ಆತ್ಮಹತ್ಯೆ ಮಹಾಪಾಪ ಪಾಪಕ್ಕೆ ಪರಿಹಾರ ಧನವೋ ಸುಜ್ಞಾನವೋ?
ಆತ್ಮಹತ್ಯೆಗೆ ಒಂದು ಕೋಟಿ ಬೆಲೆಕಟ್ಟುವುದಾದರೆ ಎಷ್ಟೋ ವಿದ್ಯಾರ್ಥಿಗಳು ಯೋಗ್ಯತೆಯಿಲ್ಲದೆಯೂ ಪರೀಕ್ಷೆಗೆ ಕುಳಿತು ಫಲಿತಾಂಶ ಶೂನ್ಯವೆನ್ನುವ ನೆಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಪರಿಹಾರಧನ ಪಡೆಯುವ ಮಟ್ಟಿಗೆ ತಮ್ಮ ಜೀವಕ್ಕಿಂತ ಹಣವೇ ಮುಖ್ಯ ಎಂದು ಮುಂದಿನ ದಿನಗಳಲ್ಲಿ ದಾರಿತಪ್ಪಬಹುದು.
ಪ್ರತಿವರ್ಷ ಆತ್ಮಹತ್ಯೆಗೆ ಶರಣಾಗುವ ಅಜ್ಞಾನಿಗಳು ಭಾರತದಂತಹ ಜ್ಞಾನಿಗಳ ದೇಶದಲ್ಲಿ ಹೆಚ್ಚಾಗುತ್ತಿರೋದರ ಹಿಂದೆ ಶಿಕ್ಷಣದ ಪ್ರಭಾವ ಎದ್ದು ಕಾಣುತ್ತಿದ್ದರೂ ಶಿಕ್ಷಣವೇ ಆತ್ಮಹತ್ಯೆಗೆ ಅಪರೋಕ್ಷವಾಗಿ ಕಾರಣವಾಗಿದ್ದರೂ ಅದನ್ನು ಸರಿಪಡಿಸದೆ ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರಧನ ನೀಡುವುದರಿಂದ ಸತ್ತವರು ಬರೋದಿಲ್ಲ ಸಾಯೋರು ಕಡಿಮೆಯಾಗೋದಿಲ್ಲ. ಬದಲಾಗಿ ಸತ್ತವರ ಹೆಸರಿನಲ್ಲಿ ರಾಜಕೀಯ ಮಾಡುವವರು ಬೆಳೆಯುತ್ತಾ ಹೋಗುವರು.
ಸತ್ತ ಜೀವಾತ್ಮನಿಗೆ ತೃಪ್ತಿ ಸಿಗದಂತೆ ಅತಂತ್ರಸ್ಥಿತಿಗೆ ತಲುಪಿಸಿದರೆ ಇನ್ನಷ್ಟು ಸಾವು ನೋವುಗಳಾಗುತ್ತದೆ. ಇದನ್ನು ಆಧ್ಯಾತ್ಮಿಕ ವಾಗಿ ಚರ್ಚೆ ಮಾಡಿದರೂ ಅರ್ಥ ಆಗಲಿಕ್ಕೂ ಆಧ್ಯಾತ್ಮಿಕ ಜ್ಞಾನವಿರಬೇಕು. ಭೌತವಿಜ್ಞಾನದ ಪ್ರಕಾರ ಹಣದಿಂದ ಜೀವಉಳಿಸಬಹುದಾದರೆ ತೆಗೆಯೋದುಹಣಕ್ಕಾಗಿಯೇ ಆಗಿರುತ್ತದೆ. ಆದರೆ ಜೀವ ಸೃಷ್ಟಿ ಮಾಡುವುದಕ್ಕಾಗದವರಷ್ಟೆ ಈ ದುರ್ಮಾರ್ಗ ಹಿಡಿಯುವುದು . ಪರೀಕ್ಷೆ ಯಾರು ಯಾರಿಗೆ ನಡೆಸುತ್ತಿರುವುದು? ಇದರಿಂದಾಗಿ ಯಾರು ಜೀವನದಲ್ಲಿ ಗೆದ್ದರು? ಸೋತವರು ಯಾರು? ಜೀವನ ಎನ್ನುವ ಪದಕ್ಕೆ ಅರ್ಥ ತಿಳಿಯದೆ ನೀಟಾಗಿ ಬೆಳೆಸಿದರೂ ಸೊಟ್ಟಗೆ ಇರುವರು. ಇಲ್ಲಿ ಯಾರದ್ದೋ ತಪ್ಪು ಎನ್ನುವ ಬದಲಾಗಿ ನಮ್ಮ ತಪ್ಪು ನಮಗೆ ಕಾಣದಿರೋದೆ ದುರಂತ ಕ್ಕೆ ಕಾರಣ.
