ಹಿಂದುಳಿದವರು ಯಾರು? ಯಾಕೆ?

ಡಾ ಅಂಬೇಡ್ಕರ್ ದಿನಾಚರಣೆಯ ಶುಭಾಶಯಗಳು. ಅಂಬೇಡ್ಕರ್ ರ ಗುರಿ  ಇಂದು  ತಪ್ಪಿ ನಡೆದಿದೆ ಎಂದರೆ  ವಿರೋಧಿಸುವವರು ಹೆಚ್ಚು  ಕೆಲವರಿಗಷ್ಟೆ ಇದರ ಹಿಂದಿನ  ಉದ್ದೇಶ ಅರ್ಥ ವಾಗಿ...

Monday, April 13, 2026

ಹಿಂದುಳಿದವರು ಯಾರು? ಯಾಕೆ?

ಡಾ ಅಂಬೇಡ್ಕರ್ ದಿನಾಚರಣೆಯ ಶುಭಾಶಯಗಳು.
ಅಂಬೇಡ್ಕರ್ ರ ಗುರಿ  ಇಂದು  ತಪ್ಪಿ ನಡೆದಿದೆ ಎಂದರೆ  ವಿರೋಧಿಸುವವರು ಹೆಚ್ಚು  ಕೆಲವರಿಗಷ್ಟೆ ಇದರ ಹಿಂದಿನ  ಉದ್ದೇಶ ಅರ್ಥ ವಾಗಿರಬಹುದು. ಆದರೂ  ಹಿಂದುಳಿದವರನ್ನು ಮೇಲೆತ್ತುವ ಕೆಲಸದಲ್ಲಿ ಸರ್ಕಾರಗಳು‌ನಡೆಸಿರುವ ಕಸರತ್ತು  ಕೆಸ ಎತ್ತುವ ಹಂತಕ್ಕೆ ತಲುಪಿದೆ ಎಂದರೆ ಸರಿಯಾಗಬಹುದು.
ಸ್ವಚ್ಚ ಭಾರತವನ್ನು ಕಸಗುಡಿಸುವುದರ ಮೂಲಕ  ಮಾಡುವ ಕೆಲಸವನ್ನು  ನಿರಂತರವಾಗಿ ‌ನಡೆಸಿದ್ದರೂ ಕಸದ ಸಮಸ್ಯೆ ಬಗೆಹರಿದಿಲ್ಲ ಎಂದರೆ ನಮ್ಮೊಳಗೇ ಇರುವ ಅಜ್ಞಾನವೆ ಇದಕ್ಕೆ ‌ಕಾರಣವಾಗಿದೆ.
 ಅಂದಿನ ಭಾರತದ ಸ್ಥಿತಿಗೂ ಇಂದಿನ ಸ್ಥಿತಿಗೂ ಬಹಳ ಅಂತರವಿದೆ. ಅಂದಿನ  ಬಡತನ ಇಂದಿನ‌ ಬಡತನ  ಸರಿಸಮನಾಗಿದೆ. ಆದರೆ ಅಂದಿನ  ಜ್ಞಾನ ಇಂದಿನ ವಿಜ್ಞಾನ  ಹೆಚ್ಚಾಗಿ ಅಜ್ಞಾನದೆಡೆಗೆ‌ ನಡೆಸಿದೆ ಎಂದಾಗ ದೇಶದ ಪ್ರಜೆಗಳ ಸುಜ್ಞಾನದಿಂದ  ಆತ್ಮನಿರ್ಭರ ಆಗುತ್ತದೆ. ಅಜ್ಞಾನದಿಂದ ದುರ್ಭಲರನ್ನು ದುರ್ಭಳಕೆ ಮಾಡಿಕೊಂಡು ಆಳೋದಕ್ಕೆ ಸುಲಭವಾಗಿರುತ್ತದೆ.
ಇಷ್ಟಕ್ಕೂ ಹಿಂದುಳಿದವರು ಯಾರು? ಹಣವಿಲ್ಲದವರೆ? ಜ್ಞಾನವಿಲ್ಲದವರೆ? ಬೇಡುವವರೆ? ನೀಡುವವರೆ? 
ಮೇಲಿರುವ ಪರಮಾತ್ಮನೆಡೆಗೆ ನಡೆದವರಲ್ಲಿ ಹಣವಿರಲಿಲ್ಲ  ಅವರನ್ನು ಹಿಂದುಳಿದವರೆನ್ನಲಾಗದು.  ಎಷ್ಟು ಕೊಟ್ಟರೂ ಸಾಲದು, ಎಷ್ಟು ಪಡೆದರೂ ಸಾಲದು.ಸಾಲವೇ ಅದು ಎಂದಾಗ ಯಾರಲ್ಲಿ ಹೆಚ್ಚು ಸಾಲ ಇರುವುದೋ ಅವರು ಬಡವರು. ಅವರಿಗೆ ಸರಿಯಾದ ಶಿಕ್ಷಣ ನೀಡಿ ಕೆಲಸ ಕೊಟ್ಟು ದುಡಿದು ತಿನ್ನುವ  ಹಂತಕ್ಕೆ ತರೋದು ಸರ್ಕಾರದ ಕೆಲಸ.
ಇದನ್ನು ಅಂಬೇಡ್ಕರ್  ತಮ್ಮ ಅತ್ಯದ್ಭುತ ಜ್ಞಾನದಿಂದ ತಿಳಿದು  ಬಡವರಿಗೆ ಉಚಿತ ಶಿಕ್ಷಣ ನೀಡಬೇಕೆಂದರು. ಅವರ ಜ್ಞಾನಕ್ಕೆ ಪೂರಕವಾದ ಶಿಕ್ಷಣ ನೀಡಿದ್ದರೆ  ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಉದ್ಯೋಗ  ನಡೆಸಿಕೊಂಡು  ಯಾವುದೇ ಸರ್ಕಾರದ ಹಿಂದೆ ನಿಂತು ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ.
ಆದರೆ ಭಾರತೀಯ ಶಿಕ್ಷಣವನ್ನೇ ದಾರಿತಪ್ಪಿಸಿ ಆಳಿದವರಿಗೆ  ಇದರ ಜ್ಞಾನ ಇರದೆ ಜನಸಾಮಾನ್ಯರನ್ನು  ಎತ್ತಿ ಏಣಿಗೇರಿಸುವ ತಂತ್ರ ನಡೆಸಿ ಸಾಲ ಸೌಲಭ್ಯಗಳನ್ನು ‌ಉಚಿತವಾಗಿ ಸಿಗುವಂತೆ ಮಾಡಿ ಇಂದು ಸಾಲವೇ ಶೂಲ ಆಗಿದೆ. ಇದನ್ನು ತೀರಿಸಲು  ಮತ್ತಷ್ಟು ಸಾಲಕ್ಕೆ ಕೈ ಚಾಚುತ್ತಾ
ಒಂದು ಮನೆ ಸಾಲದು, ಒಂದು  ವಾಹನ ಸಾಲದು‌, ಒಂದು ಸಂಸಾರಕ್ಕೆ ಒಬ್ಬರಿಗೆ ಒಂದು  ಉದ್ದೋಗ   ಸಾಲದು. ಎನ್ನುವ ಹಂತಕ್ಕೆ ಬಂದು ಕುಟುಂಬದವರೆಲ್ಲರಿಗೂ ಮೀಸಲಾತಿ ನೀಡಿದ್ದರೂ ಸಾಲ ತೀರುತ್ತಿಲ್ಲ ಎಂದರೆ ಅರ್ಥ ವೇನು?
ಹಣದ ದುರ್ಭಳಕೆ ಆಗುತ್ತಿದೆ. ಜ್ಞಾನವಿಲ್ಲದೆ ಹಣವನ್ನು ನೀರಿನಂತೆ  ಖರ್ಚು ಮಾಡಿಕೊಂಡು ವೈಭೋಗದೆಡೆಗೆ‌ ನಡೆದರೆ ತೃಪ್ತಿ ಸಿಗದು. ಹೀಗಾಗಿ‌ಕಷ್ಟಪಡದೆ ಸುಖದೆಡೆಗೆ ಮಕ್ಕಳು ‌ಮಹಿಳೆಯರು‌ ಮೊಮ್ಮಕ್ಕಳು ಹೊರಗಿನ‌ಜಗತ್ತಿನಲ್ಲಿ
ಸುತ್ತಿದರೆ ಒಳಗಿನ ಜಗತ್ತಿನ ಸತ್ಯ ಅರ್ಥ ವಾಗದೆ ಮತ್ತದೇ ಜನ್ಮ . ಜಾತಿ  ಜಾತಿ ಎನ್ನುವ  ರಾಜಕೀಯತೆಯ ಹಿಂದೆ ‌ನಡೆದು  ಮಾನವ ಜಾತಿಗೆ ಸುಖವಿಲ್ಲವಾಗಿದೆ. ಇದರಲ್ಲಿ  ಕೆಲವರಿಗಷ್ಟೆ  ಮೀಸಲಾತಿ ಅಗತ್ಯವಿದ್ದರೂ  ಅದನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಇನ್ನಷ್ಟು ಸರ್ಕಾರದ ಋಣ ತಲೆಗೇರಿಸಿಕೊಂಡರೆ ಬಿಡುಗಡೆಗೆ  ಸರ್ಕಾರದ ಸೇವೆ ಮಾಡಬೇಕು. ಸೇವೆಯಲ್ಲಿ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದಾಗಲೇ ಆತ್ಮಕ್ಕೆ ತೃಪ್ತಿ ‌ಮುಕ್ತಿ ಎನ್ನುವ ಆಧ್ಯಾತ್ಮ ಚಿಂತನೆ ನಡೆಸಲು ಇಂದು‌ಕಷ್ಟವಿದೆ.
ಯಾವಾಗ‌ ಮಾನವನಿಗೆ ಸುಖವಾಗಿ ಎಲ್ಲವೂ ದೊರೆಯುವುದೋ  ಆಗ ಸಹಜವಾಗಿ  ಮಾನವ‌ ಕಷ್ಟಪಡದೆ ಸೋಮಾರಿಯಾಗುವನು. ಸೋ, 'ಮಾರಿ 'ಯೂ  ಅವನೊಂದಿಗೆ  ಸೇರುತ್ತಾ‌ ಹಣವನ್ನು  ವೈಧ್ಯರಿಗೆ‌ಕೊಡಬೇಕು.
ವೈಧ್ಯಕೀಯ ಕ್ಷೇತ್ರ ಬೆಳೆದಿರೋದು ಅಜ್ಞಾನದ  ಅಶುದ್ದ ವಿಷಯಾಸಕ್ತಿ, ಆಹಾರ,ವಿಹಾರಗಳ ಜೊತೆಗೆ ಶಿಕ್ಷಣದ ವಿಷಯಗಳಿಂದ ಎಂದರೆ  ನಮ್ಮ ಆರೋಗ್ಯ( ಕಾಮ‌ಕ್ರೋಧ ,ಲೋಭ,ಮೋಹ‌ಮಧ ಮತ್ಸರ) ಉತ್ತಮವಿದ್ದರಷ್ಟೆ ಮಾನವ ಮಹಾತ್ಮನಾಗಬಹುದೆಂದರು.
ಇದಕ್ಕೆ ಸಂಸ್ಕಾರದ ಶಿಕ್ಷಣ ಅಗತ್ಯವಿದೆ ಎಂದರೆ ನಮ್ಮ ಇಂದಿನ ಈ ಪರಿಸ್ಥಿತಿಗೆ‌ ಮೂಲ‌ ಕಾರಣವೇ  ಅನ್ಯ ಭಾಷೆ ಅನ್ಯ ವಿಷಯಗಳಿಂದ ‌ಕೂಡಿದ ಶಿಕ್ಚಣಪದ್ದತಿ.
ತತ್ವ ಬಿಟ್ಟು ತಂತ್ರವೇ ಬೆಳೆದಾಗ ಜೀವನ ಅತಂತ್ರ ಸ್ಥಿತಿಗೆ‌ ಬರುತ್ತದೆ.

ಯಾವುದೇ  ಇರಲಿ ಅತಿಯಾಗಬಾರದು. ಶಿಕ್ಷಣದಲ್ಲಿ ಮೀಸಲಾತಿ  ಕೊಟ್ಟವರಿಗೆ ಅಂಕದಲ್ಲಿಯೂ ಮೀಸಲಾತಿ, ಜೊತೆಗೆ ಉದ್ಯೋಗದಲ್ಲೂ ಮೀಸಲಾತಿ  ಇದರಿಂದಾಗಿ  ಹೊರಬರುವ ಸಮಸ್ಯೆಗಳನ್ನು  ಪರಿಹರಿಸಲು  ಸರ್ಕಾರ ಮತ್ತೆ ಹಣ ನೀಡುತ್ತಾ‌ಬಂದರೆ ಒಳಗಿದ್ದ ಸ್ವಚ್ಚ ಜ್ಞಾನದ ಗತಿ ಅಧೋಗತಿ. ಇದನ್ನು ಸರಿಪಡಿಸಬಹುದೆ?
ಎಲ್ಲಿಗೆ ಹೋದರೂ‌ ಹಿಂದಿರುಗಿ ಬರೋದು ಜ್ಞಾನದ‌ಮೇಲೆ.
ಜನ್ಮತ:  ಪಡೆದು‌ ಬಂದಿರುವ‌  ವಿಶೇಷ‌ಜ್ಞಾನವನ್ನು  ಗುರುತಿಸದೆ  ಜಾತಿಯಿಂದ ಗುರುತಿಸಿ ಶಿಕ್ಷಣ ಸರಿಯಾಗಿ‌ ನೀಡದಯೇ  ಸಾಲ ನೀಡಿ‌ಹಣ ಕೊಟ್ಟರೆ ಅದರ ದುರ್ಭಳಕೆ  ಮಾಡಿಕೊಂಡವರನ್ನೇ  ದೇಶ ಆಳೋದಕ್ಕೂ ಬಿಟ್ಟರೆ  ಯಾರಿಗೆ ಕಷ್ಟ ನಷ್ಟ?
ಉತ್ತಮ  ಜ್ಞಾನ  ಸಂಸ್ಕಾರದ ಶಿಕ್ಷಣದಿಂದ ಸಿಕ್ಕವರು ಇಂದಿಗೂ  ಹಣವಿಲ್ಲದೆಯೂ  ಸಮಾಜದ ಋಣ ತೀರಿಸುವ ಕರ್ಮ ನಡೆಸಿರುವರು. ಆದರೆ  ಓದಿ ಮುಂದೆ ಬಂದ  ಬುದ್ದಿವಂತರು  ಎಲ್ಲೋ ಹೊರದೇಶದಲ್ಲಿ  ದುಡಿಯುತ್ತಿರುವರು.  ದೇಶದ ನೆಲ ಜಲ  ಆಸ್ತಿಬೇಕು  ಆದರೆ ದೇಶದ ಋಣ ತೀರಿಸುವ  ಜ್ಞಾನವಿಲ್ಲ ಎಂದರೆ ನಿಜವಾಗಿ ಹಿಂದುಳಿದವರು ಅಜ್ಞಾನಿಗಳಾಗಿರುವರು.ಅವರವರ ಕರ್ಮಕ್ಕೆ ತಕ್ಕಂತೆ ಫಲ  ಸಿಗೋದು ಸತ್ಯ. ಹಾಗಂತ ನಮ್ಮ ಧರ್ಮ ಬಿಟ್ಟು ನಡೆದರೆ  ಕರ್ಮ ವೂ ನಮ್ಮದಾಗಿರದು ಇದೂ ಸತ್ಯ. ಹೀಗಾಗಿ‌  ಇಂದಿಗೂ‌ಬಡತನ ಎದ್ದು ಕಾಣುತ್ತಿದೆ.
ಬೇಡೋನು ದೀನ ಸ್ಮರಿಸೋನೆ ಜಾಣ ಎಂದಂತೆ ನಾವು ದೇಶದೊಳಗೆ ಇರುವ ಪ್ರಜೆಗಳಾಗಿ  ದೇಶದ ಸಾಲ‌ಅಥವ
ಋಣ. ತೀರಿಸುವುದಕ್ಕೆ ನಮ್ಮ ಸ್ವಂತ ‌ಬುದ್ದಿ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಟ್ಟಿದ್ದರೆ ಸ್ವಾವಲಂಬನೆ ಸ್ವಾಭಿಮಾನ ಸತ್ಯ ಸ್ವತಂತ್ರ ಜ್ಞಾನದಿಂದ ಇದ್ದಲ್ಲಿಯೇ  ಎದ್ದು ನಿಲ್ಲುವ ಆತ್ಮಶಕ್ತಿ  ಬರುತ್ತದೆ. ಒಟ್ಟಿನಲ್ಲಿ ಹಣದಿಂದ  ಹಿಂದುಳಿದವರನ್ನು ಗುರುತಿಸೋದೆ ಅಜ್ಞಾನ. ಜ್ಞಾನವನ್ನು  ಬೆಳೆಸೋದೆ ವಿಜ್ಞಾನ. ಜ್ಞಾನ ಎಲ್ಲರ ಆಸ್ತಿ ಅದನ್ನು ಸರಿಯಾದ ಮಾರ್ಗದಲ್ಲಿ  ಬೆಳೆಸೋದೆ ಗುರುಗಳ ಧರ್ಮ ಕರ್ಮ. ಯಾರೋ ಹೊರಗಿನವರ ಜ್ಞಾನವನ್ನು ನಮ್ಮದೆಂದು ತಿಳಿದು ನಮ್ಮ ಸ್ವಂತ ಬುದ್ದಿ ಜ್ಞಾನ ಅರಿಯದಿದ್ದರೆ  ನಾವು ಹಿಂದೂ ಆಗೋದಿಲ್ಲ. ಹಿಂದಿನವರ ಆಸ್ತಿ ಬೇಕು.ಅವರ ಧರ್ಮ ಕರ್ಮ ಜ್ಞಾನ ಬೇಡವೆಂದರೆ ಅಧರ್ಮ ವಾಗುತ್ತದೆ. ‌ಅದು ಆತ್ಮಕ್ಕೆ ತೃಪ್ತಿ ಸಿಗದಂತೆ  ಅಂತರ. ಹೆಚ್ಚಿಸಿಕೊಂಡು ಆಳುತ್ತದೆ. ಅನ್ಯರ ಕೈಕೆಳಗೆ ದುಡಿಯೋದರಿಂದ ಹಣ ಸಿಕ್ಕರೂ ತೃಪ್ತಿ ಸಿಗದು.
ಅದೇ ನಮ್ಮವರ ಸೇವೆ ಮಾಡಿದರೆ ಹಣವೂ ಸದ್ಬಳಕೆ ಆಗಿ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗುತ್ತದೆನ್ನುವುದೆ ಆಧ್ಯಾತ್ಮ ಸತ್ಯ.
 ಅರ್ಥ ವಾಗೋದು ಕಷ್ಟ .‌ಆದರೂ ಹಿಂದಿರುಗೋದು ಕಷ್ಟ.
ಕಷ್ಟಪಡದೆ  ಸುಖವಿಲ್ಲ.ಭೌತಿಕದಲ್ಲಿ  ಮೀಸಲಾತಿ ಇದ್ದರೂ ಆಧ್ಯಾತ್ಮಿಕ ಜಗತ್ತಿನಲ್ಲಿರಲಿಲ್ಲ.ಈಗ  ಆ ಕ್ಷೇತ್ರವೂ ಸರ್ಕಾರದ ವಶವಾಗುತ್ತಿರುವುದು  ಪರಮಾತ್ಮನ ಸತ್ಯದಿಂದ ಮಾನವ‌ದೂರವಿರೋದನ್ನು ಎತ್ತಿ ತೋರಿಸುತ್ತಿದೆ.‌ಹಾಗಾದರೆ ಪರಮಾತ್ಮನಿಗೆ ಮೀಸಲಾಗಿದ್ದ ಜೀವಾತ್ಮ ಕಥೆ  ಏನು?
ಸಾಲ ತೀರಿಸಲು‌ಬಂದ ಜೀವಾತ್ಮನಿಗೆ ಸಾಲ‌ಉಚಿತವಾಗಿ  ಏರಿಸಿದರೆ ತೀರಿಸುವ ಸುಜ್ಞಾನ  ಕೊಡೋದು ಯಾರು? ಎಷ್ಟು ಬೇಡಿದರೂ  ಕೊಡೋ ದೇವಾಸುರರ  ನಡುವಿರುವ ಮನುಕುಲ ಇಂದಿಗೂ  ಅತಂತ್ರಸ್ಥಿತಿಯಲ್ಲಿದೆ ಎಂದರೆ ಸ್ವತಂತ್ರ ಬುದ್ದಿ ಜ್ಞಾನದ ಕೊರತೆಯಿದೆ. ಸ್ವತಂತ್ರ ವಾಗಿದ್ದ ದೇಶವನ್ನು ಆಳಲು ಬಂದ‌ಪರಕೀಯರಿಗೆ  ಅರಿವಿಲ್ಲದೆ  ಭೌತಿಕಾಸಕ್ತಿ ಬೆಳೆದು  ಜನರನ್ನು ಆಳಾಗಿಸಿದರು. ಅದನ್ನು ಪ್ರಗತಿ ಎಂದು ಸಹಕರಿಸುತ್ತಾ  ಹೋದವರ ಗತಿ ಕೊನೆಯಲ್ಲಿ  ತಿಳಿದರೂ ಏನೂ ಮಾಡಲಾಗದೆ ಹೋದರು. ಇವರ ಚರಿತ್ರೆಯನ್ನು ಪುಸ್ತಕಕ್ಕೆ ಇಳಿಸಿ ಮಕ್ಕಳನ್ನೂ  ವಾಸ್ತವದಿಂದ ದೂರ ಉಳಿಸಿ ಭವಿಷ್ಯದ ಚಿಂತನೆ ನಡೆಸಿದವರ ಮಕ್ಕಳು ದೂರವಾದರು.‌ ಈಗಲೂ  ಸರಿಪಡಿಸಲು ಕಾಲವಿದೆ. ಆದರೆ ಮನಸ್ಸಿಲ್ಲ. ಎಲ್ಲಾ ಕಾಲವೇ ಉತ್ತರ ನೀಡುತ್ತದೆ.

