ಶಿಕ್ಷಕರ ದಿನಾಚರಣೆ ಭಾರತದಲ್ಲಿ ನಡೆಸುವಂತೆ ವಿದೇಶದಲ್ಲಿ ನಡೆಸುವರೆ? ಗುರು ಅಥವಾ ಶಿಕ್ಷಕ ಎರಡೂ ಪದ ಪವಿತ್ರವಾಗಿದೆ. ಪವಿತ್ರವಾಗಿರುವ ವಿಷಯಗಳನ್ನು ಕಲಿಸುವವರು ಗುರುವಾಗಿರುವರು. ವಿಷಯ ಕಲಿಸುವವರು ಶಿಕ್ಷಕರಾಗಿರುವರು. ಅಂದರೆ ವಿಷಯಾಂತರವಾದರೆ ಗುರು ಬೇರೆ ಶಿಕ್ಷಕ ಬೇರೆಯಾಗಿ ಆಚಾರ ವಿಚಾರ ಪ್ರಚಾರದಲ್ಲಿ ಅಂತರ ಬೆಳೆಯುತ್ತದೆ.
ನಮ್ಮ ಗುರುಪೂರ್ಣಿಮೆಗೂ ಶಿಕ್ಷಕರ ದಿನಾಚರಣೆಗೂ ವ್ಯತ್ಯಾಸವಿದೆ. ಕಾರಣ ವಿಷಯ ಬೇರೆ ಬೇರೆ ಎನ್ನುವುದು.
ಜೀವನ ಶೈಲಿಯನ್ನು ನೋಡಿದಾಗ ಧರ್ಮ ಗುರುಗಳ ಜೀವನಕ್ಕೂ ಶಿಕ್ಷಕರಿಗೂ ಬೇರೆಯಾಗಿರುತ್ತದೆ.
ಒಟ್ಟಿನಲ್ಲಿ ಅಂತರ ದಿಂದ ಸಮಸ್ಯೆ ಬೆಳೆಯುತ್ತದೆ. ಅಂತರದಲ್ಲಿ ಮಧ್ಯವರ್ತಿಗಳು ಬೆಳೆಯುವರು. ಅರ್ಧ ಸತ್ಯ ಮಾತ್ರ ಅರ್ಥ ವಾದರೆ ಅತಂತ್ರಸ್ಥಿತಿಗೆ ಜೀವ ತಲುಪುವುದು.
ಭಾಋಥಿಯ ಶಿಕ್ಷಣದ ಗುರಿಯೇ ಆತ್ಮೋನ್ನತಿ. ಜೀವೋನ್ನತಿ ಎಂದರೆ ತನ್ನ ಜೀವರಕ್ಷಣೆಯಾಗುತ್ತದೆ. ಜೀವನನಡೆಸಲು ವಿದ್ಯೆ ಅಗತ್ಯವಿದೆ. ವಿದ್ಯೆ ವಿನಯವನ್ನುಬೆಳೆಸುತ್ತದೆ.ವಿನಯದಿಂದ ಜ್ಞಾನೋದಯವಾಗುತ್ತದೆ.ಹಿಂದಿನ ಕಾಲದಲ್ಲಿದ್ದ ಋಷಿಗಳ ಆಶ್ರಮ ದ ಗುರುಕುಲ ಶಿಕ್ಷಣ ಇಂದು ಹೈಟೆಕ್ ಪದ್ದತಿಯನ್ನು
ಕಾಣುತ್ತದೆ. ಮಕ್ಕಳ ಮಾನಸಿಕತೆ ಬೌದ್ದಿಕ ಶಕ್ತಿ ಹೊರನೋಟಕ್ಕೆ ಸೀಮಿತವಾಗಿ ಹಣವೇ ಸರ್ವಸ್ವ. ಹೀಗಾಗಿ ಹೊರಗಿನ ವಿದ್ಯೆ ಕಲಿಸುವವರು ಶಿಕ್ಷಕರು ಎನ್ನುವ ಮಟ್ಟಿಗೆ ಆಚರಣೆ.
ಒಳಗಿನ ಶುದ್ದತೆಯಿಲ್ಲದೆ ಹೊರಗಿನ ಶಿಕ್ಷಣ ನೀಡಿದರೆ ಸ್ವಚ್ಚ ಭಾರತವಾಗದು. ಇದರಿಂದಾಗಿ ಇಂದಿಗೂ ಹೊರಗೆ ತಳುಕುಬಳುಕಿನ ಜೀವನ ಒಳಗೆ ಹುಳುಕಿನ ಜೀವನ.
ಎಲ್ಲರೂ ಒಂದೇ ಎನ್ನುವ ಹಾಗಿಲ್ಲ.ಬದಲಾವಣೆ ಆಗುತ್ತಿದೆ. ಇದು ಶಾಲಾಕಾಲೇಜ್ ಗಳಲ್ಲಿ ನಡೆದಾಗ ಹೆಚ್ಚಿನಬದಲಾವಣೆ ಸಾಧ್ಯವಿದೆ ಎನ್ನುವ ಕಾರಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ಪದ್ದತಿ ಜಾರಿಗೆ ಬಂದಿತ್ತು.ಅದರಲ್ಲೂ ರಾಜಕೀಯ ಬೆಳೆಸಿಕೊಂಡು ಅಂತರ ಸೃಷ್ಟಿ ಮಾಡುತ್ತಾ ಮಕ್ಕಳ ಜ್ಞಾನವನ್ನು ಹೊರಗೆ ತೋರಿಸುವುದೇ ಮುಖ್ಯ ಎಂದರೆ ತಪ್ಪು.
