ಎನಿಸಿಕೊಂಡಿದ್ದು ಆತ್ಮಜ್ಞಾನದಿಂದ ಆದರೆ ಇಂದಿದು ಹೊರಗಿನವರ ವಿಜ್ಞಾನದೆಡೆಗೆ ಹೊರಟು ದೇಶದಲ್ಲಿ ತನ್ನ ಮೂಲ ಶಿಕ್ಷಣವನ್ನು  ಕೊಡಲಾಗದ ಸ್ಥಿತಿಗೆ ಬಂದಿರೋದು ಆತ್ಮನಿರ್ಭರಕ್ಕೆ   ಪೂರಕವೇ ಮಾರಕವೇ?
ಯಾವುದೇ ಪಕ್ಷ ಬಂದರೂ ದೇವಸ್ಥಾನಗಳನ್ನು ಸರ್ಕಾರದ ವಶದಿಂದ ಬಿಡಿಸಲಾಗಿಲ್ಲ ದೇಶೀಯ ಶಿಕ್ಷಣವನ್ನು ಕೊಡಲಾಗಿಲ್ಲ ಎಂದರೆ ನಮ್ಮ ಚಿತ್ತ ವಿದೇಶಿಯತ್ತ. ಇದರಿಂದ ವಿದೇಶಿಗರಿಗೆ ಸಿಗುತ್ತಿರುವ  ಸನ್ಮಾನ ನಮ್ಮವರಿಗಿಲ್ಲ. 
ಕಣ್ಣೊರೆಸುವ ನಾಟಕವಾಡುವವರಿಗೆ ಕಣ್ಣೀರಿನ ಬೆಲೆ ಕಟ್ಟಲಾಗದು. ಕಣ್ಣೀರಿನ ಫಲವೇ  ಅತೃಪ್ತ ಆತ್ಮಗಳಾಗಿ ನಿಂತು ಬೇಡುತ್ತಿರುವ ಜನರಾಗಿರುವರು. ಇವರನ್ನು ತೃಪ್ತಿ ಪಡಿಸಲು ಉತ್ತಮ  ಜ್ಞಾನದ ಶಿಕ್ಷಣ ನೀಡುವುದೇ ಉಪಾಯ.
ಎಲ್ಲದ್ದಕ್ಕೂ ಪರಮಾತ್ಮನೇ ಉಪಾಯವಾಗಿರುವನು. ಮೇಲಿರುವ ಅವನ ಬಿಂದುಗಳಲ್ಲಿ ಅಡಗಿರುವ ಆತ್ಮಶಕ್ತಿ ಜಾಗೃತವಾದಾಗಲೇ ಭೂಮಿಯಲ್ಲಿ  ಶಾಂತಿ ನೆಲೆಸಲು ಸಾಧ್ಯ.
ಶಿಕ್ಷಣವೇ ಹೊರಮುಖವಾಗಿದ್ದು  ಹಣವೇ ಸರ್ವಸ್ವ ವಾದಾಗ
ಎಲ್ಲಿಯ ಬದಲಾವಣೆ?
ಶ್ರೀ ಕೃಷ್ಣ ನೇ ತಿಳಿಸಿದಂತೆ ಕಲಿಯುಗದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವ  ಸತ್ಯದರ್ಶನ  ನಮ್ಮ  ಅಂತರಂಗ ಶುದ್ದಿಯಿಂದಷ್ಟೆ ಕಾಣಬಹುದು. 
ಸ್ವಚ್ಚಭಾರತಕ್ಕೆ ಸ್ವಚ್ಚ ಶಿಕ್ಷಣ ಅಗತ್ಯವಿದೆ. ಪೋಷಕರೆ  ಮಕ್ಕಳ ಜೊತೆಗೆ ‌ಹಣವನ್ನು ಕೊಟ್ಟು  ಗುಲಾಮಗಿರಿಗೆ ಸಹಕರಿಸಿದರೆ  ಗುಲಾಮರಿಂದ ಬಿಡಿಸಿಕೊಳ್ಳಲು ಸಾಧ್ಯವೆ? ಇಲ್ಲಿ ಗುಲಾಮರು ಯಾರು? ವಿದೇಶಿ ಕಂಪನಿ,ವ್ಯವಹಾರ,ಸಾಲ,ಬಂಡವಾಳದ ಜೊತೆಗೆ ಒಪ್ಪಂದಕ್ಕೆ  ನಮ್ಮವರು  ಇಳಿದಾಗ ದೇಶದ ತುಂಬಾ ಅವರದೇ ಸಾಮ್ರಾಜ್ಯ. ಇದನ್ನು ಹಿಂದೆ ಬ್ರಿಟಿಷ್ರೂ   ಮಾಡಿತೋರಿಸಿದ್ದಾರೆ.ಈಗ ಅವರದೇ ಶಿಕ್ಷಣ ವ್ಯವಹಾರ ಭಾಷೆ ಮಾಧ್ಯಮಗಳ ಮೂಲಕ ರಾಜಾರೋಷವಾಗಿ ರಾಜಕಾರಣಿಗಳು ನಡೆಸಿರುವರಷ್ಟೆ.ಇದನ್ನು ಪ್ರಗತಿ ಎನ್ನುವ ಭ್ರಮೆಯಲ್ಲಿ  ನಾವು ಸಹಕಾರ ನೀಡುತ್ತಾ ಮೇಲಕ್ಕೇರಿಸಿ  ನಮ್ಮೊಳಗೇ ಇದ್ದ ಶುದ್ದ ಸತ್ಯ ಸತ್ವ ತತ್ವಕ್ಕೆ  ವಿರುದ್ದವಿರುವಾಗ ನಾವು ಗುಲಾಮಗಿರಿಗೆ  ತಲೆಬಾಗಬೇಕಿದೆ. 
