ಭೂ ಋಣ ತೀರಿದಾಗ ಮುಕ್ತಿ
ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನನಡೆಸುತ್ತಾ ...
Sunday, November 26, 2023
ಎಲ್ಲದ್ದಕ್ಕೂ ಇತಿಮಿತಿ ಇರಬೇಕು
ಎಲ್ಲದ್ದಕ್ಕೂ ಒಂದು ಇತಿಮಿತಿಯಿರಬೇಕೆಂದು ಎಲ್ಲರಿಗೂ ತಿಳಿದ ವಿಚಾರ.ಆದರೆ ಇತಿಮಿತಿ ಯಾವುದರಲ್ಲಿರಬೇಕೆಂಬುದೇ ಪ್ರಶ್ನೆಯಾಗಿದೆ. ಭ್ರಷ್ಟಾಚಾರ, ಸಾಲ, ಮನರಂಜನೆ, ಆಸ್ತಿ,ಅಂತಸ್ತು, ಹೆಸರು,ಹಣದ ವಿಚಾರ ಬಂದಾಗ ಆಸೆ ಎದ್ದು ನಿಲ್ಲುತ್ತದೆ. ಆಸೆಯನ್ನು ಹಿಡಿತದಲ್ಲಿಟ್ಟುಕೊಳ್ಳದೆ ಮಿತಿ ಮೀರಿ ಬೆಳೆದಾಗwaegಲೇ ಮೇಲಿರುವ ಎಲ್ಲಾ ಸೇರುವುದು. ಸೇರಿದಂತೆಲ್ಲಾ ನಾನು ಶ್ರೀಮಂತ ಅದೃಷ್ಟವಂತ,ಪುಣ್ಯವಂತ,ಬುದ್ದಿವಂತ ಎನ್ನುವ ಅಹಂಕಾರದ ಜೊತೆಗೆ ಸ್ವಾರ್ಥ ವೂ ಜೊತೆಯಾಗುತ್ತಾ ಕೊನೆಗೆ ಹಿಂದಿರುಗಿ ಕೊಡುವಾಗ ಕೊಡಲಾಗದೆ ಇಟ್ಟುಕೊಂಡರೂ ಸಂತೋಷ ಸಿಗದೆ ಪರಿತಪಿಸುವಂತಹ ಪರಿಸ್ಥಿತಿಯಲ್ಲಿ ಧರ್ಮದ ಮೊರೆ ಹೊಕ್ಕರೂ ಹೆಚ್ಚುವರಿಯನ್ನು ಹೊರಹಾಕದೆ ಶಾಂತಿ,ಸುಖ ಸಮಾಧಾನ ತೃಪ್ತಿ ಮುಕ್ತಿ ಸಿಗೋದಿಲ್ಲವೆನ್ನುವುದೇ ಸನಾತನ ಧರ್ಮ ತಿಳಿಸುತ್ತದೆ. ಅದಕ್ಕಾಗಿ ಹೆಚ್ಚು ಜ್ಞಾನದ ಸಂಪಾದನೆಯೂ ಹಣವನ್ನು ಕೊಡುತ್ತದೆ. ಆದರೆ ಆ ಹಣ ಸದ್ಬಳಕೆ ಮಾಡುವ ಜ್ಞಾನವಿದ್ದವರು ಎಲ್ಲಾ ಇತಿಮಿತಿಗಳನ್ನು ತಿಳಿದು ನಡೆಯುವರು. ಕೆಲವರು ಅರ್ಧ ಸತ್ಯ ತಿಳಿದವರು ಈ ಕಡೆ ಮುಂದೂ ನಡೆಯದೆ ಹಿಂದೆ ಬರದೆ ಅಡ್ಡದಾರಿಯಲ್ಲಿ ಅಡ್ಡಲಾಗಿರುವರು. ಇವರಿಂದಲೇ ದೊಡ್ಡ ದೊಡ್ಡ ಸಮಸ್ಯೆ ಜನ್ಮತಾಳುವುದು ಹೆಚ್ಚಾಗುತ್ತಿದೆ. ಹಣಕ್ಕಾಗಿ ಭ್ರಷ್ಟ ದುಷ್ಟ ಕಳ್ಳ ಸುಳ್ಳರಿಗೆ ಮಣೆ ಹಾಕುವುದರಿಂದ ಸಮಸ್ಯೆ ಬೆಳೆಯುತ್ತದೆ. ಇವರು ಮಿತಿಮೀರಿದರೆ ಮನುಕುಲಕ್ಕೆ ಕಷ್ಟ ನಷ್ಟ.ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ.ಇವರಿಬ್ಬರ ನಡುವಿರುವವರ ಬಯಕೆಯಿಂದ ರೋಗಿಗಳು ಬೆಳೆದಿರೋದು. ಪರಮಾತ್ಮಜೀವಾತ್ಮನ ಸೇರೋದು ಅಧ್ಯಾತ್ಮಿಕ ಯೋಗ, ಪರದೇಶದೊಳಗೆ ಸ್ವದೇಶ ಸೇರಿಸೋದು ಭೋಗಿಗಳ ಭೌತಿಕ ಯೋಗ. ಇವರಿಬ್ಬರ ನಡುವಿದ್ದು ತಮ್ಮ ಯೋಗಾಭೋಗದ ಲೆಕ್ಕಾಚಾರದಲ್ಲಿ ಕಷ್ಟ ನಷ್ಟ ಅನುಭವಿಸುತ್ತಾ ತಮ್ಮ ಮಾನಸಿಕ ನೆಮ್ಮದಿ ಜೊತೆಗೆ ಎಲ್ಲರ ಮನಸ್ಸನ್ನೂ ಕೆಡಿಸಿ ಆರೋಗ್ಯ ಹಾಳು ಮಾಡೋದು ಮಧ್ಯವರ್ತಿಗಳ ರೋಗಕ್ಕೆ ಕಾರಣ. ದೇವಾಸುರರ ನಡುವಿನ ಮಾನವನ ರೋಗಕ್ಕೆ ಇದೇ ಕಾರಣವಾದಾಗ ಆರೋಗ್ಯದ ಕಡೆಗೆನಡೆಯಲು ದೈವಗುಣಸಂಪತ್ತು ಅಗತ್ಯವಿದೆ. ಇದುಭೌತಿಕ ಸಂಪತ್ತಿನೆಡೆಗೆ ವಿಪರೀತವಾಗಿ ಬೆಳೆದರೆ ಅಸುರಿ ಶಕ್ತಿಯಿಂದ ಆಪತ್ತು. Ferrer's dresser Ferrer's r
Subscribe to:
Post Comments (Atom)
-
ಅಧ್ಯಾತ್ಮ ಸಂಶೋದನೆಯ ತತ್ವಮಸಿಯ ಅರ್ಥ ತಿಳಿದವರು ನೀನು ಅದೇ ಆಗಿದ್ದೀಯ ಎನ್ನುವ ಸತ್ಯದೆಡೆಗೆ ಬ್ರಹ್ಮಜ್ಞಾನದ ಕಡೆಗೆ ದೈವತ್ವದೆಡೆಗೆ ಸಾಗಿದ್ದರು. ಈಗಲೂ ತತ್ವಮಸಿ ಪದವಿದೆ....
-
ದ್ವೇಷ ಸೇಡು ಕೋಪ ಹಠ ಎಲ್ಲವೂ ಸಾಧನೆಗೆ ಅಡೆತಡೆಗಳನ್ನು ಸೃಷ್ಟಿ ಮಾಡುವುದೆನ್ನುವುದು ಅಧ್ಯಾತ್ಮ ಸತ್ಯ. ಹಾಗಾದರೆ ವಾಸ್ತವದಲ್ಲಿ ಇವೆಲ್ಲವೂ ರಾರಾಜಿಸುತ್ತಿವೆ ಹರಡುತ್ತಿದ...
-
ಸಾಮಾನ್ಯ ಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಾಮಾನ್ಯರಂತೆ ನಡೆಯುವುದೇ ಪ್ರಜಾಪ್ರಭುತ್ವದ ವಿಶೇಷ ಜ್ಞಾನ.ಆದರಿದು ಕಷ್ಟಪಡುವ ಸ್ಥಿತಿಯಲ್ಲಿದೆ ಎಂದರೆ ನಮ್ಮ ಸಹಕಾರ ಅದಮಾನ್ಯರ...
No comments:
Post a Comment