ಪರಮಾತ್ಮನ ಕಾಣೋದು ಹೇಗೆ?

ಪರಮಾತ್ಮನಿರೋದೆಲ್ಲಿ? ಪರಮಾತ್ಮ ಎಲ್ಲರಲ್ಲಿಯೂ ಇದ್ದು ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯ‌ನಡೆಸುವನೆಂಬುದು ಅಧ್ವೈತ. ಪರಮಾತ್ಮನ‌ಜೊತೆಗೆ ಜೀವಾತ್ಮನು ಸೇರಿಕೊಂಡು  ಸೃಷ್ಟ...

Tuesday, June 2, 2026

ಪರಮಾತ್ಮನ ಕಾಣೋದು ಹೇಗೆ?

ಪರಮಾತ್ಮನಿರೋದೆಲ್ಲಿ?

ಪರಮಾತ್ಮ ಎಲ್ಲರಲ್ಲಿಯೂ ಇದ್ದು ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯ‌ನಡೆಸುವನೆಂಬುದು ಅಧ್ವೈತ. ಪರಮಾತ್ಮನ‌ಜೊತೆಗೆ ಜೀವಾತ್ಮನು ಸೇರಿಕೊಂಡು  ಸೃಷ್ಟಿ ಸ್ಥಿತಿ ಲಯ ಕಾರ್ಯ ನಡೆಯುವುದೆನ್ನುವುದು ಧ್ವೈತ. 
ಈ  ನಾನು ನೀನು ಅವನು ಅವಳುಗಳ  ನಡುವಿರುವ ಮಾನವನ‌ ಮನಸ್ಸು  ಎಲ್ಲವನ್ನೂ ನಡೆಸಿರೋದು ಸತ್ಯ. ಕಾರಣ ಮನಸ್ಸಿನಂತೆ‌ ಮಾನವನಿರುವನು.ಹಾಗೆಯೇ ಇನ್ನೂ ಅಸಂಖ್ಯಾತ ಜೀವರಾಶಿಗಳೂ ಅವುಗಳ‌ ಮನಸ್ಸಿನಂತೆ ನಡೆಯುತ್ತವೆ.
ವ್ಯತ್ಯಾಸವಿಷ್ಟೆ ಮಾನವನಿಗೆ‌ ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಆತ್ಮಜ್ಞಾನವಿದೆ.ಪ್ರಾಣಿ ಪಕ್ಷಿಗಳಿಗಿಲ್ಲ ಇವು ಪ್ರಕೃತಿಗೆ ತಕ್ಕಂತೆ ಬದಲಾಗುತ್ತವೆ. ಅಂದರೆ‌ಪ್ರಕೃತಿಯನರಿತು ನಡೆಯೋ ಶಕ್ತಿ ಮಾನವನಿಗಿದ್ದರೂ ಪ್ರಕೃತಿ ವಿರುದ್ದ‌ನಡೆದಾಗಲೇ ವಿಕೃತ ಬುದ್ದಿವಂತಿಕೆಯಾಗುತ್ತದೆ. ಮಹಾಶಕ್ತಿಯ ಮುಂದೆ ಮಾನವನ ಆಟ ತಾತ್ಕಾಲಿಕ ವಷ್ಟೆ.ಜಗನ್ಮಾತೆಯನರಿತು‌ನಡೆದರೆ ಜಗಧೀಶ್ವರನ ದರ್ಶನವೂ ಆಗಬಹುದು. ಇಲ್ಲಿ  ಪ್ರಕೃತಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡು ಜಗತ್ತನ್ನು ಆಳುವುದರಲ್ಲಿ ಯೋಗವಿದ್ದರೆ  ಸರಿ.ಭೋಗವೇ ಪ್ರಧಾನವಾಗಿದ್ದರೆ ರೋಗದ ಅಂತ್ಯ. 
ಆರೋಗ್ಯ ಎಂದರೆ ಆರು ಯೋಗ್ಯವಾಗಿರೋದು.
ಯಾವಾಗಿದು‌ಮತಗಳ ಅಂತರದಿಂದ ಮನಸ್ಸು ಹಾಳಾಗುತ್ತಾ ಹೋಯಿತೋ ರೋಗದೆಡೆಗೆ ನಡೆಯಿತು. ಈಗ‌ ನಾವು ಸೇವಿಸುವ‌ಗಾಳಿ, ನೀರು, ಆಹಾರ ಶಿಕ್ಷಣವೇ ಕಲಬೆರಕೆ  ಆಗಿರುವಾಗ ಸ್ವಚ್ಚ  ಮನಸ್ಸು ಇರುವುದಾದರೂ ಎಲ್ಲಿ?
ಹೊರಗೆ ನಡೆದಷ್ಟೂ  ರಾಜಕೀಯ. ಒಳಗಿಳಿದರೆ ರಾಜಯೋಗ.
ಒಟ್ಟಿನಲ್ಲಿ ಮಧ್ಯವರ್ತಿ ‌ಮಾನವನಿಗೆ  ಈ ಕಡೆ ಸತ್ಯ ಇನ್ನೊಂದು ಕಡೆ ಮಿಥ್ಯ ಬಿಟ್ಟು  ನಡೆಯಲಾಗದ  ಅತಂತ್ರ ಸ್ಥಿತಿಯಲ್ಲಿ ಪರಮಾತ್ಮನ ಕಾಣಲು‌ಪರದೇಶದವರೆಗೂ‌ಹೋದರೂ ಕಾಣಲಿಲ್ಲ
ಅವನಿರೋದು  ನಮ್ಮ ಅಂತರಾತ್ಮದಲ್ಲಿ ಎಂದಾಗ ಒಳಗೆ ಹುಡುಕಿಕೊಳ್ಳುವ ಯೋಗಶಿಕ್ಷಣ, ಯೋಗ್ಯ ಗುರು ಪಡೆಯಲೂ ಯೋಗ್ಯತೆ‌ಬೇಕಿದೆ. ಕಲಿಗಾಲದ ಕಲಿಕೆಯೇ ಹೊರಮುಖವಾದಾಗ
ಒಳಮುಖದ ಪರಿಚಯ ಮಾಡಿಸೋದು ಯಾರು?
ಧಾರ್ಮಿಕ ಕ್ಷೇತ್ರ ಶಿಕ್ಷಣದ ಮೂಲಕ ತಮ್ಮ ಜ್ಞಾನಿಗಳನ್ನು ಶಿಕ್ಷಕರನ್ನಾಗಿಸಿ  ಭಕ್ತರ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಅಧಿಕಾರವಿರಲಿಲ್ಲವೆ? ಅಥವಾ ರಾಜಕೀಯವೇ‌ಮುಖ್ಯವಾಯಿತೆ? 
ಆಗೋದನ್ನು ತಡೆಯಲಾಗಿಲ್ಲ ಆಗಿದ್ದೆಲ್ಲಾ ಒಳ್ಳೆಯದಕ್ಕೆ ಮುಂದೆ ಆಗೋದಕ್ಕೆ ನಮ್ಮ ಸಹಕಾರವೇ ಕಾರಣವಾಗಿರುತ್ತದೆ.ಅದು ಒಳ್ಳೆಯದೋ ಕೆಟ್ಟದ್ದೋ ಇದು ನಮ್ಮ ಜ್ಞಾನದ ಮೇಲೆ ನಿಂತಿದೆ. ಶಿಕ್ಷಣವೇ ಇದರ‌ ಮೂಲಾಧಾರವಾಗಿರುತ್ತದೆ. 

ಭಾರತ ವಿಶ್ವಕ್ಕೆ ಗುರು.‌ವಿಶ್ವದ ಎಲ್ಲಾ ಗುರು ಒಂದೆ ಎನ್ನುವ ಹಂತಕ್ಕೆ ತಲುಪುವುದು ಕಷ್ಟ. ಕ್ಷೇತ್ರ
ಕ್ಷೇತ್ರಜ್ಞ ಯೋಗದ ಪ್ರಕಾರ ಮನೆಯೊಳಗೆ ಮನೆಯೊಡೆಯ ಇದ್ದಾನೋ  ಇಲ್ಲವೋ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಎಲ್ಲರಲ್ಲಿಯೂ ಅವನಿದ್ದರೂ ಎಲ್ಲರೂ ಅವನೊಳಗಿಲ್ಲ.ಅಂದರೆ‌ಮನಸ್ಸು ಹೊರಗಿರುವಾಗ ಒಳಗಿರುವ ಅವನು ಬೇರೆಯಾಗಿರುತ್ತಾನೆ. ಬೇರೆಯಾಗಿ ಕಂಡಾಗ  ಅಂತರ ಬೆಳೆಯುತ್ತದೆ.ಅಂತರದಿಂದ ಅವಾಂತರದ ಸೃಷ್ಟಿ ಯಾಗುತ್ತದೆ.ಅದಕ್ಕೆ ತಕ್ಕಂತೆ ಸ್ಥಿತಿ‌ಮತ್ತು ಲಯವೂ ನಡೆಯುತ್ತದೆ.

Monday, June 1, 2026

ಸತ್ಯವೇ ದೇವರಾದರೆ ಸತ್ಯ ಎಲ್ಲಿದೆ?

ನನಗೆ ಸಣ್ಣ ವಯಸ್ಸಿನಿಂದಲೇ ಸತ್ಯ ಯಾವುದು ಸತ್ಯವೇ ದೇವರೆಂದಾಗ ಸತ್ಯ ಯಾಕೆ ಹೇಳಬಾರದು. ಹೀಗೇ ಮನಸ್ಸಿನಲ್ಲಿ ಪ್ರಶ್ನೆಗಳೇಳುತ್ತಿತ್ತು. ದೊಡ್ಡವರು ಸುಳ್ಳು‌ಹೇಳಬಹುದು ಸಣ್ಣವರು ಯಾಕೆ ಹೇಳಬಾರದು  ಎನ್ನುವ ವಿಚಾರದಲ್ಲಿ ಸಾಕಷ್ಟು ಬಾರಿ ಪ್ರಶ್ನೆ ಮಾಡಿ ಬೈಸಿಕೊಂಡಿದ್ದೆನಾದರೂ  ಎಲ್ಲೋ ಒಳಗೆ ಒಂದು ಕಡೆ ಸುಳ್ಳು ಹೇಳಬಾರದೆನ್ನುವ ಕೂಗಿಗೆ ಸ್ಪಂಧಿಸಿ ಮುಂದೆ ನಡೆದು ಸತ್ಯ ದ‌ ಹುಡುಕಾಟದಲ್ಲಿ  ವರ್ಷ ಕಳೆದೇ ಹೋಗಿತ್ತು. ಕೊನೆಗೂ ಸತ್ಯ ಸಿಕ್ಕಿದ್ದು ಒಳಗೆ ಹೊರತು ಹೊರಗಲ್ಲ. ಹೊರಗಿರೋದು ಸುಳ್ಳು
ಆದರೂ   ಮಾನವ ಜೀವನ ನಡೆಸೋದಕ್ಕೆ  ಧರ್ಮ ರಕ್ಷಣೆ ಮಾಡೋದಕ್ಕೆ ಸತ್ಯಕ್ಕೆ ತೇಪೆ ಹಾಕುವ ಸುಳ್ಳು ಹೊರಬರುತ್ತಲೇ ಇರುತ್ತದೆ. ಹಾಗಂತ ಜೀವ  ಸತ್ಯ ವನ್ನು ಗೆದ್ದು  ಹೋಗೋದಿಲ್ಲ.
ಶ್ರೀ ಶಂಕರಾಚಾರ್ಯರು  ತಿಳಿಸಿರುವ‌ಬ್ರಹ್ಮನ್ ಸತ್ಯ ಜಗತ್‌ಮಿಥ್ಯ.
ಕಣ್ಣಿಗೆ ಕಾಣದ ಬ್ರಹ್ಮ ಸತ್ಯವಾದರೂ ಕಾಣುವ‌ ಜಗತ್ ಮಿಥ್ಯ.
ಈ ಮಿಥ್ಯದಲ್ಲಿ ಸತ್ಯವನ್ನು ಅರಸಿದರೆ ಬದಲಾಗುತ್ತಲೇ ಇರುತ್ತದೆ.
ಇದು ಮನುಕುಲಕ್ಕೆ  ಅರ್ಥ ಮಾಡಿಸಿದರೂ ಅನುಭವಕ್ಕೆ ಬರಲು ಸತ್ಯದ ದಾರಿ ಹಿಡಿಯಲೇಬೇಕೆನ್ನುತ್ತದೆ ಆಧ್ಯಾತ್ಮ.
ಎಷ್ಟು ದೇವರನ್ನು ಸೃಷ್ಟಿ ಮಾಡಿದರೂ ಒಬ್ಬನೇ ದೇವರು.ಎಷ್ಟು ಅಸತ್ಯ‌ ಹರಡಿದರೂ ಮೂಲ ಸತ್ಯ ಬದಲಾಗದು.ಭ್ರಮೆಯಲ್ಲಿ  ಮಾಯೆಯಲ್ಲಿ  ಜೀವವಿರುವಾಗ ಸತ್ಯದ ಅರಿವಾಗದು. ಅದರಿಂದ ಹೊರಬರೋದೇ ಸಂಸಾರದಿಂದ ಹೊರಬಂದಂತೆ.
ಸಂಸಾರ ತೊರೆದು ಕಾಡಿಗೆ ಹೋದವರಿಗೂ ಸತ್ಯ ಕಾಣದು.
ಸಂಸಾರದಲ್ಲಿದ್ದು ಸತ್ಯವೇ ದೇವರು ಎಂದುಕೊಂಡವರಿಗೆ ದೇವರ ದರ್ಶನ ವಾಗಿದೆ. ಸತ್ಯಹರಿಶ್ಚಂದ್ರನಂತಿರಲಾಗದು. ಆದರೆ ಹರಿಯ ಸ್ಮರಣೆಯಲ್ಲಿರಬಹುದು.  
ಏನಾದರಾಗು ಮೊದಲು ಮಾನವನಾಗು. ಮಾನವನೊಳಗೇ ಅಡಗಿರುವ ಈ ಸತ್ಯ ಮಿಥ್ಯದ ವಿಜ್ಞಾನ  ಜೀವನಕ್ಕೆ ಆಧಾರ.
ಮೂಲಾಧಾರ‌  ಸತ್ಯದಲ್ಲಿದ್ದರೆ  ಸಹಸ್ರಾರ ಚಕ್ರದವರೆಗೂ ಸತ್ಯ ಬೆಳೆಯಬಹುದು.ಮೂಲಾಧಾರವೇ ಮಿಥ್ಯದೊಳಗಿದ್ದರೆ  ಸಾವಿರ ವರ್ಷ ವಾದರೂ ಸತ್ಯ  ಅರ್ಥ ವಾಗದು. 

Tuesday, May 26, 2026

ಸ್ಪರ್ಧೆ ಯಾರೊಂದಿಗೆ ನಡೆಸಬೇಕಿತ್ತು? ಹೇಗೆ?

ಬದಲಾವಣೆ ಹೇಗಿರಬೇಕಿತ್ತು ?ಹೇಗಾಗುತ್ತಿದೆ?

ಸ್ಪರ್ಧೆ ನಡೆಸೋದಾದರೆ ಆಧ್ಯಾತ್ಮಿಕವಾಗಿ ನಡೆಸಿದರೆ ಮಹಾತ್ಮರನ್ನು ಅರಿಯಬಹುದು ದೈವತ್ವದಲ್ಲಿ ನಡೆಯಬಹುದು ಪರಮಾತ್ಮನಲ್ಲಿ ಸೇರಲೂಬಹುದು. ಈಗಿನ ಸ್ಪರ್ಧೆ  ಕೆಳಮಟ್ಟದೆಡೆಗೆ  ನಡೆದಿರೋದು ‌ದುರಂತವಷ್ಟೆ.
ಮಹಿಳೆ ಮಕ್ಕಳನ್ನು  ಹೊರಗೆ ದುಡಿಸಿಕೊಂಡು ಸಾಧಿಸುವುದೇನಿದೆ?

ನಿಮ್ಮ ನಿಮ್ಮ ಮನೆಯ ಮನದ ಸಮಸ್ಯೆಗೆ ಕಾರಣವೇ ಅಜ್ಞಾನ. ಎಂದರೆ ಸತ್ಯದ ತಿಳುವಳಿಕೆಯಿಲ್ಲದ   ಜೀವನದಲ್ಲಿ ಹೊರಜಗತ್ತಿನ ದಾಸರಾದಷ್ಟೂ ಸಮಸ್ಯೆ ಒಳಗೇ ಬೆಳೆಯುತ್ತಾ ನಮ್ಮತನ ನಮವರ ನಡುವೆ ಅಂತರ ಸೃಷ್ಟಿ ಯಾಗಿ ಅತಂತ್ರಸ್ಥಿತಿಗೆ ಜೀವನ ತಲುಪಿದಾಗ ಹಿಂದಿರುಗೋದು ಕಷ್ಟ ಮುಂದೆ ನಡೆದರೂ ನಷ್ಟ ತಪ್ಪೋದಿಲ್ಲ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿದೆಯೆ? ಪರಮಾತ್ಮನಿರೋದೆಲ್ಲಿ ಎಂದರೆ ಆತ್ಮಾವಲೋಕನ ದಲ್ಲಿ .ವಿಪರ್ಯಾಸವೆಂದರೆ ಆತ್ಮದ ಅರಿವೇ ಇಲ್ಲದವರಿಗೆ ದೇವರು ಕಾಣೋದಿಲ್ಲ. ದೆವ್ವಗಳ ಸಾಮ್ರಾಜ್ಯ ದಲ್ಲಿ ಅತೃಪ್ತಿ ಕಾಡುತ್ತದೆ. ಈಗಂತೂ  ಸಾವಿರದ ದೇವರ ಹೆಸರಿನಲ್ಲಿ  ಸಾಯುವ  ಮಾನವರೆ ದೇವರಾಗಿರೋದು  ದೊಡ್ಡ ದುರಂತ. ಹಾಗಂತ ಮಾನವನ ದೈವಗುಣ ಬೆಳೆಸುವ ಶಿಕ್ಷಣ ಕೊಟ್ಟರೆ  ಪರಿಹಾರವಿದೆ ಆದರೆ ಅದರಲ್ಲಿ ರಾಜಕೀಯ ‌ಬೆರೆಸಿ ಆಳೋರೆ ಅಸುರರಾಗಿರುವಾಗ ಎಲ್ಲಿರುವುದು ಸತ್ಯ ಧರ್ಮ?
ಕಲಿಗಾಲ ಕಲಿಕೆಯ‌ಕಾಲ ಕಲಿಕೆಯಲ್ಲಿ ಸತ್ವ  ಸತ್ಯ ತತ್ವ ಇರಬೇಕಷ್ಟೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಕಾಲವಾಗುತ್ತಿದೆ  ಇದು ತಂತ್ರದ ಫಲ.ಕರ್ಮಕ್ಕೆ ತಕ್ಕಂತೆ ಫಲವಿದೆ.
ಬದಲಾವಣೆ ಜಗದ ನಿಯಮ. ಜಗತ್ತನ್ನು ಆಳಲು ಹೊರಟವರೂ ಆಳಾಗಿ ಜನ್ಮ ಪಡೆಯಲೇಬೇಕೆನ್ನುವ ಸತ್ಯದ ಅರಿವಿದ್ದರೆ  ಉತ್ತಮ ಜೀವನ ಇದ್ದಲ್ಲೇ‌ ನಡೆಸಬಹುದು. ಹೊರದೃಷ್ಟಿ ಒಳದೃಷ್ಟಿ ಯ ನಡುವೆ ಅಂತರ ಬೆಳೆದಾಗಲೇ ಸೃಷ್ಟಿ ಯ ನಿಗೂಡ ರಹಸ್ಯ ಅರಿಯದೆ ಜೀವ ಹೋಗುತ್ತದೆನ್ನುವುದು  ಸನಾತನಧರ್ಮ. ಆಳವಾಗಿರುವ ಸತ್ಯ‌ ಮೇಲ್ಮಟ್ಟದ  ಸತ್ಯದ ನಡುವಿನ ಅರ್ಧಸತ್ಯದ ವ್ಯವಹಾರದಲ್ಲಿ ಹಣದ‌ಲಾಭವಾಗುತ್ತಾ ಜ್ಞಾನದ‌ ನಷ್ಟ ಅನುಭವಿಸೋನೇ ಮಾನವ.  ಭಗವದ್ಗೀತೆ  ಪ್ರಸಾರ ಮಾಡೋದು ಸುಲಭವಾದರೂ ಅದರಲ್ಲಿನ ಯೋಗವನರಿತು‌  ನಡೆಯೋದು‌ ಕಷ್ಟ. ಅದಕ್ಕೆ ಶಿಕ್ಷಣದಿಂದ ತೆಗೆದು ಹಾಕುವ ಪ್ರಯತ್ನ ಆಗಿ ಮಕ್ಕಳ ಜ್ಞಾನ ಕುಸಿದರೂ ಸರಿ ನಾವು ಆಳಬೇಕೆನ್ನುವ ರಾಜಕೀಯ ಮುಗಿಲುಮುಟ್ಟಿರೋದು. ಏನೇ ಆದರೂ ಮಾನವನ‌ ಬುದ್ದಿವಂತಿಕೆ ಬೆಳೆದರೂ‌ ಸತ್ಯಜ್ಞಾನವಿಲ್ಲದ‌ಮಿಥ್ಯಜ್ಞಾನದಿಂದ ಭೂಮಿಯ ಋಣ ತೀರಿಸಲಾಗದೆನ್ನುವುದು ಆಧ್ಯಾತ್ಮಿಕ ವಿಜ್ಞಾನ. ಭೌತವಿಜ್ಞಾನ ‌ ಕಣ್ಣಿಗೆ ಕಾಣುತ್ತದೆ ಆಧ್ಯಾತ್ಮಿಕ ವಿಜ್ಞಾನ ಅನುಭವಿಸಿಯೇ‌ ಕಾಣಬೇಕು. 
ಬದಲಾವಣೆ ಅಂತರಂಗದ ಶುದ್ದಿಯ‌ಕಡೆಗಿರಬೇಕಿತ್ತು.
ದೇವರನ್ನು ಹೊರಗಿಟ್ಟು ಒಳಗೆ ಅಸುರರಿಗೆ ಸ್ಥಾನಮಾನ ಸನ್ಮಾನ ನಡೆದರೆ  ಬೆಳೆಯೋದು ಯಾರು?
ನಮ್ಮೊಳಗೇ ಅಡಗಿರುವ ಈ ಅಹಂ ಕಾರ ಸ್ವಾರ್ಥ ಪೂರ್ಣ ರಾಜಕೀಯತೆಗೆ ನಾವೇ ಬಲಿಯಾದರೆ ಕಾರಣರು ಯಾರು?
ಹೊರಗಿನಿಂದ  ಪಡೆದಷ್ಟೂ ಸಾಲ.
ಒಳಗಿರೋದನ್ನು  ಕೊಟ್ಟಷ್ಟೂ  ಸಾಲಮನ್ನಾ ಆದರೆ  ಇದು ಸತ್ವ ಸತ್ಯ ತತ್ವದಲ್ಲಿದ್ದರಷ್ಟೆ  ಆತ್ಮಕ್ಕೆ ತೃಪ್ತಿ ಮುಕ್ತಿ ಎನ್ನುವುದು ಆಧ್ಯಾತ್ಮ. ವಿರುದ್ದವಿದ್ದರೆ ಭೌತಿಕ ಪ್ರಗತಿಯಾದರೂ‌  ಮಾನವನ ದುರ್ಗತಿ  ಮನುಷ್ಯತ್ವದ ಅವನತಿ ಅಸುರರ‌ ಪ್ರಗತಿಯಾಗಿ ಅಧೋಗತಿ.ಇಷ್ಟೇ‌ಜೀವನ
ಯಾವ‌ಪಕ್ಷ ಬಂದರೇನು‌ ಜನರ ಅಜ್ಞಾನ  ಹೋಗುವುದೆ? ಅಜ್ಞಾನಿಗಳನ್ನು ಆಳೋದು ಪ್ರಗತಿಯೆ? ಇರುವ‌ಒಂದು ಭೂಮಿ ದೇಶವನ್ನು ಅರ್ಥ ಮಾಡಿಕೊಳ್ಳಲು ಸೋತರೆ  ಮತ್ತದೇ‌ ಸರಪಳಿಯಲ್ಲಿಯೇ ಜನ್ಮವಾಗುತ್ತದೆ. ಒಟ್ಟಿನಲ್ಲಿ ಜೀವನದ ಗುರಿ ಆತ್ಮಸಂಶೋಧನೆಯಿಂದ ಆತ್ಮಜ್ಞಾನದಿಂದ  ಜೀವನ್ಮುಕ್ತಿ ಪಡೆಯೋದೆಂದರೆ  ಇಲ್ಲಿ ಯಾರಿಗೆ‌ಮುಕ್ತಿ ಸಿಗುತ್ತಿದೆ  ದೇವರು ಇರೋದೆಲ್ಲಿ? ಪರಮಾತ್ಮನ ಸೇವೆ ಆಗುತ್ತಿದೆಯೆ?   ಜನ ಯಾರ ದಾಸರಾಗಿದ್ದಾರೆ? ಶರಣಾಗೋದೆಂದರೆ ಏನು?
ಸತ್ಯವಿಲ್ಲದ ಧರ್ಮ ಕುಂಟುತ್ತಿದೆ ಧರ್ಮ ವಿಲ್ಲದ ಸತ್ಯ ಕುರುಡು ಜಗತ್ತನ್ನು ಆಳುತ್ತಲೇ ಇದೆ.‌ಕಲಿಯುಗದ ಪ್ರಭಾವೋ ಕಲಿಕೆಯ ದುರಂತವೋ  ಇದರ‌ಬಗ್ಗೆ ಚರ್ಚೆ ಮಾಡದ ಮಧ್ಯವರ್ತಿಗಳು ‌ಮನರಂಜನೆಯೊಳಗೇ ಆತ್ಮವಂಚಕರಾಗಿ  ಮರೆದರೆ ಅದಕ್ಕೆ ತಕ್ಕಂತೆ  ಫಲ ಜನರ ಕಣ್ಣಿಗೆ ‌ಕಾಣುತ್ತಿದೆ  ಇದಕ್ಕೆ ಸರ್ಕಾರ ಕಾರಣವೆಂದರೆ ತಪ್ಪು ನಮ್ಮದೇ .ಕಾರಣ ನಮ್ಮದೇ ಸ ಹಕಾರ ಇಷ್ಟು ‌ಬೆಳೆಯಲು ಕಾರಣ. ಇದರ ಫಲ ಸರ್ಕಾರ ಅನುಭವಿಸೋದಿಲ್ಲ. ಅದು ಬದಲಾಗುತ್ತಲೇ ಇರುತ್ತದೆ. ಸಾಲದ ಹೊರೆ ಹೋಗೋದಷ್ಟೆ  ಜನರ ಜೀವನವಾಗಿದೆ. ಮಕ್ಕಳು ‌ಮೊಮ್ಮಕ್ಕಳಿಗಾಗುವಷ್ಟು ಆಸ್ತಿ‌ಮಾಡಿದರೆ ತೃಪ್ತಿ ಸಿಗೋದಿಲ್ಲ. ಎಂದರೆ ನಮ್ಮನ್ನು ಅತೃಪ್ತ ಆತ್ಮ ಆಳುತ್ತಿದೆ ಎಂದರ್ಥ. ಇದನ್ನು ದೆವ್ವ ಭೂತ‌ ಪಿಶಾಚಿ ಎಂದು‌ಹೆಸರಿಟ್ಟು ಕರೆದಿರುವರಷ್ಟೆ.ಯಾವ ಜನ್ಮದ‌ ಆಸೆಯೋ ಈ ಜನ್ಮದಲ್ಲಿ  ಸೇರಿಕೊಂಡು ಕುಣಿಸುತ್ತಿದೆ. ಕುಣಿದಷ್ಟೂ ನೋಡೋರಿಗೆ ‌ಮನರಂಜನೆಯಷ್ಟೆ ಆದರೆ ದೇಹಕ್ಕೆ ಸುಸ್ತು ಆರೋಗ್ಯ ಹಾಳು ನೆಮ್ಮದಿಯಿಲ್ಲದ ಬದುಕು ಹೀಗೇ ಎಷ್ಟೋ  ಜೀವಾತ್ಮನಿಗೆ  ಪರಮಾತ್ಮನ ಸತ್ಯದ ಪರಿಚಯ ಮಾಡಿಸದ ಶಿಕ್ಷಣ  ಶಿಕ್ಷೆಯಾಗಿ ಕಾಡುತ್ತಿದೆ. ಅದನ್ನು ಪ್ರಗತಿ ಎನ್ನುವ ಅಜ್ಞಾನಿಗಳಿಗೆ ಇದು ಒಂದು ವ್ಯವಹಾರವಾಗಿ  ಭ್ರಷ್ಟ ದುಷ್ಟರನ್ನು ಬೆಳೆಸೋದೆ ಕಾಯಕ.
ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರ,ಧಾರ್ಮಿಕ/ಕ್ಷೇತ್ರ, ಸಾಹಿತ್ಯ ಕ್ಷೇತ್ರ ಯಾವಾಗ ರಾಜಕೀಯದೆಡೆಗೆ  ನಡೆದವೋ ಆಗಲೇ ಆರ್ಥಿಕತೆಯು ಬೆಳೆದು  ಸಮಾಜದಲ್ಲಿ  ಜನಸಂಖ್ಯೆ ಬೆಳೆದರೂ ಸುಜ್ಞಾನ ಸತ್ಯಜ್ಞಾನ ಹಿಂದುಳಿಯುತ್ತಾ‌ ಹಿಂದುಳಿದವರ ಹೆಸರಿನಲ್ಲಿ  ತಮ್ಮ ಸ್ವಾರ್ಥ ಬೇಳೆ ಬೇಯಿಸಿಕೊಂಡು ತಿನ್ನುವವರು  ಜನರನ್ನು ದುರ್ಭಳಕೆ ಮಾಡಿಕೊಂಡರೂ ಕೇಳುವ ಸ್ವಾತಂತ್ರ್ಯ ಕಳೆದುಕೊಂಡಿರೋದು ಭಾರತದಂತಹ  ದೇಶಕ್ಕೆ ಆಗಿರುವ‌ ಮಹಾನಷ್ಟ.
ಪ್ರಜಾಪ್ರಭುತ್ವದ ಪ್ರಕಾರ ಪ್ರಜೆಗಳಿಗೆ ದೇಶೀಯ ಶಿಕ್ಷಣ ನೀಡುವುದು ಧರ್ಮ. ಈಗ ವಿದೇಶಿ ಶಿಕ್ಷಣವೇ ತಮ್ಮ ಸಾಮ್ರಾಜ್ಯಸ್ಥಾಪನೆ ಮಾಡಲು  ವಿದೇಶಿಗರಿಗೆ  ರಾಜಕಾರಣಿಗಳೇ ಸ್ವಾಗತಿಸಿರೋದು ಯಾವ ಪ್ರಗತಿ?
ಮೂಲ ಸರಿಪಡಿಸದೆ ರೆಂಬೆಗಳನ್ನು ಬೆಳೆಸಿದರೆ  ಬದಲಾವಣೆ ಸಾಧ್ಯವೆ?
ತತ್ವವಿಲ್ಲದ ತಂತ್ರ ಯಂತ್ರಮಾನವರನ್ನು ಸೃಷ್ಟಿ ಮಾಡುವ ಸ್ವತಂತ್ರ ಪಡೆದಾಗ ಜೀವವಿರುವ ಮಾನವನ‌ಗತಿ ಅಧೋಗತಿ. ಇವೆಲ್ಲವೂ ಸಾಮಾನ್ಯ ಜ್ಞಾನದ  ಕೆಳಮಟ್ಟದ ವಿಷಯವೆಂದು  ನಿರ್ಲಕ್ಷ್ಯ ಮಾಡಿದಷ್ಟೂ  ಭೂಮಿಯ ಮೇಲಿನ ಸಾಲ ತೀರದು. ಸಾಲ ತೀರದಿದ್ದರೆ‌ಮತ್ತದೇ ಜನನ‌ಮರಣದ ನಡುವೆ ಬರಲೇಬೇಕು.ಕಷ್ಟಪಟ್ಟು ಸಾಲ ತೀರಿಸುವ ಪರಮಾತ್ಮನ ಸೇವೆ ಮಾಡಲೇಬೇಕು. ಇದು ಯೋಗ‌ಮಾರ್ಗದಲ್ಲಿ ನಡೆಯಲು ಯೋಗಶಿಕ್ಷಣ ಯೋಗ್ಯ ಶಿಕ್ಷಣ ಬೇಕು.
ಈ ವಿಚಾರದ ಬಗ್ಗೆ ಎಷ್ಟೋ ಗುರುಹಿರಿಯರಿಗೆ  ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ  ಹಾಗು‌ಮಠ ಮಾನ್ಯರಿಗೆ  ಅರಿವಿದ್ದರೂ  ಅದರಲ್ಲಿ ರಾಜಕೀಯ ತೂರಿಸಿಕೊಂಡು ವ್ಯವಹಾರವೇ ಮುಖ್ಯ ಎಂದಿರುವಾಗ ಬದಲಾವಣೆ ಕಷ್ಟವಿದೆ.
ದೇಶದ ತುಂಬಾ ದೇವಸ್ಥಾನ ವಿದ್ದರೂ ಜನರಲ್ಲಿ ದೈವತ್ವದ ಗುಣಜ್ಞಾನವಿಲ್ಲದಿದ್ದರೆ ಮಕ್ಕಳು ಮಹಿಳೆಯರನ್ನು ಹೊರಗೆಳೆದು ಆಳುವರಷ್ಟೆ. ಇಡೀ ವಿಶ್ವ ಆಳುವ ವಿಶ್ವೇಶ್ವರನ ಜೊತೆಗೆ  ಈಶ್ವರಿಯೂ   ಇರಬಹುದು. ಈಶ್ವರನ ಧ್ಯಾನ ದಿಂದ ‌ಜ್ಞಾನದೇವತೆ ಒಲಿಯಬಹುದು. ಮನುಷ್ಯನ ಅಜ್ಞಾನಕ್ಕೆ ಮಹಿಳೆ ಒಲಿದರೆ  ಹಣ ಮಾತ್ರ ಸಿಗಬಹುದಷ್ಟೆ. ಹಣದಿಂದ ಹೆಣವನ್ನು  ಮಾರುವಷ್ಟು  ವ್ಯವಹಾರಜ್ಞಾನದಲ್ಲಿ  ದೇವರು ಕಾಣೋದಿಲ್ಲ.‌ಇದು ಅಸುರಿತನ.
ಜೀವ ಶಾಶ್ವತವಿರದು ಆತ್ಮ ಶಾಶ್ವತವೆನ್ನುವುದೇ ಸತ್ಯಜ್ಞಾನ.

ಬದಲಾವಣೆ ಮನೆಯೊಳಗೆ ಮನಸ್ಸಿನೊಳಗೇ  ಆಗಲು ಯೋಗ ಮಾರ್ಗ ಅಗತ್ಯವಿದೆ. ಯೋಗಿಗಳ ದೇಶವನ್ನು ಭೋಗಕ್ಕೆ  ಬಳಸಿದರೆ ರೋಗದ ಗೂಡಾಗುವುದು ಸಹಜ.
ಇದಕ್ಕೆ ಸರ್ಕಾರ ಹೈಟೆಕ್ ಆಸ್ಪತ್ರೆ ಗಳನ್ನು  ಪ್ರಾರಂಭಿಸಿದರೆ ಅದರೊಳಗೆ ಹೈಟೆಕ್  ವೈಧ್ಯರು  ದುಡಿಯಬಹುದು. ಆದರೆ ಸಾವನ್ನು ತಡೆಯಲಾಗದು. ಇದಕ್ಕೆ  ಮಾನವನಿಗೆ ಉತ್ತಮ ಸಂಸ್ಕಾರದ ಶಿಕ್ಷಣ ಮೊದಲೇ ನೀಡಿ ಆತ್ಮರಕ್ಷಣೆಯತ್ತ‌ನಡೆಸಿದ್ದರೆ ಎಲ್ಲರಲ್ಲಿಯೂ ಅಡಗಿರುವ ಒಬ್ಬನೇ ಪರಮಾತ್ಮನ ಅರಿತು ಹೊಂದಿ ಬಾಳುವ  ಮನುಷ್ಯರಾಗಬಹುದಲ್ಲವೆ? 
ಎಷ್ಟು ಇದ್ದರೂ ಸಾಲದು ಎಂದರೆ ಸಾಲವೇ ಅದು.ಅದು ಆತ್ಮತೃಪ್ತಿ ಕೊಡದು ಎನ್ನುವುದೆ ಆಧ್ಯಾತ್ಮ ಸತ್ಯ.
ನಾವಿರೋದೆಲ್ಲಿ? ಭೂಮಿ ಮೇಲೋ ಆಕಾಶದಲ್ಲೋ? ಮಾನವನಿಗೆ ಸಾಮಾನ್ಯ ಜ್ಞಾನ ಅಗತ್ಯವಿದೆ..
ಅಲ್ಲಿರುವುದು ನಮ್ಮನೆ ಇಲ್ಲಿ ‌ಬಂದೆ ಸುಮ್ಮನೆ. ಸುಮ್ಮನಿರಲಾಗದೆ ಮನೆ ಕಟ್ಟುವುದೆ‌  ಸಾಧನೆಯಾಗುತ್ತಿದೆ..ಮನೆ ಇರಲಿ ಅದು ದೇಗುಲವಾಗಿರಲಿ. ದೆವ್ವಗಳ ತಾಣವಾಗದಿರಲಿ.

Thursday, May 21, 2026

ಆತ್ಮನಿರ್ಭರ ಎತ್ತ ಸಾಗುತ್ತಿದೆ ?

ಆತ್ಮನಿರ್ಭರ ಸಾಧ್ಯವೆ?

ಸೂಕ್ಮವಾಗಿ ಗಮನಿಸಿದರೆ ಇಂದಿನ ರಾಜಕೀಯ ವ್ಯವಸ್ಥೆ ಹಿಂದೂ ಮುಸ್ಲಿಂ ನಡುವೆ ಅಂತರ ಬೆಳೆಸುವ ಮಧ್ಯವರ್ತಿಗಳ ಒಪ್ಪಂದ ದೆಡೆಗೆ  ನಡೆಯುತ್ತಿದ್ದರೂ ಇದನ್ನು ಪ್ರಗತಿ ಎಂದು ಸಾಲದೆಡೆಗೆ  ಹೊರಟಿರೋದು  ದುರಂತವೆಂದರೆ  ಮಾನವರಿಗೆ  ಅರ್ಥ ಆಗಬಹುದೆ?

