ಸರಳ ಜೀವನ ಸಾಧ್ಯವೆ?

ಸರಳ ಜೀವನ ಸಾಧ್ಯವೆ?  ಪರಾವಲಂಬನೆಯ ಜೀವನ ಮೊದಲು ಸುಲಭವೆನಿಸಿದರೂ ಕೊನೆಯಲ್ಲಿ ಅದೇ ನರಕ ತೋರಿಸುತ್ತದೆ.ಹಾಗಂತ ಮಾನವ ಸಂಘ ಜೀವಿಯಾದ್ದರಿಂದ ಏಕಾಂಗಿಯಾಗಿ ಜೀವಿಸೋದಕ್ಕೆ ಕಷ್...

Saturday, May 16, 2026

ಸರಳ ಜೀವನ ಸಾಧ್ಯವೆ?

ಸರಳ ಜೀವನ ಸಾಧ್ಯವೆ?

 ಪರಾವಲಂಬನೆಯ ಜೀವನ ಮೊದಲು ಸುಲಭವೆನಿಸಿದರೂ ಕೊನೆಯಲ್ಲಿ ಅದೇ ನರಕ ತೋರಿಸುತ್ತದೆ.ಹಾಗಂತ ಮಾನವ ಸಂಘ ಜೀವಿಯಾದ್ದರಿಂದ ಏಕಾಂಗಿಯಾಗಿ ಜೀವಿಸೋದಕ್ಕೆ ಕಷ್ಟ.ಹೀಗಾಗಿ  ಸುಜ್ಞಾನದಿಂದ ಜೀವನದ ಸತ್ಯಾಸತ್ಯತೆಯನರಿಯುತ್ತಾ  ಎಲ್ಲರೊಳಗೊಂದಾಗಿ ಸರಳ ಜೀವನ ನಡೆಸುವುದು ಅಗತ್ಯವಿದೆ. ಸರಳವಾಗಿ ಬದುಕೋದೆ ಕಷ್ಟ ಎನ್ನುವ ಜನರ ಮದ್ಯೆ  ಬದುಕೋದೂ ಕಷ್ಟವೆ. 
ಏನೇ ಇರಲಿ ನಮ್ಮ ‌ಇಷ್ಟ ಕಷ್ಟಗಳ ನಡುವೆ ಬರುವ ಸುಖ ದು:ಖದ ಹಿಂದೆ  ನಮ್ಮ  ಸಾಲ ತೀರುತ್ತಿದೆಯೆ ಅಥವಾ ಬೆಳೆಯುತ್ತಿದೆಯೆ ಎನ್ನುವ  ಚಿಂತನೆ ನಡೆಸಿದರೆ  ಉತ್ತಮ.
ದೇಶವೇ ಸಾಲದ ಹೊಳೆಯಲ್ಲಿದೆ. ದೇಶದೊಳಗಿರುವ ಪ್ರಜೆಗಳಲ್ಲಿ ಸಾಕಷ್ಟು ಆಸ್ತಿ ಅಂತಸ್ತು  ಅಧಿಕಾರ ಸ್ಥಾನವಿದೆ. ಆದರೆ ಅದು ಅನ್ಯರ ಜ್ಞಾನ, ಶಿಕ್ಷಣ, ವ್ಯವಹಾರ,ಸಾಲ,ಬಂಡವಾಳದ ಮೂಲದಿಂದ  ಬಂದಿದ್ದರೆ  ಅದರಿಂದ ಹೊರಬರೋದು ಕಷ್ಟವಿದೆ. ಈಗಲೂ ದೇಶದಲ್ಲಿ ಜ್ಞಾನದ ಆಸ್ತಿ ಸಾಮಾನ್ಯರೊಳಗಿದ್ದರೂ ಅದಕ್ಕೆ ಪೂರಕವಾದ ಶಿಕ್ಷಣ ಗುರು ಸಿಗದಿದ್ದರೆ ಋಣ ತೀರಿಸಲಾಗದೆ ಜೀವ ಹೋಗುತ್ತದೆ. ಆತ್ಮನಿರ್ಭರ ಭಾರತ ಆಧ್ಯಾತ್ಮಿಕ ಪ್ರಗತಿಯಿಂದ. ಆದಾಗಲೇ  ಜನಜೀವನದಲ್ಲಿ ಬದಲಾವಣೆ ಒಳಗಿನಿಂದ ಸಾಧ್ಯ. ಇದಕ್ಕೆ ಉಳಿತಾಯ ಅಗತ್ಯವಿದೆ. ಯಾವುದನ್ನು ಉಳಿಸಬೇಕು ? ನಮ್ಮ ಸ್ವಂತ ಬುದ್ದಿ ಜ್ಞಾನದಿಂದ  ಧರ್ಮ ಸತ್ಯವನರಿತವರ ಋಣ ತೀರಿದೆ ಎಂದರೆ ಮಾನವನ ಸಮಸ್ಯೆಯ ಮೂಲವೇ ಋಣ ಅಥವಾ ಸಾಲ.
