ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, December 19, 2025

ಎಳ್ಳಮಾವಾಸ್ಯೆ

*✒️ಇಂದಿನ ನುಡಿ*

*ಈ ದಕ್ಷಿಣಾಯನ ಮಾರ್ಗಶಿರ ಮಾಸದ ಈ ದಿನ ಎಳ್ಳಮಾವಾಸ್ಯೆಯ ದಿನ.ಋಣ ತೀರಿಸುವ ದಿನ.ದೇವ ಋಣ,ಪಿತೃ ಋಣ,ಋಷಿ ಋಣ,ಮನುಷ್ಯ ಋಣ,ಭೂತದೈವಗಳಪ್ರಾಣಿ ಪಕ್ಷಿ ಪ್ರಕೃತಿಯ ಋಣ ನಮ್ಮ ಮೇಲಿದೆ.ಎಲ್ಲವನ್ನೂ ಉಪಯೋಗಿಸಿಕೊಂಡು ಈ ಭೂಮಿ ಮೇಲೆ ಜೀವಿಸುವವರು ನಾವು.ಬದುಕಿದರೆ ಸಾಕೇ?ಸಹಕಾರ ಪಡೆದದ್ದಕ್ಕೆ ಕೃತಘ್ನರಾಗದೆ,ಉಪಕಾರಕ್ಕೆ ಪ್ರತ್ಯುಪಕಾರ, ಕೃತಜ್ಞತಾ ಸಮರ್ಪಣೆ ಮೂಲಕ ಸ್ಮರಿಸುವ ಕೆಲಸವಾಗಬೇಕು.ರೈತಾಪಿ ವರ್ಗದವರಿಗೆ ಎಳ್ಳು,ನೆಲಕಡಲೆ ಫಸಲು ಮನೆಯಂಗಳಕೆ ಬಂದ ದಿನಗಳಿವು.ಭೂಮಿ ತಾಯಿಗೆ ಕೃತಜ್ಞತೆ ಸಮರ್ಪಿಸುವರು.ಎಳ್ಳು ಬೆಲ್ಲವನ್ನು ಬೆರೆಸಿ ಹೊಲಕ್ಕೆ ಚೆಲ್ಲುವರು(ಚರಗ ಚೆಲ್ಲುವುದೆನ್ನುವರು)ಮಣ್ಣನ್ನು ಮೃದುವಾಗಿಸುವ ಎರೆಹುಳಗಳು ಹೊಲದ ಮಣ್ಣಲ್ಲಿರುವುದು.ಹಾಗೆಯೇ ಬೆಳೆ ನಾಶ ಮಾಡುವ ಕಾಯಿಕೊರಕ ಹುಳಗಳನ್ನು  ಎಳ್ಳು ಬೆಲ್ಲದೊಂದಿಗೆ ತಿನ್ನುವ ಕೆಲಸವನ್ನು ಪಕ್ಷಿಸಂಕುಲ ಮಾಡುವುದು.ಹಬ್ಬ,ಆಚರಣೆಗಳ ಹಿಂದೆ ಇಂತಹ ವೈಜ್ಞಾನಿಕ ಕಾರಣಗಳು ಸಹ ಇದೆ.ನಮ್ಮ ಹಿರಿಯರು ಬುದ್ಧಿವಂತರು.ಐದು ಪಾಂಡವರ ಕಲ್ಲುಗಳನ್ನು ಇಟ್ಟು ,ತಾವು ತಂದ ವಿಶೇಷ ಖಾದ್ಯಗಳನ್ನು ಭೂಮಿತಾಯಿ ಸಹಿತ ನೈವೇದ್ಯ ಮಾಡಿ,ಬನ್ನಿ ಗಿಡ ನೆಟ್ಟು ಜೊತೆಗೆ ಪೂಜಿಸುವರು,ಮುಂದಿನ ದಿನಗಳಲ್ಲಿ ಅಧಿಕ ಫಸಲನ್ನು ನೀಡೆಂದು,ಶನಿದೋಷವಿದ್ದಲ್ಲಿ ಪರಿಹರಿಸೆಂದು ಪ್ರಾರ್ಥಿಸುತ್ತಾ ನಿವೇದಿಸಿಕೊಳ್ಳುವರು. ಈ ಮೂಲಕ ಕೃತಜ್ಞತೆ ಸಲ್ಲಿಸುವರು.ತಯಾರಿಸಿದ ವಿಶೇಷ ಅಡುಗೆಯನ್ನು ತಮ್ಮ ಎತ್ತಿನ ಬಂಡಿಯಲ್ಲಿಟ್ಟು,ಎತ್ತುಗಳನ್ನು ,ಗಾಡಿಯನ್ನು ಸಿಂಗರಿಸಿ,ಮನೆಮಂದಿಯೆಲ್ಲ ಚರಗ ಚೆಲ್ಲಿ ಪೂಜೆಯಾದ ಮೇಲೆ ಸಹಭೋಜನವನ್ನು ಪ್ರಸಾದರೂಪವಾಗಿ ಮಾಡುವರು.ಹೊಲ ಭೂಮಿ ರೈತರ ಬಾಂಧವ್ಯದ ಬೆಸುಗೆಯದು. ಎಲ್ಲೆಲ್ಲೋ ಇರುವ ಮನೆಯ ಸದಸ್ಯರೆಲ್ಲರೂ ಹಬ್ಬದ ಸಂದರ್ಭ ಒಟ್ಟು ಸೇರುವರು.ಹಾಗೆಯೇ ಇಂದು ಪಿತೃ ದೇವತೆಗಳ ಪ್ರೀತ್ಯರ್ಥ ಯಾಂತ್ರಿಕತೆ,ತೋರಿಕೆಯನ್ನು ಬಿಟ್ಟು ಶ್ರದ್ಧಾಭಕ್ತಿಯಿಂದ ಶ್ರಾದ್ಧ,ತಿಲತರ್ಪಣ,ಸತ್ಪಾತ್ರರಿಗೆ ಅನ್ನದಾನ,ಎಳ್ಳುದಾನ ಕೈಂಕರ್ಯಗಳನ್ನು ಮಾಡಬೇಕು.ಸಕಲ ವಿಧದ ಮಂಗಲವು ಉಂಟಾಗುವುದೆಂಬ ನಂಬಿಕೆ.ಸಮುದ್ರ,ನದಿ ಸ್ನಾನವನ್ನೂ ಮಾಡುವರು.ಸಮುದ್ರ ಸ್ನಾನವೆಂಬುದು ಚರ್ಮರೋಗಗಳ ನಿವಾರಣೆಗೂ ಕಾರಣವಾಗಬಹುದು.ಪಿತೃಗಳು ಸಂತುಷ್ಟರಾಗಿ ಹರಸುವರೆಂಬ ವಿಶ್ವಾಸ ಹಿರಿಯರ ಕಾಲದಿಂದಲೂ ಇದೆ.ಪೌರಾಣಿಕವಾಗಿ ನೋಡಿದರೆ ಮಹಾಭಾರತ ದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಮಡಿದವರಿಗೆಲ್ಲ ಈ ಶುಭದಿನದಂದು ತರ್ಪಣ ನೀಡಿ,ಅನ್ನದಾನ ಮಾಡಿದ್ದರಂತೆ.ಕುಟುಂಬದಲ್ಲಿ ಅಳಿದ ಪಿತೃಗಳನ್ನು ಸಂತೃಪ್ತಿಗೊಳಿಸುವ ಪದ್ಧತಿಯಿದೆ.ಇನ್ನೊಂದು ರೀತಿಯಲ್ಲಿ ತಂದೆ ಜಮದಗ್ನಿಯ ಆಣತಿಯಂತೆ ಹೆತ್ತಮ್ಮ ರೇಣುಕೆಯ ಶಿರ ಕತ್ತರಿಸಿದವ ಪರಶುಧರ ಭಾರ್ಗವ ರಾಮ.ಕೊಡಲಿಯ ಬಾಯಿಗಂಟಿದ ರಕ್ತ ಯಾವ ನದಿಯಲ್ಲಿ ತೊಳೆದರೂ ಒಂದು ಬಿಂದು ಉಳಿಯುತ್ತಿತ್ತಂತೆ.ಕೊನೆಗೆ ತುಂಗಾನದಿಯಲ್ಲಿ ಮುಳುಗಿಸಿದಾಗ ಕಲೆ ಹೋಯಿತಂತೆ.ಹಾಗಾಗಿ ಅದೇ ಸ್ಥಳ ಶಿವಮೊಗ್ಗ ಸಮೀಪದ 'ತೀರ್ಥಹಳ್ಳಿ'ಯೆಂದು ಪ್ರಸಿದ್ಧಿಯಾಯಿತೆಂದೂ,ಅಲ್ಲಿ ನದಿ ಸ್ನಾನ ಮಾಡಿ ಪುನೀತರಾಗುತ್ತಾರೆಂದೂ ಉಲ್ಲೇಖವಿದೆ.ಹೆತ್ತವರ ಋಣ ತೀರಿಸಲಾಗದಂತೆ.ಈ ರೀತಿಯಲ್ಲಾದರೂ ಸ್ವಲ್ಪಾಂಶ ತೀರಿಸಿ ಪುಣ್ಯ ಕಟ್ಟಿಕೊಳ್ಳೋಣ.*
.🤝🙏*(ಸಂಗ್ರಹ)*
೧೯-೧೨-೨೫
*✍️ರತ್ನಾ ಕೆ ಭಟ್*

ಜಗದಾದಿಜ: ಜಗತ್+ಆದಿ+ ಜ

ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ | ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ॥೧೬॥
ಇಂದಿನ ನಾಮ -

೧೪೭. ಜಗದಾದಿಜಃ ಜಗತ್ತಿನಲ್ಲಿ ಮೊತ್ತಮೊದಲು ಬಂದವನು.

ವಿವರಣೆ : ಜಗತ್+ಆದಿ+ಜ - ಹೀಗೆ ಮೂರು ಶಬ್ದಗಳು ಸೇರಿ ಒಂದು ನಾಮ ಆದದ್ದು. ಈ ಲೋಕಕ್ಕೆ ಮೊದಲು ಬಂದವನು ಎಂದರ್ಥ .ಶೇಷನ ಮೇಲೆಯೋ, ವಟಪತ್ರದ ಮೇಲೆಯೋ ರಾತ್ರಿಯಲ್ಲಿ ಅಂದರೆ ಪ್ರಲಯಕಾಲದಲ್ಲಿ ಮಲಗಿದವನು ನೀನು. ಬೆಳಗಾಗುತ್ತ ಬಂತು. ಸೃಷ್ಟಿ ಮಾಡಬೇಕೆಂದು ತೋರಿತು. ಎಲ್ಲರನ್ನು ಎಬ್ಬಿಸೋಣ ಅಂತ ತೋರಿತು. ಮಲಗಿದವರನ್ನು ಎಬ್ಬಿಸುವ ಕೆಲಸ ದೇವರದ್ದೇ. ಅದಕ್ಕಾಗಿಯೇ ಬೆಳಿಗ್ಗೆ ೫ ಗಂಟೆಗೆ ಸುಪ್ರಭಾತ ಹಾಕುವುದು. ಮಲಗಿದವರೆಲ್ಲ ಏಳಲಿ ಎಂದು. ಮೊದಲು ಕೃಷ್ಣ ದೇವರು ಏಳುವುದು. ಅದರಿಂದಾಗಿ ಅಕ್ಕಪಕ್ಕದವರೆಲ್ಲ ಏಳಲಿಕ್ಕೆ ಪ್ರಾರಂಭಿಸುವರು.

ಹೀಗೆ ಸೃಷ್ಟಿಯ ಸುಪ್ರಭಾತದಲ್ಲಿ ಎಲ್ಲರನ್ನೂ ಎಬ್ಬಿಸುವುದಕ್ಕಾಗಿ ದೇವರು ಮೊದಲು ತಾನು ಎದ್ದು ಬಂದ. ಹಾಗೆ ಎದ್ದು ಬಂದ ರೂಪವೇ "ಪುರುಷ'. ನಾರಾಯಣರೂಪದಿಂದ ಮಲಗಿದ ಪರಮಾತ್ಮ ಪುರುಷರೂಪದಿಂದ ಎದ್ದು ಬರುವನು. ಜಗತ್ತಿನ ಸೃಷ್ಟಿಗೆ ಅಡಿ ಇಡುವಾಗ ಮೊದಲು ಬರುವವನು ಭಗವಂತ. ಎಲ್ಲರಿಗಿಂತ ಹಿರಿಯ, ಮೊದಲಿಗ ಎಂಬುದು ಒಟ್ಟು ಅಭಿಪ್ರಾಯ. ಚತುರ್ಮುಖನಿಗಿಂತಲೂ ಮೊದಲು ಬಂದವನು. ಆದುದರಿಂದ ದೇವರು ಯಾರಿಂದ ಬಂದ? ಎಂಬ ಪ್ರಶ್ನೆಗೆ ಅವಕಾಶ ಇಲ್ಲ. ಯಾರೂ ಇಲ್ಲದಿದ್ದಾಗ ತನ್ನಿಂದಲೇ ಹೊರಬಂದವನು ಅವನು.