ಆಕಾಶದೆತ್ತರ‌ಹಾರಿಸುವ ವೈಜ್ಞಾನಿಕತೆಗೂ ಭೂಮಿಯ ಋಣ ತೀರಿಸುವ ವೈಚಾರಿಕತೆಗೂ ಅಂತರವಿದೆ.‌ಆ ಅಂತರದಲ್ಲಿ ಸಾಮಾನ್ಯಜ್ಞಾನ  ಅಗತ್ಯವಿದೆ. ‌ನಂತರವೇ ವಿಶೇಷ ಜ್ಞಾನ ವಿಜ್ಞಾನ ಅರ್ಥ ವಾಗುತ್ತದೆ.
ಸದಾ ನಮ್ಮೊಳಗೇ ಇದ್ದು ನಮ್ಮನ್ನು ಮಾತನಾಡಿಸುವ  ಒಳ‌ಮನಸ್ಸಿನಿಂದ ದೂರವಾದಷ್ಟೂ ಕಳೆದುಹೋಗುವುದು ನಾವೇ ಎನ್ನುವ ಸತ್ಯ ಒಂದೇ ಆಗಿರುತ್ತದೆ.
ಆತ್ಮಾವಲೋಕನ ದಿಂದ ಆತ್ಮನಿರ್ಭರ ಭಾರತ. ಆಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು.ಅರಿವು ಒಳಗಿದೆ ಅದರ ಹಿಂದೆ ನಡೆದರೆ ಹಿಂದೂಗಳಾಗಿರಬಹುದು. ಅದು ಸತ್ವ ಸತ್ಯ ತತ್ವವನ್ನು ಅರಿತು ನಡೆಸುತ್ತದೆ. ಇಷ್ಟೇ ಜೀವನ ರಹಸ್ಯ. 

Friday, March 27, 2026

ರಾಮರಾಜ್ಯ

ನಮ್ಮನ್ನು ನಡೆಸುತ್ತಿರೋದು ರಾಮನೆ ರಾವಣನೆ?

ಶ್ರೀ ರಾಮನವಮಿಯ ಶುಭಾಶಯಗಳು
ರಾಮರಾಜ್ಯದ ಕನಸಿನಲ್ಲಿ ಮುಂದೆ ನಡೆಯುತ್ತಿರುವ ಭಾರತದಲ್ಲಿ  ಸಾಕಷ್ಟು ರಾಮರುಗಳು ಶ್ರಮಪಟ್ಟರೂ ಅಷ್ಟೇ ರಾವಣರ ಜನ್ಮಗಳಾಗುತ್ತಿವೆ.
ರಾಮರಾವಣರ ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ ಮಾನವರಿಗಿದ್ದರೆ ರಾಮ ಯಾರು ರಾವಣ ಯಾರೆಂಬುದು ಕಣ್ಣಿಗೆ ಕಾಣುತ್ತಿತ್ತು.ಅದನ್ನು ಶಿಕ್ಷಣದಲ್ಲಿಯೇ ಗುರುತಿಸದಂತೆ ಮಾಡಿಕೊಂಡು ಆಳಿಕೊಂಡಿರುವ ರಾಜಕೀಯ ಶಕ್ತಿಯ ಮುಂದೆ ಯಾವುದೇ ರಾಮನ ಗುಡಿ ಗೋಪುರ ರಾಮನ ತತ್ವವನ್ನು ತಿಳಿಸಲಾರದು.ಆದರೂ ಅಂತಹ ಸ್ಥಾನಮಾನವನ್ನು  ಕೊಟ್ಟಿರುವಾಗ ಶ್ರೀ ರಾಮನ ರಕ್ಷಣೆ ಇದ್ದೇ ಇರುತ್ತದೆ.
ಭಕ್ತಿಯೋಗದ ಮುಂದೆ ಯಾವ ರಾಜಕೀಯ ಶಕ್ತಿ ನಿಲ್ಲದು.
ಒಗ್ಗಟ್ಟು  ತತ್ವದೊಳಗಿದ್ದರೆ ಶಾಂತಿ.ತಂತ್ರವೇ ಮೇಲೆದ್ದರೆ ಕ್ರಾಂತಿ. 
ಕ್ರಾಂತಿಯ ನಂತರ ಶಾಂತಿ ನೆಲೆಸಬಹುದೆ?
ಹಿಂದೆ ಯುದ್ದಗಳಾದವು ಸಾಕಷ್ಟು  ಜೀವ ಪ್ರಾಣ ಹೋದವು. ನಂತರ ಸೃಷ್ಟಿ ಬೆಳೆಯಿತು. ಜನಸಂಖ್ಯೆಸ್ಪೋಟವೂ ಆಯಿತು. ಇಷ್ಟಾದರೂ ಒಳಗಿರುವ ತತ್ವಜ್ಞಾನ ಹಿಂದುಳಿದಿದೆ ಎಂದರೆ ನಮ್ಮ ಸ್ವಾರ್ಥ ಅಹಂಕಾರ ಪೂರಿತ ರಾಜಕೀಯ ದೆಡೆಗೆ ನಮ್ಮ ಮನಸ್ಸು ಹರಿದು ಹೊರನಡೆಯಿತೇ ಹೊರತು ನಮ್ಮ ಸ್ವಂತ ಬುದ್ದಿ ಜ್ಞಾನವನ್ನು ಬೆಳೆಸುವ ಶಿಕ್ಷಣ ಕೊಡದೆ ಆಳಿದವರನ್ನು  ಇಂದು ದ್ವೇಷ ಮಾಡುತ್ತೇವೆ. ಆದರೆ ನಮ್ಮ ಜೀವನ ನಡೆದಿರೋದೆ  ಅದೇ ಶಿಕ್ಷಣದಲ್ಲಿ ಎಂದರೆ  ದ್ವೇಷದಿಂದ ರಾಮನ ಕಾಣಬಹುದೆ? ರಾವಣನನ್ನೆ?
ಸೀತೆಯ ಅಪಹರಣಕ್ಕೆ  ಕಾರಣವಾಗಿದ್ದ ರಾವಣನ ಹಿಂದಿನ ದ್ವೇಷದಿಂದ  ದೊಡ್ಡ ಯುದ್ದವೇ ನಡೆಯಿತು. ಆದರೂ ರಾವಣನ ಶಿವಭಕ್ತಿ ಶ್ರೀ ರಾಮಚಂದ್ರನಂತಹ ಧರ್ಮಾತ್ಮನನ್ನೇ ಅಲ್ಲಾಡಿಸುವಂತಿತ್ತು. ಕೊನೆಯಲ್ಲಿ ಶ್ರೀ ರಾಮ ಶಿವನನ್ನು ಪೂಜಿಸಿ  ರಾವಣನ ವಧೆ ಮಾಡಬೇಕಾಯಿತೆನ್ನುವುದು ಪುರಾಣ ಸತ್ಯ.
ಸತ್ಯ ದ ಹಿಂದಿನ ಯೋಗವನ್ನು ಅರ್ಥ ಮಾಡಿಕೊಳ್ಳಲು ‌ಜ್ಞಾನ‌ಬೇಕಿದೆ. ಅಂದರೆ  ದೇವಾನುದೇವತೆಗಳಿಗೂ  ಈ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡಲು  ಜನಬಲ ಅಧಿಕಾರ ಬಲದ ಜೊತೆಗೆ ಜ್ಞಾನದ ಬಲ ಅಗತ್ಯವಿತ್ತು. 
ಅಜ್ಞಾನದ ವಶದಲ್ಲಿ ಓಡುತ್ತಿರುವ‌ಮನಷ್ಯನ‌ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಯೋಗ ಶಕ್ತಿಯಿಲ್ಲದೆ ಭೋಗದೆಡೆಗೆ  ವೈಭವದ  ಆಚರಣೆಗಳನ್ನು  ಮಾಡಿದರೆ ದೈವತ್ವದೆಡೆಗೆ  ಸಾಗಬಹುದೆ?

ಕಲಿಕೆಯಲ್ಲಿ  ಭೌತಿಕದ ಸತ್ಯ ತಿಳಿಸಬಹುದು.ಆದರೆ ಆಧ್ಯಾತ್ಮಿಕ ಶಕ್ತಿಯನ್ನು ಗುರುತಿಸದಿದ್ದರೆ  ವ್ಯರ್ಥ.
ಇದು ಶ್ರೀ ರಾಮನಂತಹ ಮಹಾತ್ಮನನ್ನು ಧರ್ಮಾತ್ಮನನ್ನು, ಪರಮಾತ್ಮನನ್ನು  ಪ್ರಜಾಪಾಲಕನನ್ನು  ಮಹಾರಾಜನನ್ನು  ಕೇವಲ ಒಬ್ಬ  ಮನುಷ್ಯರೂಪದ ವ್ಯಕ್ತಿ ಎಂದು ಕಾಣದೆ  ಮಹಾಶಕ್ತಿ  ವಿಷ್ಣುವಿನವತಾರ ಪುರುಷ ಪರಮಾತ್ಮನೆಂದು  ಕಂಡು  ಆರಾಧಿಸಿದ ದಾಸರ  ಸಾಲಿನಲ್ಲಿ  ನಿಲ್ಲಿಸಬಹುದೆ?