ಪ್ರಜಾಪ್ರಭುತ್ವ ದೇಶದಲ್ಲಿ ಆತ್ಮಹತ್ಯೆಗೆ ಪರಿಹಾರ ನೀಡುವಾಗ ಅದರ ಹಿಂದಿನ ಷಡ್ಯಂತ್ರಗಳಬಗ್ಗೆ ಪರಿಶೀಲನೆ ನಡೆಸದಿದ್ದರೆ ಇಲ್ಲಿ ಹಣಕ್ಕಾಗಿ ಪ್ರತಿಕ್ಷಣವೂ ಆತ್ಮಹತ್ಯೆ ಮಾಡಿಕೊಂಡಿರುವವರು ಬಹಳಜನರಿದ್ದಾರೆ. ನಾವೂ ಅದರಲ್ಲಿ ಒಬ್ಬರಾಗಿ ಸತ್ಯ ತಿಳಿದೂ ಹೇಳದೆ ನಮಗೂ ಇದಕ್ಕೂ ಸಂಬಂಧ ವಿಲ್ಲ ಎನ್ನುವಂತಿರೋದೆ ಆತ್ಮಹತ್ಯೆ.
ಸತ್ಯವೇ ದೇವರು ಆತ್ಮವೇ ದೇವರು. ಹಾಗಾದರೆ ಸತ್ಯ ಎಲ್ಲಿದೆ? ಆತ್ಮ ಎಲ್ಲಿದೆ? ಕಾಣದ ಶಕ್ತಿ ಎಲ್ಲರಲ್ಲಿಯೂ ಇದ್ದರೂ ಕಾಣುವ ವ್ಯಕ್ತಿಯ ಹಣ ಅಧಿಕಾರ ಸ್ಥಾನಕ್ಕೆ ಬೆಲೆಕೊಟ್ಟು ನಮ್ಮನ್ನು ಆಳಲು ಬಿಟ್ಟರೆ ಆತ್ಮ ಕಾಣದು.
ಧಾರ್ಮಿಕ ಕ್ಷೇತ್ರದಲ್ಲಿಯೇ ಕೆಲವು ಗುರುವೆನಿಸಿಕೊಂಡವರು
ಆತ್ಮಹತ್ಯೆಗೆ ಶರಣಾಗಿರುವುದನ್ನು ಕೇಳಿದ್ದೇವೆಂದರೆ ಜ್ಞಾನ ಅಂದರೆ ತಿಳುವಳಿಕೆಯಲ್ಲಿಯೇ ದೋಷವಿದೆ. ಅದೂ ಶಿಕ್ಷಣದ ಮೂಲಕವೇ ಸರಿಪಡಿಸಬೇಕಿದೆ. ಎಷ್ಟೋ ಪ್ರತಿಷ್ಟಿತರು ಶ್ರೀಮಂತರು ಈ ಮಹಾಪಾಪಕ್ಕೆ ಬಲಿಯಾಗಿರೋದರ ಹಿಂದೆ ಅಜ್ಞಾನವಿದೆ. ಎಂದರೆ ಅತಿಯಾದ ಅಹಂಕಾರ ಸ್ವಾರ್ಥ ವೂ ಜೀವಕ್ಕೆ ಅಪಾಯ ತಂದರೆ ಅತಿಯಾದ ಶರಣಾಗತಿಯೂ ಜೀವಕ್ಕೆ ಅಪಾಯ.
ಒಟ್ಟಿನಲ್ಲಿ ಜೀವ ಹೋದರೂ ಬರುತ್ತದೆ.ಆದರೆ ಜ್ಞಾನಕ್ಕೆ ಸರಿಯಾದ ಸುಶಿಕ್ಷಣ ನೀಡುವ ಗುರುವಿನ ಅಗತ್ಯವಿದೆ.