ಹರಿಹರರಲ್ಲಿ ಬೇಧವಿಲ್ಲ ಎನ್ನುವುದು  ಹರಿ ಬೇರೆ ಹರ ಬೇರೆ ಎನ್ನುವುದು. ಬ್ರಹ್ಮಾಂಡದ ಎಲ್ಲಾ ಆಗುಹೋಗುಗಳಿಗೆ ಪರಮಾತ್ಮನೇ ಕಾರಣವೆನ್ನುವುದು  ಎಲ್ಲದ್ದಕ್ಕೂ ನಾನೇ ಕಾರಣವೆನ್ನುವುದು, ನಾನೇ  ಎಲ್ಲರನ್ನೂ ಆಳುವುದು   ಎನ್ನುವ ಅಹಂಕಾರ  ನಾನೆಂಬುದಿಲ್ಲ ಎನ್ನುವ ನಿರಹಂಕಾರ
ಇವೆಲ್ಲವೂ ಪರಮಾತ್ಮನೇ ಶ್ರೇಷ್ಠ ಎನ್ನುವ ಸತ್ಯದೆಡೆಗೆ ನಡೆದಿದೆಯೆ ಅಥವಾ ನಾನೇ ಸತ್ಯ ಎನ್ನುವ ಕಡೆಗಿದೆಯೆ?
ಇಲ್ಲಿ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹಲವು. ಆದರೆ ನಾನಿಲ್ಲ ದೇವರೆ ಎಲ್ಲಾ ಎನ್ನುವ ಸತ್ಯ ಒಂದೇ. ಹಾಗಾಗಿ ಹಲವರಿಗೆ ಒಳಗಿರುವ ಸತ್ಯದ ಅರಿವಾಗದೆ ಹೊರಗಿನ ಸತ್ಯವೇ ಕಣ್ಣಿಗೆ ಕಾಣುತ್ತಾ ಆಗಿ ಹೋಗಿದ್ದನ್ನು ಕೆದಕಿ ಆಗಬಾರದ್ದನ್ನು ಸ್ವಾಗತಿಸುವ  ಮಟ್ಟಿಗೆ ಅಜ್ಞಾನ ಆವರಿಸಿದೆ. 
ಜಗತ್ತಿನಲ್ಲಿ ಮೊಟ್ಟ ಮೊದಲು ಬಂದವನು ಪರಮಾತ್ಮ ಎಂದಾಗ  ನಾವ್ಯಾರು? ಅವನ ಪ್ರತಿಬಿಂಬ ಎಂದಾಗ  ನನಗಿಂತ ಮೊದಲು ಬಂದವರ ಬಗ್ಗೆ ಅರಿವಿರೋದು ಅಗತ್ಯವಿದೆ. ‌ಕೇವಲ ರಾಜಕೀಯ ದಲ್ಲಿ ಮೈ ಮರೆತರೆ  ಮೂಲ ಸತ್ಯ ಅರಿವಾಗದು. ಹೀಗಾಗಿ ತನ್ನ ತಾನರಿಯದೆ  ಅನ್ಯರನ್ನು  ಒಲಿಸಿಕೊಂಡು ತನ್ನವರನ್ನೇ  ದೂರ ಮಾಡಿಕೊಂಡವರಿಗೆ  ಪರಮಾತ್ಮ ಅರ್ಥ ವಾಗದೆ ಅಂತರ ಬೆಳೆಯಿತು. ಆ ಅಂತರವೇ ಅವಾಂತರ ಸೃಷ್ಟಿ ಮಾಡುತ್ತಾ ಮೂಲ ಬ್ರಹ್ಮನನ್ನು  ಅಪಾರ್ಥ  ಮಾಡಿಕೊಂಡು ಆಳಲು ಸಹಕರಿಸಿತು. ಸಹಕಾರದ ಬಲವೇ  ಅಹಂಕಾರ ಕ್ಕೆ ದಾರಿ ಆಯಿತು.ಆ ಅಹಂಕಾರ ದಿಂದ ಸ್ವಾರ್ಥ  ಸೇರಿಕೊಂಡು ಸ್ವತಂತ್ರ ಜ್ಞಾನ ಮರೆಯಾಯಿತು. ಮರೆಯಾದವರು  ಮತ್ತೆ ಜನ್ಮ ಪಡೆದರೂ  ಗುರುತಿಸುವ. ಜ್ಞಾನವಿಲ್ಲದೆ ಅಜ್ಞಾನ ಬೆಳೆಯಿತು. ಅಜ್ಞಾನ ಎಂದರೆ ಅಸತ್ಯದ ತಿಳುವಳಿಕೆಯಾಗಿದೆ.
ಯಾವುದು ಸತ್ಯ? ಕಣ್ಣಿಗೆ ಕಾಣೋದೆಲ್ಲಾ ಸತ್ಯವೇ? ಸತ್ಯವಿದ್ದರೂ ತಾತ್ಕಾಲಿಕ ವಷ್ಟೆ.ಶಾಶ್ವತವಾಗಿರುವ ಯಾವುದಕ್ಕೂ ಅಂಟಿಕೊಳ್ಳದೆ ಸ್ವತಂತ್ರ ವಾಗಿದ್ದು ಜೀವಕೋಟಿಗಳ ಒಳಗಿರುವ ಆ ಮೂಲ ಪುರುಷ ಪರಮಾತ್ಮನೇ ಮೊಟ್ಟಮೊದಲು ಬಂದವನು.
ಜಗದಾದಿಜ:
ಪರಮಾತ್ಮನ ಒಂದೊಂದು ನಾಮವೂ ಅದ್ವೈತ ಸತ್ಯವನ್ನು ತಿಳಿಸುತ್ತದೆ. ‌ಆದರೆ ಅದು ಕಣ್ಣಿಗೆ ಕಾಣದು ಅನುಭವಕ್ಕೆ ಬರೋದೂ ಕಷ್ಟವಾದ್ದರಿಂದ ಮಾಯೆಯ ವಶದಲ್ಲಿ ಮನುಕುಲ  ಭೂಮಿಯನ್ನು ತನ್ನ ವಶದಲ್ಲಿ ಪಡೆಯಲು ಹೆಣವಾಗುತ್ತಿದ್ದಾನೆಂದರೆ ಭೂಮಿ ಪರಮಾತ್ಮನ ವಶವಿರೋವಾಗ ಹುಲುಮಾನವನಿಗೆ ಸಿಗುವಳೆ?
ಹೃದಯದ ಚಿಕಿತ್ಸೆ ಗೆ ಕೊಡುವ ಹಣವನ್ನು ಹೃದಯವಂತಿಕೆ ಬೆಳೆಸೋ ಶಿಕ್ಷಣಕ್ಕೆ ನೀಡಿದ್ದರೆ  ಭೂಮಿಯ ಋಣ ತೀರಿಸುವ ಸೇವಕನಾಗಿ ಪರಮಾತ್ಮನೆಡೆಗೆ ಸಾಗಬಹುದಿತ್ತು. 
ಕಲಿಕೆಯೇ ಋಣದೆಡೆಗೆ ಸಾಗಿರುವಾಗ  ಆ ಭಾರಹೊತ್ತವನಿಗೆ ಮೇಲಿರುವ  ಮೂಲ ಪುರುಷ ಅರ್ಥ ವಾಗೋದಿಲ್ಲ. 
ಕಾಲುಬುಡ ನೋಡದೆ ಮೇಲಕ್ಕೆ ನೋಡುತ್ತಾ ಓಡಿದರೆ ಎಡವೋದು ಸಹಜ. ಭೂಮಿಯ ಸತ್ಯ ಸತ್ವ ತತ್ವ ಬಿಟ್ಟು ಆಕಾಶದೆತ್ತರ ಹಾರುವ ವಿಜ್ಞಾನದಿಂದ ಆತ್ಮಕ್ಕೆ ತೃಪ್ತಿ ಸಿಗದು.
ಇಷ್ಟೇ ಜೀವನದ ಸತ್ಯ.ಇದನ್ನು  ನಾವೇ ಒಳಗಿದ್ದು ತಿಳಿದು ನಡೆಯಬೇಕಿದೆ. ಹೊರಗೆ ಹೋದರೆ ಅತಂತ್ರ ಜೀವನದಲ್ಲಿ  ಹಿಂದೆ ಬರಲೂ ಕಷ್ಟ ಮುಂದೆ ಹೋದರೂ ನಷ್ಟ.

Thursday, December 18, 2025

ದೇವರಿಗೆ ನಿದ್ರೆ ಅಗತ್ಯವೆ?

ದೇವರು ಶ್ರೀಮಂತನೆ ಬಡವನೆ?
ಶ್ರೀಮಂತನಾದರೆ ಬಡವರಿಗೆ ಸಹಕರಿಸುವನು.ಬಡವನಾದರೆ ಶ್ರೀಮಂತನಿಗೆ ನಿದ್ದೆ ಬಿಟ್ಟು ಸಹಕರಿಸುವನು.
ಎಂತಹ ವಿಪರ್ಯಾಸ ಶ್ರೀಮಂತರು ದೇವರನ್ನು ನೋಡಲು ಬರುವರೋ ಅಥವಾ ದೇವರೇ ಶ್ರೀಮಂತರನ್ನು ರಾತ್ರಿ ಕರೆಸಿಕೊಂಡು  ನೋಡುವನೋ ಒಟ್ಟಿನಲ್ಲಿ ಹಣ ಇಬ್ಬರಿಗೂ ಅಗತ್ಯವಿದೆ. ಹಣವಿದ್ದರಷ್ಟೆ ದೇವಸ್ಥಾನ ಅದಕ್ಕೆ  ಶರಣರು ಹೇಳಿರುವುದು ಉಳ್ಳವರು ಶಿವಾಲಯವ ಕಟ್ಟುವರು ನಾನೇನು‌ಮಾಡಲಿ ಬಡವನಯ್ಯ.
ಈಗಿನ‌ಕಾಲದಲ್ಲಿ ಪರಮಾತ್ಮನಿಗೆ ಶರಣಾಗದಿದ್ದರೂ ಸರಿ ಪರಕೀಯರಿಗೆ ಶರಣಾದರೆ ಹಣದ ಹೊಳೆ ಹರಿಯುವುದೆನ್ನುವವರು ದೇವಸ್ಥಾನ ಕಟ್ಟುತ್ತಿರೋದು  ದೈವಶಕ್ತಿ ಕ್ಷೀಣಿಸಲು ಕಾರಣವಾಗುತ್ತಿದೆ. 
ಜನಮರುಳೋ ಜಾತ್ರೆಯೋ ಎನ್ನುವುದು ಸರಿಯಾಗಿದೆ.
ಕಾಯುವ ದೇವರಿಗೆ‌ನಿದ್ರೆ ಬರುವುದೆ? ಬಂದರೆ ಕಾಯೋರು ಯಾರು?
ವಿಜಯವಾಣಿ ಪತ್ರಿಕೆಯಲ್ಲಿ  ಪ್ರಕಟವಾದ ಸುದ್ದಿ ದೇವರಿಗೆ ನಿದ್ದೆ ಮಾಡಲೂ ಪುರುಸೊತ್ತು ಕೊಡದೆ ಶ್ರೀಮಂತ ಭಕ್ತರು  ದೇವಸ್ಥಾನಕ್ಕೆ  ಹೋಗುತ್ತಿರುವರಂತೆ. ಹಾಗಾದರೆ ನಿದ್ರೆ ಮಾಡುತ್ತಿರುವ  ಭಕ್ತರು  ಬೆಳೆದಿರುವರೆ ಅಥವಾ ನಿದ್ರೆ ಬಿಟ್ಟು ದೇವರನ್ನು ನೋಡುವ ಭಕ್ತರು ಬೆಳೆದರೆ?

ಮನೆಯೊಡೆಯನು ಯಾರು? ಆಳು ಅರಸ ಯಾರು?

ಮಾನವರು ಯಾರನ್ನೂ ಆಳಲು ಒಡೆಯನಾಗಲು  ಬಯಸುವುದು  ಸಹಜ ಗುಣ ಆದರೆ ನಮ್ಮನ್ನು ಆಳುತ್ತಿರುವವನೊಬ್ಬ ಮೇಲಿದ್ದಾನೆನ್ನುವ ಅರಿವಿದ್ದರೆ  ನಾವು ನಮ್ಮ ಹಿಡಿತದಲ್ಲಿದ್ದು ಅನ್ಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಒಳ್ಳೆಯ ಹಾಗು ಕೆಟ್ಟ ಶಕ್ತಿಗಳೆರಡೂ ಒಳಗೇ ಇದ್ದು  ಜೀವವನ್ನು  ಉಳಿಸಿ ಬೆಳೆಸಲು ಸಹಕಾರಿಯಾಗಿದ್ದರೂ ಒಮ್ಮೆ ಜೀವ ದೇಹ ಬಿಟ್ಟು ಹೋಗೋದೇ ಎನ್ನುವ ಅರಿವಿದ್ದರೆ  ನಮ್ಮನ್ನು ನಾವರಿತು ಒಳ್ಳೆಯದಕ್ಕೆ ಸಹಾಯ ಮಾಡಿಕೊಂಡು  ಯಾರನ್ನೂ ಆಳದೆ ಸ್ವತಂತ್ರ ಜೀವನ‌ ನಡೆಸಬಹುದು. ಇದಕ್ಕೆ  ಯೋಗ ಅಗತ್ಯವಿದೆ. 
ಪರಮಾತ್ಮನ ಸತ್ಯವರಿಯದೆ ಜೀವಾತ್ಮನಿಗೆ ಯೋಗ ಸಿಗದು. ಒಟ್ಟಿನಲ್ಲಿ ತನ್ನವರನ್ನೇ  ತನ್ನತನವನ್ನೇ ಮರೆತು ಹೊರಗೆ ಆಳುವೆನೆಂದರೆ ಅದು ಅಜ್ಞಾನವಾಗುತ್ತದೆ. ಅದಕ್ಕೆ ತಕ್ಕಂತೆ ಅಸುರಿಗುಣವೂ ಸೇರುತ್ತದೆ.ಇದರಿಂದಾಗಿ  ಅಧರ್ಮ ಅನ್ಯಾಯ ಅಸತ್ಯಗಳು ಹೆಚ್ಚಾದರೆ  ತಾನೇ ಆಳಾಗಿರುವ  ಸತ್ಯ ತಿಳಿಯದೆ ಜೀವ ಹೋಗುತ್ತದೆ.
ಯಾರನ್ನೇ ಆಗಲಿ ಅತಿಯಾಗಿ  ಆಳಲೂಬಾರದು ಆಳಿಸಿಕೊಂಡಿರಲೂಬಾರದು.ಭೂಮಿಮೇಲೆ ನಿಂತು ಭೂಮಿಯೇ ನನ್ನದು ಎಂದರೆ ಹೇಗೋ ಹಾಗೆಯೇ ಸ್ತ್ರೀ ಶಕ್ತಿಯ ಸಹಾಯ ಪಡೆದು ಸ್ತ್ರೀ ಯನ್ನೇ ದುರ್ಭಳಕೆ ಮಾಡಿಕೊಂಡು  ಆಳುವುದು ಅಜ್ಞಾನ. ನಮ್ಮ ಸ್ವಂತ ಬುದ್ದಿ ಜ್ಞಾನ ಕೇವಲ ಸ್ವಲ್ಪ ಆದರೂ ನಮ್ಮ ಜೀವಕ್ಕೆ ಅದೇ ಅನ್ನ ಕೊಡಬಹುದು. ಇದನ್ನು ಬಿಟ್ಟು ಅನ್ಯರ ಬುದ್ದಿ ಜ್ಞಾನವನ್ನು ನನ್ನದೆಂದರೆ ನನ್ನ ಆಳುತ್ತಿರುವುದೇ ಅನ್ಯರು ನಾನು ಹೇಗೆ   ಸ್ವತಂತ್ರ? ಇತ್ತೀಚಿನ ದಿನಗಳಲ್ಲಿ ಯುವಶಕ್ತಿ ಹೊರಗಿನ ರಾಜಕೀಯದಲ್ಲಿ ಅನ್ಯರ  ವ್ಯವಹಾರದಲ್ಲಿ ಮುಳುಗಿ ಹಣಗಳಿಸಿ  ತನ್ನ ಸಂಸಾರದಲ್ಲಿ  ಸಮಸ್ಯೆಗಳನ್ನು ಎದುರಿಸಬೇಕಾದ  ಪರಿಸ್ಥಿತಿ ಹೆಚ್ಚಾಗಿದೆ. ಕಾರಣ ತನ್ನ ನಂಬಿ ಬಂದಿರುವ ಪತ್ನಿಯನ್ನು ಮತ್ತು ನನ್ನ ಸಾಕಿಸಲಹಿದ ಪೋಷಕರನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಿರುವುದು. ಹಣದಿಂದ ಯಾವುದೇ ಆತ್ಮಾವಲೋಕನ ಆಗೋದಿಲ್ಲ. ಹಣವನ್ನು  ಸದ್ಬಳಕೆ ಮಾಡಿಕೊಂಡು ಪರಮಾತ್ಮನ ಸೇವೆ ಮಾಡುವ ಮೂಲಕ ಜ್ಞಾನ ಬರುತ್ತದೆ. ‌ಹಾಗಾದರೆ‌ಲಕ್ಮಿ ಎಂದರೆ ಹಣ ಮಾತ್ರವೆ?
ಮಹಾವಿಷ್ಣುವಿನ ಹೃದಯವನ್ನು ಗೆದ್ದಿರುವ ಲಕ್ಮಿಗೆ ಹೃದಯವಂತಿಕೆ ಅಗತ್ಯವಿದೆ. ಎಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಗೌರವವಿರುವುದೋ ಅಲ್ಲಿ  ಜ್ಞಾನ ಲಕ್ಮಿಯ ವಾಸವಿರುತ್ತದೆ. ಜ್ಞಾನದ ನಂತರವೇ  ಹಣದ ಸದ್ಬಳಕೆ ಹೀಗಾಗಿ ಯಾರನ್ನೂ ಆಳೋದಕ್ಕೆ ಹಣವನ್ನು ವ್ಯರ್ಥ ಮಾಡುವ‌ಬದಲಾಗಿ ತನ್ನನ್ನು ಆಳಿಕೊಳ್ಳಲು  ಪರಮಾತ್ಮನ ಸೇವಾಕಾರ್ಯಕ್ಕೆ ಹಣ ಬಳಸಿದರೆ  ನಿಜವಾದ ಅರಸನಂತೆ ಬದುಕಬಹುದು.
ಹಿಂದಿನ ಕಾಲದಲ್ಲಿದ್ದ ಪತಿವ್ರತೆಯರಾಗಲಿ ಧರ್ಮ ಪತ್ನಿಯರಾಗಲಿ  ಪತಿಯಲ್ಲಿ ದೈವತ್ವವನ್ನು ಗುರುತಿಸುವಷ್ಟು ಜ್ಞಾನ ಪಡೆದಿದ್ದರು. ಈಗ ಪತಿಯೇ  ದಾರಿತಪ್ಪಿದ ಹಳಿಯಾಗಿದ್ದು‌ ಕೇವಲ ಆಸ್ತಿ ಅಂತಸ್ತು ಸೌಂದರ್ಯ ದಿಂದ ಸ್ತ್ರೀ ಯನ್ನು  ಅಳೆದು ಆಳಲು ಹೋದರೆ  ಅಧರ್ಮ ವಾಗುತ್ತದೆ. ಸ್ತ್ರೀ ಶಕ್ತಿಯನ್ನು  ಯಾವತ್ತೂ   ಅಜ್ಞಾನದಿಂದ ಕಡೆಗಣಿಸದೆ ಅವಳ  ಜ್ಞಾನವನ್ನು  ಗೌರವಿಸುವುದರಿಂದ ಮುಂದೆ ಬರುವ ಆಪತ್ತಿನಿಂದ ಪಾರಾಗಬಹುದು.