ದೇವರು ದೇಶ ಧರ್ಮ  ಭಾಷೆಗಳ ನಡುವೆ ಅಂತರ ಬೆಳೆದಿರೋದೆ ಮೂರನೆಯವರ ಪ್ರವೇಶದಿಂದ. ಆ ಪ್ರವಾಸಿಗರಿಗೆ‌ಕೊಡುವ ಗೌರವ ಸ್ವಾಗತ ಆತಿಥ್ಯಗಳು ಅವರನ್ನು ಇನ್ನಷ್ಟು ಮಧ್ಯೆ ನಿಂತು ಅಂತರ ಬೆಳೆಸುವಂತೆ ಮಾಡುತ್ತಾ ಅತಂತ್ರಸ್ಥಿತಿಗೆ ಜನಜೀವನ ತಲುಪಿದೆ. ತಮ್ಮ ಮೂಲದವರ ಶಿಕ್ಷಣವೂ ಇಲ್ಲ ಧರ್ಮ/ಕರ್ಮ ವೂ ಇಲ್ಲ ಅವರಲ್ಲಿದ್ದ ಒಗ್ಗಟ್ಟಿನ ತತ್ವಜ್ಞಾನವೂ ಇಲ್ಲ ಆದರೆ ಅವರ ಭೂಮಿ ಆಸ್ತಿ ಹೆಸರು ಹಣ ಹಿಡಿದು ಆಳೋರಿದ್ದಾರೆ. ಆಳೋದಕ್ಕೆ ‌ಬೇಕಾದ ಜ್ಞಾನವಿಲ್ಲದೆ  ಅನ್ಯರ ಜ್ಞಾನದೆಡೆಗೆ ನಡೆದರೆ ಇಲ್ಲಿ ಸ್ವತಂತ್ರ ಜ್ಞಾನಕ್ಕೆ ಬೆಲೆಯಿರದು.ಸ್ವತಂತ್ರ ಜ್ಞಾನವಿರದೆ ಬುದ್ದಿಯೂ ಇರದು. ಬುದ್ದಿವಂತಿಕೆ ಪುಸ್ತಕದ ಬದನೆಕಾಯಿಯಾದಾಗ ತಿನ್ನೋದೆ ಜೀವನ. ತಿಂದ ಮೇಲೆ ಬರುವ ರೋಗಕ್ಕೆ ಔಷಧವೂ ಹೊರಗಿನದ್ದೆ ಆಗಿರುತ್ತದೆ. ಹೀಗೇ  ಒಳಗಿನ ಶಕ್ತಿ ‌ಮತ್ತು ಹೊರಗಿನ ಶಕ್ತಿಯ ನಡುವೆ ನಿಂತು ಸ್ವಾರ್ಥ ಅಹಂಕಾರದ  ರಾಜಕೀಯ ನಡೆಸುವ ಮಧ್ಯವರ್ತಿಗಳಿಗೆ ಸಿಕ್ಕಿದ್ದೇನು?  ಎಲ್ಲರಂತೆ  ನಾವೂ ಮಾನವರು ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲದೆ ಹೋದರೆ  ಜೀವನಕ್ಕೆ ಅರ್ಥ ಇರದು.
ಭೌತಶಾಸ್ತ್ರ  ರಸಾಯನಶಾಸ್ತ್ರ  ಜೀವಶಾಸ್ತ್ರ ಸಂಖ್ಯಾಶಾಸ್ತ್ರ ಅರ್ಥ ಶಾಸ್ತ್ರ ಕ್ಕೆ  ಇಳಿದಾಗ ಆಧ್ಯಾತ್ಮಿಕ ಶಾಸ್ತ್ರ ಅರ್ಥ ವಾಗದೆ  ಶಸ್ತ್ರ ಹಿಡಿಯೋರೆ  ಹೆಚ್ಚಾಗುವರು. ಕ್ಷತ್ರಿಯ ಧರ್ಮ ರಾಜರ ಕಾಲಕ್ಕೆ  ಇತ್ತು.ಈಗ ಕ್ಷತ್ರಿಯರು ಯಾರು? ರಾಜಕಾರಣಿಗಳು ಶತ್ರುಗಳನ್ನೇ  ದೇಶದೊಳಗೆ  ವ್ಯವಹಾರಕ್ಕೆ ಕರೆಸಿಕೊಂಡರೆ ದೇಶ ಕಾಯುವ ಸೈನಿಕರಿಗೆ ಸ್ವಾತಂತ್ರ್ಯ ಇರುವುದೆ?
ಒಪ್ಪಂದಗಳು ಮೊದಲು ಒಳಗಿನ ಸಂಬಂಧ ದೊಳಗಾಗುತ್ತಿತ್ತು.
ಯಾವಾಗಿದು ಹೊರಗಿನವರೊಂದಿಗೆ ಬೆಳೆಯುತ್ತಾ ಹೋಯಿತೋ ಅಂತರ ಬೆಳೆಯಿತು. ಈಗ ಹಣವಿದ್ದರಷ್ಟೆ ಸಂಬಂಧ ಕ್ಕೆ ಬೆಲೆ ಎನ್ನುವ ಸ್ಥಿತಿಗೆ ಬಂದು ಗುಣಜ್ಞಾನವನ್ನು ನೋಡುವ ದೃಷ್ಟಿ ಮಾನವನಿಗೆ  ಕುಸಿದಿದೆ .ಇದರಿಂದ ಹೆಣ್ಣಿನ ಗುಣಕ್ಕೆ ಬೆಲೆಯಿಲ್ಲ‌ ಹಣಗಳಿಸಿದರಷ್ಟೆ ಬೆಲೆ ಇದರಿಂದ ಮಹಿಳಾ ಶಕ್ತಿ ಮನೆಯಿಂದ ಹೊರಬರುತ್ತಿದೆ. ಹೊರಬಂದವರು ಒಳಗಿನ ಸತ್ಯ ತಿಳಿಯದೆ  ಹೊರಗಿನವರಿಗೇ ತಲೆಬಾಗಿದಷ್ಟೂ  ದುರ್ಭಳಕೆ ಹೆಚ್ಚುವುದು.
ಯುವಪೀಳಿಗೆಯಂತೂ ದಾರಿತಪ್ಪಿದ ಹಳಿಗಳಾಗುತ್ತಿದ್ದರೂ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲದವರಿಗೆ ಧರ್ಮ ಪಾಠ ಕಲಿಸಲು  ಸಾಧ್ಯವೆ? 
ಇಬ್ಬರ ಜಗಳದಲ್ಲಿ ‌ಮೂರನೆಯವರಿಗೆ ಲಾಭ ಎನ್ನುವ ಹಾಗೆ ಹಣದಿಂದ ಲಾಭವಾದರೂ ಕಷ್ಟ ನಷ್ಟ ತಪ್ಪದು. ಬುದ್ದಿ ಕಲಿತರೆ ಜ್ಞಾನ ಬರುವುದೆ? ಬುದ್ದಿವಂತರೆಲ್ಲ ಜ್ಞಾನಿಗಳಾಗೋದಿಲ್ಲ. ಬುದ್ದಿ ನಮ್ಮ ಸ್ವಂತ ಶಕ್ತಿಯಿಂದ ಕಲಿಯಬೇಕು. ಇದಕ್ಕಾಗಿ ಸ್ವಂತಿಕೆ ಅಗತ್ಯವಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರೆ  ಎಲ್ಲಿ ಅಮ್ಮ ಎನ್ನುವವರೆ ಬೆಳೆಯೋದು.ಕಾಲುಬುಡವಿರುವ ಭೂ ತಾಯಿ, ಹೆತ್ತ ತಾಯಿ, ಭಾರತಾಂಬೆ, ಕನ್ನಡಮ್ಮನನ್ನು ಕಾಣಲು ಮಧ್ಯವರ್ತಿಗಳ ಅಗತ್ಯವಿದೆಯೆ? 
ಇದರಲ್ಲಿ ಅಡಗಿರುವ ಆಧ್ಯಾತ್ಮಿಕ ಸತ್ಯ ಭೌತಿಕ ಸತ್ಯದ ನಡುವಿರುವ ಸಾಮಾನ್ಯ ಸತ್ಯ ಅರ್ಥ ಆದರೆ ನಮಗೆ ನಾವೇ ಮೋಸಹೋಗಿರುವ ಸತ್ಯವೂ ಕಾಣಬಹುದು.ರಾಜಕೀಯದೃಷ್ಟಿ ಇದ್ದವರಿಗೆ ಅರ್ಥ ಆಗೋದಿಲ್ಲ. 

ಹೊರಗೆ ತಳುಕುಬಳುಕು ಒಳಗೆ ಹುಳುಕಿರುವಾಗ ಅಳುಕು ಇದ್ದೇ ಇರುತ್ತದೆ. ಭಯ ಭಕ್ತಿ ಎನ್ನುವ ಯೋಗಶಕ್ತಿ ಇಲ್ಲದಿದ್ದರೆ ಹೀಗೇ ಆಗುತ್ತದೆ. ಎಷ್ಟು ಹೊರಗಿನವರೊಂದಿಗೆ ಸಂಬಂಧ ಜೋಡಿಸಿದರೂ ಒಳಗಿನವರ ಸಂಬಂಧ ಹದಗೆಡುತ್ತಿದ್ದರೆ ಉಪಯೋಗವಾಗದು. ಅದನ್ನು  ಬಿಟ್ಟು  ಸ್ವಂತ ಬುದ್ದಿ ಜ್ಞಾನದಿಂದ ಆತ್ಮರಕ್ಷಣೆಯೆಡೆಗೆ ಹೊರಡೋದೆ ಉತ್ತಮ.
ಸಾಲ ಮಾಡಿಕೆಟ್ಟ ಸಾಲವೇ ಶೂಲ ಎನ್ನುವುದನ್ನು ಈಗಿನ ಜನ ಅರಿಯದೆ  ಸರ್ಕಾರದ ಹಿಂದೆ ‌ನಿಂತು ಬೇಡೋದು ವಿದೇಶಿಗಳ ಹಿಂದೆ ನಡೆಯೋದು  ಮೂಲ ಮರೆತು ಕುಣಿಯೋದು ಕಲಿಯೋದರಲ್ಲಿಯೇ ಕಾಲಹರಣ ಮಾಡಿದರೆ  ಕಾಲರಾಯ ಬರೋದನ್ನು ತಪ್ಪಿಸಲಾಗದು. ಇದನ್ನು ತಡೆಯೋದಕ್ಕೂ ಸಾಕಷ್ಟು ಸಂಶೋಧನೆಗಳಾಗುತ್ತಿದೆ.‌ಪುರಾಣ‌ಕಾಲದಿಂದಲೂ ಎಷ್ಟೋ ಅಸುರರು ವರ ಬೇಡಿದ್ದು ಸಾಯಬಾರದೆಂದಾಗಿತ್ತು ಆದರೆ ಅದನ್ನು ಪಡೆಯಲಾಗದ‌ಮೇಲೆ ಬುದ್ದಿವಂತಿಕೆಯಿಂದ ಸಾವನ್ನು ಮುಂದೆ ಹಾಕುವ ಪ್ರಯೋಗವಾಯಿತೇ ಹೊರತು  ಸಾವಿನ ಹಿಂದಿರುವ ಶಿವನನ್ನು ಕಾಣಲಾಗಿಲ್ಲ. ಹೀಗಿರುವಾಗ ಯಾರದ್ದೋ ಅಂಗಾಂಗಗಳನ್ನು ಜೋಡಿಸಿಕೊಂಡು ಬದುಕಿದರೂ ಒಳಗಿನ ಜ್ಞಾನ  ಬೆಳೆಸದಿದ್ದರೆ  ವ್ಯರ್ಥ ಜೀವನ. ಎಲ್ಲಾ ಸತ್ತವರೆ ಎನ್ನುವ ಸತ್ಯವರಿತರೂ ನಮ್ಮ ದೇಹದೊಳಗಿರುವ ಆತ್ಮಕ್ಕೆ ತೃಪ್ತಿ ಸಿಗುವ ಕರ್ಮ  ನಮ್ಮಿಂದ  ನಡೆಸಬೇಕಾದವರೆ  ಪರಮಾತ್ಮ. ಕೆಲವರಿಗೆ ಮೊದಲೇ ಅಧಿಕಾರ ಸ್ಥಾನ ಜ್ಞಾನ ಕೊಟ್ಟರೆ ಕೆಲವರಿಗೆ ಜೀವನದ ಮಧ್ಯದಲ್ಲಿ  ಸಿಗಬಹುದು ಕೆಲವರಿಗೆ ಕೊನೆಗಾಲದಲ್ಲಿ ಸಿಕ್ಕರೆ ಮತ್ತೆ ಕೆಲವರಿಗೆ ಮುಂದಿನ‌ಜನ್ಮದವರೆಗೂ ಕಾಯಬೇಕಾಗಬಹುದು.
ಒಟ್ಟಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಮಾಡುವ  ಅವಕಾಶ ವಿದ್ದರೂ  ಅ ದರ ಹಿಂದೆ ರಾಜಕೀಯ ಪಿತೂರಿಗಳದ್ದೆ ಸಾಮ್ರಾಜ್ಯ ವಾದಾಗ  ಯಾರೂ ಮುಂದೆ ಹೋಗಲಾಗದು. ಇದನ್ನರಿತು ಮಧ್ಯವರ್ತಿಗಳು  ಮುಂದೆ ನಡೆದರೆ  ಆಧ್ಯಾತ್ಮ ಪ್ರಗತಿಯಾಗಬಹುದು. ಹಿಂದೆ ತಳ್ಳಿದರೆ ಪಾತಾಳಕ್ಕೆ ಇಳಿಯಬಹುದು. ಎಲ್ಲಿ ಹೋದರೂ ಭೂಮಿ ಸಾಕ್ಷಿಯಾಗಿರುತ್ತದೆ.
ಅದಕ್ಕೆ ತಿಳಿಸಿರೋದು ಸ್ತ್ರೀ ಋಣ ತೀರಿಸೋದು ಕಷ್ಟ ಎಂದು.
ಹಾಗಂತ  ಭೂಮಿಗೆ ಬರದೆ ಋಣ ಕಳೆಯದು. ಇದು ಸೇವೆಯಾಗಿ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಿದವರಿಗೆ  ಸಾಧ್ಯವಾಗಿದೆ ಎಂದರೆ ಅವರು ಹೊರಗಿನ ಸಾಲದಿಂದ ದೂರವಿದ್ದು ರಾಜಕೀಯದಿಂದ ದೂರವಿದ್ದರು ಎನ್ನುತ್ತದೆ  ಆಧ್ಯಾತ್ಮ.  
ಕಟ್ಟಕಡೆಯ ಪ್ರಶ್ನೆ ಆತ್ಮನಿರ್ಭರ ಸಾಧ್ಯವೆ? 
ಭಗವತಿ
ಬೆಂಗಳೂರು

Wednesday, May 20, 2026

ಉಚಿತದ ಹಿಂದಿರುವ ಸಾಲ ಖಚಿತವಾಗಿದೆ

ಭೂಮಿಯಲ್ಲಿ ಯಾವುದೂ ಉಚಿತವಾಗಿರದು.‌ಪ್ರಕೃತಿಯೇನೋ  ಎಲ್ಲವನ್ನೂ ಉಚಿತವಾಗಿ ಕೊಡುತ್ತಿದೆ.ಆದರೆ ಅದನ್ನು ಆಳುವ ಮಾನವನು ಅದಕ್ಕೆ ಬೆಲೆ ಕಟ್ಟಿ ಪಂಚಭೂತಗಳನ್ನು  ಮರೆತು ನಡೆದಿರೋದರಿಂದ. ಸಾಲ ಮಿತಿಮೀರಿದೆ.
ಭೂ ಸಾಲ ತೀರಿಸಲು ‌ಬೇಕಾದ ಸತ್ಕರ್ಮ ಸ್ವಧರ್ಮ ಸದಾಚಾರ ಸರಳ ಜೀವನ ಸ್ವಾಭಿಮಾನ  ಸ್ವತಂತ್ರ ಬುದ್ದಿ ಇಂದಿನ ಜನರಲ್ಲಿ ಮರೆಯಾಗಲು ಕಾರಣವೇ ಅತಿಯಾದ ವ್ಯಾಪಾರೀಕರಣ.
 ಹೆಣ್ಣು ಹೊನ್ನು ಮಣ್ಣಿನ ಋಣ ತೀರದೆ ಆತ್ಮಕ್ಕೆ ತೃಪ್ತಿ ಶಾಂತಿ ಸಿಗದು ಎನ್ನುವ ಆಧ್ಯಾತ್ಮಿಕ  ಜಗತ್ತಿನಲ್ಲಿಯೇ  ಈ ವ್ಯವಹಾರ  ಅತಿಯಾದಾಗ  ಏನೂ ಅರಿಯದವರ ವ್ಯವಹಾರ ಹೇಗಿರಬಹುದು? ಇಲ್ಲಿ ಬೆಲೆ ಕಟ್ಟಬೇಕಾಗಿರೋದಕ್ಕೆ ಬೆಲೆ ಕಟ್ಟದೆ  ಅನಗತ್ಯವಾಗಿದ್ದಕ್ಕೆ ಬೆಲೆಕೊಟ್ಟು ಸಾಲ ಹೆಚ್ಚಿಸಿಕೊಂಡರೆ  ಅದಕ್ಕೆ ತಕ್ಕಂತೆ  ಜನ್ಮಗಳಾಗುತ್ತವೆ.
ದೇವರಿಗೆ ಬೆಲೆ ಕಟ್ಟಬಹುದೆ? ದೈವತ್ವದ ಶಿಕ್ಷಣಕ್ಕೆ ಬೆಲೆ ಕಟ್ಟಬಹುದೆ 
ಒಟ್ಟಿನಲ್ಲಿ ಯಾವುದೂ ಉಚಿತವಾಗಿ ಸಿಗದು. ನಮ್ಮ ಪಾಲಿಗೆ ಬಂದಿರುವುದನ್ನು  ಜ್ಞಾನದಿಂದ  ಬೆಲೆಕೊಟ್ಟು  ಸದ್ಬಳಕೆ ಮಾಡಿಕೊಂಡರೆ  ಧಾರ್ಮಿಕ ವ್ಯವಹಾರ ಇಲ್ಲ ಎಂದರೆ ಭೌತಿಕ ವ್ಯವಹಾರ. ಭೌತಿಕದಲ್ಲಿ ಸತ್ಯ ಧರ್ಮ ಕ್ಕೆ ಬೆಲೆಯಿರದು. ಇದರಿಂದ ಋಣ ಅಥವಾ ಸಾಲ ತೀರದು. ಹೀಗಾಗಿ ಮಾನವ ವ್ಯವಹಾರಕ್ಕೆ ಇಳಿದಾಗ  ಎಚ್ಚರಿಕೆಯಿಂದ  ಯಾರಿಗೆ ಯಾವುದಕ್ಕೆ ಯಾಕೆ ಎಷ್ಟು ಬೆಲೆಕೊಡಬೇಕೆಂಬ ಅರಿವಿದ್ದರೆ ಉತ್ತಮ ಪ್ರಗತಿ
ಋಣ ಮತ್ತು ಕರ್ಮಕ್ಕೆ ತಕ್ಕಂತೆ  ಜನನ ಜೀವನ ಮರಣಗಳು ಭೂಮಿಯಲ್ಲಾಗುತ್ತಲೇ ಇರುತ್ತದೆ. ಇದರಲ್ಲಿ ಹೆಚ್ಚು ಲಾಭ ಕಡಿಮೆ ಲಾಭ, ಹೆಚ್ಚು ನಷ್ಟ ಕಡಿಮೆ‌ನಷ್ಟ ಇದು‌ ಮಾನವನ‌ ಲೆಕ್ಕಾಚಾರ.

ಭೂ ಋಣ ತೀರಿಸುವ‌ ಸತ್ಕರ್ಮದಿಂದ  ಧರ್ಮ ರಕ್ಷಣೆ.‌ಇದರಿಂದ ಪುಣ್ಯ ಪ್ರಾಪ್ತಿ, ಪುಣ್ಯದಿಂದ ಸದ್ಗತಿ. 

ಬಡವರಿಗೆ‌  ಉಚಿತ ಕೊಡಬಹುದು ಆದರೆ  ಯಾವ ರೀತಿಯಲ್ಲಿ ಬಡವರಾಗಿದ್ದಾರೆಂದು ಖಚಿತಪಡಿಸಿಕೊಂಡರೆ ಸರಿ.
ಜ್ಞಾನದಲ್ಲೋ‌ ಹಣದಲ್ಲೋ? ಜ್ಞಾನದ ಶ್ರೀಮಂತರ ಜ್ಞಾನ ಪಡೆದು ಹಣ ಕೊಟ್ಟರೆ ಧರ್ಮ. ಹಾಗೆ ಹಣ ಪಡೆದು‌ ಜ್ಞಾನ ದಾಸೋಹ ಆದರೆ ಧರ್ಮ. ಜ್ಞಾನದಲ್ಲಿ ಸತ್ಯ ಮಿಥ್ಯವಿದೆ. ಇದರ ಬಗ್ಗೆ ಯೂ  ಅರಿವಿರಬೇಕು.ಒಟ್ಟಿನಲ್ಲಿ ಕೊಟ್ಟು ತೆಗೆದುಕೊಳ್ಳುವ‌ ವ್ಯವಹಾರ ಜೀವನದಲ್ಲಿದೆ. ಜೀವನವೇ ವ್ಯವಹಾರವಾದಾಗ ಪಡೆಯೋದೇ ಹೆಚ್ಚಾಗುತ್ತದೆ. ಅಸತ್ಯ ಅಧರ್ಮ ಅನ್ಯಾಯಗಳಿಗೆ‌ಬೆಲೆ ಕಟ್ಟುತ್ತಾ‌ಹೋದಷ್ಟೂ ಭ್ರಷ್ಟಾಚಾರ.  ಲೆಕ್ಕಾಚಾರ ದ ಪ್ರಕಾರ ಪುಣ್ಯ ಕೂಡಬೇಕು, ಪಾಪ ಕಳೆಯಬೇಕು, 
ಹೆಚ್ಚು ಲಾಭವಾದರೆ ಹಿಂದೆ ನಷ್ಟವಿದೆ.

ಯಾವುದಕ್ಕಾದರೂ ಬೆಲೆ ಕಟ್ಟಬೇಕೆಂಬುದು ಇದರರ್ಥ. ಆದರೆ ಬೆಲೆ ಯಾರಿಗೆ ಎಷ್ಟು ಯಾಕೆ ಕಟ್ಟಬೇಕೆಂಬ ಜ್ಞಾನವೂ ವೇದಗಳಿಂದಲೇ ತಿಳಿಸುವುದು ಅಗತ್ಯವಿದೆ. ಇಂದಿನವರೆಗೂ ವರದಕ್ಷಿಣೆಯ ಅರ್ಥ ತಿಳಿಯದವರಿದ್ದಾರೆ. ವರಹ ದಕ್ಷಿಣೆ ಎನ್ನುವುದನ್ನೇ ಸ್ವಾರ್ಥಕ್ಕೆ ತಿರುಚಿಕೊಂಡು ವರದಕ್ಷಿಣೆ ಲಕ್ಷ ಕೋಟಿ ಕೊಟ್ಟಿರುವರಿದ್ದಾರೆ. ಧಾರ್ಮಿಕ  ವಿಚಾರದಲ್ಲಿ ಹಣಕ್ಕಿಂತ ‌ಮೊದಲು ಜ್ಞಾನದ ಅರಿವಿರುವಿದ್ದವರು ದಕ್ಷಿಣೆ ಸರಿಯಾಗಿ ಕೊಡುವರು.
ಕನ್ಯಾದಾನ‌ ಪದದ ಮೂಲ ಕನ್ಯಾ ಆದಾನ. ಹೀಗೇ ಎಷ್ಟೋ ಮೂಲ ಅರ್ಥ ತಿಳಿಯದೆ  ಆಚಾರ ವಿಚಾರ‌ಪ್ರಚಾರ ಬೆಳೆದು‌ಜನರು ಅಜ್ಞಾನದಲ್ಲಿ ‌ಕಣ್ಣಿಗೆ ಕಣೋ ಸತ್ಯವಷ್ಟೆ ಧರ್ಮ ಎನ್ನುವರು.  ಅದರಲ್ಲೂ  ಶಂಖದಿಂದ‌ಬಂದರಷ್ಟೆ ತೀರ್ಥ.
ಎಷ್ಟೋ ತೀರ್ಥ/ಕ್ಷೇತ್ರ  ಪ್ರವಾಸಿ ಕೇಂದ್ರವಾಗಿ  ವ್ಯಾಪಾರಕ್ಕೆ ತಿರುಗಿದೆಯಲ್ಲ  ‌ನಿಮ್ಮ ಅಭಿಪ್ರಾಯ ತಿಳಿಸಿ

Tuesday, May 19, 2026

ಸ್ವಾತಂತ್ರ್ಯ ಎಲ್ಲಿದೆ ಒಳಗೋ ಹೊರಗೋ?

ಸ್ವಾತಂತ್ರ್ಯ ಸಿಗೋದು ಅಂತರದಿಂದಲೋ ಸಮಾನತೆಯಿಂದಲೋ? ಇಲ್ಲಿ ಸಮಾನತೆಯ‌ವಿಚಾರ ಬಂದರೆ ಪರಮಾತ್ಮ‌ಜೀವಾತ್ಮರ  ವಾದ ವಿವಾದದ  ಮತಗಳಲ್ಲಿ ಅಂತರ ಬರುತ್ತದೆ. ಇವುಗಳ‌ನಂತರದಲ್ಲಿ ಸಂಸಾರ ಮತ್ತು ಸನ್ಯಾಸಿಗಳ‌ನಡುವೆ ಅಂತರ ಬೆಳೆಯುತ್ತದೆ. ಹೀಗೇ ಮುಂದೆ ಹೋದಂತೆಲ್ಲ ಮೂಲ ಮರೆತು  ಅಂತರವೇ  ಹೆಚ್ಚಾಗುತ್ತಾ‌ ಮಧ್ಯದಲ್ಲಿ   ನಿಂತು‌ನಡೆಸೋ ರಾಜಕೀಯ ಶಕ್ತಿಗಳು ಬೆಳೆದು  ಈ ಕಡೆ  ಸಮಾನತೆಯ ಮಂತ್ರ  ಇನ್ನೊಂದು ‌ಕಡೆ ಅಂತರಗಳ ತಂತ್ರಕ್ಕೆ ಜನರೊಳಗಿದ್ದ ಸ್ವತಂತ್ರ ‌ಬುದ್ದಿ‌ಜ್ಞಾನವನ್ನು  ಹಿಂದುಳಿಸಿ ಹಿಂದುಳಿದವರ  ಸಂಖ್ಯೆ‌ಬೆಳೆಯುತ್ತದೆ. ಈಗ ಸ್ವಾತಂತ್ರ್ಯ  ಪದಕ್ಕೆ ಅರ್ಥ ತಿಳಿಯಿತೆ ? ಎಷ್ಟು ಹೊರಗೆ ಹೋದರೂ ಸ್ವಾತಂತ್ರ್ಯ ಸಿಗದು.
 ಈಗ ಹೊರಗಿರೋದು ಸ್ವೇಚ್ಚಾಚಾರ.  ಅದಕ್ಕಾಗಿ ಹಣ ಅಧಿಕಾರ ಹೆಸರು ದುರ್ಭಳಕೆ ಆದರೂ  ಅವರಿಗೆ ಸ್ವಾತಂತ್ರ್ಯ ವಿದೆ.
ಆ ಸ್ವಾತಂತ್ರ್ಯ ಕೊಟ್ಟವರು ಎಲ್ಲಿರುವರು? ಹಿಂದುಳಿದರೆ‌  ಅಥವಾ ‌ಮುಂದುವರಿದರೆ? ಯಾವುದರಲ್ಲಿ ಹಿಂದುಳಿದರು ಎಂದರೆ ತತ್ವಜ್ಞಾನದಲ್ಲಿ‌ ಮುಂದುವರಿದವರು ತಂತ್ರಜ್ಞಾನಿಗಳಾಗಿ ಹೊರಗೆ‌ಹೋಗಿರುವರು. ಇವರಿಬ್ಬರ. ಮಧ್ಯೆ ‌ನಿಂತು ಪ್ರಚಾರ ಮಾಡುವವರ‌  ಕುತಂತ್ರದಿಂದ. ಅಂತರ ಹೆಚ್ಚಾಗಿ  ಮಾನವನ ದೈವಗುಣ ಅಸುರಗುಣದೆಡೆಗೆ‌  ಹೋಗಿದೆ. 
ಒಟ್ಟಿನಲ್ಲಿ  ದ್ವೇಷ ಯಾವತ್ತೂ ಶಾಂತಿ ಕೊಡದು.
ದ್ವೇಷಕ್ಕೆ ‌ಕಾರಣವೇ  ಅತೃಪ್ತ ಆತ್ಮಗಳಾಗಿ ವೆ
ಆತ್ಮ ಕಣ್ಣಿಗೆ ಕಾಣದಿದ್ದರೂ ಅತೃಪ್ತರನ್ನು  ನೋಡಿದಾಗ  ತಿಳಿಯಬಹುದು ಆ ದೇಹದಲ್ಲಿ ಅತೃಪ್ತಿ ಹೆಚ್ಚಾಗಿದೆ ಎಂದು.
ಎಷ್ಟು ದೊಡ್ಡ ಮನೆ ಒಳ್ಳೆಯ ಸಂಸಾರ ,ಅತ್ಯುತ್ತಮ ‌ ಕೆಲಸ ಇದ್ದರೆ ಪುಣ್ಯವಂತರೆನ್ನುವರು. ಇವು ಯೋಗದ ಮೂಲಕವೇ ಸಿಗಬೇಕೆಂದರೆ ಅದಕ್ಕೆ ಪೂರಕ ಶಿಕ್ಷಣವಿರಬೇಕಿತ್ತು.ಶಿಕ್ಷಣದಲ್ಲಿಯೇ ತೃಪ್ತಿ ‌ಕಾಣದ ಮಕ್ಕಳಿಗೆ  ತೃಪ್ತಿ ಸಿಗೋದು  ಸಾಧ್ಯವೆ?
ಎಲ್ಲದ್ದಕ್ಕೂ ಕಾರಣ ರಾಜಕೀಯ ವ್ಯವಸ್ಥೆ. ಇದು ಧಾರ್ಮಿಕ ಶಿಕ್ಷಣ ,ಸಾಹಿತ್ಯ, ಸಂಗೀತ ಕಲಾಕ್ಷೇತ್ರವನ್ನೂ ಬಿಡದೆ  ಆಳುತ್ತಿದ್ದರೂ  ಈವರೆಗೆ ಇದೇ ಸತ್ಯ ಶುದಗದವೆಂದರಿತು ಹಿಂದೆ ‌ನಿಂತು ಸಹಕಾರ ಕೊಟ್ಟವರು ಈಗ‌ಹಿಂದಿರುಗಲಾಗದೆ  ಅದನ್ನು ‌ಮತ್ತಷ್ಟು‌ಬೆಳೆಸಿ‌ಜನರಿಗೆ ಮೋಸ‌ಮಾಡಿದರೆ  ಪಾಪದ ಫಲ ಕೊಡುವ ಮೇಲಿನ‌ ನ್ಯಾಯಾಧೀಶನಿಂದ .ಬಿಡಿಸಿಕೊಳ್ಳಲು ಕಷ್ಟಪಡಲೇಬೇಕಲ್ಲವೆ?  ಅವತಾರ ಪುರುಷ  ಸ್ತ್ರೀ ಯರನ್ನೂ‌ ಬಿಡದ ಕರ್ಮ  ಹುಲುಮಾನವನನ್ನು ಬಿಡುವುದೆ?
ಎಲ್ಲಾ ತಿಳಿದರೂ  ಕೆಲಸದಲ್ಲಿ ತಪ್ಪಾಗಬಹುದು. ಆದರೆ ತಪ್ಪು ಮಾಡಿದ ಮೇಲೂ ಅದೇ ದಾರಿಯಲ್ಲಿ‌ನಡೆಯುವುದರಿಂದ ಸತಿ ಆಗಬಹುದೆ? 
ಕಂಬಾರ ನಿಗೆ ಒಂದು ವರುಷ ದೊಣ್ಣೆಗೆ ಒಂದೇ ‌ನಿಮಿಷ ಎಂದಂತೆ
ನಾವೆಷ್ಟು  ಉತ್ತಮದಾರಿಯಲ್ಲಿ‌  ನಡೆಯಲು  ಬಿಟ್ಟು  ಮಕ್ಕಳು ದೊಡ್ಡವರಾದಂತೆ  ದಾರಿತಪ್ಪಿಸುವವರೊಂದಿಗೆ  ಬಿಟ್ಟರೆ ವ್ಯರ್ಥ. ಇದು ಹೊರಗಿರುವ ರಾಜಕೀಯ ಶಕ್ತಿಯಾಗಿದೆ.‌

ಸತ್ಯದಿಂದ ರಾಜಕೀಯ ನಡೆಸಲಾಗದು ಎನ್ನುವುದೂ ಸತ್ಯವೇ ಆದರೂ  ರಾಜಕೀಯದಲ್ಲಿ ಸತ್ಯ ಹುಡುಕೋದನ್ನು ಬಿಡೋದಿಲ್ಲ

Monday, May 18, 2026

ಸ್ವಾತಂತ್ರ್ಯ ಯಾರಿಗೆ ಹೇಗೆ ಸಿಕ್ಕಿದೆ?

ಇತಿಹಾಸದ  ಸತ್ಯಘಟನೆಗಳಲ್ಲಿ ಸ್ವಾತಂತ್ರ್ಯ ಹೋರಾಟವು ಇಂದಿಗೂ  ಪ್ರಚಾರದಲ್ಲಿದೆ ಆದರೆ ಸ್ವಾತಂತ್ರ್ಯ ಪದಕ್ಕೆ ಅರ್ಥ ತಿಳಿಯದವರು ಇದನ್ನು ಪ್ರಸಾರ ಮಾಡುತ್ತಾ  ಸ್ವೇಚ್ಚಾಚಾರಕ್ಕೆ ಇಳಿದಿರೋದನ್ನು ನೋಡಿದಾಗ  ಆತ್ಮದುರ್ಭಲತೆ ಎದ್ದು ಕಾಣುತ್ತದೆ. ಅಂದಿನ ‌ದೇಶಭಕ್ತಿ ಯೋಗದಿಂದ ಕೂಡಿದ್ದರೆ ಈಗಿನ ದೇಶ ಭಕ್ತರು ಭೋಗದ ಜೀವನದಲ್ಲಿರೋದನ್ನು  ಜನ ಕಂಡೂ ಏನೂ ಮಾಡದ ಸ್ಥಿತಿಯಲ್ಲಿದ್ದಾರೆಂದರೆ  ಅಜ್ಞಾನ ಎನ್ನಬೇಕೋ  ಕಲಿಗಾಲ ಎನ್ನಬೇಕೋ ವಿಜ್ಞಾನ ಎನ್ನಬೇಕೋ?
ಅಜ್ಞಾನ ‌ಬೆಳೆದಿರೋದೆ ಕಲಿಕೆಯಿಂದ  ಆ ಕಲಿಕೆಯು  ಹೊರಸತ್ಯವನ್ನಷ್ಟೆ  ಅರ್ಥ ಮಾಡಿಸುತ್ತಾ ಒಳಗಿದ್ದ ಸತ್ಯವನ್ನು ಹಿಂದುಳಿಸಿ ಆಳುತ್ತಿದೆ. ಇದರಿಂದಾಗಿ  ದೇಶ ವಿದೇಶವಾಗುತ್ತಿದೆ. ಹೊರಗಿನ ಶಿಕ್ಷಣದಿಂದ  ದೇಶ ಮುಂದೆ ನಡೆದಿರಬಹುದಷ್ಟೆ ಆದರೆ ಯೋಗಶಕ್ತಿ‌ ಹಿಂದುಳಿದಷ್ಟೂ  ಮಾನವನಿಗೆ  ಮಹಾತ್ಮರ ನಡೆ ನುಡಿಯಲ್ಲಿದ್ದ ಭಕ್ತಿ ಕಾಣಿಸದು. ಜ್ಞಾನವೇ ಇಲ್ಲದೆ ಭಕ್ತಿ ಬರುವುದೆ?
ಭಕ್ತಿ ಆಂತರಿಕ ಶಕ್ತಿಯಾಗಿದೆ. ಇದನ್ನು ಯಾರೋ ಹೊರಗಿನವರು ಒಳಗೆ ತುಂಬಿಸಲಾಗದು. ದೇಶಭಕ್ತರ ದೇವರಭಕ್ತರ ಹೆಸರಿನಲ್ಲಿ  ಹಣ ಅಧಿಕಾರ ಸ್ಥಾನ ಪಡೆದು ಭೋಗದ  ಜೀವನ ನಡೆಸಬಹುದು. ಆದರೆ ಅವರ ಅನುಭವಜ್ಞಾನ ಸಿಗೋದಿಲ್ಲ.  ಇದೀಗ  ಬೇಲಿಯೇ ಎದ್ದು ಹೊಲ ಮೇಯುತ್ತಿರುವುದರ ಹಿಂದೆ  ಅಜ್ಞಾನ ಆವರಿಸಿದೆ. ಇಲ್ಲಿ ಅಜ್ಞಾನ ಎಂದರೆ ತಿಳುವಳಿಕೆಯಿಲ್ಲ ಎಂದರ್ಥ ವಾಗದು.‌ಪುರಾಣ ಇತಿಹಾಸದ ವಿಷಯಗಳನ್ನು ಓದಿ ಕೇಳಿ ನೋಡಿ  ತಿಳಿಯುವ. ಸ್ವಾತಂತ್ರ್ಯ ನಮಗಿದೆ. ಆದರೆ ಅದರಂತೆ  ನಡೆಯೋ ಸ್ವಾತಂತ್ರ್ಯ ಇಲ್ಲದ  ಕಾರಣದಿಂದ   ಕ್ರಾಂತಿ ನಡೆದಿದೆ. ಇದನ್ನು ಶಾಂತಿಯಿಂದ ಅರ್ಥ ಮಾಡಿಕೊಂಡರೆ ನಮ್ಮ ನಮ್ಮ ಸ್ವಾತಂತ್ರ್ಯ ಹರಣಕ್ಕೆ ಕಾರಣವೇ ನಮ್ಮದೇ ಸಹಕಾರ ಕಾರಣವಾಗಿದೆ. ಸರ್ಕಾರಗಳು ನಡೆದಿರೋದೆ ಜನಬಲ ಹಣಬಲ  ಅಧಿಕಾರ ಬಲದಿಂದ. ‌ಇದು ದೇಶವನ್ನು ಸ್ವಾತಂತ್ರ್ಯ ಗೊಳಿಸುತ್ತಿದೆಯೇ ಅಥವಾ  ಅತಂತ್ರಸ್ಥಿತಿಗೆ ತಂದಿದೆಯೆ? 
ವಿದೇಶದಲ್ಲಿ ಇದ್ದವರು  ಭಾರತ ಹೀಗಿರಬೇಕೆಂದು ತೀರ್ಮಾನ  ಮಾಡಿದರೆ  ಬೆಲೆಕೊಡುವ ನಾವು ನಮ್ಮವರ  ದೇಶಭಕ್ತಿಯನ್ನು ನಿರ್ಲಕ್ಷ್ಯ ಮಾಡಿಕೊಂಡು  ವಿದೇಶಿಗರ ಲಕ್ಷಕ್ಕೆ ತಲೆಬಾಗೋದನ್ನು ದೇಶಭಕ್ತಿ ಎನ್ನಬಹುದೆ?
ಮಕ್ಕಳು ಮಹಿಳೆಯರು ದುಡಿದು ಸಂಸಾರ ನಡೆಸೋ ಸ್ಥಿತಿಗೆ ಬಂದಿರೋದೆ  ದೊಡ್ಡ  ಪ್ರಗತಿ ಎನ್ನಬಹುದೆ? 
ಭಾರತದಂತಹ ‌ಮಹಾದೇಶ ನಡೆಸೋದೆ‌ಕಷ್ಟ. ಅದರಲ್ಲೂ ಇಲ್ಲಿನ  ಮೂಲ ಧರ್ಮ ಕರ್ಮ ವನರಿತು  ಜೀವನ ಸಾಗಿಸೋದು ಇನ್ನೂ ಕಷ್ಟ. ಇದಕ್ಕೆ ಬದಲಾಗಿ ಅನ್ಯರ  ಸಹಕಾರ ಸಹಾಯ ಪಡೆದು  ದೇಶದ ಮೂಲ ಧರ್ಮ ಬಿಟ್ಟು ಹೊರಗೆ ಹೋದರೆ ಅದೇ  ಮುಂದೆ  ಸಮಸ್ಯೆ ಗೆ ಕಾರಣವಾಗುತ್ತದೆನ್ನುವುದು ಈಗ ಸತ್ಯವಾಗಿ ಕಾಡುತ್ತಿದೆ.
ಅನ್ಯರ ವಶದಲ್ಲಿ ಲಕ್ಷ ಗಳಿಸಿದರೂ ನಮ್ಮವರನ್ನೇ ನಿರ್ಲಕ್ಷ್ಯ ಮಾಡಿದರೆ  ಸಾಲ  ಕಾಡದೆಬಿಡದು. ಇದೊಂದು ಅಗೋಚರ ಶಕ್ತಿ. ಜೀವನದ ಗುರಿ ಸಾಲ ತೀರಿಸುವುದಾಗಿದೆ ಎಂದಾಗ ಯಾರ ಸಾಲಯಾರು ತೀರಿಸಬೇಕೆನ್ನುವ ಅರಿವಿದ್ದರೆ ಹತ್ತಿರದ ಸಾಲ ತೀರಿಸುತ್ತಲೇ ಎತ್ತರಕ್ಕೆ ಏರಬಹುದು.
ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಂಡು ಭೌತಿಕದಲ್ಲಿ  ಬಾಳುವುದು  ಜೀವನ. ಇಲ್ಲಿ ಪೈಪೋಟಿ ಜಗಳ ತಾರತಮ್ಯ ಅಂತರದ ದ್ವೇಷ ಭಿನ್ನಾಭಿಪ್ರಾಯ ಗಳಿಂದ. ಮನಸ್ಸು ಹದಗೆಟ್ಟು  ಹೊರಗೆ ಸುತ್ತಿದರೆ ಒಳಗಿದ್ದ ಸತ್ಯವೂ ಅರ್ಥ ವಾಗದೆ ಧರ್ಮ ಸೂಕ್ಮವನರಿಯದೆಯೇ ವ್ಯವಹಾರದಲ್ಲಿ ಮಾನವ‌ಮುಳುಗಿ ಲಾಭ‌ನಷ್ಟಗಳ ಲೆಕ್ಕಾಚಾರವಷ್ಟೆ ಕಾಣುತ್ತದೆ. ಅದರ ಹಿಂದೆ ಇರುವ ಪಾಪ ಪುಣ್ಯಗಳ ಬಗ್ಗೆ  ಅರಿವಿದ್ದರೆ ಉತ್ತಮ ವ್ಯವಹಾರದಲ್ಲೂ ಧರ್ಮವಿರುತ್ತದೆ.