ಎಷ್ಟು ಹಣಗಳಿಸಿದರೂ ಸಾಲ-ದು ಎಂದರೆ ಸಾಲವೇ ಅದು. ಸಾಲವೇ ಶೂಲ. ವಿದ್ಯಾರ್ಥಿಗಳು ಸಾಲ ಮಾಡಿ ಉನ್ನತ ಶಿಕ್ಷಣ ಪಡೆದರೂ ಸರಿಯಾದ ಕೆಲಸವಿಲ್ಲ ಜೀವನ ಇಲ್ಲ ಎಂದರೆ ಆತ್ಮಹತ್ಯೆಗೆ ಶರಣಾಗುವರೆಂದರೆ ವಿದ್ಯೆ ಅವಿದ್ಯೆ ಆಗುತ್ತಿದೆ ಎಂದರ್ಥ.
ಅವಿದ್ಯೆ ಅಜ್ಞಾನಕ್ಕೆ ಕಾರಣವಾಗಿದೆ.ಅಂದರೆ ಜೀವಾತ್ಮನ ಬಗ್ಗೆ ಅರಿವಿರದ ವಿದ್ಯೆ ಪರಮಾತ್ಮನೆಡೆಗೆ ಹೋಗಲಾಗದೆ ಮಧ್ಯೆದಲ್ಲಿಯೇ ಆತ್ಮಹತ್ಯೆಗೆ ಶರಣಾದರೆ ಇದರರ್ಥ ಶಿಕ್ಷಣದಲ್ಲಿ ದೋಷವಿದೆ.
ಶಿಕ್ಷಣವಿಲ್ಲದವರೆ ಮಹಾತ್ಮರಾಗಿದ್ದರು. ಈಗ ಶಿಕ್ಷಣ ಪಡೆದು ಪಾಪಾತ್ಮರಾಗುತ್ತಿದ್ದಾರೆಂದರೆ ಜೀವನದಲ್ಲಿ ಹೊರಮುಖದ ಸತ್ಯವಷ್ಟೆ ಕಾಣುತ್ತಿದೆ.ಒಳಮುಖದ ಸುಜ್ಞಾನವಿಲ್ಲದವರು ಆತ್ಮಹತ್ಯೆಗೆ ಜಾರುತ್ತಿದ್ದು ಇದನ್ನು ಪ್ರಚೋದಿಸುವುದೂ ಮಹಾಪರಾಧ. ಹಿಂದೆ ಕಾನೂನಿನ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಪಟ್ಟವರಿಗೆ ಶಿಕ್ಷೆ ಆಗುತ್ತಿತ್ತು.ಈಗ ರಾಜಾರೋಷವಾಗಿ ಹತ್ಯೆ ನಡೆಯುತ್ತಿದೆ ಎಂದರೆ, ಕಲಿಕೆಯಲ್ಲಿ ಸತ್ಯವಿಲ್ಲ ಧರ್ಮ ವೂ ಇಲ್ಲದೆ ಅಜ್ಞಾನ ಮಿತಿಮೀರಿದೆ.
ಈ ವಿಚಾರದ ಬಗ್ಗೆ ಧಾರ್ಮಿಕ ವರ್ಗ ಚರ್ಚೆ ಮಾಡುವುದು ಉತ್ತಮ . ಮಕ್ಕಳ ಭವಿಷ್ಯ ಅವರಿಗೆ ಕೊಡುವ ಶಿಕ್ಷಣದ ಮೇಲಿದೆ. ಉತ್ತಮ ಪ್ರಜೆಗಳಾಗಲು ಸಹಕರಿಸುವ ಸುಜ್ಞಾನ ನೀಡದೆ ಮಕ್ಕಳನ್ನು ಬೆಳೆಸಿ ದೇಶವನ್ನು ನಡೆಸಿ ಎಂದರೆ ಭ್ರಷ್ಟ ದುಷ್ಟರ ವಶದಲ್ಲಿ ಜೀವನ ನಡೆಸಬೇಕಾಗುತ್ತದೆ.
ಕಣ್ಣಿಗೆ ಕಾಣೋದೆಲ್ಲಾ ಸತ್ಯವಿರದು ಕಾಣದ ಕೈಗಳ ಷಡ್ಯಂತ್ರ ಹೊರಬಂದರೂ ಹಣದಿಂದ ಮರೆಮಾಚುವುದಾದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ.