 ಸ್ತ್ರೀ ಯೂ ಹಾಗೆ ಪತಿಯ ಆಂತರಿಕ ಗುಣಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಲು  ಸಹಾಯ ಮಾಡಿದರೆ ಧರ್ಮದಿಂದ  ಸದ್ಗತಿ. ಯಾವಾಗ ಪತಿಯ ಅಧರ್ಮ ಅನ್ಯಾಯಕ್ಕೆ ಬೆಂಬಲವಾಗಿ ನಿಲ್ಲುವಳೋ ದುರ್ಗತಿ ಅನುಭವಿಸಲೇಬೇಕು. ಇದನ್ನು ಕರ್ಮ ಫಲ ಎನ್ನುವರು. ಕಣ್ಣಿಗೆ ಕಾಣದ ಸತ್ಯವನ್ನು  ಅರಿಯಲಾಗದವರಷ್ಟೆ ಈ  ಆಳುವ  ಅರಸನಾಗುವ  ಆಸೆಗೆ ಬಲಿಪಶುವಾಗೋದು.ಹಾಗಾದರೆ ರಾಜಕೀಯವಿಲ್ಲದೆ‌ ಭೂಮಿ‌ನಡೆದಿದೆಯೆ? ಭೂಮಿ ನಡೆದಿರೋದೇ ರಾಜಕೀಯದಲ್ಲಿ  ಆದರೆ ಅದರಲ್ಲಿ ಸತ್ಯ ಧರ್ಮ ವಿರಬೇಕಿದೆ.
ಇದಕ್ಕೆ ರಾಜರಿಗೆ ಧಾರ್ಮಿಕ ಪ್ರಜ್ಞೆ ಇರಬೇಕು. ಅಂತಹ ಶಿಕ್ಷಣ ಗುರುಹಿರಿಯರು ನೀಡಿರಬೇಕು. ಇಲ್ಲದಿದ್ದರೆ ‌ ಸಂಸಾರದಲ್ಲಿ ಕೇವಲ ರಾಜಕೀಯವೇ ಎದ್ದು ಕಾಣುತ್ತದೆ.ತನ್ನ ತಪ್ಪು ಅರ್ಥ ವಾಗದ ಮನಸ್ಸುಗಳಿಂದ ಇನ್ನಷ್ಟು ತಪ್ಪು ನಡೆದಾಗ ಅದನ್ನು  ತಡೆಯಲು  ಯಾರಿಂದಲೂ ಸಾಧ್ಯವಾಗದು. ತಪ್ಪು ಮಾಡೋದು ಸಹಜ ಆದರೆ ಅದನ್ನು ಸರಿ ಎಂದು ವಾದಿಸದೆ ಸರಿಪಡಿಸಿಕೊಂಡರೆ ಅದೇ ನಮ್ಮ ಸಾಮ್ರಜ್ಯಸ್ಥಾಪನೆಗೆ ಬಂಡವಾಳವಾಗುತ್ತದೆ.

ಯಾರನ್ನು ಯಾರೋ ಆಳುವುದರಲ್ಲಿ ಅರ್ಥ ವಿರದು.‌ ಒಟ್ಟಿನಲ್ಲಿ ಆಳುವವನು ಆಳಿಸಿಕೊಳ್ಳುವವನು ಒಂದೇ ಭೂಮಿಯನ್ನು  ಆಳಬಹುದೆ?  ರಾಜಕೀಯ ಎಂದರೆ ಇದೆಯೆ?
ರಾ ರಾವಣ ಜ ಜರಾಸಂಧ ಕೀ ಕೀಚಕ ಯ ಯಮ
ರಾವಣನಂತಹ ಮಹಾಜ್ಞಾನಿ ಶಿವಭಕ್ತ ಒಂದು ಸ್ತ್ರೀ ಯನ್ನು  ಅಪಹರಿಸಿದ ಫಲವೇ ಯಮನ ದರ್ಶನಕ್ಕೆ ಕಾರಣವಾಯಿತು. ಹಾಗೆ ಜರಾಸಂಧನೂ ಒಂದು ರಾಕ್ಷಸ ಸ್ತ್ರೀ ಇಂದ ಪುನರ್ಜನ್ಮ ಪಡೆದರೂ ಅಜ್ಞಾನದೆಡೆಗೆ ನಡೆಯುತ್ತಾ ಅಸುರನಾದ ಅಂದರೆ ಅಹಂಕಾರ ದ ಅಮಲಿನಲ್ಲಿಯೇ ಮರಣಿಸಿದ .ಕೀಚಕನೂ ದ್ರೌಪದಿಯನ್ನು ಕೆಣಕಿ ಮರಣ ಹೊಂದಿದ ಎಲ್ಲರಿಗೂ ಕೊನೆಯಲ್ಲಿ ಯಮನ ದರ್ಶ ನವಾಗಿರೋದು  ಸ್ತ್ರೀ ಯನ್ನು ದುರ್ಭಳಕೆ ಮಾಡಿಕೊಂಡಿರುವುದು ಕಾರಣವೆಂದರೆ ಭೂಮಿ ತಾಯಿ, ಹೆತ್ತತಾಯಿ,ಸ್ತ್ರೀ ಶಕ್ತಿಯನ್ನು  ಯಾರು  ಸರಿಯಾಗಿ ಅರಿತು ಗೌರವಿಸಿ  ಸಂಸಾರದ  ಜವಾಬ್ದಾರಿ  ಹೊತ್ತು ಧರ್ಮದಲ್ಲಿ ನಡೆಯುವರೋ ಅವರಿಗೆ ಸದ್ಗತಿ.

 ಶ್ರೀ ರಾಮಚಂದ್ರನಂತೆ ರಾಜನಾಗಿಯೂ ಸಾಮಾನ್ಯ ಪ್ರಜೆಯಂತೆ ರಾಜ್ಯಭಾರ ನಡೆಸೋದು ಕಷ್ಟ. ಕಲಿಯುಗದಲ್ಲಿ ಕಲಿಕೆಯೇ ಹೊರಮುಖ ಆಗಿರುವಾಗ ಅಜ್ಞಾನ.ಎಂದರೆ ಸತ್ಯದ ತಿಳುವಳಿಕೆ ,ಕಲಿಕೆ ಇಲ್ಲದೆ ಭೂಮಿಯನ್ನು ಆಳುವುದಾಗುತ್ತದೆ.ಇದಕ್ಕೆ ಸ್ವಯಂ ಸ್ತ್ರೀ ಶಕ್ತಿಯ ಬೆಂಬಲ ಸಹಕಾರ ಸಿಕ್ಕಿದರೆ ಮುಗಿಯಿತು ಕಥೆ.

ಎಲ್ಲಿಯವರೆಗೆ  ಗೃಹಲಕ್ಮಿ ಗೃಹಿಣಿಯಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಸನಾತನ ಧರ್ಮ ರಕ್ಷಣೆಯಾಗದು. ಅಂದರೆ ಸ್ತ್ರೀ  ಸತ್ಯಜ್ಞಾನಕ್ಕೆ  ಮನೆಯೊಳಗೆ ಬೆಲೆಯಿರುವುದಿಲ್ಲವೋ  ಅಲ್ಲಿ  ಸಂತೋಷ,ನೆಮ್ಮದಿ ತೃಪ್ತಿಇರದು.‌ ಮಿಥ್ಯಜ್ಞಾನ ಇಂದು ಮಿತಿಮೀರಿದ ಪ್ರಭಾವದಿಂದಾಗಿ ಮನೆಯೊಳಗೆ ವಸ್ತುಗಳು ಸೇರಿದೆ  ವಾಸ್ತು ಪುರುಷನಿಲ್ಲ. 

ಇದು ವಾಸ್ತವ ಸತ್ಯ. ಇದಕ್ಕೆ ಪರಿಹಾರ  ಸತ್ಯಜ್ಞಾನದ ಶಿಕ್ಷಣವೇ ಹೊರತು ಇನ್ನಷ್ಟು ‌ಮಿಥ್ಯವನ್ನರಿತು ಮುಂದೆ  ನಡೆಯೋದಲ್ಲ. ಒಟ್ಟಿನಲ್ಲಿ ಸತ್ಯವಿಲ್ಲದ ಕಡೆ ಧರ್ಮ ವಿರದು.ಧರ್ಮ ಇರದ ಕಡೆ ಶಾಂತಿಯಿರದು. ಶಾಂತಿಯೇ ಇಲ್ಲದ ಜೀವಾತ್ಮನಿಗೆ ಮುಕ್ತಿ ಸಿಗದು.

ಹಿಡಿತವಿರಲಿ  ಆದರೆ ಅದರಲ್ಲಿ ಧರ್ಮವಿರಲಿ. ಇತಿಮಿತಿಯಿರಲಿ. ಅತಿಯಾದರೆ ಗತಿಗೇಡು.

ಪ್ರಜಾಪ್ರಭುತ್ವದ ವಾಸ್ತವ ಸತ್ಯ

" ಕಠೋರವೆನಿಸಿದರೂ ವಾಸ್ತವಸತ್ಯ ಇದಾಗಿದೆ. ಪ್ರಜಾಪ್ರಭುತ್ವ ರಾಜಪ್ರಭುತ್ವವಾಗೋ ಮೊದಲು ಎಚ್ಚರವಾದರೆ ಉತ್ತಮ ತತ್ವ  ಕಾಣಬಹುದಷ್ಟೆ. ಆಗೋದನ್ನು ತಡೆಯಲಾಗದು ಆಗಿದ್ದಕ್ಕೆ ಕಾರಣ ತಿಳಿಯಬಹುದು. ಬೇಡದ್ದು ಮಾಡಿದರೆ ಆಗಬಾರದ್ದೇ ಆಗೋದೆನ್ನುವುದು ಎಲ್ಲರಿಗೂ ಅನ್ವಯಿಸುತ್ತದೆ. ಇದನ್ನು ಹಣದಿಂದ ಸರಿಪಡಿಸಲಾಗದು. ಕರ್ಮಕ್ಕೆ ತಕ್ಕಂತೆ ಫಲ.

