ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Sunday, July 28, 2024

ವೇದಾಂತಗಳಲ್ಲಿ ಅಂತರವಿದೆಯೆ?

ವೇದಾಂತಗಳ ಅಂತರದಲ್ಲಿ ತ್ರಿಮೂರ್ತಿಗಳನ್ನೂ ಸಮಾನವಾಗಿ ಕಾಣುವ ತತ್ವ ಅದ್ವೈತ. ಸೃಷ್ಟಿ  ಸ್ಥಿತಿ ಲಯವಿಲ್ಲದೆ ಜಗತ್ತಿಲ್ಲವೆ ನ್ನುವುದನ್ನು ತಿಳಿಯುವುದಕ್ಕೆ ತತ್ವದರ್ಶನವಾಗ ಬೇಕೇಹೊರತು ಅದರೊಳಗಿರುವ ತಂತ್ರವಲ್ಲ. ತಂತ್ರ ಬೆಳೆದಾಗಲೇ ಅತಂತ್ರ ಜೀವನವಾಗೋದು ಕಲಿಯುಗದ ಶಿಕ್ಷಣವೇ ತಂತ್ರಮಯವಾಗಿದ್ದರೆ‌ ತತ್ವ ಹೇಗೆ ಕಾಣಿಸುತ್ತದೆ? ವ್ಯವಹಾರಕ್ಕೆ ಸೀಮಿತವಾದರೆ ಹಣ ಅಗತ್ಯ.ಧರ್ಮಕ್ಕೆ ಸೀಮಿತವಾದರೆ‌ ಸತ್ಯಜ್ಞಾನ ಅಗತ್ಯ.
ಸತ್ಯ ಕಣ್ಣಿಗೆ ಕಾಣೋದಿಲ್ಲ ಅರಿವಿಗೆ ಅರ್ಥ ವಾಗಬೇಕಷ್ಟೆ.ಅರಿವಾಗೋದು ಅನುಭವಿಸಿದ ಮೇಲೇ. ಸತ್ಯದ ದಾರಿ‌ಕಠಿಣವಾದ್ದರಿಂದ ಅಸತ್ಯದ ಸುಲಭದ ದಾರಿ ಹಿಡಿಯೋದರಿಂದ ಹೆಚ್ಚಿನ ಹಣದ‌ಲಾಭವಾಗುತ್ತದೆ ಎನ್ನುವ ಸತ್ಯಕ್ಕೆ ಬೆಲೆಹೆಚ್ಚು.
ಭೂಮಿ ನಡೆದಿರೋದೆ ಸತ್ಯ ಧರ್ಮದ ಅಡಿಪಾಯದಲ್ಲಿ. ಈ ಅಡಿಪಾಯ ಹಾಕಿದವರು ಉನ್ನತ ಮಟ್ಟಕ್ಕೆ ಏರಿದ್ದರೂಕಾಣೋದಿಲ್ಲ ಗ್ರಹನಕ್ಷತ್ರಗಳ ಚಲನವಲನಗಳ ಹಿಂದಿನ ವಿಜ್ಞಾನ ಕಣ್ಣಿಗೆ ಕಾಣದು. ಭೂಮಿ ಒಂದು ಗ್ರಹವಷ್ಟೆ. ಈ ಗ್ರಹದ ಋಣ ತೀರಿಸಲು  ಮನುಕುಲದ ಜನನ.ಹಾಗಾದರೆ ನಮ್ಮ ಜನನದಿಂದ ಭೂಮಿಗೆ ಲಾಭ ನಷ್ಟವಿದೆಯೆ? ಭೂಮಿಯನ್ನು ಆಳುವುದಕ್ಕೆ ಸಾಕಷ್ಟು ತಂತ್ರ ಪ್ರಯೋಗವಾಗಿದ್ದರೂ ಯಾವುದೇ ತತ್ವದ ಮೂಲ ಗುರಿ ತಲುಪಲಿಲ್ಲ. ಜನಜೀವನದಲ್ಲಿ ಸಾಕಷ್ಟು ಹೊರಮುಖದ ಬದಲಾವಣೆ ಒಳಮುಖದ ದರ್ಶನ ವಾಗದಂತಾಗಿದೆ.
ಎಷ್ಟು ಜನಬಲ ಹಣಬಲ. ಅಧಿಕಾರಬಲವಿದ್ದರೂ ದೈವಬಲಕ್ಕೆ ಸರಿಸಾಟಿಯಲ್ಲ. ದೈವತ್ವಕ್ಕೆ ಎದುರಾಗಿ‌ನಿಂತು  ಒಗ್ಗಟ್ಟನ್ನು  ಬೆಳೆಸುವೆ ಎಂದಾಗಲೂ ದೈವಶಕ್ತಿ ತನ್ನದೇ ಆದ ರೀತಿಯಲ್ಲಿ  ನಡೆದು ಬಂದಿರುತ್ತದೆ.ಅಂದರೆ ಆತ್ಮವೇ ದೇವರು ಎಂದಾಗ ಎಲ್ಲರ ಆತ್ಮ ಪರಿಶುದ್ದವೆ ಆದರೆ ಜೀವನದಲ್ಲಿ ತತ್ವವಿದೆಯೆ ತಂತ್ರವಿದೆಯೆ ಎನ್ನುವ ಹಂತಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಸರ್ಕಾರ ಅಗತ್ಯವಿಲ್ಲ.
ನಮ್ಮ ಮನಸ್ಸು ಆತ್ಮದೊಂದಿಗಿದ್ದರೆ ಅದೇ ಅಧ್ಯಾತ್ಮ ಚಿಂತನೆ.
ಅದ್ವೈತ ಎಲ್ಲರನ್ನೂ ಕೂಡಿಸುವಾಗ ದ್ವೈತವಿರದು. ಆಳುವಾಗ ದ್ವೈತವಿರುತ್ತದೆ ಆದರೆ, ಆಳುವವರ ದೃಷ್ಟಿ ಅಧ್ಯಾತ್ಮ  ಪ್ರಗತಿಯಾದಾಗ  ಒಂದೇ ಆಗುತ್ತದೆ. ದ್ವೈತಾದ್ವೈತ ಒಂದೇ ನಾಣ್ಯದ ಎರಡು ಮುಖಗಳು. 


ಶ್ರೀ ಗುರುಗಳು ನಂಬಿದ ದೇವರ ನ
 ನಾನೂ ನಂಬಿ ನಡೆದರೆ ಕಲ್ಯಾಣ.  ಗುರುವನ್ನೇ ನಾನು  ನಡೆಸಿರೋದೆನ್ನುವ ಅಹಂಕಾರ ವಿದ್ದರೆ  ? ಮರಣ.

No comments:

Post a Comment