ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Monday, August 11, 2025

ಹಿಂದುಳಿದವರು ಮುಂದುವರಿದವರು ಯಾರು?

ಹಿಂದೂಸ್ತಾನ್ ಹಿಂದೂ ಧರ್ಮ ಹಿಂದುಳಿದವರು..ಎಲ್ಲವೂ ಒಂದೇ ಎನ್ನುವ ಪ್ರಶ್ನೆಗೆ ಉತ್ತರ ಹಲವು ಬರುತ್ತದೆ. ಬೇರೆ ಮಾಡೋದು ತಂತ್ರಜ್ಞಾನ ಒಂದು ಮಾಡೋದು ತತ್ವಜ್ಞಾನ ಎಂದಂತೆ ಎರಡರಿಂದ ಮೂರು‌ನಾಲ್ಕು ....ಸಾವಿರ ಕೋಟಿಯಾಗಿ ಬೆಳೆದಿರುವ  ಮನಸ್ಸುಗಳನ್ನು ಒಂದು ಮಾಡೋದರ ಹಿಂದೆ ಹೋದವರು  ಹಿಂದುಳಿದವರಂತೆ ಕಂಡಿದ್ದು  ಬೇರೆ ಮಾಡುತ್ತಾ‌ಮುಂದೆ ಹೋದವರಿಗಷ್ಟೆ. ಇದರಲ್ಲಿ ಅಧ್ಯಾತ್ಮ ಸತ್ಯ ಭೌತಿಕ‌ಮಿಥ್ಯ ತಮ್ಮದೇ ಆದ ಅನುಭವಗಳಿಂದ ಮಾನವನಿಗೆ ದಾರಿ ತೋರಿಸಿರುವುದರಿಂದ  ಆ ದಾರಿಯಲ್ಲಿ ನಡೆದವರಿಗೆ ಸತ್ಯ ಮಿಥ್ಯಗಳ ಎರಡೂ ಅನುಭವಗಳಾಗಿದೆ.
ನಮ್ಮ ಸ್ಥಾನಮಾನಕ್ಕಾಗಿ  ಮುಂದೆ ಮುಂದೆ ಹೋಗುವಾಗ ಹಿಂದೆಯೇ ನಡೆದು ಬರುವ ಋಣ ಕರ್ಮ ಗಳು ಕಾಣದು.
ಮತ್ತೆ  ಅದನ್ನು ತೀರಿಸಲು  ಅದೇ ಜೀವಾತ್ಮ ಬಂದಾಗ  ಹಿಂದಿನ ಸ್ಥಿತಿಗೆ ವಿರುದ್ದ ಮನಸ್ಥಿತಿ ಇರಬಹುದು. ಯಾರು ಸರಿಯಾದ ಮಾರ್ಗ ದರ್ಶನದಲ್ಲಿ ಮಾರ್ಗದಲ್ಲಿ ನಡೆದಿರುವರೋ ಅವರು ಗುರಿತಲುಪಿ  ಜೀವನ್ಮುಕ್ತಿ ಪಡೆದರು. ವಾಸ್ತವದಲ್ಲಿ  ನಾವೆಲ್ಲರೂ  ಹಿಂದಿರುಗಿ ಬಂದಿರುವ ಜೀವಾತ್ಮರಾದರೂ ನಮಗೆ ಮಾರ್ಗ ದರ್ಶನ ಮಾಡಿಸುವ‌  ಗುರುಹಿರಿಯರು  ನಮ್ಮವರೆ ಎನ್ನುವ ಪ್ರಶ್ನೆ  ಹಾಕಿಕೊಂಡರೆ  ಸನಾತನಧರ್ಮದ ಈ ಸ್ಥಿತಿಗೆ ಕಾರಣ ಮತ್ತು ಪರಿಹಾರ ಇದ್ದಲ್ಲಿಯೇ ಸಿಗಬಹುದು.
ಹಿಂದುಳಿದವರು ಯಾರು? ಹಣವಿಲ್ಲದವರೆ ಜ್ಞಾನವಿಲ್ಲದವರೆ?
