ಜಾತಿ ಜಾತಿ ಎಂದು ರಾಜಕೀಯಕ್ಕೆ ಸಿಲುಕಿಕೊಂಡು ಎಷ್ಟು ಜನ್ಮ ಎತ್ತಿದರೂ ತೀರಿಸಲಾಗದ ಸಾಲದ ಸುಳಿಯಲ್ಲಿ ಮನುಕುಲಕ್ಕೆ ತನ್ನ ಮಾನವ ಜಾತಿಯ. ಮೂಲ ಗುರಿ ತಲುಪಲಾಗದೆ ಜೀವಾತ್ಮ ಅತಂತ್ರಸ್ಥಿತಿಗೆ ಬಂದರೂ ಯಾರೂ ಸರಿಯಾದ ಸತ್ಯ ಧರ್ಮದಬಗ್ಗೆ ಶಿಕ್ಷಣ ನೀಡದೆ ಆಳೋದೇ ಸಾಧನೆ ಎಂದರೆ ಅಜ್ಞಾನವಷ್ಟೆ.
ಭಾರತ ಜಾತ್ಯಾತೀತ ದೇಶ ಎಂದರೇನು?
ಜಾತಿಯಿಲ್ಲದ ದೇಶವೆನ್ನಬೇಕೋ ಜಾತಿಯೇ ಮುಖ್ಯವಾದ ದೇಶವೆನ್ನಬೇಕೋ?
ನಮ್ಮ ಕಣ್ಣಿಗೆ ಕಾಣುವ ಪ್ರಕೃತಿ ಯಾವ ಜಾತಿ? ಲಕ್ಮಿ ಯಾವ ಜಾತಿ? ಭೂಮಿ ಯಾವ ಜಾತಿ? ಭಾರತಮಾತೆ ಕನ್ನಡಮ್ಮ...ಎಲ್ಲಾ ದೇವತೆಗಳು ಯಾವ ಜಾತಿ? ಎಲ್ಲರೂ ಆರಾಧಿಸುವ ದೇವರನ್ನು ಜಾತಿಯ ಹೆಸರಿನಲ್ಲಿ ಪೂಜಿಸಿದರೆ ದೈವತ್ವ ಬರುವುದೆ?
ಹೋಗಲಿ ನಮ್ಮ ಜನ್ಮ ಒಂದು ಕುಟುಂಬದೊಳಗೆ ಆಗಿದೆ ಎಂದರೆ ಎಷ್ಟು ಮಂದಿ ಆ ಒಂದೇ ಜಾತಿಯಡಿ ಇದ್ದು ಜೀವನ ನಡೆಸಿರುವರು? ಅನ್ಯಧರ್ಮ ಅನ್ಯಜಾತಿಯವರ ಸಹಕಾರ ಸಹಾಯವಿಲ್ಲದೆ ಸಮಾಜದಲ್ಲಿ ಜೀವನ ನಡೆಸಲು ಅಸಾಧ್ಯ ಎನ್ನುವಾಗ ಮಿಶ್ರ ಜಾತಿ ಮಿಶ್ರ ಧರ್ಮ ಸಮ್ಮಿಶ್ರ ಸರ್ಕಾರ ಹಿಡಿದು ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆದು ಆಳೋದರಿಂದ ಲಾಭ ಯಾರಿಗಾಗಿದೆ ಎಂದರೆ ರಾಜಕಾರಣಿಗಳಿಗೆ ಅಧಿಕಾರ ಸಿಕ್ಕಿದೆ .ಜನರ ಸಾಲ ಮಿತಿಮೀರಿದೆ. ದೇಶದಲ್ಲಿ ವಿದೇಶಿ ಸಾಲ ಬಂಡವಾಳ ವ್ಯವಹಾರ ಅನ್ಯಧರ್ಮದವರ ಅಧಿಕಾರವೂ ಹೆಚ್ಚಾಗಿದ್ದು ನಮ್ಮವರೆ ಅವರ ಆಳಾಗಿ ದುಡಿದರೂ ಪ್ರಗತಿ ಎನ್ನುವ ಮಟ್ಟಿಗೆ ಅಜ್ಞಾನ ಬೆಳೆದಿದೆ. ಇದನ್ನು ಪ್ರಗತಿಪರರು ವೈಜ್ಞಾನಿಕ ಪ್ರಗತಿ ಎಂದರೆ ಅಧ್ಯಾತ್ಮ ಚಿಂತಕರು ಅಧೋಗತಿ ಎನ್ನುವರು.