ದೇಶವನ್ನು ವಿದೇಶ ಮಾಡೋದಕ್ಕೆ  ಹಣ ಬೇಕು. ವಿದೇಶಿಗರನ್ನು ಸ್ವದೇಶಿ ಮಾಡೋದಕ್ಕೆ  ಜ್ಞಾನ ಬೇಕು.
ಪರರೆಲ್ಲಾ ನಮ್ಮವರಾದರೆ ಸ್ವರ್ಗ
ನಮ್ಮವರೆ ಪರಕೀಯರಂತಿದ್ದರೆ ನರಕ.
ಯಾರಿಗೆಗೊತ್ತು ಯಾರಲ್ಲಿ ಯಾವ ದೇಶದ ಧರ್ಮ ಸಂಸ್ಕೃತಿ ಭಾಷೆ ಇದೆಯೋ ಅದೇ ಅವರನ್ನು ನಡೆಸುತ್ತದೆ.ಆದರೆ ಸ್ವಾತಂತ್ರ್ಯ  ಎನ್ನುವ ಪದ  ಪವಿತ್ರವಾಗಿದ್ದರಷ್ಟೆ  ಯೋಗಿಗಳಾಗಿರಬಹುದು.

ವ್ಯಕ್ತಿತ್ವ ವಿಕಸನ ತತ್ವಜ್ಞಾನದಿಂದಾಗಬೇಕು

ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ವಾಗಬೇಕೇ ಹೊರತು ವ್ಯಕ್ತಿ ಬೆಳೆಯೋದಷ್ಟೆ ಅಲ್ಲ. ತತ್ವಜ್ಞಾನದಿಂದ ವ್ಯಕ್ತಿತ್ವ. ತಂತ್ರದಿಂದ ವ್ಯಕ್ತಿ ಬೆಳೆಯುವನು.
 ಸಾತ್ವಿಕ ಶಿಕ್ಷಣದ ಮೂಲ ಗುರಿ  ಸತ್ಯಾನ್ವೇಷಣೆ. ಆಧ್ಯಾತ್ಮ ಮತ್ತು ಭೌತಿಕ ಸತ್ಯದ ನಡುವಿರುವ ಮಾನವನಿಗೆ  ನಾನ್ಯಾರು ಎನ್ನುವ ಸತ್ಯದ ಪರಿಚಯವಾದ ನಂತರವೇ  ಮಹಾತ್ಮರಾಗೋದಕ್ಕೆ ಸಾಧ್ಯ. 
ಅಂತರಂಗದ ಸಂಸ್ಕಾರದ ನಂತರವೇ ಬಹಿರಂಗದ ಶುದ್ದಿ ಸಾಧ್ಯ.
ಬಸವಣ್ಣನವರು  ಕಲಬೇಡ ಕೊಲಬೇಡ...ಬೇಡವಾಗಿದ್ದನ್ನು ಬಿಟ್ಟು ಬೇಕಾದ್ದನ್ನಷ್ಟೆ ತಲೆಗೆ ತುಂಬಿದರೆ ಅದೇ ಸ್ವಚ್ಚ ಶಿಕ್ಷಣವಾಗುತ್ತದೆ.
ಒಟ್ಟಿನಲ್ಲಿ ಶಿಕ್ಷಣವು ವ್ಯಾಪಾರಿಕರಣವಾಗೋದಕ್ಕೆ ಕಾರಣವೇ  ಮಾನವನ  ಅಲ್ಪ ಜ್ಞಾನ ಎನ್ನಬಹುದು. ಮಕ್ಕಳಿಗೆ  ಕಲಿಸುವ ವಿಷಯಗಳು ಅಮೃತವಾಗಿದ್ದರೆ ಅಮೃತಪುತ್ರರು ವಿಷತುಂಬಿದ ದ್ವೇಷದ ವಿಷಯವಾದಷ್ಟೂ ವಿಷಜಂತುಗಳು. ಕೋಟ್ಯಾಂತರ ಜೀವರಾಶಿಗಳಲ್ಲಿ
ಮಾನವನಿಗೆ ಮಾತ್ರ ಈ ಆತ್ಮಜ್ಞಾನದೆಡೆಗೆ ಸಾಗುವ ಅವಕಾಶವಿರೋದು. ಇದರ ಮೂಲವೇ ಶಿಕ್ಷಣವಾಗಿದೆ. ಶಿಕ್ಷೆ ನೀಡುವ ಕ್ಷಣ ಶಿಕ್ಷಣ ಎಂದರೆ ಯಾವುದಕ್ಕೆ ಶಿಕ್ಷೆ ನೀಡಬೇಕು ಎಂದರೆ ತನ್ನ ಆತ್ಮಶುದ್ದಿಯತ್ತ ನಡೆಯಲು  ಮಗುವಿನಲ್ಲಿನ  ಹಲವು ದೋಷಗಳನ್ನು ತಿದ್ದಲು ಸ್ವಲ್ಪ ಮಟ್ಟಿಗೆ ಶಿಕ್ಷೆ ಅಗತ್ಯವಿದೆ. 
ಬುದ್ದಿವಂತನಿಗೆ ಮಾತನ‌ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎನ್ನುವರು. ಹಿಂದೆ
ಮಾತಿನಿಂದ ಕಲಿಯದಿದ್ದರೆ ದೊಣ್ಣೆ ಯ ಪ್ರಯೋಗವಾಗುತ್ತಿತ್ತು. 
ಆದರೆ ಇಂದಿನ ಶಿಕ್ಚಣದ ವಿಷಯಗಳೇ ಆತ್ಮತತ್ವಕ್ಕೆ ವಿರುದ್ದವಾಗಿ ಭೌತಿಕದೆಡೆಗೆ ನಡೆದಿದೆ. ಇದನ್ನು ಕಲಿಯದಿದ್ದರೆ  ಶಿಕ್ಷೆ ನೀಡುತ್ತಿರುವುದರಿಂದ ಮಕ್ಕಳು ಇನ್ನಷ್ಟು ಅಜ್ಞಾನದೆಡೆಗೆ ಸಾಗಿದ್ದಾರೆ.
ಅಜ್ಞಾನ ಎಂದರೆ ತಿಳುವಳಿಕೆ ಇಲ್ಲದಿರೋದೆಂದರ್ಥ ವಲ್ಲ.ಇಲ್ಲಿ ನಮ್ಮ ಸ್ವಂತ ಬುದ್ದಿ ಜ್ಞಾನದ ತಿಳುವಳಿಕೆಯಿಲ್ಲದಿರೋದೆಂದರ್ಥ.
ಯಾರೋ ಹೇಳಿದ್ದು ಕೇಳಿದ್ದು ಬರೆದದ್ದು ನುಡಿದದ್ದು  ತಿಳಿಯುವುದಷ್ಟೆ ಶಿಕ್ಷಣವಾಗದು. ಅದು ಇಂದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವೆ ಸಾಧ್ಯವೆ ಎಷ್ಟು ಅಗತ್ಯವಿದೆ ಎನ್ನುವ  ಬಗ್ಗೆ  ನಮ್ಮ ದೇ  ಪ್ರಯತ್ನಗಳು  ನಮ್ಮ ಆತ್ಮಕ್ಕೆ   ಸತ್ಯಕ್ಕೆ ಧರ್ಮಕ್ಕೆ ಚ್ಯುತಿಬರದಂತೆ  ನೋಡಿಕೊಳ್ಳುವ ಜ್ಞಾನ ಬೇಕು.
ವಿದ್ಯೆ ಕಲಿತರೆ ಜ್ಞಾನ ಬೆಳೆಯುತ್ತದೆ. ಜ್ಞಾನದಿಂದ  ವಿನಯವಂತಿಕೆ  ಬೆಳೆಯುತ್ತದೆ.ವಿನಯವು  ವಿಶಾಲ ಮನೋಭಾವನೆಗೆ   ಸಹಕರಿಸುತ್ತದೆ
ವಿಶಾಲವಾಗಿ ಹರಡಿರುವ ಈ ಇಡೀ ಬ್ರಹ್ಮಾಂಡವನ್ನು  ಅರ್ಥ ಮಾಡಿಕೊಳ್ಳಲು  ಆಧ್ಯಾತ್ಮ ದಿಂದಷ್ಟೆ ಸಾಧ್ಯವೆನ್ನುವುದೆ ನಮ್ಮ ಹಿಂದಿನ ಶಿಕ್ಷಣದ ಗುರಿ. ಕಾಲಾನಂತರದಲ್ಲಾದ  ಅಂತರಗಳ‌ಪ್ರಭಾವದಿಂದಾಗಿ ಎಷ್ಟೋ ಮೂಲ ಸತ್ಯ  ಹೊರಬರದೆ ಅರ್ಧ ಸತ್ಯದ ರಾಜಕೀಯ ವಿಚಾರಗಳು  ಪಠ್ಯ ಪುಸ್ತಕದಲ್ಲಿ  ಸೇರಿ ಮಕ್ಕಳು  ಸಣ್ಣ ವಯಸ್ಸಿನಲ್ಲಿಯೇ  ರಾಜಕೀಯ ಪ್ರವೇಶಮಾಡುವಂತೆ  ಮಾಡಿದಾಗ  ರಾಜಯೋಗ ಹಿಂದುಳಿಯುತ್ತದೆ.
ವಿವೇಕಾನಂದರ ನಿನ್ನ ಯ ಗುರಿಯು ಆತ್ಮದರುಶನ....
ಈಗಿಲ್ಲ.

ವಿವೇಕಾನಂದರಾಗೋದು ಹೇಗೆ?

:ವಿವೇಕವಾಣಿ : ಯಾವುದೇ ಮಹಾತ್ಕಾರ್ಯ ದಿಢೀರೆಂದು ಆಗಲಾರದು. ಸದಾ ಆಲೋಚನೆಗಳಿಂದಲೇ ಸತ್ಕಾರ್ಯಗಳಾಗುವುವು. ನೀನು ಸದಾ ಉದಾತ್ತ ವಿಚಾರಗಳನ್ನೇ ಗ್ರಹಿಸುವಲ್ಲಿ ಅವುಗಳನ್ನೇ ಅನುದಿನವೂ , ಅನುಕ್ಷಣವೂ ಮೆಲುಕು ಹಾಕುತ್ತಿದ್ದಲ್ಲಿ ಖಂಡಿತವಾಗಿಯೂ ಮಹಾತ್ಕಾರ್ಯದ ಸಾಮರ್ಥ್ಯ ನಿನ್ನಲ್ಲಿಯೂ ಪುಟಿದೇಳುತ್ತದೆ. ಇದಕ್ಕೆ ಮೂಲವೇ ಶಿಕ್ಷಣದಲ್ಲಿ ವಿವೇಕಯುಕ್ತ ವಿಚಾರಗಳನ್ನು ತುಂಬುವುದಾಗಿತ್ತು.‌
ಭಾರತದ ಈ ಸ್ಥಿತಿಗೆ ಕಾರಣವೇ ಈ ಶಿಕ್ಷಣದ ವಿಷಯಗಳಾಗಿವೆ. ಅದನ್ನು ಸರಿಪಡಿಸದೆ ಜನರನ್ನು ಆಳಲು ಹೊರಟವರಿಗೆ ವಿವೇಕವಂತರೆನ್ನಬಹುದೆ?

ವಿವೇಕವೆಂದರೆ‌ ವಿಚಾರವನ್ನು ವೇದ ಶಾಸ್ತ್ರ ಪುರಾಣದ ಆಧಾರದಲ್ಲಿ ಅರ್ಥ ಮಾಡಿಕೊಂಡು ಸತ್ಯ ಕಂಡುಕೊಳ್ಳುವುದು.

ವಿಷಯಗಳಿಂದ  ನಮ್ಮ ಈ ಜೀವನದ ವೇದನೆಗಳಿಗೆ‌  ಕಾರಣ ತಿಳಿದು  ನಡೆಯುವುದಾಗಿದೆ.
ಇವೆಲ್ಲವೂ  ಆಂತರಿಕ ಶುದ್ದಿಯಿಂದ ಆಗುವುದರಿಂದ ವಿವೇಕಾನಂದರಾಗಬಹುದು. 
ಶಿಕ್ಷಣದಿಂದ. ಇದು ಪ್ರಾರಂಭವಾದಾಗಲೇ ನಮ್ಮೆಲ್ಲರ ವೇದನೆ  ಕಡಿಮೆಯಾಗಲು ಸಾಧ್ಯ.ಅವರವರ ಆತ್ಮಚಿಂತನೆ  ಆತ್ಮಾವಲೋಕನ ಆತ್ಮಪರಿಶೀಲನೆಯೊಳಗಡಗಿದೆ ವಿವೇಕ.

Saturday, May 16, 2026

ಸರಳ ಜೀವನ ಸಾಧ್ಯವೆ?

ಸರಳ ಜೀವನ ಸಾಧ್ಯವೆ?

 ಪರಾವಲಂಬನೆಯ ಜೀವನ ಮೊದಲು ಸುಲಭವೆನಿಸಿದರೂ ಕೊನೆಯಲ್ಲಿ ಅದೇ ನರಕ ತೋರಿಸುತ್ತದೆ.ಹಾಗಂತ ಮಾನವ ಸಂಘ ಜೀವಿಯಾದ್ದರಿಂದ ಏಕಾಂಗಿಯಾಗಿ ಜೀವಿಸೋದಕ್ಕೆ ಕಷ್ಟ.ಹೀಗಾಗಿ  ಸುಜ್ಞಾನದಿಂದ ಜೀವನದ ಸತ್ಯಾಸತ್ಯತೆಯನರಿಯುತ್ತಾ  ಎಲ್ಲರೊಳಗೊಂದಾಗಿ ಸರಳ ಜೀವನ ನಡೆಸುವುದು ಅಗತ್ಯವಿದೆ. ಸರಳವಾಗಿ ಬದುಕೋದೆ ಕಷ್ಟ ಎನ್ನುವ ಜನರ ಮದ್ಯೆ  ಬದುಕೋದೂ ಕಷ್ಟವೆ. 
ಏನೇ ಇರಲಿ ನಮ್ಮ ‌ಇಷ್ಟ ಕಷ್ಟಗಳ ನಡುವೆ ಬರುವ ಸುಖ ದು:ಖದ ಹಿಂದೆ  ನಮ್ಮ  ಸಾಲ ತೀರುತ್ತಿದೆಯೆ ಅಥವಾ ಬೆಳೆಯುತ್ತಿದೆಯೆ ಎನ್ನುವ  ಚಿಂತನೆ ನಡೆಸಿದರೆ  ಉತ್ತಮ.
ದೇಶವೇ ಸಾಲದ ಹೊಳೆಯಲ್ಲಿದೆ. ದೇಶದೊಳಗಿರುವ ಪ್ರಜೆಗಳಲ್ಲಿ ಸಾಕಷ್ಟು ಆಸ್ತಿ ಅಂತಸ್ತು  ಅಧಿಕಾರ ಸ್ಥಾನವಿದೆ. ಆದರೆ ಅದು ಅನ್ಯರ ಜ್ಞಾನ, ಶಿಕ್ಷಣ, ವ್ಯವಹಾರ,ಸಾಲ,ಬಂಡವಾಳದ ಮೂಲದಿಂದ  ಬಂದಿದ್ದರೆ  ಅದರಿಂದ ಹೊರಬರೋದು ಕಷ್ಟವಿದೆ. ಈಗಲೂ ದೇಶದಲ್ಲಿ ಜ್ಞಾನದ ಆಸ್ತಿ ಸಾಮಾನ್ಯರೊಳಗಿದ್ದರೂ ಅದಕ್ಕೆ ಪೂರಕವಾದ ಶಿಕ್ಷಣ ಗುರು ಸಿಗದಿದ್ದರೆ ಋಣ ತೀರಿಸಲಾಗದೆ ಜೀವ ಹೋಗುತ್ತದೆ. ಆತ್ಮನಿರ್ಭರ ಭಾರತ ಆಧ್ಯಾತ್ಮಿಕ ಪ್ರಗತಿಯಿಂದ. ಆದಾಗಲೇ  ಜನಜೀವನದಲ್ಲಿ ಬದಲಾವಣೆ ಒಳಗಿನಿಂದ ಸಾಧ್ಯ. ಇದಕ್ಕೆ ಉಳಿತಾಯ ಅಗತ್ಯವಿದೆ. ಯಾವುದನ್ನು ಉಳಿಸಬೇಕು ? ನಮ್ಮ ಸ್ವಂತ ಬುದ್ದಿ ಜ್ಞಾನದಿಂದ  ಧರ್ಮ ಸತ್ಯವನರಿತವರ ಋಣ ತೀರಿದೆ ಎಂದರೆ ಮಾನವನ ಸಮಸ್ಯೆಯ ಮೂಲವೇ ಋಣ ಅಥವಾ ಸಾಲ.
ಇದನ್ನು ಸತ್ಕರ್ಮ, ಸ್ವಧರ್ಮ, ಸದಾಚಾರ, ಸ್ವಾಭಿಮಾನ  ಸ್ವಾವಲಂಬನೆ ಯಿಂದಷ್ಟೆ  ತೀರಿಸಬಹುದೆನ್ನುವುದು ಆಧ್ಯಾತ್ಮ ವಿಜ್ಞಾನ. ಇದಕ್ಕೆ ವಿರುದ್ದವಿರುವ ಭೌತವಿಜ್ಞಾನ ಇಂದು ಮಾನವನನ್ನು ಆಕಾಶದೆತ್ತರ ಹಾರಿಸಿದರೂ ಭೂಮಿಯ ಮೇಲೆ ಹೇಗೆ ಬದುಕಬೇಕೆಂಬ ಸಾಮಾನ್ಯ ಜ್ಞಾನದಿಂದ ದೂರ‌ಮಾಡಿರೋದಕ್ಕೆ ಜನ ಹೊರಗಿನ ಹೋರಾಟ ಹಾರಾಟ ಮಾರಾಟಕ್ಕೆ ಕೊಡುವ ಸಹಕಾರ ಒಳಗಿರುವ ಸತ್ಯ ಧರ್ಮ ಸರಳ ಜೀವನಕ್ಕೆ ಕೊಡಲಾಗದೆ  ಮನಸ್ಸು ಓಡುತ್ತಿದೆ.
ಓಡುತ್ತಿರುವ  ಮನಸ್ಸಿನ ನಿಗ್ರಹ ಯೋಗದಿಂದ ಸಾಧ್ಯ.ಯೋಗ ಎಂದರೆ ಸೇರುವುದಾದರೆ‌ ಯಾರನ್ನು ಯಾರು ಸೇರಬೇಕು? ಜೀವಾತ್ಮ ಪರಮಾತ್ಮನ ಸೋರುವ ಯೋಗ ಕಣ್ಣಿಗೆ ಕಾಣದು. ಹೀಗಾಗಿ  ಅಂತರಾತ್ಮನ‌ ಮರೆತು  ಅಂತರ‌ಬೆಳೆಸಿಕೊಂಡು ಅಂತರಾಷ್ಟ್ರೀಯ ಒಪ್ಪಂದಗಳು ಹೆಚ್ಚಾಗಿವೆ. ನಮ್ಮವರನ್ನೇ ಅರ್ಥ ಮಾಡಿಕೊಳ್ಳದೆ ಅನ್ಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಎಲ್ಲರಲ್ಲಿಯೂ ಇದ್ದು ನಡೆಸೋ ಶಕ್ತಿ ಒಂದೇ ಆಗಿದ್ದರೂ ಎಲ್ಲರ ಋಣ ಒಂದೇ ರೀತಿಯಲ್ಲಿ ಇರದು.ಅವರವರ ಋಣ ತೀರಿಸಿಕೊಳ್ಳಲು ಸ್ವಪ್ರಯತ್ನ, ಸ್ವಂತ ಬುದ್ದಿ ಜ್ಞಾನದ ಜೊತೆಗೆ ಸರಳ ಜೀವನ ಅಗತ್ಯವಿದೆ. ಎಷ್ಟು ಹೊರಗಿನಿಂದ ತಂದು ಹಾಕಿದರೂ ಋಣವೇ ಆಗಿರುವಾಗ ಅದನ್ನು ತೀರಿಸಲು  ಸೇವೆ‌
ಮಾಡಬೇಕು.  ಅನ್ಯರ ಋಣ ತೀರಿಸಲು ಅನ್ಯರ ಸೇವೆ.
ಪರಮಾತ್ಮನ ಋಣ ತೀರಿಸಲು ಪರಮಾತ್ಮನ ಸೇವೆ. ಇದು ಎಲ್ಲರಲ್ಲಿಯೂ  ಪರಮಾತ್ಮನ ‌ಕಾಣುವ ಆಧ್ಯಾತ್ಮಿಕ ಶಕ್ತಿಯಿಂದ  ಮಾಡಬೇಕಾದರೆ ನಿಸ್ವಾರ್ಥ ನಿರಹಂಕಾರದ ಜೊತೆಗೆ ಪ್ರತಿಫಲಾಪೇಕ್ಷೆ ಇಲ್ಲದೆ  ಕೆಲಸ ಮಾಡಬೇಕೆಂದರೆ  ಸಾಧ್ಯವೆ? 
ಸಾಲ ಮಾಡೋದು ಸುಲಭ ಆದರೆ ಅದನ್ನು ತೀರಿಸುವುದು ಸುಲಭವಿರದು. ಸಾಲವೇ ಶೂಲ  ಸರ್ಕಾರವೇ ಇದರ ಮೂಲ.
ಇಲ್ಲಿ ಸಹಕಾರವಿಲ್ಲದೆ ಸರ್ಕಾರ ನಡೆಯದು. ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟರೆ ಅವರು ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವರಷ್ಟೆ. ಆದರೆ ಶಿಷ್ಟರಿಗೆ ಸಹಕರಿಸಿದ್ದರೆ  ಸಾಲದ ಅರ್ಥ ತಿಳಿಸುತ್ತಾ  ಹಾಸಿಗೆ ಇದ್ದಷ್ಟು  ಕಾಲು ಚಾಚು ಎನ್ನುವರು. ಹಿಂದಿನ ಮಹಾತ್ಮರಿಗೂ ಈಗಿನ‌ಮಹಾಜನತೆಗೂ ಇರುವ. ವ್ಯತ್ಯಾಸವಿಷ್ಟೆ  ಹಿಂದೆ ದೇಶದ ಋಣ ತೀರಿಸುವ ದೇಶ ಸೇವೆ ಸುಜ್ಞಾನದಿಂದ ನಡೆದಿತ್ತು. ಈ ಗ ದೇಶವನ್ನು ಲೂಟಿ ಹೊಡೆಯುವ  ಭ್ರಷ್ಟರ ಸೇವೆ ಜನರೆ ಮಾಡುತ್ತಿದ್ದಾರೆ.
ಇದರಿಂದ ಸಿಕ್ಕಿದ್ದು ಸಾಲದ ಹೊರೆಯಷ್ಟೆ. ಇದನ್ನು ಮಕ್ಕಳು ಮೊಮ್ಮಕ್ಕಳ ಕಾಲದವರೆಗೂ ವಿದೇಶಿಗರ ಅಡಿಯಾಳಾಗಿ ದುಡಿದು ತೀರಿಸಿದರೂ  ಮುಗಿಯದು. ಕಾರಣವಿಷ್ಟೆ ಜ್ಞಾನವೇ ನಮ್ಮದಲ್ಲದ ಮೇಲೆ  ನಮ್ಮಮೂಲದ ಧರ್ಮ ಕರ್ಮ ಅರ್ಥ ಆಗದು. ಧರ್ಮ ಕ್ಕೆ ತಕ್ಕಂತೆ ಕರ್ಮ ಇರದಿದ್ದರೆ ಆತ್ಮಕ್ಕೆ ತೃಪ್ತಿ ಸಿಗದು. ಆತ್ಮಕ್ಕೆ ತೃಪ್ತಿ ಸಿಗದಿದ್ದರೆ ಜೀವನ್ಮುಕ್ತಿಯಾಗದು.
ಒಳಗೇ ಅಡಗಿದ್ದ  ಆತ್ಮಜ್ಞಾನವ ಬಿಟ್ಟು ಹೊರಗಿನವರ ವಿಶೇಷ ಜ್ಞಾನದಿಂದ ತಾತ್ಕಾಲಿಕ ಸುಖ ಸಿಗಬಹುದು.ಅದೇ ದು:ಖಕ್ಕೆ ಕಾರಣವಾಗುತ್ತದೆ. ಹಿಂದಿನವರಂತೆ ನಾವಿಲ್ಲ. ನಮ್ಮಂತೆ ನಮ್ಮ ಮಕ್ಕಳಿರೋದಿಲ್ಲ. ಆದರೂ ಬದಲಾವಣೆ ಹಿಂದಿನ  ಅನುಭವದ ಮೇಲಿರುತ್ತದೆ. ಬದಲಾವಣೆ ಜಗದ ನಿಯಮ. ಸಾಲ ತೀರಿಸಲು ಬಂದ ಜೀವಕ್ಕೆ ಇನ್ನಷ್ಟು ಸಾಲದ ಹೊರೆ ಹಾಕುವುದು  ಪ್ರಗತಿಯೆ ?
ಜೀವನ ಸುಲಭವಲ್ಲ ಅದನ್ನು ನಾವೇ ಸರಳಗೊಳಿಸಿಕೊಳ್ಳಬೇಕು.ಕೆಲವನ್ನು  ಸ್ವೀಕರಿಸಿ ಕೆಲವನ್ನು ತ್ಯಜಿಸಬೇಕು. ಸತ್ಯಜ್ಞಾನವನ್ನು ಸ್ವೀಕರಿಸುತ್ತಾ ಹೋದರೆ‌ ಮಿಥ್ಯಜ್ಞಾನದಿಂದ ಹೊರಬರಬಹುದು. ಮಿಥ್ಯಜ್ಞಾನದೆಡೆಗೆ ಹೋದರೆ ಸತ್ಯ ಬಿಟ್ಟು ನಡೆಯಬೇಕು.ಸತ್ಯವೇ ದೇವರಾದರೆ  ಯಾರನ್ನು ಬಿಡಬೇಕು? ದೈವತ್ವದೆಡೆಗೆ  ಹೊರಟಾಗ ಕಷ್ಟಗಳೆ ಹೆಚ್ಚು. ಕಾರಣ ಅದಕ್ಕೆ ಸಹಕಾರವಿರದು. ಕಣ್ಣಿಗೆ ಕಾಣದ ಶಕ್ತಿ ವ್ಯಕ್ತಿಯನ್ನು ಬೆಳೆಸುತ್ತದೆ. ಅದರಲ್ಲಿ ದೇವರು ಮಾನವರು ಅಸುರರು  ಇದ್ದೇ ಇರುವರು. ಯಾವಶಕ್ತಿಗೆ ಹೆಚ್ಚು ಸಹಕಾರ ಸಿಗುವುದೋ ಅವರು ಭೂಮಿ ಆಳುವರಷ್ಟೆ. ಇದು ಸರ್ವಕಾಲಿಕ ಸತ್ಯ. 
ಈಗ‌ ನಮ್ಮನ್ನು ಆಳುತ್ತಿರುವವರು ಯಾರು? ಮಾನವನೊಳಗೇ ಅಡಗಿರುವ ಈ‌ ಮೂರೂ ಶಕ್ತಿ ಯೇ ಜೀವನದ ಸ್ಥಿತಿಗತಿಗೆ  ಮೂಲ ಕಾರಣ. ಸತ್ವ‌ ರಜಸ್ಸು ತಮಸ್ಸಿನ ಶಿಕ್ಷಣ, ಆಹಾರವೇ  ದೇಹವನ್ನು ದೇಶವನ್ನು ವಿಶ್ವವನ್ನು  ಆವರಿಸಿರುವಾಗ  ನಮ್ಮ ಶಕ್ತಿ ಅದರ ಒಂದು ಸಣ್ಣ ಬಿಂದುವಷ್ಟೆ. ಆ ಬಿಂದುವನರಿತರೆ  ನಾವ್ಯಾರ ಕೈಗೊಂಬೆ ಎನ್ನುವ ಸತ್ಯದರ್ಶನ ಸಾಧ್ಯವಿದೆ. ಆದರದು ಬಹಳ ಕಷ್ಟ.
ಒಳಹೊಕ್ಕಿ ನೋಡುವ ಶಕ್ತಿ  ಇರಬೇಕು.ಇದನ್ನು ಆತ್ಮಾವಲೋಕನ, ಆತ್ಮಸಂಶೋಧನೆ, ಆತ್ಮವಿಶ್ವಾಸ, ಆತ್ಮಸಾಕ್ಷಾತ್ಕಾರ ಆಧ್ಯಾತ್ಮ ಸಾಧನೆ ಎಂದಿರುವರು. 
ಯಾವುದೇ ತತ್ವದ ಸಂಶೋಧನೆ ಹೊರಗಿನಿಂದ ಮಾಡಲಾಗದು.ಮಾಡಿದರೆ ಅದರಲ್ಲಿ ತಂತ್ರ ಬೆರೆತು ಹೋಗುತ್ತದೆ. ತಂತ್ರ ಅತಂತ್ರಸ್ಥಿತಿಗೆ ತಲುಪಿಸಬಹುದು.
ಕೆಲವರಿಗಷ್ಟೆ ಸ್ವತಂತ್ರ ಜೀವನ  ಸಿಗಬಹುದು. ಒಟ್ಟಿನಲ್ಲಿ  ಜೀವನ‌ಎಂದರೆ ಜೀವಿಗಳ ವನ. ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಕಷ್ಟಪಡದೆ ಜೀವನ ನಡೆಸಿದರೆ ಜೀವನವಾಗಿರದು. ಭೂ ಋಣ ತೀರಿಸಲು  ಕಷ್ಟಪಟ್ಟು  ಜ್ಞಾನದಲ್ಲಿ ‌ನಡೆಯಲೇಬೇಕು. ಸತ್ಯವೋ  ಮಿಥ್ಯವೋ ಇದರಿಂದಾಗಿ  ಅಧರ್ಮ  ಬೆಳೆಯದಿದ್ದರೆ ಉತ್ತಮ ಸ್ಥಿತಿಗೆ ತಲುಪಬಹುದು. 
ಸೃಷ್ಟಿ ಉತ್ತಮವಿದ್ದರೆ ಸ್ಥಿತಿಯೂ ಉತ್ತಮವಿರುತ್ತದೆ.‌ಹಾಗೆ ಲಯವನ್ನು ಉತ್ತಮವಾಗಿ ಸ್ವೀಕರಿಸುವ  ಮಹಾತ್ಮರಾಗುತ್ತಾರೆ. ಇದು ವಿಶ್ವಗುರು ಭಾರತದ ಸಂದೇಶ.ಇದರ‌ ಮೂಲ ಸಾತ್ವಿಕ ಶಿಕ್ಷಣವಾಗಿತ್ತು.ಈಗ ಹೇಗಿದೆ?
 ಭಗವತಿ 
ಬೆಂಗಳೂರು

Tuesday, May 12, 2026

ದೇವರಿರೋದೆಲ್ಲಿ?

: ಹಿರಣ್ಯ ಕಶ್ಯಪುವನ್ನು ಸಂಹಾರ ಮಾಡಲು‌ದೇವತೆಗಳು ಅವನ‌ ಮಗನನ್ನೇ ಬಳಸಿಕೊಂಡು ಗೆದ್ದರು , ಕಂಸನ ವಧೆ ಶ್ರೀ ಕೃಷ್ಣನಿಂದ ಎಂದು ತಿಳಿದವನಿಗೆ  ನಾರದರು  ಕಂಸನ ಪಾಪದ ಕೊಡ ತುಂಬಿಸಲು ದೇವಕಿಯ ಏಳೂ ಮಕ್ಕಳನ್ನು ಕಂಸ ಕೊಲ್ಲುವಂತೆ ಮಾಡಿದರು. ಅಂದರೆ ಯಾವುದೇ ನಕಾರಾತ್ಮಕ ಶಕ್ತಿಯನ್ನು ಅಷ್ಟು ಸುಲಭವಾಗಿ ತಡೆಯಲಾಗದು. ಅದು ವಿಪರೀತ ಬೆಳೆದಾಗಷ್ಟೆ  ಅದರ ಅಂತ್ಯವಾಗೋದು.
ಈಗಲೂ ಹಾಗೆಯೆ ಭೂಮಿಯ ಮೇಲಿರುವ ಮಾನವನಿಗೆ ಭೂಮಿಯಿಲ್ಲದೆ ನಾನಿಲ್ಲ ಎನ್ನುವ ಸಾಮಾನ್ಯ ಜ್ಞಾನವಿಲ್ಲದೆ ಭೂಮಿಯನ್ನು  ಹೆಣ್ಣು ಹೊನ್ನು ‌ಮಣ್ಣನ್ನು ದುರ್ಭಳಕೆ ಮಾಡಿಕೊಂಡರೂ ಅವರು ಬೆಳೆಯುತ್ತಿರೋದಕ್ಕೆ ಕಾರಣ ಮಧ್ಯವರ್ತಿಗಳ ಸಹಕಾರವಾಗಿದೆ. ಈ ಕಡೆ  ಸತ್ಯ ಇನ್ನೊಂದು ಕಡೆ ಮಿಥ್ಯ  ನಡುವೆ ಅರ್ಧಸತ್ಯದ ರಾಜಕೀಯ ದಲ್ಲಿ ಗೆದ್ದವರು ಯಾರು? ಸೋತವರೆಲ್ಲಿ? 
ಕಣ್ಣಿಗೆ ಕಾಣುವ ಭ್ರಷ್ಟ ದುಷ್ಟರಿಗೆ  ಮತದಾನ ಮಾಡುವ ಜನರ ಅಜ್ಞಾನಕ್ಕೆ  ಸರಿಯಾದ ಜ್ಞಾನದ ಶಿಕ್ಷಣವೇ ಕೊಡದೆ ದೇವರನ್ನು ದೇವಸ್ಥಾನವನ್ನು  ಬೆಳೆಸಿದರೆ  ಆ ದೇವರನ್ನೂ ಸೇರಿಸಿ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಅಸುರರಿದ್ದಾರೆ. ಇದು ಹಿಂದೆ ಯೂ ನಡೆದಿತ್ತು. ಈಗಲೂ ನಡೆಯುತ್ತಿದೆ ಮುಂದೆಯೂ ನಡೆಯಬಹುದು. ನಡೆಸುತ್ತಿರುವವರು ಯಾರು? ನಾವ್ಯಾರು? ದೇವರೆ,ಮಾನವರೆ ಅಸುರರೆ? ನಮ್ಮ ಸಹಕಾರವಿಲ್ಲದೆ  ಯಾವುದು ನಡೆದಿದೆ? ಪ್ರಜಾಪ್ರಭುತ್ವದ  ಅರ್ಥ ತಿಳಿಯದೆ ರಾಜರನ್ನು ಬೆಳೆಸಿದರೆ ಅಧರ್ಮ ವಲ್ಲವೆ? 
ಅಸುರರೊಳಗೆ ಸುರರು  ಇರುವಾಗ ನಮ್ಮೊಳಗೆ ಇರೋದು ಯಾರು?

ಎಲ್ಲರಲ್ಲಿಯೂ ನಿಂತು ನಡೆಸೋ ಪರಮಾತ್ಮನಿಗೆ ಎಲ್ಲಾ ಒಂದೇ. ಎಲ್ಲರೂ ಸತ್ತವರೆ ಆದರೂ  ತಮ್ಮ ತಮ್ಮ ಹಿಂದಿನ ಋಣಕ್ಕನುಸಾರ ಭೂಮಿಗೆ ಬರೋದನ್ನು ತಡೆಯಲಾಗದು.
ಯಾರಿಂದ ಏನಾಗಬೇಕೋ ಅದು ಆಗೇ ತೀರುತ್ತದೆ. 
ದೇವತೆಗಳು ಮಾನವರು ಅಸುರರು  ಮೂವರೂ  ಭೂಮಿ ಆಳಲು ಹೊರಟರೆ  ಭೂಮಿಯ ಋಣ ತೀರುವುದೆ? ಅದಕ್ಕೆ ಧರ್ಮ ಮತ್ತು ಸತ್ಯವೇ ಮೂಲಾಧಾರವಾಗಿತ್ತು. ಅದನ್ನರಿತು‌ ನಡೆದವರಿಗೆ ಮುಕ್ತಿ ಸಿಕ್ಕಿದೆ. 

ದೇವರನ್ನು  ತೋರಿಸಿದವರಿಲ್ಲ ನೋಡಿದವರಿದ್ದಾರೆ ಅರಿತವರಿದ್ದಾರೆ ಅರ್ಥ ಮಾಡಿಸಿದವರಿದ್ದಾರೆ ಹಾಗಾದರೆ  ಕಣ್ಣಿಗೆ ಕಾಣದ ಆ ಶಕ್ತಿ ಯಾವುದು ಆತ್ಮವಾಗಿದೆ.  ಇದು ಒಳಗೇ ಅಡಗಿರುವಾಗ ಹೊರಗಿನಿಂದ ತೋರಿಸಲಾಗದು.ತೋರಿಸಿದರೂ ಸ್ಪಷ್ಟವಾಗಿ  ನೋಡಲಾಗದು. ಚಿತ್ರದ ಹಿಂದಿನ ಶಕ್ತಿ ಕಾಣುವುದೆ?
ಅಂತರಂಗ ಶುದ್ದವಾದರೆ‌  ಮಾತ್ರ  ಸತ್ಯದರ್ಶನ. ಸತ್ಯವೇ ದೇವರು. ಸತ್ಯವೇ‌ ನುಡಿಯದೆ ಧರ್ಮ ರಕ್ಷಣೆಗಿಳಿದರೆ  ಅನರ್ಥ ಗಳಾಗುತ್ತದೆ. 
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ. ಸತ್ಯಹರಿಶ್ಚಂದ್ರನಂತಿರಲಾಗದು  ಎಂದು ಸತ್ಯವನ್ನೇ ಬಿಟ್ಟರೆ ಹರಿ ಕಾಣುವನೆ?

Monday, May 11, 2026

ಮತಾಂತರದಿಂದಾದ ಅವಾಂತರಗಳೆಷ್ಟು?

ಮತಾಂತರದಿಂದಾದ ಅವಾಂತರಗಳೆಷ್ಟು?

ಮತಗಳ ಅಂತರವು ಮಾನವನ ಜೀವನವೇ ಅತಂತ್ರಸ್ಥಿತಿಗೆ ತರುತ್ತಿದೆ. ಇದರಿಂದ ಯಾರಿಗೂ ಲಾಭವಾಗಿಲ್ಲ ಎನ್ನುವ ಸತ್ಯವನ್ನು ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಳ್ಳಲು ಆತ್ಮಜ್ಞಾನದಿಂದ ಮಾತ್ರ ಸಾಧ್ಯ.
ಮತಾಂತರ ದಲ್ಲೂ ತಾತ್ವಿಕ  ಮತ್ತು ತಾಂತ್ರಿಕ ಎಂಬ ಎರಡು ರೀತಿಯಿದೆ.
ತತ್ವಗಳ ಪ್ರಕಾರ ಅಂತರ‌ಬೆಳೆದಾಗ ಧರ್ಮ ಒಡೆಯುತ್ತದೆ
ತಂತ್ರದ ಮೂಲಕ ಅಂತರ ಬೆಳೆದಾಗ ಮನಸ್ಸೇ‌ಒಡೆಯುತ್ತದೆ.

ಇರೋದೆಂದೆ ಧರ್ಮ ಸತ್ಯ ಜಾತಿ  ಪರಮಾತ್ಮ ದೇವರು ಎನ್ನುವ ಸತ್ಯದೆಡೆಗೆ ಹೋಗಲು ತತ್ವದೊಳಗಿರುವ ಏಕತ್ವವನ್ನು  ಅರಿತು ನಡೆಯಬೇಕು. ಅದರಲ್ಲಿ ‌ ಬಹುತ್ವ ಬಂದಾಗಲೇ  ಹಲವು  ರೀತಿಯಲ್ಲಿ ವಾದ ವಿವಾದ ಗಳಾಗುತ್ತಾ  ಮೇರುಸತ್ಯ ಬಿಟ್ಟು  ಕೆಳಗಿಳಿಯೋದು ಆತ್ಮ.
ಆತ್ಮಕ್ಕೆ ಸಾವಿಲ್ಲ  ಆದರೆ  ಜೀವಾತ್ಮನಿಗೆ  ಮುಕ್ತಿ ಸಿಗೋದಕ್ಕೆ  ಆತ್ಮಜ್ಞಾನ ಅಗತ್ಯವಿದೆ.

