" ಕಠೋರವೆನಿಸಿದರೂ ವಾಸ್ತವಸತ್ಯ ಇದಾಗಿದೆ. ಪ್ರಜಾಪ್ರಭುತ್ವ ರಾಜಪ್ರಭುತ್ವವಾಗೋ ಮೊದಲು ಎಚ್ಚರವಾದರೆ ಉತ್ತಮ ತತ್ವ ಕಾಣಬಹುದಷ್ಟೆ. ಆಗೋದನ್ನು ತಡೆಯಲಾಗದು ಆಗಿದ್ದಕ್ಕೆ ಕಾರಣ ತಿಳಿಯಬಹುದು. ಬೇಡದ್ದು ಮಾಡಿದರೆ ಆಗಬಾರದ್ದೇ ಆಗೋದೆನ್ನುವುದು ಎಲ್ಲರಿಗೂ ಅನ್ವಯಿಸುತ್ತದೆ. ಇದನ್ನು ಹಣದಿಂದ ಸರಿಪಡಿಸಲಾಗದು. ಕರ್ಮಕ್ಕೆ ತಕ್ಕಂತೆ ಫಲ.
ಗಾಂಧಿ ಹೆಸರಿನಲ್ಲಿರುವ ಯೋಜನೆಗಳ ಹೆಸರನ್ನು ಬದಲಾಯಿಸಬಹುದು.ಆದರೆ ದೇಶದೊಳಗೆ ಚಲಾವಣೆಯಲ್ಲಿರುವ ನೋಟ್ ಗಳಲ್ಲಿ ಇರುವ ಗಾಂಧೀಜಿ ಚಿತ್ರ ಯಾರಾದರೂ ಅಳಿಸಬಹುದೆ?
ಪ್ರತಿಯೊಂದು ಮನೆಯಲ್ಲಿಯೂ ಪೂಜಿಸಲಾಗುತ್ತಿರುವ ಈ ಹಣವನ್ನು ಬದಲಾಯಿಸುವ ಯೋಜನೆ ಜಾರಿಗೆ ತರಲು ಸಾಧ್ಯವೆ?
ಹಣಕ್ಕಾಗಿಯೇ ರಾಜಕೀಯ ನಡೆಸುವವರನ್ನು ಜನರು ಆಯ್ಕೆ ಮಾಡಿಕೊಂಡು ಯಾರೋ ವ್ಯಕ್ತಿಯಿಂದ ದೇಶ ಹಾಳಾಗಿದೆ ಎಂದು ಪ್ರಚಾರ ಮಾಡುತ್ತಿದ್ದರೆ ಸತ್ಯ ಹೊರಬರದೆ ಇನ್ನಷ್ಟು ಭ್ರಷ್ಟ ದುಷ್ಟರು ಬೆಳೆಯಬಹುದು.ಎಲ್ಲಿ ನೋಡಿದರೂ ಹೆಸರಿಗೆ ಹಣಕ್ಕೆ ಅಧಿಕಾರಕ್ಕೆ ಪೈಪೋಟಿ ಇರೋವಾಗ ಜನರೊಳಗೇ ಅಡಗಿರುವ ಜ್ಞಾನವನ್ನು ಗುರುತಿಸದೆ ಅಜ್ಞಾನವೇ ತಾಂಡವವಾಡುತ್ತದೆ.ಇದು ಕಲಿಯುಗ ಬೇಲಿಯೇ ಎದ್ದು ಹೊಲಮೇಯ್ದರೂ ಅದನ್ನು ಕರ್ಮ ಫಲ ಎಂದು ಸುಮ್ಮನಿರಬೇಕೆನ್ನುವವರೆ ಭ್ರಷ್ಟಾಚಾರ ನಡೆಸಿ ಸಹಕರಿಸಿ ಮುಂದೆ ನಡೆಯುವಾಗ ನಮ್ಮ ಹೆಸರಿನಲ್ಲೇ ಅಡಗಿರುವ ದೈವಶಕ್ತಿ ಕಾಣೋದಿಲ್ಲ. ಅದಕ್ಕೆ ಅಸುರರ ಹೆಸರು ಪ್ರಸಿದ್ದವಾಗಿರೋದು.
ಸುಪ್ರಸಿದ್ದ ಕುಪ್ರಸಿದ್ದರಿಬ್ಬರೂ ಪ್ರಸಿದ್ದರೆ ಆದರೂ ಸಿದ್ದಿ ಯಾರಿಂದ ಸಿಕ್ಕಿದೆ ಎನ್ನುವ ಬಗ್ಗೆ ಚಿಂತನೆ ನಡೆಸೋದು ಕಷ್ಟ.