ಅಂದರೆ ಒಂದು ಮಗು ಜನ್ಮಪಡೆದಾಗ ಅದಕ್ಕೆ ಹೊರಗಿನ ಜಾತಿ ಭಾಷೆ ಧರ್ಮ ದ ಅರಿವಿರದು.ಅದನ್ನು ಪೋಷಕರು ಮಗು ಬೆಳೆದಂತೆಲ್ಲಾ ಅನಗತ್ಯವಾಗಿ ಮಕ್ಕಳ ತಲೆಗೆ ತುಂಬಿ ಒಳಗೇ ಇದ್ದ ವಿಶೇಷವಾದ ಜ್ಞಾನಶಕ್ತಿಯನರಿಯದೆ ಹೊರಗಿನ ವಿಷಯಗಳ ಹಿಂದೆ ನಡೆಸಿ ಸಾಲಕ್ಕೆ ಜೀವಾತ್ಮನನ್ನು ಸಿಲುಕಿಸಿದರೆ ಇದರ ಪರಿಣಾಮವೇ ಇಂದಿನ ಪರಿಸ್ಥಿತಿ ಎಂದರೆ ಅರ್ಥ ವಾಗದು.
ಧಾರ್ಮಿಕ ಕ್ಷೇತ್ರವೇ ಇದರ ಹಿಂದೆ ನಡೆದಾಗ ಬೇರೆಯವರ ಪಾಡೇನು?
ಧರ್ಮ ಒಂದೇ ಎನ್ನುವ ಹಲವಾರು ಮತಗಳ ನಡುವಿನ ಈ ರಾಜಕೀಯಕ್ಕೆ ಮಕ್ಕಳು ಮಹಿಳೆಯರು ಮನೆಯಿಂದ ಹೊರಬಂದು ದುಡಿಯುವಹಂತಕ್ಕೆ ತಲುಪಿರೋದು ಸಾಲ ತೀರಿಸಲು. ಸಾಲ ಎಂದರೆ ಋಣ .ಇದು ಜಾತಿಯಿಂದ ಬೆಳೆಯಿತೆ? ಪ್ರತಿಯೊಂದು ಗಿಡಮರ ಕಲ್ಲು ಮಣ್ಣು ನೀರು ಹೂ ಹಣ್ಣುಗಳಿಗೂ ಮನುಷ್ಯ ಜಾತಿ ಬೆರೆಸಿ ಬೆಳೆಸಿದ್ದಾನೆ.
ಆದರೆ ಎಲ್ಲದರಿಂದ ದೂರವಿರುವ ಪರಮಾತ್ಮನ ಕಡೆಗೆ ಹೋಗಲು ಇವುಗಳು ಬಿಡದೆ ಕಾಡುತ್ತಿದೆ ಎಂದರೆ ನಿಜವಾದ ಜ್ಞಾನಿಗಳು ಇದಕ್ಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡುವುದು ಧರ್ಮ ವಾಗಿದೆ.
ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ ಎನ್ನುವಂತೆ
ತಾವೂ ದುಡಿಯದೆ ಇತರರನ್ನು ಸನ್ಮಾರ್ಗದಲ್ಲಿ ನಡೆಯದಂತೆ ತಡೆದು ಆಳಿದರೆ ಅಧರ್ಮ ವಷ್ಟೆ.
