ಸ್ಪರ್ಧೆ ಯಾರೊಂದಿಗೆ ನಡೆಸಬೇಕಿತ್ತು? ಹೇಗೆ?

ಬದಲಾವಣೆ ಹೇಗಿರಬೇಕಿತ್ತು ?ಹೇಗಾಗುತ್ತಿದೆ? ಸ್ಪರ್ಧೆ ನಡೆಸೋದಾದರೆ ಆಧ್ಯಾತ್ಮಿಕವಾಗಿ ನಡೆಸಿದರೆ ಮಹಾತ್ಮರನ್ನು ಅರಿಯಬಹುದು ದೈವತ್ವದಲ್ಲಿ ನಡೆಯಬಹುದು ಪರಮಾ...

Tuesday, May 26, 2026

ಸ್ಪರ್ಧೆ ಯಾರೊಂದಿಗೆ ನಡೆಸಬೇಕಿತ್ತು? ಹೇಗೆ?

ಬದಲಾವಣೆ ಹೇಗಿರಬೇಕಿತ್ತು ?ಹೇಗಾಗುತ್ತಿದೆ?

ಸ್ಪರ್ಧೆ ನಡೆಸೋದಾದರೆ ಆಧ್ಯಾತ್ಮಿಕವಾಗಿ ನಡೆಸಿದರೆ ಮಹಾತ್ಮರನ್ನು ಅರಿಯಬಹುದು ದೈವತ್ವದಲ್ಲಿ ನಡೆಯಬಹುದು ಪರಮಾತ್ಮನಲ್ಲಿ ಸೇರಲೂಬಹುದು. ಈಗಿನ ಸ್ಪರ್ಧೆ  ಕೆಳಮಟ್ಟದೆಡೆಗೆ  ನಡೆದಿರೋದು ‌ದುರಂತವಷ್ಟೆ.
ಮಹಿಳೆ ಮಕ್ಕಳನ್ನು  ಹೊರಗೆ ದುಡಿಸಿಕೊಂಡು ಸಾಧಿಸುವುದೇನಿದೆ?

ನಿಮ್ಮ ನಿಮ್ಮ ಮನೆಯ ಮನದ ಸಮಸ್ಯೆಗೆ ಕಾರಣವೇ ಅಜ್ಞಾನ. ಎಂದರೆ ಸತ್ಯದ ತಿಳುವಳಿಕೆಯಿಲ್ಲದ   ಜೀವನದಲ್ಲಿ ಹೊರಜಗತ್ತಿನ ದಾಸರಾದಷ್ಟೂ ಸಮಸ್ಯೆ ಒಳಗೇ ಬೆಳೆಯುತ್ತಾ ನಮ್ಮತನ ನಮವರ ನಡುವೆ ಅಂತರ ಸೃಷ್ಟಿ ಯಾಗಿ ಅತಂತ್ರಸ್ಥಿತಿಗೆ ಜೀವನ ತಲುಪಿದಾಗ ಹಿಂದಿರುಗೋದು ಕಷ್ಟ ಮುಂದೆ ನಡೆದರೂ ನಷ್ಟ ತಪ್ಪೋದಿಲ್ಲ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿದೆಯೆ? ಪರಮಾತ್ಮನಿರೋದೆಲ್ಲಿ ಎಂದರೆ ಆತ್ಮಾವಲೋಕನ ದಲ್ಲಿ .ವಿಪರ್ಯಾಸವೆಂದರೆ ಆತ್ಮದ ಅರಿವೇ ಇಲ್ಲದವರಿಗೆ ದೇವರು ಕಾಣೋದಿಲ್ಲ. ದೆವ್ವಗಳ ಸಾಮ್ರಾಜ್ಯ ದಲ್ಲಿ ಅತೃಪ್ತಿ ಕಾಡುತ್ತದೆ. ಈಗಂತೂ  ಸಾವಿರದ ದೇವರ ಹೆಸರಿನಲ್ಲಿ  ಸಾಯುವ  ಮಾನವರೆ ದೇವರಾಗಿರೋದು  ದೊಡ್ಡ ದುರಂತ. ಹಾಗಂತ ಮಾನವನ ದೈವಗುಣ ಬೆಳೆಸುವ ಶಿಕ್ಷಣ ಕೊಟ್ಟರೆ  ಪರಿಹಾರವಿದೆ ಆದರೆ ಅದರಲ್ಲಿ ರಾಜಕೀಯ ‌ಬೆರೆಸಿ ಆಳೋರೆ ಅಸುರರಾಗಿರುವಾಗ ಎಲ್ಲಿರುವುದು ಸತ್ಯ ಧರ್ಮ?