ನಿಧಾನವಾದರೂ ಸರಿ ಸ್ವತಂತ್ರ ಜ್ಞಾನಕ್ಕೆ ಸರಿಯಾದ ಶಿಕ್ಷಣ ಕೊಡುವುದೇ ಧರ್ಮ. ಇದರಿಂದಾಗಿ ಜ್ಞಾನೋದಯವಾಗುತ್ತದೆ. ಜ್ಞಾನದಿಂದ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗುತ್ತದೆ. ಸಮಾನತೆಯು ಜ್ಞಾನದಿಂದ ಬೆಳೆದಾಗ ಸಮಾಧಾನ ಒಳಗಿರುತ್ತದೆ. ಗುರುಬೇರೆಯಲ್ಲ ಶಿಕ್ಷಕ ಬೇರೆಯಲ್ಲ. ಉತ್ತಮ ವಿಷಯಗಳನ್ನು ತಿಳಿಸುವಾಗ ನಮ್ಮ ಅರಿವು ನಮಗೆ ಗುರುವಾಗಿರಬೇಕಿದೆ.ಯಾರದ್ದೋ ವಿಷಯ ಯಾವುದೋ ಕಾಲ ಯಾರದ್ದೋ ಅನುಭವವನ್ನು ತಿಳಿಸುವಾಗ ದೇಶಕಾಲಮಾನ ಧರ್ಮ ಸತ್ಯದ ಅರಿವು ಅಗತ್ಯವಿದೆ. ಪುಸ್ತಕದ ವಿಚಾರಮಸ್ತಕಕ್ಕೆ ಏರಿಸುವುದಕ್ಕೆ ಶಿಕ್ಷೆ ನೀಡುವಾಗ ಅದರಿಂದ ಹೃದಯವಂತಿಕೆ ಬೆಳೆದರೆ ಸರಿ.ಹೃದಯಹೀನರಾದರೆ ವ್ಯರ್ಥ.
ಹೃದಯವಂತಿಕೆ ಎನ್ನುವುದು ಹಣದಿಂದ. ಬೆಳೆಸಲಾಗದು
ಸತ್ಯಜ್ಞಾನದಿಂದ ಮಾನವೀಯತೆ ಯ ಮೌಲ್ಯಗಳಿಂದ ಉತ್ತಮ ಆಹಾರ ವಿಹಾರ ಶಿಕ್ಷಣದಿಂದ ಬೆಳೆಸುವವರು ನಿಜವಾದ ಗುರುವೂ ಶಿಕ್ಷಕರೂ ಆಗಿದ್ದರು.ಈಗಲೂ ಇದ್ದಾರೆ ಆದರೆ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದವರು ವಿರಳವಾಗಿರುವರು. ಆಚರಣೆಯಲ್ಲಿ ಸಂತೋಷವಿರುತ್ತದೆ.ಸಂಶೋಧನೆ ಇರಬೇಕಿದೆ.
ನಮ್ಮನ್ನು ನಾವು ಪರಿಶೋಧನೆ ಮಾಡಿಕೊಳ್ಳಲು ಎರಡೂ ಕಡೆ ಸಂಶೋಧನೆ ನಡೆಯುತ್ತಿರುತ್ತದೆ. ಹೊರಗೆ ಹೋದರೆ ಕಷ್ಟ ಒಳಗಿದ್ದರೆ ನಷ್ಟ. ಕಷ್ಟ ನಷ್ಟಗಳ ನಡುವೆ ಸಂಶೋಧನೆ ನಡೆಸುವುದೇ ಕ್ಲಿಷ್ಟಕರ. ಅದಕ್ಕೆ ಹೇಳಿರುವುದು ನಿಮ್ಮನಿಮ್ಮಮನವ ತನುವಸಂತೃಸಿಕೊಳ್ಳಿ ಎಂದು. ಎಷ್ಟು ತಂತ್ರಬಳಸಿದರೂ ಸತ್ಯ ಒಂದೇ ಆಗಿರುವುದು.ಆ ಸತ್ಯ ಬಿಟ್ಟು ನಡೆದಷ್ಟೂ ಅಸತ್ಯವೇ ಬೆಳೆಯುವುದು. ಸತ್ಯವೇ ದೇವರು.
ಸತ್ಯವಿಲ್ಲದ ಶಿಕ್ಷಣ ದೈವತ್ವ ಬೆಳೆಸದು. ಏನೇ ಇರಲಿ ಶಾಂತಿ ಇರಲಿ. ನಿಧಾನವಾದರೂ ಸತ್ಯ ಪ್ರಧಾನವಿದ್ದರೆ ಜೀವನ ಸಾರ್ಥಕ ಎನ್ನುವರು ಮಹಾಗುರುಗಳು.ಕಲಿಕೆಯ ಕಾಲ ಕಲಿಗಾಲ. ಕಲಿಕೆ ನಿರಂತರವಾಗಿರುತ್ತದೆ.ಅದು ಒಳಗೆ ಹೊರಗೆ ಒಂದೇ ಸಮನಾಗಿದ್ದರೆ ಸಮಾಧಾನವಿರುತ್ತದೆ.
No comments:
Post a Comment