ಹಿಂದೆ ಮಹಾರಾಜರಿಗೆ ಸರಿಯಾದ ಧಾರ್ಮಿಕ ಶಿಕ್ಷಣ ನೀಡಿ ಋಷಿಮುನಿಗಳು ಲೋಕಕಲ್ಯಾಣಕ್ಕಾಗಿ ಶಿಕ್ಷಣದಾಸೋಹ ನೀಡಿದ್ದರು. ಆದರೆ ಇಂದು ಸರ್ಕಾರದ ಹಿಂದೆ ನಡೆದು ಅಜ್ಞಾನವನ್ನು ಜ್ಞಾನವೆಂದು ಪ್ರಚಾರ ಮಾಡಿ ಹಣಗಳಿಸಿ ಅಧಿಕಾರ ಪಡೆದವರಿಗೆ ಕೆಳವರ್ಗದವರ ಜ್ಞಾನದ ಅರಿವಿಲ್ಲದೆ ಅವರನ್ನು ಜಾತಿಯಿಂದ ಹಿಂದುಳಿಸಿ ಸಾಲದ ದವಡೆಗೆ ಸಿಲುಕಿಸಿ ಇನ್ನಷ್ಟು ಸಮಸ್ಯೆ ಮುಗಿಲುಮುಟ್ಟಿದೆ.
ಒಟ್ಟಿನಲ್ಲಿ ಅತಿಯಾದರೆ ಗತಿಗೇಡು ಎನ್ನುವಂತೆ ಇದರಿಂದ ಮೂಲದ ಧರ್ಮ ಕರ್ಮದಿಂದ ದೂರವಾದಷ್ಟೂ ಜೀವಾತ್ಮ ಅತಂತ್ರಸ್ಥಿತಿಗೆ ತಲುಪುವುದು ಸಹಜ. ಕಣ್ಣಿಗೆ ಕಾಣದ ಶಕ್ತಿಯ ಕೆಲಸ ಕಾಣುವ ಶಕ್ತಿಯ ಕೆಲಸದ ನಡುವಿನ ಅಂತರದಲ್ಲಿ ಮಧ್ಯವರ್ತಿಗಳು ತಮ್ಮದೇ ಆದ ರಾಜಕೀಯ ತಂತ್ರ ಬೆರೆಸಿ ಜನರನ್ನು ಆಳೋದನ್ನು ಸಾಧನೆ ಎಂದರೆ ಅಜ್ಞಾನವಷ್ಟೆ.ಇಲ್ಲಿ ಅಜ್ಞಾನ ಎಂದರೆ ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ.
ಬುದ್ದಿವಂತಿಕೆ ಗೆ ಕೊರತೆಯಿಲ್ಲದ ಕಲಿಯುಗದಲ್ಲಿ ಜ್ಞಾನದ ಕೊರತೆ ಹೆಚ್ಚಾಗಿದೆ. ಹೀಗಾಗಿ ಎಷ್ಟೋ ಸಂಸಾರಗಳು ನಾಶ ಆದರೂ ಸರಿ ಜಾತಿ ಮಾತ್ರ ಬಿಡೋದಿಲ್ಲ ಎನ್ನುವ ಸರ್ಕಾರವ ಬಿ ನಡೆದರೆ ತಾವೇ ತೋಡಿಕೊಂಡ ಹೊಂಡದಲ್ಲಿ ತಾವೇ ಬಿದ್ದರೂ ಸರ್ಕಾರವೇ ಕಾರಣವೆಂದು ಜಾರಿಕೊಳ್ಳುವ ಮಟ್ಟಿಗೆ ಅಜ್ಞಾನ ಹೆಚ್ಚುವುದು.
ಹಿಂದಿನ ಎಷ್ಟೋ ಮಹಾತ್ಮರುಗಳು ಸಾದು ಸಂತ ಶರಣರು ಯಾವ ಜಾತಿಯಿಂದ ಪರಮಾತ್ಮನ ಕಾಣಲಿಲ್ಲ. ಅವರಲ್ಲಿದ್ದ ಜ್ಞಾನಶಕ್ತಿಯಿಂದ ಪರಮಾತ್ಮನ ದಾಸ,ಶರಣರಾಗಿ ದೈವತ್ವ ಪಡೆದವರು. ಈಗ ಅವರನ್ನು ಜಾತಿಯ ಪಟ್ಟಿಗೆ ಸೇರಿಸಿ ಜನರನ್ನು ದಾರಿತಪ್ಪಿಸುವುದರಿಂದ ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗೋದನ್ನು ತಡೆಯಲಾಗದು.