ಗಾಂಧಿ ಹೆಸರಿನಲ್ಲಿರುವ ಯೋಜನೆಗಳ ಹೆಸರನ್ನು ಬದಲಾಯಿಸಬಹುದು.ಆದರೆ ದೇಶದೊಳಗೆ ಚಲಾವಣೆಯಲ್ಲಿರುವ ನೋಟ್ ಗಳಲ್ಲಿ ಇರುವ ಗಾಂಧೀಜಿ ಚಿತ್ರ ಯಾರಾದರೂ ಅಳಿಸಬಹುದೆ?
ಪ್ರತಿಯೊಂದು ಮನೆಯಲ್ಲಿಯೂ ಪೂಜಿಸಲಾಗುತ್ತಿರುವ ಈ ಹಣವನ್ನು ಬದಲಾಯಿಸುವ ಯೋಜನೆ ಜಾರಿಗೆ ತರಲು ಸಾಧ್ಯವೆ?
ಹಣಕ್ಕಾಗಿಯೇ ರಾಜಕೀಯ ನಡೆಸುವವರನ್ನು ಜನರು ಆಯ್ಕೆ ಮಾಡಿಕೊಂಡು  ಯಾರೋ ವ್ಯಕ್ತಿಯಿಂದ ದೇಶ ಹಾಳಾಗಿದೆ ಎಂದು ಪ್ರಚಾರ ಮಾಡುತ್ತಿದ್ದರೆ ಸತ್ಯ ಹೊರಬರದೆ ಇನ್ನಷ್ಟು ಭ್ರಷ್ಟ ದುಷ್ಟರು ಬೆಳೆಯಬಹುದು.ಎಲ್ಲಿ ನೋಡಿದರೂ  ಹೆಸರಿಗೆ ಹಣಕ್ಕೆ ಅಧಿಕಾರಕ್ಕೆ ಪೈಪೋಟಿ ಇರೋವಾಗ ಜನರೊಳಗೇ ಅಡಗಿರುವ ಜ್ಞಾನವನ್ನು ಗುರುತಿಸದೆ ಅಜ್ಞಾನವೇ ತಾಂಡವವಾಡುತ್ತದೆ.ಇದು ಕಲಿಯುಗ ಬೇಲಿಯೇ ಎದ್ದು ಹೊಲಮೇಯ್ದರೂ ಅದನ್ನು ಕರ್ಮ ಫಲ ಎಂದು ಸುಮ್ಮನಿರಬೇಕೆನ್ನುವವರೆ ಭ್ರಷ್ಟಾಚಾರ ನಡೆಸಿ ಸಹಕರಿಸಿ ಮುಂದೆ ನಡೆಯುವಾಗ ನಮ್ಮ ಹೆಸರಿನಲ್ಲೇ ಅಡಗಿರುವ ದೈವಶಕ್ತಿ ಕಾಣೋದಿಲ್ಲ. ಅದಕ್ಕೆ ಅಸುರರ ಹೆಸರು ಪ್ರಸಿದ್ದವಾಗಿರೋದು.
ಸುಪ್ರಸಿದ್ದ ಕುಪ್ರಸಿದ್ದರಿಬ್ಬರೂ ಪ್ರಸಿದ್ದರೆ ಆದರೂ ಸಿದ್ದಿ ಯಾರಿಂದ ಸಿಕ್ಕಿದೆ ಎನ್ನುವ ಬಗ್ಗೆ ಚಿಂತನೆ ನಡೆಸೋದು ಕಷ್ಟ.
ಎಲ್ಲಿಯವರೆಗೆ ಸಿದ್ದಪುರುಷರ ಜ್ಞಾನದ  ಸದ್ಗುಣಗಳನ್ನು ಗುರುತಿಸುವ  ಆತ್ಮಜ್ಞಾನ ಮಾನವನಲ್ಲಿರದೋ ಅಲ್ಲಿಯವರೆಗೆ ಈ ರೀತಿಯ ನಾಟಕಗಳು ನಡೆಯುತ್ತಲೇ ಇರುತ್ತದೆ. 
ಉದ್ಯೋಗಂ ಪುರುಷಲಕ್ಷಣಂ ಎನ್ನುತ್ತಿದ್ದವರು ಉದ್ಯೋಗಂ ಸ್ತ್ರೀ ಲಕ್ಷಣಂ ಎನ್ನುವ ಹಂತಕ್ಕೆ ಬಂದಿರೋದೇ ಭಾರತೀಯರ ಈ ಸ್ಥಿತಿಗೆ ಕಾರಣ.
ಹಿಂದೆ ದೊಡ್ಡ ಕುಟುಂಬದ ಜವಾಬ್ದಾರಿ ಒಬ್ಬನೇ ಹೊತ್ತು ಹೋಗುತ್ತಿದ್ದರು ಈಗ ಸಂಸಾರ ಬಿಟ್ಟು ಸಮಾಜದ ಋಣದಲ್ಲಿ ಹಣದಲ್ಲಿ ಬಲದಲ್ಲಿ ತನ್ನ ಜೀವ ಉಳಿಸಿಕೊಳ್ಳಲು ಭ್ರಷ್ಟ ದುಷ್ಟರ ಹಿಂದೆ ನಡೆಯುವರೆಂದರೆ ಅಜ್ಞಾನ ಮಿತಿಮೀರಿದೆ.
ಸತ್ಯವನ್ನು ರಾಜಕೀಯದಲ್ಲಿ ತಿಳಿಯುವುದಕ್ಕೂ ರಾಜಯೋಗದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ಬಹಳ ಅಂತರವಿದ್ದು ಆ ಅಂತರದಲ್ಲಿ ಕಣ್ಣಿಗೆ ಮಣ್ಣೆರಚಿ ಆಳುವವಗೆ ಅನ್ಯದೇಶದವರಿಗೆ ನಮ್ಮಲ್ಲಿ  ಉಚಿತವಾಗಿ ಸನ್ಮಾನಗಳಾಗುತ್ತಿದೆ. ಯಾವುದೋ ಹೊರದೇಶದ ಪ್ರಸಿದ್ದ ವ್ಯಕ್ತಿಯನ್ನು ಕರೆಸಿಕೊಂಡು ಜನರನ್ನು ದಾರಿತಪ್ಪಿಸುವ ಸ್ವಾತಂತ್ರ್ಯ ರಾಜಕಾರಣಿಗಳು ಪಡೆದಿರುವರೆಂದರೆ ನಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಎಂದರ್ಥ. ಒಟ್ಟಿನಲ್ಲಿ ಎಲ್ಲವೂ ರಾಜಕೀಯದ ಪ್ರೇರಣೆಯಂತೆ ನಡೆದರೂ  ನಮ್ಮ ಸಮಸ್ಯೆ ಗೆ ಪರಿಹಾರ ಸಿಗೋದು  ನಮ್ಮ ಬದಲಾವಣೆಯಿಂದಷ್ಟೆ. ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿರದು. ಆತ್ಮವೆಂದರೇನೆಂಬುದರ ಅರಿವಿಲ್ಲದವರನ್ನು ಚೆನ್ನಾಗಿ ಆಳಬಹುದು.ಹೀಗಾಗಿ ಅಜ್ಞಾನದ ಜನರಿಗೆ ಇನ್ನಷ್ಟು ಅಜ್ಞಾನ ತುಂಬಿ ಹೊರಗೆ ಕುಣಿಸಿ ಕುಡಿಸಿ ಮೆರೆಸಿದರೆ ಸಂಸಾರ ಹದಗೆಟ್ಟುಹೋಗುವಾಗ ಯಾರೂ ಸರಿಪಡಿಸಲಾಗದು.ಹೊರಗಿನ‌ನ್ಯಾಯಾಲಯದಲ್ಲಿಯೂ ಹಣವಿಲ್ಲದೆ  ನ್ಯಾಯ ನೀಡೋದಿಲ್ಲ ಎಂದಾಗ ಮೇಲಿರುವ ನ್ಯಾಯಾಧೀಶನಿಗೆ ಶರಣಾಗೋದು ಉತ್ತಮ.ಆಗ‌ಹಣವೂ ಸದ್ಬಳಕೆಯಾಗುತ್ತದೆ. 
ಯಾರೋ ಒಬ್ಬ ವ್ಯಕ್ತಿಯಿಂದ ದೇಶ ಹಾಳಾಗೋದಿಲ್ಲ ಉಳಿಯೋದೂ ಇಲ್ಲ. ದೇಶದ ಒಳಗಿರುವ ಎಲ್ಲರ ಜ್ಞಾನಶಕ್ತಿಯಿಂದ  ಎಲ್ಲಾ ‌ನಡೆದಿರುವಾಗ ನಮ್ಮೊಳಗೇ ಇರುವ ವಿದೇಶಿ ವಿಜ್ಞಾನದ ಶಿಕ್ಷಣವು ವ್ಯವಹಾರಕ್ಕೆ ಸಹಕಾರ ಕೊಟ್ಟರೂ ಧರ್ಮದ ಪ್ರಕಾರ ನಮ್ಮ ಆತ್ಮರಕ್ಷಣೆಗೆ ಪೂರಕವಾಗಿದೆಯೆ? ಇದರ ಬಗ್ಗೆ ಧಾರ್ಮಿಕ ಕ್ಷೇತ್ರ ಶಿಕ್ಷಣ ಕ್ಷೇತ್ರ ಸಾಹಿತ್ಯ ಕ್ಷೇತ್ರ ಗಮನ ಕೊಡುವುದು ಅಗತ್ಯವಿದೆ.
ಅಲ್ಲಿಯೂ ಚುನಾವಣೆಯಲ್ಲಿ  ಹಣದ ಪ್ರಭಾವವೇ ಮೇಲುಗೈ ಸಾಧಿಸಿದರೆ ಜ್ಞಾನಿಗಳ ಗತಿ ಅಧೋಗತಿ.ಭಾರತ ವಿಶ್ವಗುರು ಎನಿಸಿಕೊಂಡಿದ್ದು ಆತ್ಮಜ್ಞಾನದಿಂದ ಆದರೆ ಇಂದಿದು ಹೊರಗಿನವರ ವಿಜ್ಞಾನದೆಡೆಗೆ ಹೊರಟು ದೇಶದಲ್ಲಿ ತನ್ನ ಮೂಲ ಶಿಕ್ಷಣವನ್ನು  ಕೊಡಲಾಗದ ಸ್ಥಿತಿಗೆ ಬಂದಿರೋದು ಆತ್ಮನಿರ್ಭರಕ್ಕೆ   ಪೂರಕವೇ ಮಾರಕವೇ?
ಯಾವುದೇ ಪಕ್ಷ ಬಂದರೂ ದೇವಸ್ಥಾನಗಳನ್ನು ಸರ್ಕಾರದ ವಶದಿಂದ ಬಿಡಿಸಲಾಗಿಲ್ಲ ದೇಶೀಯ ಶಿಕ್ಷಣವನ್ನು ಕೊಡಲಾಗಿಲ್ಲ ಎಂದರೆ ನಮ್ಮ ಚಿತ್ತ ವಿದೇಶಿಯತ್ತ. ಇದರಿಂದ ವಿದೇಶಿಗರಿಗೆ ಸಿಗುತ್ತಿರುವ  ಸನ್ಮಾನ ನಮ್ಮವರಿಗಿಲ್ಲ. 
ಕಣ್ಣೊರೆಸುವ ನಾಟಕವಾಡುವವರಿಗೆ ಕಣ್ಣೀರಿನ ಬೆಲೆ ಕಟ್ಟಲಾಗದು. ಕಣ್ಣೀರಿನ ಫಲವೇ  ಅತೃಪ್ತ ಆತ್ಮಗಳಾಗಿ ನಿಂತು ಬೇಡುತ್ತಿರುವ ಜನರಾಗಿರುವರು. ಇವರನ್ನು ತೃಪ್ತಿ ಪಡಿಸಲು ಉತ್ತಮ  ಜ್ಞಾನದ ಶಿಕ್ಷಣ ನೀಡುವುದೇ ಉಪಾಯ.
ಎಲ್ಲದ್ದಕ್ಕೂ ಪರಮಾತ್ಮನೇ ಉಪಾಯವಾಗಿರುವನು. ಮೇಲಿರುವ ಅವನ ಬಿಂದುಗಳಲ್ಲಿ ಅಡಗಿರುವ ಆತ್ಮಶಕ್ತಿ ಜಾಗೃತವಾದಾಗಲೇ ಭೂಮಿಯಲ್ಲಿ  ಶಾಂತಿ ನೆಲೆಸಲು ಸಾಧ್ಯ.
ಶಿಕ್ಷಣವೇ ಹೊರಮುಖವಾಗಿದ್ದು  ಹಣವೇ ಸರ್ವಸ್ವ ವಾದಾಗ
ಎಲ್ಲಿಯ ಬದಲಾವಣೆ?
ಶ್ರೀ ಕೃಷ್ಣ ನೇ ತಿಳಿಸಿದಂತೆ ಕಲಿಯುಗದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವ  ಸತ್ಯದರ್ಶನ  ನಮ್ಮ  ಅಂತರಂಗ ಶುದ್ದಿಯಿಂದಷ್ಟೆ ಕಾಣಬಹುದು. 
ಸ್ವಚ್ಚಭಾರತಕ್ಕೆ ಸ್ವಚ್ಚ ಶಿಕ್ಷಣ ಅಗತ್ಯವಿದೆ. ಪೋಷಕರೆ  ಮಕ್ಕಳ ಜೊತೆಗೆ ‌ಹಣವನ್ನು ಕೊಟ್ಟು  ಗುಲಾಮಗಿರಿಗೆ ಸಹಕರಿಸಿದರೆ  ಗುಲಾಮರಿಂದ ಬಿಡಿಸಿಕೊಳ್ಳಲು ಸಾಧ್ಯವೆ? ಇಲ್ಲಿ ಗುಲಾಮರು ಯಾರು? ವಿದೇಶಿ ಕಂಪನಿ,ವ್ಯವಹಾರ,ಸಾಲ,ಬಂಡವಾಳದ ಜೊತೆಗೆ ಒಪ್ಪಂದಕ್ಕೆ  ನಮ್ಮವರು  ಇಳಿದಾಗ ದೇಶದ ತುಂಬಾ ಅವರದೇ ಸಾಮ್ರಾಜ್ಯ. ಇದನ್ನು ಹಿಂದೆ ಬ್ರಿಟಿಷ್ರೂ   ಮಾಡಿತೋರಿಸಿದ್ದಾರೆ.ಈಗ ಅವರದೇ ಶಿಕ್ಷಣ ವ್ಯವಹಾರ ಭಾಷೆ ಮಾಧ್ಯಮಗಳ ಮೂಲಕ ರಾಜಾರೋಷವಾಗಿ ರಾಜಕಾರಣಿಗಳು ನಡೆಸಿರುವರಷ್ಟೆ.ಇದನ್ನು ಪ್ರಗತಿ ಎನ್ನುವ ಭ್ರಮೆಯಲ್ಲಿ  ನಾವು ಸಹಕಾರ ನೀಡುತ್ತಾ ಮೇಲಕ್ಕೇರಿಸಿ  ನಮ್ಮೊಳಗೇ ಇದ್ದ ಶುದ್ದ ಸತ್ಯ ಸತ್ವ ತತ್ವಕ್ಕೆ  ವಿರುದ್ದವಿರುವಾಗ ನಾವು ಗುಲಾಮಗಿರಿಗೆ  ತಲೆಬಾಗಬೇಕಿದೆ. 
ದೇಶ ಸುತ್ತು ಕೋಶ ಓದು ಎನ್ನುವುದೇ ತಪ್ಪು. ಯಾವ ದೇಶ ಸುತ್ತಬೇಕು ಯಾರ ಕೋಶ ಓದಬೇಕೆಂಬ ಅರಿವಿಲ್ಲದಿದ್ದರೆ ಮನಸ್ಸು ಮನೆಯೊಳಗೆ ಇರೋದಿಲ್ಲ.
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂದರೆ ನಮ್ಮಲ್ಲಿ ಆತ್ಮಜ್ಞಾನವಿದೆಯೆ ಇಲ್ಲವೆ ಎನ್ನುವುದು.
ನಾವೇ ನಮ್ಮನ್ನು ಅರ್ಥ ಮಾಡಿಕೊಳ್ಳಲು ಸೋತಾಗ ಅನ್ಯರು ಸುಲಭವಾಗಿ ಆಳುವರು. ಇದು ಇಂದಿನ ಭಾರತದ ಸ್ಥಿತಿಗೆ ಕಾರಣ.
ಯಾರು ಹಿತವರು ನಿಮಗೆ ಈ ಮೂವರೊಳಗೆ?
ದೇವರು ಮಾನವರು ಅಸುರರು
ಆಕಾಶ ಭೂಮಿ ಪಾತಾಳ
ಪುರುಷ ಸ್ತ್ರೀ ಮಕ್ಕಳು
ಬ್ರಹ್ಮ ವಿಷ್ಣು ಮಹೇಶ್ವರ

