ಸ್ವಾತಂತ್ರ್ಯ ಯಾರಿಗೆ ಹೇಗೆ ಸಿಕ್ಕಿದೆ?

ಇತಿಹಾಸದ  ಸತ್ಯಘಟನೆಗಳಲ್ಲಿ ಸ್ವಾತಂತ್ರ್ಯ ಹೋರಾಟವು ಇಂದಿಗೂ  ಪ್ರಚಾರದಲ್ಲಿದೆ ಆದರೆ ಸ್ವಾತಂತ್ರ್ಯ ಪದಕ್ಕೆ ಅರ್ಥ ತಿಳಿಯದವರು ಇದನ್ನು ಪ್ರಸಾರ ಮಾಡುತ್ತಾ  ಸ್ವೇಚ್ಚಾಚಾರ...

Monday, May 18, 2026

ಸ್ವಾತಂತ್ರ್ಯ ಯಾರಿಗೆ ಹೇಗೆ ಸಿಕ್ಕಿದೆ?

ಇತಿಹಾಸದ  ಸತ್ಯಘಟನೆಗಳಲ್ಲಿ ಸ್ವಾತಂತ್ರ್ಯ ಹೋರಾಟವು ಇಂದಿಗೂ  ಪ್ರಚಾರದಲ್ಲಿದೆ ಆದರೆ ಸ್ವಾತಂತ್ರ್ಯ ಪದಕ್ಕೆ ಅರ್ಥ ತಿಳಿಯದವರು ಇದನ್ನು ಪ್ರಸಾರ ಮಾಡುತ್ತಾ  ಸ್ವೇಚ್ಚಾಚಾರಕ್ಕೆ ಇಳಿದಿರೋದನ್ನು ನೋಡಿದಾಗ  ಆತ್ಮದುರ್ಭಲತೆ ಎದ್ದು ಕಾಣುತ್ತದೆ. ಅಂದಿನ ‌ದೇಶಭಕ್ತಿ ಯೋಗದಿಂದ ಕೂಡಿದ್ದರೆ ಈಗಿನ ದೇಶ ಭಕ್ತರು ಭೋಗದ ಜೀವನದಲ್ಲಿರೋದನ್ನು  ಜನ ಕಂಡೂ ಏನೂ ಮಾಡದ ಸ್ಥಿತಿಯಲ್ಲಿದ್ದಾರೆಂದರೆ  ಅಜ್ಞಾನ ಎನ್ನಬೇಕೋ  ಕಲಿಗಾಲ ಎನ್ನಬೇಕೋ ವಿಜ್ಞಾನ ಎನ್ನಬೇಕೋ?
ಅಜ್ಞಾನ ‌ಬೆಳೆದಿರೋದೆ ಕಲಿಕೆಯಿಂದ  ಆ ಕಲಿಕೆಯು  ಹೊರಸತ್ಯವನ್ನಷ್ಟೆ  ಅರ್ಥ ಮಾಡಿಸುತ್ತಾ ಒಳಗಿದ್ದ ಸತ್ಯವನ್ನು ಹಿಂದುಳಿಸಿ ಆಳುತ್ತಿದೆ. ಇದರಿಂದಾಗಿ  ದೇಶ ವಿದೇಶವಾಗುತ್ತಿದೆ. ಹೊರಗಿನ ಶಿಕ್ಷಣದಿಂದ  ದೇಶ ಮುಂದೆ ನಡೆದಿರಬಹುದಷ್ಟೆ ಆದರೆ ಯೋಗಶಕ್ತಿ‌ ಹಿಂದುಳಿದಷ್ಟೂ  ಮಾನವನಿಗೆ  ಮಹಾತ್ಮರ ನಡೆ ನುಡಿಯಲ್ಲಿದ್ದ ಭಕ್ತಿ ಕಾಣಿಸದು. ಜ್ಞಾನವೇ ಇಲ್ಲದೆ ಭಕ್ತಿ ಬರುವುದೆ?