ಇರುವ ಅಲ್ಪ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಸರಳವಾಗಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಸ್ವತಂತ್ರ ಜೀವನ ನಡೆಸಲು ಹೊರಗಿನ ಜಾತಿ ಸರ್ಕಾರದ ಅಗತ್ಯವಿದೆಯೆ?
ಸಾಮಾನ್ಯಜ್ಞಾನದ ಕೊರತೆಯಿಂದ ಇಂದು ಜನಸಾಮಾನ್ಯರು ದೊಡ್ಡದೊಡ್ಡ ಸಾಲ ಮಾಡುತ್ತಾ ಅಜ್ಞಾನದೆಡೆಗೆ ಹೊರಗೆ ನಡೆದಿರೋದು ಕಲಿಕೆಯ ಪ್ರಭಾವ. ಏನೂ ಓದದೆ ಕಲಿಯದೆ ಇದ್ದ ಮಹಾತ್ಮರುಗಳು ಪರಮಾತ್ಮನ ಧ್ಯಾನದಿಂದಲೇ ಋಣಮುಕ್ತರಾಗಿ ಜೀವನ್ಮುಕ್ತಿ ಪಡೆದರೆನ್ನುವುದು ಸರ್ವ ಕಾಲಿಕ ಸತ್ಯ. ಇದನ್ನು ಧಾರ್ಮಿಕ ವರ್ಗ ಜನಸಾಮಾನ್ಯರಿಗೆ ಅರ್ಥ ಮಾಡಿಸಲು ಸೋತು ರಾಜಕೀಯದ ಹಿಂದೆ ನಡೆದು ಜಾತಿಯ ವಿಚಾರದಲ್ಲಿ ವಿರೋಧಿಸುವ ಹಂತಕ್ಕೆ ಬಂದಿರೋದು ದುರಂತವಷ್ಟೆ.
ದೇವರಿಗೆ ಹೊರಗಿನಜಾತಿ ಧರ್ಮ ಅಲಂಕಾರ ಆಚರಣೆಗಿಂತ ಮೊದಲು ಶುದ್ದವಾಗಿರುವ ಒಳಗಿರುವ ಆತ್ಮಾವಲೋಕನ ಅಗತ್ಯವಿದೆ. ಒಟ್ಟಿನಲ್ಲಿ ಇದನ್ನು ಯಾವುದೇ ರಾಜಕೀಯದಿಂದ ಸರಿಪಡಿಸಲಾಗದು. ಸ್ವಯಂ ಪ್ರಯತ್ನ,ಸ್ವಯಂ ಪ್ರಕಾಶಕರಾಗೋದಕ್ಕೆ ಆತ್ಮಸಾಕ್ಷಿಯ ಕಡೆಗೆ ನಡೆಯೋ ಜ್ಞಾನಶಕ್ತಿ ಅಗತ್ಯವಿದೆ. ಇದಕ್ಕೆ ಸರ್ಕಾರದ ಅಗತ್ಯವಿದೆಯೆ? ಹಣದಿಂದ ಸಾಧ್ಯವೆ? ಜಾತಿ ಮನುಷ್ಯನ ಸೃಷ್ಟಿ ವರ್ಣ ದೈವಸೃಷ್ಟಿ.