ಪರಮಸತ್ಯ ಧರ್ಮ ಕ್ಕೆ ಶರಣಾದವರು ದಾಸರಾದವರು ಕೇವಲ ಶ್ರೀ ರಾಮ ಜಪದಿಂದಲೇ ಆತ್ಮಸಾಕ್ಷಾತ್ಕಾರ ಮಾಡಿಕೊಂಡರೆಂದರೆ  ಶ್ರೀ ರಾಮ ವ್ಯಕ್ತಿಯಲ್ಲ ಮಹಾಶಕ್ತಿ.
ಈಗಲೂ ರಾಮನ ಭಕ್ತರ ಶಕ್ತಿ  ಯೋಗದಿಂದ ಕೂಡಿದರೆ ರಾಮರಾಜ್ಯವಾಗುತ್ತದೆ. ಯಾವಾಗಿದು ಭೋಗಕ್ಕೆ ಎಳೆಯುವುದೋ ಅದೇ  ರಾವಣನೆಡೆಗೆ ನೆಡೆಸುತ್ತದೆ.
ರಾವಣನಂತಹ ಮಹಾಜ್ಞಾನಿ  ಈಗಿಲ್ಲ. ಆದರೂ ಅವನನ್ನು ದ್ವೇಷ ಮಾಡುವ  ರಾಜಕೀಯವಿದೆ. 
ದೇಶವನ್ನು ಸ್ಮಾರ್ಟ್ ಮಾಡಲು  ಹಣ ಬೇಕು. ಅದೇ ದೇಶವನ್ನು  ಧರ್ಮದಿಂದ ರಕ್ಷಣೆ ಮಾಡಲು ಸತ್ಯಜ್ಞಾನದ ಶಿಕ್ಷಣ ಕೊಡಬೇಕು.
ಸತ್ಯವೇ ದೇವರೆಂದರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದರೆ ತೋರಿಸಲಾಗದು.ಕಾರಣ ಒಳಗೇ ಅಡಗಿರುವ ಸತ್ಯವನ್ನು  ಸದ್ಬಳಕೆ ಮಾಡಿಕೊಳ್ಳಲು  ಅಂತರಂಗದ ಶುದ್ದಿ ಅಗತ್ಯವಿದೆ. ಅಂತರ ಬೆಳೆಸಿರುವ ಈ ರಾಜಕೀಯದ ಅಗತ್ಯವಿಲ್ಲ.
ಇರಲಿ ಈಗಲೂ ನಮ್ಮಲ್ಲಿ ರಾಮನಿದ್ದಾನೆ ರಾವಣನೂ ಇರುವನು. ನಮ್ಮ ಜೀವನಕ್ಕೆ ಶಾಂತಿ ಬೇಕೆಂದರೆ ರಾಮನ ತತ್ವದೆಡೆಗೆ ಸಾಗಬೇಕು.
ಅಂದಿನ ರಾಜಪ್ರಭುತ್ವದ ಪ್ರಕಾರ  ರಾಜನಂತೆ ಪ್ರಜೆ.
ಈಗಿನ‌ಪ್ರಜಾಪ್ರಭುತ್ವದ ಪ್ರಕಾರ ಪ್ರಜೆಗಳಂತೆ ರಾಜಕಾರಣಿಗಳಿದ್ದಾರೆ.
ಯಾರು ಸರಿ ಯಾರು ತಪ್ಪು ಎನ್ನುವ  ಪ್ರಶ್ನೆ ಹಾಕುತ್ತಾ ವಾದ ವಿವಾದಗಳಿಗೆ ಸಹಕರಿಸುತ್ತಾ ಮಧ್ಯವರ್ತಿಗಳು ಅಂತರವನ್ನು ಬೆಳೆಸಿ ಜನರ ಹಣವನ್ನು ಸಮಯವನ್ನು ಜ್ಞಾನವನ್ನು  ನಿರ್ಲಕ್ಷ್ಯ ಮಾಡಿರುವ ಶಿಕ್ಷಣವನ್ನು ‌ಬೆಳೆಸುತ್ತಾ ಲಕ್ಷ ಕೋಟಿ ಗಳಿಸಿದ್ದರೂ  ನಿಜವಾದ ಶಾಂತಿ ಸಿಗಲಿಲ್ಲ ಎಂದರೆ ನಮ್ಮ ಲಕ್ಷ್ಯ  ಹಣದತ್ತ  ಜ್ಞಾನದತ್ತವಿಲ್ಲ ಎಂದರ್ಥ.
ಶ್ರೀ ರಾಮಚಂದ್ರನ ಪಿತೃವಾಕ್ಯ ಪರಿಪಾಲಕರಾಗಲಿ, ಪ್ರಜಾಪರಿಪಾಲಕರಾಗಲಿ  ತ್ರೇತಾಯುಗದ ನಂತರ  ಬಂದಿಲ್ಲ.ಶ್ರೀ ಕೃಷ್ಣಾವತಾರವೇ  ಬೇರೆ ರೀತಿಯಲ್ಲಿ ತ್ತು. ಆದರೆ ಕಾಲಮಾನಕ್ಕೆ ತಕ್ಕಂತೆ ಕೆಲವು ಬದಲಾದರೂ ಸತ್ಯ ಒಂದೇ. ಧರ್ಮ ಅದರೊಂದಿಗೆ ನಡೆಯಬೇಕೆನ್ನುವುದೇ ಸನಾತನ ಧರ್ಮ ತಿಳಿಸುವುದು.
ಯಾರೋ ಒಬ್ಬರಿಂದ ರಾಮರಾಜ್ಯವಾಗದು.ಅದರಲ್ಲೂ ಇಂದಿನ ಪ್ರಜಾಪ್ರಭುತ್ವ ದಲ್ಲಿ  ಪ್ರಜಾಶಕ್ತಿಯು  ರಾಮನ ರಾಜಯೋಗದೆಡೆಗೆ  ನಡೆದಾಗಷ್ಟೆ ಯೋಗವಾಗುತ್ತದೆ. ಎಷ್ಟು ಹೊರಗೆಳೆದು ಅಲಂಕಾರ ಮಾಡಿದರೂ  ಸಾಲದು.ಸಾಲವೇ ಅದಾಗಿರುತ್ತದೆ.
ಹಣದಿಂದ ರಾಮನ್ನು ಕಂಡವರಿಗೆ  ಹಣವೇ ಸರ್ವಸ್ವ.
ಅದೇ ರೀತಿಯಲ್ಲಿ ಸುಜ್ಞಾನದಿಂದ ರಾಮಧ್ಯಾನ ಮಾಡುತ್ತಾ ಭಕ್ತರಾದವರಿಗೆ  ಜ್ಞಾನೋದಯವಾಗಿದೆ ಎಂದರೆ ಶ್ರೀ ರಾಮ ಇರೋದೆಲ್ಲಿ?
ಎಲ್ಲೆಡೆಯೂ  ಹರಡಿರುವ ಶ್ರೀ ರಾಮನನ್ನು ಒಂದೆಡೆ ನಿಲ್ಲಿಸಿ ನೋಡಲು ಧ್ಯಾನದಿಂದ ಮಾತ್ರ ಸಾಧ್ಯ.
ದೇವಸ್ಥಾನದಲ್ಲಿ ವಿಗ್ರಹದ ಮೂಲಕ ದರ್ಶನ ಮಾಡಬಹುದು.
ನಂತರ ಮನೆಗೆ ಬಂದ ಮೇಲೆ  ಯಥಾ ಪ್ರಕಾರ  ನಮ್ಮ ‌ಮನಸ್ಸು ಹರಿದಾಡುತ್ತದೆ. ಹಾಗಾದರೆ ಮನಸ್ಸಿನಲ್ಲಿಯೇ ರಾಮನನ್ನು ನಿಲ್ಲಿಸಿಕೊಂಡು  ದಾಸರಾದವರನ್ನು ರಾಮದಾಸ ಎನ್ನಬಹುದು. ಈಗ ಎಲ್ಲಿರುವರು ? 
ಕಣ್ಣಿಗೆ  ದಾಸ್ಯತ್ವ  ಹೆಚ್ಚಾಗಿ ಕಾಣುತ್ತಿದೆ ಎಂದರೆ ನಮ್ಮ ನಡೆ ರಾಮನ ಕಡೆಗಿಲ್ಲವೆ? ನುಡಿ ಕೃಷ್ಣನ ಕಡೆಗಿಲ್ಲವೆ?
ಪ್ರಚಾರದಲ್ಲಿ ಮಧ್ಯೆ ನಿಂತಿರುವ ಇದನ್ನು ಸರಿಯಾಗಿ ನಡೆದು ನುಡಿದರೆ ರಾಮಕೃಷ್ಣರು ಒಳಗೇ ಕಾಣುವರು. ಅವರ ಕೃಪೆ ಇಂದಿಗೂ ಸನಾತನ ಧರ್ಮ ನಡೆಯಲು ಕಾರಣವಾಗಿದೆ. ಆದರೆ ಇದನ್ನು ಜನಸಾಮಾನ್ರೊಳಗೆ  ತತ್ವಜ್ಞಾನದಿಂದ ತುಂಬುವ ಕೆಲಸದಲ್ಲಿ ನಿಧಾನವಾಗಿರುವ ಕಾರಣ ರಾವಣಶಕ್ತಿ ಮಿತಿಮೀರಿದೆ. ಯುದ್ದವಾದರೂ  ಧರ್ಮಕ್ಕೆ ಜಯ ಇದು ಶತಸಿದ್ದ.
ಒಟ್ಟಿನಲ್ಲಿ ಇತಿಹಾಸ ಪುರಾಣ ಮರುಕಳಿಸಲು ಕಾರಣ ಅದರ ಪ್ರಚಾರವಾಗಿರುತ್ತದೆ.ಪ್ರಚಾರದಲ್ಲಿ ಯೋಗವಿದ್ದರೆ ಜ್ಞಾನ.ಭೋಗವೇ ಮುಖ್ಯವಾಗಿ ಹಣವೇ ಸರ್ವಸ್ವ ಎಂದರೆ ಕ್ರಾಂತಿ. ಎಲ್ಲಾ ಭಗವಂತನ ಪ್ರೇರಣೆಯೇ ಆಗಿರುವುದರಿಂದ
ನಮ್ಮ ಪಾತ್ರವನ್ನು ಸರಿಯಾಗಿ ತಿಳಿದು ವಹಿಸಿಕೊಂಡು  ಮುಂದೆ ನಡೆಯುವುದೇ ವಿಜ್ಞಾನ. ವಿಜ್ಞಾನ ಎಂದರೆ ವಿಶೇಷ ಜ್ಞಾನ. ಇದು ಆಧ್ಯಾತ್ಮ ವಾದರೆ ಆತ್ಮಜ್ಞಾನದಿಂದ  ಆತ್ಮಸಂಶೋಧನೆ. ಇಲ್ಲವಾದರೆ ಭೌತ ವಿಜ್ಞಾನದ ಶೋಧನೆ.
ಸಂಶೋಧನೆ  ಮೊದಲಿದ್ದದ್ದನ್ನೇ ಮತ್ತೆ ಮತ್ತೆ  ಶೋಧಿಸಿಕೊಂಡಿರೋದಷ್ಟೆ. ನಮ್ಮ ಅಜ್ಞಾನದೊಳಗಿರುವ ಜ್ಞಾನದೆಡೆಗೆ  ನಡೆಯೋದು. ಇದು ಹೊರಗೆ ಮಾಡುವ ಮೊದಲು ಒಳಗೆ  ಮಾಡುವುದೇ ಸಂಸ್ಕಾರ. ಆತ್ಮಸಂಸ್ಕಾರ ಆಗದೆ  ದೇಹಶುದ್ದಿ ಮಾಡಿದರೂ ತಾತ್ಕಾಲಿಕ ವಷ್ಟೆ.
ಆತ್ಮಶುದ್ದವಾಗಿದ್ದರೂ ಮನಸ್ಸಿನ  ಕಲ್ಮಶಗಳು  ಮುಚ್ಚಿ ಹಾಕಿರುತ್ತದೆ.
ಹಾಗೆ ದೈವತ್ವದೆಡೆಗೆ ಸಾಗದೆ ದೇವರನ್ನು ಪೂಜಿಸಿದರೂ ದೇವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಇದಕ್ಕೆ ಕಾರಣವೇ ಕಲಿಕೆಯಾಗಿದೆ.ತತ್ವವಿಲ್ಲದ ತಂತ್ರದಿಂದ ಅತಂತ್ರ ಜೀವನವಾಗಬಹುದು.
ದೇವಾಸುರರ ಮಧ್ಯೆ ಇರುವ ಮಾನವನಿಗೆ ಈ ಕಡೆ ಸ ತ್ಯ ಜ್ಞಾನ ಮತ್ತೊಂದು ಕಡೆ ಮಿಥ್ಯಜ್ಞಾನ ಎಳೆದಾಡುತ್ತಲೇ ಇರುತ್ತದೆ. ಯಾವ ಕಡೆ  ಹೋಗಬೇಕೆಂಬ ಸಾಮಾನ್ಯ ಜ್ಞಾನ ನಮ್ಮಲ್ಲಿದ್ದರೆ  ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ. ಇಲ್ಲವೆಂದರೆ ಅತೃಪ್ತ ಆತ್ಮಗಳಾಗಿ  ಜೀವನದ ಗುರಿ ಹೋರಾಟ ಹಾರಾಟ ಮಾರಾಟವೇ  ಪ್ರಧಾನ ಎನ್ನುತ್ತದೆ. 
ಬರೋವಾಗ ಏನು ಹೊತ್ತು ತಂದರೂ ಅದರಿಂದ ಬಿಡುಗಡೆ ಪಡೆಯುವ ಯೋಗ   ಶಿಕ್ಷಣ ಅಗತ್ಯವಿದೆ.ಯೋಗವೆಂದರೆ ಸೇರುವುದು.ಸತ್ಯ ಸತ್ಯ ಸೇರಬೇಕು. ಧರ್ಮ ಧರ್ಮ ವನ್ನು ಸೇರಬೇಕು.ವಿರುದ್ದ ಸೇರಿದಷ್ಟೂ ಸಂಕಷ್ಟ ತಪ್ಪಿದ್ದಲ್ಲ.
ಕೆರೆಯ ನೀರನು ಕೆರೆಗೆ ಚೆಲ್ಲಿದರೆ ಸರಿ.ಕೊಳಚೆಗೆ  ಸೇರಿಸಿದರೆ 
ಅನರ್ಥ ಗಳಾಗುತ್ತದೆ. 
ಪರಮಾತ್ಮ‌ಕೊಟ್ಟಿರುವ ಅಲ್ಪಾಯುಷ್ಯವನ್ನು ಅಲ್ಪ ಜ್ಞಾನದಿಂದ  ಸದ್ಬಳಕೆ ಮಾಡಿಕೊಂಡು ಜೀವನ ನಡೆಸೋ ಸ್ವಾತಂತ್ರ್ಯ ಇಂದಿನ‌ಪ್ರಜಾಪ್ರಭುತ್ವದಲ್ಲಿತ್ತು. ಆದರೆ ವಿಪರ್ಯಾಸವೆಂದರೆ  ಪ್ರಜೆಗಳ ದಾರಿತಪ್ಪಿಸಿ ಆಳುವವರಿಗೆ ಪ್ರಜೆಗಳ ಸಹಕಾರವಿರುವಾಗ  ನಮ್ಮ ಅಜ್ಞಾನಕ್ಕೆ ತಕ್ಕಂತೆ ಫಲ ಕೊಡೋನು  ಪರಮಾತ್ಮನೇ ಆಗಿರುವನು. ಏನು ಕೇಳಿದರೂ ಕೊಡುವನು ಆದರೆ ಜ್ಞಾನ ಕೇಳೋರು ವಿರಳ. ಹೀಗಾಗಿ ಅಜ್ಞಾನಿಗಳು ಮಿತಿಮೀರಿ ಬೆಳೆದು ಜನಸಂಖ್ಯೆ ಸ್ಪೋಟ ವಾಗಿ ಯುದ್ದದಲ್ಲಿ  ಪೂರ್ಣ ವಾಗುತ್ತಿದೆ.ಪ್ರಕೃತಿ ತನ್ನ ಕೆಲಸ ಮಾಡೋದನ್ನು ಬಿಡದು. ಹಾಗೆ ಸೃಷ್ಟಿ ಸ್ಥಿತಿ ಲಯ ಕಾರ್ಯ. ಭೂಮಿ ತಿರುಗೋದನ್ನು ವಿಜ್ಞಾನಿಗಳು ತಡೆಯಲಾಗದೆಂದರೆ ನಮ್ಮ ಶಕ್ತಿ ಅಲ್ಪ ಎಂದರ್ಥ . ಆದರೂ ಅಲ್ಪ ಸ್ವಲ್ಪ ಬುದ್ದಿ ಜ್ಞಾನದಿಂದ  ಸ್ಥಿತಪ್ರಜ್ಞಾವಂತರಾಗಬಹುದು.
ಇಷ್ಟಕ್ಕೂ  ನಾವ್ಯಾರು? ರಾಮನೆಲ್ಲಿ?
ಹೀಗೇ ಮುಂದುವರಿದರೆ  ಮುಂದಿನ ಪೀಳಿಗೆಗೆ ಇತಿಹಾಸದ ಪುಸ್ತಕದಲ್ಲಿ  ನರೇಂದ್ರರನ್ನು ಇಂದ್ರನೆಂದು ಸಿದ್ದರಾಮರನ್ನು ರಾಮನೆಂದು, ಶಿವಕುಮಾರರನ್ನು ಶಿವನೆಂದು, ಕುಮಾರಸ್ವಾಮಿಯನ್ನು ಸುಭ್ಮಮಣ್ಯನೆಂದು ಪೂಜಿಸಬಹುದು.  ಕಾರಣ ಹಿಂದಿನ ಪುರಾಣ ಇತಿಹಾಸವೂ ತಮ್ಮ ಮನಸ್ಸಿಗೆ ಬಂದಂತೆ ತಿರುಚಲಾಗಿದೆ. ಅದನ್ನು ಓದಿಕೊಂಡು  ಬಂದಿರುವ ನಮಗೆ  ಸತ್ಯ ತಿಳಿಯದೆ ಹೊರಗೆ ದೇವರನ್ನು ಹುಡುಕುತ್ತಿದ್ದೇವೆ. 
ಒಳಗೇ ಇದ್ದ ದೈವತ್ವವನ್ನು   ನಮ್ಮವರೆ ಗುರುತಿಸದೆ ತಡೆದರೆ ಹೊರಗಿನವರು ಆಳೋದರಲ್ಲಿ ತಪ್ಪಿಲ್ಲ.
ಸ್ವಾಮಿ ವಿವೇಕಾನಂದರ ಕನಸಿನ ಭಾರತ ಇಂದಿಗೂ ಕನಸೇ ಆಗಿರೋದಕ್ಕೆ ಕಾರಣವೆಂದರೆ ನಮ್ಮೊಳಗಿನ‌ವಿವೇಕ ಜಾಗೃತ ಮಾಡದಿರುವ ಶಿಕ್ಷಣ. ಓದಿ ತಿಳಿದವರು ಪ್ರಸಿದ್ದರಾದರು.
ನಿಜವಾದ ಸಿದ್ದರು ಹಿಂದುಳಿದರು. ಇದಕ್ಕೆ ಸಿದ್ದರಾಮಯ್ಯನವರಿಗೆ  ಅಧಿಕಾರ ಸಿಗುತ್ತಿದೆ ಎಂದರೂ ಪ್ರಜೆಗಳ ಸಹಕಾರವಿದೆ ಎಂದರ್ಥ. ಹಾಗೆಯೇ ಎಲ್ಲಾ ರಾಜಕಾರಣಿಗಳು ಹಣದಿಂದ ಜನರನ್ನು  ಗೆಲ್ಲಬಹುದಷ್ಟೆ. ಜನರ ಜ್ಞಾನದ ಗತಿ  ಏನಾಗಬಹುದು ? ಇದರಿಂದ ಕಷ್ಟ ನಷ್ಟ ಯಾರಿಗೆ? ಜನರಿಗೇ ಅಲ್ಲವೆ? ನಮಗೆ ನಾವೇ ಮೋಸ ಹೋದಾಗ ರಾಮನಾದರೂ ಏನು ಮಾಡಬಹುದು? ದೇವರೆಡೆಗೆ ದೈವತ್ವದೆಡೆಗೆ ನಡೆಯದಿದ್ದರೆ  ದೇವರು ಏನು ಮಾಡಬಹುದು?  ನಮ್ಮಲ್ಲಿ ಅಡಗಿರುವ ರಾಮ ರಾವಣರಲ್ಲಿ ನಮಗೆ ಪ್ರಿಯವಾದವರು ಯಾರು?

Sunday, March 22, 2026

ಜೀವನ್ಮುಕ್ತಿ ರಾಜಕೀಯದಲ್ಲಿಲ್ಲ.