ಎಲ್ಲಿಯವರೆಗೆ ಸಿದ್ದಪುರುಷರ ಜ್ಞಾನದ ಸದ್ಗುಣಗಳನ್ನು ಗುರುತಿಸುವ ಆತ್ಮಜ್ಞಾನ ಮಾನವನಲ್ಲಿರದೋ ಅಲ್ಲಿಯವರೆಗೆ ಈ ರೀತಿಯ ನಾಟಕಗಳು ನಡೆಯುತ್ತಲೇ ಇರುತ್ತದೆ.
ಉದ್ಯೋಗಂ ಪುರುಷಲಕ್ಷಣಂ ಎನ್ನುತ್ತಿದ್ದವರು ಉದ್ಯೋಗಂ ಸ್ತ್ರೀ ಲಕ್ಷಣಂ ಎನ್ನುವ ಹಂತಕ್ಕೆ ಬಂದಿರೋದೇ ಭಾರತೀಯರ ಈ ಸ್ಥಿತಿಗೆ ಕಾರಣ.
ಹಿಂದೆ ದೊಡ್ಡ ಕುಟುಂಬದ ಜವಾಬ್ದಾರಿ ಒಬ್ಬನೇ ಹೊತ್ತು ಹೋಗುತ್ತಿದ್ದರು ಈಗ ಸಂಸಾರ ಬಿಟ್ಟು ಸಮಾಜದ ಋಣದಲ್ಲಿ ಹಣದಲ್ಲಿ ಬಲದಲ್ಲಿ ತನ್ನ ಜೀವ ಉಳಿಸಿಕೊಳ್ಳಲು ಭ್ರಷ್ಟ ದುಷ್ಟರ ಹಿಂದೆ ನಡೆಯುವರೆಂದರೆ ಅಜ್ಞಾನ ಮಿತಿಮೀರಿದೆ.
ಸತ್ಯವನ್ನು ರಾಜಕೀಯದಲ್ಲಿ ತಿಳಿಯುವುದಕ್ಕೂ ರಾಜಯೋಗದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ಬಹಳ ಅಂತರವಿದ್ದು ಆ ಅಂತರದಲ್ಲಿ ಕಣ್ಣಿಗೆ ಮಣ್ಣೆರಚಿ ಆಳುವವಗೆ ಅನ್ಯದೇಶದವರಿಗೆ ನಮ್ಮಲ್ಲಿ ಉಚಿತವಾಗಿ ಸನ್ಮಾನಗಳಾಗುತ್ತಿದೆ. ಯಾವುದೋ ಹೊರದೇಶದ ಪ್ರಸಿದ್ದ ವ್ಯಕ್ತಿಯನ್ನು ಕರೆಸಿಕೊಂಡು ಜನರನ್ನು ದಾರಿತಪ್ಪಿಸುವ ಸ್ವಾತಂತ್ರ್ಯ ರಾಜಕಾರಣಿಗಳು ಪಡೆದಿರುವರೆಂದರೆ ನಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಎಂದರ್ಥ. ಒಟ್ಟಿನಲ್ಲಿ ಎಲ್ಲವೂ ರಾಜಕೀಯದ ಪ್ರೇರಣೆಯಂತೆ ನಡೆದರೂ ನಮ್ಮ ಸಮಸ್ಯೆ ಗೆ ಪರಿಹಾರ ಸಿಗೋದು ನಮ್ಮ ಬದಲಾವಣೆಯಿಂದಷ್ಟೆ. ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿರದು. ಆತ್ಮವೆಂದರೇನೆಂಬುದರ ಅರಿವಿಲ್ಲದವರನ್ನು ಚೆನ್ನಾಗಿ ಆಳಬಹುದು.ಹೀಗಾಗಿ ಅಜ್ಞಾನದ ಜನರಿಗೆ ಇನ್ನಷ್ಟು ಅಜ್ಞಾನ ತುಂಬಿ ಹೊರಗೆ ಕುಣಿಸಿ ಕುಡಿಸಿ ಮೆರೆಸಿದರೆ ಸಂಸಾರ ಹದಗೆಟ್ಟುಹೋಗುವಾಗ ಯಾರೂ ಸರಿಪಡಿಸಲಾಗದು.ಹೊರಗಿನನ್ಯಾಯಾಲಯದಲ್ಲಿಯೂ ಹಣವಿಲ್ಲದೆ ನ್ಯಾಯ ನೀಡೋದಿಲ್ಲ ಎಂದಾಗ ಮೇಲಿರುವ ನ್ಯಾಯಾಧೀಶನಿಗೆ ಶರಣಾಗೋದು ಉತ್ತಮ.ಆಗಹಣವೂ ಸದ್ಬಳಕೆಯಾಗುತ್ತದೆ.