ಆತ್ಮಹತ್ಯೆ ಮಹಾಪಾಪ ಎಂದು ಹೇಳುವ ಸನಾತನ ಧರ್ಮ ವನ್ನು ಅರ್ಥ ಮಾಡಿಕೊಳ್ಳಲು ಸೋತಿರುವ ಶಿಕ್ಷಣ ವ್ಯವಸ್ಥೆ ಇಂದು ಮಕ್ಕಳನ್ನು ಆತ್ಮಹತ್ಯೆಗೆ ತಳ್ಳಿ ಹಣ ಮಾಡುವ ದಂದೆಗೆ ಇಳಿದಿರೋದೆ ಅಜ್ಞಾನವಾಗಿದ್ದರೂ ಅದನ್ನು ಪ್ರಚೋಧಿಸುವ ಸ್ವಾತಂತ್ರ್ಯ ಕೊಟ್ಟವರಿಗೆ ಮಣೆ ಹಾಕುವುದು ಹೇಡಿಗಳ ಲಕ್ಷಣ. ಸಣ್ಣಸಣ್ಣ ಮಕ್ಕಳೂ ಇಂತಹ ಹೇಯಕೃತ್ಯಕ್ಕೆ ಇಳಿಯುತ್ತಿದ್ದರೂ ಸಮಾಜ ಸುಧಾರಕರು ಸರ್ಕಾರ ಸರಿಯಿಲ್ಲ ಎಂದು ಜಾರಿಕೊಳ್ಳುವುದು ಸುಲಭವಾಗಿದೆ.ಆದರೆ ಸರ್ಕಾರ ಎಂದರೆ ಸಹಕಾರ ಎಂದರ್ಥ ಎನ್ನುವ ಸಾಮಾನ್ಯಜ್ಞಾನವಿದ್ದರೆ ಪೋಷಕರ ಸಹಕಾರ ಪ್ರಜೆಗಳ ಸಹಕಾರವೇ ಎಲ್ಲಾ ಅನಾಹುತಗಳಿಗೆ ಕಾರಣ ಎನ್ನುವ ಸತ್ಯವರಿತರೆ ಉತ್ತಮ ಬದಲಾವಣೆ ಒಳಗಾಗಬಹುದಲ್ಲವೆ?
ಕುಣಿಯಬಾರದವ ನೆಲಡೊಂಕು ಎಂದಂತೆ ತಮ್ಮದೇ ನಿರ್ಲಕ್ಷ್ಯ ಕ್ಕೆ ಸರ್ಕಾರವನ್ನು ಮುಂದಿಟ್ಟುಕೊಂಡು ಜಿರಳೆಗಳ ತಂಡ ದೇಶವನ್ನು ಮಾತ್ರವಲ್ಲ ವಿದ್ಯಾರ್ಥಿಗಳನ್ನೂ ಆಳಲು ಹೊರಟಿರೋದು ದೇಶಕ್ಕೆ ಮಾರಕವಷ್ಟೆ.
ನೀಟಾಗಿ ತಮ್ಮ ತಮ್ಮ ಜ್ಞಾನದಿಂದ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದ ನಮ್ಮ ಹಿಂದಿನ ಮಹಾತ್ಮರೆಲ್ಲಿ? ತಮ್ಮ ಸ್ವಂತ ಬುದ್ದಿ ಜ್ಞಾನವನರಿಯದೆ ಯಾರದ್ದೋ ಜ್ಞಾನಕ್ಕೆ ಶರಣಾಗಿ ನೀಟಾಗಿ ಹಿಂದೆ ನಡೆದ ಇಂದಿನ ಯುವಪೀಳಿಗೆಯೆಲ್ಲಿ? ವಿರುದ್ದ ದಿಕ್ಕಿನಲ್ಲಿ ಶಿಕ್ಷಣದ ವಿಷಯವೇ ಬದಲಾಗಿರುವಾಗ ಆತ್ಮಜ್ಞಾನ ಬರುವುದೆ? ಆತ್ಮಜ್ಞಾನವಿಲ್ಲದವರಷ್ಟೆ ಆತ್ಮಹತ್ಯೆಗೆ ಶರಣಾಗೋದು. ಎಂದರೆ ಇಂದಿನ ಶಿಕ್ಷಣವು ಮಕ್ಕಳ ಜ್ಞಾನವನ್ನು ಗುರುತಿಸಲು ಸೋತಿದೆ.