ಕಲಿಯುಗದ ಪ್ರಭಾವದಿಂದಾಗಿ ಇಂದಿನ ವೈಜ್ಞಾನಿಕ ಚಿಂತನೆಗಳು  ಆಕಾಶದೆತ್ತರ  ಬೆಳೆದಿದೆ ಭೂಮಿಯ‌ಮೇಲೆ ನಿಂತು  ಜೀವನ ನಡೆಸುತ್ತಿದ್ದೇವೆನ್ನುವ ಸಾಮಾನ್ಯ ಪ್ರಜ್ಞೆ  ಇಲ್ಲದೆ ಭೂಮಿಯನ್ನು  ದುರ್ಭಳಕೆ ಮಾಡುವಷ್ಟು ತಂತ್ರವೂ ಇದೆ.
ತಂತ್ರವಿರಲಿ ಆದರೆ ಅದರಿಂದ ಸ್ವತಂತ್ರ ಬುದ್ದಿ ಜ್ಞಾನ‌ಬೆಳೆದರೆ  ಅದೇ ನಿಜವಾದ ಧರ್ಮದೆಡೆಗೆ‌ನಡೆಸುತ್ತದೆ.
ಅಧ್ವೈತ   ಧ್ವೈತ  ವಿಶಿಷ್ಟಾದ್ವೈತ ಎಲ್ಲಾ ಭೂಮಿಯಲ್ಲಿದೆ. ಆದರೆ ಮೂರೂ‌ಬೇರೆ ಬೇರೆ  ದಾರಿಯಲ್ಲಿ ‌ನಡೆದರೂ ಭೂಮಿ ಒಂದೇ ಆಗಿರುತ್ತದೆ. ಈ ಒಂದನ್ನು ಅರ್ಥ ಮಾಡಿಕೊಳ್ಳಲು ಸೋತರೆ  ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.
 ಪುರಾಣ ಇತಿಹಾಸ‌ಕಾಲದಿಂದಲೂ ಮನುಕುಲವಿರೋದು ಇದೇ ಭೂಮಿಯಲ್ಲಿಯೇ ಎನ್ನುವ ಸತ್ಯ ತಿಳಿಸುವ ಅಗತ್ಯವಿಲ್ಲ. ಆದರೆ ಅರಿತು ನಡೆಯದವರಿಗೆ  ಭೂಮಿಯೇ ಆಸರೆ  ನೀಡೋದನ್ನು ಬಿಟ್ಟಿಲ್ಲ. ಈ ಭೂಮಿ ಎನ್ನುವ ಮಾಧ್ಯಮದಲ್ಲಿ  ಮಾಡಬಾರದ ಕರ್ಮ  ಮಾಡಿದರೆ ಅದಕ್ಕೆ ತಕ್ಕಂತೆ ಫಲವನ್ನು ಅನುಭವಿಸಲು ಭೂಮಿಗೇ‌ಬರಬೇಕು.
ಅಂತರಗಳ ಹಿಂದಿನ ಅರ್ಧ ಸತ್ಯದಿಂದ  ಈ ಕಡೆ ದೇವರು ಇನ್ನೊಂದು ಕಡೆ ಅಸುರರು ನಿಂತು ಎಳೆದಾಡುತ್ತಿರುವ ಸತ್ಯ ತಿಳಿದರೆ  ನಾವೆಲ್ಲರೂ ಇದ್ದೂ ಸತ್ತಂತೆ. ಶ್ರೀ ಕೃಷ್ಣ ‌ಪರಮಾತ್ಮ ಕುರುಕ್ಷೇತ್ರ ಯುದ್ದದ ಸಮಯದಲ್ಲಿ ಅರ್ಜುನನ ವಿಷಾಧವನ್ನು ಹೋಗಲಾಡಿಸಲು ತಿಳಿಸಿರುವ ಸತ್ಯ ಇದೇ ಆಗಿದೆ. ಇಡೀ ಬ್ರಹ್ಮಾಂಡವನ್ನು  ತನ್ನೊಳಗಿಟ್ಟುಕೊಂಡಿರುವ
ಪರಮಾತ್ಮನ ಒಳಗಿರುವ ಎಲ್ಲಾ ಜೀವಾತ್ಮ ರು  ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಣುಗಳಂತೆ. ಆದರೆ ಮಾನವ‌ಜನ್ಮದಲ್ಲಿರುವ ಸ್ವಾತಂತ್ರ್ಯ ಎಂದರೆ ಆತ್ಮತತ್ವನರಿತು ನಡೆಯುವುದರಿಂದ  ಸದ್ಗತಿ  ಮುಕ್ತಿ ಮೋಕ್ಷ ದ ಸ್ಥಿತಿ. 
ಮುಕ್ತಿ ಒಂದು ತಾತ್ಕಾಲಿಕ ಬಿಡುಗಡೆ ಯಾದರೆ ಮೋಕ್ಷ ಶಾಶ್ವತ ಬಿಡುಗಡೆ ಯಾಗಿರುತ್ತದೆ.
ಮೋಕ್ಷ  ಯಾರಲ್ಲಿ ಮೋಹದ ಕ್ಷಯವಾಗಿರುವುದೋ ಅವರಿಗಷ್ಟೆ ಸಿಗುತ್ತದೆಂದರೆ ವಾಸ್ತವದಲ್ಲಿ  ನಮ್ಮಲ್ಲಿರುವ ಅತಿಯಾದ ಮೋಹವೇ ಕಾಮ ಕ್ರೋಧ ಲೋಭ ಮಧ ಮತ್ಸರಗಳನ್ನು  ಬೆಳೆಸುತ್ತಿದೆ  ಹಾಗಾದರೆ  ತತ್ವಜ್ಞಾನ ದ ಅಂತರವೇ ತಂತ್ರಜ್ಞಾನದ ಅಂತರಕ್ಕೆ ಕಾರಣವಾಯಿತೆ?
ತತ್ವವಿಲ್ಲದೆ  ತಂತ್ರ‌ಬೆಳೆಯಿತೆ?
ಭೂಮಿಯ ಮೇಲಿರುವ  ಮಂತ್ರ ತಂತ್ರ ಯಂತ್ರಗಳು ಸ್ವತಂತ್ರ ವೆ?
ಇವಿಲ್ಲದೆ  ಮಾನವರು‌ ಬದುಕಬಲ್ಲರೆ?  ಹಿಂದೆ  ಎಷ್ಟೋ ತಪಸ್ವಿಗಳು ಸ್ವತಂತ್ರವಾಗಿ  ಕಾಡಿನಲ್ಲಿದ್ದು ಮೋಕ್ಷ ಸಾಧಕರಾದರು ಎಂದರೆ ಈಗ ಅಸಾಧ್ಯ.
ಎಲ್ಲವೂ ಮನುಕುಲದ ಒಳಿತಿಗಾಗಿ ಮಾನವನ ಸುಖ ಜೀವನಕ್ಕಾಗಿ ಸಂಸಾರ ನಡೆಸುವುದಕ್ಕಾಗಿ ಪರಮಾತ್ಮನು ಕೊಟ್ಟಿರುವಾಗ  ಅದನ್ನು ಬೇರೆಯಾಗಿಸಲಾಗದು. ಬೇರೆ ಮಾಡಿದಷ್ಟೂ ಅಂತರದಲ್ಲಿ  ಮಾನವನ ಸ್ಥಿತಿ ಅತಂತ್ರ ವೆ.

ವಾಸ್ತವದಲ್ಲಿ  ನಮ್ಮ ಮುಂದಿರುವ‌ಮೂರು ಮತಗಳ ಅಂತರವು ಅಜ್ಞಾನವನ್ನು ‌ಬೆಳೆಸುತ್ತಾ‌ಜನರನ್ನು ಆಳಲು ಹೊರಟು  ತಾವೇ ಆಳಾಗಿರುವ ಸತ್ಯದಿಂದ ದೂರವಾದರೂ ಇದನ್ನು ಧರ್ಮ ಎನ್ನುವ  ರಾಜಕೀಯ ಮನೆ‌ಮನೆಯಲ್ಲಿದೆ.
ಇದರಿಂದ ಸಂಸಾರ ಒಡೆದು ಹೊರಬರುತ್ತಿವೆ. ಹೊರಗಿದ್ದವರು  ಒಳಹೊಕ್ಕಿ ಇನ್ನಷ್ಟು ಕುತಂತ್ರದಿಂದ  ಮನೆ ಆಳುತ್ತಿದ್ದರೂ  ನಮ್ಮ ಅಜ್ಞಾನ ನಮಗೆ ಅರಿವಾಗದೆ ಅದನ್ನು ಪ್ರಗತಿ ಎಂದು  ವಾದ ಮಾಡುವವರಿದ್ದಾರೆ.
ಸ್ವತಂತ್ರ ಜೀವನ ಎಂದರೆ ಮೂಲ ಬಿಟ್ಟು  ಯಾರದ್ದೋ ಅಡಿ ಇರೋದಲ್ಲ. ಮೂಲವರಿತು  ನಡೆಯೋದಷ್ಡೆ. ಮೂಲದ ಶಿಕ್ಷಣವೇ  ಕೊಡದೆ ತಂತ್ರದಿಂದ  ಹೊರಗೆಳೆದು ಯಂತ್ರದಂತೆ ದುಡಿಸಿಕೊಂಡರೆ  ಸ್ವೇಚ್ಚಾಚಾರವಾಗುತ್ತದೆ.‌ಯಂತ್ರಗಳಲ್ಲಿಯೂ  ಸಾತ್ವಿಕ ರಾಜಸಿಕ ತಾಮಸಿಕ ಗುಣಗಳಿವೆ. ಆಹಾರ ವಿಹಾರ ಶಿಕ್ಷಣ  ಯಾವ ಗುಣಮಟ್ಟವನ್ನು  ಅನುಸರಿಸುವುದೋ ಹಾಗೆ  ಮಾನವನ  ಜೀವನ ನಡೆಯುತ್ತಿರುತ್ತದೆ.
ಸತ್ವಗುಣಕ್ಕೆ ತಾಮಸಿಕ ಗುಣ ವಿರುದ್ದ. ಇವೆರಡರ ಮಧ್ಯೆ ಇರುವ ರಾಜಸಿಕ ಗುಣವೇ ಅಂತರ ಸೃಷ್ಟಿ ಮಾಡುತ್ತಿರುವಾಗ  ಇದರಿಂದ ದೂರವಿದ್ದವರಿಗಷ್ಟೆ ತತ್ವದರ್ಶನ ಆಗಿದೆ. 
ರಾಜಪ್ರಭುತ್ವದ   ಭಾರತೀಯ ಶಿಕ್ಷಣವು ಸತ್ವಯುತವಾಗಿತ್ತು.ಯಾವಾಗಿದು ಅನ್ಯರ ಮಧ್ಯ ಪ್ರವೇಶದಿಂದ ರಾಜಕೀಯಕ್ಕೆಳೆದು ಆಳಲು ಪ್ರಾರಂಭಿಸಿತೋ
ಆಗಲೇ  ತಾಮಸ ಜೀವನ  ಹೆಚ್ಚಾಯಿತು. ಸ್ವತಂತ್ರ ಬುದ್ದಿ ಜ್ಞಾನ ಇಲ್ಲದೆ ಹೊರ ಬಂದರೆ  ತಂತ್ರದಿಂದ ಆಳುವರು ಕೊನೆಗೆ ಅದೇ ಜೀವನವು ಅತಂತ್ರಸ್ಥಿತಿಗೆ ತಲುಪಿಸುತ್ತಾ ಅಜ್ಞಾನಕ್ಕೆ ತಿರುಗುತ್ತದೆ.
ನಿಮ್ಮ ನಿಮ್ಮ ಮನವ,ತನುವ ಸಂತೈಸಿಕೊಳ್ಳಿ ಎಂದಿರುವ ಮಹಾತ್ಮರಾದವರು  ಈ ರೀತಿಯ ತಂತ್ರಕ್ಕೆ ಒಳಗಾಗದೆ ಅಂತರಂಗದೆಡೆಗೆ ನಡೆದರು. ಅವರನ್ನು ಬಡವರೆನ್ನಬಹುದೆ ಶ್ರೀಮಂತ ರೆ?

ಅಜ್ಞಾನ ಎಂದರೆ ತಿಳುವಳಿಕೆಯಿಲ್ಲದವರೆಂದರ್ಥ ವಲ್ಲ. ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ. ಭೂಮಿ ವಿಶಾಲವಾಗಿದೆ ಎಂದು ಮನಸ್ಸಿಗೆ ಬಂದಂತೆ ಬಳಸುವುದೆ ಅಜ್ಞಾನದ ಲಕ್ಷಣ. ಇದಕ್ಕೆ ತಕ್ಕಂತೆ ಬೆಲೆಕಟ್ಟಬೇಕು. ಬೆಲೆ ಎಂದರೆ ಹಣವಲ್ಲ ಋಣದ ಲೆಕ್ಕಾಚಾರವಾಗಿದೆ. ಇದನ್ನು ತತ್ವಜ್ಞಾನದಿಂದ  ಅರಿತು  ನಡೆದರೆ ಮಾತ್ರ ಸಾಧ್ಯ. ಅದರಲ್ಲಿ ಅಂತರ ಬೆಳೆಸಿಕೊಂಡರೆ  ಅಸುರರ ಸಾಮ್ರಾಜ್ಯ ವಾಗುತ್ತದೆ.
ಅಸುರರು  ನೋಡೋದು ಹೆಣ್ಣು ಹೊನ್ನು ಮಣ್ಣು ಮಾತ್ರ.
ಈಗ ನಮ್ಮನ್ನು ಆಳುತ್ತಿರೋರು ಯಾರು? ನಮ್ಮೊಳಗೆ ನಿಂತು ನಡೆಸೋ ಪರಮಾತ್ಮನೇ ಪರಕೀಯರೆ?
ಆತ್ಮಾವಲೋಕನ ದಿಂದಷ್ಟೆ ಆತ್ಮನಿರ್ಭರ ಭಾರತ ಸಾಧ್ಯ.
ಸರಳ ಜೀವನ ನಡೆಸಲು ರಾಜಕೀಯ ಶಕ್ತಿ ಬೇಕೆ?
ಅಧ್ವೈತ ದೊಳಗೆ ಧ್ವೈತ ದ ರಾಜಕೀಯವಿದ್ದರೆ  ಬೇರೆ ಹೇಗೆ?
ಪ್ರಜಾಪ್ರಭುತ್ವದ  ದೇಶದಲ್ಲಿ  ಪ್ರಜೆಗಳಾದವರು ದೇಶರಕ್ಷಣೆ ಮಾಡಬೇಕೆ ಅಥವಾ ದೇಶವೇ ಪ್ರಜೆಗಳನ್ನು ರಕ್ಷಣೆ ಮಾಡಬೇಕೆ?. ಆತ್ಮರಕ್ಷಣೆಗಾಗಿ  ಜೀವ ಪ್ರಾಣ ಬಿಟ್ಟಿರುವ  ದೇಶಭಕ್ತರಲ್ಲಿ   ಮತ ಜಾತಿ ಧರ್ಮದ ಅಂತರವಿತ್ತೆ?
ಈಗಿದೆ ಎಂದರೆ  ನಾವು ದೇಶಭಕ್ತರಾಗಬಹುದೆ? ದೇವರು ಇರೋದೆಲ್ಲಿ ಹೊರಗೋ ಒಳಗೋ? ದೈವತ್ವದ. ಶಿಕ್ಷಣ ಕೊಡಲು ಸರ್ಕಾರ ಬೇಕೆ? ಒಟ್ಟಿನಲ್ಲಿ ನಮ್ಮ ಈ ಅಂತರಕ್ಕೆ ಕಾರಣವೇ ಅತಿಯಾದ ಸ್ವಾರ್ಥ ಅಹಂಕಾರ ದ  ಅಜ್ಞಾನ.
ಮಾನವನ‌ಹಿತ ಶತ್ರುಗಳೇ ಒಳಗಿರುವ ಸ್ವಾರ್ಥ ಅಹಂಕಾರ ಎನ್ನುವರು. ಈ ಶತ್ರುಗಳು ತತ್ವದೆಡೆಗೆ ನಡೆಸದೆ ತಂತ್ರದೆಡೆಗೆ ಹೊರಗೆ  ನಡೆಸಿ ಆಳುತ್ತವೆ  ಹೀಗಿರುವಾಗ ಹೊರಗಿನ ಶತ್ರು
ಒಳಗಿನ ಶತ್ರುಗಳು ಒಂದಾಗಿ  ವಿಶ್ವ ವೇ ನಮ್ಮದು ಎಂದರೆ ಸತ್ಯವಿರದು. ಸೃಷ್ಟಿ ಸ್ಥಿತಿ ಲಯಗಳನ್ನು  ತಡೆದವರಿಲ್ಲ.‌ಇದರಲ್ಲಿ ಅಂತರವೂ ಇರಲಿಲ್ಲ. ಆದರೂ ಮಾನವ ಬ್ರಹ್ಮ ವಿಷ್ಣು ಮಹೇಶ್ವರರ ನಡುವೆ ಅಂತರ ಸೃಷ್ಟಿ ಮಾಡಿಕೊಂಡು ಜನರನ್ನು ಆಳುತ್ತಿರೋದರಿಂದ ಅಂತರದಲ್ಲಿ  ಮಧ್ಯವರ್ತಿಗಳು  ನಿಂತು ಆಳುತ್ತಿರುವುದಾಗಿದೆ. ಆಳುವವರೂ ಆಳಾಗಿ‌ ಜನಿಸಲೇಬೇಕು.ವಿಧಿನಿಯಮ ಮೀರಿ  ಯಾರೂ ನಡೆಯಲಾಗದು.
ನಮ್ಮನ್ನು ನಾವು ಆಳಿಕೊಳ್ಳಲು ಕಷ್ಟಪಡುವ ನಮಗೆ ಅನ್ಯರನ್ನು ಅಸತ್ಯ ಅಧರ್ಮ ಅನ್ಯಾಯದಿಂದ ಆಳಲು ಹೊರಟವರ ವಿನಾಶ ನಿಶ್ಚಿತ. 

Friday, May 8, 2026

ಬ್ರಹ್ಮಜ್ಞಾನ= ಬ್ರಾಹ್ಮಣ?

🚩🔯🌸🌄⚛🌅🌸

*ಸಂಸಾರಜಸುಖಾಸಕ್ತಂ*
*ಬ್ರಹ್ಮಜ್ಞೋಸ್ಮೀತಿ ವಾದಿನಮ್ |*
*ಕರ್ಮಬ್ರಹ್ಮೋಭಯಭ್ರಷ್ಟಂ*
*ಸಂತ್ಯಜೇದಂತ್ಯಜಂ ಯಥಾ ||*
(ಗರುಡಪುರಾಣ)

"ನಾನು ಬ್ರಹ್ಮಜ್ಞಾನಿ"ಯೆಂದು ಹೇಳಿಕೊಳ್ಳುತ್ತ ಸಂಸಾರಸುಖದಲ್ಲಿ ಆಸಕ್ತನಾದವನು ಕರ್ಮ ಮತ್ತು ಬ್ರಹ್ಮ ಇವೆರಡನ್ನೂ ಅರಿಯದ ಭ್ರಷ್ಟ. ಅವನನ್ನು ನೀಚನೆಂದು ವರ್ಜಿಸಬೇಕು.
ಜನ್ಮದಿಂದ ಯಾರೂ ಬ್ರಹ್ಮನನ್ನು  ಅರಿಯುವುದಿಲ್ಲ. ಜ್ಞಾನದಿಂದ  ಅರಿಯಬಲ್ಲ.ಯಾವುದೇ ವ್ಯಕ್ತಿಯ ಕುರಿತು  ವಿಷಯವನ್ನು  ತಿಳಿಯುವುದರಿಂದ ಏನೂ ಅರ್ಥ ವಾಗದು. ಅಂತಹ ವ್ಯಕ್ತಿತ್ವ  ನಮ್ಮೊಳಗೆ ಇದ್ದಾಗಷ್ಟೆ ಅರಿವಿಗೆ ಬರುತ್ತದೆ. ಪ್ರತಿಯೊಂದು ವ್ಯಕ್ತಿಯೂ  ಬೇರೆ ಬೇರೆ ಇದ್ದರೂ ಒಳಗಿನ ಶಕ್ತಿಯ ಮುಂದೆ ಎಲ್ಲಾ ಒಂದೇ ಎನ್ನುವ ತತ್ವಜ್ಞಾನವನ್ನು ತಂತ್ರವಾಗಿಸಿದರೆ  ಸತ್ಯವಿರದು. ಸ್ವತಂತ್ರ  ನಮ್ಮ ಆತ್ಮಜ್ಞಾನದಿಂದ ಬೆಳೆದರೆ  ಬ್ರಹ್ಮಾಂಡದ ಒಂದು ಅಣುವಿನಲ್ಲಿರುವ ಜ್ಞಾನ  ನಮ್ಮೊಳಗೆ ಇಲ್ಲವಲ್ಲ ಎನ್ನುವ ಸತ್ಯವರಿತು ಅಹಂಕಾರ ಅಳಿಯುತ್ತದೆ.

ಬ್ರಾಹ್ಮಣರು ರಾಜಕೀಯ‌ನಡೆಸಬಾರದೆ? ನಡೆಸೋದರಿಂದ ಏನಾಗುತ್ತದೆ?
ಬ್ರಾಹ್ಮಣ ಎನ್ನುವ ವರ್ಣದ ಪ್ರಕಾರ ಬ್ರಾಹ್ಮಣರು ರಾಜಕೀಯಕ್ಕೆ ಇಳಿಯುವುದರಿಂದ‌ ಕಷ್ಟ ನಷ್ಟಗಳಾಗುತ್ತದೆ.ಆದರೆ ಇಂದು ಜಾತಿಯಾಗಿರುವಾಗ ಹಲವಾರು ಬ್ರಾಹ್ಮಣರ ಸಂಘಗಳಿವೆ  ಆ ಸಂಘಟಣೆಯ ಮೂಲ ಗುರಿ ಧರ್ಮ ರಕ್ಷಣೆಯಾಗಿದ್ದರೆ  ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆ ಯನ್ನು ಸರಿಪಡಿಸುವುದಕ್ಕೆ ರಾಜಕೀಯ ಪ್ರವೇಶ ಮಾಡುವುದು ಅಗತ್ಯವಿದೆ.ಆದರೆ  ತತ್ವಜ್ಞಾನದ ಅರಿವಿಲ್ಲದವರು ಇಳಿದರೆ ಇನ್ನಷ್ಟು ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟು ಅಧಿಕಾರ ನಡೆಸುವಂತಾಗಬಹುದು.
ಆಳೋದನ್ನು ರಾಜಕೀಯ ಎನ್ನುವರು.ಆಳಾಗಿ ದುಡಿಯೋದನ್ನು ಸೇವೆ ಎನ್ನುವರು.ಇಲ್ಲಿ ಯಾರ ಸೇವೆ ಯಾರು ಮಾಡಬೇಕೆಂಬುದರ ಅರಿವಿರೋದು ಅಗತ್ಯವಿದೆ.
ಪರಮಾತ್ಮನ ಸೇವೆ ಎಂದರೆ ಪರಮಾತ್ಮ ಎಲ್ಲೆಡೆಯೂ ಇರುವನು.‌ಧಾರ್ಮಿಕ ಸೇವೆ ಎಂದರೆ ಧರ್ಮ ಎಲ್ಲಿದೆ ಎನ್ನುವ ಅರಿವಿರಬೇಕು.
ನಿಜವಾಗಿಯೂ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆಯೆ? ಪ್ರಶ್ನೆಗೆ ಉತ್ತರ ಸಿಗೋದೆ‌ ಕಷ್ಟ.
ಪ್ರಜೆಗಳೇ‌ ದೇಶವನ್ನು ಆಳೋದಾದರೆ ಧರ್ಮ ಸತ್ಯ ಇದ್ದರೆ  ಆತ್ಮನಿರ್ಭರ. ಅಸತ್ಯ ಅಧರ್ಮ ವೇ‌ ಮರೆದರೆ ಆತ್ಮದುರ್ಭಲ.
ಇಲ್ಲಿ ಆತ್ಮ ಎಂದಾಕ್ಷಣ  ಎಲ್ಲರಲ್ಲಿಯೂ ಅಡಗಿರುವ ಆ ಶಕ್ತಿಯ ಅರಿವಿರೋದು ಬ್ರಾಹ್ಮಣರಿಗೆ ಹೀಗಾಗಿ  ಆಳುವುದು ಕಷ್ಟ. ಪರಮಾತ್ಮ ಒಬ್ಬನೇ ಎನ್ನುವ ತತ್ವದರ್ಶನ ಆದ ಮೇಲೆ ಸಂನ್ಯಾಸಿಯಾಗಿರುವರೆಂದರೆ  ಸಂನ್ಯಾಸ ಧರ್ಮ ರಾಜಕೀಯದಿಂದ ದೂರವಿರೋದು. ಈಗಿದು  ಕೆಲವರ ಹೈಟೆಕ್ ಜೀವನದತ್ತ ಸಾಗುತ್ತಿರೋದು ಕಣ್ಣಿಗೆ ಕಾಣುತ್ತಿದೆ ಎಂದರೆ ನಮ್ಮ ಸಹಕಾರವೇ ಸರಿಯಿರಲಿಲ್ಲವೆಂದರ್ಥ.
ಬ್ರಾಹ್ಮಣರಲ್ಲಿಯೂ  ಕ್ಷತ್ರಿಯರು,ವ್ಯೈಶ್ಯರು,ಶೂದ್ರರಿರುವರು.
ಧರ್ಮ ಕರ್ಮ ಕ್ಕನುಸಾರವಾಗಿ ವರ್ಣ ವಿಂಗಡಣೆಯಾಗಿತ್ತು.
ಮೇಲ್ವರ್ಗ ಎಂದರೆ ಹಣದಿಂದ ಅಳೆಯುತ್ತಿರಲಿಲ್ಲ  ಜ್ಞಾನದಿಂದ ಅಳೆಯುತ್ತಿದ್ದರು. ಬ್ರಹ್ಮಜ್ಞಾನಿಗಳಾಗೋದೆಂದರೆ ಸೃಷ್ಟಿ ಯನರಿತು ಧರ್ಮ ಸತ್ಯದೆಡೆಗೆ ನಡೆಯುವುದು.ಪರಮಾತ್ಮನ ಸೇವೆಯಲ್ಲಿ ತೊಡಗುವುದು.
ಲೋಕಕಲ್ಯಾಣಕ್ಕಾಗಿ  ಜೀವನ ನಡೆಸೋರಲ್ಲಿ ಸ್ವಯಂ ಭಗವಂತನೇ  ಇರುವುದರಿಂದ ಅಹಂ ಬ್ರಹ್ಮಾಸ್ಮಿ ಎಂದರು.ಇಲ್ಲಿ ‌ನಾನೆಂಬ ಅಹಂ ‌ಭಾವವಿರದಿದ್ದರೆ ಅದೇ ಅಧ್ವೈತ ವಾಗುತ್ತದೆ.
ಕಲಿಗಾಲದಲ್ಲಿ  ಶೂದ್ರರೆ ಹೆಚ್ಚಾಗಿರೋದು. ಇಲ್ಲಿ ಎಲ್ಲಾ ಸೇವಕರೆ ಆದರೂ ಹಣವಿದ್ದರೆ  ರಾಜ ಇಲ್ಲದಿದ್ದರೆ ಸೇವಕ ಎನ್ನುವ ಅಜ್ಞಾನ ಹೆಚ್ಚಾಗಿ ಹಣಕ್ಕಾಗಿ ಸುಜ್ಞಾನವನ್ನು ಬಿಟ್ಟು ಹೊರಬಂದವರಿಗೆ ಬ್ರಹ್ಮತತ್ವ ಕಾಣಿಸೋದಿಲ್ಲವಾದ್ದರಿಂದ ಹಿಂದಿನ ರಾಜರ ಕಾಲದಲ್ಲಿ ಬ್ರಾಹ್ಮಣರು ರಾಜಕೀಯದಿಂದ ದೂರವಿದ್ದು ಕ್ಷತ್ರಿಯ ರಿಗೆ  ಉಪದೇಶ ನೀಡುತ್ತಾ ಶಿಕ್ಷಣದ ಮೂಲಕ ಲೋಕಸೇವಾ ಕಾರ್ಯ ದಲ್ಲಿದ್ದರು. ಆದರೆ ಕಾಲಾಂತರದಲ್ಲಾದ‌ ಬದಲಾವಣೆ ವರ್ಣ ಹೋಗಿ ಜಾತಿ ಬೆಳೆಯಿತು. ಜ್ಞಾನ ಅಜ್ಞಾನದೆಡೆಗೆ ಸಾಗುತ್ತಾ  ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ಆದರೆ ಒಳಗಿದ್ದ ಆತ್ಮಜ್ಞಾನ ಎಲ್ಲಿದೆ?
ಆತ್ಮಜ್ಞಾನದಿಂದ  ಆತ್ಮನಿರ್ಭರ ಆಗುವುದಾದರೆ ಅದಕ್ಕೆ ಪೂರಕ ಶಿಕ್ಷಣ ಕೊಡಬೇಕಾದವರು ಯಾರು? ನಮ್ಮನ್ನು ನಾವೇ ಆಳಿಕೊಳ್ಳುವ ಸ್ವಾತಂತ್ರ್ಯ ವಿದ್ದರೂ ಜ್ಞಾನವಿಲ್ಲದೆ  ಅನ್ಯರನ್ನು ಆಳೋದರಿಂದ ಯಾವುದೇ ಧರ್ಮ ರಕ್ಷಣೆ ಆಗದು.ಇದು ಸರ್ವ ಕಾಲಿಕ ಸತ್ಯವಾಗಿದೆ.
ಎಷ್ಟೋ ಮಹಾರಾಜರು ಈ ಭರತ ಭೂಮಿಯನ್ನು ಆಳಿದ್ದಾರೆ.ಆದರೆ ಅವರಲ್ಲಿದ್ದ ಕ್ಷಾತ್ರ ಗುಣಜ್ಞಾನ ಇಂದಿನ ರಾಜಕಾರಣಿಗಳಲ್ಲಿ ಇದೆಯೆ?
ಜೀವ ಉಳಿಸಿಕೊಳ್ಳಲು ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟು ದೇಶ ಆಳಲು ಬಿಟ್ಟವರು ಯಾರು? ಎಲ್ಲದ್ದಕ್ಕೂ ನಮ್ಮ ಅಜ್ಞಾನ ಕಾರಣವಾದಾಗ ಅದನ್ನು  ಸರಿಪಡಿಸದ ಹೊರತು  ನಮ್ಮ ಬ್ರಹ್ಮತತ್ವಕ್ಕೆ ಬೆಲೆಯಿರದು.
ಧಾರ್ಮಿಕ ಕ್ಷೇತ್ರ ನಡೆದಿರೋದೆ ಪ್ರಜೆಗಳ ಹಣದಿಂದ. ಅವರ ಮಕ್ಕಳಿಗೆ ಸುಜ್ಞಾನ ನೀಡುವುದು ಧರ್ಮ. ಆದರೆ ಧಾರ್ಮಿಕ ಕ್ಷೇತ್ರ,ಶಿಕ್ಷಣ ಕ್ಷೇತ್ರ ಸಾಹಿತ್ಯ ಕ್ಷೇತ್ರಗಳು ಒಂದರ‌ಮುಖ ಇನ್ನೊಂದು ನೋಡದೆ ರಾಜಕೀಯ ಕ್ಷೇತ್ರವನ್ನು  ಅನುಸರಿಸಿದರೆ  ಏನರ್ಥ?
ಬೇಲಿಯೇ ಸರಿಯಿಲ್ಲದಿದ್ದರೆ ಹೊಲ‌ಮೇಯುವವರನ್ನು ಯಾರು ತಡೆಯಬಹುದು? ಎಲ್ಲದ್ದಕ್ಕೂ ಮೂಲ ಸರಿಯಿದ್ದರೆ ರೆಂಬೆಕೊಂಬೆಗಳು ಗಟ್ಟಿಯಾಗುತ್ತದೆ. ಮೂಲವೇ  ಗಟ್ಟಿಯಿರದೆ  ಯಾವುದೂ ನೆಟ್ಟಗಿರದು. ಇಲ್ಲಿ  ಬ್ರಾಹ್ಮಣ ಎಂದರೆ ವ್ಯಕ್ತಿಯಾಗಿರೋದಿಲ್ಲ.ನಮ್ಮಲ್ಲಿನ ಆತ್ಮಜ್ಞಾನದ ಶಕ್ತಿ.
ಆಧ್ಯಾತ್ಮ ಎಂದರೆ ಆದಿ ಆತ್ಮ.ಮೊದಲು ಆತ್ಮಾವಲೋಕನ ನಂತರ ವಿಜ್ಞಾನ. ಈಗ ಶಿಕ್ಷಣವೇ ಮೊದಲು ವಿಜ್ಞಾನ ವಾಗಿ ಹೊರಜಗತ್ತಿನೆಡೆಗೆ ಸಾಗುತ್ತಿದೆ. ಎಷ್ಟು ಎತ್ತರಕ್ಕೆ ಏರಿದರೂ ನಿರಾಕಾರ ಬ್ರಹ್ಮನ ಕಾಣೋದಿಲ್ಲ. ಇದಕ್ಕಾಗಿ ಆಳವಾಗಿರುವ ಸತ್ಯ ಧರ್ಮ ದೊಳಗೆ ಹೊಕ್ಕಿ ನೋಡುವ‌ ಶಕ್ತಿ ನಮಗಿದ್ದರೆ ರಾಜಕೀಯದಿಂದ ದೂರವಿದ್ದವರಿಗೆ ಇದರ ಅರಿವಾಗಿರೋದು ಅರ್ಥ ವಾಗುತ್ತದೆ.
ಕೆಲವರು ನಾವು ರಾಜಕೀಯದಿಂದ ದೂರವಿದ್ದೇವೆ ಎಂದು ಜನರ ಮಧ್ಯೆ ನಿಂತು ಪ್ರಚಾರ ಮಾಡುವರು.ಆದರೆ ಜನ ರಾಜಕೀಯದ ಹಿಂದೆ ನಡೆದು ಹಣಗಳಿಸಿ  ಕೊಡುತ್ತಿರುವಾಗ ರಾಜಕೀಯದಿಂದ ದೂರವಿರೋದು ಅಸತ್ಯವಾಗುತ್ತದೆ. ಹಣವಿಲ್ಲದೆ ಯಾರೂ ಜೀವನ‌ನಡೆಸಲಾಗದು. ಆದರೆ ಇದು ಸ್ವಂತ ಪರಿಶ್ರಮದಿಂದ ಗಳಿಸಿ ಸುಜ್ಞಾನದಿಂದ ಬಳಸಿದರೆ ಧರ್ಮ ವಾಗುತ್ತದೆ. ಭ್ರಷ್ಟ ದುಷ್ಟರಿಗೆ ಆಶೀರ್ವಾದ ಮಾಡಿದರೆ  ಅವರು ಬೆಳೆಯುವುದಿಲ್ಲವೆ?
ಮಹಿಳೆ ಮಕ್ಕಳ ಹಣವನ್ನೂ ಬಿಡದೆ  ಸಂಸಾರ ನಡೆಸುವವರಿಗೆ ಏನೆನ್ನಬೇಕೋ? ಒಟ್ಟಿನಲ್ಲಿ ಹೊರಗಿನ ಆಸೆ ಆಕಾಂಕ್ಷೆಗಳನ್ನು  ತೀರಿಸಿಕೊಳ್ಳಲು ಬ್ರಹ್ಮತತ್ವವನ್ನು ದುರ್ಭಳಕೆ ಮಾಡಿಕೊಂಡಷ್ಟೂ  ಆತ್ಮದುರ್ಭಲ ವಾಗುತ್ತದೆ.
ದೇವನೊಬ್ಬನೇ ‌ನಾಮ‌ಹಲವು ಹಾಗೆ ದೇಶ ಒಂದೇ ಎನ್ನುವ ಸಾಮಾನ್ಯ ಜ್ಞಾನವಿದ್ದರೆ ಆ ಒಂದೇ ಶಕ್ತಿಯನ್ನು ಅಂತರಂಗ ಶುದ್ದಿಯಿಂದ ಕಾಣಬಹುದು. ಅಂತರ ಬೆಳೆಸಿಕೊಂಡು ಆಳುತ್ತಾ ಹೋದರೆ  ಅತಂತ್ರ ಜೀವನವಾಗನಡೆದಾಗಲೇ
ವಾಸ್ತವ ಸತ್ಯ ಕಣ್ಣಿಗೆ ಕಾಣುತ್ತದೆ ಹಿಂದಿನ ಸತ್ಯ ಮುಂದಿನ ಸತ್ಯ ಕಾಣೋದಿಲ್ಲ. ವಾಸ್ತವವರಿತು  ಸತ್ಯ ತಿಳಿದು  ನಡೆದಾಗಲೇ ಮುಂದಿನ ಭವಿಷ್ಯ ಉತ್ತಮವಿರುತ್ತದೆ.‌ ಕೇವಲ ಹಿಂದಿನದ್ದೇ ಪ್ರಚಾರ ಮಾಡಿದರೂ ಕಷ್ಟ ಭವಿಷ್ಯ ಹೇಳುತ್ತಾ ಕುಳಿತರೂ ನಷ್ಟ.
ಬ್ರಾಹ್ಮಣ ಎನ್ನುವ ಪದವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಹೋದರೆ ಜೀವನ್ಮುಕ್ತಿ ಸಿಗದು. ಬ್ರಾಹ್ಮಣ ದೇವರ ಸಮಾನ ದೈವತ್ವದೆಡೆಗೆ ಹೋದವರು ಬ್ರಹ್ಮತತ್ವವನರಿತರು. ಇಲ್ಲಿ ಜಾತಿ ಇರಲಿಲ್ಲ. ಸಾತ್ವಿಕ ಧರ್ಮ ಕರ್ಮ

Sunday, May 3, 2026

ಪ್ರಜಾಪ್ರಭುತ್ವದ ಸಮಾನತೆ ಆಧ್ಯಾತ್ಮವಾಗಬೇಕಿತ್ತು

ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ. ಬಡತನವೆನ್ನುವುದು  ಶಾಪವೋ ವರವೋ ಎಂದರೆ ಜ್ಞಾನವಿದ್ದವರಿಗೆ ಇದು ವರ.ಅಜ್ಞಾನಿಗಳಿಗರ ಶಾಪ. ಆ ಶಾಪದಿಂದ ಮುಕ್ತಿ ಕೊಡುವುದು ಗುರು.ಜ್ಞಾನದ ಶಿಕ್ಷಣ‌ನೀಡಿ ಸ್ವತಂತ್ರ ವಾಗಿ ಜೀವನ‌ನಡೆಸುವಂತೆ ಮಾಡುವುದೇ ಗುರು. 
ಹೀಗಾಗಿ  ಮಾನವ ಮಹಾತ್ಮನಾಗಬೇಕಾದರೆ ಕಷ್ಟಪಟ್ಟು ಆತ್ಮ ಪರಮಾತ್ಮನೆಡೆಗೆ ಸಾಗಬೇಕಿದೆ.ಅಂತರಂಗಶುದ್ದಿಯ ನಂತರವೇ ಬಹಿರಂಗ ಶುದ್ದಿ ಸಾಧ್ಯ.
ಇದಕ್ಕೆ ಮೊದಲ ಗುರುವಾಗಿರುವ ತಾಯಿಯ ಸುಜ್ಞಾನವೇ‌ಮಕ್ಕಳ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಡಲು ಸಾಧ್ಯ.ಯಾವಾಗ ತಾಯಿಯಲ್ಲಿಯೇ ಅಜ್ಞಾನವಿರುವುದೋ ಹೊರಗಿನ ಗುರುಗಳ ಆಶ್ರಯ ಅಗತ್ಯವಾಗುತ್ತದೆ. ಹೊರಗಿನ ಗುರುವೂ  ಹೊರಗಿನ ರಾಜಕೀಯದೊಳಗಿದ್ದರೆ ಗುರಿ ತಲುಪಲಾಗದು. ಒಟ್ಟಿನಲ್ಲಿ  ಹಣದಿಂದ ಗುರುವನ್ನು ಗುರುತಿಸೋದೆ ಅಜ್ಞಾನ.