ಯಾರೋ ಒಬ್ಬ ವ್ಯಕ್ತಿಯಿಂದ ದೇಶ ಹಾಳಾಗೋದಿಲ್ಲ ಉಳಿಯೋದೂ ಇಲ್ಲ. ದೇಶದ ಒಳಗಿರುವ ಎಲ್ಲರ ಜ್ಞಾನಶಕ್ತಿಯಿಂದ ಎಲ್ಲಾ ನಡೆದಿರುವಾಗ ನಮ್ಮೊಳಗೇ ಇರುವ ವಿದೇಶಿ ವಿಜ್ಞಾನದ ಶಿಕ್ಷಣವು ವ್ಯವಹಾರಕ್ಕೆ ಸಹಕಾರ ಕೊಟ್ಟರೂ ಧರ್ಮದ ಪ್ರಕಾರ ನಮ್ಮ ಆತ್ಮರಕ್ಷಣೆಗೆ ಪೂರಕವಾಗಿದೆಯೆ? ಇದರ ಬಗ್ಗೆ ಧಾರ್ಮಿಕ ಕ್ಷೇತ್ರ ಶಿಕ್ಷಣ ಕ್ಷೇತ್ರ ಸಾಹಿತ್ಯ ಕ್ಷೇತ್ರ ಗಮನ ಕೊಡುವುದು ಅಗತ್ಯವಿದೆ.
ಅಲ್ಲಿಯೂ ಚುನಾವಣೆಯಲ್ಲಿ ಹಣದ ಪ್ರಭಾವವೇ ಮೇಲುಗೈ ಸಾಧಿಸಿದರೆ ಜ್ಞಾನಿಗಳ ಗತಿ ಅಧೋಗತಿ.ಭಾರತ ವಿಶ್ವಗುರು ಎನಿಸಿಕೊಂಡಿದ್ದು ಆತ್ಮಜ್ಞಾನದಿಂದ ಆದರೆ ಇಂದಿದು ಹೊರಗಿನವರ ವಿಜ್ಞಾನದೆಡೆಗೆ ಹೊರಟು ದೇಶದಲ್ಲಿ ತನ್ನ ಮೂಲ ಶಿಕ್ಷಣವನ್ನು ಕೊಡಲಾಗದ ಸ್ಥಿತಿಗೆ ಬಂದಿರೋದು ಆತ್ಮನಿರ್ಭರಕ್ಕೆ ಪೂರಕವೇ ಮಾರಕವೇ?
ಯಾವುದೇ ಪಕ್ಷ ಬಂದರೂ ದೇವಸ್ಥಾನಗಳನ್ನು ಸರ್ಕಾರದ ವಶದಿಂದ ಬಿಡಿಸಲಾಗಿಲ್ಲ ದೇಶೀಯ ಶಿಕ್ಷಣವನ್ನು ಕೊಡಲಾಗಿಲ್ಲ ಎಂದರೆ ನಮ್ಮ ಚಿತ್ತ ವಿದೇಶಿಯತ್ತ. ಇದರಿಂದ ವಿದೇಶಿಗರಿಗೆ ಸಿಗುತ್ತಿರುವ ಸನ್ಮಾನ ನಮ್ಮವರಿಗಿಲ್ಲ.
ಕಣ್ಣೊರೆಸುವ ನಾಟಕವಾಡುವವರಿಗೆ ಕಣ್ಣೀರಿನ ಬೆಲೆ ಕಟ್ಟಲಾಗದು. ಕಣ್ಣೀರಿನ ಫಲವೇ ಅತೃಪ್ತ ಆತ್ಮಗಳಾಗಿ ನಿಂತು ಬೇಡುತ್ತಿರುವ ಜನರಾಗಿರುವರು. ಇವರನ್ನು ತೃಪ್ತಿ ಪಡಿಸಲು ಉತ್ತಮ ಜ್ಞಾನದ ಶಿಕ್ಷಣ ನೀಡುವುದೇ ಉಪಾಯ.