ಕಲಿಗಾಲ ಕಲಿಕೆಯ‌ಕಾಲ ಕಲಿಕೆಯಲ್ಲಿ ಸತ್ವ  ಸತ್ಯ ತತ್ವ ಇರಬೇಕಷ್ಟೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಕಾಲವಾಗುತ್ತಿದೆ  ಇದು ತಂತ್ರದ ಫಲ.ಕರ್ಮಕ್ಕೆ ತಕ್ಕಂತೆ ಫಲವಿದೆ.
ಬದಲಾವಣೆ ಜಗದ ನಿಯಮ. ಜಗತ್ತನ್ನು ಆಳಲು ಹೊರಟವರೂ ಆಳಾಗಿ ಜನ್ಮ ಪಡೆಯಲೇಬೇಕೆನ್ನುವ ಸತ್ಯದ ಅರಿವಿದ್ದರೆ  ಉತ್ತಮ ಜೀವನ ಇದ್ದಲ್ಲೇ‌ ನಡೆಸಬಹುದು. ಹೊರದೃಷ್ಟಿ ಒಳದೃಷ್ಟಿ ಯ ನಡುವೆ ಅಂತರ ಬೆಳೆದಾಗಲೇ ಸೃಷ್ಟಿ ಯ ನಿಗೂಡ ರಹಸ್ಯ ಅರಿಯದೆ ಜೀವ ಹೋಗುತ್ತದೆನ್ನುವುದು  ಸನಾತನಧರ್ಮ. ಆಳವಾಗಿರುವ ಸತ್ಯ‌ ಮೇಲ್ಮಟ್ಟದ  ಸತ್ಯದ ನಡುವಿನ ಅರ್ಧಸತ್ಯದ ವ್ಯವಹಾರದಲ್ಲಿ ಹಣದ‌ಲಾಭವಾಗುತ್ತಾ ಜ್ಞಾನದ‌ ನಷ್ಟ ಅನುಭವಿಸೋನೇ ಮಾನವ.  ಭಗವದ್ಗೀತೆ  ಪ್ರಸಾರ ಮಾಡೋದು ಸುಲಭವಾದರೂ ಅದರಲ್ಲಿನ ಯೋಗವನರಿತು‌  ನಡೆಯೋದು‌ ಕಷ್ಟ. ಅದಕ್ಕೆ ಶಿಕ್ಷಣದಿಂದ ತೆಗೆದು ಹಾಕುವ ಪ್ರಯತ್ನ ಆಗಿ ಮಕ್ಕಳ ಜ್ಞಾನ ಕುಸಿದರೂ ಸರಿ ನಾವು ಆಳಬೇಕೆನ್ನುವ ರಾಜಕೀಯ ಮುಗಿಲುಮುಟ್ಟಿರೋದು. ಏನೇ ಆದರೂ ಮಾನವನ‌ ಬುದ್ದಿವಂತಿಕೆ ಬೆಳೆದರೂ‌ ಸತ್ಯಜ್ಞಾನವಿಲ್ಲದ‌ಮಿಥ್ಯಜ್ಞಾನದಿಂದ ಭೂಮಿಯ ಋಣ ತೀರಿಸಲಾಗದೆನ್ನುವುದು ಆಧ್ಯಾತ್ಮಿಕ ವಿಜ್ಞಾನ. ಭೌತವಿಜ್ಞಾನ ‌ ಕಣ್ಣಿಗೆ ಕಾಣುತ್ತದೆ ಆಧ್ಯಾತ್ಮಿಕ ವಿಜ್ಞಾನ ಅನುಭವಿಸಿಯೇ‌ ಕಾಣಬೇಕು. 