ವಿಶ್ವರೂಪ ದರ್ಶನದಲ್ಲಿ ನಾವು ದೇವನೊಬ್ಬನೆ ನಾಮಹಲವು ಎನ್ನುವುದನ್ನು ಅರಿಯಬಹುದಷ್ಟೆ.ಅದೇ ವಾಸ್ತವಕ್ಕೆ ಬಂದರೆ ದೇಶ ಒಂದೇ ಪ್ರಜೆಗಳು ಹಲವು,  ದೇಶ ಒಂದೆಧರ್ಮ  ಹಲವು, ದೇಶ ಒಂದೇ ಶಿಕ್ಷಣ ಹಲವು ದೇವರೊಂದೆ ದೇವಸ್ಥಾನ ಹಲವು, ದೇಶ ಒಂದೇ ಪಕ್ಷ ಹಲವು...ಕೊನೆಯ ಪಕ್ಷಪಾತ ಎಲ್ಲಾ ಹಲವುಗಳಲ್ಲಿ ರಾಜಕೀಯವಾಗಿ ಬೆಳೆಸಿಕೊಂಡು ಹೊರಬಂದಾಗ ರಾಜಯೋಗದ ಅರಿವಿಲ್ಲದೆ ಜೀವನ ರಾಜಕೀಯದ ವಶವಾಗಿ ಛಿದ್ರ ಛಿದ್ರವಾಗುತ್ತದೆ.
ಇದನ್ನು ಒಂದು ಮಾಡೋದೆ ತತ್ವಜ್ಞಾನದ ಉದ್ದೇಶ ವಾಗಿತ್ತು.ಈಗಿದು ತಂತ್ರದೆಡೆಗೆ ನಡೆಯುತ್ತಾ ಅತಂತ್ರಸ್ಥಿತಿಗೆ ಮನುಕುಲವನ್ನು  ನಡೆಸುತ್ತಿದೆ ಎಂದರೆ ಇದಕ್ಕೆ ಸಹಕಾರ ನೀಡಿರುವ ನಮ್ಮ ಅಜ್ಞಾನವೇ ಕಾರಣ.ಅಜ್ಞಾನಕ್ಕೆ ವೈಜ್ಞಾನಿಕ ಶಿಕ್ಷಣದ ಅರ್ಧ ಸತ್ಯವೇ ಕಾರಣ. ಅಸತ್ಯದೊಳಗೆ ಸತ್ಯವಿತ್ತು. ಅಧರ್ಮದೊಳಗೇ ಧರ್ಮ ಸಿಲುಕಿತ್ತು, ಅಜ್ಞಾನವನ್ನು ಜ್ಞಾನವೆಂದು ನಂಬಿಸಲಾಗಿತ್ತು. ವಿದೇಶದೊಳಗೇ ದೇಶವನ್ನು  ಹೊರಗಿನವರು ಬೆಳೆಸುತ್ತಾ ಮೂಲವನರಿಯದೆ ಗುರುವನ್ನು ಹೊರಗಿನಿಂದ  ಹುಡುಕಿ ಹೊರಟವರಿಗೆ ಒಳಗಿದ್ದ ಗುರುವಿನ ಅರಿವಿಲ್ಲದೆ  ಅಂತರ ಬೆಳೆಯಿತು.ಇದೇ ಧರ್ಮಾಂತರ, ಜಾತ್ಯಾಂತರ, ಮತಾಂತರ, ಪಕ್ಷಾಂತರವಾಗಿ ದೇಶಾಂತರ ಹೋದರೆ ಪ್ರಗತಿ ಎನ್ನುವ  ರಾಜಕೀಯಶಕ್ತಿಯ ಹಿಂದೆ ಹೊರಟರೆ ಅಧೋಗತಿ ಎನ್ನುವುದು ವಾಸ್ತವದಲ್ಲಿ ಸರಿಯಾಗಿ ಕಾಣುತ್ತಿದೆ. ಆದರೂ ಅದೇ ಗುರು ಅದೇ ಶಿಕ್ಷಣ ಅದೇ ರಾಜಕೀಯ  ಜನ್ಮಜನ್ಮಾಂತರಕ್ಕೆ ಕಾರಣವಾಗಿದೆ.ಕಲಿಯುಗ ಕಲಿಕೆ ಒಳಗಿನ ಗುರುವಿನತ್ತ ಸಾಗಿದಾಗಲೇ ಗುರಿ ತಲುಪಬಹುದು. ಏನಂತೀರ?

ಅಂತರಂಗದಲ್ಲಿನ ಗುರು ಬಹಿರಂಗದ ಗುರುವಿನೊಂದಿಗೆ ಬೆರೆತಾಗಲೇ ಗುರಿತಲುಪಲಾಗುವುದು. ಇದರಲ್ಲಿ ಮೂರು ವರ್ಗದವರಿರುವರು, ದೈವಗುರು,ಮಾನವಗುರು,ಅಸುರಗುರು, ಯಾರಲ್ಲಿ ದೈವಗುಣವಿರುವುದೋ ಅವರು ದೇವಗುರುಗಳನ್ನು ಆಶ್ರಯಿಸುವರು,ಮಾನವೀಯ ಗುಣವಿದ್ದವರು ಮಾನವೀಯತೆಗೆ ಬೆಲೆಕೊಡುವರು,ಅಸುರಗುಣವಿದ್ದವರಲ್ಲಿ ಅಜ್ಞಾನವೇ ಹೆಚ್ಚಾಗಿದ್ದು ಅಸುರಿಶಕ್ತಿಯ ವಶವಾಗಿರುವರು.
ಮಾನವ ಮಧ್ಯವರ್ತಿ. ಮೊದಲು ಮಾನವನಾಗಿ ನಂತರ ದೈವತ್ವದ ಕಡೆಗೆ ಹೊರಡಬೇಕು.ಯಾವಾಗ ಮೊದಲೇ ಹೊರಗಿನ ರಾಜಕೀಯ ಶಕ್ತಿಯೆಡೆಗೆ ನಡೆಯುವನೋ ಅವನಿಗೆ ತಾನೇ ಪರರ ವಶದಲ್ಲಿರುವ ಸತ್ಯ ತಿಳಿಯದೆ ಹೋಗುತ್ತದೆ. ರಾಜಕೀಯದಲ್ಲಿ ಸತ್ಯ ಧರ್ಮ  ಇರದು.
ಗುರು ವ್ಯಕ್ತಿಯಲ್ಲ ಆತ್ಮಶಕ್ತಿಯಾಗಿದೆ. ಕಣ್ಣಿಗೆ ಕಾಣದ ಶಕ್ತಿಯನ್ನು  ಅನುಭವಿಸಿಯೇ ತಿಳಿದು ನಡೆದವರು ಗುರುವಾದರು. ಇದರಲ್ಲಿ ಮೇಲಿನ ದೈವ ಮಧ್ಯೆ ದ ದೇವರು ಕೆಳಗಿನ ದೇವರೆಂದು  ಮಾನವನೇ ಸೃಷ್ಟಿ ಮಾಡಿಕೊಂಡು  ಆಳುತ್ತಿರುವನಷ್ಟೆ. ಅಳುವವರು ಯಾರು? ಪ್ರಜಾಪ್ರಭುತ್ವದಲ್ಲಿ ರಾಜರು ಎಲ್ಲಿರುವರು? ನಾವ್ಯಾರ ಸೇವಕರು? ಪರಮಾತ್ಮನ ಸೇವಕರೆ ಪರಕೀಯರ ಸೇವಕರೆ?
ಪರಕೀಯರ ಸೇವಕರಿಗೆ ಹಣ ಸಿಗುತ್ತದೆ ಜ್ಞಾನ ಮಾರಾಟವಾಗಿರುತ್ತದೆ. ಪರಮಾತ್ಮನ ಸೇವಕರಿಗೆ ಹಣವಿಲ್ಲದೆಯೇ ಜ್ಞಾನೋದಯವಾಗಿರುತ್ತದೆ. ಮಧ್ಯೆ ನಿಂತಿರುವ ಮಾನವನಿಗೆ ಈ ಕಡೆ ಹಣ ಇನ್ನೊಂದು ಕಡೆ ಜ್ಞಾನವಿಜ್ಞಾನ ಕುಣಿಸುತ್ತಿದೆ. ಇದನ್ನರಿತರೆ  ಧರ್ಮ ನಮ್ಮ ಹತ್ತಿರವೇ ಇದ್ದರೂ  ನಾವೇ ನೋಡದೆ ಹೊರಗೆ ನೋಡುತ್ತಿರುವುದು ಸ್ಪಷ್ಟವಾಗಿ ಅರ್ಥ ವಾಗುತ್ತದೆ.
ಸಂನ್ಯಾಸಿಯಾಗಿದ್ದು ತಿಳಿಸುವ ಸತ್ಯ ಸಂಸಾರಿಗಳಿಗೆ ಅರ್ಥ ಆಗದು. ಹಾಗೆ ಸಂಸಾರದೊಳಗಿಳಿದು ಸಂನ್ಯಾಸಿಗಳಂತೆ ಬದುಕಿದರೂ  ಸಮಾಜ ಕೇಳದು. ಅವರವರ ಮನಸ್ಥಿತಿ ಪರಿಸ್ಥಿತಿ  ಜ್ಞಾನದ ಮೇಲೇ ನಿಂತಿದ್ದರೂ ಜ್ಞಾನದ ಶಿಕ್ಷಣ ಕೊಡದೆ ಜನರನ್ನು ಆಳೋದರಿಂದ ಧರ್ಮ ರಕ್ಷಣೆ ಆಗದು. ಜನಬಲ ಹಣಬಲವೆಲ್ಲವೂ ಗುರುವಿನಲ್ಲಿದ್ದರೂ  ಜ್ಞಾನದಾಸೋಹವಾಗದಿದ್ದರೆ ಧರ್ಮ ಉಳಿಯದು.
ಸತ್ತವರಿಗೆ ಹಣ ಕೊಡುವ‌ಬದಲು ಇದ್ದವರಿಗೆ ಜ್ಞಾನಕೊಟ್ಟರೆ  ಉತ್ತಮ ಬದಲಾವಣೆ ಸಾಧ್ಯವಿದೆ. 
ಭಾರತ ವಿಶ್ವಗುರು ಹಿಂದೆ ಆಗಿತ್ತು.ಈಗ ವಿಶ್ವದ ಎಲ್ಲಾ ರೀತಿಯ ಶಿಕ್ಷಣ ದೇಶದಲ್ಲಿದೆ ಆದರೆ  ಜನರಲ್ಲಿ ಅಧ್ಯಾತ್ಮ ಶಿಕ್ಷಣದ ಕೊರತೆಯಿದೆ. ಇದಕ್ಕೆ  ಕಾರಣವೇ  ಒಳಗಿದ್ದ ಗುರುವನ್ನು ಮರೆತು ಹೊರಗೆ ನಡೆದಿರೋದು.
ಮನೆ ಮನೆ ಗುರುಕುಲವಾಗಿತ್ತು.ತಾಯಿಯೇ ಮೊದಲ ಗುರುವಾಗಿದ್ದಳು .ಈಗ ಎಲ್ಲಾ ಹೊರಗೆ ಬೆಳೆದಿದೆ.ಮನೆ ಖಾಲಿಸ್ಥಾನ ವಾಗುತ್ತಿದೆ  ಎಂದರೆ  ಅರಿವಿನಕೊರತೆ ಒಳಗಿದೆ.

ಪುರಾಣ ಇತಿಹಾಸದ ಕಾಲ ಹಿಂದೆ ಧರ್ಮ ಸೂಕ್ಮದ ಜೊತೆಗೆ ಸತ್ಯವಿತ್ತು. ಈಗ ಧರ್ಮ ವೂ ಇಲ್ಲ ಸತ್ಯವೂ ಇಲ್ಲ ಎಲ್ಲಾ ಹೊರಮುಖವಾಗಿ ವ್ಯವಹಾರಕ್ಕೆ ಇಳಿದಿವೆ. ಹಣದಿಂದ  ಗುರುವಾಗಬಹುದೆ? 

ಶ್ರೀ ಕೃಷ್ಣ ಪರಮಾತ್ಮ ತಿಳಿಸಿದಂತೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಕಾಯೋನು ಒಳಗೇ ಅಡಗಿಕುಳಿತಿದ್ದರೂ ಹೊರಗಿನವರ ಹಿಂದೆ ಹೋದರೆ  ಅನರ್ಥ.
ಎಷ್ಟೋ ಬಡವರ ಹಣವನ್ನು  ಯಾರೋ ಶ್ರೀಮಂತ ರಿಗೆ ಹಂಚಿದರೆ  ಅಧರ್ಮ ವಷ್ಟೆ.
ಜ್ಞಾನವನ್ನು ಹಣದಿಂದ ಅಳೆಯುವುದೇ ಅಜ್ಞಾನ. ಸರಸ್ವತಿಯನ್ನು ಲಕ್ಮಿ ಯಂತೆ ವೈಭೋಗದಲ್ಲಿ  ಕಾಣುವುದೇ ಅಜ್ಞಾನ. ಹೊರಗೆ ತಳುಕುಬಳುಕು ಒಳಗೇ ಹುಳುಕು.
 ಯಾತ್ರಾಸ್ಥಳ ವನ್ನು ಪ್ರವಾಸಿತಾಣ ಮಾಡಿ ರಾಜಕೀಯ ನಡೆಸಬಹುದಷ್ಟೆ ಜನರಿಗೆ ಜ್ಞಾನ ಬರೋದಿಲ್ಲ.ಭಕ್ತಿಯೂ ಬರೋದಿಲ್ಲ ಕಾರಣ ವ್ಯವಹಾರದಲ್ಲಿ  ಹಣವೇ ಸರ್ವಸ್ವ. 
ಜೀವನ‌ನಡೆಸಲು ಹೆಣವನ್ನೂ ಮಾರುವ  ವ್ಯವಹಾರ ಕಲಿಕೆಯಲ್ಲಿಯೇ ಅಡಗಿ ಕಲಿಯುಗದ  ಶಿಕ್ಷಣದಾರಿತಪ್ಪಿದ ಹಳಿಯಾಗುತ್ತಿದೆ. ರೈಲು  ಹೊರಗೆ ಓಡಿದರೂ  ಒಳಗಿದ್ದ ಕೊಂಡಿ ಕಳಚಿದರೆ ಅಪಘಾತ ತಪ್ಪಿದ್ದಲ್ಲ. ಹಾಗೆ  ಸಂಸಾರದಲ್ಲಿ  ಒಳಗಿನ ಋಣ ತೀರಿಸದೆ ಹೊರಗೆ ಋಣ ಬೆಳೆದಂತೆಲ್ಲಾ  ಜೀವನ ರಣಾಂಗಣವಾಗುತ್ತದೆ.
ಇದಕ್ಕೆ ಕಾರಣವೇ  ಆ ಋಣ.ಋಣಭಾರ ಹೆಚ್ಚಾದಂತೆ ಆತ್ಮರಕ್ಷಣೆ ಕಷ್ಟ. ಅಂತರದಲ್ಲಿ ಮಧ್ಯವರ್ತಿಗಳು ನಿಂತು ತಮ್ಮ  ಜೀವನದ ಜೊತೆಗೆ ಪರರ ಜೀವನವನ್ನು ಹಾಳು ಮಾಡಿದರೂ ಕೇಳೋರಿಲ್ಲ. ಮಾನವನೊಳಗೆ ಇರುವ‌ ದೇವಾಸುರರ  ಶಕ್ತಿಯನ್ನು  ಗುರುತಿಸಿ ದೈವಶಕ್ತಿಗೆ ಸರಿಯಾದ ಶಿಕ್ಷಣ ಕೊಟ್ಟರೆ  ಮೇಲ್ಮಟ್ಟದ ಅಧ್ಯಾತ್ಮ ಚಿಂತನೆ ಯಿಂದ ಸತ್ಯ ತಿಳಿಯುತ್ತದೆ. ಕೆಳಗಿನವರಿಗೆ ಸಹಕರಿಸಿದಷ್ಟೂ ಇನ್ನಷ್ಟು ಭ್ರಷ್ಟ ದುಷ್ಟರು ಬೆಳೆದು  ದೇವತೆಗಳನ್ನು ಆಳುವರು.
ಬ್ರಹ್ಮಜ್ಞಾನವನ್ನು ಓದಿ ತಿಳಿಯುವುದೇ  ಬೇರೆ  ಅನುಭವಿಸಿ ತಿಳಿದು ತಿಳಿಸಿ ನಡೆಸೋದೇ ಬೇರೆ. ಸ್ವತಂತ್ರ ಭಾರತದಲ್ಲಿ ಭಾರತೀಯರಿಗೇ ಸ್ವತಂತ್ರ ವಿಲ್ಲವಾದರೆ ಪರಕೀಯರ ವಶದಲ್ಲಿ  ದೇಶವಿದೆ ಎಂದರ್ಥ .ಇದಕ್ಕೆ ಕಾರಣಪ್ರಜಾ ಸಹಕಾರ. ನಿಮ್ಮ ನಿಮ್ಮ ಮನೆಯ ಮನವ ತನುವ ಜೀವದ ಹೊಣೆಗಾರಿಕೆ ನಿಮ್ಮದೇ ಜ್ಞಾನದೊಳಗಿದೆ ಎಂದರು ಮಹಾತ್ಮರು ಗುರುಗಳು.‌ಈಗ‌ಹೇಗಿದೆ ನಮ್ಮ ಜ್ಞಾನ.ಎತ್ತ ಸಾಗಿದೆ‌  ಜ್ಞಾನ,?
ಸಾಮಾನ್ಯಜ್ಞಾನ ವಿಲ್ಲದೆ ವಿಶೇಷಜ್ಞಾನ ಬೆಳೆಸಿದರೆ ಆಗೋದೆ ಹೀಗೆ.
ಭೂ ತತ್ವ ತಿಳಿಯದೆ ಆಕಾಶದೆತ್ತರ ಹಾರಿದರೆ ಆಗೋದೆ ಹೀಗೆ.
ಒಟ್ಟಿನಲ್ಲಿ ಎಲ್ಲರಲ್ಲಿಯೂ ಬ್ರಹ್ಮನಿದ್ದಾನೆ  ಬ್ರಹ್ಮಜ್ಞಾನವೂ ಅಡಗಿದೆ ಆದರೆ ಅದನ್ನು  ಎಲ್ಲಾ ಗುರುಗಳೂ ಬೆಳೆಸಲಾಗಿಲ್ಲ.
ಸ್ವಾಗತಭಾಷಣ ಕೇವಲ ಸ್ವಾರ್ಥ ಕ್ಕೆ ಸೀಮಿತವಾದರೆ ಉಪನ್ಯಾಸ ಅನರ್ಥ ವಾಗಿರುತ್ತದೆ. ಕೊನೆಯ  ವಂದನಾರ್ಪಣೆ ಕಾಟಾಚಾರವಾಗಿ  ಸಾವನ್ನು ಅಪಾರ್ಥ ಮಾಡಿಕೊಂಡು  ವಿಜೃಂಬಿಸುವ  ಅಶಾಂತಿಯೆಡೆಗೆ  ಜನರನ್ನು ಹೊರಗೆಳೆಯಲಾಗುತ್ತದೆ.  ಇದ್ದಾಗ  ಕೊಡದ ಗೌರವ ಸತ್ತ ಹೆಣಕ್ಕೆ ಕೊಟ್ಟರೆ ಆತ್ಮಕ್ಕೆ ತೃಪ್ತಿ ಸಿಗುವುದೆ? ಇನ್ನಷ್ಟು ಋಣ ಹೊತ್ತು  ಹೋಗುತ್ತದೆ ಅಷ್ಟೇ. 
ಇದನ್ನು  ಭಾರತೀಯರು  ಅರ್ಥ ಮಾಡಿಕೊಂಡರೆ ಸಾಕು. ಪರಮಾತ್ಮ  ಎಷ್ಟೋ ನಮಗೆ ಹತ್ತಿರವೇ ಕೊಟ್ಟಿದ್ದರೂ ದೂರದ ಬೆಟ್ಟ ನುಣ್ಣಗೆ ಕಾಣುವುದೆಂದು ದೂರ ಹೋಗಿ ಸಾಯುತ್ತಿರುವವರನ್ನು ತಡೆಯಬಹುದು.
ಸಾವು ನಿಶ್ಚಿತ ಹಾಗೆ ಜನನವೂ ಇದೆ. ಇದರ ನಡುವಿನ ಜೀವನದ ರಹಸ್ಯವನ್ನು ಹಣದಿಂದ ತಿಳಿಯಲಾಗದೆನ್ನುವುದು ಸರ್ವ ಕಾಲಿಕ ಸತ್ಯವಾಗಿದೆ. ಜ್ಞಾನಶಕ್ತಿಯನ್ನು ಯಾರೂ ಕದಿಯಲಾಗದು.ಅದನ್ನು ಹಣದಿಂದ ಖರೀದಿಸಿದರೂ ಸದ್ಬಳಕೆ ಮಾಡಿಕೊಳ್ಳದಿದ್ದರೆ ಅಜ್ಞಾನವೇ ಬೆಳೆಯೋದು.
ಹೀಗಿರುವಾಗ  ಸಾಲ ಮಾಡಿ ಮಕ್ಕಳ ತಲೆಮೇಲೆ ಏರಿಸುವ ಶಿಕ್ಷಣದ ವಿಷಯದಲ್ಲಿ ನಮ್ಮ ಜ್ಞಾನವಿದೆಯೆ? ಇದರ ಬಗ್ಗೆ ಪೋಷಕರೆ  ಒಳಗಿದ್ದು ಆತ್ಮಾವಲೋಕನ ಮಾಡಿಕೊಳ್ಳಲು ಒಳಗಿನ ಗುರುಬಲ ಅಗತ್ಯವಿದೆ. ಒಳಗೆ ಗುರುವಿಲ್ಲವಾದರೆ ಹೊರಗಿನ ಗುರು ಏನೂ ಮಾಡಲಾಗದು.

Saturday, May 2, 2026

ಅನ್ಯಮತದವರ ಜನಸಂಖ್ಯೆ ಬೆಳೆಯಲು ಕಾರಣ ಸಾಲ

ಯಾಕೆ‌ ಅನ್ಯಧರ್ಮದವರ ಸಂಖ್ಯೆ‌ದೇಶದಲ್ಲಿ ಬೆಳೆಯುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಒಂದೇ  ಸಾಲ.‌ವಿದೇಶಗಳಲ್ಲಿ ಮುಸ್ಲಿಂ  ಕ್ರಿಸ್ಟಿಯನ್  ಹಿಂದೂಗಳಿದ್ದಂತೆ ನಮ್ಮಲ್ಲೂ ಇದ್ದಾರೆ.ಆದರೆ ಇದರ ಮೂಲ ಹಿಂದೂಗಳೇ ಆಗಿದ್ದರೂ ಅವರ ಶಿಕ್ಷಣ ಮಾತ್ರ ಕೊಡದೆ ಆಳಿದವರು ಅನ್ಯರಾದರೂ ಅವರಿಗೆ ಹೆಚ್ಚಿನ ಸಹಕಾರ ಕೊಟ್ಟು ಬೆಳೆಸಿದವರು ನಮ್ಮವರೆ.
ಇದೀಗ ಜನಸಂಖ್ಯೆ ಮಿತಿಮೀರಿದ್ದರೂ ಜ್ಞಾನದಿಂದ ಹಿಂದುಳಿದವರ ಸಂಖ್ಯೆ ಇನ್ನಷ್ಟು ಬೆಳೆದಿದೆ.
ಯಾರದ್ದೋ ದುಡ್ಡು ಯಲ್ಲಮ್ಮನ‌ಜಾತ್ರೆ, ಯಾರದ್ದೋ ಶಿಕ್ಷಣ, ಧರ್ಮ ಸಂಸ್ಕೃತಿ,ವ್ಯವಹಾರ,ಬಂಡವಾಳ ತಂದು ನಮ್ಮದು ಎಂದರೆ  ಸರಿಯಾಗುವುದೆ? ಸಾಲವಾಗುತ್ತದೆ.
ಸ್ವಾವಲಂಬನೆ ಸ್ವರ್ಗ ಪರಾವಲಂಬನೆ ನರಕ ಎಂದು‌ಅನುಭವಿಗಳೇ ತಿಳಿಸಿದ್ದರೂ ಈಗಲೂ ನಾವು ವೈಜ್ಞಾನಿಕ ಪ್ರಗತಿಯತ್ತ ಪರಾವಲಂಬನೆಯ ಜೀವನ ನಡೆಸುತ್ತಾ ಒಳಗಿದ್ದ  ಮೂಲ ಜ್ಞಾನಶಕ್ತಿ ಧರ್ಮ ಕರ್ಮಕ್ಕೆ ವಿರುದ್ದ ನಡೆದರೆ  ಜೀವ ಅನ್ಯರ ವಶವಾಗೋದು ಸಹಜ.
ಇನ್ನು ಕುಟುಂಬ ವ್ಯವಸ್ಥೆ ಕಣ್ಣಿಗೆ ಕಾಣುವಂತೆ ಬೇರೆ ಬೇರೆ ಆಗುತ್ತಿದೆ. ಒಗ್ಗಟ್ಟಿನ ಮಂತ್ರ ಪ್ರಚಾರ‌ಮಾಡೋರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ ಅಂತರದ ರಾಜಕೀಯ  ಇದ್ದಾಗ ಸಾಮಾನ್ಯರ‌ಪಾಡೇನು?
ಆದರೂ ಜನರ ಮುಗ್ದತೆಯನ್ನು  ಕೆಲವರು ಸದ್ಬಳಕೆ ಮಾಡಿಕೊಂಡು  ದೈವೀಕತೆಯತ್ತ ಎಳೆದರೆ ಹಲವರಿಗೆ ದುರ್ಭಳಕೆ ಮಾಡಿಕೊಂಡರೆ ಜನಬಲ ಹಣಬಲ ಅಧಿಕಾರ‌ಬಲ ಎಲ್ಲಾ ಸಿಗುತ್ತಿದೆ. ಇದನ್ನು ಆತ್ಮನಿರ್ಭರ ಎಂದರೆ ತಪ್ಪು. ಒಟ್ಟಿನಲ್ಲಿ ಜನನ‌ಮರಣಗಳ ನಡುವಿನ ‌ಜೀವನದಲ್ಲಿ  ಧರ್ಮ ಯಾವುದು ಸತ್ಯ ಯಾವುದು ದೇವರು ಯಾರು ಅಸುರರು ಯಾರೆಂಬ ಜ್ಞಾನ ನೀಡುವುದು ನಿಜವಾದ ಗುರುಹಿರಿಯರ ಧರ್ಮ ವಾಗಿತ್ತು.
ಇರುವ‌ಮೂರು ಮತಗಳಲ್ಲಿಯ ಅಂತರದಲ್ಲಿ ಯಾವ‌ಮತದ ಜನಸಂಖ್ಯೆ ಹೆಚ್ಚಿದೆ  ಎನ್ನುವ ಬದಲಾಗಿ ಯಾವ ಮತದಿಂದ  ಲೋಕಕಲ್ಯಾಣವಾಗುತ್ತದೆ ಆತ್ಮಜ್ಞಾನ ಸಿಗುತ್ತದೆ ಜೀವನ್ಮುಕ್ತಿ ಪಡೆಯಬಹುದೆನ್ನುವ‌ ಬಗ್ಗೆ  ಜನರಲ್ಲಿ ಚಿಂತನೆ ನಡೆಸುವಷ್ಟು ಸಮಯವಿಲ್ಲದೆ ಮಹಿಳೆ ಮಕ್ಕಳೆನ್ನದೆ ಮನೆಯಿಂದ ಹೊರ ಬಂದು ಹಣ ಮಾಡುವಲ್ಲಿ  ಆಸಕ್ತಿ ಹೊಂದಿರುವುದೆ ಅಜ್ಞಾನ.
ಇಲ್ಲಿ ಹಣವಿಲ್ಲದೆ  ಜೀವನವಿಲ್ಲ.ಆದರೆ ಅದಕ್ಕಿಂತ ಮುಖ್ಯವಾದ ಸುಜ್ಞಾನವಿಲ್ಲದ ಜೀವನ ಜೀವನವೇ ಅಲ್ಲ.
ಎಲ್ಲದರಲ್ಲೂ ಅಲ್ಲನಿರೋದು ಎಂದರೆ ನಕಾರಾತ್ಮಕ ಶಕ್ತಿ ನಮ್ಮಲ್ಲಿದೆ ಎಂದರ್ಥ. ಮುಸ್ಲಿಂ ಬಾಂಧವರ  ಒಗ್ಗಟ್ಟು ಅವರ ಮತಕ್ಕೆ  ಇದ್ದಾಗ ಅಲ್ಲಿ ಅವರ ಪ್ರಗತಿ .ಹಾಗೆ ಕ್ರೈಸ್ತ ಮತವೂ ಒಂದೇ ದೇವರನ್ನು ಹಿಡಿದು  ಪ್ರಾರ್ಥನೆ ಮಾಡುತ್ತದೆ. ಆದರೆ ಹಿಂದೂಗಳು ಅಸಂಖ್ಯಾತ ದೇವತೆಗಳನ್ನು  ನೋಡುವ ದೃಷ್ಟಿ ಬದಲಾದರೆ ನಮ್ಮ ಹತ್ತಿರವೇ ದೇವರಿದ್ದರೂ ನಮಗೆ ಕಾಣದೆ ಹೊರಗೆ ನಡೆದಿರೋದರ ಸತ್ಯ ತಿಳಿಯಬಹುದಷ್ಟೆ.
ಮನೆಮನೆಯಲ್ಲಿ ದೇವರಿದ್ದರೂ ಹೊರಗೆ ಹುಡುಕೋದು.
ಮನಸ್ಸಿನಲ್ಲಿ  ತಪ್ಪು ಮಾಡುತ್ತಿದ್ದೇವೆ ಎಂದು ತಿಳಿದರೂ ತಪ್ಪು ದಾರಿಯಲ್ಲಿ ನಡೆಯೋದು
ಮಕ್ಕಳ  ಜ್ಞಾನ ಗುರುತಿಸದೆ  ಅನ್ಯಭಾಷೆಯ ಶಿಕ್ಷಣ ಕೊಟ್ಟು ಬೆಳೆಸೋದು.
ಪರಮಾತ್ಮ ಎಲ್ಲರಲ್ಲಿಯೂ ಇದ್ದಾನೆ ಎಂದು ಭಾಷಣ ಪ್ರವಚನ ಮಾಡುವವರೆ  ಸತ್ಯ ಧರ್ಮ ವರಿಯದೆ ನಡೆಯೋದು.
ಭಾರತ ವಿಶ್ವ ಗುರು ಎಂದು  ಸಾರುವವರೆ ವಿದೇಶಿ ವ್ಯಾಮೋಹಕ್ಕೆ ಒಳಗಾಗಿರೋದು.
ಅನ್ಯರ ಹಣ ಬಂಡವಾಳ ಸಾಲ‌ವ್ಯವಹಾರ ಎಲ್ಲಾ ಬೇಕು ಆದರೆ ಅವರನ್ನು ಅರ್ಥ ಮಾಡಿಕೊಳ್ಳಲು ‌ಕಷ್ಟ. ಕಾರಣ‌ ಒಳಗಿಳಿಸಿದ  ಸುಖವನ್ನು  ಬಿಟ್ಟು  ದು:ಖ ಅನುಭವಿಸೋದು ಕಷ್ಟ.
ಆದರೆ ಜೀವನದಲ್ಲಿ ಸುಖಕ್ಕೆ ತಕ್ಕಂತೆ ದು:ಖವೂ ಬರುವುದನ್ನು ಯಾರೂ ತಡೆಯಲಾಗದು. ‌ತಡೆದರೂ ಅದು ತಾತ್ಕಾಲಿಕ ತಂತ್ರವಾಗಿರಬಹುದು.ಹೀಗಾಗಿ‌ನಮ್ಮ‌ಮಹಾತ್ಮರು ಸ್ವತಂತ್ರ ಬುದ್ದಿ ಜ್ಞಾನದಿಂದ ಪರಮ ಸತ್ಯ ಧರ್ಮ ದೆಡೆಗೆ‌ ಕಷ್ಟಪಟ್ಟು  ನಡೆದರೆಂದರೆ ಹಿಂದೂ ಧರ್ಮ ಉಳಿದಿರೋದು  ನಮ್ಮ ಮಹಾತ್ಮರಿಂದಷ್ಟೆ. ಅವರ ಹೆಸರಿನಲ್ಲಿ ವ್ಯವಹಾರ ನಡೆಸಿದರೆ ಹಣದ ಲಾಭವಾದರೂ‌ಹಣವನ್ನು ಸದ್ಬಳಕೆ ಮಾಡುವ  ಸುಜ್ಞಾನವಿಲ್ಲವಾದರೆ ಅನ್ಯರ ವಶದಲ್ಲಿಯೇ ಜೀವ‌ಇರುತ್ತದೆ.ಹೀಗಾಗಿ ಅನ್ಯಧರ್ಮದಲ್ಲಿ ಮಕ್ಕಳು ಜನಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರೋದು.ಕಾರಣ ಸಾಲ ಅಥವಾ ಋಣ ತೀರಿಸಲು ಅದೇ  ಮತದಲ್ಲಿ ಜನ್ಮ ಪಡೆಯಲೇಬೇಕಲ್ಲವೆ?
ಇನ್ನು ಹಿಂದೂಗಳಲ್ಲಿ  ಸಂಸಾರಕ್ಕೆ ಬರದೆ ಮದುವೆ ಬೇಡ ಮದುವೆ ಆದವರಿಗೆ  ಮಕ್ಕಳು ಬೇಡ  ,ಮಕ್ಕಳಾದವರಿಗೆ  ಶಿಕ್ಷಣ ಕೊಡೋದೆ ದೊಡ್ಡ ಹೊರೆ.ಉಚಿತ ಶಿಕ್ಷಣ ಇದ್ದರೂ ಸರಿಯಾದ  ಶಿಕ್ಷಕರಿರೋದಿಲ್ಲ  ವ್ಯವಸ್ಥೆ ಇರೋದಿಲ್ಲ.
ಖಾಸಗಿ ಶಾಲೆಗಳಂತೂ ಅನ್ಯರ ರಾಜಕೀಯದಲ್ಲಿ  ಮಿತಿಮೀರಿ ಬೆಳೆಯುತ್ತಿದೆ. ಹಿಂದೂ ಮಕ್ಕಳನ್ನು ಹೊರಗೆಳೆಯುವ ಪ್ರಯತ್ನವಾಗುತ್ತಿದ್ದರೂ ಪೋಷಕರು ಮಕ್ಕಳು  ಹೆಸರು ಮಾಡುವರೆನ್ನುವುದು ಕಾಣುತ್ತಿದೆ.ಇದು  ಮುಂದೆ  ಹೋದಂತೆಲ್ಲ  ದೂರಹೋದವರು ಹಿಂದಿರುಗಿ ಬರೋದಿಲ್ಲ. ಹೊರಗೆ ಹೋದವರಿಗೂ ಆಸ್ತಿ ಮಾಡಿಟ್ಟು ಹತ್ತಿರವಿದ್ದವರನ್ನು ಆಳುವವರು ಹೆಚ್ಚಾಗಿದ್ದಾರೆಂದರೆ  ಅಜ್ಞಾನ  ಮಿತಿಮೀರಿದೆ ಎಂದರ್ಥ.
ಇದನ್ನು ಯಾರು ತಡೆಯಬಹುದು? ಮಾಡಿದ ಕರ್ಮಕ್ಕೆ ತಕ್ಕಂತೆ ಫಲ ಸಿಗೋವಾಗ  ಹೊರಗಿನ  ಸರ್ಕಾರ ,ಸಮಾಜ ದೇಶ ಶಿಕ್ಷಣ. ಕಾರಣವೆಂದರೆ ಸರಿಯಾಗದು.ಈಗಲೂ ನಮ್ಮ ‌ಹತ್ತಿರವಿರುವ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿ ಇದೆ.ಅವರಿಗೆ ಕೊಡುವ ಸಂಸ್ಕಾರದ ಮೇಲಿದೆ. ಸಂಸ್ಕೃತಿ ,ಸಂಪ್ರದಾಯ, ಶಾಸ್ತ್ರ ಪುರಾಣ ಇತಿಹಾಸದ ಹಿಂದಿನ. ಆತ್ಮಶುದ್ದಿ  ನಮ್ಮೊಳಗೇ ಆದರೆ  ಸತ್ಯದ ಜೊತೆಗೆ ಧರ್ಮ ರಕ್ಷಣೆ ಸಾಧ್ಯ.
ಯಾವಾಗಿದು ಅಸತ್ಯ ಅಧರ್ಮಕ್ಕೆ ತಲೆಬಾಗಿ ವ್ಯವಹಾರಕ್ಕೆ ಇಳಿಯಿತೋ ಆಗಲೇ  ಅನ್ಯರ ವಶದಲ್ಲಿ ಜೀವ ಸೇರುತ್ತಿದೆ.
ಮೇಲಿರುವ‌ ಪರಮಾತ್ಮನಿಗೆ  ಯಾವುದೇ‌ಮತ ಜಾತಿ ಧರ್ಮ ಅಂಟೋದಿಲ್ಲ. ಯಾವ ಜಾತಿ‌ಮತ ಧರ್ಮದಡಿ ಜನನ ಆಗಿದೆಯೋ ಅದರ ಋಣ ಇದೆಯಂದು ಅರ್ಥ ಮಾಡಿಕೊಂಡು ಅದರ ಮೂಲ ಶಿಕ್ಷಣದೆಡೆಗೆ ಮಕ್ಕಳನ್ನು ‌ಸಾಕಿ ಸಲಹಿದರೆ  ಹಿಂದಿನವರ ಜ್ಞಾನದೆಡೆಗೆ ಒಗ್ಗಟ್ಟಿನಿಂದ ಸಾಗಬಹುದು. ಹೀಗಾಗಿ ನಾವೆಷ್ಟು ಹೊರಗೆ  ಹೋರಾಟ ನಡೆಸಿ  ರಾಜಕೀಯದಿಂದ ಸರಿಪಡಿಸಬಹುದೆಂದರೆ ಇದು ಭ್ರಮೆಯಷ್ಟೆ.
ವೈಚಾರಿಕತೆಯ ಹಿಂದಿನ ವಿಜ್ಞಾನದಲ್ಲಿ ಆತ್ಮಶುದ್ದಿ ಆಗಬೇಕಿತ್ತು. ಆಗಿಲ್ಲ ಎಂದರೆ ಅದರಲ್ಲಿ  ತಂತ್ರವೇ ಹೆಚ್ಚಾಗಿದೆ ಎಂದರ್ಥ. ಸ್ವತಂತ್ರ ಎನ್ನುವ ಪದವನ್ನು ಅಪಾರ್ಥ ಮಾಡಿಕೊಂಡು ತಮ್ಮ ಸ್ವಾರ್ಥ ಸುಖಕ್ಕಾಗಿ ಬೆಳೆಸಿದ ಸ್ವೇಚ್ಚಾಚಾರದಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಇದು ಅನ್ಯರನ್ನೂ  ಸೇರಿಸಿಕೊಂಡು ಹೊರಗೆ ನಡೆದಾಗಲೇ  ಮಾನವ ಒಳಗಿರುವ ಮಹಾತ್ಮರು ಕಾಣದೆ ಹಣ ಮಾತ್ರ ಕಾಣುತ್ತದೆ. ಹಣದಿಂದ ಹೆಣವನ್ನು ಖರೀದಿಸುವಷ್ಟು‌ವಿಜ್ಞಾನ  ಕಲಿಕೆಯಲ್ಲಿದೆ. ಆದರೆ ಆತ್ಮನನ್ನು ಖರೀದಿಸಲಾಗದು ಎನ್ನುವ ಸತ್ಯ ಒಂದೇ ಆಗಿರುತ್ತದೆ.
ಎಷ್ಟು ವರ್ಷ ಬದುಕಿದೆ ಎನ್ನುವ ಬದಲು ಎಷ್ಟು ಆತ್ಮಸಂಶೋಧನೆಯು ಬದುಕಿನಲ್ಲಾಗಿದೆ ಎನ್ನುವುದು ಮುಖ್ಯ.
ಏನೇ ಇರಲಿ  ನನ್ನ ಅನುಭವದ‌ಪ್ರಕಾರ ಇಂದು ಬೇಲಿಯೇ ಸರಿಯಿಲ್ಲದ ಹೊಲದಲ್ಲಿ ಮೇಯುವುದೇ ಸ್ವಾತಂತ್ರ್ಯ ಎಂದು ತಿಳಿದ ಮಾನವರು ಅಸುರರ ವಶದಲ್ಲಿ ಚೆನ್ನಾಗಿ ತಿಂದು ಕೊಬ್ಬಿರೋ ಕುರಿಗಳಾಗಿ ಕೊನೆಯಲ್ಲಿ ಅಸುರರ ಆಹಾರ ಆಗುತ್ತಿದ್ದರೂ  ಹೇಳಿದರೆ ಅರ್ಥ ವಾಗುವ ಜ್ಞಾನವಿಲ್ಲದೆ  ಅನ್ಯರ  ಸಂಖ್ಯೆ ಮಿತಿಮೀರಿದೆ.
ಮನೆಯಲ್ಲಿ ಎಷ್ಟು ಮಕ್ಕಳಿದ್ದಾರೆ ಎನ್ನುವ ಬದಲು ಮಕ್ಕಳಲ್ಲಿ ಯಾರ ಜ್ಞಾನವಿದೆ ಎಂದು ಗುರುತಿಸುವುದು ಪೋಷಕರ ಧರ್ಮ.
ನಮಗೇ ಅಜ್ಞಾನ ವಿರೋವಾಗ‌  ಮಕ್ಕಳ ಸುಜ್ಞಾನ ಕಾಣದು.
ಹೀಗಾಗಿ‌ಮಕ್ಕಳನ್ನು ಆಟದ ಗೊಂಬೆಯಂತೆ ಹೊರಗೆ ಕುಣಿಸಿ ಮನರಂಜನಾ ಮಾದ್ಯಮ ಬೆಳೆದಿದೆ. ಇದು  ಯಾರಿಗೆ ಲಾಭ ನಷ್ಟ ಎನ್ನುವ ಸತ್ಯ  ಅರಿವಿಗೆ ಬರದಿದ್ದರೆ ಜೀವದ ಗತಿ ಅಧೋಗತಿ. ಅದರಲ್ಲೂ ಮಕ್ಕಳ ಭವಿಷ್ಯ  ಅವರ ಆತ್ಮಜ್ಞಾನದ ಮೇಲಿರುವಾಗ  ಅಂತಹ ಶಿಕ್ಷಣದಿಂದ ವಂಚಿತರಾಗಿರುವ ಅಸಂಖ್ಯಾತ ಮಕ್ಕಳು ಮುಂದಿನ ದೇಶದ ಪ್ರಜೆಗಳಾಗುವುದು ಖಚಿತ.ಇಲ್ಲಿ ಮುಂದಿನ ದೇಶ ಎಂದರೆ ನಮ್ಮ ದೇಶವಲ್ಲ ಹೊರದೇಶವಾಗಬಹುದು.‌ಯಾರಿಗಾಗಿ  ಈ ಹೋರಾಟ ಹಾರಾಟ‌ ಮಾರಾಟ? 
ಪರಮಾತ್ಮನಿಗೋ? ದೇಶಕ್ಕೋ? ಧರ್ಮ ಕ್ಕೋ? ಸತ್ಯಕ್ಕೋ?
ಮಕ್ಕಳಿಗೋ?  ಯಾವುದೂ  ಇಲ್ಲ. ಪರಕೀಯರ ವಶದಲ್ಲಿದ್ದು ನಮ್ಮವರ ವಿರುದ್ದವೇ ಹೋರಾಟ ನಡೆದಿದೆ ಎಂದರೆ ಜೀವಕ್ಕೆ ತೃಪ್ತಿ ಸಿಗದು. ತೃಪ್ತಿ ಸಿಗದೆ ಜೀವನ್ಮುಕ್ತಿಯಿಲ್ಲ.ಜೀವನ್ಮುಕ್ತಿ ಇಲ್ಲದವರು ಅತೃಪ್ತ ಆತ್ಮಗಳಾಗಿ ಜನನ‌ಮರಣದ  ಬಂಧನದಿಂದ. ಬಿಡಿಸಿಕೊಳ್ಳಲಾಗದು ಎಂದರೆ  ನಾವು ಸ್ವತಂತ್ರರೆ?