ಎಲ್ಲದ್ದಕ್ಕೂ ಪರಮಾತ್ಮನೇ ಉಪಾಯವಾಗಿರುವನು. ಮೇಲಿರುವ ಅವನ ಬಿಂದುಗಳಲ್ಲಿ ಅಡಗಿರುವ ಆತ್ಮಶಕ್ತಿ ಜಾಗೃತವಾದಾಗಲೇ ಭೂಮಿಯಲ್ಲಿ ಶಾಂತಿ ನೆಲೆಸಲು ಸಾಧ್ಯ.
ಶಿಕ್ಷಣವೇ ಹೊರಮುಖವಾಗಿದ್ದು ಹಣವೇ ಸರ್ವಸ್ವ ವಾದಾಗ
ಎಲ್ಲಿಯ ಬದಲಾವಣೆ?
ಶ್ರೀ ಕೃಷ್ಣ ನೇ ತಿಳಿಸಿದಂತೆ ಕಲಿಯುಗದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಸತ್ಯದರ್ಶನ ನಮ್ಮ ಅಂತರಂಗ ಶುದ್ದಿಯಿಂದಷ್ಟೆ ಕಾಣಬಹುದು.
ಸ್ವಚ್ಚಭಾರತಕ್ಕೆ ಸ್ವಚ್ಚ ಶಿಕ್ಷಣ ಅಗತ್ಯವಿದೆ. ಪೋಷಕರೆ ಮಕ್ಕಳ ಜೊತೆಗೆ ಹಣವನ್ನು ಕೊಟ್ಟು ಗುಲಾಮಗಿರಿಗೆ ಸಹಕರಿಸಿದರೆ ಗುಲಾಮರಿಂದ ಬಿಡಿಸಿಕೊಳ್ಳಲು ಸಾಧ್ಯವೆ? ಇಲ್ಲಿ ಗುಲಾಮರು ಯಾರು? ವಿದೇಶಿ ಕಂಪನಿ,ವ್ಯವಹಾರ,ಸಾಲ,ಬಂಡವಾಳದ ಜೊತೆಗೆ ಒಪ್ಪಂದಕ್ಕೆ ನಮ್ಮವರು ಇಳಿದಾಗ ದೇಶದ ತುಂಬಾ ಅವರದೇ ಸಾಮ್ರಾಜ್ಯ. ಇದನ್ನು ಹಿಂದೆ ಬ್ರಿಟಿಷ್ರೂ ಮಾಡಿತೋರಿಸಿದ್ದಾರೆ.ಈಗ ಅವರದೇ ಶಿಕ್ಷಣ ವ್ಯವಹಾರ ಭಾಷೆ ಮಾಧ್ಯಮಗಳ ಮೂಲಕ ರಾಜಾರೋಷವಾಗಿ ರಾಜಕಾರಣಿಗಳು ನಡೆಸಿರುವರಷ್ಟೆ.ಇದನ್ನು ಪ್ರಗತಿ ಎನ್ನುವ ಭ್ರಮೆಯಲ್ಲಿ ನಾವು ಸಹಕಾರ ನೀಡುತ್ತಾ ಮೇಲಕ್ಕೇರಿಸಿ ನಮ್ಮೊಳಗೇ ಇದ್ದ ಶುದ್ದ ಸತ್ಯ ಸತ್ವ ತತ್ವಕ್ಕೆ ವಿರುದ್ದವಿರುವಾಗ ನಾವು ಗುಲಾಮಗಿರಿಗೆ ತಲೆಬಾಗಬೇಕಿದೆ.
ದೇಶ ಸುತ್ತು ಕೋಶ ಓದು ಎನ್ನುವುದೇ ತಪ್ಪು. ಯಾವ ದೇಶ ಸುತ್ತಬೇಕು ಯಾರ ಕೋಶ ಓದಬೇಕೆಂಬ ಅರಿವಿಲ್ಲದಿದ್ದರೆ ಮನಸ್ಸು ಮನೆಯೊಳಗೆ ಇರೋದಿಲ್ಲ.
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂದರೆ ನಮ್ಮಲ್ಲಿ ಆತ್ಮಜ್ಞಾನವಿದೆಯೆ ಇಲ್ಲವೆ ಎನ್ನುವುದು.
ನಾವೇ ನಮ್ಮನ್ನು ಅರ್ಥ ಮಾಡಿಕೊಳ್ಳಲು ಸೋತಾಗ ಅನ್ಯರು ಸುಲಭವಾಗಿ ಆಳುವರು. ಇದು ಇಂದಿನ ಭಾರತದ ಸ್ಥಿತಿಗೆ ಕಾರಣ.
ಯಾರು ಹಿತವರು ನಿಮಗೆ ಈ ಮೂವರೊಳಗೆ?