ಇದನ್ನು ಸತ್ಕರ್ಮ, ಸ್ವಧರ್ಮ, ಸದಾಚಾರ, ಸ್ವಾಭಿಮಾನ  ಸ್ವಾವಲಂಬನೆ ಯಿಂದಷ್ಟೆ  ತೀರಿಸಬಹುದೆನ್ನುವುದು ಆಧ್ಯಾತ್ಮ ವಿಜ್ಞಾನ. ಇದಕ್ಕೆ ವಿರುದ್ದವಿರುವ ಭೌತವಿಜ್ಞಾನ ಇಂದು ಮಾನವನನ್ನು ಆಕಾಶದೆತ್ತರ ಹಾರಿಸಿದರೂ ಭೂಮಿಯ ಮೇಲೆ ಹೇಗೆ ಬದುಕಬೇಕೆಂಬ ಸಾಮಾನ್ಯ ಜ್ಞಾನದಿಂದ ದೂರ‌ಮಾಡಿರೋದಕ್ಕೆ ಜನ ಹೊರಗಿನ ಹೋರಾಟ ಹಾರಾಟ ಮಾರಾಟಕ್ಕೆ ಕೊಡುವ ಸಹಕಾರ ಒಳಗಿರುವ ಸತ್ಯ ಧರ್ಮ ಸರಳ ಜೀವನಕ್ಕೆ ಕೊಡಲಾಗದೆ  ಮನಸ್ಸು ಓಡುತ್ತಿದೆ.
ಓಡುತ್ತಿರುವ  ಮನಸ್ಸಿನ ನಿಗ್ರಹ ಯೋಗದಿಂದ ಸಾಧ್ಯ.ಯೋಗ ಎಂದರೆ ಸೇರುವುದಾದರೆ‌ ಯಾರನ್ನು ಯಾರು ಸೇರಬೇಕು? ಜೀವಾತ್ಮ ಪರಮಾತ್ಮನ ಸೋರುವ ಯೋಗ ಕಣ್ಣಿಗೆ ಕಾಣದು. ಹೀಗಾಗಿ  ಅಂತರಾತ್ಮನ‌ ಮರೆತು  ಅಂತರ‌ಬೆಳೆಸಿಕೊಂಡು ಅಂತರಾಷ್ಟ್ರೀಯ ಒಪ್ಪಂದಗಳು ಹೆಚ್ಚಾಗಿವೆ. ನಮ್ಮವರನ್ನೇ ಅರ್ಥ ಮಾಡಿಕೊಳ್ಳದೆ ಅನ್ಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಎಲ್ಲರಲ್ಲಿಯೂ ಇದ್ದು ನಡೆಸೋ ಶಕ್ತಿ ಒಂದೇ ಆಗಿದ್ದರೂ ಎಲ್ಲರ ಋಣ ಒಂದೇ ರೀತಿಯಲ್ಲಿ ಇರದು.ಅವರವರ ಋಣ ತೀರಿಸಿಕೊಳ್ಳಲು ಸ್ವಪ್ರಯತ್ನ, ಸ್ವಂತ ಬುದ್ದಿ ಜ್ಞಾನದ ಜೊತೆಗೆ ಸರಳ ಜೀವನ ಅಗತ್ಯವಿದೆ. ಎಷ್ಟು ಹೊರಗಿನಿಂದ ತಂದು ಹಾಕಿದರೂ ಋಣವೇ ಆಗಿರುವಾಗ ಅದನ್ನು ತೀರಿಸಲು  ಸೇವೆ‌
ಮಾಡಬೇಕು.  ಅನ್ಯರ ಋಣ ತೀರಿಸಲು ಅನ್ಯರ ಸೇವೆ.
