ಪರಮಾತ್ಮನ ಕಾಣೋದು ಹೇಗೆ?

ಪರಮಾತ್ಮನಿರೋದೆಲ್ಲಿ? ಪರಮಾತ್ಮ ಎಲ್ಲರಲ್ಲಿಯೂ ಇದ್ದು ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯ‌ನಡೆಸುವನೆಂಬುದು ಅಧ್ವೈತ. ಪರಮಾತ್ಮನ‌ಜೊತೆಗೆ ಜೀವಾತ್ಮನು ಸೇರಿಕೊಂಡು  ಸೃಷ್ಟ...

Wednesday, January 28, 2026

ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ಧರ್ಮದಿಂದ ದುಡಿದು ಗಳಿಸಿದರಲ್ಲಿಯೇ ದಾನ ಮಾಡಿ ಹೋಗಿದ್ದಾರೆಂದರೆ  ಆತ್ಮಜ್ಞಾನದ ನಂತರವೇ  ಪರಮಸತ್ಯದ ಅರಿವಾಗೋದು. ಅಜ್ಞಾನದ ಕಣ್ಣಿಗೆ ಎಲ್ಲವೂ ತನ್ನದೆಂದೇ ಕಾಣೋದು ಮಾಯೆಯಾಗಿದೆ. ಅದಕ್ಕೆ ಶ್ರೀ ಶಂಕರರು ತಿಳಿಸಿದಂತೆ ಜಗತ್ ಮಿಥ್ಯ ಬ್ರಹ್ಮನ್ ಸತ್ಯ. ಸತ್ಯವನ್ನು ಬಿಟ್ಟು ಜಗತ್ತಿನಲ್ಲಿ ನಡೆದರೆ ಭೂಮಿ  ಅತೃಪ್ತ ಆತ್ಮಗಳ ಸಾಮ್ರಾಜ್ಯವಾಗುತ್ತದೆ.
ಹಣಕೊಟ್ಟು ಬಡತನ ತೀರಿಸುವ ಅಜ್ಞಾನ ಬಿಟ್ಟು ಒಳಗಿನ ಸುಜ್ಞಾನ ಬೆಳೆಸೋ ಶಿಕ್ಷಣ ಕೊಟ್ಟು ನಡೆಯಲು ಸಹಕರಿಸಿದರೆ  ಸ್ವಂತ ಬುದ್ದಿ ಜ್ಞಾನ ಸ್ವಾತಂತ್ರ್ಯ ಎಲ್ಲವೂ ಆಸ್ತಿಯಾಗಿರುತ್ತದೆ.
ಕಾಲ ಬಂದಾಗ ನಮಗೆ ಸೇರಬೇಕಾಗಿದ್ದು ಸೇರುತ್ತದೆ.ಇದು ಜ್ಞಾನವೂ ಆಗಿರುತ್ತದೆ. ತಾಳ್ಮೆ ಇರಬೇಕಷ್ಟೆ.
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಬೋಗಿಗೆ ಎನ್ನುವುದು ಸತ್ಯ. ಯೋಗದಿಂದ ಋಣ ಕಳ ಎಸ್ ದರೆ ಭೋಗದಿಂದ ಋಣ ಹೆಚ್ಚುವುದಷ್ಟೆ ವ್ಯತ್ಯಾಸ.

No comments:

Post a Comment