ಬದಲಾವಣೆ ಅಂತರಂಗದ ಶುದ್ದಿಯ‌ಕಡೆಗಿರಬೇಕಿತ್ತು.
ದೇವರನ್ನು ಹೊರಗಿಟ್ಟು ಒಳಗೆ ಅಸುರರಿಗೆ ಸ್ಥಾನಮಾನ ಸನ್ಮಾನ ನಡೆದರೆ  ಬೆಳೆಯೋದು ಯಾರು?
ನಮ್ಮೊಳಗೇ ಅಡಗಿರುವ ಈ ಅಹಂ ಕಾರ ಸ್ವಾರ್ಥ ಪೂರ್ಣ ರಾಜಕೀಯತೆಗೆ ನಾವೇ ಬಲಿಯಾದರೆ ಕಾರಣರು ಯಾರು?
ಹೊರಗಿನಿಂದ  ಪಡೆದಷ್ಟೂ ಸಾಲ.
ಒಳಗಿರೋದನ್ನು  ಕೊಟ್ಟಷ್ಟೂ  ಸಾಲಮನ್ನಾ ಆದರೆ  ಇದು ಸತ್ವ ಸತ್ಯ ತತ್ವದಲ್ಲಿದ್ದರಷ್ಟೆ  ಆತ್ಮಕ್ಕೆ ತೃಪ್ತಿ ಮುಕ್ತಿ ಎನ್ನುವುದು ಆಧ್ಯಾತ್ಮ. ವಿರುದ್ದವಿದ್ದರೆ ಭೌತಿಕ ಪ್ರಗತಿಯಾದರೂ‌  ಮಾನವನ ದುರ್ಗತಿ  ಮನುಷ್ಯತ್ವದ ಅವನತಿ ಅಸುರರ‌ ಪ್ರಗತಿಯಾಗಿ ಅಧೋಗತಿ.ಇಷ್ಟೇ‌ಜೀವನ
ಯಾವ‌ಪಕ್ಷ ಬಂದರೇನು‌ ಜನರ ಅಜ್ಞಾನ  ಹೋಗುವುದೆ? ಅಜ್ಞಾನಿಗಳನ್ನು ಆಳೋದು ಪ್ರಗತಿಯೆ? ಇರುವ‌ಒಂದು ಭೂಮಿ ದೇಶವನ್ನು ಅರ್ಥ ಮಾಡಿಕೊಳ್ಳಲು ಸೋತರೆ  ಮತ್ತದೇ‌ ಸರಪಳಿಯಲ್ಲಿಯೇ ಜನ್ಮವಾಗುತ್ತದೆ. ಒಟ್ಟಿನಲ್ಲಿ ಜೀವನದ ಗುರಿ ಆತ್ಮಸಂಶೋಧನೆಯಿಂದ ಆತ್ಮಜ್ಞಾನದಿಂದ  ಜೀವನ್ಮುಕ್ತಿ ಪಡೆಯೋದೆಂದರೆ  ಇಲ್ಲಿ ಯಾರಿಗೆ‌ಮುಕ್ತಿ ಸಿಗುತ್ತಿದೆ  ದೇವರು ಇರೋದೆಲ್ಲಿ? ಪರಮಾತ್ಮನ ಸೇವೆ ಆಗುತ್ತಿದೆಯೆ?   ಜನ ಯಾರ ದಾಸರಾಗಿದ್ದಾರೆ? ಶರಣಾಗೋದೆಂದರೆ ಏನು?
