ಇಂದಿನ ನಾಮ
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಸ್ವಯಂಭೂ ಶಂಭುರಾದಿತ್ಯ: ಪುಷ್ಕರಾಕ್ಕೋ ಮಹಾಸ್ವನಃ | ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮ: ||೫||
43 ಧಾತಾ - ಧಾರಣೆ ಹಾಗೂ ಪೋಷಣೆ ಮಾಡುವವನು,
ವಿವರಣೆ : ನಾವು ಸಾಯದಂತೆ ನೋಡಿಕೊಳ್ಳುವನು. ಸಾಯಲಿಲ್ಲ. ಇದ್ದೇವೆ. ಆದರೆ ಇದ್ದರೆ ಮಾತ್ರ ಸಾಲದು, ನಮಗೆ ಕಾಲಕಾಲಕ್ಕೆ ಆಹಾರ ಬೇಕಲ್ಲ ? 'ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು ಗಟ್ಟಾಗಿ ಸಲಹುವನು ಇದಕೆ ಸಂಶಯವಿಲ್ಲ, ತಲ್ಲಣಿಸದಿರು ಕಂಡ್ಯ ತಾಳು ಮನವೇ'- ಆನೆಗೈದುಮಣವ ಆಹಾರವ ಯಾರು ಕೊಡುವರು ? - ದಾಸರು ಒಂದು ಕಡೆ ಕೇಳಿದ್ದುಂಟು - ಆನೆ ಐದು ಮಣ ಆಹಾರ ತಿನ್ನುವುದು. ಯಾರು ತಂದು ಕೊಡುವರು ? ನಾವು ತಂದು ಹಾಕುವುದಿಲ್ಲ. ಆದರೂ ಅದಕ್ಕೆ ಆಹಾರ ಸಿಗುವುದು. ಕಲ್ಲಿನ ಮೂಲೆಯಲ್ಲಿ ಕಪ್ಪೆ ಹುಟ್ಟಿರುತ್ತದೆ. ಅಲ್ಲಿಗೇ ಆಹಾರ ಉದಕವ ಯಾರು ತಂದು ಕೊಡುವವು ? ಭೀಷ್ಮರು ಹೇಳ್ತಾರೆ ನೀನೇ ಆಹಾರವನ್ನು ಒದಗಿಸುವವನು. ವ್ಯಕ್ತಿಗಳು ಇರುವಂತೆ ಮಾಡುವುದಷ್ಟೇ ಅಲ್ಲದೆ ಅವರಿಗೆ ಕಾಲಕಾಲಕ್ಕೆ ಆಹಾರವನ್ನು ನೀನೇ ಒದಗಿಸುವಿ. ಆದುದರಿಂದ ನೀನು ‘ಧಾತಾ’
ಅನ್ನದ ಋಣ ಎಲ್ಲಿರುವುದೋ ಯಾರಿಗೂ ತಿಳಿಯದು.ಜನ್ಮಜನ್ಮದ ಋಣ ಹೇಗೆ ತಿಳಿಯಬಹುದು. ಒಟ್ಟಿನಲ್ಲಿ ಪರಮಾತ್ಮನ ಸ್ಮರಣೆಯಲ್ಲಿ ಏನೇ ಕರ್ಮ ಮಾಡಿದರೂ ಸೇವೆಯಾಗುವುದು.ಋಣಕಳೆಯುವುದು.ಇಲ್ಲಿ ಧರ್ಮ ಜಾತಿ ಪಂಗಡ,ದೇಶ,ಪಕ್ಷಪಾತಗಳಿಗೆ ಅವಕಾಶವಿರದು. ಇದು ಕೇವಲ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸಿದಾಗಷ್ಟೆ ಸಾಧ್ಯ ವೆಂದು ಶ್ರೀ ಕೃಷ್ಣ ತಿಳಿಸಿ ನನಗೂ ಜನ್ಮಗಳಿವೆ ಎಂದೂ ಹೇಳಿರುವಾಗ ಅವನೊಳಗಿರುವ ಅಸಂಖ್ಯಾತ ಜೀವಾತ್ಮರ ಪಾಡೇನು?.ಎಲ್ಲವನ್ನೂ ಕೃಷ್ಣಾರ್ಪಣ ಮಾಡಿದಾಗ ಒಳಗಿನ ಜೀವಾತ್ಮರಿಗೂ ಅವನೇ ತಲುಪಿಸೋದಲ್ಲವೆ?
ದೇಶದ ಪ್ರಶ್ನೆ ಬಂದಾಗ ದೇಶಕ್ಕೆ ಏನು ಕೊಡುವೆವೋ ಅದೇ ನಮಗೂ ತಿರುಗಿ ಬರುತ್ತದೆ. ಇಷ್ಟೇ ದೊಡ್ಡವರನ್ನು ನಿರ್ಲಕ್ಷ್ಯ ಮಾಡಿದರೂ ಹಿಂದೆ ಅದೇ ಬರುತ್ತದೆ. ಹಿಂದಿನ ಧರ್ಮ ಕರ್ಮ ಬಿಟ್ಟು ಎಷ್ಟು ದೂರ ನಡೆದರೂ ಹಿಂದೆ ತಿರುಗಿ ಬರೋವರೆಗೂ ಆತ್ಮಕ್ಕೆ ತೃಪ್ತಿ ಸಿಗದು.ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದಂತೆ ಪರಮಾತ್ಮನೆಡೆಗೆ ಹೋಗದೆ ತೃಪ್ತಿ ಇಲ್ಲ ಜೀವನ್ಮುಕ್ತಿ ಇಲ್ಲ.
No comments:
Post a Comment