ಭಕ್ತಿ ಆಂತರಿಕ ಶಕ್ತಿಯಾಗಿದೆ. ಇದನ್ನು ಯಾರೋ ಹೊರಗಿನವರು ಒಳಗೆ ತುಂಬಿಸಲಾಗದು. ದೇಶಭಕ್ತರ ದೇವರಭಕ್ತರ ಹೆಸರಿನಲ್ಲಿ  ಹಣ ಅಧಿಕಾರ ಸ್ಥಾನ ಪಡೆದು ಭೋಗದ  ಜೀವನ ನಡೆಸಬಹುದು. ಆದರೆ ಅವರ ಅನುಭವಜ್ಞಾನ ಸಿಗೋದಿಲ್ಲ.  ಇದೀಗ  ಬೇಲಿಯೇ ಎದ್ದು ಹೊಲ ಮೇಯುತ್ತಿರುವುದರ ಹಿಂದೆ  ಅಜ್ಞಾನ ಆವರಿಸಿದೆ. ಇಲ್ಲಿ ಅಜ್ಞಾನ ಎಂದರೆ ತಿಳುವಳಿಕೆಯಿಲ್ಲ ಎಂದರ್ಥ ವಾಗದು.‌ಪುರಾಣ ಇತಿಹಾಸದ ವಿಷಯಗಳನ್ನು ಓದಿ ಕೇಳಿ ನೋಡಿ  ತಿಳಿಯುವ. ಸ್ವಾತಂತ್ರ್ಯ ನಮಗಿದೆ. ಆದರೆ ಅದರಂತೆ  ನಡೆಯೋ ಸ್ವಾತಂತ್ರ್ಯ ಇಲ್ಲದ  ಕಾರಣದಿಂದ   ಕ್ರಾಂತಿ ನಡೆದಿದೆ. ಇದನ್ನು ಶಾಂತಿಯಿಂದ ಅರ್ಥ ಮಾಡಿಕೊಂಡರೆ ನಮ್ಮ ನಮ್ಮ ಸ್ವಾತಂತ್ರ್ಯ ಹರಣಕ್ಕೆ ಕಾರಣವೇ ನಮ್ಮದೇ ಸಹಕಾರ ಕಾರಣವಾಗಿದೆ. ಸರ್ಕಾರಗಳು ನಡೆದಿರೋದೆ ಜನಬಲ ಹಣಬಲ  ಅಧಿಕಾರ ಬಲದಿಂದ. ‌ಇದು ದೇಶವನ್ನು ಸ್ವಾತಂತ್ರ್ಯ ಗೊಳಿಸುತ್ತಿದೆಯೇ ಅಥವಾ  ಅತಂತ್ರಸ್ಥಿತಿಗೆ ತಂದಿದೆಯೆ? 
ವಿದೇಶದಲ್ಲಿ ಇದ್ದವರು  ಭಾರತ ಹೀಗಿರಬೇಕೆಂದು ತೀರ್ಮಾನ  ಮಾಡಿದರೆ  ಬೆಲೆಕೊಡುವ ನಾವು ನಮ್ಮವರ  ದೇಶಭಕ್ತಿಯನ್ನು ನಿರ್ಲಕ್ಷ್ಯ ಮಾಡಿಕೊಂಡು  ವಿದೇಶಿಗರ ಲಕ್ಷಕ್ಕೆ ತಲೆಬಾಗೋದನ್ನು ದೇಶಭಕ್ತಿ ಎನ್ನಬಹುದೆ?
ಮಕ್ಕಳು ಮಹಿಳೆಯರು ದುಡಿದು ಸಂಸಾರ ನಡೆಸೋ ಸ್ಥಿತಿಗೆ ಬಂದಿರೋದೆ  ದೊಡ್ಡ  ಪ್ರಗತಿ ಎನ್ನಬಹುದೆ? 
ಭಾರತದಂತಹ ‌ಮಹಾದೇಶ ನಡೆಸೋದೆ‌ಕಷ್ಟ. ಅದರಲ್ಲೂ ಇಲ್ಲಿನ  ಮೂಲ ಧರ್ಮ ಕರ್ಮ ವನರಿತು  ಜೀವನ ಸಾಗಿಸೋದು ಇನ್ನೂ ಕಷ್ಟ. ಇದಕ್ಕೆ ಬದಲಾಗಿ ಅನ್ಯರ  ಸಹಕಾರ ಸಹಾಯ ಪಡೆದು  ದೇಶದ ಮೂಲ ಧರ್ಮ ಬಿಟ್ಟು ಹೊರಗೆ ಹೋದರೆ ಅದೇ  ಮುಂದೆ  ಸಮಸ್ಯೆ ಗೆ ಕಾರಣವಾಗುತ್ತದೆನ್ನುವುದು ಈಗ ಸತ್ಯವಾಗಿ ಕಾಡುತ್ತಿದೆ.