ಮಾನವ ಎಷ್ಟು ರಾಜಕೀಯವನ್ನು ಒಳಗೆಳೆದುಕೊಂಡು  ಹೋರಾಟ ನಡೆಸಿದರೂ  ಜೀವನ್ಮುಕ್ತಿ ಸಿಗೋದಿಲ್ಲ. ಕಾರಣ ರಾಜಕೀಯ ಹೊರಗಿದೆ. ಜೀವ ಒಳಗಿದೆ. ಜೀವಾತ್ಮನನ್ನು ಪರಮಾತ್ಮನೆಡೆಗೆ  ಸೇರಿಸಲು  ರಾಜಕೀಯತೆ  ಅಡ್ಡಲಾಗಿ ಮಲಗಿದೆ. ನಮ್ಮ ಜನ್ಮದ ಮೂಲ ಧರ್ಮ ಕರ್ಮ ಬಿಟ್ಟು ದೂರ ನಡೆದವರ ಹಿಂದೆ ನಡೆದರೆ ಅತಂತ್ರ ಜೀವನವೆ ಗತಿಯಾಗಿದೆ.ಇಂದಿನ ಅರಸ   ಮುಂದಿನ  ಆಳಾಗಬಹುದು.
ಆಳು ಅರಸನಾಗಬಹುದು. ಸರಸ್ವತಿ ಯನ್ನು ಲಕ್ಮಿಯಾಗಿಸೋದು  ಮಾನವನ  ರಾಜಕೀಯ. ಮೂಲ ಸ್ವರೂಪ ಬದಲಾಗೋದಿಲ್ಲ.
ವಿಪರ್ಯಾಸವೆಂದರೆ, ಭಾರತೀಯರು  ಜ್ಞಾನದಲ್ಲಿ ಶ್ರೀಮಂತ ರಾಗಿ ಪರಮಾತ್ಮನ ಹತ್ತಿರ ಹೋದವರನ್ನು ಬಡವರೆಂಬ ಪಟ್ಟಿ ಕಟ್ಟಿ  ಹೊರಗಿನ ರಾಜಕೀಯಕ್ಕೆ ಎಳೆದು ಸಾಲ,ಸೌಲಭ್ಯ
ಗಳನ್ನು ಉಚಿತವಾಗಿ ನೀಡಿ  ಈಗ ಅವರುಗಳೆ ಸರ್ಕಾರದ ವಿರುದ್ದ ನಿಂತರೆ ?
ಇಲ್ಲಿ ರಾಜಯೋಗವೆಂದರೆ ರಾಜಕೀಯ ನಡೆಸೋದು ಎನ್ನುವ ಅಜ್ಞಾನವೇ ಮಾನವನಿಗೆ  ದಾರಿ ತಪ್ಪಿಸಿದೆ.ಈ ಪರಿಸ್ಥಿತಿಯಲ್ಲಿ ಜೀವನ ನಡೆಸೋ  ಹಾಗಾಗಿರೋದಕ್ಕೆ ಕಾರಣವೆ  ಶಿಕ್ಷಣದಲ್ಲಿರುವ ರಾಜಕೀಯ ವಿಚಾರ. ಅಂದರೆ
ರಾಜ ಮಹಾರಾಜರ  ಇತಿಹಾಸ,ಪುರಾಣಗಳ  ರಾಜಕೀಯತೆ ಮಕ್ಕಳನ್ನು  ಬೌತಿಕ ಜಗತ್ತಿನಲ್ಲಿ ಬೆಳೆಸಿ,ಅದು ಮಕ್ಕಳು ಮೊಮ್ಮಕ್ಕಳವರೆಗೂ‌ ಮುಂದುವರೆಯಿತು. 
ಬೌತಿಕಾಸಕ್ತಿ    ಬೆಳೆದಂತೆ ಹೊರಗಿನ‌   ಶಿಕ್ಷಣವನ್ನು ಒಳಗೆಳೆದುಕೊಂಡು ಒಳಗಿದ್ದ  ಸಾತ್ವಿಕ ಜ್ಞಾನವನ್ನು ಬಿಟ್ಟು ನಡೆದ ಜೀವಕ್ಕೆ  ಮನರಂಜನೆ ಸಿಕ್ಕರೂ ಆತ್ಮವಂಚನೆಯ
ದು:ಖ ತಪ್ಪಿಲ್ಲ. ಆತ್ಮಜ್ಞಾನವನ್ನು  ಓದಿ,ಕೇಳಿ, ಪ್ರಚಾರಮಾಡಿ
ಸಮಾಜ ಸುಧಾರಣೆ ಮಾಡುವ ಮಧ್ಯವರ್ತಿಗಳು  ಅನುಭವ
ಜ್ಞಾನವಿಲ್ಲದೆ  ಇತರರನ್ನು ಆಳಲು ಹೊರಟರೆ  ಅರಸನಂತೆ
ಜೀವನ ನಡೆಸಬಹುದು.ಆದರೆ ಆಳಾಗಿ ಹಾಳಾಗಿ ಹೋದವರ ಆತ್ಮಕ್ಕೆ ಶಾಂತಿ ಸಿಗದಿದ್ದರೆ ಅದೇ ದೊಡ್ಡ ಸಮಸ್ಯೆ
ಯಾಗಿ  ತಿರುಗಿ ಬರೋವಾಗ‌ ಸತ್ಯ ಕಾಣೋದಿಲ್ಲ. ಇಲ್ಲಿ ಎಷ್ಟು
ಸುಳ್ಳು, ಮೋಸ,ವಂಚನೆ,ಭ್ರಷ್ಟಾಚಾರ ದ ರಾಜಕೀಯ  ತಮ್ಮ
ಬೌತಿಕ   ಜಗತ್ತನ್ನು  ಬೆಳೆಸಿತೋ ಅಷ್ಟೇ  ಧಾರ್ಮಿಕ ಜಗತ್ತು
ಹಿಂದುಳಿಯಿತು. ಕಾಲಚಕ್ರ ತಿರುಗಿದಾಗಲೇ ಮೇಲಿನದ್ದು
ಕೆಳಗೆ ಬರೋದು. ಬರೋವಾಗ ಮಧ್ಯದಲ್ಲಿ  ಸತ್ಯ ತಡೆದರೆ
ಕಷ್ಟ ನಷ್ಟ. ಜೀವವೆ ಅನುಭವಿಸುವುದೆನ್ನುವ ಸಾಮಾನ್ಯಜ್ಞಾನ
ಮಾನವನಿಗಿದ್ದರೆ ಮಾತ್ರ ಸತ್ಯಕ್ಕೆ  ಶರಣಾಗಿ ಧರ್ಮದ ಕಡೆಗೆ
ಬರಬಹುದು. ಸಾಮಾನ್ಯಜ್ಞಾನವಿಲ್ಲದೆ ರಾಜಕೀಯ ನಡೆಸಿದರೆ  ಅದೇ ಮುಂದೆ  ಆತ್ಮಹತ್ಯೆಯವರೆಗೆ ಎಳೆಯಬಹುದು. ಇತ್ತೀಚಿನ ದಿನಗಳಲ್ಲಿ ಎಷ್ಟೋ ಪ್ರತಿಭಾವಂತರೂ ,ಶ್ರೀಮಂತ ರೂ  ಆತ್ಮಹತ್ಯೆಗೆ  ಬಲಿಯಾಗುತ್ತಿದ್ದಾರೆ.ಎಂದರೆ ಅವರಿಗೇ ತಿಳಿಯದೆ ಅಧರ್ಮ
ಮಿತಿಮೀರಿದಾಗ ಒಳಗೇ ಅಡಗಿದ್ದ  ಜೀವಾತ್ಮನಿಗೆ ತಡೆದುಕೊಳ್ಳಲು ಕಷ್ಟವಾಗಿ  ಆತ್ಮಹತ್ಯೆಗೆ ಪ್ರಚೋಧನೆ ನೀಡಿ
ದೇಹದಿಂದ ಬಿಡುಗಡೆ ಪಡೆಯುತ್ತದೆ. ಇಲ್ಲಿ  ಮಾನವನ ಮನಸ್ಸು  ಬದಲಾಗಬಹುದು.ಆತ್ಮ ಬದಲಾಗೋದಿಲ್ಲ.
ಮನಸ್ಸನ್ನು ಆತ್ಮವೆಂದು ತಿಳಿಯುವುದು  ಅಸತ್ಯ. ಮನಸ್ಸನ್ನು
ತಡೆಹಿಡಿಯುವುದೆಂದರೆ  ಅಧರ್ಮ,ಅಸತ್ಯದಿಂದ  ದೂರ ಇರುವುದು. ಆದರೆ, ತಿಳಿಯದೆ  ಯಾವಾಗ ಅದರೊಂದಿಗೆ
ವ್ಯವಹಾರ ನಡೆಸಿ ಮುಂದೆ ಬಂದ ಮನಸ್ಸಿಗೆ ಒಮ್ಮೆ  ಸತ್ಯ
ತಿಳಿಯುವುದೋ ತಿರುಗಿ ಬರಲಾಗದೆ ಜೀವವನ್ನು ತೆಗೆದುಕೊಳ್ಳುವ ಮಟ್ಟಿಗೆ  ಬುದ್ದಿ ಓಡುತ್ತದೆ. ಹೀಗಾಗಿ ಶಿಕ್ಷಣದಲ್ಲಿಯೇ ಮಕ್ಕಳಿಗೆ ಮನಸ್ಸನ್ನು  ತನ್ನ ಹತೋಟಿಯಲ್ಲಿ
ಇಟ್ಟುಕೊಳ್ಳಲು ಕಲಿಸಬೇಕಿದೆ. ಸತ್ಯದ ದಾರಿ ತೋರಿಸಿದರೆ
ಧರ್ಮವೂ ಬರುತ್ತದೆ. ಅಸತ್ಯದ ದಾರಿ ತೋರಿಸಿದರೆ ಅಧರ್ಮ ಜೊತೆಯಾಗುತ್ತದೆ. ಇರೋದು ಎರಡೇ ಮಾರ್ಗ
ಇವೆರಡರ ನಡುವೆ‌  ನಿಂತರೆ ಜೀವನವೆ ಅತಂತ್ರವಾಗುತ್ತದೆ.
ಸ್ವತಂತ್ರ ವಾಗಿರುವ ಸತ್ಯಜ್ಞಾನ, ಸ್ವೇಚ್ಚಾಚಾರದ  ಮಿಥ್ಯಜ್ಞಾನದ ಮಧ್ಯೆ ನಿಂತ  ತಂತ್ರಜ್ಞಾನದಿಂದ  ಮಾನವನಿಗೆ
ಮುಕ್ತಿ ಮೋಕ್ಷದ ಅರ್ಥ ತಿಳಿಯುತ್ತಿಲ್ಲವೆನ್ನಬಹುದೆ?
ಕಣ್ಣಿಗೆ ಕಂಡ ಹಾಗೆ ಭ್ರಷ್ಟಾಚಾರ  ಇದ್ದರೂ ಹೇಳದ ಸ್ಥಿತಿಗೆ ಜೀವ ನಿಂತಿದೆ ಎಂದರೆ ಋಣಭಾರ. ಯಾರನ್ನು ಸರಿ ಎಂದು ನಂಬಿ ನಡೆದೆವೋ ಅವರೆ ಸರಿಯಿಲ್ಲವೆಂದಾಗ ವಿರೋಧಿಸುವ ಅಧಿಕಾರವಿಲ್ಲ.ಕಾರಣ ನಮ್ಮ ಸಹಕಾರದ
ಪ್ರತಿಫಲ. ಹಾಗಂತ ಜೀವಮಾನವಿಡೀ  ಅವರ ಹಿಂದೆ ಇದ್ದರೆ
ತಪ್ಪು ದಾರಿ ದೊಡ್ಡದಾಗಿ ಶಿಕ್ಷೆ ಖಚಿತ. 
ಹಿಂದಿನ ರಾಜರ ಕಾಲದಲ್ಲಿದ್ದ  ರಾಜಧರ್ಮ ಇಂದಿಲ್ಲ. ರಾಜನೆ
ದೇವರು ಎಂಬುದಿಲ್ಲ. ಆದರೆ  ರಾಜಕೀಯತೆ ಕಡೆಗೆ ಮುಖ
ಮಾಡಿಕೊಂಡು ರಾಜಯೋಗಿಗಳೆಂದರೆ ತಪ್ಪು. ಯಾರಲ್ಲಿ
ಇದನ್ನು ನಾವು ಕಾಣುವೆವೋ ಅವರಿಂದ ದೂರವಿರುವ ಸ್ವಾತಂತ್ರ್ಯ ನಮಗೆ ಇಂದಿನ ಪ್ರಜಾಪ್ರಭುತ್ವದಲ್ಲಿ ಇದ್ದರೂ
ಅವರಿಗೆ ಸಹಕರಿಸುತ್ತಾ  ನನಗೇನೂ ಸಾಧ್ಯವಿಲ್ಲ ಎನ್ನುವ
ಪ್ರಜೆಗಳಿಂದಲೇ ಭ್ರಷ್ಟಾಚಾರ ಮುಗಿಲುಮುಟ್ಟಿರೋದು.
ಇಷ್ಟಕ್ಕೂ ನಾವು ನೀಡುವ ಸಹಕಾರದಿಂದ ಯಾವ ಧರ್ಮ ಉಳಿದಿದೆ? ಸತ್ಯ ಎಲ್ಲಿದೆ?
ಬದಲಾವಣೆ ಜಗದ ನಿಯಮ. ಬದಲಾವಣೆಗೆ ಸ್ಪಂದಿಸೋದು ಮಾನವ ಧರ್ಮ . ದೇವರನ್ನು ಗುಡಿ ಗೋಪುರಗಳಲ್ಲಿ ಇಟ್ಟು  ಪೂಜಿಸಿದರೆ  ದೈವಶಕ್ತಿ ಬರುವುದೆ?
ದೈವಗುಣವನ್ನು ಬೆಳೆಸಿಕೊಂಡರೆ  ಸಾಧ್ಯ. ದೇವರ ಹೆಸರಿನಲ್ಲಿ
ರಾಜಕೀಯತೆ ನಡೆಸಿದರೆ  ಅಸುರರನ್ನು ಸೃಷ್ಟಿ ಮಾಡಿದಂತೆ.
ಭೂಮಿತಾಯಿಯ ಋಣ ತೀರಿಸಲು ಬಂದ‌ ಜೀವಕ್ಕೆ ಇನ್ನೂ
ಋಣವನ್ನು  ಹೆಚ್ಚಿಸಿರೋದು ರಾಜಕೀಯ. ಇದರಿಂದ ಹೊರ
ಬರಲು ಬೇಕಿದೆ  ಕಾಯಕವೆ ಕೈಲಾಸವೆಂಬ ಮಂತ್ರ.ನಾಮಜಪದಿಂದಲೇ ಕಾಯಕ ಮಾಡಿ. ಒಳಗೇ ಇದ್ದ ಪರಮಾತ್ಮನೆಡೆಗೆ  ಸತ್ಯಜ್ಞಾನದಿಂದ ಹತ್ತಿರವಾಗೋದಕ್ಕೆ  ಮನಸ್ಸು ಮನೆಯೊಳಗಿದ್ದರೆ ಉತ್ತಮ. 
ಶಾಂತಿ ಒಳಗಿದೆ. ಕ್ರಾಂತಿ ಹೊರಗಿದೆ."ಯಾವುದಯ್ಯಾ ದಾರಿ
ವೈಕುಂಟಕ್ಕೆ" ಎನ್ನುವ ಹಾಗೆಯೇ ಯಾವುದಯ್ಯಾ ದಾರಿ ಕೈಲಾಸಕ್ಕೆ?" ಎನ್ನಬಹುದಲ್ಲವೆ?
ಶಿವಶಕ್ತಿಯ ಸಮಾನತೆಯಿಂದಲೇ ಭೂಮಿ  ನಡೆದಿರುವುದು.
ಅಸಮಾನತೆಯಿಂದ  ರಾಜಕೀಯತೆ ಬೆಳೆದಿರೋದು.
ಸಂನ್ಯಾಸಿ ಯ ಹತ್ತಿರ ಹೋಗಿ ಸಂಸಾರದ ನೆಮ್ಮದಿ ಕೇಳಿದರೆ
ಸಂಸಾರಬಿಟ್ಟು ಹೊರಡು ಎನ್ನಬಹುದು. ಸಂಸಾರಿಯ ಕಷ್ಟ
ಸಂಸಾರಿಗಷ್ಟೆ ಅನುಭವಕ್ಕೆ ಬಂದಾಗ  ಅವರವರ ಕಷ್ಟ ನಷ್ಟಕ್ಕೆ ಅವರೆ ಕಾರಣವೆನ್ನುವುದೇ ಆಧ್ಯಾತ್ಮ ಸತ್ಯ. ಸತ್ಯ ಧರ್ಮದ. ಮಾರ್ಗದಿಂದ ಮಾತ್ರ ಬಿಡುಗಡೆ ಎಂದಾಗ ಬೌತಿಕ
ಸತ್ಯವನ್ನು  ಇದೇ ಧರ್ಮ ಎಂದು ಮೂಲ ಬಿಟ್ಟು ನಡೆದರೆ
ತಾತ್ಕಾಲಿಕ ವಷ್ಟೆ. ಈಗ ಕೊರೊನ ಹೇಗೆ ತಿರುಗಿ ಬಂದಿದೆಯೋ  ಹಾಗೆಯೇ  ಮಾಡಿದ ತಪ್ಪಿಗೆ ಶಿಕ್ಷೆಯಿದೆ. ಇಲ್ಲಿ
ಯಾರೂ ಪರಿಪೂರ್ಣರಲ್ಲ. ಹೀಗಾಗಿ ನಮ್ಮ ನಮ್ಮ ಮೂಲ
ನಮಗೆ ಶ್ರೀ ರಕ್ಷೆ. ಕಷ್ಟ  ಎರಡೂ ಕಡೆಯಿದೆ. ಕಷ್ಟ ಪಟ್ಟರೆ ಸುಖವಿದೆ. ಎಲ್ಲಿಂದ ಬಂದಿತೋ ಜೀವ ಅಲ್ಲಿಗೆ ಹೋಗೋವರೆಗೂ  ಕಷ್ಟ ನಷ್ಟ ತಪ್ಪಿದ್ದಲ್ಲ.ಇದಕ್ಕೆ ರಾಜಕೀಯ
ಬಿಟ್ಟು ರಾಜಯೋಗದೆಡೆಗೆ ನಡೆಯುತ್ತಿದ್ದರು ಹಿಂದಿನ ಮಹಾತ್ಮರುಗಳು. ಈಗಿನವರಲ್ಲಿ  ಕೊನೆ ಉಸಿರಿರುವವರೆಗೂ
ರಾಜಕೀಯದ ದಾಹ ಬಿಡುತ್ತಿಲ್ಲ.ಇದಕ್ಕೆ ಕಾರಣ ಸಹಕಾರ.
ಇದು ಧಾರ್ಮಿಕ ಕ್ಷೇತ್ರದಲ್ಲಿಯೂ ಇರುವುದು ದೇಶದ ಧರ್ಮ
ರಕ್ಷಣೆಗೆ  ತೊಡಕಾಗಿದೆ.ಪ್ರಜಾ ಧರ್ಮವೆ ಶ್ರೇಷ್ಠ.
ಪರಧರ್ಮದವರ   ಶಿಕ್ಷಣ, ವ್ಯವಹಾರ,ಸಾಲ,ತಂತ್ರಜ್ಞಾನ, ವಿಜ್ಞಾನ ಎಲ್ಲಾ  ಬೇಕು.ಅವರು ಬೇಡ ಎಂದರೆ?
ಹಾಗೆ  ಭಾರತದ ನೆಲ ಜಲ ವ್ಯವಹಾರ,ಶಿಕ್ಷಣ,ಪ್ರಜಾಸರ್ಕಾರ
ಎಲ್ಲಾ ಪಡೆದು ಭಾರತವನ್ನೇ ಆಳಲು ಹೊರಟರೆ?
ನಾವೆಲ್ಲರೂ ಎಲ್ಲಿ ಸೋತಿರುವುದು? ಗೆದ್ದವರು ಯಾರು?
ಧರ್ಮ ಯಾವುದು? ಅಧರ್ಮ ಎಲ್ಲಿದೆ? ಸಾಲಗಾರರು ಯಾರು? ತೀರಿಸುವುದು ಹೇಗೆ? ಎಲ್ಲಾ ನಮ್ಮ ಜ್ಞಾನದಲ್ಲಿದೆ.
ಸರ್ಕಾರ ಏನೂ ಮಾಡಲಾಗದು. ನಮ್ಮ ಸಹಕಾರ ಸತ್ಯಕ್ಕೆ
ಇದ್ದರೆ  ಸಾಲಮನ್ನಾ ಪರಮಾತ್ಮನೆ ಮಾಡಬಹುದು. ಇಲ್ಲವಾದರೆ ಪರದೇಶಿಗಳಾಗಿ  ಹಿಂದೆ ನಿಲ್ಲುವುದಷ್ಟೆ  ಹಿಂದೂ
ಧರ್ಮ ವಾಗಬಹುದು. ಹಿಂದುಳಿದವರು ಯಾರು?
ಅಲ್ಪಸಂಖ್ಯಾತರಲ್ಲಿ ಒಗ್ಗಟ್ಟು ಮುಖ್ಯ. ವಿಶ್ವದಲ್ಲಿ ಅಲ್ಪಸಂಖ್ಯಾತರು ಯಾರು? ಹೊರಗಿನಿಂದ  ಪರರನ್ನು ಒಳಗೆ ಕರೆದು ಒಳಗಿದ್ದವರನ್ನು ಹೊರಗೆ ದೂಡಿದರೆ ಆಳೋರು ಯಾರು? ಇದು ನಮ್ಮ ಒಳಗಿನ ಜ್ಞಾನಕ್ಕೆ ತಿಳಿಸಿರುವುದಾಗಿದೆ.
ಮೂಲ ಜ್ಞಾನ ಬೆಳೆಸಿಕೊಂಡು ಹೊರಗಿನ ಜ್ಞಾನ  ತಿಳಿಯಬಹುದು. ಕಾಲದ ಪ್ರಭಾವವಷ್ಟೆ.ಅನುಭವಿಸಿದ ಮೇಲೆ ಅರ್ಥ ಆಗಬೇಕು. ಕೆಲವರಿಗೆ ಮೊದಲೇ ತಿಳಿಯುತ್ತದೆ.ಕೆಲವರಿಗೆ ಹೇಳಿ ಕೇಳಿದ ಮೇಲೆ ,ಮತ್ತೆ ಕೆಲವರಿಗೆ  ದಾರಿಯಿಲ್ಲದೆ ಇದ್ದಲ್ಲೇ ಇರುತ್ತಾರೆ. ಕೆಲವರು ಮತ್ತೂ ದಾರಿ ತಪ್ಪಿಸಿ  ನಡೆಸುತ್ತಾರೆ. ಪರಮಾತ್ಮನೆ ಎಲ್ಲರನ್ನೂ ನಡೆಸಿದರೂ ಅವರವರ ಕರ್ಮಕ್ಕೆ ತಕ್ಕಂತೆ ಜೀವ
ನಡೆಯುತ್ತದೆ. ಸಮಸ್ಯೆಗಳು ಬೆಳೆದಿರೋದೆ ರಾಜಕೀಯದಿಂದ. ರಾಜಕಾರಣಿಗಳನ್ನು  ಮುಂದಿಟ್ಟುಕೊಂಡು  ಮಧ್ಯವರ್ತಿಗಳು ನಡೆಸುತ್ತಿರುವ  ವ್ಯವಹಾರದಲ್ಲಿ ಧರ್ಮ ಎಲ್ಲಿದೆ? ಪ್ರಜಾಧರ್ಮ  ಎಲ್ಲರಿಗೂ
ಒಂದೇ  ಅಲ್ಲವೆ?

Tuesday, March 17, 2026

ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?


ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತಿ ಯನ್ನರಿತ ಪೋಷಕರನ್ನು ಕೇಳದಿರೋದೆ ಪರಿಸ್ಥಿತಿ  ಹಾಳಾಗಲು ಕಾರಣ. ಇಷ್ಟಕ್ಕೂ  ಮನೆಯೊಳಗಿನ  ಸಮಸ್ಯೆಗೆ  ಮಕ್ಕಳಾದರೂ ಏನು ಮಾಡಲು ಸಾಧ್ಯ. ಪೋಷಕರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ ಎನ್ನಬಹುದು. ನಮ್ಮಲ್ಲಿರುವ ದೋಷಗಳನ್ನು ನಾವೇ ಕಂಡುಕೊಳ್ಳಲು ಸಾಧ್ಯವಾದರೆ ಪ್ರಯತ್ನಪಡಬೇಕಷ್ಟೆ. ಅದೂ ಸಾಧ್ಯವಾಗದಿದ್ದರೆ ಬೇರೆಯವರನ್ನು ಸರಿಪಡಿಸಲಾಗದೆಂಬುದನ್ನು ಶ್ರೀ ರಾಮಕೃಷ್ಣ ಪರಮಹಂಸರೆ ತಿಳಿಸಿದ್ದಾರಲ್ಲ. ಶ್ರೀ ರಾಮಕೃಷ್ಣ ಪರಮಹಂಸರು ಸಂಸಾರಕ್ಕೆ ಬಂದೂ ಸಂನ್ಯಾಸಿಗಳಾಗಿದ್ದರು. ಇಂದು  ಸಂನ್ಯಾಸಿಗಳಾಗಿದ್ದು ಸಂಸಾರಿಗಳ ಋಣದಲ್ಲಿರುವವರು ಬಹಳ ಮಂದಿ ಇದ್ದಾರೆ. ಮಕ್ಕಳ ವಿಚಾರ ಪೋಷಕರಿಗೇ ಅರ್ಥ ವಾಗದಿದ್ದರೆ   ಹೊರಗಿನ  ಗುರುಗಳಾದರೂ ಏನೂ ಮಾಡಲಾಗದು.
ಎಲ್ಲರೂ    ದೇಶದ ಪ್ರಜೆಗಳಾಗಿ ದೇಶದ ಶಿಕ್ಷಣದ ಬಗ್ಗೆ ಚಿಂತನೆ ನಡೆಸಲು ಅಧಿಕಾರ ಬೇಕೆ?  ದೇಹದೊಳಗೆ ದೇಶೀಯ ಶಿಕ್ಷಣವಿಲ್ಲದೆ ವಿದೇಶಿ ಶಿಕ್ಷಣ ನೀಡಿ  ಸರ್ಕಾರದ  ವಿರುದ್ದ ನಿಂತು ಬೇಡುವವರಿದ್ದರೆದೇಶ ಮುಂದೆ ನಡೆಯಲು 
ಸಾಧ್ಯವೆ? ವಿದೇಶಿಗಳೆ ಮುಂದೆ ಬರುತ್ತಾರಷ್ಟೆ. ಮನೆಯೊಳಗೆ ವಿದೇಶಿಗರನ್ನು ಬೆಳೆಸೋ  ಶಿಕ್ಷಣದಿಂದ   ಪೋಷಕರೆ ಪರದೇಶಿಗಳಾಗಿದ್ದರೆ ಅವರಿಗೆ ಸರ್ಕಾರ ಸಹಾಯ ಮಾಡಿ
ಸಾಕೋವಷ್ಟು  ಮುಂದೆ  ಬರದಿದ್ದರೆ ಸರಿ. ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳಿಗಿದ್ದ ಸಾಮಾನ್ಯಜ್ಞಾನ
ತಿರಸ್ಕರಿಸಿ  ನಡೆದ ಪರಿಣಾಮವೆ ಇಂದಿನ ಕೊರೊನ
ಎನ್ನಬಹುದೆ?
ಔಷಧ  ದೇಹಕ್ಕೆ ಸೇರಿಸಬಹುದು.ಆತ್ಮಕ್ಕೆ ಔಷಧ ಬೇಡವೆ?. ಆತ್ಮ ಅನಾರೋಗ್ಯದಲ್ಲೇ ಹೋದರೆ ಮತ್ತೆ ಹುಟ್ಟಿದಾಗ ರೋಗವೂ ಇರುತ್ತದೆ ಅಲ್ಲವೆ? ಈ ವಿಚಾರಒಂದು ವರ್ಷ
ದಿಂದಲೂ  ತಿಳಿಸುತ್ತಿದ್ದರೂ  ಈಗಲೂರಾಜಕೀಯಬಿಡದಿದ್ದರೆ  
ಪರಿಹಾರವಿಲ್ಲ. ಆತ್ಮ‌ ಸಾಯಲು ಸಾಧ್ಯವೆ?

ರಕ್ತ ಸಂಬಂಧ ದೊಡ್ಡದೋ ಋಣ ಸಂಬಂಧ ವೋ?
ಮಾನವನ ಜನ್ಮವಾಗೋದು ರಕ್ತ ಸಂಬಂಧ ದಿಂದ.
ಜನ್ಮದಾರಭ್ಯದಿಂದ ಹಿಡಿದು ಮರಣದವರೆಗೂ ಬೆಳೆಯುವ ಋಣ ಸಂಬಂಧ ವನ್ನು ಈವರೆಗೆ ಯಾರೂಪೂರ್ಣಪ್ರಮಾಣ
ದಲ್ಲಿ ತೀರಿಸಲಾಗಿಲ್ಲ. ಹೀಗಾಗಿ ಜನ್ಮ ಜನ್ಮಗಳ ಸಂಬಂಧ ಗಳು  ಮಾನವನಿಗೆ  ಬಿಡಿಸಲಾಗದಕಗ್ಗಂಟಾಗುತ್ತಿದೆ. 
ಋಣ ಎಂದರೆ ಸಾಲ. ಇಲ್ಲಿ ಸಂಸಾರ ಹಾಗು ಸಮಾಜದ ಸಾಲವನ್ನು ತೀರಿಸಲು ಜೀವಾತ್ಮಭೂಮಿಗೆ  ಬಂದಿರುವಾಗ 
 ಅದನ್ನು ತೀರಿಸಲು ಬೇಕು ಸತ್ಯಜ್ಞಾನ.
 ಮಿಥ್ಯಜ್ಞಾನದಿಂದ ವ್ಯವಹಾರ ನಡೆಸಬಹುದು. ವ್ಯವಹಾರದಿಂದ. ಹಣ,ಅಧಿಕಾರ ಪಡೆದು  ಸಮಾಜದ ಋಣ ತೀರಿಸಬಹುದು. ಯಾವಾಗಅಜ್ಞಾನ ಹೆಚ್ಚಾಗುವುದೋ  ಆಗ  
ಇನ್ನಷ್ಟು ಅಧರ್ಮಕ್ಕೆತಲೆಬಾಗಿ  ಋಣವನ್ನು ಹೆಚ್ಚಿಸಿಕೊಂಡು
 ಸಮಾಜವನ್ನುದಾರಿ ತಪ್ಪಿಸುವವರು ಬೆಳೆಯುತ್ತಾರೆ. 
ಹಿಂದಿನ ಕಾಲದಲ್ಲಿ ಈ ಕಾರಣಕ್ಕಾಗಿಯೇ ಪ್ರಾಥಮಿಕ
ಶಿಕ್ಷಣವನ್ನು  ಮೂಲ ಧರ್ಮ,ಕರ್ಮ,ಭಾಷೆ, ಸಂಸ್ಕೃತಿ
ಬಿಡದೆ  ನೀಡುತ್ತಿದ್ದರು. ಇದರಿಂದಾಗಿ ಮಕ್ಕಳಲ್ಲಿ ನೈತಿಕತೆ
ಬೆಳೆಸೋ ಸಮಾನತೆಯ ಶಿಕ್ಷಣ ಅಗತ್ಯವಿದೆ. ಆದರೆ ಕಾಲದ ಪ್ರಭಾವ ಮಿತಿಮೀರಿದ ಅಜ್ಞಾನದಲ್ಲಿ, ಸಮಾನತೆಯ ಹೆಸರಲ್ಲಿ   ರಾಜಕೀಯತೆಯನ್ನು ಬೆಳೆಸಿ   ಮಾನವೀಯ 
ಮೌಲ್ಯಗಳನ್ನು ಮೂಲೆಗೆ ತಳ್ಳಿದರೆ ಇಲ್ಲಿ ಬಕಣ್ಣಿಗೆ ಕಾಣೋ 
ವ್ಯವಹಾರಿಕ ಸಂಬಂಧ ವೇ ಮುಖ್ಯ.
ವ್ಯವಹಾರದಲ್ಲಿ ರಕ್ತ ಸಂಬಂಧ ವೂ ಇಲ್ಲ.ಋಣ ಸಂಬಂಧ ವೂ ಇಲ್ಲ. ಕೇವಲ ಲಾಭ ನಷ್ಟಗಳ ಲೆಕ್ಕಾಚಾರವಷ್ಟೆ. ಹಣದಿಂದ  ಲಾಭವಾದರೆ ಜ್ಞಾನದಿಂದ ನಷ್ಟ. .
ಜ್ಞಾನದಿಂದ ಲಾಭವಾದರೆ ಹಣದ ನಷ್ಟ ಕಷ್ಟ.
ಸಮಾಜದ ಋಣ ಸಂಸಾರದೊಳಗಿದ್ದರೂ  ಸಂಸಾರದ
ಋಣ ಸಮಾಜದ ಕಡೆಗೆ  ಬಂದಾಗ  ಸಾಲಮಯ  ಜಗತ್ತು
ಅದರೊಳಗಿರುವ ಮಾನವ ಋಣಮುಕ್ತರಾಗೋದಕ್ಕೆ
ಬಹಳ ಕಷ್ಟ. ಹೀಗಾಗಿ  ಋಣವನ್ನು ಕಳೆದುಕೊಳ್ಳಲು
ಧಾರ್ಮಿಕ ಕಾರ್ಯ ಹೆಚ್ಚಾಯಿತು. ಧಾರ್ಮಿಕ ಕಾರ್ಯ
ರಾಜಕೀಯದ ಕಡೆ ನಡೆದಾಗಲೆ ಅಜ್ಞಾನ ಪ್ರಾರಂಭ.
ಎಲ್ಲಿಯವರೆಗೆ ಧಾರ್ಮಿಕ ಕ್ಷೇತ್ರದಲ್ಲಿ  ಅಸಮಾನತೆ, ಅಸಹಕಾರ,‌ಸ್ವಾರ್ಥ,ಅಹಂಕಾರ,ಅಸತ್ಯ,ಅನ್ಯಾಯ
ಭ್ರಷ್ಟಾಚಾರಕ್ಕೆ  ಬೆಲೆ ಇರುವುದೋ ಅಲ್ಲಿಯವರೆಗೆ
ಧರ್ಮ  ರಕ್ಷಣೆ ಕಷ್ಟ. ಈ ಸಂಬಂಧಗಳಿಂದ ಬಿಡುಗಡೆ
ಪಡೆಯಲು ಯೋಗಿಗಳಿಂದ ಸಾಧ್ಯವೆನ್ನುತ್ತಾರೆ.
ಈಗ ಕೆಲವು ಯೋಗಿಗಳೇ ಭೋಗ ಜೀವನಕ್ಕಾಗಿ ಹೊರ
ಬಂದು ರಾಜಕೀಯ ಸೇರಿದಾಗ  ರೋಗಗ್ರಸ್ತ ಸಮಾಜ
ಹೆಚ್ಚಾಗುತ್ತದೆ. ಸಂನ್ಯಾಸ ಎಂದರೆ ಎಲ್ಲವನ್ನೂ ಬಿಡುವುದು.
ಇದರಲ್ಲಿ ಕೇವಲ ಸಂಸಾರದಿಂದ  ದೂರ ಇರುವುದು ಒಂದಾದರೆ, ಸಂಸಾರಿಗಳಿಂದಲೇ ದೂರ ಇರೋದು ಇನ್ನೊಂದು. ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಋಣ ದೇಶದ 
ತುಂಬಾ ತುಂಬಿದ್ದರೂ, ದೇಶದ ಋಣ ತೀರಿಸಲು ಪ್ರಜೆಗಳಿಗೆ  ಕಷ್ಟವಾಗಿದೆ. ಸಣ್ಣ ದಾದ  ರಕ್ತ  ಸಂಬಂಧದ ಋಣವನ್ನೇ 
ತೀರಿಸಲಾಗದೆ  ಸಮಾಜದ ಋಣ ಏರಿಸಿಕೊಂಡು  ಅದನ್ನು  ತೀರಿಸಲಾಗದೆ ದೇಶವನ್ನೇ ಸಾಲಕ್ಕೆ ತಳ್ಳಿ,ವಿದೇಶದ ಋಣವನ್ನು ಹೆಚ್ಚಿಸಿ ಅವರನ್ನೇ ದೇಶದೊಳಗೆ  ಕರೆತಂದು
 ಭೂಮಿಯನ್ನೇ ಬಿಟ್ಟು  ಪರಾವಲಂಬನೆ ಗೆ ಒಳಗಾಗಿರುವಾಗ ಸ್ವಾತಂತ್ರ್ಯಯಾರ ಪಾಲಾಯಿತು? ಯಾರ ಋಣಬಾರದಿಂದ
 ಯಾರಿಗೆ ಲಾಭವಾಯಿತು? 
ರಕ್ತವನ್ನು ದಾನಮಾಡುವಷ್ಟು ವಿಜ್ಞಾನ ಜಗತ್ತು ಬೆಳೆದಿದೆ.
ರಕ್ತಹಂಚಿಕೊಂಡು ಹುಟ್ಟಿ ಬೆಳೆದ ಹತ್ತಿರದ ಸಂಬಂಧ
ಬಂಧನ ವಾದರೆ  ಅಜ್ಞಾನವಲ್ಲವೆ?
ಯಾರಿಗೆ ಯಾರೂ ಶತ್ರುವಲ್ಲ.ಮಿತ್ರರಲ್ಲ ಎನ್ನುವುದಾದರೆ
ಸಮಾಜದ ಋಣ ತೀರಿಸಲು  ಕಷ್ಟವಿಲ್ಲ. ಪರಮಾತ್ಮನು
ಎಲ್ಲರಲ್ಲಿಯೂ ಇದ್ದಾನೆಂದ ಮೇಲೆ ಯಾರೂ ಬೇರೆಯಲ್ಲ
ಆದರೆ, ಅವರವರ ಹಿಂದಿನ ಜನ್ಮದ ಧರ್ಮ ಕರ್ಮಗಳ
ಮೇಲೆ ನಿಂತಿರುವ ಋಣವನ್ನು  ಯಾರೂ  ಅರ್ಥ ಮಾಡಿ
ಕೊಳ್ಳಲಾಗದೆ  ಮನುಕುಲವು ಅತಂತ್ರಸ್ಥಿತಿಗೆ ತಲುಪಿದೆ.
ಕೊರೊನ ರೋಗವೂ  ಜೀವಕ್ಕೆ ಸವಾಲಾಗಿ ನಿಂತಿದ್ದರೂ
ಅದರೊಳಗೂ ರಾಜಕೀಯತೆ ಪ್ರದರ್ಶನ ಮಾಡುತ್ತಾ ವ್ಯವಹಾರ ನಡೆಸಿದರೆ  ಈ ರೋಗದ ಋಣವನ್ನು ದೇಹ
ಅನುಭವಿಸಲೇಬೇಕಲ್ಲವೆ?
ವರ್ಷದ ಹಿಂದೆ ಆವರಿಸಿದ ಕೊರೊನ ಮತ್ತೆ ತನ್ನ ಹಿಂದಿನ ಪ್ರಭಾವ ತೋರಿಸುತ್ತಿದೆ ಎಂದರೆ, ಮಾನವನು
ಎಚ್ಚೆತ್ತುಕೊಳ್ಳದೆ ಮತ್ತೆ ಹಿಂದಿನ ಹಾಗೆ ಭ್ರಷ್ಟಾಚಾರ ದಲ್ಲಿ
ಹೊರಗೆ ಬಂದಿದ್ದಾನೆಂದರ್ಥ.
ರೋಗದ ಪ್ರಾರಂಭದಲ್ಲಿ  ಎಲ್ಲಾ ಹೆದರಿ ಮೂಲೆ ಸೇರಿ
ಧಾರ್ಮಿಕ ಕ್ಷೇತ್ರವೇ ತಣ್ಣಗಾಗಿತ್ತು.ಆದರೆ  ಔಷಧ ಬಂದ
ಮೇಲೆ ಯಥಾಪ್ರಕಾರ ಸ್ವೇಚ್ಚಾಚಾರಕ್ಕೆ ಇಳಿಯುತ್ತಿರುವ
ಜನರಿಗೆ ಮತ್ತೆ  ಎಚ್ಚರಿಕೆಯ ಗಂಟೆ ಹೊಡೆಯುತ್ತಿರುವುದರ ಉದ್ದೇಶ ಒಂದೇ, ಜೀವ ಇದ್ದರೆ ಜೀವನ. ಜೀವನ ಎಂದರೆ ಜೀವಿಗಳ ವನ.ಒಗ್ಗಟ್ಟು ಇದ್ದರೆ ಶಕ್ತಿ. ಈ ಸೂಕ್ಷ್ಮ ವಿಚಾರಗಳು  ಜನಸಾಮಾನ್ಯರಿಗೆ  ಅರ್ಥ ವಾದರೂ ಎತ್ತರಕ್ಕೆ ಏರಿದವರಿಗೆ 
ಅರ್ಥ ಆಗದೆ  ಜನರನ್ನು ರಾಜಕೀಯಕ್ಕೆಳೆದು  ತಮ್ಮ 
ಅಧಿಕಾರವನ್ನುಚಲಾಯಿಸಿದರೆ  ಸಂಬಂಧ ಗಳಲ್ಲಿ ಯಾವ
 ಸಾತ್ವಿಕತೆ ಇರೋದಿಲ್ಲ. 
ರಕ್ತಸಂಬಂಧವಾಗಲಿ,ಋಣ ಸಂಬಂಧ ವಾಗಲಿ ಯಾರೂ ಕಣ್ಣಿನಿಂದ ನೋಡಿ ತೀರಿಸಲಾಗದು.
ಇದಕ್ಕೆ ಜ್ಞಾನದ ಚಕ್ಷುವಿನ‌ ಅಗತ್ಯವಿದೆ. ಜ್ಞಾನ ಒಳಗಿದೆ.
ಕಣ್ಣು ಹೊರಗಿದೆ. ಆಂತರಿಕ ಕಣ್ಣನ್ನು ತೆರೆಸಲು ಕೊರೊನ
ಬಂದಿದೆ. ಇದನ್ನು ವ್ಯವಹಾರದಿಂದ ಹೋಗಲಾಡಿಸಲು
ಕಷ್ಟವಿದೆ. ಧರ್ಮದಿಂದ, ಸತ್ಯಜ್ಞಾನದಿಂದ ಸಾಧ್ಯವಿದೆ.
ಸತ್ಯ ನಮ್ಮೊಳಗಿದೆ. ಸತ್ಯವೇ‌ದೇವರಾಗಿದೆ.
ಆತ್ಮಾವಲೋಕನ ಅಗತ್ಯವಾಗಿದೆ.
ಅಣುಗಾತ್ರದ ಒಂದು ವೈರಸ್‌ ಮನುಕುಲಕ್ಕೆ ಸವಾಲಾಗಿ
ನಿಂತಿರುವಾಗ  ಅಸಂಖ್ಯಾತ  ಅಣು ಪರಮಾಣುಗಳ ಹಿಂದೆ  ನಿಂತು  ತನ್ನ ರಾಜಕೀಯ ಪ್ರಭಾವಕ್ಕೆ  ತಿಳಿಯದೆ
ವಶವಾಗಿರುವ  ಮನುಕುಲದ ಒಳಿತು ವೈಚಾರಿಕತೆಯಲ್ಲಿ
ಅಡಗಿದೆ. ವೈಜ್ಞಾನಿಕ  ಜಗತ್ತು ಇದನ್ನು ವಿರೋಧಿಸಿದರೆ ವೈರಸ್ ಇನ್ನಷ್ಟು  ಉಗ್ರರೂಪ ತಾಳುವುದಿಲ್ಲವೆ?
ವಾದ ವಿವಾದಕ್ಕೆ ಸಿಲುಕದ  ಇದನ್ನು ಆತ್ಮಜ್ಞಾನದಿಂದ ತಿಳಿಯೋ ಬದಲು  ವಿಜ್ಞಾನದಿಂದ ಓಡಿಸಲು ಕಷ್ಟ.
ಯಾಕೆ ಭಾರತ ಹೀಗಾಯಿತು? ಇದಕ್ಕೆ ಸ್ವದೇಶಿಗಳು ಪರಕೀಯರನ್ನು  ಆಶ್ರಯಿಸಿದ್ದು ಕಾರಣವೆ? 
ಅಥವಾ ನಮ್ಮ ಅಜ್ಞಾನದ ಶಿಕ್ಷಣದ ರಾಜಕೀಯ ಕಾರಣವೆ?
ಮಾಧ್ಯಮಗಳು ಈ ವಿಚಾರದಲ್ಲಿ ಚರ್ಚೆ ನಡೆಸಿದರೆ ಉತ್ತಮ.
ಚರ್ಚೆ ನಡೆಸುವುದಕ್ಕೂ  ಇವರಿಗೆ ಮನೆಯಿಂದ ಹೊರಗಿರುವ  ಪ್ರತಿಷ್ಠಿತರೆ  ಆಗಬೇಕಾದರೆ ಯಾವ ಉಪಯೋಗವಿಲ್ಲ. ಅನುಭವವಿಲ್ಲದ ವಿದ್ಯೆಗಿಂತ ಅನುಭವದ ಜ್ಞಾನವೇ ದೊಡ್ಡದು. ಅದು ಪೋಷಕರಲ್ಲಿದೆ. ದೇಶದ‌ ಸಾಮಾನ್ಯ ಪ್ರಜೆಗಳಲ್ಲಿದೆ. ಪ್ರಜಾಪ್ರಭುತ್ವ  ದೇಶದಲ್ಲಿ ಪ್ರಜೆಗಳ ಸಾಮಾನ್ಯಜ್ಞಾನದಿಂದಲೇ ಬದಲಾವಣೆ ಸಾಧ್ಯವಿದೆ. ಇದನ್ನು ಮಾಧ್ಯಮದವರು ತಿಳಿದಾಗಲೆ  ಬದಲಾವಣೆ ಸಾಧ್ಯವೆನ್ನಬಹುದು. ಯಾರನ್ನೋ ಯಾರೋ ಆಳಲು ಇದು
ರಾಜಪ್ರಭುತ್ವವಲ್ಲ. ಧರ್ಮ ವೂ ಅಲ್ಲ.

