ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Thursday, December 18, 2025

ದೇವರಿಗೆ ನಿದ್ರೆ ಅಗತ್ಯವೆ?

ದೇವರು ಶ್ರೀಮಂತನೆ ಬಡವನೆ?
ಶ್ರೀಮಂತನಾದರೆ ಬಡವರಿಗೆ ಸಹಕರಿಸುವನು.ಬಡವನಾದರೆ ಶ್ರೀಮಂತನಿಗೆ ನಿದ್ದೆ ಬಿಟ್ಟು ಸಹಕರಿಸುವನು.
ಎಂತಹ ವಿಪರ್ಯಾಸ ಶ್ರೀಮಂತರು ದೇವರನ್ನು ನೋಡಲು ಬರುವರೋ ಅಥವಾ ದೇವರೇ ಶ್ರೀಮಂತರನ್ನು ರಾತ್ರಿ ಕರೆಸಿಕೊಂಡು  ನೋಡುವನೋ ಒಟ್ಟಿನಲ್ಲಿ ಹಣ ಇಬ್ಬರಿಗೂ ಅಗತ್ಯವಿದೆ. ಹಣವಿದ್ದರಷ್ಟೆ ದೇವಸ್ಥಾನ ಅದಕ್ಕೆ  ಶರಣರು ಹೇಳಿರುವುದು ಉಳ್ಳವರು ಶಿವಾಲಯವ ಕಟ್ಟುವರು ನಾನೇನು‌ಮಾಡಲಿ ಬಡವನಯ್ಯ.
ಈಗಿನ‌ಕಾಲದಲ್ಲಿ ಪರಮಾತ್ಮನಿಗೆ ಶರಣಾಗದಿದ್ದರೂ ಸರಿ ಪರಕೀಯರಿಗೆ ಶರಣಾದರೆ ಹಣದ ಹೊಳೆ ಹರಿಯುವುದೆನ್ನುವವರು ದೇವಸ್ಥಾನ ಕಟ್ಟುತ್ತಿರೋದು  ದೈವಶಕ್ತಿ ಕ್ಷೀಣಿಸಲು ಕಾರಣವಾಗುತ್ತಿದೆ. 
ಜನಮರುಳೋ ಜಾತ್ರೆಯೋ ಎನ್ನುವುದು ಸರಿಯಾಗಿದೆ.
ಕಾಯುವ ದೇವರಿಗೆ‌ನಿದ್ರೆ ಬರುವುದೆ? ಬಂದರೆ ಕಾಯೋರು ಯಾರು?
ವಿಜಯವಾಣಿ ಪತ್ರಿಕೆಯಲ್ಲಿ  ಪ್ರಕಟವಾದ ಸುದ್ದಿ ದೇವರಿಗೆ ನಿದ್ದೆ ಮಾಡಲೂ ಪುರುಸೊತ್ತು ಕೊಡದೆ ಶ್ರೀಮಂತ ಭಕ್ತರು  ದೇವಸ್ಥಾನಕ್ಕೆ  ಹೋಗುತ್ತಿರುವರಂತೆ. ಹಾಗಾದರೆ ನಿದ್ರೆ ಮಾಡುತ್ತಿರುವ  ಭಕ್ತರು  ಬೆಳೆದಿರುವರೆ ಅಥವಾ ನಿದ್ರೆ ಬಿಟ್ಟು ದೇವರನ್ನು ನೋಡುವ ಭಕ್ತರು ಬೆಳೆದರೆ?

No comments:

Post a Comment