ಸುಜ್ಞಾನವಿಲ್ಲದೆ ಅಜ್ಞಾನದಿಂದ  ಹಣದ‌ಹಿಂದೆ ನಡೆದು ಶ್ರೀಮಂತ ರಾದರೆ  ಮುಂದುವರಿದವರಾಗುವರಾದರೆ  ನಾವ್ಯಾಕೆ  ಹಿಂದಿನ ಮಹಾತ್ಮರನ್ನು  ಆರಾಧಿಸಬೇಕು? ಬೇಡಬೇಕು? 
ದಾಸ ಶರಣ,ಸಂತ ಮಹಾತ್ಮರುಗಳು  ಸುಜ್ಞಾನದ ಗಣಿಗಳು.
ಪರಮಾತ್ಮನ ಹಿಂದೆ ನಡೆದ ಸನಾತನಿಗಳು ಹಿಂದೂಗಳು.
ಅವರಲ್ಲಿದ್ದ ನಿಸ್ವಾರ್ಥ ನಿರಹಂಕಾರ  ಮತ್ತುಪ್ರತಿಫಲಾಪೇಕ್ಷೆ ಇಲ್ಲದ  ಸೇವೆಯನ್ನು  ನಾವೀಗ‌ಕಾಣಬಹುದೆ? 
ಜಗತ್ತನ್ನು ಆಳಲು ಹೊರಡುವುದು ರಾಜಕೀಯ ದ ಲಕ್ಷಣ
ಜಗತ್ತನ್ನು ಅರಿತು ಆಳಾಗಿ ಬದುಕುವುದೇ ರಾಜಯೋಗದ ಲಕ್ಷಣ. ಹಿಂದುಳಿದವರಲ್ಲಿರುವ  ಸಾಮಾನ್ಯಜ್ಞಾನ  ವಿಶೇಷ‌ಜ್ಞಾನಿಗಳಲ್ಲಿ ಕಾಣೋದಿಲ್ಲ. ಕಾರಣ ಭೂಮಿಯಲ್ಲಿ ಜೀವನ ನಡೆಸುತ್ತಿರುವ ಅರಿವು ಮಾನವನಿಗೆ ಅಗತ್ಯವಿದೆ.
ಯಾವಾಗ ಆಕಾಶದೆತ್ತರ ಹಾರೋದಕ್ಕೆ  ವಿಶೇಷವಿಜ್ಞಾನ‌ಬೆಳೆಯಿತೋ ಅಂದೇ ಭೂಮಿ ಕಾಣದೆ  ದುರ್ಭಳಕೆ ಆಯಿತು.
ಎಲ್ಲವೂ ರಾಜಕೀಯಮಯ. ಯಾರದ್ದೋ ದುಡ್ಡು ಯಾರದ್ದೋ ಜ್ಞಾನ  ಹಿಡಿದು ಯಾರನ್ನೂ ಆಳೋದರಲ್ಲಿ  ಧರ್ಮ ವಿದೆಯೆ ಇಲ್ಲವೆ ಎನ್ನುವ ಬಗ್ಗೆ ಇನ್ಯಾರೋ ಮಧ್ಯೆ ಬಂದು ವಾದ ವಿವಾದ‌ಮಾಡೋದರಲ್ಲಿಯೇ ನಮ್ಮ ಜೀವನ‌ಮುಗಿಯುತ್ತದೆ.ಒಳಗೇ ಅಡಗಿದ್ದ ಅಪಾರವಾದ ಜ್ಞಾನಶಕ್ತಿ ಹಿಂದುಳಿದಾಗ  ಹೊರಗಿನವರ ವಿರುದ್ದಹೋರಾಟ ಮಾಡಿದರೆ ಜ್ಞಾನ‌ಬರುವುದೆ?
ಒಟ್ಟಿನಲ್ಲಿ ನಮ್ಮ ಅಜ್ಞಾನದ ಫಲವೇ ಈ ಸಾಲ. ಎಷ್ಟು ಹಣ ಇದ್ದರೂ ಸಾಲದು.ಸಾಲವೇ ಅದು.