Saturday, March 7, 2026

ಭೂ ಗ್ರಹದ ರಕ್ಷಣೆ

ಭಾಗವತದಲ್ಲಿ ಬರುವ ಒಂದು ವಿಷಯ, ಭೂಮಿಯನ್ನು ನೀರಿನಲ್ಲಿ ಮುಳುಗಿಸಿದ ಅಸುರರಿಂದ ಸಂಕಷ್ಟಗಳಾಗಿ ಬ್ರಹ್ಮನಿಗೆ ಸೃಷ್ಟಿ ಕಾರ್ಯಕ್ಕೆ ಅಡಚಣೆಗಳಾದಾಗ ಬ್ರಹ್ಮನ  ಮೂಗಿನ ಹೊಳ್ಳೆಯಿಂದ ಭಗವಂತನು ವರಾಹಾವತಾರದಲ್ಲಿ ಹೊರಬಂದು ಬೃಹದಾಕಾರದಿಂದ ಬೆಳೆದು  ನಿಂತು  ಸಮುದ್ರದೊಳಗೆ ಹೊಕ್ಕಿ  ಭೂಮಿಯನ್ನು ಎತ್ತಿ ಸ್ವಸ್ಥಾನದಲ್ಲಿರಿದನೆಂದಿದೆ. ಆ ಸಮಯದಲ್ಲಿ  ಹಿರಣ್ಯಾಕ್ಷನ ಉಪಟಳ  ತ್ರಿಲೋಕದವರೆಗೂ ಸಹಿಸಲಾಗದ ಪರಿಸ್ಥಿತಿಯಲ್ಲಿ  ಹಿರಣ್ಯಾಕ್ಷನನ್ನು  ಭಗವಂತ ಕೊಂದನೆಂದಿದೆ.
ಅಂದರೆ  ಭೂಮಿ ಇಲ್ಲವಾದಾಗಲೂ   ದೇವಾಸುರರು  ಜೀವಿಸುತ್ತಿದ್ದರೆಂದಾಯಿತು. ಸಪ್ತ ಲೋಕವೆಂಬುದಿದೆ ಅದರಲ್ಲಿ  ಅನ್ಯ ಜೀವಿಗಳಿವೆ.ಎಲ್ಲವನ್ನೂ  ತನ್ನ ಹತೋಟಿಯಲ್ಲಿಟ್ಟುಕೊಂಡಿರುವ ಮೂಲ ಶಕ್ತಿ ಒಂದೇ ಆಗಿದೆ. ಮೂಲಪುರುಷನೇ ಅವನಾಗಿದ್ದಾನೆ. ಅವನಿಂದಲೇ  ಜನ್ಮ ಪಡೆದ ದೇವಾಸುರರು,ಮಾನವರು,ಜೀವ ಜಂತು ಚರಾಚರಗಳೂ  ತಮ್ಮದೇ ಆದ  ದಾರಿಯಲ್ಲಿ ನಡೆದರೂ  ಮೂಲದಿಂದ ‌ಬೇರೆಯಾಗದು. 
ಹೀಗಾಗಿ ಆಧ್ಯಾತ್ಮ ಆದಿ ಆತ್ಮ ಆದಿ ದೇವ,ಆದಿ ಪುರುಷ ಶಕ್ತಿಯೆಡೆಗೆ‌  ನಡೆಯುವುದು ಅಧ್ಯಾತ್ಮವಾಗಿದೆ.‌

ಎಷ್ಟೋ ಪುರಾಣಗಳ ಕಥೆಯಲ್ಲಿ  ಆಧ್ಯಾತ್ಮ ಆದಿ ಭೌತಿಕ ಗಳ  ಸಮಾಗಮವಾಗಿದೆ. ಅದರ ಅರಿವು ಅಲ್ಪ ಸ್ವಲ್ಪ ಮಾನವ ಅರಿತು ನಡೆದು ಮಹಾತ್ಮರಾಗಿರುವರು. 
ಅಮಾನುಷ ಶಕ್ತಿ‌  ಜಗತ್ತನ್ನು ಆಳುತ್ತದೆ.‌ಆಳುವಾಗ  ಧರ್ಮ ಸೂಕ್ಮವಾಗಲಿ ಸತ್ಯವಾಗಲಿ  ತಪ್ಪಿದ್ದರೆ‌  ಆಳಾಗಿ ಜನಿಸೋದನ್ನು ತಪ್ಪಿಸಲಾಗದು. 
ಈಗಲೂ ನಾವೆಲ್ಲರೂ ಆಳುಗಳೇ ಆಗಿದ್ದರೂ ಅರಸರಾಗುವ ಕನಸನ್ನು ಕಾಣುತ್ತಾ‌ ಜೀವ ಹೋಗುತ್ತದೆ‌ ಮತ್ತೆ ಬರುತ್ತದೆ.ಕಾಲಮಾನಕ್ಕೆ ತಕ್ಕಂತೆ ಕೆಲವುಬದಲಾವಣೆ ಭೂಮಿಯಲ್ಲಾದರೂ  ಅನ್ಯಗ್ರಹದಲ್ಲಾಗಿರದು.‌

Wednesday, January 28, 2026

ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ಧರ್ಮದಿಂದ ದುಡಿದು ಗಳಿಸಿದರಲ್ಲಿಯೇ ದಾನ ಮಾಡಿ ಹೋಗಿದ್ದಾರೆಂದರೆ  ಆತ್ಮಜ್ಞಾನದ ನಂತರವೇ  ಪರಮಸತ್ಯದ ಅರಿವಾಗೋದು. ಅಜ್ಞಾನದ ಕಣ್ಣಿಗೆ ಎಲ್ಲವೂ ತನ್ನದೆಂದೇ ಕಾಣೋದು ಮಾಯೆಯಾಗಿದೆ. ಅದಕ್ಕೆ ಶ್ರೀ ಶಂಕರರು ತಿಳಿಸಿದಂತೆ ಜಗತ್ ಮಿಥ್ಯ ಬ್ರಹ್ಮನ್ ಸತ್ಯ. ಸತ್ಯವನ್ನು ಬಿಟ್ಟು ಜಗತ್ತಿನಲ್ಲಿ ನಡೆದರೆ ಭೂಮಿ  ಅತೃಪ್ತ ಆತ್ಮಗಳ ಸಾಮ್ರಾಜ್ಯವಾಗುತ್ತದೆ.
ಹಣಕೊಟ್ಟು ಬಡತನ ತೀರಿಸುವ ಅಜ್ಞಾನ ಬಿಟ್ಟು ಒಳಗಿನ ಸುಜ್ಞಾನ ಬೆಳೆಸೋ ಶಿಕ್ಷಣ ಕೊಟ್ಟು ನಡೆಯಲು ಸಹಕರಿಸಿದರೆ  ಸ್ವಂತ ಬುದ್ದಿ ಜ್ಞಾನ ಸ್ವಾತಂತ್ರ್ಯ ಎಲ್ಲವೂ ಆಸ್ತಿಯಾಗಿರುತ್ತದೆ.
ಕಾಲ ಬಂದಾಗ ನಮಗೆ ಸೇರಬೇಕಾಗಿದ್ದು ಸೇರುತ್ತದೆ.ಇದು ಜ್ಞಾನವೂ ಆಗಿರುತ್ತದೆ. ತಾಳ್ಮೆ ಇರಬೇಕಷ್ಟೆ.
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಬೋಗಿಗೆ ಎನ್ನುವುದು ಸತ್ಯ. ಯೋಗದಿಂದ ಋಣ ಕಳ ಎಸ್ ದರೆ ಭೋಗದಿಂದ ಋಣ ಹೆಚ್ಚುವುದಷ್ಟೆ ವ್ಯತ್ಯಾಸ.

Sunday, January 25, 2026

ಸತ್ಯಾನ್ವೇಷಣೆಗೆ ಆತ್ಮಾವಲೋಕನ ಅಗತ್ಯವಿದೆ.

ಜೀವನದಲ್ಲಿ ಸ್ವತಂತ್ರ ವಾಗಿ ಸತ್ಯಾನ್ವೇಷಣೆ ಮಾಡೋದು ಕಷ್ಟ.ಸತ್ಯವನ್ನು ಒಳಗೆ ಅನುಭವಿಸಲೂ  ಕಷ್ಟ. ಹೊರಗೆ ನೋಡಲೂ ಕಷ್ಟ. ಕಾಣದ ಸತ್ಯ ಕಾಣುವ ಸತ್ಯಕ್ಕಿಂತ ಬಹಳ ಆಳ ಅಗಲ ಎತ್ತರ ಇರುವುದರಿಂದ  ಸತ್ಯ  ಮರೀಚಿಕೆಯಂತಿರುತ್ತದೆ. ಎಲ್ಲೋ ಒಮ್ಮೆ ಅನುಭವಕ್ಕೆ ಬಂದರೂ ಹಿಡಿದಿಡಲಾಗದು. ಹೀಗಾಗಿ ಎಷ್ಟೋ ಮಹಾತ್ಮರು ಸಾದುಪುರುಷರು ಸತ್ಯವನ್ನು  ತೋರಿಸಲಾಗದೆ ಮುಂದೆ ಹೋಗಿರುವರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದು ಪ್ರಶ್ನೆ ಮಾಡೋದೇ ತಪ್ಪೆ? 
ತಪ್ಪು ಪ್ರಶ್ನೆ ಮಾಡೋದರಲ್ಲಿಲ್ಲ  ತೋರಿಸಲಾಗದ್ದನ್ನು  ನೋಡಿದೆ ಎನ್ನುವುದು ತಪ್ಪು. ಅನುಭವಿಸಿರೋದನ್ನು ಹೇಳಬಹುದಷ್ಟೆ ಆದರೆ ಅಂತಹ ಅನುಭವ ಎಲ್ಲರಿಗೂ ಆಗಲೇಬೇಕು ಆಗುತ್ತದೆ ಎನ್ನಲಾಗದು. 
ದೇವರ ವಿಷಯದಲ್ಲೂ ಇದೇ ನಡೆದಿದೆ. ದೈವತ್ವಕ್ಕೆ ಇತಿಮಿತಿಗಳಿಲ್ಲ ಇದು ಯಾವ ರೂಪದಲ್ಲಿ ಯಾರಲ್ಲಾದರೂ  ಇರಬಹುದು. ಹಾಗಂತ ಅವರೆ ದೇವರು ಎನ್ನಲಾಗದು.
ವ್ಯಕ್ತಿಗಿಂತ ಶಕ್ತಿ ದೊಡ್ಡದು. ಆ ಶಕ್ತಿ ದೈವೀಕ ,ಅಸುರಿ ಮಾನವೀಯ ಗುಣಗಳನ್ನು ಹೊಂದಿರುವಾಗ  ಅವರವರ ಕಾಯಕ ನಡೆ ನುಡಿಯಲ್ಲಿ  ಕಂಡರೂ  ಅದೂ ಯಾವ ರೂಪ ತಾಳಬಹುದೆನ್ನುವ  ಸ್ಪಷ್ಟವಿರದು. ಕೊನೆಯುಸಿರಿರುವರೆಗೂ ಮಾನಸಿಕ ಬದಲಾವಣೆ ಮನುಷ್ಯನಿಗಾಗುತ್ತದೆ.

ಒಬ್ಬ ಸಾಮಾನ್ಯ ವ್ಯಕ್ತಿ  ತನ್ನ ಸಾತ್ವಿಕ ಗುಣದಿಂದ ದೈವತ್ವಕ್ಕೆ ಏರಬಹುದು.ತಾಮಸಿಕ ಗುಣದಿಂದ  ಅಸುರರಾಗಬಹುದು .
ಹಾಗಾಗಿ ಇರುವ ಒಂದು ಸತ್ಯವ ಹಿಡಿದವರು ದೇವರೆಡೆಗೆ ನಡೆದರೆ  ಅರ್ಧ ಸತ್ಯ ಮಾನವನನ್ನು  ಎರಡೂ ಕಡೆ ಎಳೆಯಿತು.ಅಸತ್ಯವಂತೂ  ತೀರಾ ಕೆಳಮಟ್ಟದವರೆಗೆಳೆದು  ಅಜ್ಞಾನ ಬೆಳೆಸಿತು.‌ಹೀಗಾಗಿ ಸತ್ಯವೇ ದೇವರೆಂದರು. ಅದು ಆತ್ಮವಿಶ್ವಾಸ ಆತ್ಮಜ್ಞಾನ ಆತ್ಮಾವಲೋಕನ ದೆಡೆಗೆ  ನಡೆಸಿ ಆಧ್ಯಾತ್ಮ  ಸಾಧನೆಯಾಯಿತು. ಆಧ್ಯಾತ್ಮ  ಸಾಧನೆ ಅಂತರಂಗದ ಶುದ್ದಿಯಿಂದಾದರೆ  ಆಧ್ಯಾತ್ಮ ವಿಜ್ಞಾನ.
ಭೂಮಿಯ ಮೇಲಿದ್ದೇ  ಆಕಾಶಕಾಯ ಗ್ರಹ ನಕ್ಷತ್ರಗಳ ಚಲನ ವಲನಗಳನ್ನು ತಿಳಿಸೋದಕ್ಕೆ ಆತ್ಮಜ್ಞಾನಿಗಳಿಗೆ‌ಮಹರ್ಷಿಗಳಿಗೆ 
ಸಾಧ್ಯವಾಗಿದೆ ಎಂದರೆ  ಒಳಗಿರುವ ಆತ್ಮವೇ ದೇವರು. ಇದು ಅಸುರರೊಳಗಿದ್ದರೂ  ಸರಿ ಸುರರಲ್ಲಿದ್ದರೂ ಸರಿ ಪರಮಾತ್ಮನೊಬ್ಬನೆ  ಎಲ್ಲರನ್ನೂ ನಡೆಸೋದೆನ್ನುವುದೇ ಅಧ್ವೈತ. ಅಣು ರೇಣು ತೃಷಕಾಷ್ಟ ಪರಿಪೂರ್ಣ ಗೋವಿಂದ. ಎಂದರೆ ಅಣುಗಾತ್ರದ ಈ ಜೀವಾತ್ಮ ನಿಗೆ ಮೋಕ್ಷ ಸಿಗಲು ಗೋವಿಂದನ ನೆನೆದರಾಯಿತು. ಇದಕ್ಕೆ ಮೋಹದ ಕ್ಷಯವಾಗಬೇಕಿದೆ.

ಸ್ಮರಣೆಯೊಂದೇ ಸಾಲದೆ ಗೋವಿಂದನಾ....ನಾಮ ಒಂದೇ ಸಾಲದೇ.. ಎಂದು ದಾಸಶ್ರೇಷ್ಟರು ಹೇಳಿರುವರು.
ಪರಮಸತ್ಯ ಪರಮಾತ್ಮನ ಸತ್ಯ ಒಂದೇ ಆಗಿದ್ದರೂ  ನಾಮ ಹಲವು. ಒಂದೇ ನಾಮವಹಿಡಿದರೂ ಒಂದೇ ಸತ್ಯ.