ಈ ಮಧ್ಯವರ್ತಿಗಳು ಆ ಕಡೆ ಈ ಕಡೆ ಸಮಾನವಾಗಿ ನೋಡುವ ಹೊತ್ತಿಗೆ ಕಾಲಮುಗಿದಿರುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎನ್ನುವುದನ್ನು ಯಾರಿಗೂ ತಪ್ಪಿಸಲಾಗದು.
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಪುರುಷರ ಅಜ್ಞಾನವು ಸ್ತ್ರೀ ಯರ ಸುಜ್ಞಾನವನ್ನು ಅಲ್ಲಗೆಳೆದಷ್ಟೂ ಸಮಸ್ಯೆಯಿಂದ ಬಿಡುಗಡೆ ಸಿಗದು. ಜ್ಞಾನದೇವತೆಗೇ ಎದುರು ನಿಂತರೆ ಅಜ್ಞಾನವೇ ಬೆಳೆಯೋದಲ್ಲವೆ? ಜ್ಞಾನವನ್ನು ಹಣದಿಂದ ಅಳೆಯಲು ಹೋದರೂ ಅಜ್ಞಾನವೇ ಬೆಳೆಯೋದು.
ಅಜ್ಞಾನವನ್ನು ಯಾವುದೇ ರಾಜಕೀಯ ಶಕ್ತಿಯಿಂದ ಸರಿಪಡಿಸಲಾಗದು. ಯಾವುದೇ ಅಧಿಕಾರ ದರ್ಪ ಅಸತ್ಯ ಅನ್ಯಾಯದಿಂದ  ಜನರನ್ನು ದಾರಿತಪ್ಪಿಸಿ ಆಳಬಹುದು ಆದರೆ ಅದರ ಪ್ರತಿಫಲ ಅಷ್ಟೇ ಕಠೋರವಾಗಿರುತ್ತದೆ ಕಾರಣವಿಷ್ಟೆ ಪರಮಾತ್ಮ ಒಲಿಯೋದು ಜ್ಞಾನಕ್ಕಷ್ಟೆ.ಇದು ಯೋಗಮಾರ್ಗದಲ್ಲಿರಬೇಕು. 
ಜ್ಞಾನಯೋಗ, ರಾಜಯೋಗ,ಭಕ್ತಿಯೋಗ, ಕರ್ಮ ಯೋಗದಲ್ಲಿ ರಾಜಕೀಯವಿತ್ತೆ? ಇದ್ದರೂ ಧರ್ಮ ವಿತ್ತು.ಈಗ ಧರ್ಮ ಎಲ್ಲಿದೆ? ಕಾಣದ ದೇವರನ್ನು ಹಿಡಿದು ದೇವಸ್ಥಾನ ಕಟ್ಟಬಹುದು.ಆದರೆ ದೇವರನ್ನು ಅಲ್ಲಿ ಕೂರಿಸುವಷ್ಟು ಶಕ್ತಿ ನಮಗಿರಬೇಕು.ಹಣಕ್ಕಾಗಿ  ದೇವರನ್ನು ಬೇಡೋ ಮೊದಲು ಜ್ಞಾನಕ್ಕಾಗಿ ಭಗವಂತನ ಸೇವೆ ಮಾಡೋದು ಸನಾತನ ಧರ್ಮದ ಗುರಿಯಾಗಿದೆ. ಇದನ್ನು ಧಾರ್ಮಿಕ ವರ್ಗದವರು ಅರಿತಾಗಲೇ ವಾಸ್ತವದಲ್ಲಿ ನಾವೆತ್ತ ಸಾಗಿದ್ದೇವೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. 
ಭೂಮಿಯ ಮೇಲಿರುವ ಮನುಕುಲಕ್ಕೆ ತನ್ನೊಳಗೆ ಇರುವ ದೈವತ್ವದ ಅರಿವಿಲ್ಲದಿದ್ದರೆ ಅಸುರರೆ ದೇಶದ ಜೊತೆಗೆ ದೇಹವನ್ನು ಆಳೋದು. ಇದರಿಂದಾಗಿ ಕಷ್ಟ ನಷ್ಟ ಯಾರಿಗೆ?

ಶತ್ರು ಮಿತ್ರರು ಯಾರು?

" ಜೀವನದಲ್ಲಿಗೆಲ್ಲಬೇಕು ಅಂದ್ರೆಮಿತ್ರರಿರಬೇಕು"
ಜೀವನಪರ್ಯಂತ ಗೆಲ್ಲಬೇಕೆಂದರೆ ಶತ್ರುಗಳಿರಬೇಕು" 
ಜೀವನವೆಂದರೆ‌ಜೀವಿಗಳ ವನ ಇದರಲ್ಲಿ ಗೆಲ್ಲುವುದಕ್ಕೆ ಮಿತ್ರರು  ಸಹಕರಿಸಬಹುದು ಆದರೆ ಇದು ತಾತ್ಕಾಲಿಕವಷ್ಟೆ.
ಯಾವಾಗ ನಮ್ಮ ಸ್ವಂತ ಬುದ್ದಿ ಜ್ಞಾನ ಶ್ರಮದಿಂದ  ಕಷ್ಟಪಟ್ಟು ಮುಂದೆ ನಡೆಯುವವರಿಗೆ ಹೆಚ್ಚಿನ ಶತ್ರುಗಳು. ಕಾರಣವಿಷ್ಟೆ ಅವರಲ್ಲಿ ಸತ್ಯ ನಿಷ್ಟೆ ನ್ಯಾಯ ಧರ್ಮ ವಿರುತ್ತದೆ. ಇದರಿಂದಾಗಿ ಹೆಚ್ಚಿನ ಹಣಸಂಪಾದನೆ ಕಷ್ಟವಾಗುತ್ತ ಬಡವರಾಗಿರುವರು. ಆ ಬಡತನವನ್ನು ಯಾರೋ ಹೊರಗಿನವರು  ಬಂದು ಹಣಕೊಟ್ಟು ಮೇಲಕ್ಕೆ ತರಲು ಸಹಕರಿಸಿದರೆ  ಅವರು ಮಿತ್ರರೆನಿಸುವರು.ಆದರೆ ಒಂದು ಸತ್ಯ  ಅವರವರ ಸಾಲ ಅಥವಾ ಋಣ ತೀರಿಸಲು  ಸ್ವಧರ್ಮ ಸತ್ಕರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯ ಅಗತ್ಯವಿದೆ ಎಂದರೆ  ಇದು ಹೊರಗಿನವರು ಕೊಡಬಹುದೆ? 
ಒಟ್ಟಿನಲ್ಲಿ  ಮಾನವ ತನಗೆ ತಾನೇ ಮೋಸ ಹೋದರೂ  ಹೊರಗಿನವರೆ ಕಾರಣ ಎಂದಾಗುತ್ತದೆ. 
ಅತಿಯಾದ  ಶತ್ರುಗಳೂ ಇರಬಾರದು ಮಿತ್ರರೂ ಇರಬಾರದು.

ಕೃತಕ ಜನ್ಮ ಎಷ್ಟು ಜನ್ಮಕ್ಕೆ ಕಾರಣವಾಗಬಹುದು?

ಜೀವಶಾಸ್ತ್ರ ಮತ್ತು ಪುರಾಣಗಳ ಪ್ರಕಾರ ಪ್ರಾಣಿಗಳು ಅಥವಾ ಜೀವಿಗಳು ಹುಟ್ಟುವ ವಿಧಾನವನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳ ವಿವರ ಇಲ್ಲಿದೆ:
೧. ಅಂಡಜ (Andaja):
ಅರ್ಥ: ಮೊಟ್ಟೆಯಿಂದ ಹುಟ್ಟುವ ಜೀವಿಗಳು (ಅಂಡ ಎಂದರೆ ಮೊಟ್ಟೆ, ಜ ಎಂದರೆ ಹುಟ್ಟು).
ಉದಾಹರಣೆ: ಪಕ್ಷಿಗಳು, ಹಾವುಗಳು, ಹಲ್ಲಿಗಳು ಮತ್ತು ಮೀನುಗಳು.
೨. ಸ್ವೇದಜ (Swedaja):
ಅರ್ಥ: ಬೆವರು ಅಥವಾ ತೇವಾಂಶದಿಂದ ಹುಟ್ಟುವ ಜೀವಿಗಳು (ಸ್ವೇದ ಎಂದರೆ ಬೆವರು). ಇವು ಸಾಮಾನ್ಯವಾಗಿ ಸೂಕ್ಷ್ಮಜೀವಿಗಳಾಗಿರುತ್ತವೆ.
ಉದಾಹರಣೆ: ಪರೋಪಜೀವಿಗಳು, ಬ್ಯಾಕ್ಟೀರಿಯಾ, ನುಸಿ, ಮತ್ತು ಹೇನುಗಳು.
೩. ಉದ್ಭಿಜ (Udbhija):
ಅರ್ಥ: ಭೂಮಿಯನ್ನು ಸೀಳಿಕೊಂಡು ಮೇಲೆ ಬರುವ ಜೀವಿಗಳು (ಉದ್ಭಿಜ ಎಂದರೆ ಮೊಳಕೆಯೊಡೆಯುವುದು).
ಉದಾಹರಣೆ: ಸಸ್ಯಗಳು, ಮರಗಳು, ಬಳ್ಳಿಗಳು ಮತ್ತು ಗಿಡಮೂಲಿಕೆಗಳು.
೪. ಜರಾಯುಜ (Jarayuja):
ಅರ್ಥ: ತಾಯಿಯ ಗರ್ಭದಿಂದ (ಜರಾಯು ಅಥವಾ ಹೊಕ್ಕಳು ಬಳ್ಳಿಯ ಮೂಲಕ) ನೇರವಾಗಿ ಮರಿಗಳಾಗಿ ಹುಟ್ಟುವ ಜೀವಿಗಳು.
ಉದಾಹರಣೆ: ಮನುಷ್ಯರು, ಹಸು, ನಾಯಿ, ಆನೆ ಮುಂತಾದ ಸಸ್ತನಿಗಳು.
ಈ ನಾಲ್ಕು ವಿಧಗಳನ್ನು ಒಟ್ಟಾಗಿ 'ಚತುರ್ವಿಧ ಜೀವರಾಶಿಗಳು' ಎಂದು ಕರೆಯಲಾಗುತ್ತದೆ.
 ವೈಜ್ಞಾನಿಕ ಯುಗದಲ್ಲಿ ಪ್ರಕೃತಿ ಸಹಜವಾದ ಜನನ ಮರಣಗಳನ್ನು   ಮಾನವನು  ಕೃತಕ ವಿಧಾನದಿಂದ ತಡೆಯಲು ಹೊರಟು  ಮಾನವನ ಸಹಜ ಗುಣಧರ್ಮ ವೇ  ಹಿಂದುಳಿಯುತ್ತಿದೆ. ಹಾಗಾದರೆ  ಪರಮಾತ್ಮ ಜೀವಾತ್ಮರಿಗೆ  ಜನನ ಮರಣವಿದೆಯೆ?  ಯಾರು ಯಾರನ್ನು ತಿಳಿದು ನಡೆಯಬೇಕಿದೆ? ನಡೆಯಬೇಕು? ನಡೆಯುತ್ತಿರುವರು? 
ಕಲಿಗಾಲದ ಕಲಿಕೆಯೇ  ಸರಳವಾಗಿರುವ ಸತ್ಯದ ವಿರುದ್ದ ಇರೋವಾಗ  ಪ್ರಕೃತಿ ನಿಯಮ ಮೀರಿ‌ ನಡೆಯೋದು ಸಹಜ.
ಏನಂತೀರ?
ಬದಲಾವಣೆ  ಸಹಜ.ಆದರೂ ಸಮಾಜ ಇದನ್ನು ವಿರೋಧಿಸಿದರೆ  ವಿಕೃತ  ಸ್ವಭಾವದವರ  ಜೀವಿಗಳ ಜನ್ಮವೇ ಹೆಚ್ಚುವುದು.

Wednesday, December 17, 2025

ನೀವಿರೋದೆಲ್ಲಿ? ನಮ್ಮೊಳಗಿರೋದು ಯಾರು?