ದೇಶ ಸುತ್ತು ಕೋಶ ಓದು ಎನ್ನುವುದೇ ತಪ್ಪು. ಯಾವ ದೇಶ ಸುತ್ತಬೇಕು ಯಾರ ಕೋಶ ಓದಬೇಕೆಂಬ ಅರಿವಿಲ್ಲದಿದ್ದರೆ ಮನಸ್ಸು ಮನೆಯೊಳಗೆ ಇರೋದಿಲ್ಲ.
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂದರೆ ನಮ್ಮಲ್ಲಿ ಆತ್ಮಜ್ಞಾನವಿದೆಯೆ ಇಲ್ಲವೆ ಎನ್ನುವುದು.
ನಾವೇ ನಮ್ಮನ್ನು ಅರ್ಥ ಮಾಡಿಕೊಳ್ಳಲು ಸೋತಾಗ ಅನ್ಯರು ಸುಲಭವಾಗಿ ಆಳುವರು. ಇದು ಇಂದಿನ ಭಾರತದ ಸ್ಥಿತಿಗೆ ಕಾರಣ.
ಯಾರು ಹಿತವರು ನಿಮಗೆ ಈ ಮೂವರೊಳಗೆ?
ದೇವರು ಮಾನವರು ಅಸುರರು
ಆಕಾಶ ಭೂಮಿ ಪಾತಾಳ
ಪುರುಷ ಸ್ತ್ರೀ ಮಕ್ಕಳು
ಬ್ರಹ್ಮ ವಿಷ್ಣು ಮಹೇಶ್ವರ

ಈ ಮಧ್ಯವರ್ತಿಗಳು ಆ ಕಡೆ ಈ ಕಡೆ ಸಮಾನವಾಗಿ ನೋಡುವ ಹೊತ್ತಿಗೆ ಕಾಲಮುಗಿದಿರುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎನ್ನುವುದನ್ನು ಯಾರಿಗೂ ತಪ್ಪಿಸಲಾಗದು.
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಪುರುಷರ ಅಜ್ಞಾನವು ಸ್ತ್ರೀ ಯರ ಸುಜ್ಞಾನವನ್ನು ಅಲ್ಲಗೆಳೆದಷ್ಟೂ ಸಮಸ್ಯೆಯಿಂದ ಬಿಡುಗಡೆ ಸಿಗದು. ಜ್ಞಾನದೇವತೆಗೇ ಎದುರು ನಿಂತರೆ ಅಜ್ಞಾನವೇ ಬೆಳೆಯೋದಲ್ಲವೆ? ಜ್ಞಾನವನ್ನು ಹಣದಿಂದ ಅಳೆಯಲು ಹೋದರೂ ಅಜ್ಞಾನವೇ ಬೆಳೆಯೋದು.
ಅಜ್ಞಾನವನ್ನು ಯಾವುದೇ ರಾಜಕೀಯ ಶಕ್ತಿಯಿಂದ ಸರಿಪಡಿಸಲಾಗದು. ಯಾವುದೇ ಅಧಿಕಾರ ದರ್ಪ ಅಸತ್ಯ ಅನ್ಯಾಯದಿಂದ  ಜನರನ್ನು ದಾರಿತಪ್ಪಿಸಿ ಆಳಬಹುದು ಆದರೆ ಅದರ ಪ್ರತಿಫಲ ಅಷ್ಟೇ ಕಠೋರವಾಗಿರುತ್ತದೆ ಕಾರಣವಿಷ್ಟೆ ಪರಮಾತ್ಮ ಒಲಿಯೋದು ಜ್ಞಾನಕ್ಕಷ್ಟೆ.ಇದು ಯೋಗಮಾರ್ಗದಲ್ಲಿರಬೇಕು. 