ಪರಮಾತ್ಮನ ಋಣ ತೀರಿಸಲು ಪರಮಾತ್ಮನ ಸೇವೆ. ಇದು ಎಲ್ಲರಲ್ಲಿಯೂ  ಪರಮಾತ್ಮನ ‌ಕಾಣುವ ಆಧ್ಯಾತ್ಮಿಕ ಶಕ್ತಿಯಿಂದ  ಮಾಡಬೇಕಾದರೆ ನಿಸ್ವಾರ್ಥ ನಿರಹಂಕಾರದ ಜೊತೆಗೆ ಪ್ರತಿಫಲಾಪೇಕ್ಷೆ ಇಲ್ಲದೆ  ಕೆಲಸ ಮಾಡಬೇಕೆಂದರೆ  ಸಾಧ್ಯವೆ? 
ಸಾಲ ಮಾಡೋದು ಸುಲಭ ಆದರೆ ಅದನ್ನು ತೀರಿಸುವುದು ಸುಲಭವಿರದು. ಸಾಲವೇ ಶೂಲ  ಸರ್ಕಾರವೇ ಇದರ ಮೂಲ.
ಇಲ್ಲಿ ಸಹಕಾರವಿಲ್ಲದೆ ಸರ್ಕಾರ ನಡೆಯದು. ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟರೆ ಅವರು ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವರಷ್ಟೆ. ಆದರೆ ಶಿಷ್ಟರಿಗೆ ಸಹಕರಿಸಿದ್ದರೆ  ಸಾಲದ ಅರ್ಥ ತಿಳಿಸುತ್ತಾ  ಹಾಸಿಗೆ ಇದ್ದಷ್ಟು  ಕಾಲು ಚಾಚು ಎನ್ನುವರು. ಹಿಂದಿನ ಮಹಾತ್ಮರಿಗೂ ಈಗಿನ‌ಮಹಾಜನತೆಗೂ ಇರುವ. ವ್ಯತ್ಯಾಸವಿಷ್ಟೆ  ಹಿಂದೆ ದೇಶದ ಋಣ ತೀರಿಸುವ ದೇಶ ಸೇವೆ ಸುಜ್ಞಾನದಿಂದ ನಡೆದಿತ್ತು. ಈ ಗ ದೇಶವನ್ನು ಲೂಟಿ ಹೊಡೆಯುವ  ಭ್ರಷ್ಟರ ಸೇವೆ ಜನರೆ ಮಾಡುತ್ತಿದ್ದಾರೆ.
ಇದರಿಂದ ಸಿಕ್ಕಿದ್ದು ಸಾಲದ ಹೊರೆಯಷ್ಟೆ. ಇದನ್ನು ಮಕ್ಕಳು ಮೊಮ್ಮಕ್ಕಳ ಕಾಲದವರೆಗೂ ವಿದೇಶಿಗರ ಅಡಿಯಾಳಾಗಿ ದುಡಿದು ತೀರಿಸಿದರೂ  ಮುಗಿಯದು. ಕಾರಣವಿಷ್ಟೆ ಜ್ಞಾನವೇ ನಮ್ಮದಲ್ಲದ ಮೇಲೆ  ನಮ್ಮಮೂಲದ ಧರ್ಮ ಕರ್ಮ ಅರ್ಥ ಆಗದು. ಧರ್ಮ ಕ್ಕೆ ತಕ್ಕಂತೆ ಕರ್ಮ ಇರದಿದ್ದರೆ ಆತ್ಮಕ್ಕೆ ತೃಪ್ತಿ ಸಿಗದು. ಆತ್ಮಕ್ಕೆ ತೃಪ್ತಿ ಸಿಗದಿದ್ದರೆ ಜೀವನ್ಮುಕ್ತಿಯಾಗದು.