ಇದನ್ನು ತೀರಿಸದೆ ಮುಕ್ತಿಯಿಲ್ಲ ಎನ್ನುವುದು ಸತ್ಯ.ಹೀಗಾಗಿ ಹಿಂದೆ  ಕೊನೆಗಾಲದಲ್ಲಿ ಎಲ್ಲಾ ದಾನ‌ಮಾಡಿ ಸಂನ್ಯಾಸಿಗಳಾಗೋದು ನಡೆದಿತ್ತು.ಈಗಲೂ ಎಲ್ಲಾ ದಾನ ಮಾಡಿ  ಮಠ ಸೇರುವುದಿದೆ. ಇದು ಕೆಲವರಿಗಷ್ಟೆ ಆಗುತ್ತದೆ.
ಆದರೆ  ಮಿತಿಮೀರಿದ ಸಂಪಾದನೆಯ ಹಿಂದೆ ಇರುವ ಅತಿಯಾದ ಸಾಲದ ಚುಕ್ತ  ಆಗುವುದೆ ಇಲ್ಲವೆ ಎನ್ನುವ ಪ್ರಶ್ನೆಗೆ ಉತ್ತರ ಯಾರೂ ಕೊಟ್ಟಿಲ್ಲ.ಕೊಡಲಾಗೋದಿಲ್ಲ.
ಶ್ರೀ ಕೃಷ್ಣ ಪರಮಾತ್ಮನಿಗೇ ಜನನ‌ಮರಣವಿದೆ ಎಂದರೆ ಅವನೊಳಗಿರುವ ಭಕ್ತಿರಿಗಿಲ್ಲವೆ? ಭಕ್ತಿಯಲ್ಲಿಯೂ  ಎರಡಿದೆ
ಒಂದು  ಯೋಗದಿಂದ ಬೆಳೆಯೋದು.ಇನ್ನೊಂದು ಭೋಗಕ್ಕೆ ಸೇರೋದು.
 ಯೋಗದಿಂದ ಭಕ್ತಿಉಕ್ಕಿದರೆ  ಯೋಗಿಯಾಗುವನು. ಭೋಗದಿಂದ ಗಳಿಸಿದವನು  ರೋಗಿಯಾಗುವನು.
ದೇವರು ಕೇಳಿದ್ದೆಲ್ಲಾ ಕೊಡುವನು. ಹೇಗೆ ಸರ್ಕಾರ ಎಲ್ಲರಿಗೂ ಕೇಳಿದ್ದು ಕೊಟ್ಟು  ನಂತರ  ಹಿಂದಿರುಗಿ ಪಡೆಯುವುದೋ ಹಾಗೆ. ಉಚಿತ ಬಸ್ ಭಾಗ್ಯ..ಮಹಿಳೆಯರಿಗೆ..ಉಚಿತವಾಗಿ ಮನೆಯಿಂದ ಹೊರಗೆ ಬಂದು ತಿರುಗಾಡಬಹುದು.ಆದರೆ ಕಣ್ಣಿಗೆ ಕಾಣುವ ವಸ್ತು ಒಡವೆ ಇನ್ನಿತರ  ಸಾಮಾಗ್ರಿಗಳೂ ಮನೆಗೆ ಹೋಗುವಾಗ ಕೈ ಸೇರುತ್ತದೆ ಎಂದರೆ ವ್ಯಾಪಾರ ವ್ಯವಹಾರ ಜೋರಾಗಿದೆ ಎಂದರ್ಥ. ಇದರಿಂದಾಗಿ ಹಣ ಉಳಿತಾಯವಾಯಿತೆ?
ಎಲ್ಲೋ ಕೆಲವರಿಗೆ  ಮಾತ್ರ ಈ ಭಾಗ್ಯಗಳಿಂದ ಉಪಯೋಗವಾಗಿದೆ. ಹಾಗೆ ದೇವರು ಕೊಟ್ಟಿದ್ದರಲ್ಲಿ  ಜೀವನ ನಡೆಸೋದಕ್ಕೂ ಜ್ಞಾನವಿರಬೇಕು.