ಸತ್ಯವಿಲ್ಲದ ಧರ್ಮ ಕುಂಟುತ್ತಿದೆ ಧರ್ಮ ವಿಲ್ಲದ ಸತ್ಯ ಕುರುಡು ಜಗತ್ತನ್ನು ಆಳುತ್ತಲೇ ಇದೆ.‌ಕಲಿಯುಗದ ಪ್ರಭಾವೋ ಕಲಿಕೆಯ ದುರಂತವೋ  ಇದರ‌ಬಗ್ಗೆ ಚರ್ಚೆ ಮಾಡದ ಮಧ್ಯವರ್ತಿಗಳು ‌ಮನರಂಜನೆಯೊಳಗೇ ಆತ್ಮವಂಚಕರಾಗಿ  ಮರೆದರೆ ಅದಕ್ಕೆ ತಕ್ಕಂತೆ  ಫಲ ಜನರ ಕಣ್ಣಿಗೆ ‌ಕಾಣುತ್ತಿದೆ  ಇದಕ್ಕೆ ಸರ್ಕಾರ ಕಾರಣವೆಂದರೆ ತಪ್ಪು ನಮ್ಮದೇ .ಕಾರಣ ನಮ್ಮದೇ ಸ ಹಕಾರ ಇಷ್ಟು ‌ಬೆಳೆಯಲು ಕಾರಣ. ಇದರ ಫಲ ಸರ್ಕಾರ ಅನುಭವಿಸೋದಿಲ್ಲ. ಅದು ಬದಲಾಗುತ್ತಲೇ ಇರುತ್ತದೆ. ಸಾಲದ ಹೊರೆ ಹೋಗೋದಷ್ಟೆ  ಜನರ ಜೀವನವಾಗಿದೆ. ಮಕ್ಕಳು ‌ಮೊಮ್ಮಕ್ಕಳಿಗಾಗುವಷ್ಟು ಆಸ್ತಿ‌ಮಾಡಿದರೆ ತೃಪ್ತಿ ಸಿಗೋದಿಲ್ಲ. ಎಂದರೆ ನಮ್ಮನ್ನು ಅತೃಪ್ತ ಆತ್ಮ ಆಳುತ್ತಿದೆ ಎಂದರ್ಥ. ಇದನ್ನು ದೆವ್ವ ಭೂತ‌ ಪಿಶಾಚಿ ಎಂದು‌ಹೆಸರಿಟ್ಟು ಕರೆದಿರುವರಷ್ಟೆ.ಯಾವ ಜನ್ಮದ‌ ಆಸೆಯೋ ಈ ಜನ್ಮದಲ್ಲಿ  ಸೇರಿಕೊಂಡು ಕುಣಿಸುತ್ತಿದೆ. ಕುಣಿದಷ್ಟೂ ನೋಡೋರಿಗೆ ‌ಮನರಂಜನೆಯಷ್ಟೆ ಆದರೆ ದೇಹಕ್ಕೆ ಸುಸ್ತು ಆರೋಗ್ಯ ಹಾಳು ನೆಮ್ಮದಿಯಿಲ್ಲದ ಬದುಕು ಹೀಗೇ ಎಷ್ಟೋ  ಜೀವಾತ್ಮನಿಗೆ  ಪರಮಾತ್ಮನ ಸತ್ಯದ ಪರಿಚಯ ಮಾಡಿಸದ ಶಿಕ್ಷಣ  ಶಿಕ್ಷೆಯಾಗಿ ಕಾಡುತ್ತಿದೆ. ಅದನ್ನು ಪ್ರಗತಿ ಎನ್ನುವ ಅಜ್ಞಾನಿಗಳಿಗೆ ಇದು ಒಂದು ವ್ಯವಹಾರವಾಗಿ  ಭ್ರಷ್ಟ ದುಷ್ಟರನ್ನು ಬೆಳೆಸೋದೆ ಕಾಯಕ.
ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರ,ಧಾರ್ಮಿಕ/ಕ್ಷೇತ್ರ, ಸಾಹಿತ್ಯ ಕ್ಷೇತ್ರ ಯಾವಾಗ ರಾಜಕೀಯದೆಡೆಗೆ  ನಡೆದವೋ ಆಗಲೇ ಆರ್ಥಿಕತೆಯು ಬೆಳೆದು  ಸಮಾಜದಲ್ಲಿ  ಜನಸಂಖ್ಯೆ ಬೆಳೆದರೂ ಸುಜ್ಞಾನ ಸತ್ಯಜ್ಞಾನ ಹಿಂದುಳಿಯುತ್ತಾ‌ ಹಿಂದುಳಿದವರ ಹೆಸರಿನಲ್ಲಿ  ತಮ್ಮ ಸ್ವಾರ್ಥ ಬೇಳೆ ಬೇಯಿಸಿಕೊಂಡು ತಿನ್ನುವವರು  ಜನರನ್ನು ದುರ್ಭಳಕೆ ಮಾಡಿಕೊಂಡರೂ ಕೇಳುವ ಸ್ವಾತಂತ್ರ್ಯ ಕಳೆದುಕೊಂಡಿರೋದು ಭಾರತದಂತಹ  ದೇಶಕ್ಕೆ ಆಗಿರುವ‌ ಮಹಾನಷ್ಟ.