ಯಾರೊಳಗೆ ಯಾರಿರೋದು?
ಪ್ರಶ್ನೆಗೆ ಉತ್ತರ ಎಲ್ಲಾ ಅವರೊಳಗೆ ಹೊರಗೆ ಹುಡುಕಿಕೊಂಡರೆ ನಾವು ಯಾರ ಅಧೀನದಲ್ಲಿದ್ದೇವೆನ್ನುವ ಸತ್ಯದರ್ಶನ ವಾಗುತ್ತದೆ.
ಅಧ್ಯಾತ್ಮಿಕ ಚಿಂತಕಿಯಾಗಿ ನಾನು ಕಂಡಿರುವ ಸತ್ಯದಲ್ಲಿ  ಪರಮಾತ್ಮನೊಳಗೆ ಜೀವಾತ್ಮನಿದ್ದರೂ ಜೀವಾತ್ಮನಾದ ಮಾನವ ಪರಮಾತ್ಮನನ್ನೇ ತನ್ನ ವಶದಲ್ಲಿಟ್ಟುಕೊಳ್ಳಲು ಶತಪ್ರಯತ್ನ ನಡೆಸಿ ಅಧರ್ಮ ಬೆಳೆದಿದೆ.ಇಲ್ಲಿ ಆತ್ಮಕ್ಕೆ ಲಿಂಗಬೇಧ ಜಾತಿಬೇಧ ಪಕ್ಷಬೇಧವಿಲ್ಲ ಆದರೂ ಧರ್ಮದ ಪ್ರಕಾರ ಎಲ್ಲಾ ಒಂದಾಗೋದಕ್ಕಾಗಿಯೇ ಎಲ್ಲಾ ಅವತಾರವನ್ನು ತಾಳಿ ಧರ್ಮ ರಕ್ಷಣೆ ಮಾಡಿದ‌ ಪರಮಾತ್ಮನ ಪುರಾಣ ಕಥೆಗಳಿವೆ. ಪುರಾಣ ಕಥೆಗಳಲ್ಲಿ ನಾವಿದ್ದೇವೆ ಆದರೆ ಅದರ ತತ್ವಗಳು ನಮ್ಮಲ್ಲಿಲ್ಲ. ಎಲ್ಲಾ ಮಹಾತ್ಮರುಗಳನ್ನು ಗೌರವಿಸಿ ಪೂಜಿಸಿದರೂ ನಮ್ಮ ಮಹಾತ್ಮನ ಅರಿವಾಗಿಲ್ಲ.ಅಂದರೆ ಮಹಾತ್ಮನಾಗೋದಕ್ಕೆ ಬೇಕಾದ ತತ್ವಜ್ಞಾನದ ಕೊರತೆಯೇ ನಾವು ಯಾರೊಳಗಿದ್ದೇವೆ? ನಾವ್ಯಾರು? ನಾನ್ಯಾರು ಪ್ರಶ್ನೆ ಮಾಡಿಕೊಳ್ಳದಂತೆ ಮಾಡಿರುವಾಗ ಹೊರಗಿನಿಂದ ಬಂದವರು ನಮ್ಮನ್ನು ಸುಲಭವಾಗಿ ವಶಪಡಿಸಿಕೊಂಡು ಆಳಬಹುದು. ಹಿಂದಿನ ಕಾಲದಿಂದಲೂ  ನಡೆದು ಬಂದಿರುವ ರಾಜಕೀಯ ದ್ವೇಷವು ಮನೆಮನೆಯೊಳಗೆ ಹರಡಿರುವಾಗ ಆ ದ್ವೇಷ ಒಳಗಿನ ಕಿಡಿಯೇ ಅಥವಾ ಹೊರಗಿನ ಕಿಡಿಯೇ ಎಂದು ಪರೀಕ್ಷೆ ಮಾಡಿಕೊಂಡರೆ ಒಳಗಿನದಾದರೆ ಒಳಗಿದ್ದೇ ಆರಿಸುವ ಪ್ರಯತ್ನ ನಡೆಸಬಹುದು.ಹೊರಗಿನದ್ದಾಗಿದ್ದರೆ ಅದರಿಂದ ದೂರವಿದ್ದರೆ ನಂದಿಹೋಗುತ್ತದೆ.
ಈವರೆಗೆ ನಡೆದಿರುವ ಸಾಕಷ್ಟು ಹೋರಾಟ ಹಾರಾಟ ಮಾರಾಟದಿಂದ ದೇಶದೊಳಗೆ ಶಾಂತಿ ನೆಲೆಸಿತೆ ಅಥವಾ ನಮ್ಮನೆಯೊಳಗೆ ಶಾಂತಿ ನೆಲೆಸಿತೆ? ಶಾಂತಿಗಾಗಿ ಧರ್ಮ ಯುದ್ದವಾಗಿದ್ದರೂ  ನಂತರದ ದಿನಗಳಲ್ಲಿ  ಹೋದ ಜೀವ ಮತ್ತೆ  ಜನ್ಮಪಡೆದು ಕ್ರಾಂತಿಯೇ ಬೆಳೆದಿದೆ. ತಾತ್ಕಾಲಿಕ ಪರಿಹಾರ ಯುದ್ದ ಹೋರಾಟ ಹಾರಾಟ ಮಾರಾಟವೆಂದರೆ ನಾವು ಒಪ್ಪೋದಿಲ್ಲ ಕಾರಣ ಅದು ಕೆಲವರಿಗೆ ಸುಖವೆನಿಸಿದರೆ ಹಲವರಿಗೆ ದು:ಖ ಅಸಮಾಧಾನ ಅಸಂತೋಷ ಅಜ್ಞಾನವನ್ನೇ ಬೆಳೆಸಿದೆ. ಹೀಗಿರುವಾಗ ಶಾಂತಿಯಿಂದ ಸತ್ಯ ಹಾಗು ಧರ್ಮ ವನರಿತವರು ಇದರಿಂದ ದೂರವಾಗುತ್ತಾ ಮಹಾತ್ಮರಾಗಿ ಮರೆಯಾದರು. ಆ ಮರೆಯಾದವರ ಹೆಸರಿನಲ್ಲಿ ರಾಜಕೀಯ ನಡೆಸಿದರೆ ನಾವು ಮಹಾತ್ಮರಾಗಬಹುದೆ? ಸಾಧ್ಯವಿಲ್ಲ ಕಾರಣ ಆತ್ಮ ಒಳಗಿನ ಶಕ್ತಿ ಅವರಂತೆ ನಡೆಯುವ ದಾರಿ ಇದ್ದರೆ ಮಾತ್ರ ಅವರ ಹಿಂದೆ ನಡೆಯಬಹುದು. ಅವರು ರಾಜಯೋಗದ ದಾರಿಯಲ್ಲಿ ನಡೆದಿರುವಾಗ ನಾವು ರಾಜಕೀಯದೆಡೆಗೆ ನಡೆದರೆ ವಿರುದ್ದ ಪರಿಣಾಮ ಎದುರಿಸಬೇಕಾಗುತ್ತದೆ. ಇಲ್ಲಿ ಎಲ್ಲರಲ್ಲಿಯೂ ಮಹಾತ್ಮರಿದ್ದರೂ ಎಲ್ಲಾ ಗುರುತಿಸುವ ಶಕ್ತಿ ಪಡೆದಿಲ್ಲವೆಂದಾಗ ಮಹಾತ್ಮರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಂತಲ್ಲವೆ?
ಶ್ರೀ ರಾಮ ಶ್ರೀ ಕೃಷ್ಣನ ಕಾಲದಿಂದಲೂ ಈ ರಾಜಕೀಯ ವಿದೆ.
ರಾಮನ ಕಾಲದಲ್ಲಿ ತತ್ವವಿದ್ದರೆ ಕೃಷ್ಣನ ಕಾಲದಲ್ಲಿ ತಂತ್ರಪ್ರಯೋಗವಾಯಿತು. ಕಾರಣ ದುಷ್ಟರನ್ನು ಸದೆಬಡಿಯಲು ತಂತ್ರ ಅನಿವಾರ್ಯ ವಾಯಿತೆಂದರೆ ಸ್ವಲ್ಪ ಮಟ್ಟಿಗೆ ಅಸತ್ಯ ಸೇರಿಕೊಂಡಿತು ಆದರೆ ಧರ್ಮ ಯುದ್ದ ನಡೆಯಿತು. ಈಗ ಕಲಿಗಾಲ ಇಲ್ಲಿ ತತ್ವದ ಹೆಸರಿನಲ್ಲಿ ತಂತ್ರವಾಗಿ ನಂತರ ಯಂತ್ರದಂತೆ ಜನರನ್ನು ಬಳಸಿಕೊಂಡು ತನ್ನ ಸ್ವತಂತ್ರ ಜ್ಞಾನದ ಜೊತೆಗೆ ಜನರ ಸ್ವತಂತ್ರ ಜ್ಞಾನವೂ ಹಿಂದುಳಿದು ಹಿಂದುಳಿದವರನ್ನು ಆಳುವವರೆ ಹೆಚ್ಚಾಗಿದ್ದಾರೆ. ಸ್ವತಂತ್ರ ಭಾರತಕ್ಕಾಗಿ ತಮ್ಮ ಜೀವ ಪ್ರಾಣವನ್ನು ‌ಬಲಿಕೊಟ್ಟ ವೀರರ ದೇಶದಲ್ಲಿ ಅಜ್ಞಾನವನ್ನು ತಲೆಗೆ ತುಂಬಿಕೊಂಡು ಯಾರೋ ಹೇಳಿದ್ದನ್ನು ಕೇಳಿ,ನೋಡಿ,ಕೂಗಿಕೊಂಡು ಯುವಕಯುವತಿಯರು ಮನೆಯಿಂದ ಹೊರಬಂದು ಹೋರಾಟ ಮಾಡಿದರೆ ಎಲ್ಲಿರುವುದು ಜೀವ? ಒಳಗೋ ಹೊರಗೋ? ಒಟ್ಟಿನಲ್ಲಿ ಜೀವಾತ್ಮನು ಪರಮಾತ್ಮನ ಒಳಗಿದ್ದರೂ  ನಾನೇ ಪರಮಾತ್ಮ ಎನ್ನುವ ಅಸುರ ಶಕ್ತಿಯ ಅಡಿಯಾಳಾಗಿ ಜೀವ ಹೋಗುತ್ತಿದೆ ಎಂದರೆ ಆತ್ಮಜ್ಞಾನದ ಕೊರತೆ ಇದಕ್ಕೆ ಕಾರಣವೆನ್ನಬಹುದಷ್ಟೆ.
ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ರಕ್ಷಣೆ ಮಾಡಿದ್ದರೂ ಕೊನೆಗೆ ಸೀತೆಯನ್ನೂ ಬಿಟ್ಟು ರಾಜಧರ್ಮದ ಪರ ನಿಲ್ಲಬೇಕಾಯಿತು.ಅಂದಾಗ ಕ್ಷತ್ರಿಯನಾಗಿರುವಾಗಿನ ಧರ್ಮ ವೇ ಬೇರೆ,ಮಾನವನಾಗಿ ಸ್ವತಂತ್ರವಾಗಿ ರುವಾಗಿನ ಧರ್ಮ ವೇ ಬೇರೆ. ಹಾಗೆ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದು ದೇಶದೊಳಗೆ ಇರೋವಾಗ  ದೇಶಕ್ಕಾಗಿ ನಾನೇನು ಮಾಡಬಹುದೆನ್ನುವ ಚಿಂತನೆ ಬರಲು ನಿಜವಾದ ದೇಶಭಕ್ತರಿಗಷ್ಟೆ ಸಾಧ್ಯ.ಭಕ್ತಿ ಒಳಗಿನ ಶಕ್ತಿ.ಹಾಗೆಯೇ ದೇವರ ಭಕ್ತರು ದೈವತ್ವ ಪಡೆಯುವುದಕ್ಕಾಗಿ ನಾನೇನು ಸೇವೆ ಮಾಡಬಹುದೆನ್ನುವ ಚಿಂತನೆ ನಡೆಸಿದ್ದರೆ ನಮ್ಮಲ್ಲಿ ಸಾಕಷ್ಟು ಚೈತನ್ಯಶಕ್ತಿ ವೃದ್ದಿಯಾಗಿ ಅದೇ ದೇಶವನ್ನು ಉಳಿಸುತ್ತಿತ್ತು.
ವಿಪರ್ಯಾಸವೆಂದರೆ ಇಂದಿನ ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣವೇ ರಾಜಕೀಯದ ವಶದಲ್ಲಿದೆ. ಯಾರದ್ದೋ ವಿಚಾರವನ್ನು ಯಾರೋ ಹೇಗೋ ಅರ್ಥ ಮಾಡಿಕೊಂಡು ಸಣ್ಣ ಮಕ್ಕಳ ಮುಗ್ದ ಮನಸ್ಸಿಗೆ‌ ಒತ್ತಾಯದಿಂದ ತುಂಬುವ ಕೆಲಸಕ್ಕೆ ಪೋಷಕರ ಸಹಕಾರವಿದೆ. ಆದರೆ ನಮ್ಮ ಮಕ್ಕಳ ಸ್ವತಂತ್ರ ಬುದ್ದಿಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಯ ದುರ್ಭಳಕೆ ಆದಾಗ ಅದರ ಪರಿಣಾಮವನ್ನು ಮುಂದೆ ತಾವೇ ಅನುಭವಿಸುವಾಗ  ಸರ್ಕಾರ ಸರಿಯಿಲ್ಲ ಶಿಕ್ಷಣಸರಿಯಿಲ್ಲ ಸಮಾಜಸರಿಯಿಲ್ಲ ಶಿಕ್ಷಕರು ಸರಿಯಿಲ್ಲ ದೇಶವೇ ಸರಿಯಿಲ್ಲ ಎಂದು ಕೂಗುವವರ ಹಿಂದೆ  ನಿಂತರೆ ನಾವು ಸರಿಯಾಗಲು ಸಾಧ್ಯವೆ?
ವಿಚಾರಗಳು ಅಧ್ಯಾತ್ಮಿಕ ವಾಗಿದ್ದರೂ ಭೌತಿಕದಲ್ಲಿ ಕಣ್ಣಿಗೆ ಕಾಣುತ್ತಿರುವ ಸತ್ಯವಾಗಿದೆ.ಭೌತವಿಜ್ಞಾನ ಕಣ್ಣಿಗೆ ಕಾಣೋವರೆಗೂ ನಂಬೋದಿಲ್ಲ ಹಾಗಾಗಿ ಇಲ್ಲಿಯವರೆಗೆ ಬೆಳೆಸಿರುವ ನಾವು ಈಗ ನಂಬಲೇಬೇಕಿದೆ.
ದೇಶದೊಳಗೆ ನಾವಿರೋದೇ ನಮ್ಮೊಳಗೇ ದೇಶವಿದೆಯೆ?
ಸತ್ಯ ನಮ್ಮೊಳಗಿದೆಯೇ ಅಥವಾ ನಾವೇ ಸತ್ಯವಂತರೆ
ದೇವರೊಳಗೆ ನಾವಿರೋದೇ ಅಥವಾ ನಾವೇ ದೇವರೆ ?
ಭೂಮಿಯ ಮೇಲಿರುವುದೋ  ಜೀವ? ಒಳಗಿರುವುದೋ?
ಎರಡೂ ಸತ್ಯವೇ ಆದರೂ ಭೂಮಿಗೆ ಬಂದಿರುವ ಜೀವಾತ್ಮನಲ್ಲಿ  ದೇಶಭಕ್ತಿ ದೈವತ್ವ ಸತ್ಯ ಒಳಗೇ ಇಲ್ಲದೆ ಎಲ್ಲೋ ಹೊರಗೆ‌ ಹುಡುಕುವ ಕೆಲಸದಲ್ಲಿ ನಾವಿರೋವಾಗ  ಹುಡುಕಾಟದಲ್ಲಿ  ಜೀವನ ಮುಗಿದುಹೋದರೆ  ಯಾರೊಳಗೆ 