ಅಂತರ ಹೆಚ್ಚಾದಷ್ಟೂ  ಶಾಂತಿ ಸಿಗದು. ಇದರಲ್ಲಿ ಮತಾಂತರ ಜಾತ್ಯಾಂತರ, ಧರ್ಮಾಂತರ, ಪಕ್ಷಾಂತರ  ಕೊನೆಗೆ ಉಳಿಯೋದು ದೇಶಾಂತರ. ಈ ಅವಾಂತರಕ್ಕೆ ಅಜ್ಞಾನ ಕಾರಣ.ಅಜ್ಞಾನ ಎಂದರೆ ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ.ಇದರಲ್ಲಿ ಅಸತ್ಯ ಅಧರ್ಮ ಅನ್ಯಾಯ ವೆಲ್ಲವೂ ಹಣದಿಂದ ಬೆಳೆಯುತ್ತಿರುತ್ತದೆ. ಅದರ ಹಿಂದೆ ಋಣವೂ ಸೇರಿಕೊಂಡು  ಸಮಸ್ಯೆ ಹೆಚ್ಚುತ್ತಿರುತ್ತದೆ.
ಸಮಸ್ಯೆಗೆ ಪರಿಹಾರ ಒಳಗಿನ ಜ್ಞಾನದಿಂದ ಆದರೆ ಉತ್ತಮ.ಯಾವಾಗಿದು ಹೊರಗೆ ಹರಡುವುದೋ ಇನ್ನಷ್ಟು ಬೆಳೆಯುತ್ತದೆ. ಇದನ್ನು ಯಾರೂ ತಡೆಯಲಾಗದು. ಒಟ್ಟಿನಲ್ಲಿ ಸಮಸ್ಯೆ ಅಜ್ಞಾನದಿಂದ ಬೆಳೆದರೆ ಜ್ಞಾನದ ಮೂಲಕ ಪರಿಹಾರ ಕೊಡಬೇಕು.ಅಜ್ಞಾನದಿಂದ ಪಡೆದಷ್ಟು ಇನ್ನಷ್ಟು ಹೆಚ್ಚುವುದು.
ಇಷ್ಟೇ ಜೀವನ ಸತ್ಯ. ಜೀವ ಎಲ್ಲರಲ್ಲಿಯೂ ಇದೆ.ಆದರೆ ಋಣ ಮತ್ತು ಕರ್ಮದ ಲೆಕ್ಕಾಚಾರ ಬೇರೆಯಾಗಿರುತ್ತದೆ.‌ಇದನ್ನು ಹಿಂದಿನವರು ಧರ್ಮ ಕರ್ಮ ಸತ್ಯವನರಿತು ತತ್ವದಿಂದ  ಬಗೆಹರಿಸಿದ್ದರೆ ಈಗಿನವರು ತಂತ್ರದಿಂದ ಬೆಳೆಸಿರುವರಷ್ಟೆ.
ಸತ್ಯ ಸತ್ವ ತತ್ವವಿಲ್ಲದ  ಜೀವನದಲ್ಲಿ  ಮಂತ್ರ ತಂತ್ರ ಯಂತ್ರಗಳಿಗೆ ಸ್ವಾತಂತ್ರ್ಯ. ಇವುಗಳು  ಮಧ್ಯವರ್ತಿಗಳಷ್ಟೆ.
ಇದು ನಮ್ಮನ್ನು ಸ್ವತಂತ್ರ ಬುದ್ದಿ ಜ್ಞಾನದೆಡೆಗೆ ನಡೆಸಿತೋ ಅಥವಾ ಅತಂತ್ರಸ್ಥಿತಿಗೆ ತಲುಪಿಸಿತೋ  ಪ್ರಶ್ನೆಗೆ ಉತ್ತರ ಆತ್ಮಾವಲೋಕನ ದಲ್ಲಿರುತ್ತದೆ. ಆತ್ಮಕ್ಕೆ ಸಾವಿಲ್ಲ.ಯಾರ ಋಣದಲ್ಲಿರುವುದೋ ಅಲ್ಲಿಯೇ ಮತ್ತೆ ಜೀವಾತ್ಮನ‌ಪಯಣ ನಡೆಯುತ್ತಲೇ ಇರುವುದೆಂದು ಮಹಾತ್ಮರು ತಿಳಿಸಿರುವರು.
ಈಗ ನಾವು ಯಾರ ಋಣದಲ್ಲಿದ್ದೇವೆ? ಯಾರ ಜ್ಞಾನದ ಶಿಕ್ಷಣ ಪಡೆಯುತ್ತಿದ್ದೇವೆ? ಯಾರ ಹಿಂದೆ ನಡೆದಿರೋದು? ದೇವರನ್ನು ಒಳಗೆ ಕಂಡೆವೋ ಹೊರಗೋ? ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ ಎಂದರೆ ಸತ್ಯವೇ ದೇವರಾಗುವರು. ಒಳಗಿನ ಸತ್ಯ ಬಿಟ್ಟು ಹೊರಗೆ ನಡೆದಷ್ಟೂ ಅಂತರದ ಅವಾಂತರ. ಇಲ್ಲಿ ಯಾವ‌ ಮತವೂ ಸ್ವತಂತ್ರ ವಾಗಿಲ್ಲ.ಹೀಗಿರುವಾಗ  ಯಾರನ್ನೂ ನಂಬಿ ಕೆಟ್ಟವರೆ ಎಲ್ಲಾ. ಆಗೋದೆಲ್ಲಾ ಒಳ್ಳೆಯದೆ  ಆದರೂ  ಅದರಿಂದ ಕಲಿಯುವುದೆ ಕಲಿಯುಗ. ಹಿಂದಿರುಗಿ ಮೂಲದೆಡೆಗೆ ಬಂದವರಿಗೆ ನೆಮ್ಮದಿ ಶಾಂತಿ ಸಿಕ್ಕಿದೆ ಎಂದರೆ ದಾರಿ ಇದ್ದವರು ಹಿಂದಿರುಗಬಹುದು. 

ವಿಷಯದಲ್ಲಿನ‌ ವಿಷ ಹರಡದೆ ಅಮೃತ ತತ್ವವರಿತರೆ  ಜ್ಞಾನ.
ಅತಿಥಿಗಳು ದೇವರಾಗಬಹುದು ದೆವ್ವಗಳಾಗಿರಲೂ ಬಹುದು.
ದೇವತೆಗಳಿಗೆ ತೃಪ್ತಿ  ಸಿಗದಿದ್ದರೆ ದೆವ್ವಗಳೇ ಆಗೋದು.ಹಾಗಾದರೆ ದೇವರಿರೋದೆಲ್ಲಿ ತತ್ವಜ್ಞಾನದಲ್ಲಿ  ತಂತ್ರ ಕುತಂತ್ರದಿಂದ ದೆವ್ವಗಳಾಗಿ ಆತ್ಮ ಅಲೆಯುತ್ತವೆ.
ಎಷ್ಟೋ ಜನ್ಮಗಳ ಪಾಪ ಪುಣ್ಯಗಳ ಲೆಕ್ಕಾಚಾರ ಒಂದೇ ಜನ್ಮದಲ್ಲಿ ತೀರಿಸಲಾಗದು. ಆದರೆ ಸತ್ಕರ್ಮ ಸ್ವಧರ್ಮ ಸುಜ್ಞಾನ ಪ್ರತಿ ಜನ್ಮ ದಲ್ಲಿರುವುದು ಅದನ್ನರಿತು ನಡೆಸೋ ಶಿಕ್ಷಣ  ಕೊಡುವುದಷ್ಟೆ ಮಾನವ ಧರ್ಮ. ಏನಂತೀರ?
ಮಾನವಜನ್ಮ ದೊಡ್ಡದು ಹಾಳುಮಾಡದಿರಿ ಹುಚ್ಚಪ್ಪಗಳಿರ ಎಂದಿರುವ ದಾಸಶ್ರೇಷ್ಟರು  ಜ್ಞಾನದಿಂದ ಪರಮಾತ್ಮನ ಕಡೆಗೆ ನಡೆದ ಮಹಾತ್ಮರಾಗಿದ್ದರು.  
ಉತ್ತಿಷ್ಟತಾ ಜಾಗ್ರತ ಮನುಜ..ಗುರಿಯನು ಸೇರುವವರೆಗೂ ನೀ ಅರೆಕ್ಷಣ ನಿಲ್ಲದೆ‌ಮುನ್ನಡೆ ಸಖನೆ". ಸ್ವಾಮಿ ವಿವೇಕಾನಂದ ರ ರಾಜಯೋಗದ ವಿಷಯ ರಾಜಕೀಯವಾಗಿಸಿ ಮಹಿಳೆ ಮಕ್ಕಳನ್ನು  ಹೊರಗೆಳೆದರೆ ಆತ್ಮದುರ್ಭಲ ವಾಗುತ್ತದೆ.
ಸಂನ್ಯಾಸವೆಂದರೆ  ಕಾವಿತೊಟ್ಟು ಸಂಸಾರ ಬಿಟ್ಟಿರೋದಲ್ಲ.
ಸಂಸಾರದ  ಸಮಸ್ಯೆಗೆ ಆಧ್ಯಾತ್ಮಿಕ ಪರಿಹಾರ ಕೊಡುವ ಸತ್ಯಜ್ಞಾನವಿರಬೇಕು. ಸತ್ಯ ಕ್ಕೆ ಸಾವಿಲ್ಲ ಆದರೆ  ಈಗ ಸತ್ತಿರೋದು ಯಾವುದು? ಹಿಂದುಳಿದಿದೆ ಎಂದರೆ ಸತ್ತಿದೆ ಎಂದಲ್ಲ.

Monday, April 13, 2026

ಹಿಂದುಳಿದವರು ಯಾರು? ಯಾಕೆ?

ಡಾ ಅಂಬೇಡ್ಕರ್ ದಿನಾಚರಣೆಯ ಶುಭಾಶಯಗಳು.
ಅಂಬೇಡ್ಕರ್ ರ ಗುರಿ  ಇಂದು  ತಪ್ಪಿ ನಡೆದಿದೆ ಎಂದರೆ  ವಿರೋಧಿಸುವವರು ಹೆಚ್ಚು  ಕೆಲವರಿಗಷ್ಟೆ ಇದರ ಹಿಂದಿನ  ಉದ್ದೇಶ ಅರ್ಥ ವಾಗಿರಬಹುದು. ಆದರೂ  ಹಿಂದುಳಿದವರನ್ನು ಮೇಲೆತ್ತುವ ಕೆಲಸದಲ್ಲಿ ಸರ್ಕಾರಗಳು‌ನಡೆಸಿರುವ ಕಸರತ್ತು  ಕೆಸ ಎತ್ತುವ ಹಂತಕ್ಕೆ ತಲುಪಿದೆ ಎಂದರೆ ಸರಿಯಾಗಬಹುದು.
ಸ್ವಚ್ಚ ಭಾರತವನ್ನು ಕಸಗುಡಿಸುವುದರ ಮೂಲಕ  ಮಾಡುವ ಕೆಲಸವನ್ನು  ನಿರಂತರವಾಗಿ ‌ನಡೆಸಿದ್ದರೂ ಕಸದ ಸಮಸ್ಯೆ ಬಗೆಹರಿದಿಲ್ಲ ಎಂದರೆ ನಮ್ಮೊಳಗೇ ಇರುವ ಅಜ್ಞಾನವೆ ಇದಕ್ಕೆ ‌ಕಾರಣವಾಗಿದೆ.
 ಅಂದಿನ ಭಾರತದ ಸ್ಥಿತಿಗೂ ಇಂದಿನ ಸ್ಥಿತಿಗೂ ಬಹಳ ಅಂತರವಿದೆ. ಅಂದಿನ  ಬಡತನ ಇಂದಿನ‌ ಬಡತನ  ಸರಿಸಮನಾಗಿದೆ. ಆದರೆ ಅಂದಿನ  ಜ್ಞಾನ ಇಂದಿನ ವಿಜ್ಞಾನ  ಹೆಚ್ಚಾಗಿ ಅಜ್ಞಾನದೆಡೆಗೆ‌ ನಡೆಸಿದೆ ಎಂದಾಗ ದೇಶದ ಪ್ರಜೆಗಳ ಸುಜ್ಞಾನದಿಂದ  ಆತ್ಮನಿರ್ಭರ ಆಗುತ್ತದೆ. ಅಜ್ಞಾನದಿಂದ ದುರ್ಭಲರನ್ನು ದುರ್ಭಳಕೆ ಮಾಡಿಕೊಂಡು ಆಳೋದಕ್ಕೆ ಸುಲಭವಾಗಿರುತ್ತದೆ.
ಇಷ್ಟಕ್ಕೂ ಹಿಂದುಳಿದವರು ಯಾರು? ಹಣವಿಲ್ಲದವರೆ? ಜ್ಞಾನವಿಲ್ಲದವರೆ? ಬೇಡುವವರೆ? ನೀಡುವವರೆ? 
ಮೇಲಿರುವ ಪರಮಾತ್ಮನೆಡೆಗೆ ನಡೆದವರಲ್ಲಿ ಹಣವಿರಲಿಲ್ಲ  ಅವರನ್ನು ಹಿಂದುಳಿದವರೆನ್ನಲಾಗದು.  ಎಷ್ಟು ಕೊಟ್ಟರೂ ಸಾಲದು, ಎಷ್ಟು ಪಡೆದರೂ ಸಾಲದು.ಸಾಲವೇ ಅದು ಎಂದಾಗ ಯಾರಲ್ಲಿ ಹೆಚ್ಚು ಸಾಲ ಇರುವುದೋ ಅವರು ಬಡವರು. ಅವರಿಗೆ ಸರಿಯಾದ ಶಿಕ್ಷಣ ನೀಡಿ ಕೆಲಸ ಕೊಟ್ಟು ದುಡಿದು ತಿನ್ನುವ  ಹಂತಕ್ಕೆ ತರೋದು ಸರ್ಕಾರದ ಕೆಲಸ.
ಇದನ್ನು ಅಂಬೇಡ್ಕರ್  ತಮ್ಮ ಅತ್ಯದ್ಭುತ ಜ್ಞಾನದಿಂದ ತಿಳಿದು  ಬಡವರಿಗೆ ಉಚಿತ ಶಿಕ್ಷಣ ನೀಡಬೇಕೆಂದರು. ಅವರ ಜ್ಞಾನಕ್ಕೆ ಪೂರಕವಾದ ಶಿಕ್ಷಣ ನೀಡಿದ್ದರೆ  ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಉದ್ಯೋಗ  ನಡೆಸಿಕೊಂಡು  ಯಾವುದೇ ಸರ್ಕಾರದ ಹಿಂದೆ ನಿಂತು ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ.
ಆದರೆ ಭಾರತೀಯ ಶಿಕ್ಷಣವನ್ನೇ ದಾರಿತಪ್ಪಿಸಿ ಆಳಿದವರಿಗೆ  ಇದರ ಜ್ಞಾನ ಇರದೆ ಜನಸಾಮಾನ್ಯರನ್ನು  ಎತ್ತಿ ಏಣಿಗೇರಿಸುವ ತಂತ್ರ ನಡೆಸಿ ಸಾಲ ಸೌಲಭ್ಯಗಳನ್ನು ‌ಉಚಿತವಾಗಿ ಸಿಗುವಂತೆ ಮಾಡಿ ಇಂದು ಸಾಲವೇ ಶೂಲ ಆಗಿದೆ. ಇದನ್ನು ತೀರಿಸಲು  ಮತ್ತಷ್ಟು ಸಾಲಕ್ಕೆ ಕೈ ಚಾಚುತ್ತಾ
ಒಂದು ಮನೆ ಸಾಲದು, ಒಂದು  ವಾಹನ ಸಾಲದು‌, ಒಂದು ಸಂಸಾರಕ್ಕೆ ಒಬ್ಬರಿಗೆ ಒಂದು  ಉದ್ದೋಗ   ಸಾಲದು. ಎನ್ನುವ ಹಂತಕ್ಕೆ ಬಂದು ಕುಟುಂಬದವರೆಲ್ಲರಿಗೂ ಮೀಸಲಾತಿ ನೀಡಿದ್ದರೂ ಸಾಲ ತೀರುತ್ತಿಲ್ಲ ಎಂದರೆ ಅರ್ಥ ವೇನು?
ಹಣದ ದುರ್ಭಳಕೆ ಆಗುತ್ತಿದೆ. ಜ್ಞಾನವಿಲ್ಲದೆ ಹಣವನ್ನು ನೀರಿನಂತೆ  ಖರ್ಚು ಮಾಡಿಕೊಂಡು ವೈಭೋಗದೆಡೆಗೆ‌ ನಡೆದರೆ ತೃಪ್ತಿ ಸಿಗದು. ಹೀಗಾಗಿ‌ಕಷ್ಟಪಡದೆ ಸುಖದೆಡೆಗೆ ಮಕ್ಕಳು ‌ಮಹಿಳೆಯರು‌ ಮೊಮ್ಮಕ್ಕಳು ಹೊರಗಿನ‌ಜಗತ್ತಿನಲ್ಲಿ
ಸುತ್ತಿದರೆ ಒಳಗಿನ ಜಗತ್ತಿನ ಸತ್ಯ ಅರ್ಥ ವಾಗದೆ ಮತ್ತದೇ ಜನ್ಮ . ಜಾತಿ  ಜಾತಿ ಎನ್ನುವ  ರಾಜಕೀಯತೆಯ ಹಿಂದೆ ‌ನಡೆದು  ಮಾನವ ಜಾತಿಗೆ ಸುಖವಿಲ್ಲವಾಗಿದೆ. ಇದರಲ್ಲಿ  ಕೆಲವರಿಗಷ್ಟೆ  ಮೀಸಲಾತಿ ಅಗತ್ಯವಿದ್ದರೂ  ಅದನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಇನ್ನಷ್ಟು ಸರ್ಕಾರದ ಋಣ ತಲೆಗೇರಿಸಿಕೊಂಡರೆ ಬಿಡುಗಡೆಗೆ  ಸರ್ಕಾರದ ಸೇವೆ ಮಾಡಬೇಕು. ಸೇವೆಯಲ್ಲಿ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದಾಗಲೇ ಆತ್ಮಕ್ಕೆ ತೃಪ್ತಿ ‌ಮುಕ್ತಿ ಎನ್ನುವ ಆಧ್ಯಾತ್ಮ ಚಿಂತನೆ ನಡೆಸಲು ಇಂದು‌ಕಷ್ಟವಿದೆ.
ಯಾವಾಗ‌ ಮಾನವನಿಗೆ ಸುಖವಾಗಿ ಎಲ್ಲವೂ ದೊರೆಯುವುದೋ  ಆಗ ಸಹಜವಾಗಿ  ಮಾನವ‌ ಕಷ್ಟಪಡದೆ ಸೋಮಾರಿಯಾಗುವನು. ಸೋ, 'ಮಾರಿ 'ಯೂ  ಅವನೊಂದಿಗೆ  ಸೇರುತ್ತಾ‌ ಹಣವನ್ನು  ವೈಧ್ಯರಿಗೆ‌ಕೊಡಬೇಕು.
ವೈಧ್ಯಕೀಯ ಕ್ಷೇತ್ರ ಬೆಳೆದಿರೋದು ಅಜ್ಞಾನದ  ಅಶುದ್ದ ವಿಷಯಾಸಕ್ತಿ, ಆಹಾರ,ವಿಹಾರಗಳ ಜೊತೆಗೆ ಶಿಕ್ಷಣದ ವಿಷಯಗಳಿಂದ ಎಂದರೆ  ನಮ್ಮ ಆರೋಗ್ಯ( ಕಾಮ‌ಕ್ರೋಧ ,ಲೋಭ,ಮೋಹ‌ಮಧ ಮತ್ಸರ) ಉತ್ತಮವಿದ್ದರಷ್ಟೆ ಮಾನವ ಮಹಾತ್ಮನಾಗಬಹುದೆಂದರು.
ಇದಕ್ಕೆ ಸಂಸ್ಕಾರದ ಶಿಕ್ಷಣ ಅಗತ್ಯವಿದೆ ಎಂದರೆ ನಮ್ಮ ಇಂದಿನ ಈ ಪರಿಸ್ಥಿತಿಗೆ‌ ಮೂಲ‌ ಕಾರಣವೇ  ಅನ್ಯ ಭಾಷೆ ಅನ್ಯ ವಿಷಯಗಳಿಂದ ‌ಕೂಡಿದ ಶಿಕ್ಚಣಪದ್ದತಿ.
ತತ್ವ ಬಿಟ್ಟು ತಂತ್ರವೇ ಬೆಳೆದಾಗ ಜೀವನ ಅತಂತ್ರ ಸ್ಥಿತಿಗೆ‌ ಬರುತ್ತದೆ.

ಯಾವುದೇ  ಇರಲಿ ಅತಿಯಾಗಬಾರದು. ಶಿಕ್ಷಣದಲ್ಲಿ ಮೀಸಲಾತಿ  ಕೊಟ್ಟವರಿಗೆ ಅಂಕದಲ್ಲಿಯೂ ಮೀಸಲಾತಿ, ಜೊತೆಗೆ ಉದ್ಯೋಗದಲ್ಲೂ ಮೀಸಲಾತಿ  ಇದರಿಂದಾಗಿ  ಹೊರಬರುವ ಸಮಸ್ಯೆಗಳನ್ನು  ಪರಿಹರಿಸಲು  ಸರ್ಕಾರ ಮತ್ತೆ ಹಣ ನೀಡುತ್ತಾ‌ಬಂದರೆ ಒಳಗಿದ್ದ ಸ್ವಚ್ಚ ಜ್ಞಾನದ ಗತಿ ಅಧೋಗತಿ. ಇದನ್ನು ಸರಿಪಡಿಸಬಹುದೆ?
ಎಲ್ಲಿಗೆ ಹೋದರೂ‌ ಹಿಂದಿರುಗಿ ಬರೋದು ಜ್ಞಾನದ‌ಮೇಲೆ.
ಜನ್ಮತ:  ಪಡೆದು‌ ಬಂದಿರುವ‌  ವಿಶೇಷ‌ಜ್ಞಾನವನ್ನು  ಗುರುತಿಸದೆ  ಜಾತಿಯಿಂದ ಗುರುತಿಸಿ ಶಿಕ್ಷಣ ಸರಿಯಾಗಿ‌ ನೀಡದಯೇ  ಸಾಲ ನೀಡಿ‌ಹಣ ಕೊಟ್ಟರೆ ಅದರ ದುರ್ಭಳಕೆ  ಮಾಡಿಕೊಂಡವರನ್ನೇ  ದೇಶ ಆಳೋದಕ್ಕೂ ಬಿಟ್ಟರೆ  ಯಾರಿಗೆ ಕಷ್ಟ ನಷ್ಟ?
ಉತ್ತಮ  ಜ್ಞಾನ  ಸಂಸ್ಕಾರದ ಶಿಕ್ಷಣದಿಂದ ಸಿಕ್ಕವರು ಇಂದಿಗೂ  ಹಣವಿಲ್ಲದೆಯೂ  ಸಮಾಜದ ಋಣ ತೀರಿಸುವ ಕರ್ಮ ನಡೆಸಿರುವರು. ಆದರೆ  ಓದಿ ಮುಂದೆ ಬಂದ  ಬುದ್ದಿವಂತರು  ಎಲ್ಲೋ ಹೊರದೇಶದಲ್ಲಿ  ದುಡಿಯುತ್ತಿರುವರು.  ದೇಶದ ನೆಲ ಜಲ  ಆಸ್ತಿಬೇಕು  ಆದರೆ ದೇಶದ ಋಣ ತೀರಿಸುವ  ಜ್ಞಾನವಿಲ್ಲ ಎಂದರೆ ನಿಜವಾಗಿ ಹಿಂದುಳಿದವರು ಅಜ್ಞಾನಿಗಳಾಗಿರುವರು.ಅವರವರ ಕರ್ಮಕ್ಕೆ ತಕ್ಕಂತೆ ಫಲ  ಸಿಗೋದು ಸತ್ಯ. ಹಾಗಂತ ನಮ್ಮ ಧರ್ಮ ಬಿಟ್ಟು ನಡೆದರೆ  ಕರ್ಮ ವೂ ನಮ್ಮದಾಗಿರದು ಇದೂ ಸತ್ಯ. ಹೀಗಾಗಿ‌  ಇಂದಿಗೂ‌ಬಡತನ ಎದ್ದು ಕಾಣುತ್ತಿದೆ.
ಬೇಡೋನು ದೀನ ಸ್ಮರಿಸೋನೆ ಜಾಣ ಎಂದಂತೆ ನಾವು ದೇಶದೊಳಗೆ ಇರುವ ಪ್ರಜೆಗಳಾಗಿ  ದೇಶದ ಸಾಲ‌ಅಥವ
ಋಣ. ತೀರಿಸುವುದಕ್ಕೆ ನಮ್ಮ ಸ್ವಂತ ‌ಬುದ್ದಿ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಟ್ಟಿದ್ದರೆ ಸ್ವಾವಲಂಬನೆ ಸ್ವಾಭಿಮಾನ ಸತ್ಯ ಸ್ವತಂತ್ರ ಜ್ಞಾನದಿಂದ ಇದ್ದಲ್ಲಿಯೇ  ಎದ್ದು ನಿಲ್ಲುವ ಆತ್ಮಶಕ್ತಿ  ಬರುತ್ತದೆ. ಒಟ್ಟಿನಲ್ಲಿ ಹಣದಿಂದ  ಹಿಂದುಳಿದವರನ್ನು ಗುರುತಿಸೋದೆ ಅಜ್ಞಾನ. ಜ್ಞಾನವನ್ನು  ಬೆಳೆಸೋದೆ ವಿಜ್ಞಾನ. ಜ್ಞಾನ ಎಲ್ಲರ ಆಸ್ತಿ ಅದನ್ನು ಸರಿಯಾದ ಮಾರ್ಗದಲ್ಲಿ  ಬೆಳೆಸೋದೆ ಗುರುಗಳ ಧರ್ಮ ಕರ್ಮ. ಯಾರೋ ಹೊರಗಿನವರ ಜ್ಞಾನವನ್ನು ನಮ್ಮದೆಂದು ತಿಳಿದು ನಮ್ಮ ಸ್ವಂತ ಬುದ್ದಿ ಜ್ಞಾನ ಅರಿಯದಿದ್ದರೆ  ನಾವು ಹಿಂದೂ ಆಗೋದಿಲ್ಲ. ಹಿಂದಿನವರ ಆಸ್ತಿ ಬೇಕು.ಅವರ ಧರ್ಮ ಕರ್ಮ ಜ್ಞಾನ ಬೇಡವೆಂದರೆ ಅಧರ್ಮ ವಾಗುತ್ತದೆ. ‌ಅದು ಆತ್ಮಕ್ಕೆ ತೃಪ್ತಿ ಸಿಗದಂತೆ  ಅಂತರ. ಹೆಚ್ಚಿಸಿಕೊಂಡು ಆಳುತ್ತದೆ. ಅನ್ಯರ ಕೈಕೆಳಗೆ ದುಡಿಯೋದರಿಂದ ಹಣ ಸಿಕ್ಕರೂ ತೃಪ್ತಿ ಸಿಗದು.
ಅದೇ ನಮ್ಮವರ ಸೇವೆ ಮಾಡಿದರೆ ಹಣವೂ ಸದ್ಬಳಕೆ ಆಗಿ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗುತ್ತದೆನ್ನುವುದೆ ಆಧ್ಯಾತ್ಮ ಸತ್ಯ.
 ಅರ್ಥ ವಾಗೋದು ಕಷ್ಟ .‌ಆದರೂ ಹಿಂದಿರುಗೋದು ಕಷ್ಟ.
ಕಷ್ಟಪಡದೆ  ಸುಖವಿಲ್ಲ.ಭೌತಿಕದಲ್ಲಿ  ಮೀಸಲಾತಿ ಇದ್ದರೂ ಆಧ್ಯಾತ್ಮಿಕ ಜಗತ್ತಿನಲ್ಲಿರಲಿಲ್ಲ.ಈಗ  ಆ ಕ್ಷೇತ್ರವೂ ಸರ್ಕಾರದ ವಶವಾಗುತ್ತಿರುವುದು  ಪರಮಾತ್ಮನ ಸತ್ಯದಿಂದ ಮಾನವ‌ದೂರವಿರೋದನ್ನು ಎತ್ತಿ ತೋರಿಸುತ್ತಿದೆ.‌ಹಾಗಾದರೆ ಪರಮಾತ್ಮನಿಗೆ ಮೀಸಲಾಗಿದ್ದ ಜೀವಾತ್ಮ ಕಥೆ  ಏನು?
ಸಾಲ ತೀರಿಸಲು‌ಬಂದ ಜೀವಾತ್ಮನಿಗೆ ಸಾಲ‌ಉಚಿತವಾಗಿ  ಏರಿಸಿದರೆ ತೀರಿಸುವ ಸುಜ್ಞಾನ  ಕೊಡೋದು ಯಾರು? ಎಷ್ಟು ಬೇಡಿದರೂ  ಕೊಡೋ ದೇವಾಸುರರ  ನಡುವಿರುವ ಮನುಕುಲ ಇಂದಿಗೂ  ಅತಂತ್ರಸ್ಥಿತಿಯಲ್ಲಿದೆ ಎಂದರೆ ಸ್ವತಂತ್ರ ಬುದ್ದಿ ಜ್ಞಾನದ ಕೊರತೆಯಿದೆ. ಸ್ವತಂತ್ರ ವಾಗಿದ್ದ ದೇಶವನ್ನು ಆಳಲು ಬಂದ‌ಪರಕೀಯರಿಗೆ  ಅರಿವಿಲ್ಲದೆ  ಭೌತಿಕಾಸಕ್ತಿ ಬೆಳೆದು  ಜನರನ್ನು ಆಳಾಗಿಸಿದರು. ಅದನ್ನು ಪ್ರಗತಿ ಎಂದು ಸಹಕರಿಸುತ್ತಾ  ಹೋದವರ ಗತಿ ಕೊನೆಯಲ್ಲಿ  ತಿಳಿದರೂ ಏನೂ ಮಾಡಲಾಗದೆ ಹೋದರು. ಇವರ ಚರಿತ್ರೆಯನ್ನು ಪುಸ್ತಕಕ್ಕೆ ಇಳಿಸಿ ಮಕ್ಕಳನ್ನೂ  ವಾಸ್ತವದಿಂದ ದೂರ ಉಳಿಸಿ ಭವಿಷ್ಯದ ಚಿಂತನೆ ನಡೆಸಿದವರ ಮಕ್ಕಳು ದೂರವಾದರು.‌ ಈಗಲೂ  ಸರಿಪಡಿಸಲು ಕಾಲವಿದೆ. ಆದರೆ ಮನಸ್ಸಿಲ್ಲ. ಎಲ್ಲಾ ಕಾಲವೇ ಉತ್ತರ ನೀಡುತ್ತದೆ.

ಆಕಾಶದೆತ್ತರ‌ಹಾರಿಸುವ ವೈಜ್ಞಾನಿಕತೆಗೂ ಭೂಮಿಯ ಋಣ ತೀರಿಸುವ ವೈಚಾರಿಕತೆಗೂ ಅಂತರವಿದೆ.‌ಆ ಅಂತರದಲ್ಲಿ ಸಾಮಾನ್ಯಜ್ಞಾನ  ಅಗತ್ಯವಿದೆ. ‌ನಂತರವೇ ವಿಶೇಷ ಜ್ಞಾನ ವಿಜ್ಞಾನ ಅರ್ಥ ವಾಗುತ್ತದೆ.
ಸದಾ ನಮ್ಮೊಳಗೇ ಇದ್ದು ನಮ್ಮನ್ನು ಮಾತನಾಡಿಸುವ  ಒಳ‌ಮನಸ್ಸಿನಿಂದ ದೂರವಾದಷ್ಟೂ ಕಳೆದುಹೋಗುವುದು ನಾವೇ ಎನ್ನುವ ಸತ್ಯ ಒಂದೇ ಆಗಿರುತ್ತದೆ.
ಆತ್ಮಾವಲೋಕನ ದಿಂದ ಆತ್ಮನಿರ್ಭರ ಭಾರತ. ಆಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು.ಅರಿವು ಒಳಗಿದೆ ಅದರ ಹಿಂದೆ ನಡೆದರೆ ಹಿಂದೂಗಳಾಗಿರಬಹುದು. ಅದು ಸತ್ವ ಸತ್ಯ ತತ್ವವನ್ನು ಅರಿತು ನಡೆಸುತ್ತದೆ. ಇಷ್ಟೇ ಜೀವನ ರಹಸ್ಯ. 

Friday, March 27, 2026

ರಾಮರಾಜ್ಯ

ನಮ್ಮನ್ನು ನಡೆಸುತ್ತಿರೋದು ರಾಮನೆ ರಾವಣನೆ?

ಶ್ರೀ ರಾಮನವಮಿಯ ಶುಭಾಶಯಗಳು
ರಾಮರಾಜ್ಯದ ಕನಸಿನಲ್ಲಿ ಮುಂದೆ ನಡೆಯುತ್ತಿರುವ ಭಾರತದಲ್ಲಿ  ಸಾಕಷ್ಟು ರಾಮರುಗಳು ಶ್ರಮಪಟ್ಟರೂ ಅಷ್ಟೇ ರಾವಣರ ಜನ್ಮಗಳಾಗುತ್ತಿವೆ.
ರಾಮರಾವಣರ ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ ಮಾನವರಿಗಿದ್ದರೆ ರಾಮ ಯಾರು ರಾವಣ ಯಾರೆಂಬುದು ಕಣ್ಣಿಗೆ ಕಾಣುತ್ತಿತ್ತು.ಅದನ್ನು ಶಿಕ್ಷಣದಲ್ಲಿಯೇ ಗುರುತಿಸದಂತೆ ಮಾಡಿಕೊಂಡು ಆಳಿಕೊಂಡಿರುವ ರಾಜಕೀಯ ಶಕ್ತಿಯ ಮುಂದೆ ಯಾವುದೇ ರಾಮನ ಗುಡಿ ಗೋಪುರ ರಾಮನ ತತ್ವವನ್ನು ತಿಳಿಸಲಾರದು.ಆದರೂ ಅಂತಹ ಸ್ಥಾನಮಾನವನ್ನು  ಕೊಟ್ಟಿರುವಾಗ ಶ್ರೀ ರಾಮನ ರಕ್ಷಣೆ ಇದ್ದೇ ಇರುತ್ತದೆ.
ಭಕ್ತಿಯೋಗದ ಮುಂದೆ ಯಾವ ರಾಜಕೀಯ ಶಕ್ತಿ ನಿಲ್ಲದು.
ಒಗ್ಗಟ್ಟು  ತತ್ವದೊಳಗಿದ್ದರೆ ಶಾಂತಿ.ತಂತ್ರವೇ ಮೇಲೆದ್ದರೆ ಕ್ರಾಂತಿ. 
ಕ್ರಾಂತಿಯ ನಂತರ ಶಾಂತಿ ನೆಲೆಸಬಹುದೆ?
ಹಿಂದೆ ಯುದ್ದಗಳಾದವು ಸಾಕಷ್ಟು  ಜೀವ ಪ್ರಾಣ ಹೋದವು. ನಂತರ ಸೃಷ್ಟಿ ಬೆಳೆಯಿತು. ಜನಸಂಖ್ಯೆಸ್ಪೋಟವೂ ಆಯಿತು. ಇಷ್ಟಾದರೂ ಒಳಗಿರುವ ತತ್ವಜ್ಞಾನ ಹಿಂದುಳಿದಿದೆ ಎಂದರೆ ನಮ್ಮ ಸ್ವಾರ್ಥ ಅಹಂಕಾರ ಪೂರಿತ ರಾಜಕೀಯ ದೆಡೆಗೆ ನಮ್ಮ ಮನಸ್ಸು ಹರಿದು ಹೊರನಡೆಯಿತೇ ಹೊರತು ನಮ್ಮ ಸ್ವಂತ ಬುದ್ದಿ ಜ್ಞಾನವನ್ನು ಬೆಳೆಸುವ ಶಿಕ್ಷಣ ಕೊಡದೆ ಆಳಿದವರನ್ನು  ಇಂದು ದ್ವೇಷ ಮಾಡುತ್ತೇವೆ. ಆದರೆ ನಮ್ಮ ಜೀವನ ನಡೆದಿರೋದೆ  ಅದೇ ಶಿಕ್ಷಣದಲ್ಲಿ ಎಂದರೆ  ದ್ವೇಷದಿಂದ ರಾಮನ ಕಾಣಬಹುದೆ? ರಾವಣನನ್ನೆ?
ಸೀತೆಯ ಅಪಹರಣಕ್ಕೆ  ಕಾರಣವಾಗಿದ್ದ ರಾವಣನ ಹಿಂದಿನ ದ್ವೇಷದಿಂದ  ದೊಡ್ಡ ಯುದ್ದವೇ ನಡೆಯಿತು. ಆದರೂ ರಾವಣನ ಶಿವಭಕ್ತಿ ಶ್ರೀ ರಾಮಚಂದ್ರನಂತಹ ಧರ್ಮಾತ್ಮನನ್ನೇ ಅಲ್ಲಾಡಿಸುವಂತಿತ್ತು. ಕೊನೆಯಲ್ಲಿ ಶ್ರೀ ರಾಮ ಶಿವನನ್ನು ಪೂಜಿಸಿ  ರಾವಣನ ವಧೆ ಮಾಡಬೇಕಾಯಿತೆನ್ನುವುದು ಪುರಾಣ ಸತ್ಯ.
ಸತ್ಯ ದ ಹಿಂದಿನ ಯೋಗವನ್ನು ಅರ್ಥ ಮಾಡಿಕೊಳ್ಳಲು ‌ಜ್ಞಾನ‌ಬೇಕಿದೆ. ಅಂದರೆ  ದೇವಾನುದೇವತೆಗಳಿಗೂ  ಈ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡಲು  ಜನಬಲ ಅಧಿಕಾರ ಬಲದ ಜೊತೆಗೆ ಜ್ಞಾನದ ಬಲ ಅಗತ್ಯವಿತ್ತು. 
ಅಜ್ಞಾನದ ವಶದಲ್ಲಿ ಓಡುತ್ತಿರುವ‌ಮನಷ್ಯನ‌ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಯೋಗ ಶಕ್ತಿಯಿಲ್ಲದೆ ಭೋಗದೆಡೆಗೆ  ವೈಭವದ  ಆಚರಣೆಗಳನ್ನು  ಮಾಡಿದರೆ ದೈವತ್ವದೆಡೆಗೆ  ಸಾಗಬಹುದೆ?

ಕಲಿಕೆಯಲ್ಲಿ  ಭೌತಿಕದ ಸತ್ಯ ತಿಳಿಸಬಹುದು.ಆದರೆ ಆಧ್ಯಾತ್ಮಿಕ ಶಕ್ತಿಯನ್ನು ಗುರುತಿಸದಿದ್ದರೆ  ವ್ಯರ್ಥ.
ಇದು ಶ್ರೀ ರಾಮನಂತಹ ಮಹಾತ್ಮನನ್ನು ಧರ್ಮಾತ್ಮನನ್ನು, ಪರಮಾತ್ಮನನ್ನು  ಪ್ರಜಾಪಾಲಕನನ್ನು  ಮಹಾರಾಜನನ್ನು  ಕೇವಲ ಒಬ್ಬ  ಮನುಷ್ಯರೂಪದ ವ್ಯಕ್ತಿ ಎಂದು ಕಾಣದೆ  ಮಹಾಶಕ್ತಿ  ವಿಷ್ಣುವಿನವತಾರ ಪುರುಷ ಪರಮಾತ್ಮನೆಂದು  ಕಂಡು  ಆರಾಧಿಸಿದ ದಾಸರ  ಸಾಲಿನಲ್ಲಿ  ನಿಲ್ಲಿಸಬಹುದೆ?