ಒಳಗೇ ಅಡಗಿದ್ದ  ಆತ್ಮಜ್ಞಾನವ ಬಿಟ್ಟು ಹೊರಗಿನವರ ವಿಶೇಷ ಜ್ಞಾನದಿಂದ ತಾತ್ಕಾಲಿಕ ಸುಖ ಸಿಗಬಹುದು.ಅದೇ ದು:ಖಕ್ಕೆ ಕಾರಣವಾಗುತ್ತದೆ. ಹಿಂದಿನವರಂತೆ ನಾವಿಲ್ಲ. ನಮ್ಮಂತೆ ನಮ್ಮ ಮಕ್ಕಳಿರೋದಿಲ್ಲ. ಆದರೂ ಬದಲಾವಣೆ ಹಿಂದಿನ  ಅನುಭವದ ಮೇಲಿರುತ್ತದೆ. ಬದಲಾವಣೆ ಜಗದ ನಿಯಮ. ಸಾಲ ತೀರಿಸಲು ಬಂದ ಜೀವಕ್ಕೆ ಇನ್ನಷ್ಟು ಸಾಲದ ಹೊರೆ ಹಾಕುವುದು  ಪ್ರಗತಿಯೆ ?
ಜೀವನ ಸುಲಭವಲ್ಲ ಅದನ್ನು ನಾವೇ ಸರಳಗೊಳಿಸಿಕೊಳ್ಳಬೇಕು.ಕೆಲವನ್ನು  ಸ್ವೀಕರಿಸಿ ಕೆಲವನ್ನು ತ್ಯಜಿಸಬೇಕು. ಸತ್ಯಜ್ಞಾನವನ್ನು ಸ್ವೀಕರಿಸುತ್ತಾ ಹೋದರೆ‌ ಮಿಥ್ಯಜ್ಞಾನದಿಂದ ಹೊರಬರಬಹುದು. ಮಿಥ್ಯಜ್ಞಾನದೆಡೆಗೆ ಹೋದರೆ ಸತ್ಯ ಬಿಟ್ಟು ನಡೆಯಬೇಕು.ಸತ್ಯವೇ ದೇವರಾದರೆ  ಯಾರನ್ನು ಬಿಡಬೇಕು? ದೈವತ್ವದೆಡೆಗೆ  ಹೊರಟಾಗ ಕಷ್ಟಗಳೆ ಹೆಚ್ಚು. ಕಾರಣ ಅದಕ್ಕೆ ಸಹಕಾರವಿರದು. ಕಣ್ಣಿಗೆ ಕಾಣದ ಶಕ್ತಿ ವ್ಯಕ್ತಿಯನ್ನು ಬೆಳೆಸುತ್ತದೆ. ಅದರಲ್ಲಿ ದೇವರು ಮಾನವರು ಅಸುರರು  ಇದ್ದೇ ಇರುವರು. ಯಾವಶಕ್ತಿಗೆ ಹೆಚ್ಚು ಸಹಕಾರ ಸಿಗುವುದೋ ಅವರು ಭೂಮಿ ಆಳುವರಷ್ಟೆ. ಇದು ಸರ್ವಕಾಲಿಕ ಸತ್ಯ. 
