ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, September 21, 2025

ಶೈಲಪುತ್ರಿ

ನವರಾತ್ರಿಯ ಶುಭಾಶಯಗಳು
ಮೊದಲದಿನ ಶೈಲಪುತ್ರಿಯಾಗಿ‌ ಜಗನ್ಮಾತೆ ಕಾಣುವಳು.
ಭೌತಿಕ ಸಂಪತ್ತನ್ನು ಬಿಟ್ಟು ಆಧ್ಯಾತ್ಮಿಕ ಸಂಪತ್ತಿನ ಮಹಾದೇವನನ್ನೇ ವರಿಸಿದ ಮಹಾಶಕ್ತಿಯ ಆರಾಧನೆಯಿಂದ ನಮ್ಮಲ್ಲಿಯ ಅಜ್ಞಾನವೆಂಬ  ಅಂಧಕಾರ ಕಳೆಯಲೆಂದು ಪ್ರಾರ್ಥಿಸೋಣ.

 ಸನಾತನಧರ್ಮದಲ್ಲಿ ಸ್ತ್ರೀ ಗೆ ಕೊಟ್ಟಿರುವ ಸ್ಥಾನಮಾನವನ್ನು  ಅವಳ ಆರಾಧನೆ ಮಾಡುವ ಮೂಲಕ ನವರಾತ್ರಿಯಲ್ಲಿ ವಿಶೇಷವಾಗಿ ನವದುರ್ಗೆಯರ ರೂಪದಲ್ಲಿ ಕಾಣಬಹುದು.

ಭೂ ತಾಯಿಯಿಲ್ಲದೆ ಮನುಕುಲವೇ ಇಲ್ಲ. ಹೀಗಿರುವಾಗ ಸ್ತ್ರೀ ಶಕ್ತಿಯನರಿತು ಮಾನವ ಸನ್ಮಾರ್ಗದಲ್ಲಿ ನಡೆಯಲು ಜ್ಞಾನವೇ ಪ್ರಧಾನ.
ಜ್ಞಾನದೇವತೆಯನ್ನು ಹೊರಗಿನಿಂದ ಅಲಂಕರಿಸಿದರೆ ಕಣ್ಣಿಗೆ ಚೆನ್ನಾಗಿ ಕಾಣಬಹುದು. ಅವಳ ಆಂತರಿಕ ಶಕ್ತಿಯನರಿತು ಅದರಂತೆ‌ನಡೆದುಕೊಂಡಾಗಲೇ ಆತ್ಮಜ್ಞಾನದಿಂದ ಆತ್ಮನಿರ್ಭರ ದೆಡೆಗೆ ಸಾಗಬಹುದು.
ಕಾಣದ ಶಕ್ತಿ ಕಾಣುವ ವ್ಯಕ್ತಿಯ ನಡುವೆ ಅಂತರ ಬೆಳೆಸಿರೋದು ಹಣ ಅಧಿಕಾರ ಸ್ಥಾನ. ಆದರೆ ನವರಾತ್ರಿಯ ಮೊದಲ ದಿನದ ದೇವಿ ಶೈಲಪುತ್ರಿಯು ಶಿವನನ್ನು ಒಲಿಸಿಕೊಳ್ಳಲು  ಮಾಡಿದ ತಪಸ್ಸಿನ  ಫಲವಾಗಿ ಶಿವಶಕ್ತಿಯಾಗಿ ಇಂದು ಆರಾಧಿಸಲ್ಪಡಲು ಕಾರಣವೆಂದರೆ ಜ್ಞಾನ ಶಕ್ತಿ. ಜ್ಞಾನದಿಂದ ಧ್ಯಾನ ಧ್ಯಾನದಿಂದ ಜ್ಞಾನೋದಯ .ಜಗನ್ಮಾತೆಯನ್ನು ಬರಿಗಣ್ಣಿನಿಂದ ಅಳೆಯಲಾಗದು. ಹಾಗೆ ಜಗಧೀಶ್ವರನೂ ಆ ಮಾತೆಗೆ ತನ್ನ ಅರ್ಧ ಶರೀರವನ್ನು ಕೊಟ್ಟು ನಡೆಸಿರುವುದರಿಂದ  ಇಬ್ಬರೂ ಸೇರಿದಾಗಲೇ‌ ಜಗತ್ತಿನ‌ ಕಲ್ಯಾಣವಾಗುವುದೆನ್ನುವ ಸಂದೇಶ ಇದರಲ್ಲಿದೆ ಎಂದರೆ ನಮ್ಮ ಇಂದಿನ ಪರಿಸ್ಥಿತಿಗೆ‌ ಕಾರಣ ಮತ್ತು ಪರಿಹಾರವೂ ಇದರಲ್ಲಿದೆ. ಇದನ್ನು  ಧಾರ್ಮಿಕ ವಾಗಿಅರ್ಥ ಮಾಡಿಕೊಳ್ಳಲು ಜ್ಞಾನ ಬೇಕು,ರಾಜಕೀಯವಾಗಿ ತಿಳಿಸಲು‌ ಹಣ ಬೇಕು. ಜ್ಞಾನವಿಲ್ಲದೆ ಹಣಗಳಿಸಿದಷ್ಟೂ ಸತ್ಯ ತಿಳಿಯದೆ ಜೀವ ಹೋಗುತ್ತಿರುತ್ತದೆ.ಮತ್ತದೇ ಅಜ್ಞಾನದ‌ಜನ್ಮ.