ಪ್ರಜಾಪ್ರಭುತ್ವದ ಪ್ರಕಾರ ಪ್ರಜೆಗಳಿಗೆ ದೇಶೀಯ ಶಿಕ್ಷಣ ನೀಡುವುದು ಧರ್ಮ. ಈಗ ವಿದೇಶಿ ಶಿಕ್ಷಣವೇ ತಮ್ಮ ಸಾಮ್ರಾಜ್ಯಸ್ಥಾಪನೆ ಮಾಡಲು  ವಿದೇಶಿಗರಿಗೆ  ರಾಜಕಾರಣಿಗಳೇ ಸ್ವಾಗತಿಸಿರೋದು ಯಾವ ಪ್ರಗತಿ?
ಮೂಲ ಸರಿಪಡಿಸದೆ ರೆಂಬೆಗಳನ್ನು ಬೆಳೆಸಿದರೆ  ಬದಲಾವಣೆ ಸಾಧ್ಯವೆ?
ತತ್ವವಿಲ್ಲದ ತಂತ್ರ ಯಂತ್ರಮಾನವರನ್ನು ಸೃಷ್ಟಿ ಮಾಡುವ ಸ್ವತಂತ್ರ ಪಡೆದಾಗ ಜೀವವಿರುವ ಮಾನವನ‌ಗತಿ ಅಧೋಗತಿ. ಇವೆಲ್ಲವೂ ಸಾಮಾನ್ಯ ಜ್ಞಾನದ  ಕೆಳಮಟ್ಟದ ವಿಷಯವೆಂದು  ನಿರ್ಲಕ್ಷ್ಯ ಮಾಡಿದಷ್ಟೂ  ಭೂಮಿಯ ಮೇಲಿನ ಸಾಲ ತೀರದು. ಸಾಲ ತೀರದಿದ್ದರೆ‌ಮತ್ತದೇ ಜನನ‌ಮರಣದ ನಡುವೆ ಬರಲೇಬೇಕು.ಕಷ್ಟಪಟ್ಟು ಸಾಲ ತೀರಿಸುವ ಪರಮಾತ್ಮನ ಸೇವೆ ಮಾಡಲೇಬೇಕು. ಇದು ಯೋಗ‌ಮಾರ್ಗದಲ್ಲಿ ನಡೆಯಲು ಯೋಗಶಿಕ್ಷಣ ಯೋಗ್ಯ ಶಿಕ್ಷಣ ಬೇಕು.
ಈ ವಿಚಾರದ ಬಗ್ಗೆ ಎಷ್ಟೋ ಗುರುಹಿರಿಯರಿಗೆ  ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ  ಹಾಗು‌ಮಠ ಮಾನ್ಯರಿಗೆ  ಅರಿವಿದ್ದರೂ  ಅದರಲ್ಲಿ ರಾಜಕೀಯ ತೂರಿಸಿಕೊಂಡು ವ್ಯವಹಾರವೇ ಮುಖ್ಯ ಎಂದಿರುವಾಗ ಬದಲಾವಣೆ ಕಷ್ಟವಿದೆ.