ಜ್ಞಾನಯೋಗ, ರಾಜಯೋಗ,ಭಕ್ತಿಯೋಗ, ಕರ್ಮ ಯೋಗದಲ್ಲಿ ರಾಜಕೀಯವಿತ್ತೆ? ಇದ್ದರೂ ಧರ್ಮ ವಿತ್ತು.ಈಗ ಧರ್ಮ ಎಲ್ಲಿದೆ? ಕಾಣದ ದೇವರನ್ನು ಹಿಡಿದು ದೇವಸ್ಥಾನ ಕಟ್ಟಬಹುದು.ಆದರೆ ದೇವರನ್ನು ಅಲ್ಲಿ ಕೂರಿಸುವಷ್ಟು ಶಕ್ತಿ ನಮಗಿರಬೇಕು.ಹಣಕ್ಕಾಗಿ  ದೇವರನ್ನು ಬೇಡೋ ಮೊದಲು ಜ್ಞಾನಕ್ಕಾಗಿ ಭಗವಂತನ ಸೇವೆ ಮಾಡೋದು ಸನಾತನ ಧರ್ಮದ ಗುರಿಯಾಗಿದೆ. ಇದನ್ನು ಧಾರ್ಮಿಕ ವರ್ಗದವರು ಅರಿತಾಗಲೇ ವಾಸ್ತವದಲ್ಲಿ ನಾವೆತ್ತ ಸಾಗಿದ್ದೇವೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. 
ಭೂಮಿಯ ಮೇಲಿರುವ ಮನುಕುಲಕ್ಕೆ ತನ್ನೊಳಗೆ ಇರುವ ದೈವತ್ವದ ಅರಿವಿಲ್ಲದಿದ್ದರೆ ಅಸುರರೆ ದೇಶದ ಜೊತೆಗೆ ದೇಹವನ್ನು ಆಳೋದು. ಇದರಿಂದಾಗಿ ಕಷ್ಟ ನಷ್ಟ ಯಾರಿಗೆ?

ಶತ್ರು ಮಿತ್ರರು ಯಾರು?

" ಜೀವನದಲ್ಲಿಗೆಲ್ಲಬೇಕು ಅಂದ್ರೆಮಿತ್ರರಿರಬೇಕು"
ಜೀವನಪರ್ಯಂತ ಗೆಲ್ಲಬೇಕೆಂದರೆ ಶತ್ರುಗಳಿರಬೇಕು" 
ಜೀವನವೆಂದರೆ‌ಜೀವಿಗಳ ವನ ಇದರಲ್ಲಿ ಗೆಲ್ಲುವುದಕ್ಕೆ ಮಿತ್ರರು  ಸಹಕರಿಸಬಹುದು ಆದರೆ ಇದು ತಾತ್ಕಾಲಿಕವಷ್ಟೆ.
ಯಾವಾಗ ನಮ್ಮ ಸ್ವಂತ ಬುದ್ದಿ ಜ್ಞಾನ ಶ್ರಮದಿಂದ  ಕಷ್ಟಪಟ್ಟು ಮುಂದೆ ನಡೆಯುವವರಿಗೆ ಹೆಚ್ಚಿನ ಶತ್ರುಗಳು. ಕಾರಣವಿಷ್ಟೆ ಅವರಲ್ಲಿ ಸತ್ಯ ನಿಷ್ಟೆ ನ್ಯಾಯ ಧರ್ಮ ವಿರುತ್ತದೆ. ಇದರಿಂದಾಗಿ ಹೆಚ್ಚಿನ ಹಣಸಂಪಾದನೆ ಕಷ್ಟವಾಗುತ್ತ ಬಡವರಾಗಿರುವರು. ಆ ಬಡತನವನ್ನು ಯಾರೋ ಹೊರಗಿನವರು  ಬಂದು ಹಣಕೊಟ್ಟು ಮೇಲಕ್ಕೆ ತರಲು ಸಹಕರಿಸಿದರೆ  ಅವರು ಮಿತ್ರರೆನಿಸುವರು.ಆದರೆ ಒಂದು ಸತ್ಯ  ಅವರವರ ಸಾಲ ಅಥವಾ ಋಣ ತೀರಿಸಲು  ಸ್ವಧರ್ಮ ಸತ್ಕರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯ ಅಗತ್ಯವಿದೆ ಎಂದರೆ  ಇದು ಹೊರಗಿನವರು ಕೊಡಬಹುದೆ? 
ಒಟ್ಟಿನಲ್ಲಿ  ಮಾನವ ತನಗೆ ತಾನೇ ಮೋಸ ಹೋದರೂ  ಹೊರಗಿನವರೆ ಕಾರಣ ಎಂದಾಗುತ್ತದೆ. 
ಅತಿಯಾದ  ಶತ್ರುಗಳೂ ಇರಬಾರದು ಮಿತ್ರರೂ ಇರಬಾರದು.