:ವಿವೇಕವಾಣಿ : ಯಾವುದೇ ಮಹಾತ್ಕಾರ್ಯ ದಿಢೀರೆಂದು ಆಗಲಾರದು. ಸದಾ ಆಲೋಚನೆಗಳಿಂದಲೇ ಸತ್ಕಾರ್ಯಗಳಾಗುವುವು. ನೀನು ಸದಾ ಉದಾತ್ತ ವಿಚಾರಗಳನ್ನೇ ಗ್ರಹಿಸುವಲ್ಲಿ ಅವುಗಳನ್ನೇ ಅನುದಿನವೂ , ಅನುಕ್ಷಣವೂ ಮೆಲುಕು ಹಾಕುತ್ತಿದ್ದಲ್ಲಿ ಖಂಡಿತವಾಗಿಯೂ ಮಹಾತ್ಕಾರ್ಯದ ಸಾಮರ್ಥ್ಯ ನಿನ್ನಲ್ಲಿಯೂ ಪುಟಿದೇಳುತ್ತದೆ. ಇದಕ್ಕೆ ಮೂಲವೇ ಶಿಕ್ಷಣದಲ್ಲಿ ವಿವೇಕಯುಕ್ತ ವಿಚಾರಗಳನ್ನು ತುಂಬುವುದಾಗಿತ್ತು.
ಭಾರತದ ಈ ಸ್ಥಿತಿಗೆ ಕಾರಣವೇ ಈ ಶಿಕ್ಷಣದ ವಿಷಯಗಳಾಗಿವೆ. ಅದನ್ನು ಸರಿಪಡಿಸದೆ ಜನರನ್ನು ಆಳಲು ಹೊರಟವರಿಗೆ ವಿವೇಕವಂತರೆನ್ನಬಹುದೆ?
ವಿವೇಕವೆಂದರೆ ವಿಚಾರವನ್ನು ವೇದ ಶಾಸ್ತ್ರ ಪುರಾಣದ ಆಧಾರದಲ್ಲಿ ಅರ್ಥ ಮಾಡಿಕೊಂಡು ಸತ್ಯ ಕಂಡುಕೊಳ್ಳುವುದು.
ವಿಷಯಗಳಿಂದ ನಮ್ಮ ಈ ಜೀವನದ ವೇದನೆಗಳಿಗೆ ಕಾರಣ ತಿಳಿದು ನಡೆಯುವುದಾಗಿದೆ.
ಇವೆಲ್ಲವೂ ಆಂತರಿಕ ಶುದ್ದಿಯಿಂದ ಆಗುವುದರಿಂದ ವಿವೇಕಾನಂದರಾಗಬಹುದು.
ಶಿಕ್ಷಣದಿಂದ. ಇದು ಪ್ರಾರಂಭವಾದಾಗಲೇ ನಮ್ಮೆಲ್ಲರ ವೇದನೆ ಕಡಿಮೆಯಾಗಲು ಸಾಧ್ಯ.ಅವರವರ ಆತ್ಮಚಿಂತನೆ ಆತ್ಮಾವಲೋಕನ ಆತ್ಮಪರಿಶೀಲನೆಯೊಳಗಡಗಿದೆ ವಿವೇಕ.
No comments:
Post a Comment