ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Thursday, December 18, 2025

ಶತ್ರು ಮಿತ್ರರು ಯಾರು?

" ಜೀವನದಲ್ಲಿಗೆಲ್ಲಬೇಕು ಅಂದ್ರೆಮಿತ್ರರಿರಬೇಕು"
ಜೀವನಪರ್ಯಂತ ಗೆಲ್ಲಬೇಕೆಂದರೆ ಶತ್ರುಗಳಿರಬೇಕು" 
ಜೀವನವೆಂದರೆ‌ಜೀವಿಗಳ ವನ ಇದರಲ್ಲಿ ಗೆಲ್ಲುವುದಕ್ಕೆ ಮಿತ್ರರು  ಸಹಕರಿಸಬಹುದು ಆದರೆ ಇದು ತಾತ್ಕಾಲಿಕವಷ್ಟೆ.
ಯಾವಾಗ ನಮ್ಮ ಸ್ವಂತ ಬುದ್ದಿ ಜ್ಞಾನ ಶ್ರಮದಿಂದ  ಕಷ್ಟಪಟ್ಟು ಮುಂದೆ ನಡೆಯುವವರಿಗೆ ಹೆಚ್ಚಿನ ಶತ್ರುಗಳು. ಕಾರಣವಿಷ್ಟೆ ಅವರಲ್ಲಿ ಸತ್ಯ ನಿಷ್ಟೆ ನ್ಯಾಯ ಧರ್ಮ ವಿರುತ್ತದೆ. ಇದರಿಂದಾಗಿ ಹೆಚ್ಚಿನ ಹಣಸಂಪಾದನೆ ಕಷ್ಟವಾಗುತ್ತ ಬಡವರಾಗಿರುವರು. ಆ ಬಡತನವನ್ನು ಯಾರೋ ಹೊರಗಿನವರು  ಬಂದು ಹಣಕೊಟ್ಟು ಮೇಲಕ್ಕೆ ತರಲು ಸಹಕರಿಸಿದರೆ  ಅವರು ಮಿತ್ರರೆನಿಸುವರು.ಆದರೆ ಒಂದು ಸತ್ಯ  ಅವರವರ ಸಾಲ ಅಥವಾ ಋಣ ತೀರಿಸಲು  ಸ್ವಧರ್ಮ ಸತ್ಕರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯ ಅಗತ್ಯವಿದೆ ಎಂದರೆ  ಇದು ಹೊರಗಿನವರು ಕೊಡಬಹುದೆ? 
ಒಟ್ಟಿನಲ್ಲಿ  ಮಾನವ ತನಗೆ ತಾನೇ ಮೋಸ ಹೋದರೂ  ಹೊರಗಿನವರೆ ಕಾರಣ ಎಂದಾಗುತ್ತದೆ. 
ಅತಿಯಾದ  ಶತ್ರುಗಳೂ ಇರಬಾರದು ಮಿತ್ರರೂ ಇರಬಾರದು.

No comments:

Post a Comment