Friday, January 23, 2026

ಸಾಮಾನ್ಯಜ್ಞಾನ ಮಾನವನಿಗೆ ಅತ್ಯಗತ್ಯ

ಸಾಮಾನ್ಯ ಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಾಮಾನ್ಯರಂತೆ ನಡೆಯುವುದೇ ಪ್ರಜಾಪ್ರಭುತ್ವದ ವಿಶೇಷ ಜ್ಞಾನ.ಆದರಿದು ಕಷ್ಟಪಡುವ ಸ್ಥಿತಿಯಲ್ಲಿದೆ ಎಂದರೆ ನಮ್ಮ ಸಹಕಾರ ಅದಮಾನ್ಯರಿಗೆ ವಿಶೇಷ ವ್ಯಕ್ತಿಗಳಿಗೆ  ವಿಜ್ಞಾನಕ್ಕೆ ನೀಡುತ್ತಾ ನಮ್ಮನ್ನು ನಾವರಿತು ನಡೆಯಲಾಗದಿರುವುದೇ ಕಾರಣ.
ಇಂದಿಗೂ ಮಕ್ಕಳು ಮಹಿಳೆಯರಲ್ಲಿ ಅಡಗಿರುವ ಈ ಸಾಮಾನ್ಯ ಜ್ಞಾನಕ್ಕೆ ಪೂರಕವಾದ ಸಹಕಾರ ಸ್ವಾತಂತ್ರ್ಯ ವಿಲ್ಲ. ಮನೆಯೊಳಗಿನ ಗೃಹಿಣಿಯ ಸಾತ್ವಿಕತೆಗೆ ಬೆಲೆಕೊಡದವರು ಹೊರಗಿನ ಮಹಿಳೆಯರಿಗೆ ಬೆಲೆಕೊಡುವರು ಎಂದರೆ ಆತ್ಮಕ್ಕೆ ಬೆಲೆಯಿಲ್ಲ ಹಣಕ್ಕಿದೆ. 
ಇಲ್ಲಿ   ಭೂಮಿಯನ್ನು ಆಳೋದಕ್ಕಾಗಿಯೇ ಹರಸಾಹಸ ಮಾಡುವ ರಾಜಕೀಯವಿದೆ.ಆದರೆ ಭೂಮಿಗೆ ಬಂದ ಉದ್ದೇಶದ ಜ್ಞಾನವಿಲ್ಲದವರ ಹಿಂದೆ ‌ನಡೆದವರೆ ಹೆಚ್ಚಾಗಿ  ಭೂ ಭಾರ ಹೆಚ್ಚಾಗಿದೆ. ಭೂ ಕಂಪನದಿಂದ ಎಷ್ಟೋ ಜೀವ ಹೋಗುತ್ತದೆಂದರೆ  ಭೂಮಿಯನ್ನು  ಕಾಣುವ  ದೃಷ್ಟಿ ಬದಲಾಗಬೇಕಿದೆ.  ಭೂಮಿ ಒಂದು ಮಾಧ್ಯಮವಷ್ಟೆ.ಇದು ಮನುಕುಲಕ್ಕೆ ಆಶ್ರಯ ಕೊಟ್ಡಿರುವಾಗ ಅದರೊಂದಿಗೆ ಸಹಕರಿಸುತ್ತಿರುವ ಎಲ್ಲಾ ದೈವೀಕ ಶಕ್ತಿಯನ್ನು  ಆರಾಧಿಸುವುದು ಅಗತ್ಯವಿದೆ.  ಆದರೆ ಆರಾಧನೆಯು  ಸ್ವಾರ್ಥ ಅಹಂಕಾರದೆಡೆಗೆ ಸಾಗಿದರೆ ಭೂಕಂಪ,ಪ್ರಕೃತಿ ವಿಕೋಪಕ್ಕೆ ಜೀವಬಲಿಯಾಗುತ್ತದೆ. ಹೀಗಾಗಿ ಇರೋದೊಂದೆ ಭೂಮಿಯಲ್ಲಿ  ಜೀವನದ ಸತ್ಯಾಸತ್ಯತೆಯನರಿಯಲು ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ.
ಒಂದೆಡೆ ದೈವಶಕ್ತಿ ಇನ್ನೊಂದು ಕಡೆ ಭೋಗದೆಡೆಗೆ ಸೆಳೆಯುವ ಅಸುರ ಶಕ್ತಿಯ ನಡುವಿರುವ ಮಾನವನಿಗೆ ತನ್ನ ಶಕ್ತಿಯ ಸದ್ಬಳಕೆಯಾಗುವುದೋ ದುರ್ಭಳಕೆ ಆಗುವುದೋ ಎನ್ನುವ ಸಾಮಾನ್ಯ ಪ್ರಜ್ಞೆ ಇದ್ದರೆ  ಇತಿಮಿತಿಯಲ್ಲಿ  ಎರಡೂ ಶಕ್ತಿಯನರಿತು ಜೀವನ ನಡೆಸಬಹುದು. ಯಾವುದೇ ಇರಲಿ ಅತಿಯಾದರೆ ಗತಿಗೇಡು.ಅತಿಯಾದ ಆತ್ಮವಿಶ್ವಾಸ ವೂ ದಾರಿತಪ್ಪಿಸಬಹುದು. ಅಹಂಕಾರವೂ ಪಾತಾಳಕ್ಕಿಳಿಸಬಹುದು. ಇದನ್ನರಿತ ಮಾನವ ಪ್ರತಿ ಹೆಜ್ಜೆ ಮುಂದೆ ಇಟ್ಟಾಗ ಹಿಂದಿನ ಹೆಜ್ಜೆಯ ಗುರುತನ್ನು ನೆನಪಿಟ್ಟುಕೊಂಡರೆ ಹಿಂದಿರುಗಿ ಬರಬಹುದು.  ಹಿಂದೂಗಳ ಈ ಸ್ಥಿತಿಗೆ  ಅಪಾರ್ಥ ಮಾಡಿಕೊಂಡು ಮುಂದೆ ಓಡಿರೋರು ಕಾರಣ. ಓಡಿದವರೂ ಒಮ್ಮೆ ನಿಂತು ಆತ್ಮಾವಲೋಕನ ಮಾಡಿಕೊಂಡಿರಬಹುದು.ಆದರೆ ಕಾಲ ಮಿಂಚಿ ಹೋದಾಗ ಚಿಂತಿಸಿ ಫಲವಿಲ್ಲ. ಇದೀಗ ನಮಗೆ ಪುರಾಣ ಇತಿಹಾಸದ ಕಥೆ ಹೇಳುತ್ತದೆ. ಧರ್ಮ ಅಧರ್ಮದ  ಹೋರಾಟದಲ್ಲಿ ಮೊದಲು ಅಧರ್ಮದ ಬಲ ಹೆಚ್ಚಾಗಿ ಕಂಡರೂ ಕೊನೆಯಲ್ಲಿ ಗೆಲುವು ಧರ್ಮದ್ದೇ ಆಗಿರುವಾಗ ಈಗಲೂ ಸಾಮಾನ್ಯರಿಗೆ ಧರ್ಮ ದ ಹಾದಿಯಲ್ಲಿ ನಡೆಯಲು  ಸಹಕರಿಸಿದರೆ ಉತ್ತಮ. 
ಯಾರೋ ದೊಡ್ಡದಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದಾರೆಂದರೆ ಜನಬಲ ಹಣಬಲ ವೆಲ್ಲವೂ ಸಾಮಾನ್ಯರದ್ದೇ ಆಗಿರುತ್ತದೆ. ಹೆಸರು ಸ್ಥಾನ ಪದವಿ ಪಟ್ಟ ಮಾತ್ರ ಆಯೋಜಕರದ್ದು  ಎಂದಾಗ ಅಪರೋಕ್ಷವಾಗಿ ಪರೋಕ್ಷವಾಗಿ  ಸಹಕರಿಸಿರುವ ಜನರನ್ನು ಕಾಣುವ ದೃಷ್ಟಿ ಹೇಗಿರಬೇಕು? ಪ್ರಜಾಪ್ರಭುತ್ವದ. ಪ್ರಜಾಶಕ್ತಿಯನ್ನು ಸಾತ್ವಿಕವಾಗಿ  ನೋಡೋದಕ್ಕೂ ನಮ್ಮಲ್ಲಿ ಸತ್ವಗುಣವಿರಬೇಕು. ರಾಜಕೀಯದೆಡೆಗೆ ಎಳೆದು  ಮಹಿಳೆ ಮಕ್ಕಳನ್ನು ಹೊರಗೆ ತರುವುದರಿಂದ ಜನಸಂಖ್ಯೆ  ಕಂಡರೂ ಭಕ್ತರ ಸಂಖ್ಯೆ ಇರದು. ಇದೇ ಕಾರ್ಯಕ್ರಮ ಮನೆಯೊಳಗೆ ಮಾಡುವ ಶಕ್ತಿ ಸಹಕಾರವಿದ್ದರೆ ಎಲ್ಲರ‌ಮನೆಯೂ ದೇವಾಲಯವೇ. ಹಾಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ದಾಸೋಹವಿದ್ದರೆ  ಆತ್ಮನಿರ್ಭರ. ಕೇವಲ ಹೊಟ್ಟೆ ತುಂಬಿಸುವ ಕ್ಷಣಿಕ ಸುಖದ ಅನ್ನದಾಸೋಹ ಎಲ್ಲಾ ಕ್ಷೇತ್ರ ಮಾಡುತ್ತದೆ. ಆದರೆ ಜ್ಞಾನದಾಸೋಹಕ್ಕೆ ಸಾಮಾನ್ಯ ಜ್ಞಾನ ಅಗತ್ಯವಿದೆ.
ಆಗಿಹೋಗಿದ್ದನ್ನು ಕೆದಕಿ ಗಾಯ ಮಾಡಿ ಹುಣ್ಣು ಮಾಡಿಕೊಳ್ಳುವ ಬದಲು ಅದಕ್ಕೆ ನಮ್ಮ ಸಹಕಾರ ಎಷ್ಟಿತ್ತು ಯಾಕಿತ್ತು ಎಂಬ ಪ್ರಶ್ನೆ ಮಾಡಿಕೊಳ್ಳಲು  ನಮಗೆ ಸಮಯವಿಲ್ಲ ಎಂದಾಗಲೇ  ಪರರು ನಮ್ಮನ್ನು ಆಳೋದು.
ಇಲ್ಲಿ ಪರಕೀಯರಿಗೆ ಕೊಡುವ ಗೌರವ ಸ ಹಕಾರ ನಮ್ಮವರಿಗಿಲ್ಲ. ಎಂದರೆ ಹಣದಿಂದ ಪರರು ಕಾಣುವರು.ನಮ್ಮವರ  ಗುಣಜ್ಞಾನ ಕಾಣದೆ ಆಳುವವರು ನಮ್ಮವರೆನಿಸಿಕೊಂಡವರೆ. ಇದರಿಂದಾಗಿ ಮೂಲವೇ ಅರ್ಥ ಆಗದೆ ರೆಂಬೆಕೊಂಬೆಗಳನ್ನು ಹಿಡಿದು  ಜೋತಾಡಿದರೆ ಒಮ್ಮೆ ಕೆಳಗೆ  ಬಿದ್ದು ಹೋಗೋದು ಸಾಮಾನ್ಯಜ್ಞಾನ.ಇರೋವಾಗಲೇ ಮೂಲವನರಿತರೆ  ವಾಸ್ತವದಲ್ಲಿ ಎಷ್ಟು ಬೇಕೋ ಅಷ್ಟು ನಮ್ಮಲ್ಲಿದೆ.ಅದನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವೂ ಇದೆ. ಆದರೂ ಅದನ್ನು ಬಿಟ್ಟು ಹೊರಬಂದರೆ ಅಧೋಗತಿ.ಎಲ್ಲಾ ಋಣದ ಲೆಕ್ಕಾಚಾರ
ಋಣ ನಮ್ಮವರದ್ದೋ ಅನ್ಯರದ್ದೋ? ಶಿಕ್ಷಣವೇ ಅನ್ಯರದ್ದಾದರೆ  ನಮ್ಮ ಜ್ಞಾನ ಬೆಳೆಯುವುದೆ?
ಬದಲಾವಣೆ ಜಗದ ನಿಯಮ ಎಂದಾಗ ಸಾಮಾನ್ಯರಂತೆ ಬದುಕುವ ಕಲೆ ಇದ್ದರೆ ಇದ್ದಲ್ಲಿ ನಿಧಾನವಾಗಿ ಬದಲಾಗಬಹುದು.

Thursday, January 22, 2026

ಭಯದ ನಿವಾರಣೆ ಸಾಧ್ಯವೆ?

ಭಯ ಭಕ್ತಿ ಇರಬೇಕು .ಆದರೆ ಯಾವುದಕ್ಕೆ ಯಾರಲ್ಲಿ ಎನ್ನುವ ಅರಿವಿರಬೇಕು. ಅರಿವು ಎಂದರೆ ತಿಳುವಳಿಕೆ ಜ್ಞಾನ ಎಂದಾಗ  ಎಲ್ಲರಲ್ಲಿಯೂ ತಿಳುವಳಿಕೆಯಿದೆ. ಕೆಲವರಿಗೆ ಹೊರಜಗತ್ತಿನ ಅರಿವು ಹೆಚ್ಚಾದರೆ ಕೆಲವರಿಗೆ ಒಳಜಗತ್ತಿನ ಅರಿವಿರುತ್ತದೆ. ಇವೆರಡರ ನಡುವೆ ನಮ್ಮ ಜೀವನ ಸಾಗುತ್ತಿದೆ.
ಯಾವಾಗಿದರ ಅಂತರ ಬೆಳೆದು ಮಧ್ಯವರ್ತಿಗಳ ಅರಿವಿನ ರಾಜಕೀಯಕ್ಕೆ ಜೀವನ ಬಲಿಪಶುವಾಗುವುದೆನ್ನುವುದರ ಅರಿವಿರದು. ಹೀಗಾಗಿ ಭಯೋತ್ಪಾದನೆ  ಹೆಚ್ಚಿಸುವವರು ಹೆಚ್ಚಾಗಿ ಮಧ್ಯವರ್ತಿಗಳೇ ಆಗಿರುವರು.
ಮಗು ಜನ್ಮತ: ಉತ್ತಮ  ಗುಣ ಹೊಂದಿದ್ದರೂ ಅದನ್ನು ಬೆಳೆಸುವ ಪೋಷಕರಲ್ಲಿ ಅಂತಹ ಗುಣ ಬೆಳೆಸುವ ಅಥವಾ ಗುರುತಿಸುವ ಜ್ಞಾನವಿಲ್ಲವಾದರೆ ಮಕ್ಕಳಿಗೆ ಭೂತ ದೆವ್ವ ಗಳ ನೆಪದಲ್ಲಿ  ತಮ್ಮೆಡೆ ಸೆಳೆದುಕೊಂಡು  ಸ್ವತಂತ್ರ ಬುದ್ಧಿಯಿಂದ  ಬೆಳೆಯದಂತೆ ಮಾಡುವುದೇ ಹೆಚ್ಚು. ಕಷ್ಟ ನಷ್ಟ ಬಂದಾಗ  ಸಹನೆಯಿಂದ  ಧೈರ್ಯದಿಂದ ಮುಂದೆ ಹೋಗುವುದಕ್ಕೂ ಆಗದೆ  ಸುಮ್ಮನಿರಲೂ ಆಗದೆ ಹೊರಗಿನ ಜಗತ್ತಿನಲ್ಲಿ ಬೇಡುವ ಸ್ಥಿತಿ ಬರುತ್ತದೆಂದರೆ ಇಲ್ಲಿ  ಭಯ ಒಳಗೇ ಇದ್ದು  ಒಳಗಿನ  ಶಕ್ತಿಯನ್ನು ಕಾಣದಂತೆ  ಮಾಡುತ್ತದೆ. ಕಷ್ಟದಿಂದ  ಬಿಡುಗಡೆ ಪಡೆಯಲು ಹೊರಗೆ ಬಂದವರಿಗೆ ಹಿಂದಿರುಗಿ ಹೋಗದಂತೆ ಭಯಪಡಿಸುತ್ತದೆ. 
ಇಂದಿನ ಹೆಚ್ಚಿನ  ಯುವಪೀಳಿಗೆಗೆ ತಮ್ಮ ಭವಿಷ್ಯದ ಭಯ ಕಾಡುತ್ತದೆ. ಕೆಲಸ ಸಿಗುವುದೋ ಇಲ್ಲವೋ ಸಿಕ್ಕರೂ ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವಷ್ಟು  ಸಂಪಾದನೆ ಆಗಬಹುದೆ? ಆದರೂ  ಮುಂದೆ ‌ಮದುವೆಯ ನಂತರದಲ್ಲಿ ಸಂಸಾರ ನಡೆಸಲು ಸಾಧ್ಯವೆ? ಮಕ್ಕಳ ಖರ್ಚು ವೆಚ್ಚ ಎಲ್ಲಾ ಒಬ್ಬರ ದುಡಿಮೆಯಿಂದ ಕಷ್ಟ...ಹೀಗೇ  ಭವಿಷ್ಯವನ್ನು ಕೇವಲ ಭೌತಿಕದಲ್ಲಿದ್ದೇ ಚಿಂತನೆ ನಡೆಸುವುದರಿಂದ ಭಯ ಹೆಚ್ಚಾಗುತ್ತಾ ಹೋಗುತ್ತದೆ.ಹಾಗೇ ಸಮಸ್ಯೆಗಳೂ ಎದುರಾಗುತ್ತದೆ. ಹಿಂದೆ ಒಂದು ಕುಟುಂಬದಲ್ಲಿ ಹಲವು ಸದಸ್ಯರಿದ್ದರೂ  ಹೊಟ್ಟೆ ಬಟ್ಟೆಗೆ ಕೊರತೆಯಾಗದಂತೆ ದುಡಿದು ಜೀವನ‌ನಡೆಸುತ್ತಿದ್ದರು.ಈಗ ಒಂದೇ ಮಗುವನ್ನು ಸಾಕಿ ಸಲಹಲು ಹೊರಗಿನವರ ಸಹಕಾರದ ಜೊತೆಗೆ ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆದರೂ ಊಟಕ್ಕೆ ಸಮಯವಿಲ್ಲ ಬಟ್ಟೆಗೆ ಗತಿಯಿಲ್ಲ ಎಂದರೆ  ಸಾಲದ ಪ್ರಭಾವ.ಅಜ್ಞಾನದಲ್ಲಿ  ಹೊರಗಿನ ಜಗತ್ತಿಗೆ ದಾಸರಾದಷ್ಟೂ ಒಳಗಿನ ಜಗತ್ತಿನ ದಾಸರ ಪರಿಚಯವಾಗದೆ ಆಸೆ ಬೆಳೆಯುತ್ತದೆ. ಆಸೆಯೇ ದು:ಖಕ್ಕೆ ಕಾರಣ ಎನ್ನುವ ಬದಲು ಅತಿಆಸೆಯೇ  ದುರಾಸೆಯೇ ದು:ಖಕ್ಕೆ ಕಾರಣವೆನ್ನಬಹುದು.

ಇದಕ್ಕೆ ಬದಲಾಗಿ ನಮ್ಮ ಜೀವನದ ಗುರಿ ಏನು ಯಾಕೆ ಭೂಮಿಗೆ ಬಂದೆವು? ಏನು ಮಾಡಿದರೆ ನಮ್ಮ ಋಣ ತೀರುವುದು.ಯಾವುದು ಸತ್ಯ ಮಿಥ್ಯ? ಎಲ್ಲಿಂದ ಎಲ್ಲಿಗೆ ಹೋಗಬೇಕು? ದೈವತ್ವ ಎಂದರೇನು? ದೇವರಿರೋದೆಲ್ಲಿ? ಧರ್ಮ ಯಾವುದು? ಅಧರ್ಮ ಎಲ್ಲಿದೆ? ..ಈ ರೀತಿಯಲ್ಲಿ ಆಧ್ಯಾತ್ಮಿಕದ ಜಗತ್ತಿನೆಡೆಗೆ ನಡೆದವರ ಭಯ ಕಡಿಮೆಯಾಗಿ ಗುರುಹಿರಿಯರಲ್ಲಿ ಭಯ ಭಕ್ತಿ ಯೋಗದಿಂದ ಬೆಳೆದಾಗ  ಒಳ ಮನಸ್ಸು ಜಾಗೃತವಾಗುತ್ತಾ  ಜೀವಭಯ ಬಿಟ್ಟು ಧರ್ಮ ಸತ್ಯದ ರಕ್ಷಣೆಗಾಗಿ  ಮುನ್ನುಗ್ಗುವ ಮಹಾತ್ಮರಾಗುವರು.
ಒಟ್ಟಿನಲ್ಲಿ ಜೀವನದಲ್ಲಿ ಹೋರಾಟ ಇರುತ್ತದೆ. ಹೋರಾಡಲು ದೈರ್ಯ ಅಗತ್ಯವಿದೆ. ಆದರೆ ಅನಾವಶ್ಯಕ ಕೆಳಮಟ್ಟದ ಆಸೆ ತೀರಿಸಿಕೊಳ್ಳುವ ಹೆಣ್ಣು ಹೊನ್ನು ಮಣ್ಣನ್ನು ವಶಪಡಿಸಿಕೊಳ್ಳಲು‌  ನಡೆಸುವ ಹೋರಾಟದಿಂದ  ಪಾರಮಾರ್ಥಿಕ ಸುಖ ಸಿಗದೆ ಜೀವ ಹೋಗುತ್ತದೆ. ಅಂತಹ ಹೋರಾಟ ಕಣ್ಣಿಗೆ ಕಾಣುವುದರಿಂದ ಜನಬಲ ಹಣಬಲ ಅಧಿಕಾರಬಲ ಎಲ್ಲಾ ಸಿಗಬಹುದು ಆದರೆ ಜ್ಞಾನದ ಬಲ ಇಲ್ಲದೆ ಧೈರ್ಯದಿಂದ  ಹೋರಾಟ ನಡೆಸಿದರೂ ಅಧರ್ಮ  ಆಗಿದ್ದರೆ  ವ್ಯರ್ಥ ಪ್ರಯತ್ನವಾಗುತ್ತದೆ.
ಎಲ್ಲರೂ ಒಮ್ಮೆ ಸಾಯೋರೇ ಎಲ್ಲರಲ್ಲಿಯೂ ದೈರ್ಯ ಶೌರ್ಯ ಇದ್ದರೂ ಅದನ್ನು ಯಾವುದಕ್ಕೆ ಬಳಸಬೇಕೆಂಬ ಸುಜ್ಞಾನ ಎಲ್ಲರಲ್ಲಿಯೂ ಇರದು.‌ಹೀಗಾಗಿ ಅಜ್ಞಾನದಲ್ಲಿ ಧೈರ್ಯದಿಂದ  ಹೋರಾಟ ಹಾರಾಟ‌ ಮಾರಾಟ ಮಾಡಿದರೂ  ಕಷ್ಟನಷ್ಟ ತಪ್ಪಿದ್ದಲ್ಲ.