ಮನುಷ್ಯನ‌ ಬುದ್ದಿವಂತಿಕೆಗೂ ಜಗನ್ಮಾತೆಯ ಜ್ಞಾನಕ್ಕೂ ಬಹಳ ಅಂತರವಿದೆ. ಬುದ್ದಿ ಹೊರಗಿನಿಂದ ಸೇರಿದ್ದು ಜ್ಞಾನ‌ಒಳಗೇ ಅಡಗಿರೋದು. ಜ್ಞಾನವನ್ನು ಗುರುತಿಸುವ ಗುರುವೇ ದೇವರು.
ಯಾವಾಗ  ಗುರುತಿಸುವ ಕೆಲಸವಾಗದೆ ವ್ಯವಹಾರಕ್ಕೆ ಮಾನವ ತನ್ನ ಬುದ್ದಿವಂತಿಕೆ ಬಳಸುವನೋ ಅಜ್ಞಾನವೇ ಬೆಳೆಯುವುದು.

ಬ್ರಹ್ಮನ ರಾಣಿ ಸರಸ್ವತಿ,ವಿಷ್ಣುಪತ್ನಿ ಲಕ್ಮಿ ಶಿವನ ಅರ್ಧಾಂಗಿ ದುರ್ಗೆಯರಲ್ಲಿ ಯಾರು ಹೆಚ್ಚು ಕಡಿಮೆ ಎನ್ನುವ ಬುದ್ದಿವಂತಿಕೆ ಯಿಂದ  ಜಗನ್ಮಾತೆಯ ಪರಿಚಯವಾಗದು.
ಹೆಣ್ಣು ಒಲಿದರೆ ನಾರಿ‌ಮುನಿದರೆ‌ಮಾರಿ ಎಂದಂತೆ ಯಾವಾಗ ಅಧರ್ಮದಿಂದ ಭೂಮಿಯನ್ನು ತಾಯಿಯನ್ನು ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಳ್ಳುವರೋ ವಿನಾಶ ನಿಶ್ಚಿತ.
ವಿನಾಶಕಾಲೇ ವಿಪರೀತ ಬುದ್ದಿ ಎಂದಂತೆ.
ಇಡೀ ವಿಶ್ವದ ಗುರುವಾಗಿದ್ದ ಭಾರತಮಾತೆ ನಡೆದಿರೋದೆ ಸ್ತ್ರೀ ಯರ ಜ್ಞಾನ ಶಕ್ತಿಯಲ್ಲಿ ಎಂದಾಗ ಆ ಜ್ಞಾನವನ್ನು ಗುರುತಿಸಿ ಶಿಕ್ಷಣ ನೀಡಬೇಕಾಗಿರೋದು ಇಂದು ಅಗತ್ಯವಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲವೆಂದು ವ್ಯವಹಾರಕ್ಕೆ ಎಳೆದು ಬಳಸಿದರೆ ಜ್ಞಾನ ಬರೋದಿಲ್ಲ. ಸನಾತನಧರ್ಮದ ಈ ಸ್ಥಿತಿಗೆ ಕಾರಣವೇ  ಅತಿಯಾದ ಹೊರಗಿನ ನೋಟ ಆಟ ಪಾಠವಾಗಿದೆ. ಇದೀಗ ಕಾದಾಟಕ್ಕೆ  ದಾರಿಮಾಡಿದೆ. ಹೋರಾಟ ಜ್ಞಾನದಿಂದ ನಡೆದರೆ ಉತ್ತಮ ಅಜ್ಞಾನದೊಂದಿಗೆ ಗುದ್ದಾಡಿದರೂ ಅಜ್ಞಾನವೇ ಕಾಣೋದು.ಅಂತರಂಗ ಶುದ್ದಿ ಆಗದೆ ಬಹಿರಂಗ ಶುದ್ದವಾಗುವುದೆ? 
ಹೊರಗಿನ ಕಸ ತೆಗೆಯುವುದಕ್ಕೆ ಸುರಿಯುವ ಹಣವನ್ನು ಒಳಗಿನ ಕಸ ತೆಗೆದುಕೊಳ್ಳುವ  ಸುಶಿಕ್ಷಣ ದಾನಕ್ಕೆ ಬಳಸಿದ್ದರೆ ಭಾರತ ಈ ಸ್ಥಿತಿಗೆ ಬರುತ್ತಿರಲಿಲ್ಲ. ಅನುಭವಿಸದೆ ಸತ್ಯ ಅರ್ಥ ಆಗದು. ನಡೆಯೋದೆಲ್ಲವೂ ದೇವಿಯ‌ಪ್ರೇರಣೆಯೇ ಎಂದರೆ ದೇವಿ  ಎಲ್ಲರಿಂದಲೂ ತನ್ನ ಕೆಲಸ ಮಾಡಿಕೊಂಡರೂ ನೋಡುವ ಜ್ಞಾನದೃಷ್ಟಿ ಉತ್ತಮವಿರಬೇಕಿದೆ.
ಎಲ್ಲಿರುವರು ದೇವಿಯರು?

No comments:

Post a Comment