ಆತ್ಮನಿರ್ಭರ ಭಾರತಕ್ಕೆ ಬೇಕಾಗಿದೆ ಭಾರತೀಯ ಮಕ್ಕಳಿಗೆ ಆತ್ಮಜ್ಞಾನದ ಸುಶಿಕ್ಷಣ. ಇದನ್ನು ಕೊಡದೆ ಆಳಿದರೆಮಕ್ಕಳ ಆತ್ಮಹತ್ಯೆಯ ಜೊತೆಗೆ ಪೋಷಕರೂ ಸೇರಬೇಕಾಗತ್ತದೆ. ಇದನ್ನು ಸರ್ಕಾರ ಸರಿಪಡಿಸಲಾಗದ ಪರಿಸ್ಥಿತಿ ಯಲ್ಲಿ ಪ್ರಜಾಪ್ರಭುತ್ವ ಬಂದುನಿಂತಿದೆ. ಅರಿವಿದ್ದವರು ಎಚ್ಚರವಾದರೆ ಆತ್ಮರಕ್ಷಣೆಯಾಗಬಹುದು. ಜೀವ ಯಾವಾಗ ಬೇಕಾದರೂ ಹೋಗಬಹುದು ಆದರೆ ಆತ್ಮಜ್ಞಾನವಿಲ್ಲದೆ ಜೀವ ಹೋದರೆ ಅತಂತ್ರಸ್ಥಿತಿಗೆ ತಲುಪಿ ಭೂಮಿಯು ಅತೃಪ್ತ ಆತ್ಮಗಳ ಸಾಮ್ರಾಜ್ಯ ವಾಗುವುದೆನ್ನುವುದು ಸನಾತನ ಧರ್ಮ. ಇದಕ್ಕೆ ಇದನ್ನು ಕಲಿಯುಗ ಎಂದಿರೋದು. ಯಾವುದನ್ನು ಕಲಿತರೆ ಆತ್ಮಕ್ಕೆ ತೃಪ್ತಿ ಸಿಗುವುದೋ ಅದೇನಿಜವಾದ ವಿಜ್ಞಾನ. ಇದು ಆಧ್ಯಾತ್ಮ ಸಂಶೋಧನೆಯಿಂದರಿತು ಮಹಾತ್ಮರಾದವರ ದೇಶದಲ್ಲಿ ಇಂದು ಆತ್ಮಹತ್ಯೆಗೆ ಕೋಟಿ ರೂ ಬೆಲೆಕಟ್ಟಲಾಗುತ್ತಿದೆ ಎಂದರೆ ಕೋಟಿ ಕೊಟ್ಟರೆ ಸತ್ತ ಜೀವ ಬರುವುದೆ? ಇದ್ದ ಜೀವಕ್ಕೆ ಸರಿಯಾದ ಸಂಸ್ಕಾರದ ಶಿಕ್ಷಣ ಕೊಡಲು ಹಣವಿಲ್ಲದೆ ಪರದಾಡುವವರೆಷ್ಟೋ ಜನರಿಗೆ ಹಣ ಸದ್ಬಳಕೆಯಾಗಿದ್ದರೆ ಆತ್ಮನಿರ್ಭರ ವಾಗುತ್ತಿತ್ತು.
ಸಣ್ಣವರಿರುವಾಗಲೇ ಜೀವನದ ಗುರಿಯತ್ತ ನಡೆಸೋದೆ ಶಿಕ್ಷಣ.
ಇದು ಭಾರತೀಯ ಶಿಕ್ಷಣವಾಗಿತ್ತು.ವಿದೇಶಿ ವ್ಯಾಮೋಹದೆಡೆಗೆ ನಡೆಸುತ್ತಾ ಆರೋಗ್ಯ ಹಾಳು ಮಾಡಿಕೊಂಡು ಸಾಯುವ ಎಷ್ಟೋ ಮಕ್ಕಳು ಲೆಕ್ಕಕ್ಕಿಲ್ಲದೆ ಮರೆಯಾಗುತ್ತಿದ್ದಾರೆ. ಇದು ಮಾಧ್ಯಮದವರೆಗೆ ಬಂದರೂ ಪ್ರಚಾರವಾಗೋದಿಲ್ಲ. ಆದರೆ ದೇಶವಿರೋಧಿಗಳ ಒಂದೊಂದು ಹೋರಾಟಗಳು ಮನೆಮನೆ ತಲುಪಿಸುತ್ತದೆ ಎಂದರೆ ಎಲ್ಲಾ ಸುದ್ದಿಗಳು ದೇಶಕ್ಕೆ ಒಳ್ಳೆಯದು ಮಾಡಿದೆಯೆ?ಅಥವಾ ಅದೇ ಅಪಾಯಕ್ಕೆ ದಾರಿ ಮಾಡಿದೆಯೆ?