ಸುಜ್ಞಾನದ ಶಿಕ್ಷಣ ಕೊಡದೆ ಉಚಿತ ಕೊಟ್ಟರೆ ಸಾಲ ಖಚಿತ.
ಇದು ಮನೆ ಮಠ ಮಂದಿರದ ಜೊತೆಗೆ ದೇಶವನ್ನು ಹಾಳು ಮಾಡುವಷ್ಟು ಬೆಳೆಸಬಾರದಷ್ಟೆ.
ಇಲ್ಲಿ  ಜನರ ಹಣವನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಮಧ್ಯವರ್ತಿಗಳು  ಸಾಕಷ್ಟು ಭ್ರಷ್ಟಾಚಾರ ನಡೆಸಿ ಶ್ರೀಮಂತ ಆಗಿದ್ದರೂ  ಇದರಿಂದ  ಆತ್ಮತೃಪ್ತಿ ಸಿಗದು. 
ಇವೆಲ್ಲವೂ ಪುರಾಣ ಇತಿಹಾಸದೊಳಗೂ ಕಾಣುತ್ತೇವೆ.
ಆದರೆ ಅಂದಿನ ಧಾರ್ಮಿಕ ಶಿಕ್ಷಣಕ್ಕೂ ಇಂದಿನ ಭೌತಿಕ ಶಿಕ್ಷಣಕ್ಕೂ  ವ್ಯತ್ಯಾಸವಿದೆ. ಅಂದೂ ಮೂರು ಪಂಗಡವಿತ್ತು.
ಮೂವರೂ ಒಬ್ಬರನ್ನೊಬ್ಬರು  ಅರ್ಥ ಮಾಡಿಕೊಳ್ಳಲು ಕಷ್ಟವಿತ್ತು. ಈಗಲೂ ಇದ್ದಾರೆ ಮುಂದೆಯೂ ಇರುವರಷ್ಟೆ.
ಅದರಲ್ಲಿ  ನಾವ್ಯಾರು ಎಂದರಿತರೆ ನಾವು‌ಮೇಲಕ್ಕೆ ಅಂದರೆ ಜ್ಞಾನದೆಡೆಗೆ ಹೀಗಬೇಕೆ? ಮಧ್ಯೆ ನಿಲ್ಲಬೇಕೆ? ಅಥವಾ ಪಾತಾಳಕ್ಕೆ ಇಳಿಯಬೇಕೆ ಎನ್ನುವ ಬಗ್ಗೆ ಚಿಂತನೆ ನಡೆಸಬಹುದು.
ದೇವರು ಮಾನವರು ಅಸುರರು.. ದೈವತ್ವ ಪಡೆದರೆ ಜೀವನ್ಮುಕ್ತಿ,  ಮಾನವೀಯತೆ ಮೆರೆದರೆ  ದೇವಮಾನವ, ಅಸುರತ್ವದೆಡೆಗೆ ಸಾಗಿದರೆ  ಮೇಲೇಳಲಾಗದ  ಕೆಳಗಿನ ಸ್ಥಿತಿ.
ನಮ್ಮ ನಡೆ ಎತ್ತ ಕಡೆ?
ಹಿಂದೂಸ್ತಾನ್  ಅನ್ಯರಿಗೆ  ಕೊಡುವಷ್ಟು ಗೌರವ ನಮ್ಮವರಿಗೆ ಕೊಡಲು ಸೋಲಲು ಕಾರಣವೇ ಅನ್ಯರ ಶಿಕ್ಷಣದ ಜ್ಞಾನ.