ಏನಿತ್ತೋ ಅದೇ ಮತ್ತೆ ಮತ್ತೆ ಬೆಳೆಯುತ್ತದೆ.
ಅದಕ್ಕೆ ಇದನ್ನು ಕಲಿಗಾಲವೆಂದರು. ಹೊರಗಿನ ಅಜ್ಞಾನವನ್ನು ಒಳಗೆಳೆದುಕೊಂಡ ಮಾನವನಿಗೆ ಮಹಾತ್ಮರ ಪರಿಚಯವಾಗದೆ ಜೀವ ಹೋದರೆ ಅಸುರರ ವಶವಾಗುತ್ತಾನೆ.
ಹಿಂದೂ ಧರ್ಮದಲ್ಲಿ ಜನ್ಮಪಡೆದು ಹಿಂದೂಸ್ತಾನಿ ಎಂದವರು ಹಿಂದೂ ದೇಶ ತೊರೆದರೆ ಹಿಂದೂಗಳ ಸಂಖ್ಯೆ ಕುಸಿಯಿತು.
ಹಾಗಂತ ವಿಶ್ವದಾದ್ಯಂತ ಹರಡಿರುವ ಹಿಂದೂಗಳಲ್ಲಿ ಎಲ್ಲಾ ಹಿಂದುತ್ವದಲ್ಲಿರಲಾಗಿಲ್ಲವೆಂದರೆ ತಪ್ಪು ಮೂಲವನ್ನು ಬಿಟ್ಟು ನಡೆದಿರೋದಷ್ಟೆ.ಇದರ ಫಲ ಅವರು ಅನುಭವಿಸಲೇಬೇಕಾದಾಗ ಇದಕ್ಕೆ ಕಾರಣ ಸರ್ಕಾರ ವಲ್ಲ ದೇವರೂ ಅಲ್ಲ. ಹಾಗಂತ ನಮ್ಮ ದೇಶದೊಳಗೆ ಇದ್ದವರಿಗೆ ಸರಿಯಾದ ಧರ್ಮ ಜ್ಞಾನವಿದ್ದರೆ ದೇಶದ ಉದ್ದಾರ ಸಾಧ್ಯವಿತ್ತು. ನಮಗೆ ಎಲ್ಲಾ ಉಚಿತವಾಗಿ ಸರ್ಕಾರ ಕೊಟ್ಟರೆ ನಮ್ಮ ಕರ್ಮಕ್ಕೆ ಬೆಲೆಯಿರುವುದೆ? ಧರ್ಮದಿಂದ ಸಂಪಾದನೆ ಮಾಡೋದರಿಂದಲೇ ಋಣ ತೀರಿಸಲು ಸಾಧ್ಯ.ಇದು ಯಾವ ಮತವಾದರೂ ಸರಿ ನಾನಿರುವ ನೆಲ ಜಲದ ಋಣ ತೀರಿಸಲು ಧರ್ಮ ಮಾರ್ಗ ವಿರಬೇಕೆನ್ನುತ್ತದೆ ಅಧ್ಯಾತ್ಮ. ಪರರನ್ನು ಶೋಷಣೆ ಮಾಡಿ ನಾನು ಸುಖವಾಗಿರಲು ಅಸಾಧ್ಯ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತವರು ಸಾಮಾನ್ಯ ಜ್ಞಾನವನ್ನು ತಿರಸ್ಕಾರದಿಂದ ನೋಡುತ್ತಾ ಸಾಮಾನ್ಯರ ಸಹಕಾರದಲ್ಲಿಯೇ ಅಸಮಾನ್ಯರಾಗಿ ಬೆಳೆದರೂ ಸಾಲದ ಹೊರೆ ತನ್ನ ಮೇಲೇ ಏರಿಸಿಕೊಂಡಿರುವಾಗ  ಬೇರೆಯವರ ಸಾಲ ತೀರಿಸಲಾಗದು.ಅದೂ ಪರಮಾತ್ಮನ ಸಾಲವಂತೂ‌
ಮಿತಿಮೀರಿದೆ ಎನ್ನಬಹುದು.ಇದರಿಂದ ಬಿಡುಗಡೆ ಪಡೆಯಲು ಸತ್ಯ ಧರ್ಮದೊಳಗಿದ್ದು ಸೇವೆ ಮಾಡಲೇಬೇಕು. ಸೇವೆ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡಬೇಕೆಂದು ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮನ ಸಂದೇಶವಾಗಿದೆ ಎಂದರೆ ಇಂದಿನ‌ ಸೇವೆ ಯಾವ ರೀತಿಯಲ್ಲಿ ಯಾರ ಹಣದಲ್ಲಿ ಯಾವ ಮಾರ್ಗದಲ್ಲಿ ನಡೆಯುತ್ತಿದೆ ? ಸಾಲಮನ್ನಾ ಮಾಡುವ ಸರ್ಕಾರದ ಹಣವೇ ಜನರ ಋಣ. ಇದನ್ನು ತೀರಿಸಲು ಇನ್ನೊಂದು ಜನ್ಮ. ಒಟ್ಟಿನಲ್ಲಿ ಪರಮಾತ್ಮನ ಋಣ ಕಣ್ಣಿಗೆ ಕಾಣದ ಕಾರಣ  ಮಿತಿಮೀರಿದ ಸಾಲದಲ್ಲಿ ಶ್ರೀಮಂತ ರು ಬೆಳೆದು ಬಡವರನ್ನು ಆಳಿದರೆ  ಅಧರ್ಮ. ದೇಶದ ಒಳಗೆ ಹೊರಗೆ ಆವರಿಸಿರುವ ಎಲ್ಲಾ ದೇವಾನುದೇವತೆಗಳೇ ಇದಕ್ಕೆ ಸಾಕ್ಷಿಯಾಗಿರುವಾಗ ನಮ್ಮ ಆತ್ಮಸಾಕ್ಷಿಗೆ  ವಿರುದ್ದ ಎಷ್ಟೇ ಮುಂದೆ ಹೊರಗೆ ನಡೆದರೂ ಧರ್ಮ ರಕ್ಷಣೆಯಾಗದು. ಸಾಧ್ಯವಾದಷ್ಟು ನಮ್ಮ ಮನೆಯೊಳಗೆ ಮನಸ್ಸಿನೊಳಗೇ ತುಂಬಿರುವ ಅನಗತ್ಯ ಅನಾವಶ್ಯಕ ವಿಷಯ ವಸ್ತು ಒಡವೆ ಆಸ್ತಿಯನ್ನು  ದಾನ ಧರ್ಮದ ಮೂಲಕ ಹೊರ ಹಾಕುವ ಪ್ರಯತ್ನ ನಡೆಸಿದರೆ ಮನಸ್ಸು ಸ್ವಚ್ಚ  ಮನೆಯೂ ಸ್ವಚ್ಚ ಮಂದಿರ ಮಠವೂ ಸ್ವಚ್ಚವಾಗುತ್ತಾ ದೇಶದ ಸಾಲ ತೀರಿಸಿದರೆ ಹೊರಗಿನ ಋಣ ಸಂದಾಯವಾಗಿ‌ ದೇಶದ ತುಂಬಾ ತುಂಬುತ್ತಿರುವ ಪರಕೀಯರ ವ್ಯವಹಾರ ಶಿಕ್ಷಣ ಬಂಡವಾಳ ಸಾಲಕ್ಕೆ ಸ್ಥಾನಮಾನವೇ ಇರದು. ಇಷ್ಟು ವರ್ಷದಿಂದಲೂ ದೇಶ ಆಳಿರುವವರು  ಅಜ್ಞಾನದಲ್ಲಿ ಜನರನ್ನು ಸಾಲದೆಡೆಗೆ ಎಳೆದಿದ್ದಾರೆ. ಆ ಸಾಲ ತೀರಿಸಲು ಇರುವ ಮಾರ್ಗ ಒಳಗೆ ಹುಡುಕಿದರೂ ಸಿಗದಂತೆ  ಹೊರಗಿನವರು ಬಂದು ಕುಳಿತಿರೋದು ದೊಡ್ಡ ಭ್ರಷ್ಟಾಚಾರ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದವರಿಗೆ  ನಾವೆಲ್ಲಿ ಎಡವಿದ್ದೇವೆಂಬ ಅರಿವಿಲ್ಲದೆ ಅದನ್ನೇ ಮತ್ತೆ ಬೆಳೆಸಿದರೆ  ನಮ್ಮ ಜೀವ ಭ್ರಷ್ಟಾಚಾರದ ಲ್ಲಿದೆ ಎಂದರ್ಥ.ಈ ಸಣ್ಣ ಜೀವ ಉಳಿಸಿಕೊಳ್ಳಲು ಅಧರ್ಮ ಅಸತ್ಯ ಅನ್ಯಾಯ  ಅಕರ್ಮ ಅವಿದ್ಯೆ ಗೆ ಶರಣಾದರೆ ಆತ್ಮಹತ್ಯೆ ಯಾಗುತ್ತದೆ. ಇಲ್ಲಿ ಜೀವ ಹೋದರೆ ಸಾವಲ್ಲ ಆತ್ಮಹೋದರೆ ಸಾವು. ಇದ್ದೂ ಸತ್ತಂತೆ ಎಂದರೆ  ಅಧ್ಯಾತ್ಮಿಕ ವಾಗಿ ಮಾನವ ಯಾವಾಗ ತನ್ನ ಸ್ವಾರ್ಥ ಸುಖಕ್ಕಾಗಿ  ಅಧರ್ಮ ಅಸತ್ಯ ಅನ್ಯಾಯದ ಪರ ನಿಲ್ಲುವನೋ  ಆಗವನು ಜೀವಂತ ಶವವಾಗುತ್ತದೆ.ಶಿವನಿಗೆ ಆತ್ಮಜ್ಞಾನವೇ ಮುಖ್ಯ ದೇಹವಲ್ಲ. ಇಷ್ಟು ತಿಳಿದವರು ಈಗ ಚಿಂತನೆ ಮಾಡಿಕೊಂಡರೆ ನಮ್ಮ ಸಹಕಾರದ ಫಲವೇ ದೇಶದ ಈ ಸ್ಥಿತಿಗೆ ಕಾರಣವಾದಾಗ ನಮ್ಮ ಆತ್ಮರಕ್ಷಣೆಗಾಗಿ ಮನೆಯೊಳಗೆ ಇದ್ದವರು ಏನು ಮಾಡಬಹುದು? ಹೊರಗೆ ಬಂದವರು  ಹೇಗೆ ನಡೆಯಬೇಕು? ಎಲ್ಲಾ ಮಾಡೋದೂ ನಮ್ಮ ಭವಿಷ್ಯಕ್ಕಾಗಿಯೇ ಎಂದಾಗ ಮಕ್ಕಳ ಭವಿಷ್ಯವನ್ನು ನಾವು ಯಾವ ರೀತಿಯಲ್ಲಿ  ಅರ್ಥ ಮಾಡಿಕೊಂಡು ಶಿಕ್ಷಣ ನೀಡಿದ್ದೇವೆ.ನೀಡುತ್ತಿದ್ದೇವೆ? ನೀಡಬೇಕಿದೆ ಎನ್ನುವ ಬಗ್ಗೆ ಪೋಷಕರೆ ಆತ್ಮಾವಲೋಕನ ಮಾಡಿಕೊಂಡರೆ ನಮಗೆ ವಿಶ್ವರೂಪದರ್ಶನದ ಹಿಂದಿರುವ ಅಧ್ಯಾತ್ಮಿಕ ವಿಜ್ಞಾನವು ಸ್ವಲ್ಪ ಅರ್ಥ ವಾಗುತ್ತಾ  ನನ್ನದೇನೂ ನಡೆಯುತ್ತಿಲ್ಲ ನನ್ನ ಮೂಲ ಧರ್ಮ ಕರ್ಮ ದ ಪ್ರಕಾರ ನಡೆಯೋದೇ ಜೀವನ ಎನ್ನುವ ಸತ್ಯಜ್ಞಾನ ಬರಬಹುದು.ಬಂದರೂ ನಡೆಯೋ ದಾರಿ ಇಲ್ಲದವರಿಗೇನೂ ಮಾಡಲಾಗದು.ದಾರಿಇದ್ದವರು ಅದೃಷ್ಟ ವಂತರಷ್ಟೆ. ಅದೃಷ್ಟ ನಮ್ಮ ನಡೆ ನುಡಿಯ ಮೇಲಿದೆ. ಅದು ಧರ್ಮ ಹಾಗು ಸತ್ಯದಲ್ಲಿದ್ದರೆ ನಾವು ಪರಮಾತ್ಮನೊಳಗೇ ಇರೋದನ್ನು ಕಾಣಬಹುದು ಇದೇ ಮುಕ್ತಿಯ ಮಾರ್ಗ. ಇದನ್ನು ಸಾಧ್ಯವಾದಷ್ಟು ಶೇರ್ ಮಾಡಿ. ಭಾರತೀಯರು ಎಚ್ಚರವಾದರೆ  ನಮ್ಮೊಡನೆ ಬರುತ್ತಿರುವ ಪರರಿಗೂ ಜ್ಞಾನ ಬರುವುದು. ಇಲ್ಲಿ ಒಂದೇ ದೇಶದಲ್ಲಿ ಹೊಡೆದಾಟ ಮಾಡಿಕೊಂಡು ಸಾಯೋರು ಹೆಚ್ಚು.ಸಾವು ಎಲ್ಲರಿಗೂ ಇದೆ.ಕೆಲವರಿಗೆ ಜ್ಞಾನದ ನಂತರ ಬಂದರೆ ಹಲವರಿಗೆ ಅಜ್ಞಾನದಲ್ಲಿಯೇ ಜೀವ ಹೋಗುತ್ತಿದೆ. ಹೀಗಾಗಿ ಜನಸಂಖ್ಯೆ‌ಮಿತಿಮೀರಿದೆ. ಶಾಂತಿ ಹಿಂದುಳಿದಿದೆ ಕ್ರಾಂತಿಯೇ  ಜೀವನವಾಗುತ್ತಿದೆ. ಇದಕ್ಕೆ ಅರ್ಥ ವಿದೆಯೆ? ಅಸುರರೊಳಗೇ ಸುರರು,ವಿದೇಶದೊಳಗೇ ದೇಶ, ಅಜ್ಞಾನದೊಳಗೇ ಜ್ಞಾನ ಅದ್ವೈತ ದೊಳಗೇ ದ್ವೈತ ಕಣ್ಣಿಗೆ ಕಾಣುತ್ತಿದ್ದರೂ ನನ್ನೊಳಗೇ ಅಡಗಿರುವ  ಆತ್ಮಸಾಕ್ಷಿ ಬಿಟ್ಟು ಹೊರಬಂದರೆ  ನಷ್ಟ ಯಾರಿಗೆ?
ಇದನ್ನು ಓದಿಕೊಂಡು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.ಎಲ್ಲಾ ನಡೆಯಬೇಕಿತ್ತು ನಡೆಯುತ್ತಿದೆ ನಡೆಯುತ್ತದೆ ನಮ್ಮ ನಡಿಗೆ ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶನದಲ್ಲಿ ಇದೆಯೇ ಇಲ್ಲವೆ ಎನ್ನುವ ಬಗ್ಗೆ  ನಿಂತು ಆಲೋಚನೆ ಮಾಡುವ ಸ್ವತಂತ್ರ ನಮಗಿದ್ದರೆ  ಸಾಕು ನಾವು ಬದಲಾಗಬಹುದು. ಆಗ ಮಕ್ಕಳೂ ಬದಲಾಗುವರು.ದೇಶವನ್ನು ಬದಲಾವಣೆ ಮಾಡಲು ಕಷ್ಟ ಪ್ರಜೆಗಳೇ ಬದಲಾಗಬಹುದಷ್ಟೆ.