ಈಗ‌ ನಮ್ಮನ್ನು ಆಳುತ್ತಿರುವವರು ಯಾರು? ಮಾನವನೊಳಗೇ ಅಡಗಿರುವ ಈ‌ ಮೂರೂ ಶಕ್ತಿ ಯೇ ಜೀವನದ ಸ್ಥಿತಿಗತಿಗೆ  ಮೂಲ ಕಾರಣ. ಸತ್ವ‌ ರಜಸ್ಸು ತಮಸ್ಸಿನ ಶಿಕ್ಷಣ, ಆಹಾರವೇ  ದೇಹವನ್ನು ದೇಶವನ್ನು ವಿಶ್ವವನ್ನು  ಆವರಿಸಿರುವಾಗ  ನಮ್ಮ ಶಕ್ತಿ ಅದರ ಒಂದು ಸಣ್ಣ ಬಿಂದುವಷ್ಟೆ. ಆ ಬಿಂದುವನರಿತರೆ  ನಾವ್ಯಾರ ಕೈಗೊಂಬೆ ಎನ್ನುವ ಸತ್ಯದರ್ಶನ ಸಾಧ್ಯವಿದೆ. ಆದರದು ಬಹಳ ಕಷ್ಟ.
ಒಳಹೊಕ್ಕಿ ನೋಡುವ ಶಕ್ತಿ  ಇರಬೇಕು.ಇದನ್ನು ಆತ್ಮಾವಲೋಕನ, ಆತ್ಮಸಂಶೋಧನೆ, ಆತ್ಮವಿಶ್ವಾಸ, ಆತ್ಮಸಾಕ್ಷಾತ್ಕಾರ ಆಧ್ಯಾತ್ಮ ಸಾಧನೆ ಎಂದಿರುವರು. 
ಯಾವುದೇ ತತ್ವದ ಸಂಶೋಧನೆ ಹೊರಗಿನಿಂದ ಮಾಡಲಾಗದು.ಮಾಡಿದರೆ ಅದರಲ್ಲಿ ತಂತ್ರ ಬೆರೆತು ಹೋಗುತ್ತದೆ. ತಂತ್ರ ಅತಂತ್ರಸ್ಥಿತಿಗೆ ತಲುಪಿಸಬಹುದು.
ಕೆಲವರಿಗಷ್ಟೆ ಸ್ವತಂತ್ರ ಜೀವನ  ಸಿಗಬಹುದು. ಒಟ್ಟಿನಲ್ಲಿ  ಜೀವನ‌ಎಂದರೆ ಜೀವಿಗಳ ವನ. ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಕಷ್ಟಪಡದೆ ಜೀವನ ನಡೆಸಿದರೆ ಜೀವನವಾಗಿರದು. ಭೂ ಋಣ ತೀರಿಸಲು  ಕಷ್ಟಪಟ್ಟು  ಜ್ಞಾನದಲ್ಲಿ ‌ನಡೆಯಲೇಬೇಕು. ಸತ್ಯವೋ  ಮಿಥ್ಯವೋ ಇದರಿಂದಾಗಿ  ಅಧರ್ಮ  ಬೆಳೆಯದಿದ್ದರೆ ಉತ್ತಮ ಸ್ಥಿತಿಗೆ ತಲುಪಬಹುದು. 
ಸೃಷ್ಟಿ ಉತ್ತಮವಿದ್ದರೆ ಸ್ಥಿತಿಯೂ ಉತ್ತಮವಿರುತ್ತದೆ.‌ಹಾಗೆ ಲಯವನ್ನು ಉತ್ತಮವಾಗಿ ಸ್ವೀಕರಿಸುವ  ಮಹಾತ್ಮರಾಗುತ್ತಾರೆ. ಇದು ವಿಶ್ವಗುರು ಭಾರತದ ಸಂದೇಶ.ಇದರ‌ ಮೂಲ ಸಾತ್ವಿಕ ಶಿಕ್ಷಣವಾಗಿತ್ತು.ಈಗ ಹೇಗಿದೆ?
 ಭಗವತಿ 
ಬೆಂಗಳೂರು

No comments:

Post a Comment