ಪರಮಸತ್ಯ ಧರ್ಮ ಕ್ಕೆ ಶರಣಾದವರು ದಾಸರಾದವರು ಕೇವಲ ಶ್ರೀ ರಾಮ ಜಪದಿಂದಲೇ ಆತ್ಮಸಾಕ್ಷಾತ್ಕಾರ ಮಾಡಿಕೊಂಡರೆಂದರೆ  ಶ್ರೀ ರಾಮ ವ್ಯಕ್ತಿಯಲ್ಲ ಮಹಾಶಕ್ತಿ.
ಈಗಲೂ ರಾಮನ ಭಕ್ತರ ಶಕ್ತಿ  ಯೋಗದಿಂದ ಕೂಡಿದರೆ ರಾಮರಾಜ್ಯವಾಗುತ್ತದೆ. ಯಾವಾಗಿದು ಭೋಗಕ್ಕೆ ಎಳೆಯುವುದೋ ಅದೇ  ರಾವಣನೆಡೆಗೆ ನೆಡೆಸುತ್ತದೆ.
ರಾವಣನಂತಹ ಮಹಾಜ್ಞಾನಿ  ಈಗಿಲ್ಲ. ಆದರೂ ಅವನನ್ನು ದ್ವೇಷ ಮಾಡುವ  ರಾಜಕೀಯವಿದೆ. 
ದೇಶವನ್ನು ಸ್ಮಾರ್ಟ್ ಮಾಡಲು  ಹಣ ಬೇಕು. ಅದೇ ದೇಶವನ್ನು  ಧರ್ಮದಿಂದ ರಕ್ಷಣೆ ಮಾಡಲು ಸತ್ಯಜ್ಞಾನದ ಶಿಕ್ಷಣ ಕೊಡಬೇಕು.
ಸತ್ಯವೇ ದೇವರೆಂದರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದರೆ ತೋರಿಸಲಾಗದು.ಕಾರಣ ಒಳಗೇ ಅಡಗಿರುವ ಸತ್ಯವನ್ನು  ಸದ್ಬಳಕೆ ಮಾಡಿಕೊಳ್ಳಲು  ಅಂತರಂಗದ ಶುದ್ದಿ ಅಗತ್ಯವಿದೆ. ಅಂತರ ಬೆಳೆಸಿರುವ ಈ ರಾಜಕೀಯದ ಅಗತ್ಯವಿಲ್ಲ.
ಇರಲಿ ಈಗಲೂ ನಮ್ಮಲ್ಲಿ ರಾಮನಿದ್ದಾನೆ ರಾವಣನೂ ಇರುವನು. ನಮ್ಮ ಜೀವನಕ್ಕೆ ಶಾಂತಿ ಬೇಕೆಂದರೆ ರಾಮನ ತತ್ವದೆಡೆಗೆ ಸಾಗಬೇಕು.
ಅಂದಿನ ರಾಜಪ್ರಭುತ್ವದ ಪ್ರಕಾರ  ರಾಜನಂತೆ ಪ್ರಜೆ.
ಈಗಿನ‌ಪ್ರಜಾಪ್ರಭುತ್ವದ ಪ್ರಕಾರ ಪ್ರಜೆಗಳಂತೆ ರಾಜಕಾರಣಿಗಳಿದ್ದಾರೆ.
ಯಾರು ಸರಿ ಯಾರು ತಪ್ಪು ಎನ್ನುವ  ಪ್ರಶ್ನೆ ಹಾಕುತ್ತಾ ವಾದ ವಿವಾದಗಳಿಗೆ ಸಹಕರಿಸುತ್ತಾ ಮಧ್ಯವರ್ತಿಗಳು ಅಂತರವನ್ನು ಬೆಳೆಸಿ ಜನರ ಹಣವನ್ನು ಸಮಯವನ್ನು ಜ್ಞಾನವನ್ನು  ನಿರ್ಲಕ್ಷ್ಯ ಮಾಡಿರುವ ಶಿಕ್ಷಣವನ್ನು ‌ಬೆಳೆಸುತ್ತಾ ಲಕ್ಷ ಕೋಟಿ ಗಳಿಸಿದ್ದರೂ  ನಿಜವಾದ ಶಾಂತಿ ಸಿಗಲಿಲ್ಲ ಎಂದರೆ ನಮ್ಮ ಲಕ್ಷ್ಯ  ಹಣದತ್ತ  ಜ್ಞಾನದತ್ತವಿಲ್ಲ ಎಂದರ್ಥ.
ಶ್ರೀ ರಾಮಚಂದ್ರನ ಪಿತೃವಾಕ್ಯ ಪರಿಪಾಲಕರಾಗಲಿ, ಪ್ರಜಾಪರಿಪಾಲಕರಾಗಲಿ  ತ್ರೇತಾಯುಗದ ನಂತರ  ಬಂದಿಲ್ಲ.ಶ್ರೀ ಕೃಷ್ಣಾವತಾರವೇ  ಬೇರೆ ರೀತಿಯಲ್ಲಿ ತ್ತು. ಆದರೆ ಕಾಲಮಾನಕ್ಕೆ ತಕ್ಕಂತೆ ಕೆಲವು ಬದಲಾದರೂ ಸತ್ಯ ಒಂದೇ. ಧರ್ಮ ಅದರೊಂದಿಗೆ ನಡೆಯಬೇಕೆನ್ನುವುದೇ ಸನಾತನ ಧರ್ಮ ತಿಳಿಸುವುದು.
ಯಾರೋ ಒಬ್ಬರಿಂದ ರಾಮರಾಜ್ಯವಾಗದು.ಅದರಲ್ಲೂ ಇಂದಿನ ಪ್ರಜಾಪ್ರಭುತ್ವ ದಲ್ಲಿ  ಪ್ರಜಾಶಕ್ತಿಯು  ರಾಮನ ರಾಜಯೋಗದೆಡೆಗೆ  ನಡೆದಾಗಷ್ಟೆ ಯೋಗವಾಗುತ್ತದೆ. ಎಷ್ಟು ಹೊರಗೆಳೆದು ಅಲಂಕಾರ ಮಾಡಿದರೂ  ಸಾಲದು.ಸಾಲವೇ ಅದಾಗಿರುತ್ತದೆ.
ಹಣದಿಂದ ರಾಮನ್ನು ಕಂಡವರಿಗೆ  ಹಣವೇ ಸರ್ವಸ್ವ.
ಅದೇ ರೀತಿಯಲ್ಲಿ ಸುಜ್ಞಾನದಿಂದ ರಾಮಧ್ಯಾನ ಮಾಡುತ್ತಾ ಭಕ್ತರಾದವರಿಗೆ  ಜ್ಞಾನೋದಯವಾಗಿದೆ ಎಂದರೆ ಶ್ರೀ ರಾಮ ಇರೋದೆಲ್ಲಿ?
ಎಲ್ಲೆಡೆಯೂ  ಹರಡಿರುವ ಶ್ರೀ ರಾಮನನ್ನು ಒಂದೆಡೆ ನಿಲ್ಲಿಸಿ ನೋಡಲು ಧ್ಯಾನದಿಂದ ಮಾತ್ರ ಸಾಧ್ಯ.
ದೇವಸ್ಥಾನದಲ್ಲಿ ವಿಗ್ರಹದ ಮೂಲಕ ದರ್ಶನ ಮಾಡಬಹುದು.
ನಂತರ ಮನೆಗೆ ಬಂದ ಮೇಲೆ  ಯಥಾ ಪ್ರಕಾರ  ನಮ್ಮ ‌ಮನಸ್ಸು ಹರಿದಾಡುತ್ತದೆ. ಹಾಗಾದರೆ ಮನಸ್ಸಿನಲ್ಲಿಯೇ ರಾಮನನ್ನು ನಿಲ್ಲಿಸಿಕೊಂಡು  ದಾಸರಾದವರನ್ನು ರಾಮದಾಸ ಎನ್ನಬಹುದು. ಈಗ ಎಲ್ಲಿರುವರು ? 
ಕಣ್ಣಿಗೆ  ದಾಸ್ಯತ್ವ  ಹೆಚ್ಚಾಗಿ ಕಾಣುತ್ತಿದೆ ಎಂದರೆ ನಮ್ಮ ನಡೆ ರಾಮನ ಕಡೆಗಿಲ್ಲವೆ? ನುಡಿ ಕೃಷ್ಣನ ಕಡೆಗಿಲ್ಲವೆ?
ಪ್ರಚಾರದಲ್ಲಿ ಮಧ್ಯೆ ನಿಂತಿರುವ ಇದನ್ನು ಸರಿಯಾಗಿ ನಡೆದು ನುಡಿದರೆ ರಾಮಕೃಷ್ಣರು ಒಳಗೇ ಕಾಣುವರು. ಅವರ ಕೃಪೆ ಇಂದಿಗೂ ಸನಾತನ ಧರ್ಮ ನಡೆಯಲು ಕಾರಣವಾಗಿದೆ. ಆದರೆ ಇದನ್ನು ಜನಸಾಮಾನ್ರೊಳಗೆ  ತತ್ವಜ್ಞಾನದಿಂದ ತುಂಬುವ ಕೆಲಸದಲ್ಲಿ ನಿಧಾನವಾಗಿರುವ ಕಾರಣ ರಾವಣಶಕ್ತಿ ಮಿತಿಮೀರಿದೆ. ಯುದ್ದವಾದರೂ  ಧರ್ಮಕ್ಕೆ ಜಯ ಇದು ಶತಸಿದ್ದ.
ಒಟ್ಟಿನಲ್ಲಿ ಇತಿಹಾಸ ಪುರಾಣ ಮರುಕಳಿಸಲು ಕಾರಣ ಅದರ ಪ್ರಚಾರವಾಗಿರುತ್ತದೆ.ಪ್ರಚಾರದಲ್ಲಿ ಯೋಗವಿದ್ದರೆ ಜ್ಞಾನ.ಭೋಗವೇ ಮುಖ್ಯವಾಗಿ ಹಣವೇ ಸರ್ವಸ್ವ ಎಂದರೆ ಕ್ರಾಂತಿ. ಎಲ್ಲಾ ಭಗವಂತನ ಪ್ರೇರಣೆಯೇ ಆಗಿರುವುದರಿಂದ
ನಮ್ಮ ಪಾತ್ರವನ್ನು ಸರಿಯಾಗಿ ತಿಳಿದು ವಹಿಸಿಕೊಂಡು  ಮುಂದೆ ನಡೆಯುವುದೇ ವಿಜ್ಞಾನ. ವಿಜ್ಞಾನ ಎಂದರೆ ವಿಶೇಷ ಜ್ಞಾನ. ಇದು ಆಧ್ಯಾತ್ಮ ವಾದರೆ ಆತ್ಮಜ್ಞಾನದಿಂದ  ಆತ್ಮಸಂಶೋಧನೆ. ಇಲ್ಲವಾದರೆ ಭೌತ ವಿಜ್ಞಾನದ ಶೋಧನೆ.
ಸಂಶೋಧನೆ  ಮೊದಲಿದ್ದದ್ದನ್ನೇ ಮತ್ತೆ ಮತ್ತೆ  ಶೋಧಿಸಿಕೊಂಡಿರೋದಷ್ಟೆ. ನಮ್ಮ ಅಜ್ಞಾನದೊಳಗಿರುವ ಜ್ಞಾನದೆಡೆಗೆ  ನಡೆಯೋದು. ಇದು ಹೊರಗೆ ಮಾಡುವ ಮೊದಲು ಒಳಗೆ  ಮಾಡುವುದೇ ಸಂಸ್ಕಾರ. ಆತ್ಮಸಂಸ್ಕಾರ ಆಗದೆ  ದೇಹಶುದ್ದಿ ಮಾಡಿದರೂ ತಾತ್ಕಾಲಿಕ ವಷ್ಟೆ.
ಆತ್ಮಶುದ್ದವಾಗಿದ್ದರೂ ಮನಸ್ಸಿನ  ಕಲ್ಮಶಗಳು  ಮುಚ್ಚಿ ಹಾಕಿರುತ್ತದೆ.
ಹಾಗೆ ದೈವತ್ವದೆಡೆಗೆ ಸಾಗದೆ ದೇವರನ್ನು ಪೂಜಿಸಿದರೂ ದೇವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಇದಕ್ಕೆ ಕಾರಣವೇ ಕಲಿಕೆಯಾಗಿದೆ.ತತ್ವವಿಲ್ಲದ ತಂತ್ರದಿಂದ ಅತಂತ್ರ ಜೀವನವಾಗಬಹುದು.
ದೇವಾಸುರರ ಮಧ್ಯೆ ಇರುವ ಮಾನವನಿಗೆ ಈ ಕಡೆ ಸ ತ್ಯ ಜ್ಞಾನ ಮತ್ತೊಂದು ಕಡೆ ಮಿಥ್ಯಜ್ಞಾನ ಎಳೆದಾಡುತ್ತಲೇ ಇರುತ್ತದೆ. ಯಾವ ಕಡೆ  ಹೋಗಬೇಕೆಂಬ ಸಾಮಾನ್ಯ ಜ್ಞಾನ ನಮ್ಮಲ್ಲಿದ್ದರೆ  ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ. ಇಲ್ಲವೆಂದರೆ ಅತೃಪ್ತ ಆತ್ಮಗಳಾಗಿ  ಜೀವನದ ಗುರಿ ಹೋರಾಟ ಹಾರಾಟ ಮಾರಾಟವೇ  ಪ್ರಧಾನ ಎನ್ನುತ್ತದೆ. 
ಬರೋವಾಗ ಏನು ಹೊತ್ತು ತಂದರೂ ಅದರಿಂದ ಬಿಡುಗಡೆ ಪಡೆಯುವ ಯೋಗ   ಶಿಕ್ಷಣ ಅಗತ್ಯವಿದೆ.ಯೋಗವೆಂದರೆ ಸೇರುವುದು.ಸತ್ಯ ಸತ್ಯ ಸೇರಬೇಕು. ಧರ್ಮ ಧರ್ಮ ವನ್ನು ಸೇರಬೇಕು.ವಿರುದ್ದ ಸೇರಿದಷ್ಟೂ ಸಂಕಷ್ಟ ತಪ್ಪಿದ್ದಲ್ಲ.
ಕೆರೆಯ ನೀರನು ಕೆರೆಗೆ ಚೆಲ್ಲಿದರೆ ಸರಿ.ಕೊಳಚೆಗೆ  ಸೇರಿಸಿದರೆ 
ಅನರ್ಥ ಗಳಾಗುತ್ತದೆ. 
ಪರಮಾತ್ಮ‌ಕೊಟ್ಟಿರುವ ಅಲ್ಪಾಯುಷ್ಯವನ್ನು ಅಲ್ಪ ಜ್ಞಾನದಿಂದ  ಸದ್ಬಳಕೆ ಮಾಡಿಕೊಂಡು ಜೀವನ ನಡೆಸೋ ಸ್ವಾತಂತ್ರ್ಯ ಇಂದಿನ‌ಪ್ರಜಾಪ್ರಭುತ್ವದಲ್ಲಿತ್ತು. ಆದರೆ ವಿಪರ್ಯಾಸವೆಂದರೆ  ಪ್ರಜೆಗಳ ದಾರಿತಪ್ಪಿಸಿ ಆಳುವವರಿಗೆ ಪ್ರಜೆಗಳ ಸಹಕಾರವಿರುವಾಗ  ನಮ್ಮ ಅಜ್ಞಾನಕ್ಕೆ ತಕ್ಕಂತೆ ಫಲ ಕೊಡೋನು  ಪರಮಾತ್ಮನೇ ಆಗಿರುವನು. ಏನು ಕೇಳಿದರೂ ಕೊಡುವನು ಆದರೆ ಜ್ಞಾನ ಕೇಳೋರು ವಿರಳ. ಹೀಗಾಗಿ ಅಜ್ಞಾನಿಗಳು ಮಿತಿಮೀರಿ ಬೆಳೆದು ಜನಸಂಖ್ಯೆ ಸ್ಪೋಟ ವಾಗಿ ಯುದ್ದದಲ್ಲಿ  ಪೂರ್ಣ ವಾಗುತ್ತಿದೆ.ಪ್ರಕೃತಿ ತನ್ನ ಕೆಲಸ ಮಾಡೋದನ್ನು ಬಿಡದು. ಹಾಗೆ ಸೃಷ್ಟಿ ಸ್ಥಿತಿ ಲಯ ಕಾರ್ಯ. ಭೂಮಿ ತಿರುಗೋದನ್ನು ವಿಜ್ಞಾನಿಗಳು ತಡೆಯಲಾಗದೆಂದರೆ ನಮ್ಮ ಶಕ್ತಿ ಅಲ್ಪ ಎಂದರ್ಥ . ಆದರೂ ಅಲ್ಪ ಸ್ವಲ್ಪ ಬುದ್ದಿ ಜ್ಞಾನದಿಂದ  ಸ್ಥಿತಪ್ರಜ್ಞಾವಂತರಾಗಬಹುದು.
ಇಷ್ಟಕ್ಕೂ  ನಾವ್ಯಾರು? ರಾಮನೆಲ್ಲಿ?
ಹೀಗೇ ಮುಂದುವರಿದರೆ  ಮುಂದಿನ ಪೀಳಿಗೆಗೆ ಇತಿಹಾಸದ ಪುಸ್ತಕದಲ್ಲಿ  ನರೇಂದ್ರರನ್ನು ಇಂದ್ರನೆಂದು ಸಿದ್ದರಾಮರನ್ನು ರಾಮನೆಂದು, ಶಿವಕುಮಾರರನ್ನು ಶಿವನೆಂದು, ಕುಮಾರಸ್ವಾಮಿಯನ್ನು ಸುಭ್ಮಮಣ್ಯನೆಂದು ಪೂಜಿಸಬಹುದು.  ಕಾರಣ ಹಿಂದಿನ ಪುರಾಣ ಇತಿಹಾಸವೂ ತಮ್ಮ ಮನಸ್ಸಿಗೆ ಬಂದಂತೆ ತಿರುಚಲಾಗಿದೆ. ಅದನ್ನು ಓದಿಕೊಂಡು  ಬಂದಿರುವ ನಮಗೆ  ಸತ್ಯ ತಿಳಿಯದೆ ಹೊರಗೆ ದೇವರನ್ನು ಹುಡುಕುತ್ತಿದ್ದೇವೆ. 
ಒಳಗೇ ಇದ್ದ ದೈವತ್ವವನ್ನು   ನಮ್ಮವರೆ ಗುರುತಿಸದೆ ತಡೆದರೆ ಹೊರಗಿನವರು ಆಳೋದರಲ್ಲಿ ತಪ್ಪಿಲ್ಲ.
ಸ್ವಾಮಿ ವಿವೇಕಾನಂದರ ಕನಸಿನ ಭಾರತ ಇಂದಿಗೂ ಕನಸೇ ಆಗಿರೋದಕ್ಕೆ ಕಾರಣವೆಂದರೆ ನಮ್ಮೊಳಗಿನ‌ವಿವೇಕ ಜಾಗೃತ ಮಾಡದಿರುವ ಶಿಕ್ಷಣ. ಓದಿ ತಿಳಿದವರು ಪ್ರಸಿದ್ದರಾದರು.
ನಿಜವಾದ ಸಿದ್ದರು ಹಿಂದುಳಿದರು. ಇದಕ್ಕೆ ಸಿದ್ದರಾಮಯ್ಯನವರಿಗೆ  ಅಧಿಕಾರ ಸಿಗುತ್ತಿದೆ ಎಂದರೂ ಪ್ರಜೆಗಳ ಸಹಕಾರವಿದೆ ಎಂದರ್ಥ. ಹಾಗೆಯೇ ಎಲ್ಲಾ ರಾಜಕಾರಣಿಗಳು ಹಣದಿಂದ ಜನರನ್ನು  ಗೆಲ್ಲಬಹುದಷ್ಟೆ. ಜನರ ಜ್ಞಾನದ ಗತಿ  ಏನಾಗಬಹುದು ? ಇದರಿಂದ ಕಷ್ಟ ನಷ್ಟ ಯಾರಿಗೆ? ಜನರಿಗೇ ಅಲ್ಲವೆ? ನಮಗೆ ನಾವೇ ಮೋಸ ಹೋದಾಗ ರಾಮನಾದರೂ ಏನು ಮಾಡಬಹುದು? ದೇವರೆಡೆಗೆ ದೈವತ್ವದೆಡೆಗೆ ನಡೆಯದಿದ್ದರೆ  ದೇವರು ಏನು ಮಾಡಬಹುದು?  ನಮ್ಮಲ್ಲಿ ಅಡಗಿರುವ ರಾಮ ರಾವಣರಲ್ಲಿ ನಮಗೆ ಪ್ರಿಯವಾದವರು ಯಾರು?

Sunday, March 22, 2026

ಜೀವನ್ಮುಕ್ತಿ ರಾಜಕೀಯದಲ್ಲಿಲ್ಲ.


ಮಾನವ ಎಷ್ಟು ರಾಜಕೀಯವನ್ನು ಒಳಗೆಳೆದುಕೊಂಡು  ಹೋರಾಟ ನಡೆಸಿದರೂ  ಜೀವನ್ಮುಕ್ತಿ ಸಿಗೋದಿಲ್ಲ. ಕಾರಣ ರಾಜಕೀಯ ಹೊರಗಿದೆ. ಜೀವ ಒಳಗಿದೆ. ಜೀವಾತ್ಮನನ್ನು ಪರಮಾತ್ಮನೆಡೆಗೆ  ಸೇರಿಸಲು  ರಾಜಕೀಯತೆ  ಅಡ್ಡಲಾಗಿ ಮಲಗಿದೆ. ನಮ್ಮ ಜನ್ಮದ ಮೂಲ ಧರ್ಮ ಕರ್ಮ ಬಿಟ್ಟು ದೂರ ನಡೆದವರ ಹಿಂದೆ ನಡೆದರೆ ಅತಂತ್ರ ಜೀವನವೆ ಗತಿಯಾಗಿದೆ.ಇಂದಿನ ಅರಸ   ಮುಂದಿನ  ಆಳಾಗಬಹುದು.
ಆಳು ಅರಸನಾಗಬಹುದು. ಸರಸ್ವತಿ ಯನ್ನು ಲಕ್ಮಿಯಾಗಿಸೋದು  ಮಾನವನ  ರಾಜಕೀಯ. ಮೂಲ ಸ್ವರೂಪ ಬದಲಾಗೋದಿಲ್ಲ.
ವಿಪರ್ಯಾಸವೆಂದರೆ, ಭಾರತೀಯರು  ಜ್ಞಾನದಲ್ಲಿ ಶ್ರೀಮಂತ ರಾಗಿ ಪರಮಾತ್ಮನ ಹತ್ತಿರ ಹೋದವರನ್ನು ಬಡವರೆಂಬ ಪಟ್ಟಿ ಕಟ್ಟಿ  ಹೊರಗಿನ ರಾಜಕೀಯಕ್ಕೆ ಎಳೆದು ಸಾಲ,ಸೌಲಭ್ಯ
ಗಳನ್ನು ಉಚಿತವಾಗಿ ನೀಡಿ  ಈಗ ಅವರುಗಳೆ ಸರ್ಕಾರದ ವಿರುದ್ದ ನಿಂತರೆ ?
ಇಲ್ಲಿ ರಾಜಯೋಗವೆಂದರೆ ರಾಜಕೀಯ ನಡೆಸೋದು ಎನ್ನುವ ಅಜ್ಞಾನವೇ ಮಾನವನಿಗೆ  ದಾರಿ ತಪ್ಪಿಸಿದೆ.ಈ ಪರಿಸ್ಥಿತಿಯಲ್ಲಿ ಜೀವನ ನಡೆಸೋ  ಹಾಗಾಗಿರೋದಕ್ಕೆ ಕಾರಣವೆ  ಶಿಕ್ಷಣದಲ್ಲಿರುವ ರಾಜಕೀಯ ವಿಚಾರ. ಅಂದರೆ
ರಾಜ ಮಹಾರಾಜರ  ಇತಿಹಾಸ,ಪುರಾಣಗಳ  ರಾಜಕೀಯತೆ ಮಕ್ಕಳನ್ನು  ಬೌತಿಕ ಜಗತ್ತಿನಲ್ಲಿ ಬೆಳೆಸಿ,ಅದು ಮಕ್ಕಳು ಮೊಮ್ಮಕ್ಕಳವರೆಗೂ‌ ಮುಂದುವರೆಯಿತು. 
ಬೌತಿಕಾಸಕ್ತಿ    ಬೆಳೆದಂತೆ ಹೊರಗಿನ‌   ಶಿಕ್ಷಣವನ್ನು ಒಳಗೆಳೆದುಕೊಂಡು ಒಳಗಿದ್ದ  ಸಾತ್ವಿಕ ಜ್ಞಾನವನ್ನು ಬಿಟ್ಟು ನಡೆದ ಜೀವಕ್ಕೆ  ಮನರಂಜನೆ ಸಿಕ್ಕರೂ ಆತ್ಮವಂಚನೆಯ
ದು:ಖ ತಪ್ಪಿಲ್ಲ. ಆತ್ಮಜ್ಞಾನವನ್ನು  ಓದಿ,ಕೇಳಿ, ಪ್ರಚಾರಮಾಡಿ
ಸಮಾಜ ಸುಧಾರಣೆ ಮಾಡುವ ಮಧ್ಯವರ್ತಿಗಳು  ಅನುಭವ
ಜ್ಞಾನವಿಲ್ಲದೆ  ಇತರರನ್ನು ಆಳಲು ಹೊರಟರೆ  ಅರಸನಂತೆ
ಜೀವನ ನಡೆಸಬಹುದು.ಆದರೆ ಆಳಾಗಿ ಹಾಳಾಗಿ ಹೋದವರ ಆತ್ಮಕ್ಕೆ ಶಾಂತಿ ಸಿಗದಿದ್ದರೆ ಅದೇ ದೊಡ್ಡ ಸಮಸ್ಯೆ
ಯಾಗಿ  ತಿರುಗಿ ಬರೋವಾಗ‌ ಸತ್ಯ ಕಾಣೋದಿಲ್ಲ. ಇಲ್ಲಿ ಎಷ್ಟು
ಸುಳ್ಳು, ಮೋಸ,ವಂಚನೆ,ಭ್ರಷ್ಟಾಚಾರ ದ ರಾಜಕೀಯ  ತಮ್ಮ
ಬೌತಿಕ   ಜಗತ್ತನ್ನು  ಬೆಳೆಸಿತೋ ಅಷ್ಟೇ  ಧಾರ್ಮಿಕ ಜಗತ್ತು
ಹಿಂದುಳಿಯಿತು. ಕಾಲಚಕ್ರ ತಿರುಗಿದಾಗಲೇ ಮೇಲಿನದ್ದು
ಕೆಳಗೆ ಬರೋದು. ಬರೋವಾಗ ಮಧ್ಯದಲ್ಲಿ  ಸತ್ಯ ತಡೆದರೆ
ಕಷ್ಟ ನಷ್ಟ. ಜೀವವೆ ಅನುಭವಿಸುವುದೆನ್ನುವ ಸಾಮಾನ್ಯಜ್ಞಾನ
ಮಾನವನಿಗಿದ್ದರೆ ಮಾತ್ರ ಸತ್ಯಕ್ಕೆ  ಶರಣಾಗಿ ಧರ್ಮದ ಕಡೆಗೆ
ಬರಬಹುದು. ಸಾಮಾನ್ಯಜ್ಞಾನವಿಲ್ಲದೆ ರಾಜಕೀಯ ನಡೆಸಿದರೆ  ಅದೇ ಮುಂದೆ  ಆತ್ಮಹತ್ಯೆಯವರೆಗೆ ಎಳೆಯಬಹುದು. ಇತ್ತೀಚಿನ ದಿನಗಳಲ್ಲಿ ಎಷ್ಟೋ ಪ್ರತಿಭಾವಂತರೂ ,ಶ್ರೀಮಂತ ರೂ  ಆತ್ಮಹತ್ಯೆಗೆ  ಬಲಿಯಾಗುತ್ತಿದ್ದಾರೆ.ಎಂದರೆ ಅವರಿಗೇ ತಿಳಿಯದೆ ಅಧರ್ಮ
ಮಿತಿಮೀರಿದಾಗ ಒಳಗೇ ಅಡಗಿದ್ದ  ಜೀವಾತ್ಮನಿಗೆ ತಡೆದುಕೊಳ್ಳಲು ಕಷ್ಟವಾಗಿ  ಆತ್ಮಹತ್ಯೆಗೆ ಪ್ರಚೋಧನೆ ನೀಡಿ
ದೇಹದಿಂದ ಬಿಡುಗಡೆ ಪಡೆಯುತ್ತದೆ. ಇಲ್ಲಿ  ಮಾನವನ ಮನಸ್ಸು  ಬದಲಾಗಬಹುದು.ಆತ್ಮ ಬದಲಾಗೋದಿಲ್ಲ.
ಮನಸ್ಸನ್ನು ಆತ್ಮವೆಂದು ತಿಳಿಯುವುದು  ಅಸತ್ಯ. ಮನಸ್ಸನ್ನು
ತಡೆಹಿಡಿಯುವುದೆಂದರೆ  ಅಧರ್ಮ,ಅಸತ್ಯದಿಂದ  ದೂರ ಇರುವುದು. ಆದರೆ, ತಿಳಿಯದೆ  ಯಾವಾಗ ಅದರೊಂದಿಗೆ
ವ್ಯವಹಾರ ನಡೆಸಿ ಮುಂದೆ ಬಂದ ಮನಸ್ಸಿಗೆ ಒಮ್ಮೆ  ಸತ್ಯ
ತಿಳಿಯುವುದೋ ತಿರುಗಿ ಬರಲಾಗದೆ ಜೀವವನ್ನು ತೆಗೆದುಕೊಳ್ಳುವ ಮಟ್ಟಿಗೆ  ಬುದ್ದಿ ಓಡುತ್ತದೆ. ಹೀಗಾಗಿ ಶಿಕ್ಷಣದಲ್ಲಿಯೇ ಮಕ್ಕಳಿಗೆ ಮನಸ್ಸನ್ನು  ತನ್ನ ಹತೋಟಿಯಲ್ಲಿ
ಇಟ್ಟುಕೊಳ್ಳಲು ಕಲಿಸಬೇಕಿದೆ. ಸತ್ಯದ ದಾರಿ ತೋರಿಸಿದರೆ
ಧರ್ಮವೂ ಬರುತ್ತದೆ. ಅಸತ್ಯದ ದಾರಿ ತೋರಿಸಿದರೆ ಅಧರ್ಮ ಜೊತೆಯಾಗುತ್ತದೆ. ಇರೋದು ಎರಡೇ ಮಾರ್ಗ
ಇವೆರಡರ ನಡುವೆ‌  ನಿಂತರೆ ಜೀವನವೆ ಅತಂತ್ರವಾಗುತ್ತದೆ.
ಸ್ವತಂತ್ರ ವಾಗಿರುವ ಸತ್ಯಜ್ಞಾನ, ಸ್ವೇಚ್ಚಾಚಾರದ  ಮಿಥ್ಯಜ್ಞಾನದ ಮಧ್ಯೆ ನಿಂತ  ತಂತ್ರಜ್ಞಾನದಿಂದ  ಮಾನವನಿಗೆ
ಮುಕ್ತಿ ಮೋಕ್ಷದ ಅರ್ಥ ತಿಳಿಯುತ್ತಿಲ್ಲವೆನ್ನಬಹುದೆ?
ಕಣ್ಣಿಗೆ ಕಂಡ ಹಾಗೆ ಭ್ರಷ್ಟಾಚಾರ  ಇದ್ದರೂ ಹೇಳದ ಸ್ಥಿತಿಗೆ ಜೀವ ನಿಂತಿದೆ ಎಂದರೆ ಋಣಭಾರ. ಯಾರನ್ನು ಸರಿ ಎಂದು ನಂಬಿ ನಡೆದೆವೋ ಅವರೆ ಸರಿಯಿಲ್ಲವೆಂದಾಗ ವಿರೋಧಿಸುವ ಅಧಿಕಾರವಿಲ್ಲ.ಕಾರಣ ನಮ್ಮ ಸಹಕಾರದ
ಪ್ರತಿಫಲ. ಹಾಗಂತ ಜೀವಮಾನವಿಡೀ  ಅವರ ಹಿಂದೆ ಇದ್ದರೆ
ತಪ್ಪು ದಾರಿ ದೊಡ್ಡದಾಗಿ ಶಿಕ್ಷೆ ಖಚಿತ. 
ಹಿಂದಿನ ರಾಜರ ಕಾಲದಲ್ಲಿದ್ದ  ರಾಜಧರ್ಮ ಇಂದಿಲ್ಲ. ರಾಜನೆ
ದೇವರು ಎಂಬುದಿಲ್ಲ. ಆದರೆ  ರಾಜಕೀಯತೆ ಕಡೆಗೆ ಮುಖ
ಮಾಡಿಕೊಂಡು ರಾಜಯೋಗಿಗಳೆಂದರೆ ತಪ್ಪು. ಯಾರಲ್ಲಿ
ಇದನ್ನು ನಾವು ಕಾಣುವೆವೋ ಅವರಿಂದ ದೂರವಿರುವ ಸ್ವಾತಂತ್ರ್ಯ ನಮಗೆ ಇಂದಿನ ಪ್ರಜಾಪ್ರಭುತ್ವದಲ್ಲಿ ಇದ್ದರೂ
ಅವರಿಗೆ ಸಹಕರಿಸುತ್ತಾ  ನನಗೇನೂ ಸಾಧ್ಯವಿಲ್ಲ ಎನ್ನುವ
ಪ್ರಜೆಗಳಿಂದಲೇ ಭ್ರಷ್ಟಾಚಾರ ಮುಗಿಲುಮುಟ್ಟಿರೋದು.
ಇಷ್ಟಕ್ಕೂ ನಾವು ನೀಡುವ ಸಹಕಾರದಿಂದ ಯಾವ ಧರ್ಮ ಉಳಿದಿದೆ? ಸತ್ಯ ಎಲ್ಲಿದೆ?
ಬದಲಾವಣೆ ಜಗದ ನಿಯಮ. ಬದಲಾವಣೆಗೆ ಸ್ಪಂದಿಸೋದು ಮಾನವ ಧರ್ಮ . ದೇವರನ್ನು ಗುಡಿ ಗೋಪುರಗಳಲ್ಲಿ ಇಟ್ಟು  ಪೂಜಿಸಿದರೆ  ದೈವಶಕ್ತಿ ಬರುವುದೆ?
ದೈವಗುಣವನ್ನು ಬೆಳೆಸಿಕೊಂಡರೆ  ಸಾಧ್ಯ. ದೇವರ ಹೆಸರಿನಲ್ಲಿ
ರಾಜಕೀಯತೆ ನಡೆಸಿದರೆ  ಅಸುರರನ್ನು ಸೃಷ್ಟಿ ಮಾಡಿದಂತೆ.
ಭೂಮಿತಾಯಿಯ ಋಣ ತೀರಿಸಲು ಬಂದ‌ ಜೀವಕ್ಕೆ ಇನ್ನೂ
ಋಣವನ್ನು  ಹೆಚ್ಚಿಸಿರೋದು ರಾಜಕೀಯ. ಇದರಿಂದ ಹೊರ
ಬರಲು ಬೇಕಿದೆ  ಕಾಯಕವೆ ಕೈಲಾಸವೆಂಬ ಮಂತ್ರ.ನಾಮಜಪದಿಂದಲೇ ಕಾಯಕ ಮಾಡಿ. ಒಳಗೇ ಇದ್ದ ಪರಮಾತ್ಮನೆಡೆಗೆ  ಸತ್ಯಜ್ಞಾನದಿಂದ ಹತ್ತಿರವಾಗೋದಕ್ಕೆ  ಮನಸ್ಸು ಮನೆಯೊಳಗಿದ್ದರೆ ಉತ್ತಮ. 
ಶಾಂತಿ ಒಳಗಿದೆ. ಕ್ರಾಂತಿ ಹೊರಗಿದೆ."ಯಾವುದಯ್ಯಾ ದಾರಿ
ವೈಕುಂಟಕ್ಕೆ" ಎನ್ನುವ ಹಾಗೆಯೇ ಯಾವುದಯ್ಯಾ ದಾರಿ ಕೈಲಾಸಕ್ಕೆ?" ಎನ್ನಬಹುದಲ್ಲವೆ?
ಶಿವಶಕ್ತಿಯ ಸಮಾನತೆಯಿಂದಲೇ ಭೂಮಿ  ನಡೆದಿರುವುದು.
ಅಸಮಾನತೆಯಿಂದ  ರಾಜಕೀಯತೆ ಬೆಳೆದಿರೋದು.
ಸಂನ್ಯಾಸಿ ಯ ಹತ್ತಿರ ಹೋಗಿ ಸಂಸಾರದ ನೆಮ್ಮದಿ ಕೇಳಿದರೆ
ಸಂಸಾರಬಿಟ್ಟು ಹೊರಡು ಎನ್ನಬಹುದು. ಸಂಸಾರಿಯ ಕಷ್ಟ
ಸಂಸಾರಿಗಷ್ಟೆ ಅನುಭವಕ್ಕೆ ಬಂದಾಗ  ಅವರವರ ಕಷ್ಟ ನಷ್ಟಕ್ಕೆ ಅವರೆ ಕಾರಣವೆನ್ನುವುದೇ ಆಧ್ಯಾತ್ಮ ಸತ್ಯ. ಸತ್ಯ ಧರ್ಮದ. ಮಾರ್ಗದಿಂದ ಮಾತ್ರ ಬಿಡುಗಡೆ ಎಂದಾಗ ಬೌತಿಕ
ಸತ್ಯವನ್ನು  ಇದೇ ಧರ್ಮ ಎಂದು ಮೂಲ ಬಿಟ್ಟು ನಡೆದರೆ
ತಾತ್ಕಾಲಿಕ ವಷ್ಟೆ. ಈಗ ಕೊರೊನ ಹೇಗೆ ತಿರುಗಿ ಬಂದಿದೆಯೋ  ಹಾಗೆಯೇ  ಮಾಡಿದ ತಪ್ಪಿಗೆ ಶಿಕ್ಷೆಯಿದೆ. ಇಲ್ಲಿ
ಯಾರೂ ಪರಿಪೂರ್ಣರಲ್ಲ. ಹೀಗಾಗಿ ನಮ್ಮ ನಮ್ಮ ಮೂಲ
ನಮಗೆ ಶ್ರೀ ರಕ್ಷೆ. ಕಷ್ಟ  ಎರಡೂ ಕಡೆಯಿದೆ. ಕಷ್ಟ ಪಟ್ಟರೆ ಸುಖವಿದೆ. ಎಲ್ಲಿಂದ ಬಂದಿತೋ ಜೀವ ಅಲ್ಲಿಗೆ ಹೋಗೋವರೆಗೂ  ಕಷ್ಟ ನಷ್ಟ ತಪ್ಪಿದ್ದಲ್ಲ.ಇದಕ್ಕೆ ರಾಜಕೀಯ
ಬಿಟ್ಟು ರಾಜಯೋಗದೆಡೆಗೆ ನಡೆಯುತ್ತಿದ್ದರು ಹಿಂದಿನ ಮಹಾತ್ಮರುಗಳು. ಈಗಿನವರಲ್ಲಿ  ಕೊನೆ ಉಸಿರಿರುವವರೆಗೂ
ರಾಜಕೀಯದ ದಾಹ ಬಿಡುತ್ತಿಲ್ಲ.ಇದಕ್ಕೆ ಕಾರಣ ಸಹಕಾರ.
ಇದು ಧಾರ್ಮಿಕ ಕ್ಷೇತ್ರದಲ್ಲಿಯೂ ಇರುವುದು ದೇಶದ ಧರ್ಮ
ರಕ್ಷಣೆಗೆ  ತೊಡಕಾಗಿದೆ.ಪ್ರಜಾ ಧರ್ಮವೆ ಶ್ರೇಷ್ಠ.
ಪರಧರ್ಮದವರ   ಶಿಕ್ಷಣ, ವ್ಯವಹಾರ,ಸಾಲ,ತಂತ್ರಜ್ಞಾನ, ವಿಜ್ಞಾನ ಎಲ್ಲಾ  ಬೇಕು.ಅವರು ಬೇಡ ಎಂದರೆ?
ಹಾಗೆ  ಭಾರತದ ನೆಲ ಜಲ ವ್ಯವಹಾರ,ಶಿಕ್ಷಣ,ಪ್ರಜಾಸರ್ಕಾರ
ಎಲ್ಲಾ ಪಡೆದು ಭಾರತವನ್ನೇ ಆಳಲು ಹೊರಟರೆ?
ನಾವೆಲ್ಲರೂ ಎಲ್ಲಿ ಸೋತಿರುವುದು? ಗೆದ್ದವರು ಯಾರು?
ಧರ್ಮ ಯಾವುದು? ಅಧರ್ಮ ಎಲ್ಲಿದೆ? ಸಾಲಗಾರರು ಯಾರು? ತೀರಿಸುವುದು ಹೇಗೆ? ಎಲ್ಲಾ ನಮ್ಮ ಜ್ಞಾನದಲ್ಲಿದೆ.
ಸರ್ಕಾರ ಏನೂ ಮಾಡಲಾಗದು. ನಮ್ಮ ಸಹಕಾರ ಸತ್ಯಕ್ಕೆ
ಇದ್ದರೆ  ಸಾಲಮನ್ನಾ ಪರಮಾತ್ಮನೆ ಮಾಡಬಹುದು. ಇಲ್ಲವಾದರೆ ಪರದೇಶಿಗಳಾಗಿ  ಹಿಂದೆ ನಿಲ್ಲುವುದಷ್ಟೆ  ಹಿಂದೂ
ಧರ್ಮ ವಾಗಬಹುದು. ಹಿಂದುಳಿದವರು ಯಾರು?
ಅಲ್ಪಸಂಖ್ಯಾತರಲ್ಲಿ ಒಗ್ಗಟ್ಟು ಮುಖ್ಯ. ವಿಶ್ವದಲ್ಲಿ ಅಲ್ಪಸಂಖ್ಯಾತರು ಯಾರು? ಹೊರಗಿನಿಂದ  ಪರರನ್ನು ಒಳಗೆ ಕರೆದು ಒಳಗಿದ್ದವರನ್ನು ಹೊರಗೆ ದೂಡಿದರೆ ಆಳೋರು ಯಾರು? ಇದು ನಮ್ಮ ಒಳಗಿನ ಜ್ಞಾನಕ್ಕೆ ತಿಳಿಸಿರುವುದಾಗಿದೆ.
ಮೂಲ ಜ್ಞಾನ ಬೆಳೆಸಿಕೊಂಡು ಹೊರಗಿನ ಜ್ಞಾನ  ತಿಳಿಯಬಹುದು. ಕಾಲದ ಪ್ರಭಾವವಷ್ಟೆ.ಅನುಭವಿಸಿದ ಮೇಲೆ ಅರ್ಥ ಆಗಬೇಕು. ಕೆಲವರಿಗೆ ಮೊದಲೇ ತಿಳಿಯುತ್ತದೆ.ಕೆಲವರಿಗೆ ಹೇಳಿ ಕೇಳಿದ ಮೇಲೆ ,ಮತ್ತೆ ಕೆಲವರಿಗೆ  ದಾರಿಯಿಲ್ಲದೆ ಇದ್ದಲ್ಲೇ ಇರುತ್ತಾರೆ. ಕೆಲವರು ಮತ್ತೂ ದಾರಿ ತಪ್ಪಿಸಿ  ನಡೆಸುತ್ತಾರೆ. ಪರಮಾತ್ಮನೆ ಎಲ್ಲರನ್ನೂ ನಡೆಸಿದರೂ ಅವರವರ ಕರ್ಮಕ್ಕೆ ತಕ್ಕಂತೆ ಜೀವ
ನಡೆಯುತ್ತದೆ. ಸಮಸ್ಯೆಗಳು ಬೆಳೆದಿರೋದೆ ರಾಜಕೀಯದಿಂದ. ರಾಜಕಾರಣಿಗಳನ್ನು  ಮುಂದಿಟ್ಟುಕೊಂಡು  ಮಧ್ಯವರ್ತಿಗಳು ನಡೆಸುತ್ತಿರುವ  ವ್ಯವಹಾರದಲ್ಲಿ ಧರ್ಮ ಎಲ್ಲಿದೆ? ಪ್ರಜಾಧರ್ಮ  ಎಲ್ಲರಿಗೂ
ಒಂದೇ  ಅಲ್ಲವೆ?