ಅನ್ಯರ ವಶದಲ್ಲಿ ಲಕ್ಷ ಗಳಿಸಿದರೂ ನಮ್ಮವರನ್ನೇ ನಿರ್ಲಕ್ಷ್ಯ ಮಾಡಿದರೆ  ಸಾಲ  ಕಾಡದೆಬಿಡದು. ಇದೊಂದು ಅಗೋಚರ ಶಕ್ತಿ. ಜೀವನದ ಗುರಿ ಸಾಲ ತೀರಿಸುವುದಾಗಿದೆ ಎಂದಾಗ ಯಾರ ಸಾಲಯಾರು ತೀರಿಸಬೇಕೆನ್ನುವ ಅರಿವಿದ್ದರೆ ಹತ್ತಿರದ ಸಾಲ ತೀರಿಸುತ್ತಲೇ ಎತ್ತರಕ್ಕೆ ಏರಬಹುದು.
ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಂಡು ಭೌತಿಕದಲ್ಲಿ  ಬಾಳುವುದು  ಜೀವನ. ಇಲ್ಲಿ ಪೈಪೋಟಿ ಜಗಳ ತಾರತಮ್ಯ ಅಂತರದ ದ್ವೇಷ ಭಿನ್ನಾಭಿಪ್ರಾಯ ಗಳಿಂದ. ಮನಸ್ಸು ಹದಗೆಟ್ಟು  ಹೊರಗೆ ಸುತ್ತಿದರೆ ಒಳಗಿದ್ದ ಸತ್ಯವೂ ಅರ್ಥ ವಾಗದೆ ಧರ್ಮ ಸೂಕ್ಮವನರಿಯದೆಯೇ ವ್ಯವಹಾರದಲ್ಲಿ ಮಾನವ‌ಮುಳುಗಿ ಲಾಭ‌ನಷ್ಟಗಳ ಲೆಕ್ಕಾಚಾರವಷ್ಟೆ ಕಾಣುತ್ತದೆ. ಅದರ ಹಿಂದೆ ಇರುವ ಪಾಪ ಪುಣ್ಯಗಳ ಬಗ್ಗೆ  ಅರಿವಿದ್ದರೆ ಉತ್ತಮ ವ್ಯವಹಾರದಲ್ಲೂ ಧರ್ಮವಿರುತ್ತದೆ.

ದೇಶವನ್ನು ವಿದೇಶ ಮಾಡೋದಕ್ಕೆ  ಹಣ ಬೇಕು. ವಿದೇಶಿಗರನ್ನು ಸ್ವದೇಶಿ ಮಾಡೋದಕ್ಕೆ  ಜ್ಞಾನ ಬೇಕು.
ಪರರೆಲ್ಲಾ ನಮ್ಮವರಾದರೆ ಸ್ವರ್ಗ
ನಮ್ಮವರೆ ಪರಕೀಯರಂತಿದ್ದರೆ ನರಕ.
ಯಾರಿಗೆಗೊತ್ತು ಯಾರಲ್ಲಿ ಯಾವ ದೇಶದ ಧರ್ಮ ಸಂಸ್ಕೃತಿ ಭಾಷೆ ಇದೆಯೋ ಅದೇ ಅವರನ್ನು ನಡೆಸುತ್ತದೆ.ಆದರೆ ಸ್ವಾತಂತ್ರ್ಯ  ಎನ್ನುವ ಪದ  ಪವಿತ್ರವಾಗಿದ್ದರಷ್ಟೆ  ಯೋಗಿಗಳಾಗಿರಬಹುದು.

No comments:

Post a Comment