ಹೀಗಿರುವಾಗ  ಹಿಂದೂವಾಗಿರಲು  ಜ್ಞಾನ ಬೇಕೆಂದರೆ ಹಿಂದಿನ ಶಿಕ್ಷಣ ಕೊಡಬೇಕು.  ಎಷ್ಟೋ ಹೋರಾಟಗಾರರು
ಮಕ್ಕಳು‌ಮೊಮ್ಮಕ್ಕಳನ್ನು ವಿದೇಶಕ್ಕೆ ಕಳಿಸಿ ಜನರ ಮುಂದೆ
ರಾಜಕೀಯ ನಡೆಸಿರುವರೆಂದರೆ  ಜನಸಾಮಾನ್ಯರ  ಅಜ್ಞಾನ ಬೆಳೆದಿದೆ. ಇಲ್ಲಿ ಆಳೋದು ತಪ್ಪಲ್ಲ  ಆಳಾಗಿ ಕಾಣೋದು ತಪ್ಪು.
 ಪಕ್ಷ ಪಕ್ಷದ ನಡುವೆ ಅಂತರ ಬೆಳೆಸಿ  ಕ್ರಾಂತಿ ಹರಡೋದು ಅಧರ್ಮ. ವ್ಯವಹಾರದ ವಿಚಾರಕ್ಕೆ ಬಂದರೆ ಯಾವಜಾತಿ  ಪಕ್ಷ ಧರ್ಮ ಬೇಧ ವಿರದು. ಧರ್ಮ ದೇವರ ವಿಚಾರಕ್ಕೆ ಬಂದರೆ  ಎಲ್ಲಾ ಬೇರೆ ಬೇರೆ ಆಗುವುದೆಂದರೆ  ಇದರರ್ಥ ನಮ್ಮಲ್ಲಿ  ಸ್ಪಷ್ಟವಾದ ಒಂದೇ ಸತ್ಯದ ಅರಿವಿಲ್ಲದಿರೋದಷ್ಟೆ.
ಒಂದೇ ದೇವರ ಹೆಸರಿನಲ್ಲಿ ಅಸಂಖ್ಯಾತ ದೇವಸ್ಥಾನ ಇದ್ದಾಗ ಎಲ್ಲರೂ ಒಗ್ಗಟ್ಟಿನಿಂದ ಬಾಳೋದು ಕಲಿಯಬೇಕಿತ್ತು.ಒಬ್ಬರನ್ನು ಕೆಳಗಿಳಿಸಿ ಇನ್ನೊಬ್ಬರು ಮೇಲಕ್ಕೆ ಏರೋದಕ್ಕೆ ರಾಜಕೀಯದ  ಸಹಕಾರವಿದೆ ಎಂದರೆ ಅಧರ್ಮ.
ತತ್ವ ಒಂದು ಮಾಡಬೇಕಿತ್ತು. ತಂತ್ರದಿಂದ ಆಳುವಾಗಲೂ ಧರ್ಮಕ್ಕೆ ಚ್ಯುತಿ ಬರದಂತಿರಬೇಕು. ಮೂಲಕ್ಕೆ ಅಪಾಯವಾದಾಗ  ಏನೂ‌ಮಾಡಲಾಗದು. ಒಂದು ಮರದ ಬೇರು ಗಟ್ಟಿಯಿದ್ದರೂ ರೆಂಬೆಗಳನ್ನು ದುರ್ಭಳಕೆ ಮಾಡಿಕೊಂಡು ಬೇರೆ ಬೇರೆ ಮಾಡಿದರೆ ದುರ್ಭಲವಾಗುತ್ತದೆ.
ಹಾಗೆಯೇ ಹಿಂದಿನಿಂದಲೂ ಅನ್ಯರು  ಸನಾತನಧರ್ಮದ ವಿರುದ್ದ ನಿಂತು  ತಮ್ಮ ಜನಸಂಖ್ಯೆ ಬೆಳೆಸಿಕೊಳ್ಳಲು  ಪಿತೂರಿ ನಡೆಸಿದ್ದರೂ  ನೆಲಜಲದ ಋಣ ತೀರಿಸದೆ ಜನ್ಮ ಜನ್ಮದಲ್ಲಿ  ಕಷ್ಟ ಅನುಭವಿಸುವುದು ತಪ್ಪಲಿಲ್ಲ. ಪರಮಾತ್ಮನಿಗೆ ಎಲ್ಲಾ ಒಂದೇ ಆಗಿದ್ದರೂ ಜೀವಾತ್ಮನ ಹಿಂದಿನ ಋಣ ಕರ್ಮದ ಫಲ ಅನುಭವಿಸಲೇಬೇಕೆನ್ನುವುದು  ಕರ್ಮ ಸಿದ್ದಾಂತ.
