ಸಿದ್ದಿ ಪಡೆದ ಸಿದ್ದರು

ಅತೀಂದ್ರಿಯ ಲೋಕದ ರಹಸ್ಯ.. ಸಿದ್ಧಿ ಮತ್ತು ಸಿದ್ಧರ ವಾಸ್ತವ ಸತ್ಯಗಳು: ಬಾಹ್ಯಾಕಾಶದ ಅನಂತತೆಯನ್ನು ಅಳೆಯಲು ಹೊರಟಿರುವ ನವೀನ ವಿಜ್ಞಾನಕ್ಕೇ ಸವಾಲೆಸೆಯುವ, ಪ್ರಕೃತಿಯ ನಿಯಮ...

Monday, May 18, 2026

ವಿವೇಕಾನಂದರಾಗೋದು ಹೇಗೆ?

:ವಿವೇಕವಾಣಿ : ಯಾವುದೇ ಮಹಾತ್ಕಾರ್ಯ ದಿಢೀರೆಂದು ಆಗಲಾರದು. ಸದಾ ಆಲೋಚನೆಗಳಿಂದಲೇ ಸತ್ಕಾರ್ಯಗಳಾಗುವುವು. ನೀನು ಸದಾ ಉದಾತ್ತ ವಿಚಾರಗಳನ್ನೇ ಗ್ರಹಿಸುವಲ್ಲಿ ಅವುಗಳನ್ನೇ ಅನುದಿನವೂ , ಅನುಕ್ಷಣವೂ ಮೆಲುಕು ಹಾಕುತ್ತಿದ್ದಲ್ಲಿ ಖಂಡಿತವಾಗಿಯೂ ಮಹಾತ್ಕಾರ್ಯದ ಸಾಮರ್ಥ್ಯ ನಿನ್ನಲ್ಲಿಯೂ ಪುಟಿದೇಳುತ್ತದೆ. ಇದಕ್ಕೆ ಮೂಲವೇ ಶಿಕ್ಷಣದಲ್ಲಿ ವಿವೇಕಯುಕ್ತ ವಿಚಾರಗಳನ್ನು ತುಂಬುವುದಾಗಿತ್ತು.‌
ಭಾರತದ ಈ ಸ್ಥಿತಿಗೆ ಕಾರಣವೇ ಈ ಶಿಕ್ಷಣದ ವಿಷಯಗಳಾಗಿವೆ. ಅದನ್ನು ಸರಿಪಡಿಸದೆ ಜನರನ್ನು ಆಳಲು ಹೊರಟವರಿಗೆ ವಿವೇಕವಂತರೆನ್ನಬಹುದೆ?

ವಿವೇಕವೆಂದರೆ‌ ವಿಚಾರವನ್ನು ವೇದ ಶಾಸ್ತ್ರ ಪುರಾಣದ ಆಧಾರದಲ್ಲಿ ಅರ್ಥ ಮಾಡಿಕೊಂಡು ಸತ್ಯ ಕಂಡುಕೊಳ್ಳುವುದು.

ವಿಷಯಗಳಿಂದ  ನಮ್ಮ ಈ ಜೀವನದ ವೇದನೆಗಳಿಗೆ‌  ಕಾರಣ ತಿಳಿದು  ನಡೆಯುವುದಾಗಿದೆ.
ಇವೆಲ್ಲವೂ  ಆಂತರಿಕ ಶುದ್ದಿಯಿಂದ ಆಗುವುದರಿಂದ ವಿವೇಕಾನಂದರಾಗಬಹುದು. 
ಶಿಕ್ಷಣದಿಂದ. ಇದು ಪ್ರಾರಂಭವಾದಾಗಲೇ ನಮ್ಮೆಲ್ಲರ ವೇದನೆ  ಕಡಿಮೆಯಾಗಲು ಸಾಧ್ಯ.ಅವರವರ ಆತ್ಮಚಿಂತನೆ  ಆತ್ಮಾವಲೋಕನ ಆತ್ಮಪರಿಶೀಲನೆಯೊಳಗಡಗಿದೆ ವಿವೇಕ.

No comments:

Post a Comment