Tuesday, March 17, 2026

ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?


ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತಿ ಯನ್ನರಿತ ಪೋಷಕರನ್ನು ಕೇಳದಿರೋದೆ ಪರಿಸ್ಥಿತಿ  ಹಾಳಾಗಲು ಕಾರಣ. ಇಷ್ಟಕ್ಕೂ  ಮನೆಯೊಳಗಿನ  ಸಮಸ್ಯೆಗೆ  ಮಕ್ಕಳಾದರೂ ಏನು ಮಾಡಲು ಸಾಧ್ಯ. ಪೋಷಕರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ ಎನ್ನಬಹುದು. ನಮ್ಮಲ್ಲಿರುವ ದೋಷಗಳನ್ನು ನಾವೇ ಕಂಡುಕೊಳ್ಳಲು ಸಾಧ್ಯವಾದರೆ ಪ್ರಯತ್ನಪಡಬೇಕಷ್ಟೆ. ಅದೂ ಸಾಧ್ಯವಾಗದಿದ್ದರೆ ಬೇರೆಯವರನ್ನು ಸರಿಪಡಿಸಲಾಗದೆಂಬುದನ್ನು ಶ್ರೀ ರಾಮಕೃಷ್ಣ ಪರಮಹಂಸರೆ ತಿಳಿಸಿದ್ದಾರಲ್ಲ. ಶ್ರೀ ರಾಮಕೃಷ್ಣ ಪರಮಹಂಸರು ಸಂಸಾರಕ್ಕೆ ಬಂದೂ ಸಂನ್ಯಾಸಿಗಳಾಗಿದ್ದರು. ಇಂದು  ಸಂನ್ಯಾಸಿಗಳಾಗಿದ್ದು ಸಂಸಾರಿಗಳ ಋಣದಲ್ಲಿರುವವರು ಬಹಳ ಮಂದಿ ಇದ್ದಾರೆ. ಮಕ್ಕಳ ವಿಚಾರ ಪೋಷಕರಿಗೇ ಅರ್ಥ ವಾಗದಿದ್ದರೆ   ಹೊರಗಿನ  ಗುರುಗಳಾದರೂ ಏನೂ ಮಾಡಲಾಗದು.
ಎಲ್ಲರೂ    ದೇಶದ ಪ್ರಜೆಗಳಾಗಿ ದೇಶದ ಶಿಕ್ಷಣದ ಬಗ್ಗೆ ಚಿಂತನೆ ನಡೆಸಲು ಅಧಿಕಾರ ಬೇಕೆ?  ದೇಹದೊಳಗೆ ದೇಶೀಯ ಶಿಕ್ಷಣವಿಲ್ಲದೆ ವಿದೇಶಿ ಶಿಕ್ಷಣ ನೀಡಿ  ಸರ್ಕಾರದ  ವಿರುದ್ದ ನಿಂತು ಬೇಡುವವರಿದ್ದರೆದೇಶ ಮುಂದೆ ನಡೆಯಲು 
ಸಾಧ್ಯವೆ? ವಿದೇಶಿಗಳೆ ಮುಂದೆ ಬರುತ್ತಾರಷ್ಟೆ. ಮನೆಯೊಳಗೆ ವಿದೇಶಿಗರನ್ನು ಬೆಳೆಸೋ  ಶಿಕ್ಷಣದಿಂದ   ಪೋಷಕರೆ ಪರದೇಶಿಗಳಾಗಿದ್ದರೆ ಅವರಿಗೆ ಸರ್ಕಾರ ಸಹಾಯ ಮಾಡಿ
ಸಾಕೋವಷ್ಟು  ಮುಂದೆ  ಬರದಿದ್ದರೆ ಸರಿ. ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳಿಗಿದ್ದ ಸಾಮಾನ್ಯಜ್ಞಾನ
ತಿರಸ್ಕರಿಸಿ  ನಡೆದ ಪರಿಣಾಮವೆ ಇಂದಿನ ಕೊರೊನ
ಎನ್ನಬಹುದೆ?
ಔಷಧ  ದೇಹಕ್ಕೆ ಸೇರಿಸಬಹುದು.ಆತ್ಮಕ್ಕೆ ಔಷಧ ಬೇಡವೆ?. ಆತ್ಮ ಅನಾರೋಗ್ಯದಲ್ಲೇ ಹೋದರೆ ಮತ್ತೆ ಹುಟ್ಟಿದಾಗ ರೋಗವೂ ಇರುತ್ತದೆ ಅಲ್ಲವೆ? ಈ ವಿಚಾರಒಂದು ವರ್ಷ
ದಿಂದಲೂ  ತಿಳಿಸುತ್ತಿದ್ದರೂ  ಈಗಲೂರಾಜಕೀಯಬಿಡದಿದ್ದರೆ  
ಪರಿಹಾರವಿಲ್ಲ. ಆತ್ಮ‌ ಸಾಯಲು ಸಾಧ್ಯವೆ?

ರಕ್ತ ಸಂಬಂಧ ದೊಡ್ಡದೋ ಋಣ ಸಂಬಂಧ ವೋ?
ಮಾನವನ ಜನ್ಮವಾಗೋದು ರಕ್ತ ಸಂಬಂಧ ದಿಂದ.
ಜನ್ಮದಾರಭ್ಯದಿಂದ ಹಿಡಿದು ಮರಣದವರೆಗೂ ಬೆಳೆಯುವ ಋಣ ಸಂಬಂಧ ವನ್ನು ಈವರೆಗೆ ಯಾರೂಪೂರ್ಣಪ್ರಮಾಣ
ದಲ್ಲಿ ತೀರಿಸಲಾಗಿಲ್ಲ. ಹೀಗಾಗಿ ಜನ್ಮ ಜನ್ಮಗಳ ಸಂಬಂಧ ಗಳು  ಮಾನವನಿಗೆ  ಬಿಡಿಸಲಾಗದಕಗ್ಗಂಟಾಗುತ್ತಿದೆ. 
ಋಣ ಎಂದರೆ ಸಾಲ. ಇಲ್ಲಿ ಸಂಸಾರ ಹಾಗು ಸಮಾಜದ ಸಾಲವನ್ನು ತೀರಿಸಲು ಜೀವಾತ್ಮಭೂಮಿಗೆ  ಬಂದಿರುವಾಗ 
 ಅದನ್ನು ತೀರಿಸಲು ಬೇಕು ಸತ್ಯಜ್ಞಾನ.
 ಮಿಥ್ಯಜ್ಞಾನದಿಂದ ವ್ಯವಹಾರ ನಡೆಸಬಹುದು. ವ್ಯವಹಾರದಿಂದ. ಹಣ,ಅಧಿಕಾರ ಪಡೆದು  ಸಮಾಜದ ಋಣ ತೀರಿಸಬಹುದು. ಯಾವಾಗಅಜ್ಞಾನ ಹೆಚ್ಚಾಗುವುದೋ  ಆಗ  
ಇನ್ನಷ್ಟು ಅಧರ್ಮಕ್ಕೆತಲೆಬಾಗಿ  ಋಣವನ್ನು ಹೆಚ್ಚಿಸಿಕೊಂಡು
 ಸಮಾಜವನ್ನುದಾರಿ ತಪ್ಪಿಸುವವರು ಬೆಳೆಯುತ್ತಾರೆ. 
ಹಿಂದಿನ ಕಾಲದಲ್ಲಿ ಈ ಕಾರಣಕ್ಕಾಗಿಯೇ ಪ್ರಾಥಮಿಕ
ಶಿಕ್ಷಣವನ್ನು  ಮೂಲ ಧರ್ಮ,ಕರ್ಮ,ಭಾಷೆ, ಸಂಸ್ಕೃತಿ
ಬಿಡದೆ  ನೀಡುತ್ತಿದ್ದರು. ಇದರಿಂದಾಗಿ ಮಕ್ಕಳಲ್ಲಿ ನೈತಿಕತೆ
ಬೆಳೆಸೋ ಸಮಾನತೆಯ ಶಿಕ್ಷಣ ಅಗತ್ಯವಿದೆ. ಆದರೆ ಕಾಲದ ಪ್ರಭಾವ ಮಿತಿಮೀರಿದ ಅಜ್ಞಾನದಲ್ಲಿ, ಸಮಾನತೆಯ ಹೆಸರಲ್ಲಿ   ರಾಜಕೀಯತೆಯನ್ನು ಬೆಳೆಸಿ   ಮಾನವೀಯ 
ಮೌಲ್ಯಗಳನ್ನು ಮೂಲೆಗೆ ತಳ್ಳಿದರೆ ಇಲ್ಲಿ ಬಕಣ್ಣಿಗೆ ಕಾಣೋ 
ವ್ಯವಹಾರಿಕ ಸಂಬಂಧ ವೇ ಮುಖ್ಯ.
ವ್ಯವಹಾರದಲ್ಲಿ ರಕ್ತ ಸಂಬಂಧ ವೂ ಇಲ್ಲ.ಋಣ ಸಂಬಂಧ ವೂ ಇಲ್ಲ. ಕೇವಲ ಲಾಭ ನಷ್ಟಗಳ ಲೆಕ್ಕಾಚಾರವಷ್ಟೆ. ಹಣದಿಂದ  ಲಾಭವಾದರೆ ಜ್ಞಾನದಿಂದ ನಷ್ಟ. .
ಜ್ಞಾನದಿಂದ ಲಾಭವಾದರೆ ಹಣದ ನಷ್ಟ ಕಷ್ಟ.
ಸಮಾಜದ ಋಣ ಸಂಸಾರದೊಳಗಿದ್ದರೂ  ಸಂಸಾರದ
ಋಣ ಸಮಾಜದ ಕಡೆಗೆ  ಬಂದಾಗ  ಸಾಲಮಯ  ಜಗತ್ತು
ಅದರೊಳಗಿರುವ ಮಾನವ ಋಣಮುಕ್ತರಾಗೋದಕ್ಕೆ
ಬಹಳ ಕಷ್ಟ. ಹೀಗಾಗಿ  ಋಣವನ್ನು ಕಳೆದುಕೊಳ್ಳಲು
ಧಾರ್ಮಿಕ ಕಾರ್ಯ ಹೆಚ್ಚಾಯಿತು. ಧಾರ್ಮಿಕ ಕಾರ್ಯ
ರಾಜಕೀಯದ ಕಡೆ ನಡೆದಾಗಲೆ ಅಜ್ಞಾನ ಪ್ರಾರಂಭ.
ಎಲ್ಲಿಯವರೆಗೆ ಧಾರ್ಮಿಕ ಕ್ಷೇತ್ರದಲ್ಲಿ  ಅಸಮಾನತೆ, ಅಸಹಕಾರ,‌ಸ್ವಾರ್ಥ,ಅಹಂಕಾರ,ಅಸತ್ಯ,ಅನ್ಯಾಯ
ಭ್ರಷ್ಟಾಚಾರಕ್ಕೆ  ಬೆಲೆ ಇರುವುದೋ ಅಲ್ಲಿಯವರೆಗೆ
ಧರ್ಮ  ರಕ್ಷಣೆ ಕಷ್ಟ. ಈ ಸಂಬಂಧಗಳಿಂದ ಬಿಡುಗಡೆ
ಪಡೆಯಲು ಯೋಗಿಗಳಿಂದ ಸಾಧ್ಯವೆನ್ನುತ್ತಾರೆ.
ಈಗ ಕೆಲವು ಯೋಗಿಗಳೇ ಭೋಗ ಜೀವನಕ್ಕಾಗಿ ಹೊರ
ಬಂದು ರಾಜಕೀಯ ಸೇರಿದಾಗ  ರೋಗಗ್ರಸ್ತ ಸಮಾಜ
ಹೆಚ್ಚಾಗುತ್ತದೆ. ಸಂನ್ಯಾಸ ಎಂದರೆ ಎಲ್ಲವನ್ನೂ ಬಿಡುವುದು.
ಇದರಲ್ಲಿ ಕೇವಲ ಸಂಸಾರದಿಂದ  ದೂರ ಇರುವುದು ಒಂದಾದರೆ, ಸಂಸಾರಿಗಳಿಂದಲೇ ದೂರ ಇರೋದು ಇನ್ನೊಂದು. ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಋಣ ದೇಶದ 
ತುಂಬಾ ತುಂಬಿದ್ದರೂ, ದೇಶದ ಋಣ ತೀರಿಸಲು ಪ್ರಜೆಗಳಿಗೆ  ಕಷ್ಟವಾಗಿದೆ. ಸಣ್ಣ ದಾದ  ರಕ್ತ  ಸಂಬಂಧದ ಋಣವನ್ನೇ 
ತೀರಿಸಲಾಗದೆ  ಸಮಾಜದ ಋಣ ಏರಿಸಿಕೊಂಡು  ಅದನ್ನು  ತೀರಿಸಲಾಗದೆ ದೇಶವನ್ನೇ ಸಾಲಕ್ಕೆ ತಳ್ಳಿ,ವಿದೇಶದ ಋಣವನ್ನು ಹೆಚ್ಚಿಸಿ ಅವರನ್ನೇ ದೇಶದೊಳಗೆ  ಕರೆತಂದು
 ಭೂಮಿಯನ್ನೇ ಬಿಟ್ಟು  ಪರಾವಲಂಬನೆ ಗೆ ಒಳಗಾಗಿರುವಾಗ ಸ್ವಾತಂತ್ರ್ಯಯಾರ ಪಾಲಾಯಿತು? ಯಾರ ಋಣಬಾರದಿಂದ
 ಯಾರಿಗೆ ಲಾಭವಾಯಿತು? 
ರಕ್ತವನ್ನು ದಾನಮಾಡುವಷ್ಟು ವಿಜ್ಞಾನ ಜಗತ್ತು ಬೆಳೆದಿದೆ.
ರಕ್ತಹಂಚಿಕೊಂಡು ಹುಟ್ಟಿ ಬೆಳೆದ ಹತ್ತಿರದ ಸಂಬಂಧ
ಬಂಧನ ವಾದರೆ  ಅಜ್ಞಾನವಲ್ಲವೆ?
ಯಾರಿಗೆ ಯಾರೂ ಶತ್ರುವಲ್ಲ.ಮಿತ್ರರಲ್ಲ ಎನ್ನುವುದಾದರೆ
ಸಮಾಜದ ಋಣ ತೀರಿಸಲು  ಕಷ್ಟವಿಲ್ಲ. ಪರಮಾತ್ಮನು
ಎಲ್ಲರಲ್ಲಿಯೂ ಇದ್ದಾನೆಂದ ಮೇಲೆ ಯಾರೂ ಬೇರೆಯಲ್ಲ
ಆದರೆ, ಅವರವರ ಹಿಂದಿನ ಜನ್ಮದ ಧರ್ಮ ಕರ್ಮಗಳ
ಮೇಲೆ ನಿಂತಿರುವ ಋಣವನ್ನು  ಯಾರೂ  ಅರ್ಥ ಮಾಡಿ
ಕೊಳ್ಳಲಾಗದೆ  ಮನುಕುಲವು ಅತಂತ್ರಸ್ಥಿತಿಗೆ ತಲುಪಿದೆ.
ಕೊರೊನ ರೋಗವೂ  ಜೀವಕ್ಕೆ ಸವಾಲಾಗಿ ನಿಂತಿದ್ದರೂ
ಅದರೊಳಗೂ ರಾಜಕೀಯತೆ ಪ್ರದರ್ಶನ ಮಾಡುತ್ತಾ ವ್ಯವಹಾರ ನಡೆಸಿದರೆ  ಈ ರೋಗದ ಋಣವನ್ನು ದೇಹ
ಅನುಭವಿಸಲೇಬೇಕಲ್ಲವೆ?
ವರ್ಷದ ಹಿಂದೆ ಆವರಿಸಿದ ಕೊರೊನ ಮತ್ತೆ ತನ್ನ ಹಿಂದಿನ ಪ್ರಭಾವ ತೋರಿಸುತ್ತಿದೆ ಎಂದರೆ, ಮಾನವನು
ಎಚ್ಚೆತ್ತುಕೊಳ್ಳದೆ ಮತ್ತೆ ಹಿಂದಿನ ಹಾಗೆ ಭ್ರಷ್ಟಾಚಾರ ದಲ್ಲಿ
ಹೊರಗೆ ಬಂದಿದ್ದಾನೆಂದರ್ಥ.
ರೋಗದ ಪ್ರಾರಂಭದಲ್ಲಿ  ಎಲ್ಲಾ ಹೆದರಿ ಮೂಲೆ ಸೇರಿ
ಧಾರ್ಮಿಕ ಕ್ಷೇತ್ರವೇ ತಣ್ಣಗಾಗಿತ್ತು.ಆದರೆ  ಔಷಧ ಬಂದ
ಮೇಲೆ ಯಥಾಪ್ರಕಾರ ಸ್ವೇಚ್ಚಾಚಾರಕ್ಕೆ ಇಳಿಯುತ್ತಿರುವ
ಜನರಿಗೆ ಮತ್ತೆ  ಎಚ್ಚರಿಕೆಯ ಗಂಟೆ ಹೊಡೆಯುತ್ತಿರುವುದರ ಉದ್ದೇಶ ಒಂದೇ, ಜೀವ ಇದ್ದರೆ ಜೀವನ. ಜೀವನ ಎಂದರೆ ಜೀವಿಗಳ ವನ.ಒಗ್ಗಟ್ಟು ಇದ್ದರೆ ಶಕ್ತಿ. ಈ ಸೂಕ್ಷ್ಮ ವಿಚಾರಗಳು  ಜನಸಾಮಾನ್ಯರಿಗೆ  ಅರ್ಥ ವಾದರೂ ಎತ್ತರಕ್ಕೆ ಏರಿದವರಿಗೆ 
ಅರ್ಥ ಆಗದೆ  ಜನರನ್ನು ರಾಜಕೀಯಕ್ಕೆಳೆದು  ತಮ್ಮ 
ಅಧಿಕಾರವನ್ನುಚಲಾಯಿಸಿದರೆ  ಸಂಬಂಧ ಗಳಲ್ಲಿ ಯಾವ
 ಸಾತ್ವಿಕತೆ ಇರೋದಿಲ್ಲ. 
ರಕ್ತಸಂಬಂಧವಾಗಲಿ,ಋಣ ಸಂಬಂಧ ವಾಗಲಿ ಯಾರೂ ಕಣ್ಣಿನಿಂದ ನೋಡಿ ತೀರಿಸಲಾಗದು.
ಇದಕ್ಕೆ ಜ್ಞಾನದ ಚಕ್ಷುವಿನ‌ ಅಗತ್ಯವಿದೆ. ಜ್ಞಾನ ಒಳಗಿದೆ.
ಕಣ್ಣು ಹೊರಗಿದೆ. ಆಂತರಿಕ ಕಣ್ಣನ್ನು ತೆರೆಸಲು ಕೊರೊನ
ಬಂದಿದೆ. ಇದನ್ನು ವ್ಯವಹಾರದಿಂದ ಹೋಗಲಾಡಿಸಲು
ಕಷ್ಟವಿದೆ. ಧರ್ಮದಿಂದ, ಸತ್ಯಜ್ಞಾನದಿಂದ ಸಾಧ್ಯವಿದೆ.
ಸತ್ಯ ನಮ್ಮೊಳಗಿದೆ. ಸತ್ಯವೇ‌ದೇವರಾಗಿದೆ.
ಆತ್ಮಾವಲೋಕನ ಅಗತ್ಯವಾಗಿದೆ.
ಅಣುಗಾತ್ರದ ಒಂದು ವೈರಸ್‌ ಮನುಕುಲಕ್ಕೆ ಸವಾಲಾಗಿ
ನಿಂತಿರುವಾಗ  ಅಸಂಖ್ಯಾತ  ಅಣು ಪರಮಾಣುಗಳ ಹಿಂದೆ  ನಿಂತು  ತನ್ನ ರಾಜಕೀಯ ಪ್ರಭಾವಕ್ಕೆ  ತಿಳಿಯದೆ
ವಶವಾಗಿರುವ  ಮನುಕುಲದ ಒಳಿತು ವೈಚಾರಿಕತೆಯಲ್ಲಿ
ಅಡಗಿದೆ. ವೈಜ್ಞಾನಿಕ  ಜಗತ್ತು ಇದನ್ನು ವಿರೋಧಿಸಿದರೆ ವೈರಸ್ ಇನ್ನಷ್ಟು  ಉಗ್ರರೂಪ ತಾಳುವುದಿಲ್ಲವೆ?
ವಾದ ವಿವಾದಕ್ಕೆ ಸಿಲುಕದ  ಇದನ್ನು ಆತ್ಮಜ್ಞಾನದಿಂದ ತಿಳಿಯೋ ಬದಲು  ವಿಜ್ಞಾನದಿಂದ ಓಡಿಸಲು ಕಷ್ಟ.
ಯಾಕೆ ಭಾರತ ಹೀಗಾಯಿತು? ಇದಕ್ಕೆ ಸ್ವದೇಶಿಗಳು ಪರಕೀಯರನ್ನು  ಆಶ್ರಯಿಸಿದ್ದು ಕಾರಣವೆ? 
ಅಥವಾ ನಮ್ಮ ಅಜ್ಞಾನದ ಶಿಕ್ಷಣದ ರಾಜಕೀಯ ಕಾರಣವೆ?
ಮಾಧ್ಯಮಗಳು ಈ ವಿಚಾರದಲ್ಲಿ ಚರ್ಚೆ ನಡೆಸಿದರೆ ಉತ್ತಮ.
ಚರ್ಚೆ ನಡೆಸುವುದಕ್ಕೂ  ಇವರಿಗೆ ಮನೆಯಿಂದ ಹೊರಗಿರುವ  ಪ್ರತಿಷ್ಠಿತರೆ  ಆಗಬೇಕಾದರೆ ಯಾವ ಉಪಯೋಗವಿಲ್ಲ. ಅನುಭವವಿಲ್ಲದ ವಿದ್ಯೆಗಿಂತ ಅನುಭವದ ಜ್ಞಾನವೇ ದೊಡ್ಡದು. ಅದು ಪೋಷಕರಲ್ಲಿದೆ. ದೇಶದ‌ ಸಾಮಾನ್ಯ ಪ್ರಜೆಗಳಲ್ಲಿದೆ. ಪ್ರಜಾಪ್ರಭುತ್ವ  ದೇಶದಲ್ಲಿ ಪ್ರಜೆಗಳ ಸಾಮಾನ್ಯಜ್ಞಾನದಿಂದಲೇ ಬದಲಾವಣೆ ಸಾಧ್ಯವಿದೆ. ಇದನ್ನು ಮಾಧ್ಯಮದವರು ತಿಳಿದಾಗಲೆ  ಬದಲಾವಣೆ ಸಾಧ್ಯವೆನ್ನಬಹುದು. ಯಾರನ್ನೋ ಯಾರೋ ಆಳಲು ಇದು
ರಾಜಪ್ರಭುತ್ವವಲ್ಲ. ಧರ್ಮ ವೂ ಅಲ್ಲ.

Saturday, March 7, 2026

ಭೂ ಗ್ರಹದ ರಕ್ಷಣೆ

ಭಾಗವತದಲ್ಲಿ ಬರುವ ಒಂದು ವಿಷಯ, ಭೂಮಿಯನ್ನು ನೀರಿನಲ್ಲಿ ಮುಳುಗಿಸಿದ ಅಸುರರಿಂದ ಸಂಕಷ್ಟಗಳಾಗಿ ಬ್ರಹ್ಮನಿಗೆ ಸೃಷ್ಟಿ ಕಾರ್ಯಕ್ಕೆ ಅಡಚಣೆಗಳಾದಾಗ ಬ್ರಹ್ಮನ  ಮೂಗಿನ ಹೊಳ್ಳೆಯಿಂದ ಭಗವಂತನು ವರಾಹಾವತಾರದಲ್ಲಿ ಹೊರಬಂದು ಬೃಹದಾಕಾರದಿಂದ ಬೆಳೆದು  ನಿಂತು  ಸಮುದ್ರದೊಳಗೆ ಹೊಕ್ಕಿ  ಭೂಮಿಯನ್ನು ಎತ್ತಿ ಸ್ವಸ್ಥಾನದಲ್ಲಿರಿದನೆಂದಿದೆ. ಆ ಸಮಯದಲ್ಲಿ  ಹಿರಣ್ಯಾಕ್ಷನ ಉಪಟಳ  ತ್ರಿಲೋಕದವರೆಗೂ ಸಹಿಸಲಾಗದ ಪರಿಸ್ಥಿತಿಯಲ್ಲಿ  ಹಿರಣ್ಯಾಕ್ಷನನ್ನು  ಭಗವಂತ ಕೊಂದನೆಂದಿದೆ.
ಅಂದರೆ  ಭೂಮಿ ಇಲ್ಲವಾದಾಗಲೂ   ದೇವಾಸುರರು  ಜೀವಿಸುತ್ತಿದ್ದರೆಂದಾಯಿತು. ಸಪ್ತ ಲೋಕವೆಂಬುದಿದೆ ಅದರಲ್ಲಿ  ಅನ್ಯ ಜೀವಿಗಳಿವೆ.ಎಲ್ಲವನ್ನೂ  ತನ್ನ ಹತೋಟಿಯಲ್ಲಿಟ್ಟುಕೊಂಡಿರುವ ಮೂಲ ಶಕ್ತಿ ಒಂದೇ ಆಗಿದೆ. ಮೂಲಪುರುಷನೇ ಅವನಾಗಿದ್ದಾನೆ. ಅವನಿಂದಲೇ  ಜನ್ಮ ಪಡೆದ ದೇವಾಸುರರು,ಮಾನವರು,ಜೀವ ಜಂತು ಚರಾಚರಗಳೂ  ತಮ್ಮದೇ ಆದ  ದಾರಿಯಲ್ಲಿ ನಡೆದರೂ  ಮೂಲದಿಂದ ‌ಬೇರೆಯಾಗದು. 
ಹೀಗಾಗಿ ಆಧ್ಯಾತ್ಮ ಆದಿ ಆತ್ಮ ಆದಿ ದೇವ,ಆದಿ ಪುರುಷ ಶಕ್ತಿಯೆಡೆಗೆ‌  ನಡೆಯುವುದು ಅಧ್ಯಾತ್ಮವಾಗಿದೆ.‌

ಎಷ್ಟೋ ಪುರಾಣಗಳ ಕಥೆಯಲ್ಲಿ  ಆಧ್ಯಾತ್ಮ ಆದಿ ಭೌತಿಕ ಗಳ  ಸಮಾಗಮವಾಗಿದೆ. ಅದರ ಅರಿವು ಅಲ್ಪ ಸ್ವಲ್ಪ ಮಾನವ ಅರಿತು ನಡೆದು ಮಹಾತ್ಮರಾಗಿರುವರು. 
ಅಮಾನುಷ ಶಕ್ತಿ‌  ಜಗತ್ತನ್ನು ಆಳುತ್ತದೆ.‌ಆಳುವಾಗ  ಧರ್ಮ ಸೂಕ್ಮವಾಗಲಿ ಸತ್ಯವಾಗಲಿ  ತಪ್ಪಿದ್ದರೆ‌  ಆಳಾಗಿ ಜನಿಸೋದನ್ನು ತಪ್ಪಿಸಲಾಗದು. 
ಈಗಲೂ ನಾವೆಲ್ಲರೂ ಆಳುಗಳೇ ಆಗಿದ್ದರೂ ಅರಸರಾಗುವ ಕನಸನ್ನು ಕಾಣುತ್ತಾ‌ ಜೀವ ಹೋಗುತ್ತದೆ‌ ಮತ್ತೆ ಬರುತ್ತದೆ.ಕಾಲಮಾನಕ್ಕೆ ತಕ್ಕಂತೆ ಕೆಲವುಬದಲಾವಣೆ ಭೂಮಿಯಲ್ಲಾದರೂ  ಅನ್ಯಗ್ರಹದಲ್ಲಾಗಿರದು.‌

Wednesday, January 28, 2026

ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ಧರ್ಮದಿಂದ ದುಡಿದು ಗಳಿಸಿದರಲ್ಲಿಯೇ ದಾನ ಮಾಡಿ ಹೋಗಿದ್ದಾರೆಂದರೆ  ಆತ್ಮಜ್ಞಾನದ ನಂತರವೇ  ಪರಮಸತ್ಯದ ಅರಿವಾಗೋದು. ಅಜ್ಞಾನದ ಕಣ್ಣಿಗೆ ಎಲ್ಲವೂ ತನ್ನದೆಂದೇ ಕಾಣೋದು ಮಾಯೆಯಾಗಿದೆ. ಅದಕ್ಕೆ ಶ್ರೀ ಶಂಕರರು ತಿಳಿಸಿದಂತೆ ಜಗತ್ ಮಿಥ್ಯ ಬ್ರಹ್ಮನ್ ಸತ್ಯ. ಸತ್ಯವನ್ನು ಬಿಟ್ಟು ಜಗತ್ತಿನಲ್ಲಿ ನಡೆದರೆ ಭೂಮಿ  ಅತೃಪ್ತ ಆತ್ಮಗಳ ಸಾಮ್ರಾಜ್ಯವಾಗುತ್ತದೆ.
ಹಣಕೊಟ್ಟು ಬಡತನ ತೀರಿಸುವ ಅಜ್ಞಾನ ಬಿಟ್ಟು ಒಳಗಿನ ಸುಜ್ಞಾನ ಬೆಳೆಸೋ ಶಿಕ್ಷಣ ಕೊಟ್ಟು ನಡೆಯಲು ಸಹಕರಿಸಿದರೆ  ಸ್ವಂತ ಬುದ್ದಿ ಜ್ಞಾನ ಸ್ವಾತಂತ್ರ್ಯ ಎಲ್ಲವೂ ಆಸ್ತಿಯಾಗಿರುತ್ತದೆ.
ಕಾಲ ಬಂದಾಗ ನಮಗೆ ಸೇರಬೇಕಾಗಿದ್ದು ಸೇರುತ್ತದೆ.ಇದು ಜ್ಞಾನವೂ ಆಗಿರುತ್ತದೆ. ತಾಳ್ಮೆ ಇರಬೇಕಷ್ಟೆ.
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಬೋಗಿಗೆ ಎನ್ನುವುದು ಸತ್ಯ. ಯೋಗದಿಂದ ಋಣ ಕಳ ಎಸ್ ದರೆ ಭೋಗದಿಂದ ಋಣ ಹೆಚ್ಚುವುದಷ್ಟೆ ವ್ಯತ್ಯಾಸ.

Sunday, January 25, 2026

ಸತ್ಯಾನ್ವೇಷಣೆಗೆ ಆತ್ಮಾವಲೋಕನ ಅಗತ್ಯವಿದೆ.

ಜೀವನದಲ್ಲಿ ಸ್ವತಂತ್ರ ವಾಗಿ ಸತ್ಯಾನ್ವೇಷಣೆ ಮಾಡೋದು ಕಷ್ಟ.ಸತ್ಯವನ್ನು ಒಳಗೆ ಅನುಭವಿಸಲೂ  ಕಷ್ಟ. ಹೊರಗೆ ನೋಡಲೂ ಕಷ್ಟ. ಕಾಣದ ಸತ್ಯ ಕಾಣುವ ಸತ್ಯಕ್ಕಿಂತ ಬಹಳ ಆಳ ಅಗಲ ಎತ್ತರ ಇರುವುದರಿಂದ  ಸತ್ಯ  ಮರೀಚಿಕೆಯಂತಿರುತ್ತದೆ. ಎಲ್ಲೋ ಒಮ್ಮೆ ಅನುಭವಕ್ಕೆ ಬಂದರೂ ಹಿಡಿದಿಡಲಾಗದು. ಹೀಗಾಗಿ ಎಷ್ಟೋ ಮಹಾತ್ಮರು ಸಾದುಪುರುಷರು ಸತ್ಯವನ್ನು  ತೋರಿಸಲಾಗದೆ ಮುಂದೆ ಹೋಗಿರುವರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದು ಪ್ರಶ್ನೆ ಮಾಡೋದೇ ತಪ್ಪೆ? 
ತಪ್ಪು ಪ್ರಶ್ನೆ ಮಾಡೋದರಲ್ಲಿಲ್ಲ  ತೋರಿಸಲಾಗದ್ದನ್ನು  ನೋಡಿದೆ ಎನ್ನುವುದು ತಪ್ಪು. ಅನುಭವಿಸಿರೋದನ್ನು ಹೇಳಬಹುದಷ್ಟೆ ಆದರೆ ಅಂತಹ ಅನುಭವ ಎಲ್ಲರಿಗೂ ಆಗಲೇಬೇಕು ಆಗುತ್ತದೆ ಎನ್ನಲಾಗದು. 
ದೇವರ ವಿಷಯದಲ್ಲೂ ಇದೇ ನಡೆದಿದೆ. ದೈವತ್ವಕ್ಕೆ ಇತಿಮಿತಿಗಳಿಲ್ಲ ಇದು ಯಾವ ರೂಪದಲ್ಲಿ ಯಾರಲ್ಲಾದರೂ  ಇರಬಹುದು. ಹಾಗಂತ ಅವರೆ ದೇವರು ಎನ್ನಲಾಗದು.
ವ್ಯಕ್ತಿಗಿಂತ ಶಕ್ತಿ ದೊಡ್ಡದು. ಆ ಶಕ್ತಿ ದೈವೀಕ ,ಅಸುರಿ ಮಾನವೀಯ ಗುಣಗಳನ್ನು ಹೊಂದಿರುವಾಗ  ಅವರವರ ಕಾಯಕ ನಡೆ ನುಡಿಯಲ್ಲಿ  ಕಂಡರೂ  ಅದೂ ಯಾವ ರೂಪ ತಾಳಬಹುದೆನ್ನುವ  ಸ್ಪಷ್ಟವಿರದು. ಕೊನೆಯುಸಿರಿರುವರೆಗೂ ಮಾನಸಿಕ ಬದಲಾವಣೆ ಮನುಷ್ಯನಿಗಾಗುತ್ತದೆ.

ಒಬ್ಬ ಸಾಮಾನ್ಯ ವ್ಯಕ್ತಿ  ತನ್ನ ಸಾತ್ವಿಕ ಗುಣದಿಂದ ದೈವತ್ವಕ್ಕೆ ಏರಬಹುದು.ತಾಮಸಿಕ ಗುಣದಿಂದ  ಅಸುರರಾಗಬಹುದು .
ಹಾಗಾಗಿ ಇರುವ ಒಂದು ಸತ್ಯವ ಹಿಡಿದವರು ದೇವರೆಡೆಗೆ ನಡೆದರೆ  ಅರ್ಧ ಸತ್ಯ ಮಾನವನನ್ನು  ಎರಡೂ ಕಡೆ ಎಳೆಯಿತು.ಅಸತ್ಯವಂತೂ  ತೀರಾ ಕೆಳಮಟ್ಟದವರೆಗೆಳೆದು  ಅಜ್ಞಾನ ಬೆಳೆಸಿತು.‌ಹೀಗಾಗಿ ಸತ್ಯವೇ ದೇವರೆಂದರು. ಅದು ಆತ್ಮವಿಶ್ವಾಸ ಆತ್ಮಜ್ಞಾನ ಆತ್ಮಾವಲೋಕನ ದೆಡೆಗೆ  ನಡೆಸಿ ಆಧ್ಯಾತ್ಮ  ಸಾಧನೆಯಾಯಿತು. ಆಧ್ಯಾತ್ಮ  ಸಾಧನೆ ಅಂತರಂಗದ ಶುದ್ದಿಯಿಂದಾದರೆ  ಆಧ್ಯಾತ್ಮ ವಿಜ್ಞಾನ.
ಭೂಮಿಯ ಮೇಲಿದ್ದೇ  ಆಕಾಶಕಾಯ ಗ್ರಹ ನಕ್ಷತ್ರಗಳ ಚಲನ ವಲನಗಳನ್ನು ತಿಳಿಸೋದಕ್ಕೆ ಆತ್ಮಜ್ಞಾನಿಗಳಿಗೆ‌ಮಹರ್ಷಿಗಳಿಗೆ 
ಸಾಧ್ಯವಾಗಿದೆ ಎಂದರೆ  ಒಳಗಿರುವ ಆತ್ಮವೇ ದೇವರು. ಇದು ಅಸುರರೊಳಗಿದ್ದರೂ  ಸರಿ ಸುರರಲ್ಲಿದ್ದರೂ ಸರಿ ಪರಮಾತ್ಮನೊಬ್ಬನೆ  ಎಲ್ಲರನ್ನೂ ನಡೆಸೋದೆನ್ನುವುದೇ ಅಧ್ವೈತ. ಅಣು ರೇಣು ತೃಷಕಾಷ್ಟ ಪರಿಪೂರ್ಣ ಗೋವಿಂದ. ಎಂದರೆ ಅಣುಗಾತ್ರದ ಈ ಜೀವಾತ್ಮ ನಿಗೆ ಮೋಕ್ಷ ಸಿಗಲು ಗೋವಿಂದನ ನೆನೆದರಾಯಿತು. ಇದಕ್ಕೆ ಮೋಹದ ಕ್ಷಯವಾಗಬೇಕಿದೆ.

ಸ್ಮರಣೆಯೊಂದೇ ಸಾಲದೆ ಗೋವಿಂದನಾ....ನಾಮ ಒಂದೇ ಸಾಲದೇ.. ಎಂದು ದಾಸಶ್ರೇಷ್ಟರು ಹೇಳಿರುವರು.
ಪರಮಸತ್ಯ ಪರಮಾತ್ಮನ ಸತ್ಯ ಒಂದೇ ಆಗಿದ್ದರೂ  ನಾಮ ಹಲವು. ಒಂದೇ ನಾಮವಹಿಡಿದರೂ ಒಂದೇ ಸತ್ಯ.