ಹಾಗಾಗಿ ಈಗಲೂ ಭಾರತೀಯರಾಗಲಿ ಹಿಂದೂ‌ಮುಸಲ್ಮಾನ ಕ್ರೈಸ್ತ ಮತ  ವಿಶ್ವದೆಲ್ಲೆಡೆಯ. ಹರಡಿದೆ. ಧರ್ಮ ಒಂದೇ
ಮಾನವಧರ್ಮ. ಇದರಲ್ಲಿ  ದೈವೀಕ ಶಕ್ತಿ ಇದ್ದರೆ  ಆತ್ಮಕ್ಕೆ ತೃಪ್ತಿ.ಅಸುರಿಶಕ್ತಿ ಇದ್ದರೆ ಅತೃಪ್ತ ಆತ್ಮವೇ ಆಗಿರುತ್ತದೆ. ಎಷ್ಟು ಕೊಟ್ಟರೂ ಸಾಲದು ಎಂದರೆ ಸಾಲವೇ ಆದಾಗಿರುತ್ತದೆ.
ಕಷ್ಪಪಡದೆ ಗಳಿಸಿದ ಹಣ,ಅಧಿಕಾರ ಸ್ಥಾನವನ್ನು  ಬಿಟ್ಟು ಬರೋದು ಕಷ್ಟ.ಹೀಗಾಗಿ ಯಥಾರಾಜ ತಥಾಪ್ರಜ.
ಯಥಾ  ಪ್ರಜಾ ತಥಾದೇಶ.‌ನಾವೆಲ್ಲರೂ ಮಾನವರು ದೇಶದ  ಪ್ರಜೆಗಳು.ಪ್ರಜಾಪ್ರಭುತ್ವದ  ಅಡಿಯಲ್ಲಿರುವ ಸಾಮಾನ್ಯರು ಎಂದಾಗ ನಮ್ಮಲ್ಲಿ ಸಾಮಾನ್ಯಜ್ಞಾನ ಇದೆ.ಅದನ್ನು ಸರಿಯಾಗಿ ಬಳಸಿದರೆ  ಒಳಗಿನ ವಿಶೇಷಜ್ಞಾನ ಸಿಗುತ್ತದೆ. ಬಳಸದೆ ಹೊರಗಿನ‌ವಿಶೇಷಜ್ಞಾನ ಬಳಸಿದರೆ  ನಮ್ಮನ್ನು ಹೊರಗಿನವರು ಆಳುವರಷ್ಟೆ. ಏನು ಕೊಡುವೆವೋ ಪಡೆಯುವೆವೋ ಅದೇ ತಿರುಗಿ ಬರುತ್ತದೆ. ಪಾಪಪುಣ್ಯ ವೂ
ಪರಮಾತ್ಮನ ಲೆಕ್ಕಾಚಾರವಾಗಿರುತ್ತದೆ.
ಅಧರ್ಮದಲ್ಲಿ ಪಾಪಸುತ್ತಿದರೆ ಧರ್ಮದಲ್ಲಿ ಪುಣ್ಯ ಬರುತ್ತದೆ. ಯಾವುದು ಹೆಚ್ಚಾಗಿರುವುದೋ ಅದೇ ಜೀವನವಾಗುತ್ತದೆ. 
ನಮಗೆ ತಿಳಿದಷ್ಟು ತಿಳಿಸಬಹುದು. ತಿಳಿಯದ್ದನ್ನು ತಿಳಿಯುವುದು ಎಷ್ಟೋ ಬಾಕಿ ಇದೆ. ಮಾನವನಿಗೆ ಒಂದು ಇತಿಮಿತಿ ಇದೆ.ಮಿತಿಮೀರಿದರೆ  ಸಮಸ್ಯೆಯೇ ಅತಿಯಾಗುತ್ತದೆ.

No comments:

Post a Comment