ದೇಶದ ತುಂಬಾ ದೇವಸ್ಥಾನ ವಿದ್ದರೂ ಜನರಲ್ಲಿ ದೈವತ್ವದ ಗುಣಜ್ಞಾನವಿಲ್ಲದಿದ್ದರೆ ಮಕ್ಕಳು ಮಹಿಳೆಯರನ್ನು ಹೊರಗೆಳೆದು ಆಳುವರಷ್ಟೆ. ಇಡೀ ವಿಶ್ವ ಆಳುವ ವಿಶ್ವೇಶ್ವರನ ಜೊತೆಗೆ  ಈಶ್ವರಿಯೂ   ಇರಬಹುದು. ಈಶ್ವರನ ಧ್ಯಾನ ದಿಂದ ‌ಜ್ಞಾನದೇವತೆ ಒಲಿಯಬಹುದು. ಮನುಷ್ಯನ ಅಜ್ಞಾನಕ್ಕೆ ಮಹಿಳೆ ಒಲಿದರೆ  ಹಣ ಮಾತ್ರ ಸಿಗಬಹುದಷ್ಟೆ. ಹಣದಿಂದ ಹೆಣವನ್ನು  ಮಾರುವಷ್ಟು  ವ್ಯವಹಾರಜ್ಞಾನದಲ್ಲಿ  ದೇವರು ಕಾಣೋದಿಲ್ಲ.‌ಇದು ಅಸುರಿತನ.
ಜೀವ ಶಾಶ್ವತವಿರದು ಆತ್ಮ ಶಾಶ್ವತವೆನ್ನುವುದೇ ಸತ್ಯಜ್ಞಾನ.

ಬದಲಾವಣೆ ಮನೆಯೊಳಗೆ ಮನಸ್ಸಿನೊಳಗೇ  ಆಗಲು ಯೋಗ ಮಾರ್ಗ ಅಗತ್ಯವಿದೆ. ಯೋಗಿಗಳ ದೇಶವನ್ನು ಭೋಗಕ್ಕೆ  ಬಳಸಿದರೆ ರೋಗದ ಗೂಡಾಗುವುದು ಸಹಜ.
ಇದಕ್ಕೆ ಸರ್ಕಾರ ಹೈಟೆಕ್ ಆಸ್ಪತ್ರೆ ಗಳನ್ನು  ಪ್ರಾರಂಭಿಸಿದರೆ ಅದರೊಳಗೆ ಹೈಟೆಕ್  ವೈಧ್ಯರು  ದುಡಿಯಬಹುದು. ಆದರೆ ಸಾವನ್ನು ತಡೆಯಲಾಗದು. ಇದಕ್ಕೆ  ಮಾನವನಿಗೆ ಉತ್ತಮ ಸಂಸ್ಕಾರದ ಶಿಕ್ಷಣ ಮೊದಲೇ ನೀಡಿ ಆತ್ಮರಕ್ಷಣೆಯತ್ತ‌ನಡೆಸಿದ್ದರೆ ಎಲ್ಲರಲ್ಲಿಯೂ ಅಡಗಿರುವ ಒಬ್ಬನೇ ಪರಮಾತ್ಮನ ಅರಿತು ಹೊಂದಿ ಬಾಳುವ  ಮನುಷ್ಯರಾಗಬಹುದಲ್ಲವೆ? 
ಎಷ್ಟು ಇದ್ದರೂ ಸಾಲದು ಎಂದರೆ ಸಾಲವೇ ಅದು.ಅದು ಆತ್ಮತೃಪ್ತಿ ಕೊಡದು ಎನ್ನುವುದೆ ಆಧ್ಯಾತ್ಮ ಸತ್ಯ.
ನಾವಿರೋದೆಲ್ಲಿ? ಭೂಮಿ ಮೇಲೋ ಆಕಾಶದಲ್ಲೋ? ಮಾನವನಿಗೆ ಸಾಮಾನ್ಯ ಜ್ಞಾನ ಅಗತ್ಯವಿದೆ..
ಅಲ್ಲಿರುವುದು ನಮ್ಮನೆ ಇಲ್ಲಿ ‌ಬಂದೆ ಸುಮ್ಮನೆ. ಸುಮ್ಮನಿರಲಾಗದೆ ಮನೆ ಕಟ್ಟುವುದೆ‌  ಸಾಧನೆಯಾಗುತ್ತಿದೆ..ಮನೆ ಇರಲಿ ಅದು ದೇಗುಲವಾಗಿರಲಿ. ದೆವ್ವಗಳ ತಾಣವಾಗದಿರಲಿ.

No comments:

Post a Comment