Friday, December 5, 2025

ತತ್ವಜ್ಞಾನದಿಂದ ಏಕತೆ

ಯಾವುದೇ ರಾಜಕೀಯ ವ್ಯಕ್ತಿ ತತ್ವದ ಪರ ನಿಲ್ಲೋದು ಕಷ್ಟ. ತತ್ವ ಎಂದರೆ ಒಂದು‌ಮಾಡೋದು. ಅದರಲ್ಲಿ ನಮ್ಮ ದೇಶದ  ಮೂರು ಮತಗಳನ್ನು ಒಂದು ಮಾಡೋದೆಂದರೆ  ದೊಡ್ಡ ಸಾಧನೆಯೇ . ಶ್ರೀ ಶಂಕರರ ಜನ್ಮದಿನವನ್ನು ತತ್ವಜ್ಞಾನಿಗಳ ದಿನವೆಂದು ಆಚರಿಸಲು ಮೋದಿ ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಸುದ್ದಿ  ಬಹಳ ಸಂತೋಷ ಕೊಡುತ್ತದೆ.
ಇದರ‌ಮಧ್ಯೆ ಉಳಿದ ದ್ವೈತ ವಿಶಿಷ್ಟಾದ್ವೈತ ದವರೂ‌ ಇದನ್ನು ಅಷ್ಟೇ  ಸಂತೋಷದಿಂದ. ಒಪ್ಪಿಕೊಳ್ಳಬಹುದೆ?
ದೇಶ ಒಂದೇ ಧರ್ಮ ಒಂದೇ, ದೇವನೊಬ್ಬನೆ, ಪರಮಾತ್ಮನೊಬ್ಬನೆ ಎನ್ನುವ ಅದ್ವೈತ ಸಿದ್ದಾಂತವು ಈಗಿನ ಭಾರತ ಸ್ವೀಕರಿಸಿದರೆ  ನಾವೆಲ್ಲರೂ ಒಂದೇ ಎನ್ನುವ ಸತ್ಯಕ್ಕೆ ಜಯ.
ಆದರೆ  ಮಧ್ಯವರ್ತಿಗಳು ‌ಬಿಡುವರೆ? ಈ ವಿಚಾರ ಹಿಡಿದು ಚರ್ಚೆ  ಮಾಡಬಹುದು ಆದರೆ ವಾದ ವಿವಾದವಾಗಬಾರದಷ್ಟೆ. ವಾದ ಇದ್ದರೆ ವಿವಾದವೂ ಇರುತ್ತದೆ. ವಿರೋಧ‌ಯಾಕೆ ಎಂದರೆ ನನ್ನ  ಅನಿಸಿಕೆ ಬೇರೆ .ಅನಿಸಿಕೆ ಅನುಭವ ಅನುಭವದಿಂದ ‌ಒಗ್ಗಟ್ಟು  ಬೆಳೆದರೆ ಸರಿ.ಇಲ್ಲವೆಂದರೆ  ಇನ್ನಷ್ಟು ಸಮಸ್ಯೆ. ಇಲ್ಲಿ ತತ್ವವು ಒಂದು ಮಾಡೋದಾದರೆ  ಬೇರೆ ಬೇರೆ ಎನ್ನುವುದರಲ್ಲಿ ಅರ್ಥ ಇರದು.
ಹೀಗಾಗಿ ಜ್ಞಾನದಲ್ಲಿ ಎಲ್ಲರೂ  ಒಂದೇ ಎನ್ನುವ ಹಾಗಿಲ್ಲ ಆದರೆ ನಮ್ಮ ಜ್ಞಾನದಿಂದ ಒಂದು ದೇಶವನ್ನು ಉಳಿಸಬಹುದು ಎನ್ನುವ  ವಿಚಾರದಲ್ಲಿ  ಎಲ್ಲಾ ಒಂದಾಗಿ ತತ್ವವನರಿತು ಪರಮಾತ್ಮನೆಡೆಗೆ ಸಾಗುವುದು ಉತ್ತಮ.
ಈವರೆಗೆ ಯಾವುದೇ ರಾಜಕಾರಣಿಗಳಾಗಲಿ ಧಾರ್ಮಿಕ ವರ್ಗವನ್ನು  ಸಂತೈಸುವ  ಕೆಲಸ ಮಾಡಲಾಗಿಲ್ಲದಿರೋದೆ  ನಮ್ಮ ದೇಶ ಅನ್ಯರ ವಶದಲ್ಲಿ ಸಿಲುಕಲು ಕಾರಣವಾಗಿದೆ.
ರಾಜಕೀಯ ಎಂದರೆ ಜನರನ್ನು ಆಳೋದಷ್ಟೆ ಅಲ್ಲ.ಜನರ ಜ್ಞಾನವನ್ನು  ಸದ್ಬಳಕೆ ಮಾಡಿಕೊಂಡು  ಜೀವನ ನಡೆಸಲು ಸಹಕರಿಸುವುದೇ ಸರ್ಕಾರದ  ಗುರಿಯಾಗಬೇಕಿತ್ತು. ಆದರೆ ಧಾರ್ಮಿಕ ವಿಚಾರ ಬಂದಾಗ ನಮ್ಮ ಧರ್ಮ ಅವರ ಧರ್ಮ ಎನ್ನುವ ಅಂತರದಲ್ಲಿ ಸಾಕಷ್ಟು ಅಧರ್ಮ ಗಳೇ ಜನರನ್ನು ಆಳುತ್ತಾ‌  ತತ್ವವಿಲ್ಲದ ತಂತ್ರಕ್ಕೆ ಸಿಲುಕಿ ಅತಂತ್ರಸ್ಥಿತಿಗೆ  ಈಗ ದೇಶ ನಿಂತಿರೋದಕ್ಕೆ  ಮೂಲ ಕಾರಣವಾದ ನಮ್ಮ ಶಿಕ್ಷಣ ವ್ಯವಸ್ಥೆ  ಇಂದಿಗೂ‌ಮಕ್ಕಳಿಗೆ ಜಾತಿ ಮತ,ಪಕ್ಷದ ರಾಜಕೀಯ ವಿಚಾರ ತಿಳಿಸುವ ಪ್ರಯತ್ನದಲ್ಲಿದೆ. ಇದರಿಂದಾಗಿ  ಅಂತರ ಬೆಳೆದಿದೆ. ಮಕ್ಕಳ ಜ್ಞಾನವನ್ನು ಗುರುತಿಸಿ ಅದಕ್ಕೆ ಸರಿಯಾದ ಶಿಕ್ಷಣ. ನೀಡಿದಾಗ ಸುಜ್ಞಾನ ವಾಗುತ್ತದೆ. ನಂತರ ವಿಜ್ಞಾನ ಜಗತ್ತನ್ನು  ಅರಿತು ಬಾಳಬಹುದು.
ಇದು ಸುಲಭವೆ ಎಂದರೆ ಹೊರನೋಟಕ್ಕೆ  ರಾಜಕೀಯದಿಂದ. ಬದಲಾವಣೆ  ಮಾಡಬಹುದೆನಿಸಿದರೂ  ಪ್ರಜೆಗಳ ಒಳಗಿನ ಅಜ್ಞಾನ  ಇದನ್ನು  ಒಪ್ಪಿಕೊಂಡಿರಲು ಕಷ್ಟ.
ಏನೇ ಆದರೂ ಅದು ನಮ್ಮ ಅಂತರಂಗದ ಶುದ್ದಿಗೆ ಪೂರಕ ಇದ್ದರೆ  ಅದರಿಂದ ಆತ್ಮಜ್ಞಾನ ವೃದ್ದಿಯಾಗಿ  ಆತ್ಮರಕ್ಷಣೆಯ ಹಾದಿ ಹಿಡಿದಾಗ ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ದರ್ಶನ ಸಾಧ್ಯ. ನಾನೆಂಬುದಿಲ್ಲ ಎನ್ನುವ ಅದ್ವೈತ ವನ್ನು ನಾನು ತಿಳಿಯುತ್ತೇನೆಂದರೆ  ನಾನಿರುವಾಗ ಪರಮಾತ್ಮ ಕಾಣುವನೆ? ನನಗೆ ಪರಮಾತ್ಮನ ಸತ್ಯ ಅರ್ಥ ಆಗಿದೆ ಎಂದರೆ ಅನ್ಯರಿಗೆ ಅರ್ಥ ಮಾಡಿಸುವ ಶಕ್ತಿ ನನಗಿದೆಯೆ? ಶಕ್ತಿ ಇದ್ದರೂ ಅಧಿಕಾರವಿದೆಯೆ? ಅಧಿಕಾರ ಕೊಡುವುದಕ್ಕೂ ಜನರಲ್ಲಿ ಜ್ಞಾನವಿರಬೇಕು. ಹೀಗೇ ಒಬ್ಬರ ಹಿಂದೆ ಒಬ್ಬರು ಹೋಗಬೇಕಾದರೆ  ತತ್ವವು  ಅಗತ್ಯವಿದೆ. ‌ತಂತ್ರದಿಂದ ಜನರನ್ನು  ಒಂದು ಮಾಡಿದರೂ ತಾತ್ಕಾಲಿಕ ವಷ್ಟೆ.
ಏನೇ ಇರಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ನಮ್ಮನ್ನು ನಮ್ಮವರನ್ನು ಉಳಿಸಿ ಬೆಳೆಸಲು ಈಗ ಎಲ್ಲಾ ತತ್ವ ಸಿದ್ದಾಂತಗಳ. ಹಿಂದಿರುವ ಸತ್ಯ ಒಂದೇ ಪರಮಾತ್ಮ ಒಬ್ಬನೇ
ಎಂದಂತೆ  ನಮಗೆ  ದೇಶ ಒಂದೇ  ಆಗಿರುವುದು ಸತ್ಯವೇ ಆಗಿದೆ.
ಎಲ್ಲಾ ದೇಶದವರನ್ನು ಒಳಗೆ ಕರೆದು ಒಳಗಿದ್ದವರಿಗೆ ಕೆಲಸವಿಲ್ಲದೆ ಹೊರಗೆ ಕಳಿಸಿದರೆ  ಅವರವರ ಮೂಲ ಧರ್ಮ ಕರ್ಮಕ್ಕೆ  ಸ್ಥಾನವಿರುವುದೆ? ಇಲ್ಲದಿದ್ದರೂ  ಒಳಗಿದ್ದೇ ಸಾಧ್ಯವಾದಷ್ಟು  ಅನುಸರಿಸಲು ಉತ್ತಮ ಶಿಕ್ಷಣ ನೀಡುವುದು ಧರ್ಮ. ಭಾರತೀಯರು‌ವಿದೇಶಗಳಲ್ಲಿದ್ದು ನಾವು ಭಾರತೀಯರು ಎಂದರೆ ಅರ್ಧ ಸತ್ಯ. ನಮ್ಮಲ್ಲಿ ಭಾರತೀಯ ತತ್ವಜ್ಞಾನವಿದ್ದರೆ ಅದನ್ನು ಭಾರತದೊಳಗಿದ್ದು‌ಬೆಳೆಸಿದರೆ ಅದ್ವೈತ.  ಹೇಳೋದೊಂದು ಮಾಡೋದೊಂದು ಎಂದಾಗ ಕೇವಲ ತೋರುಗಾಣಿಕೆ.
ತೋರುಗಾಣಿಕೆಯು ತಂತ್ರವಾಗಿದ್ದರೆ ಸ್ವತಂತ್ರ ಜ್ಞಾನವಿರದು.

ಶ್ರೀ ಶಂಕರಾಚಾರ್ಯರು  ಅಧ್ವೈತ ಸಂಸ್ಥಾಪನಾಚಾರ್ಯರು.
ಅಖಂಡ ಭಾರತವನ್ನು ಧಾರ್ಮಿಕವಾಗಿ ಒಂದು ಮಾಡುವ ಮೂಲಕ ನಾಲ್ಕು ದಿಕ್ಕುಗಳಲ್ಲಿ  ಮಠಸ್ಥಾಪಿಸಿ ಜ್ಞಾನದೇವತೆಯನ್ನು  ಎತ್ತಿ ಹಿಡಿಯುವುದೆಂದರೆ  ಅಂದಿನ ಕಾಲದಲ್ಲಿ ಸುಲಭವಿರಲಿಲ್ಲ  ಇವೆಲ್ಲವೂ ಸ್ವಯಂ ಶಂಕರನೇ  ಆಚಾರ್ಯರ  ರೂಪದಲ್ಲಿ ನಿಂತು  ನಡೆಸಿರೋದೆಂದರೆ  ಇದು ಅದ್ವೈತ ವಾಗುತ್ತದೆ.
ಹಾಗೆಯೇ ಭಗವದ್ಗೀತೆ ಯಲ್ಲಿ  ಶ್ರೀ ಕೃಷ್ಣನ ವಿಶ್ವ ರೂಪ ದರ್ಶನ ವೂ ಅದ್ವೈತ ವನ್ನೇ ತೋರಿಸುತ್ತದೆ. ಒಟ್ಟಿನಲ್ಲಿ ಒಂದು ಧರ್ಮ ರಕ್ಷಣೆಗಾಗಿ  ಭಗವಂತ ಯಾವುದೇ ರೂಪ ತಳೆದು ನಿಲ್ಲಬಹುದೆನ್ನುವಾಗ ಎಲ್ಲರೂ ಎಲ್ಲವೂ ಅವನೇ ಆಗಿರುವಾಗ ತತ್ವವಾಗುತ್ತದೆ. ಅಂತರ ಮತ್ತು ಬೇಧಗಳು ಭಿನ್ನಾಭಿಪ್ರಾಯ ಹೆಚ್ಚಿಸಿದಷ್ಟೂ  ಸಮಸ್ಯೆ ಮಿತಿಮೀರಿ  ಜೀವಾತ್ಮನಿಗೆ ಪರಮಾತ್ಮನ ಸತ್ಯ ಅರ್ಥ ಆಗದೆ ಅತೃಪ್ತ ಸ್ಥಿತಿಗೆ ತಲುಪಿ ಅತಂತ್ರಸ್ಥಿತಿಗೆ ತಲುಪುತ್ತದೆ.

ಯಾವುದೇ‌ ಕಾರಣಕ್ಕೂ ಅದ್ವೈತ ಧ್ವೈತ ವಿಶಿಷ್ಟಾದ್ವೈತ ದಲ್ಲಿ  ಬೇಧವಿರದು. ಮಾನವರಿಗೆ ಅದರ ಅನುಭವ ಆಗದಿದ್ದರೆ ಅದನ್ನು ವಿರೋಧಿಸುವುದರಿಂದ ಜ್ಞಾನ ಬೆಳೆಯದು.
ಪರಮಾತ್ಮನ ಒಳಗಿರುವ ಎಲ್ಲಾ ಜೀವಾತ್ಮರನ್ನು  ಒಂದು ಮಾಡೋದು  ಕಷ್ಟವಿದೆ. ಅದರಲ್ಲಿ ಭಾರತೀಯರು  ತತ್ವಕ್ಕೆ ಬೆಲೆಕೊಡುವುದು ಧರ್ಮ ಎನ್ನುವರು. ತಂತ್ರ ಹೊರಗಿನಿಂದ ‌ಬೆಳೆದಿರಬಹುದಷ್ಟೆ. ಆದರೆ  ಒಳಗಿರುವ ದೈವೀಕ ಶಕ್ತಿ ನಮ್ಮನ್ನು  ದೈವತ್ವದೆಡೆಗೆ ಕರೆದೊಯ್ಯುವ ಸಾಧನ. ಹೀಗಾಗಿ ತತ್ವದಿಂದ ದೇಶೋಧ್ದಾರ ಆತ್ಮೋಧ್ದಾರ ಧರ್ಮದ ಉದ್ದಾರ ಆಗಿರೋದನ್ನು ಪುರಾಣಗಳೇ ತಿಳಿಸಿವೆ.
ಭೂಮಿ  ಆಕಾಶದಲ್ಲಿ ತಿರುಗುತ್ತಿದೆ. ಭೂಮಿಯ‌ಮೇಲೆ‌ಮನುಕುಲ ನಿಂತಿದೆ.ಮಾನವನೊಳಗೆ ದೈವತ್ವ ಅಡಗಿದೆ. ಆ ದೈವತ್ವದೆಡೆಗೆ ಹೋದಾಗ ಪರಮಾತ್ಮನ  ದರ್ಶನ ವಾಗಿದೆ ಎಂದರೆ  ಹೋಗದೆ ಹೊರಗೆ ಉಳಿದರೆ ಅನರ್ಥಕ್ಕೆ ಕಾರಣವಾಗಿದೆ.‌ ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ,ಭಾರತೀಯರು,ಕನ್ನಡಿಗರು...ಹೀಗೇ ಪ್ರಚಾರ ಮಾಡಿದಾಕ್ಷಣ ನಮ್ಮ  ಅಂತರಂಗ ಶುದ್ದಿ ಆಗಿದ್ದರೆ ಪರಿಸ್ಥಿತಿ ಹದಗೆಡುತ್ತಿರಲಿಲ್ಲ.ಯಾವಾಗ ನಮ್ಮವರನ್ನೇ ಅಧರ್ಮದಿಂದ ಆಳಲು ಹೊರಟು ಅಜ್ಞಾನದ ಶಿಕ್ಷಣ ಬೆಳೆಯಿತೋ ಅದೇ ಇಂದಿಗೂ  ಭಾರತಮಾತೆಗೆ‌  ನುಂಗಲಾರದ ತುತ್ತಾಗಿದೆ.
ದೇಶಭಕ್ತಿಯಿಲ್ಲದ ದೇವರ ಭಕ್ತರು  ಬೇರೆ ಬೇರೆಯಿರುವರು.ಆದರೂ ಇಡೀ ಜಗತ್ತನ್ನು ತನ್ನೊಳಗೇ ಇಟ್ಟುಕೊಂಡು  ಆಡಿಸುವ ಪರಮಾತ್ಮನಿಗೇನೂ ಸಮಸ್ಯೆ ಯಿರದು. ಪಾಪಪುಣ್ಯಗಳ ಗಂಟನ್ನು ಹೊತ್ತು ಹೋಗೋದು ಜೀವಾತ್ಮನೇ ಅಲ್ಲವೆ?  ಸಾಮಾನ್ಯ ಜ್ಞಾನವಿಲ್ಲದ ಮಾನವನಿಗೆ  ಅವನೊಳಗೇ ಇರುವ ಪರಮಾತ್ಮನ ದರ್ಶನ ಆಗಲಾರದು.

ಬದಲಾವಣೆ  ಜಗದ ನಿಯಮ. ಇದು ತತ್ವದೆಡೆಗೆ ನಡೆದರೆ ಆತ್ಮನಿರ್ಭರ ಭಾರತದ ಕನಸು ನನಸಾಗುತ್ತದೆ.
ನಮೋ ನಮ: