ಬ್ರಹ್ಮಜ್ಞಾನ= ಬ್ರಾಹ್ಮಣ?

🚩🔯🌸🌄⚛🌅🌸 *ಸಂಸಾರಜಸುಖಾಸಕ್ತಂ* *ಬ್ರಹ್ಮಜ್ಞೋಸ್ಮೀತಿ ವಾದಿನಮ್ |* *ಕರ್ಮಬ್ರಹ್ಮೋಭಯಭ್ರಷ್ಟಂ* *ಸಂತ್ಯಜೇದಂತ್ಯಜಂ ಯಥಾ ||* (ಗರುಡಪುರಾಣ) "ನಾನು ಬ್...

Friday, May 8, 2026

ಬ್ರಹ್ಮಜ್ಞಾನ= ಬ್ರಾಹ್ಮಣ?

🚩🔯🌸🌄⚛🌅🌸

*ಸಂಸಾರಜಸುಖಾಸಕ್ತಂ*
*ಬ್ರಹ್ಮಜ್ಞೋಸ್ಮೀತಿ ವಾದಿನಮ್ |*
*ಕರ್ಮಬ್ರಹ್ಮೋಭಯಭ್ರಷ್ಟಂ*
*ಸಂತ್ಯಜೇದಂತ್ಯಜಂ ಯಥಾ ||*
(ಗರುಡಪುರಾಣ)

"ನಾನು ಬ್ರಹ್ಮಜ್ಞಾನಿ"ಯೆಂದು ಹೇಳಿಕೊಳ್ಳುತ್ತ ಸಂಸಾರಸುಖದಲ್ಲಿ ಆಸಕ್ತನಾದವನು ಕರ್ಮ ಮತ್ತು ಬ್ರಹ್ಮ ಇವೆರಡನ್ನೂ ಅರಿಯದ ಭ್ರಷ್ಟ. ಅವನನ್ನು ನೀಚನೆಂದು ವರ್ಜಿಸಬೇಕು.
ಜನ್ಮದಿಂದ ಯಾರೂ ಬ್ರಹ್ಮನನ್ನು  ಅರಿಯುವುದಿಲ್ಲ. ಜ್ಞಾನದಿಂದ  ಅರಿಯಬಲ್ಲ.ಯಾವುದೇ ವ್ಯಕ್ತಿಯ ಕುರಿತು  ವಿಷಯವನ್ನು  ತಿಳಿಯುವುದರಿಂದ ಏನೂ ಅರ್ಥ ವಾಗದು. ಅಂತಹ ವ್ಯಕ್ತಿತ್ವ  ನಮ್ಮೊಳಗೆ ಇದ್ದಾಗಷ್ಟೆ ಅರಿವಿಗೆ ಬರುತ್ತದೆ. ಪ್ರತಿಯೊಂದು ವ್ಯಕ್ತಿಯೂ  ಬೇರೆ ಬೇರೆ ಇದ್ದರೂ ಒಳಗಿನ ಶಕ್ತಿಯ ಮುಂದೆ ಎಲ್ಲಾ ಒಂದೇ ಎನ್ನುವ ತತ್ವಜ್ಞಾನವನ್ನು ತಂತ್ರವಾಗಿಸಿದರೆ  ಸತ್ಯವಿರದು. ಸ್ವತಂತ್ರ  ನಮ್ಮ ಆತ್ಮಜ್ಞಾನದಿಂದ ಬೆಳೆದರೆ  ಬ್ರಹ್ಮಾಂಡದ ಒಂದು ಅಣುವಿನಲ್ಲಿರುವ ಜ್ಞಾನ  ನಮ್ಮೊಳಗೆ ಇಲ್ಲವಲ್ಲ ಎನ್ನುವ ಸತ್ಯವರಿತು ಅಹಂಕಾರ ಅಳಿಯುತ್ತದೆ.

ಬ್ರಾಹ್ಮಣರು ರಾಜಕೀಯ‌ನಡೆಸಬಾರದೆ? ನಡೆಸೋದರಿಂದ ಏನಾಗುತ್ತದೆ?
ಬ್ರಾಹ್ಮಣ ಎನ್ನುವ ವರ್ಣದ ಪ್ರಕಾರ ಬ್ರಾಹ್ಮಣರು ರಾಜಕೀಯಕ್ಕೆ ಇಳಿಯುವುದರಿಂದ‌ ಕಷ್ಟ ನಷ್ಟಗಳಾಗುತ್ತದೆ.ಆದರೆ ಇಂದು ಜಾತಿಯಾಗಿರುವಾಗ ಹಲವಾರು ಬ್ರಾಹ್ಮಣರ ಸಂಘಗಳಿವೆ  ಆ ಸಂಘಟಣೆಯ ಮೂಲ ಗುರಿ ಧರ್ಮ ರಕ್ಷಣೆಯಾಗಿದ್ದರೆ  ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆ ಯನ್ನು ಸರಿಪಡಿಸುವುದಕ್ಕೆ ರಾಜಕೀಯ ಪ್ರವೇಶ ಮಾಡುವುದು ಅಗತ್ಯವಿದೆ.ಆದರೆ  ತತ್ವಜ್ಞಾನದ ಅರಿವಿಲ್ಲದವರು ಇಳಿದರೆ ಇನ್ನಷ್ಟು ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟು ಅಧಿಕಾರ ನಡೆಸುವಂತಾಗಬಹುದು.
ಆಳೋದನ್ನು ರಾಜಕೀಯ ಎನ್ನುವರು.ಆಳಾಗಿ ದುಡಿಯೋದನ್ನು ಸೇವೆ ಎನ್ನುವರು.ಇಲ್ಲಿ ಯಾರ ಸೇವೆ ಯಾರು ಮಾಡಬೇಕೆಂಬುದರ ಅರಿವಿರೋದು ಅಗತ್ಯವಿದೆ.
ಪರಮಾತ್ಮನ ಸೇವೆ ಎಂದರೆ ಪರಮಾತ್ಮ ಎಲ್ಲೆಡೆಯೂ ಇರುವನು.‌ಧಾರ್ಮಿಕ ಸೇವೆ ಎಂದರೆ ಧರ್ಮ ಎಲ್ಲಿದೆ ಎನ್ನುವ ಅರಿವಿರಬೇಕು.
ನಿಜವಾಗಿಯೂ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆಯೆ? ಪ್ರಶ್ನೆಗೆ ಉತ್ತರ ಸಿಗೋದೆ‌ ಕಷ್ಟ.
ಪ್ರಜೆಗಳೇ‌ ದೇಶವನ್ನು ಆಳೋದಾದರೆ ಧರ್ಮ ಸತ್ಯ ಇದ್ದರೆ  ಆತ್ಮನಿರ್ಭರ. ಅಸತ್ಯ ಅಧರ್ಮ ವೇ‌ ಮರೆದರೆ ಆತ್ಮದುರ್ಭಲ.
ಇಲ್ಲಿ ಆತ್ಮ ಎಂದಾಕ್ಷಣ  ಎಲ್ಲರಲ್ಲಿಯೂ ಅಡಗಿರುವ ಆ ಶಕ್ತಿಯ ಅರಿವಿರೋದು ಬ್ರಾಹ್ಮಣರಿಗೆ ಹೀಗಾಗಿ  ಆಳುವುದು ಕಷ್ಟ. ಪರಮಾತ್ಮ ಒಬ್ಬನೇ ಎನ್ನುವ ತತ್ವದರ್ಶನ ಆದ ಮೇಲೆ ಸಂನ್ಯಾಸಿಯಾಗಿರುವರೆಂದರೆ  ಸಂನ್ಯಾಸ ಧರ್ಮ ರಾಜಕೀಯದಿಂದ ದೂರವಿರೋದು. ಈಗಿದು  ಕೆಲವರ ಹೈಟೆಕ್ ಜೀವನದತ್ತ ಸಾಗುತ್ತಿರೋದು ಕಣ್ಣಿಗೆ ಕಾಣುತ್ತಿದೆ ಎಂದರೆ ನಮ್ಮ ಸಹಕಾರವೇ ಸರಿಯಿರಲಿಲ್ಲವೆಂದರ್ಥ.
ಬ್ರಾಹ್ಮಣರಲ್ಲಿಯೂ  ಕ್ಷತ್ರಿಯರು,ವ್ಯೈಶ್ಯರು,ಶೂದ್ರರಿರುವರು.
ಧರ್ಮ ಕರ್ಮ ಕ್ಕನುಸಾರವಾಗಿ ವರ್ಣ ವಿಂಗಡಣೆಯಾಗಿತ್ತು.
ಮೇಲ್ವರ್ಗ ಎಂದರೆ ಹಣದಿಂದ ಅಳೆಯುತ್ತಿರಲಿಲ್ಲ  ಜ್ಞಾನದಿಂದ ಅಳೆಯುತ್ತಿದ್ದರು. ಬ್ರಹ್ಮಜ್ಞಾನಿಗಳಾಗೋದೆಂದರೆ ಸೃಷ್ಟಿ ಯನರಿತು ಧರ್ಮ ಸತ್ಯದೆಡೆಗೆ ನಡೆಯುವುದು.ಪರಮಾತ್ಮನ ಸೇವೆಯಲ್ಲಿ ತೊಡಗುವುದು.
ಲೋಕಕಲ್ಯಾಣಕ್ಕಾಗಿ  ಜೀವನ ನಡೆಸೋರಲ್ಲಿ ಸ್ವಯಂ ಭಗವಂತನೇ  ಇರುವುದರಿಂದ ಅಹಂ ಬ್ರಹ್ಮಾಸ್ಮಿ ಎಂದರು.ಇಲ್ಲಿ ‌ನಾನೆಂಬ ಅಹಂ ‌ಭಾವವಿರದಿದ್ದರೆ ಅದೇ ಅಧ್ವೈತ ವಾಗುತ್ತದೆ.
ಕಲಿಗಾಲದಲ್ಲಿ  ಶೂದ್ರರೆ ಹೆಚ್ಚಾಗಿರೋದು. ಇಲ್ಲಿ ಎಲ್ಲಾ ಸೇವಕರೆ ಆದರೂ ಹಣವಿದ್ದರೆ  ರಾಜ ಇಲ್ಲದಿದ್ದರೆ ಸೇವಕ ಎನ್ನುವ ಅಜ್ಞಾನ ಹೆಚ್ಚಾಗಿ ಹಣಕ್ಕಾಗಿ ಸುಜ್ಞಾನವನ್ನು ಬಿಟ್ಟು ಹೊರಬಂದವರಿಗೆ ಬ್ರಹ್ಮತತ್ವ ಕಾಣಿಸೋದಿಲ್ಲವಾದ್ದರಿಂದ ಹಿಂದಿನ ರಾಜರ ಕಾಲದಲ್ಲಿ ಬ್ರಾಹ್ಮಣರು ರಾಜಕೀಯದಿಂದ ದೂರವಿದ್ದು ಕ್ಷತ್ರಿಯ ರಿಗೆ  ಉಪದೇಶ ನೀಡುತ್ತಾ ಶಿಕ್ಷಣದ ಮೂಲಕ ಲೋಕಸೇವಾ ಕಾರ್ಯ ದಲ್ಲಿದ್ದರು. ಆದರೆ ಕಾಲಾಂತರದಲ್ಲಾದ‌ ಬದಲಾವಣೆ ವರ್ಣ ಹೋಗಿ ಜಾತಿ ಬೆಳೆಯಿತು. ಜ್ಞಾನ ಅಜ್ಞಾನದೆಡೆಗೆ ಸಾಗುತ್ತಾ  ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ಆದರೆ ಒಳಗಿದ್ದ ಆತ್ಮಜ್ಞಾನ ಎಲ್ಲಿದೆ?
ಆತ್ಮಜ್ಞಾನದಿಂದ  ಆತ್ಮನಿರ್ಭರ ಆಗುವುದಾದರೆ ಅದಕ್ಕೆ ಪೂರಕ ಶಿಕ್ಷಣ ಕೊಡಬೇಕಾದವರು ಯಾರು? ನಮ್ಮನ್ನು ನಾವೇ ಆಳಿಕೊಳ್ಳುವ ಸ್ವಾತಂತ್ರ್ಯ ವಿದ್ದರೂ ಜ್ಞಾನವಿಲ್ಲದೆ  ಅನ್ಯರನ್ನು ಆಳೋದರಿಂದ ಯಾವುದೇ ಧರ್ಮ ರಕ್ಷಣೆ ಆಗದು.ಇದು ಸರ್ವ ಕಾಲಿಕ ಸತ್ಯವಾಗಿದೆ.
ಎಷ್ಟೋ ಮಹಾರಾಜರು ಈ ಭರತ ಭೂಮಿಯನ್ನು ಆಳಿದ್ದಾರೆ.ಆದರೆ ಅವರಲ್ಲಿದ್ದ ಕ್ಷಾತ್ರ ಗುಣಜ್ಞಾನ ಇಂದಿನ ರಾಜಕಾರಣಿಗಳಲ್ಲಿ ಇದೆಯೆ?
ಜೀವ ಉಳಿಸಿಕೊಳ್ಳಲು ಭ್ರಷ್ಟ ದುಷ್ಟರಿಗೆ ಸಹಕಾರ ಕೊಟ್ಟು ದೇಶ ಆಳಲು ಬಿಟ್ಟವರು ಯಾರು? ಎಲ್ಲದ್ದಕ್ಕೂ ನಮ್ಮ ಅಜ್ಞಾನ ಕಾರಣವಾದಾಗ ಅದನ್ನು  ಸರಿಪಡಿಸದ ಹೊರತು  ನಮ್ಮ ಬ್ರಹ್ಮತತ್ವಕ್ಕೆ ಬೆಲೆಯಿರದು.
ಧಾರ್ಮಿಕ ಕ್ಷೇತ್ರ ನಡೆದಿರೋದೆ ಪ್ರಜೆಗಳ ಹಣದಿಂದ. ಅವರ ಮಕ್ಕಳಿಗೆ ಸುಜ್ಞಾನ ನೀಡುವುದು ಧರ್ಮ. ಆದರೆ ಧಾರ್ಮಿಕ ಕ್ಷೇತ್ರ,ಶಿಕ್ಷಣ ಕ್ಷೇತ್ರ ಸಾಹಿತ್ಯ ಕ್ಷೇತ್ರಗಳು ಒಂದರ‌ಮುಖ ಇನ್ನೊಂದು ನೋಡದೆ ರಾಜಕೀಯ ಕ್ಷೇತ್ರವನ್ನು  ಅನುಸರಿಸಿದರೆ  ಏನರ್ಥ?
ಬೇಲಿಯೇ ಸರಿಯಿಲ್ಲದಿದ್ದರೆ ಹೊಲ‌ಮೇಯುವವರನ್ನು ಯಾರು ತಡೆಯಬಹುದು? ಎಲ್ಲದ್ದಕ್ಕೂ ಮೂಲ ಸರಿಯಿದ್ದರೆ ರೆಂಬೆಕೊಂಬೆಗಳು ಗಟ್ಟಿಯಾಗುತ್ತದೆ. ಮೂಲವೇ  ಗಟ್ಟಿಯಿರದೆ  ಯಾವುದೂ ನೆಟ್ಟಗಿರದು. ಇಲ್ಲಿ  ಬ್ರಾಹ್ಮಣ ಎಂದರೆ ವ್ಯಕ್ತಿಯಾಗಿರೋದಿಲ್ಲ.ನಮ್ಮಲ್ಲಿನ ಆತ್ಮಜ್ಞಾನದ ಶಕ್ತಿ.
ಆಧ್ಯಾತ್ಮ ಎಂದರೆ ಆದಿ ಆತ್ಮ.ಮೊದಲು ಆತ್ಮಾವಲೋಕನ ನಂತರ ವಿಜ್ಞಾನ. ಈಗ ಶಿಕ್ಷಣವೇ ಮೊದಲು ವಿಜ್ಞಾನ ವಾಗಿ ಹೊರಜಗತ್ತಿನೆಡೆಗೆ ಸಾಗುತ್ತಿದೆ. ಎಷ್ಟು ಎತ್ತರಕ್ಕೆ ಏರಿದರೂ ನಿರಾಕಾರ ಬ್ರಹ್ಮನ ಕಾಣೋದಿಲ್ಲ. ಇದಕ್ಕಾಗಿ ಆಳವಾಗಿರುವ ಸತ್ಯ ಧರ್ಮ ದೊಳಗೆ ಹೊಕ್ಕಿ ನೋಡುವ‌ ಶಕ್ತಿ ನಮಗಿದ್ದರೆ ರಾಜಕೀಯದಿಂದ ದೂರವಿದ್ದವರಿಗೆ ಇದರ ಅರಿವಾಗಿರೋದು ಅರ್ಥ ವಾಗುತ್ತದೆ.