ದೇವರು ಮಾನವರು ಅಸುರರು
ಆಕಾಶ ಭೂಮಿ ಪಾತಾಳ
ಪುರುಷ ಸ್ತ್ರೀ ಮಕ್ಕಳು
ಬ್ರಹ್ಮ ವಿಷ್ಣು ಮಹೇಶ್ವರ
ಈ ಮಧ್ಯವರ್ತಿಗಳು ಆ ಕಡೆ ಈ ಕಡೆ ಸಮಾನವಾಗಿ ನೋಡುವ ಹೊತ್ತಿಗೆ ಕಾಲಮುಗಿದಿರುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎನ್ನುವುದನ್ನು ಯಾರಿಗೂ ತಪ್ಪಿಸಲಾಗದು.
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಪುರುಷರ ಅಜ್ಞಾನವು ಸ್ತ್ರೀ ಯರ ಸುಜ್ಞಾನವನ್ನು ಅಲ್ಲಗೆಳೆದಷ್ಟೂ ಸಮಸ್ಯೆಯಿಂದ ಬಿಡುಗಡೆ ಸಿಗದು. ಜ್ಞಾನದೇವತೆಗೇ ಎದುರು ನಿಂತರೆ ಅಜ್ಞಾನವೇ ಬೆಳೆಯೋದಲ್ಲವೆ? ಜ್ಞಾನವನ್ನು ಹಣದಿಂದ ಅಳೆಯಲು ಹೋದರೂ ಅಜ್ಞಾನವೇ ಬೆಳೆಯೋದು.
ಅಜ್ಞಾನವನ್ನು ಯಾವುದೇ ರಾಜಕೀಯ ಶಕ್ತಿಯಿಂದ ಸರಿಪಡಿಸಲಾಗದು. ಯಾವುದೇ ಅಧಿಕಾರ ದರ್ಪ ಅಸತ್ಯ ಅನ್ಯಾಯದಿಂದ ಜನರನ್ನು ದಾರಿತಪ್ಪಿಸಿ ಆಳಬಹುದು ಆದರೆ ಅದರ ಪ್ರತಿಫಲ ಅಷ್ಟೇ ಕಠೋರವಾಗಿರುತ್ತದೆ ಕಾರಣವಿಷ್ಟೆ ಪರಮಾತ್ಮ ಒಲಿಯೋದು ಜ್ಞಾನಕ್ಕಷ್ಟೆ.ಇದು ಯೋಗಮಾರ್ಗದಲ್ಲಿರಬೇಕು.
ಜ್ಞಾನಯೋಗ, ರಾಜಯೋಗ,ಭಕ್ತಿಯೋಗ, ಕರ್ಮ ಯೋಗದಲ್ಲಿ ರಾಜಕೀಯವಿತ್ತೆ? ಇದ್ದರೂ ಧರ್ಮ ವಿತ್ತು.ಈಗ ಧರ್ಮ ಎಲ್ಲಿದೆ? ಕಾಣದ ದೇವರನ್ನು ಹಿಡಿದು ದೇವಸ್ಥಾನ ಕಟ್ಟಬಹುದು.ಆದರೆ ದೇವರನ್ನು ಅಲ್ಲಿ ಕೂರಿಸುವಷ್ಟು ಶಕ್ತಿ ನಮಗಿರಬೇಕು.ಹಣಕ್ಕಾಗಿ ದೇವರನ್ನು ಬೇಡೋ ಮೊದಲು ಜ್ಞಾನಕ್ಕಾಗಿ ಭಗವಂತನ ಸೇವೆ ಮಾಡೋದು ಸನಾತನ ಧರ್ಮದ ಗುರಿಯಾಗಿದೆ. ಇದನ್ನು ಧಾರ್ಮಿಕ ವರ್ಗದವರು ಅರಿತಾಗಲೇ ವಾಸ್ತವದಲ್ಲಿ ನಾವೆತ್ತ ಸಾಗಿದ್ದೇವೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಭೂಮಿಯ ಮೇಲಿರುವ ಮನುಕುಲಕ್ಕೆ ತನ್ನೊಳಗೆ ಇರುವ ದೈವತ್ವದ ಅರಿವಿಲ್ಲದಿದ್ದರೆ ಅಸುರರೆ ದೇಶದ ಜೊತೆಗೆ ದೇಹವನ್ನು ಆಳೋದು. ಇದರಿಂದಾಗಿ ಕಷ್ಟ ನಷ್ಟ ಯಾರಿಗೆ?