ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Saturday, September 6, 2025

ಅತಿಆಸೆಯೇ ದು:ಖಕ್ಕೆ ಕಾರಣ

ಉಸಿರು ಹೋಗಿ ಆಸೆ ಉಳಿದರೆ, 
ಅದುವೇ *ಮೃತ್ಯು.*
ಉಸಿರು ಇರುವಾಗಲೇ ಆಸೆ ಅಳಿದರೆ, ಅದುವೇ *ಮುಕ್ತಿ.
ಜೀವನ್ಮುಕ್ತಿ ಸಿಗೋದು ಎನ್ನುವ ಆಸೆಯಲ್ಲಿ ಎಷ್ಟೋ ಧಾರ್ಮಿಕ ಪೂಜೆ ಹೋಮ‌ಹವನ ಯಾಗ ಯಜ್ಞ ಜಪ ತಪ ಎಲ್ಲಾ ಮಾನವ ನಡೆಸುವನು. ಆದರೆ ಮುಕ್ತಿ ಯಾರಿಗೆ ಸಿಕ್ಕಿದೆ ಎನ್ನುವ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ಇಂದಿಗೂ  ತಿಳಿದಿಲ್ಲದೆ  ನಾನು ಧರ್ಮ ರಕ್ಷಕ, ಧರ್ಮ ವಂತ ,ಧಾರ್ಮಿಕ  ಗುಣವಂತ, ಜ್ಞಾನಿ, ಎನ್ನುವ ಜನ  ಇದ್ದಾರೆ. ಈ ನಾನು ಯಾರು? ಎಂದು  ತಿಳಿಯುವ ಪ್ರಯತ್ನ ನಡೆಸಿರುವವರು ಜೀವನ್ಮುಕ್ತರಾಗಿದ್ದಾರೆ ಎಂದರೆ  ನಾನು  ಯಾರ ಸೇವಕ? ಯಾರ ಸೇವೆ ಮಾಡಿದೆ? ಯಾರ ಹಣದಿಂದ  ಮಾಡಿದೆ? ಎಷ್ಟು ಮಾಡಿದೆ? ಯಾಕೆ ಮಾಡಿದೆ? ಇವೆಲ್ಲದರ ಹಿಂದೆ ಯಾರಿರೋದು  ಎನ್ನುವುದಕ್ಕೆ ಉತ್ತರ ಒಂದೇ  ಅವನೇ ಪರಮಾತ್ಮ. 

ಪರಮಾತ್ಮನ ಸತ್ಯದೆಡೆಗೆ ನಡೆದಂತೆ  ಈ ಅಧ್ಯಾತ್ಮ ದ ಜ್ಞಾನ ಬೆಳೆಯುತ್ತದೆ  ಅಧ್ಯಾತ್ಮ ದಿಂದ ಜೀವನದ ರಹಸ್ಯವರಿತವರು  ಉಸಿರಿರುವಾಗಲೇ ಆಸೆಯಿಂದ ಮುಕ್ತರಾಗಿರುವರು.
ಆದರೆ ಯಾವಾಗ ಇದು ವ್ಯವಹಾರಕ್ಕೆ ಸೀಮಿತವಾಗುತ್ತಾ ನನ್ನ ದೇವರು ನನ್ನ ಮನೆ,ನನ್ನ ಜಾತಿ,ಧರ್ಮ, ಪಕ್ಷ ಎನ್ನುವ ಹಂತಕ್ಕೆ ಎಳೆದುಕೊಂಡು ಹೊರ ನಡೆಯುತ್ತದೋ ಆಸೆಗೆ ಮಿತಿ ಇಲ್ಲದೆ  ನಾನು ಬೆಳೆದು ಉಸಿರಾಡಲೂ ಪುರುಸೊತ್ತಿಲ್ಲದ  ಜೀವನವಾಗುತ್ತದೆ. 
ಜೀವಕ್ಕೆ ಆಸರೆಯಾಗಿರುವ ವಾಯುವೇ ಉಸಿರು. ವಾಯುಮಾಲಿನ್ಯದಿಂದ ಜೀವಕ್ಕೆ ಅಪಾಯ. ವಾಯುಮಾಲಿನ್ಯ  ಅತಿಆಸೆಯ ಫಲ. ವೈಜ್ಞಾನಿಕ ಚಿಂತನೆಯ ಜೊತೆಗೆ ವೈಚಾರಿಕತೆಯ ಹಿಂದಿನ  ಗುರಿ ಅರ್ಥ ವಾದವರು ಉಸಿರಿರುವರೆಗೂ  ಪರಮಸತ್ಯಧರ್ಮದೊಂದಿಗೆ ನಡೆಯುವರು. ಆದರೆ ಇದರಿಂದ ಇತರರಿಗೆ  ಅನ್ಯಾಯವಾದರೆ ಅಧರ್ಮ ಅಸತ್ಯ ಬೆಳೆದರೆ  ಮೃತ್ಯು.

ಹೆಣ್ಣು ಹೊನ್ನು ‌ಮಣ್ಣಿನ‌ಮೇಲಿರುವ ಆಸೆಯಲ್ಲಿ  ಒಳಗಿರುವ ಪರಮಸತ್ಯ ಧರ್ಮ ತೊರೆದರೆ  ಮೃತ್ಯು. ಸಾವು ಎಲ್ಲರಿಗೂ ಇದೆ. ಯಾರು ಉಸಿರಿರುವಾಗಲೇ  ಪರಮಾತ್ಮನ ಅರಿತು ನಡೆದರೋ ಅವರು ಜೀವನ್ಮುಕ್ತರಾಗಿರುವರು.ಅರಿಯದವರು ಮೃತ್ಯುವಿನ ವಶವಾದರು. ಅದ್ವೈತ ಹೇಳೋದಿಷ್ಟೆ  ನಾನೆಂಬುದಿಲ್ಲ. ಪರಮಾತ್ಮ ಒಬ್ಬನೇ  ಇವೆಲ್ಲವೂ  ಆಂತರಿಕ ಶುದ್ದಿಯಿಂದಲೇ ಅರ್ಥ ವಾಗುವ ಅಧ್ಯಾತ್ಮ ಸತ್ಯ. ಎಲ್ಲಾ ಶೂನ್ಯ ಎಂದಾಗ ಆ ಶೂನ್ಯವನ್ನು ಹಿಡಿದು ಲೆಕ್ಕಹಾಕಿದರೆ‌ ಶೂನ್ಯವೆ .ಅದರ ಮುಂದೆ ಹಿಂದೆ 1 ಸೇರಿಸಿದರೂ  ಲೆಕ್ಕ ಬೆಳೆಯುತ್ತದೆ.
ಲೆಕ್ಕಾಚಾರ ವೇ ಆಸೆಯ ಪ್ರತೀಕ. ಅತಿಯಾದ ಲೆಕ್ಕಾಚಾರವೇ ಋಣ. ಋಣಮುಕ್ತರಾಗದೆ  ಜೀವನ್ಮುಕ್ತಿ ಯಿಲ್ಲ. ಭೂಮಿಯ ಮೇಲಿದ್ದು ಭೂ ಸೇವೆ ಮಾಡದೆ  ಸಾಲ ಏರಿಸಿದರೆ ಆಸೆಯೇ ದು:ಖಕ್ಕೆ ಕಾರಣವಾಗುತ್ತದೆ. ಅತಿಆಸೆ ಗತಿಗೇಡು ಎನ್ನುವರು.

No comments:

Post a Comment