ಕೆಲವರು ನಾವು ರಾಜಕೀಯದಿಂದ ದೂರವಿದ್ದೇವೆ ಎಂದು ಜನರ ಮಧ್ಯೆ ನಿಂತು ಪ್ರಚಾರ ಮಾಡುವರು.ಆದರೆ ಜನ ರಾಜಕೀಯದ ಹಿಂದೆ ನಡೆದು ಹಣಗಳಿಸಿ  ಕೊಡುತ್ತಿರುವಾಗ ರಾಜಕೀಯದಿಂದ ದೂರವಿರೋದು ಅಸತ್ಯವಾಗುತ್ತದೆ. ಹಣವಿಲ್ಲದೆ ಯಾರೂ ಜೀವನ‌ನಡೆಸಲಾಗದು. ಆದರೆ ಇದು ಸ್ವಂತ ಪರಿಶ್ರಮದಿಂದ ಗಳಿಸಿ ಸುಜ್ಞಾನದಿಂದ ಬಳಸಿದರೆ ಧರ್ಮ ವಾಗುತ್ತದೆ. ಭ್ರಷ್ಟ ದುಷ್ಟರಿಗೆ ಆಶೀರ್ವಾದ ಮಾಡಿದರೆ  ಅವರು ಬೆಳೆಯುವುದಿಲ್ಲವೆ?
ಮಹಿಳೆ ಮಕ್ಕಳ ಹಣವನ್ನೂ ಬಿಡದೆ  ಸಂಸಾರ ನಡೆಸುವವರಿಗೆ ಏನೆನ್ನಬೇಕೋ? ಒಟ್ಟಿನಲ್ಲಿ ಹೊರಗಿನ ಆಸೆ ಆಕಾಂಕ್ಷೆಗಳನ್ನು  ತೀರಿಸಿಕೊಳ್ಳಲು ಬ್ರಹ್ಮತತ್ವವನ್ನು ದುರ್ಭಳಕೆ ಮಾಡಿಕೊಂಡಷ್ಟೂ  ಆತ್ಮದುರ್ಭಲ ವಾಗುತ್ತದೆ.
ದೇವನೊಬ್ಬನೇ ‌ನಾಮ‌ಹಲವು ಹಾಗೆ ದೇಶ ಒಂದೇ ಎನ್ನುವ ಸಾಮಾನ್ಯ ಜ್ಞಾನವಿದ್ದರೆ ಆ ಒಂದೇ ಶಕ್ತಿಯನ್ನು ಅಂತರಂಗ ಶುದ್ದಿಯಿಂದ ಕಾಣಬಹುದು. ಅಂತರ ಬೆಳೆಸಿಕೊಂಡು ಆಳುತ್ತಾ ಹೋದರೆ  ಅತಂತ್ರ ಜೀವನವಾಗನಡೆದಾಗಲೇ
ವಾಸ್ತವ ಸತ್ಯ ಕಣ್ಣಿಗೆ ಕಾಣುತ್ತದೆ ಹಿಂದಿನ ಸತ್ಯ ಮುಂದಿನ ಸತ್ಯ ಕಾಣೋದಿಲ್ಲ. ವಾಸ್ತವವರಿತು  ಸತ್ಯ ತಿಳಿದು  ನಡೆದಾಗಲೇ ಮುಂದಿನ ಭವಿಷ್ಯ ಉತ್ತಮವಿರುತ್ತದೆ.‌ ಕೇವಲ ಹಿಂದಿನದ್ದೇ ಪ್ರಚಾರ ಮಾಡಿದರೂ ಕಷ್ಟ ಭವಿಷ್ಯ ಹೇಳುತ್ತಾ ಕುಳಿತರೂ ನಷ್ಟ.
ಬ್ರಾಹ್ಮಣ ಎನ್ನುವ ಪದವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಹೋದರೆ ಜೀವನ್ಮುಕ್ತಿ ಸಿಗದು. ಬ್ರಾಹ್ಮಣ ದೇವರ ಸಮಾನ ದೈವತ್ವದೆಡೆಗೆ ಹೋದವರು ಬ್ರಹ್ಮತತ್ವವನರಿತರು. ಇಲ್ಲಿ ಜಾತಿ ಇರಲಿಲ್ಲ. ಸಾತ್ವಿಕ ಧರ್ಮ ಕರ್ಮ

No comments:

Post a Comment