ಹಣವಿದ್ದರೆ ಹೆಣಕ್ಕೂಬೆಲೆ ಎಂದರೆ ಹೆಣ ಹಿಡಿದು ಹಣ ಮಾಡೋರು ಮಾನವರಾಗಿರಲಾಗದು. ಅಸುರಿಗುಣವಿರುವವರಿಗೆ ಯಾರ ಜೀವವೂ ಮುಖ್ಯವಾಗಿರದು.
ನಾನಿರುವೆ ಎಂದು ಜನ್ಮ ಪಡೆದ ಇರುವೆಯಷ್ಟು ಸಾತ್ವಿಕ ಸಣ್ಣ ಜ್ಞಾನವಿದ್ದ ಮಗುವಿಗೆ ನಾಜಿರಳೆಯ ವಶದಲ್ಲಿ ಸಿಲುಕಿರುವ ಸತ್ಯದ ಅರಿವಾಗದಿರೋದೆ ದುರಂತಕ್ಕೆ ಕಾರಣ.ಪೋಷಕರು ಮಕ್ಕಳನ್ನು ಯಾರ ವಶಕ್ಕೆ ಬಿಟ್ಟರು? ಆತ್ಮಾವಲೋಕನ ಭಾರತೀಯರಿಗೆ ಅಗತ್ಯವಿದೆ.
ಸತ್ಯ ತಿಳಿಸೋದೆ ತಪ್ಪು ಎನ್ನುವ ರಾಜಕೀಯದಲ್ಲಿ ಆತ್ಮಹತ್ಯೆಗಳು ಬೆಳೆಯುತ್ತಿದೆ ಎಂದರೆ ಮಕ್ಕಳ ಗತಿ ಅಧೋಗತಿ ಯಾದರೂ ಸತ್ಯ ಅರ್ಥ ವಾಗದ ಅಜ್ಞಾನ ಆವರಿಸಿದೆ ಎಂದರ್ಥ.
ಧಾರ್ಮಿಕ ವರ್ಗ ಇದಕ್ಕೆ ಏನು ಪ್ರತಿಕ್ರಿಯಿಸಬಹುದು?
ದೇಶದೊಳಗೆ ಇದ್ದು ರಾಜಕೀಯ ಬೇರೆ ಧರ್ಮ ಬೇರೆ ಎಂದರೆ ಅಧ್ವೈತ ವಾಗದೆ ಧ್ವೈತ ದ ದ್ವಂದ್ವ ಭಿನ್ನಾಭಿಪ್ರಾಯ ಅಂತರ ದ್ವೇಷ ಹರಡುವವರಿಗೆ ನಾವೇ ಸಹಕಾರಕೊಟ್ಟಂತೆ.
ನಾನಿರುವೆ ಎನ್ನುವ ಇರುವೆಯಷ್ಟು ಅರಿವಿದ್ದ ಸಾತ್ವಿಕ ಗುಣದ ಮಕ್ಕಳನ್ನು ಹೊರಗೆಳೆದು ನಾಜಿರಳೆ ಎನ್ನುವ ತಾಮಸಿಕರ ಕೈಗೊಂಬೆಯಾಗಿಸಿರೋದು ಯಾವ ಪ್ರಗತಿ? ವೈಚಾರಿಕತೆಯ ಹಿಂದಿನ ವಿಜ್ಞಾನ ಗುರುತಿಸದ ಶಿಕ್ಷಣ ವೈಧ್ಯಕೀಯ ಶಿಕ್ಷಣದವರೆಗೂ ಬೆಳೆದಾಗ ಆತ್ಮಹತ್ಯೆಗಳಾಗೋದು ಸಹಜ.ಕಲಿಕೆಯ ಪ್ರಭಾವ ಕಲಿಯುಗವಾಗುತ್ತಿದೆ. ಪೋಷಕರು ಎಚ್ಚರವಾಗದಿದ್ದರೆ ಮಕ್ಕಳ ಗತಿ ಅಧೋಗತಿ.
ಒಂದು ಜೀವ ರಕ್ಷಣೆ ಮಾಡುವಷ್ಟು ಜ್ಞಾನ ಪಡೆಯಲು ವೈಧ್ಯಕೀಯ ಕ್ಷೇತ್ರ ಆರಿಸಿಕೊಂಡವರೆ ತನ್ನ ಜೀವದ ಬೆಲೆ ಅರಿಯದಿದ್ದರೆ ಏನರ್ಥ?
ಭಗವತಿ
ಬೆಂಗಳೂರು