ನಮ್ಮಲ್ಲಿ ಎರಡೂ ರೀತಿಯ ಶಕ್ತಿಗಳಿವೆ. ಒಂದು ದೈವಶಕ್ತಿ ಇನ್ನೊಂದು ಅಸುರಿ ಶಕ್ತಿ.‌ಅಸುರಿಶಕ್ತಿಯ ವಿರುದ್ದ ದೈವೀ ಶಕ್ತಿ ಹೋರಾಡುವಾಗ  ಅಸುರರ ದೈಹಿಕಬಲ ಹೆಚ್ಚಬಹುದು ಸುರರ ಜ್ಞಾನಬಲ ಹೆಚ್ಚಬಹುದು. ಗೆಲ್ಲುವುದು ಜ್ಞಾನಬಲ.
ಕಾರಣವಿಷ್ಟೆ  ಶಾಶ್ವತ ವಾದ ಜ್ಞಾನದಿಂದ ಆತ್ಮಬಲ ಹೆಚ್ಚುವುದು. ಅಜ್ಞಾನದಿಂದ ಕುಸಿಯುತ್ತದೆ. ಹಿಂದಿನ ಯುದ್ದಗಳಲ್ಲಿ  ಇದನ್ನು  ನಾವು ತಿಳಿಯುತ್ತೇವೆ. 
ವಾಸ್ತವದಲ್ಲಿ ನಮ್ಮ ದೇಶದ  ಪ್ರಮುಖ ಪಕ್ಷಗಳು ಒಬ್ಬರಿಗೊಬ್ಬರು ವಿರುದ್ದದ ಹೇಳಿಕೆಗಳನ್ನು ಕೊಟ್ಟುಕೊಂಡು ಜನರಲ್ಲಿಯ  ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಮಾಡುತ್ತಿರುವರೋ ಅಥವಾ ಹೆಚ್ಚಿಸುವ‌ಕೆಲಸ ಮಾಡುತ್ತಿರುವರೋ ಎನ್ನುವುದೂ ನಮ್ಮ ಜ್ಞಾನದ ಮೇಲೇ ನಿಂತಿದೆ.ಇಲ್ಲಿ ರಾಜಕೀಯ ಯಾವತ್ತೂ ಹೊರಗೆ ಕಾಣುತ್ತದೆ.
ಜನರನ್ನು ಭಯಪಡಿಸಿ ಆಳೋದೇ ಬೇರೆ, ಆತ್ಮವಿಶ್ವಾಸ ಹೆಚ್ಚಿಸಿ ಸ್ವಾವಲಂಬನೆ ಕಡೆಗೆ ನಡೆಸೋದೇ ಬೇರೆ.ಆತ್ಮನಿರ್ಭರ ಎಂದರೆ ನಮ್ಮ ಆತ್ಮವಿಶ್ವಾಸ ದಿಂದ ಭಯವಿಲ್ಲದೆ  ದುಡಿದು ಸ್ವತಂತ್ರ ಜೀವನ ನಡೆಸೋದಾದರೆ ನಮ್ಮಲ್ಲಿ  ಯಾರ ಶಿಕ್ಷಣವಿದೆ? ಯಾರ ಕೈಕೆಳಗೆ ದುಡಿಯುತ್ತಿರುವುದು? ದೇಶ ಯಾರ ಕೈಯಲ್ಲಿದೆ? ನಮ್ಮನೆ ಮನಸ್ಸು  ಯಾರಿಂದ ನಡೆದಿದೆ? ಯಾವ ಕಡೆ ನಮ್ಮ ನಡೆ ನುಡಿಯಿದೆ? ಹೀಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಷ್ಟು ಸಮಯ ನಮಗಿದೆಯೆ? ಇದ್ದರೆ ಉತ್ತರವು ನಮ್ಮೊಳಗೇ ಸಿಗುತ್ತದೆ. ನಾವೀಗ ಭಯಪಡುತ್ತಿರುವುದು ನಮ್ಮವರಿಗೋ ಅಥವಾ ಹೊರಗಿನವರಿಗೋ?
ನಮ್ಮವರಿಂದಲೇ  ಭಯ ಎಂದರೆ ಯಾವ. ಕಾರಣಕ್ಕಾಗಿ ಭಯ ಸೃಷ್ಟಿ ಮಾಡಲಾಗಿದೆ? ದೇವರು ಧರ್ಮ. ಜಾತಿ ಪಕ್ಷಗಳ ರಾಜಕೀಯತೆಯಿಂದ  ನಮ್ಮ ಸ್ವಂತ ಬುದ್ದಿ ಜ್ಞಾನ ಬೆಳೆಯಿತೆ?
ಇಲ್ಲವೆ? ಹಾಗಾದರೆ ಭಯದಿಂದ ನಮಗೆ ನಾವೇ ಮೋಸ ಹೋಗಿರುವುದು ಸತ್ಯ.ಸತ್ಯ ಒಂದೇ ಇರೋದು.ಆ ಸತ್ಯದಿಂದ ದೂರವಾಗಿರುವ‌ಜೀವಾತ್ಮನಿಗೆ ಹಿಂದಿರುಗಲು ಭಯ ಎಂದರೆ  ಅಜ್ಞಾನವಾಗುತ್ತದೆ. ಆಗೋದನ್ನು ತಡೆಯಲಾಗಿಲ್ಲ, ಆಗಿದ್ದೆಲ್ಲಾ ಒಳ್ಳೆಯದೇ  ಎಂದಾಗ  ಭಯ ಬಿಟ್ಟು ಒಳ್ಳೆಯ ಕಾರ್ಯಕ್ಕೆ  ಒಗ್ಗಟ್ಟಿನಿಂದ ಮುಂದೆ ನಡೆದು ಸಹಕರಿಸುವಷ್ಟು ಧೈರ್ಯ  ಬೆಳೆಯಬೇಕಿದೆ.
ಸತ್ಯ ಬಿಟ್ಟು ಧರ್ಮ ಬಿಟ್ಟು  ದೂರ ಹೋಗೋದು ಸುಲಭ.ಆದರೆ‌ಹಿಂದಿರುಗೋದು‌ ಬಹಳ ಕಷ್ಟ. ಸುಲಭವಾದಕ್ಕೆ ಸಹಕರಿಸಿ ಕಷ್ಟಕ್ಕೆ ಸಹಕರಿಸದಿದ್ದರೆ  ಅದೇ ಮುಂದೆ ಇನ್ನಷ್ಟು ಕಷ್ಟ ನಷ್ಟಕ್ಕೆ ಕಾರಣವಾಗುತ್ತದೆ. 
ಕಲಿಗಾಲದ ಪ್ರಭಾವದಿಂದಾಗಿ ಸತ್ಯವನ್ನು ಸುಳ್ಳೆಂದು ಅದರ ಸುಳ್ಳನ್ನು   ಸತ್ಯವೆಂದು ಸಾಭೀತು ಮಾಡಲು ಧೈರ್ಯದಿಂದ ಮುಂದೆ ಹೋದರು. ಹಿಂದೆ ಇದ್ದವರೂ ಅವರನ್ನು ಅನುಸರಿಸಿ ಕೊನೆಯಲ್ಲಿ  ಕಷ್ಟ ನಷ್ಟವಾದಾಗ ಹಿಂದಿರುಗಲಾಗದೆ  ಇದೇ ಸತ್ಯ ಎಂದು ವಾದ ಮಾಡಿ ಸೋತವರು  ಇನ್ನೊಬ್ಬರ ನ್ನು ಭಯಪಡಿಸಿ  ಆಳಲು ಹೋದರೆ  ಮಂಗ ತಾನು ಕೆಟ್ಟು ವನವೆಲ್ಲಾ ಕೆಡಿಸಿದಂತೆ ಎಂದಾಗುತ್ತದೆ.
ಎಷ್ಟಾದರೂ ಮಂಗನಿಂದಲೇ ‌ ಮಾನವನಾಗಿರುವಾಗ  ನೆಗೆಯುತ್ತಾ ಹೋಗುವುದು ಸಹಜ. ಆ ನಗೆತದಿಂದ  ಹೊಟ್ಟೆ ತುಂಬಿಸಿಕೊಳ್ಳಬಹುದು   ಅದರೊಂದಿಗೆ ರೋಗವೂ ಇರುವ ವಿಷಯಜ್ಞಾನವನರಿತರೆ  ನಿಜವಾದ ಭಕ್ತಿಯೋಗವಾಗುತ್ತದೆ.
ವಾನರ ಸೇನೆಯ ಸಹಾಯದಿಂದ ಶ್ರೀ ರಾಮಚಂದ್ರನು  ಗೆದ್ದನು  ಎಂದರೆ ವಾನರರ  ಸಂಘಟನೆಯು ಧರ್ಮದ ಪರವಾಗಿತ್ತು. ಹೀಗಾಗಿ ಭಯವಿಲ್ಲದೆ  ಅಸುರ ಶಕ್ತಿಯ ವಿರುದ್ದ ಹೋರಾಡಿ ಗೆದ್ದರು. ಈಗಿನ ಸೇವಕರು ಭ್ರಷ್ಟರ ಅಧೀನದಲ್ಲಿದ್ದು  ಭಯದಿಂದ ಜೀವನ‌ ನಡೆಸೋ ಸ್ಥಿತಿಗೆ ಬರಲು ಕಾರಣ ಅಧರ್ಮಕ್ಕೆ ನೀಡಿದ ಸಹಕಾರ. ಸತ್ಯ ಕಠೋರವಾಗಲು ಕಾರಣವೇ ಅದನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಲಕ್ಷ  ಹಣನುಂಗಿರುವ ಭ್ರಷ್ಟಾಚಾರವಾಗಿದೆ. ಭ್ರಷ್ಟ ದುಷ್ಟರನ್ನು    ಅನುಸರಿಸಿದರೆ  ಭಯೋತ್ಪಾದಕರೂ ಬೆಳೆಯುವರು. 
ಏನನ್ನು ಬೆಳೆಸುವೆವೋ ,ಹರಡುವೆವೋ, ಹಂಚುವೆವೋ, ನೋಡಿ ಕೇಳಿ ಹೇಳುವೆವೋ ಅದೇ ಹೊರಗೆ ಒಳಗೆ ತುಂಬಿ ಆಳೋದು. 
ಸಾಧನೆ  ಅಂತರಂಗದ ಶುದ್ದಿಯೆಡೆಗೆ‌ ನಡೆದರೆ ಭಯವಿರದು.
ಬಹಿರಂಗದ ಶುದ್ದಿ  ಭಯದಿಂದ ಮಾಡಲಾಗದು.

Friday, December 19, 2025

ಎಳ್ಳಮಾವಾಸ್ಯೆ

*✒️ಇಂದಿನ ನುಡಿ*

*ಈ ದಕ್ಷಿಣಾಯನ ಮಾರ್ಗಶಿರ ಮಾಸದ ಈ ದಿನ ಎಳ್ಳಮಾವಾಸ್ಯೆಯ ದಿನ.ಋಣ ತೀರಿಸುವ ದಿನ.ದೇವ ಋಣ,ಪಿತೃ ಋಣ,ಋಷಿ ಋಣ,ಮನುಷ್ಯ ಋಣ,ಭೂತದೈವಗಳಪ್ರಾಣಿ ಪಕ್ಷಿ ಪ್ರಕೃತಿಯ ಋಣ ನಮ್ಮ ಮೇಲಿದೆ.ಎಲ್ಲವನ್ನೂ ಉಪಯೋಗಿಸಿಕೊಂಡು ಈ ಭೂಮಿ ಮೇಲೆ ಜೀವಿಸುವವರು ನಾವು.ಬದುಕಿದರೆ ಸಾಕೇ?ಸಹಕಾರ ಪಡೆದದ್ದಕ್ಕೆ ಕೃತಘ್ನರಾಗದೆ,ಉಪಕಾರಕ್ಕೆ ಪ್ರತ್ಯುಪಕಾರ, ಕೃತಜ್ಞತಾ ಸಮರ್ಪಣೆ ಮೂಲಕ ಸ್ಮರಿಸುವ ಕೆಲಸವಾಗಬೇಕು.ರೈತಾಪಿ ವರ್ಗದವರಿಗೆ ಎಳ್ಳು,ನೆಲಕಡಲೆ ಫಸಲು ಮನೆಯಂಗಳಕೆ ಬಂದ ದಿನಗಳಿವು.ಭೂಮಿ ತಾಯಿಗೆ ಕೃತಜ್ಞತೆ ಸಮರ್ಪಿಸುವರು.ಎಳ್ಳು ಬೆಲ್ಲವನ್ನು ಬೆರೆಸಿ ಹೊಲಕ್ಕೆ ಚೆಲ್ಲುವರು(ಚರಗ ಚೆಲ್ಲುವುದೆನ್ನುವರು)ಮಣ್ಣನ್ನು ಮೃದುವಾಗಿಸುವ ಎರೆಹುಳಗಳು ಹೊಲದ ಮಣ್ಣಲ್ಲಿರುವುದು.ಹಾಗೆಯೇ ಬೆಳೆ ನಾಶ ಮಾಡುವ ಕಾಯಿಕೊರಕ ಹುಳಗಳನ್ನು  ಎಳ್ಳು ಬೆಲ್ಲದೊಂದಿಗೆ ತಿನ್ನುವ ಕೆಲಸವನ್ನು ಪಕ್ಷಿಸಂಕುಲ ಮಾಡುವುದು.ಹಬ್ಬ,ಆಚರಣೆಗಳ ಹಿಂದೆ ಇಂತಹ ವೈಜ್ಞಾನಿಕ ಕಾರಣಗಳು ಸಹ ಇದೆ.ನಮ್ಮ ಹಿರಿಯರು ಬುದ್ಧಿವಂತರು.ಐದು ಪಾಂಡವರ ಕಲ್ಲುಗಳನ್ನು ಇಟ್ಟು ,ತಾವು ತಂದ ವಿಶೇಷ ಖಾದ್ಯಗಳನ್ನು ಭೂಮಿತಾಯಿ ಸಹಿತ ನೈವೇದ್ಯ ಮಾಡಿ,ಬನ್ನಿ ಗಿಡ ನೆಟ್ಟು ಜೊತೆಗೆ ಪೂಜಿಸುವರು,ಮುಂದಿನ ದಿನಗಳಲ್ಲಿ ಅಧಿಕ ಫಸಲನ್ನು ನೀಡೆಂದು,ಶನಿದೋಷವಿದ್ದಲ್ಲಿ ಪರಿಹರಿಸೆಂದು ಪ್ರಾರ್ಥಿಸುತ್ತಾ ನಿವೇದಿಸಿಕೊಳ್ಳುವರು. ಈ ಮೂಲಕ ಕೃತಜ್ಞತೆ ಸಲ್ಲಿಸುವರು.ತಯಾರಿಸಿದ ವಿಶೇಷ ಅಡುಗೆಯನ್ನು ತಮ್ಮ ಎತ್ತಿನ ಬಂಡಿಯಲ್ಲಿಟ್ಟು,ಎತ್ತುಗಳನ್ನು ,ಗಾಡಿಯನ್ನು ಸಿಂಗರಿಸಿ,ಮನೆಮಂದಿಯೆಲ್ಲ ಚರಗ ಚೆಲ್ಲಿ ಪೂಜೆಯಾದ ಮೇಲೆ ಸಹಭೋಜನವನ್ನು ಪ್ರಸಾದರೂಪವಾಗಿ ಮಾಡುವರು.ಹೊಲ ಭೂಮಿ ರೈತರ ಬಾಂಧವ್ಯದ ಬೆಸುಗೆಯದು. ಎಲ್ಲೆಲ್ಲೋ ಇರುವ ಮನೆಯ ಸದಸ್ಯರೆಲ್ಲರೂ ಹಬ್ಬದ ಸಂದರ್ಭ ಒಟ್ಟು ಸೇರುವರು.ಹಾಗೆಯೇ ಇಂದು ಪಿತೃ ದೇವತೆಗಳ ಪ್ರೀತ್ಯರ್ಥ ಯಾಂತ್ರಿಕತೆ,ತೋರಿಕೆಯನ್ನು ಬಿಟ್ಟು ಶ್ರದ್ಧಾಭಕ್ತಿಯಿಂದ ಶ್ರಾದ್ಧ,ತಿಲತರ್ಪಣ,ಸತ್ಪಾತ್ರರಿಗೆ ಅನ್ನದಾನ,ಎಳ್ಳುದಾನ ಕೈಂಕರ್ಯಗಳನ್ನು ಮಾಡಬೇಕು.ಸಕಲ ವಿಧದ ಮಂಗಲವು ಉಂಟಾಗುವುದೆಂಬ ನಂಬಿಕೆ.ಸಮುದ್ರ,ನದಿ ಸ್ನಾನವನ್ನೂ ಮಾಡುವರು.ಸಮುದ್ರ ಸ್ನಾನವೆಂಬುದು ಚರ್ಮರೋಗಗಳ ನಿವಾರಣೆಗೂ ಕಾರಣವಾಗಬಹುದು.ಪಿತೃಗಳು ಸಂತುಷ್ಟರಾಗಿ ಹರಸುವರೆಂಬ ವಿಶ್ವಾಸ ಹಿರಿಯರ ಕಾಲದಿಂದಲೂ ಇದೆ.ಪೌರಾಣಿಕವಾಗಿ ನೋಡಿದರೆ ಮಹಾಭಾರತ ದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಮಡಿದವರಿಗೆಲ್ಲ ಈ ಶುಭದಿನದಂದು ತರ್ಪಣ ನೀಡಿ,ಅನ್ನದಾನ ಮಾಡಿದ್ದರಂತೆ.ಕುಟುಂಬದಲ್ಲಿ ಅಳಿದ ಪಿತೃಗಳನ್ನು ಸಂತೃಪ್ತಿಗೊಳಿಸುವ ಪದ್ಧತಿಯಿದೆ.ಇನ್ನೊಂದು ರೀತಿಯಲ್ಲಿ ತಂದೆ ಜಮದಗ್ನಿಯ ಆಣತಿಯಂತೆ ಹೆತ್ತಮ್ಮ ರೇಣುಕೆಯ ಶಿರ ಕತ್ತರಿಸಿದವ ಪರಶುಧರ ಭಾರ್ಗವ ರಾಮ.ಕೊಡಲಿಯ ಬಾಯಿಗಂಟಿದ ರಕ್ತ ಯಾವ ನದಿಯಲ್ಲಿ ತೊಳೆದರೂ ಒಂದು ಬಿಂದು ಉಳಿಯುತ್ತಿತ್ತಂತೆ.ಕೊನೆಗೆ ತುಂಗಾನದಿಯಲ್ಲಿ ಮುಳುಗಿಸಿದಾಗ ಕಲೆ ಹೋಯಿತಂತೆ.ಹಾಗಾಗಿ ಅದೇ ಸ್ಥಳ ಶಿವಮೊಗ್ಗ ಸಮೀಪದ 'ತೀರ್ಥಹಳ್ಳಿ'ಯೆಂದು ಪ್ರಸಿದ್ಧಿಯಾಯಿತೆಂದೂ,ಅಲ್ಲಿ ನದಿ ಸ್ನಾನ ಮಾಡಿ ಪುನೀತರಾಗುತ್ತಾರೆಂದೂ ಉಲ್ಲೇಖವಿದೆ.ಹೆತ್ತವರ ಋಣ ತೀರಿಸಲಾಗದಂತೆ.ಈ ರೀತಿಯಲ್ಲಾದರೂ ಸ್ವಲ್ಪಾಂಶ ತೀರಿಸಿ ಪುಣ್ಯ ಕಟ್ಟಿಕೊಳ್ಳೋಣ.*
.🤝🙏*(ಸಂಗ್ರಹ)*
೧೯-೧೨-೨೫
*✍️ರತ್ನಾ ಕೆ ಭಟ್*