ವರ್ಣದಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎನ್ನುವ ನಾಲ್ಕರಲ್ಲಿ ಬ್ರಾಹ್ಮಣನ ಜ್ಞಾನ, ಕ್ಷತ್ರಿಯನ ಬಾಹುಬಲ, ವೈಶ್ಯರ ವ್ಯವಹಾರ ಶೂದ್ರ ಸೇವೆಯು ಧರ್ಮದ ಹಾದಿಯಲ್ಲಿ ಸತ್ಯದೆಡೆಗೆ ನಡೆದಿತ್ತು. ಈಗಿದು ಮಿಥ್ಯದಲ್ಲಿ ಮುಳುಗಿ ಹಣ ಗಳಿಸಿ ವ್ಯವಹಾರಕ್ಕೆ ಸೀಮಿತವಾಗಿ ಸಾಲದ ಸುಳಿಯಲ್ಲಿದೆ. ಹೊರಗೆ ಬರಲಾಗದವರು ಇನ್ನಷ್ಟು ಸಾಲ ಬೆಳೆಸಿ ಜಾತಿಒಡೆದು ಧರ್ಮ ಭ್ರಷ್ಟರಾಗಿರೋದು ಕಲಿಯುಗದ ಪ್ರಭಾವವೆಂದು ಸುಮ್ಮನಿರಬಹುದೆ? ಸಾಧ್ಯವೆ? ಹೊರಗಿನ ಹೋರಾಟ ಹಾರಾಟ ಮಾರಾಟವೇ ಜೀವನ ಎಂದರೆ ಕಷ್ಟ.
ಇದರಲ್ಲಿ ಸತ್ಯ ಧರ್ಮ ಇದ್ದರೆ ಉತ್ತಮ. ಇಲ್ಲದಿದ್ದರೆ ಅಧಮ.
ಭೂಮಿ ಒಂದು ಮಾಧ್ಯಮವಷ್ಟೆ.ಇಲ್ಲಿ ಸಾಲ ತೀರಿಸುವ ಜ್ಞಾನವೂ ಇದೆ ಏರಿಸುವ ಅಜ್ಞಾನವೂ ಇದೆ.ಕಣ್ಣಿಗೆ ಕಾಣುವ ಅಜ್ಞಾನದ ಹಿಂದೆ ನಡೆದಷ್ಟೂ ಕೆಳಮಟ್ಟದ ಪಾತಾಳ ತಲುಪುವುದನ್ನು ಯಾರೂ ತಪ್ಪಿಸಲಾಗದು. ಕಾರಣವಿಷ್ಟೆ ಜನ್ಮ ಪರಮಾತ್ಮನ ಇಚ್ಚೆಯಂತೆ ನಡೆದರೂ ಎಲ್ಲಿ ಜನಿಸಬೇಕೆಂಬುದು ಹಿಂದಿನ ಋಣದ ಆಧಾರದಲ್ಲಿರುತ್ತದೆ. ಆ ಋಣ ತೀರಿಸಲು ಸುಜ್ಞಾನದ ಶಿಕ್ಷಣ ನೀಡುವುದು ನಿಜವಾದ ಧರ್ಮ ವಾಗಿತ್ತು. ಧಾರ್ಮಿಕ ವರ್ಗ ಶಿಕ್ಷಣ ಬಿಟ್ಟು ರಾಜಕೀಯಕ್ಕೆ ಇಳಿದರೆ ಏನರ್ಥ? ಒಟ್ಟಿನಲ್ಲಿ ಮಾನವನಿಗೆ ಮಾನವನೇ ಶತ್ರು. ಮನಸ್ಸೇ ಇದರ ಮೂಲ. ಅಹಂಕಾರ ಸ್ವಾರ್ಥ ಎನ್ನುವುದು ಅತಿಯಾದಷ್ಟೂ ಗತಿಗೇಡು.
ಅಸುರರ ಹಿಂದೆ ಸುರರು ನಡೆದರೆ ಪ್ರಗತಿಯೆ?
ಇದರಲ್ಲಿ ತಪ್ಪು ಯಾರದ್ದು? ಸರ್ಕಾರ ನಡೆಸಿರುವವರದ್ದೆ ಸಹಕಾರ ನೀಡಿದವರದ್ದೇ? ತಪ್ಪಿಗೆ ತಕ್ಕಂತೆ ಶಿಕ್ಷೆಯನ್ನು ಅನುಭವಿಸಲೇಬೇಕೆನ್ನುತ್ತದೆ ಕರ್ಮ ಸಿದ್ದಾಂತ.