ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Friday, October 21, 2022

ಲೇಖನದಿಂದಾಗುವ ಬದಲಾವಣೆ ಏನು?

ಯಾರೋ ಮಹಾಪ್ರಚಾರಕರೊಬ್ಬರು ಒಂದು ಲೇಖನದ ಮೂಲಕ ವಾಸ್ತವದಲ್ಲಿ ನಡೆಯುತ್ತಿರುವ ಅಧರ್ಮ ಅನ್ಯಾಯ, ಅಸತ್ಯವನ್ನು ವಿವರಿಸುತ್ತಾ  ರಾಜಕಾರಣಿಗಳನ್ನು ಧಾರ್ಮಿಕ ಮುಖಂಡರನ್ನು, ಭಯೋತ್ಪಾದಕರನ್ನು ಹಾಗು ಜನಸಾಮಾನ್ಯರನ್ನು  ಎಚ್ಚರಿಸುವತ್ತ   ಬರೆದಿದ್ದರು. ಬರವಣಿಗೆಯು ವಾಸ್ತವತೆಯನ್ನು ಎತ್ತಿ ಹಿಡಿಯಬಹುದು.
ಪುರಾಣ ಇತಿಹಾಸದ ರಾಜಕೀಯವಿರಬಹುದು, ಮುಗಿದ ಕಥೆ ಕಾದಂಬರಿ ಯ ಪಾತ್ರವಾಗಬಹುದು, ಮನರಂಜನೆಯಾಗಬಹುದು  ಹೆಚ್ಚು  ಹೆಚ್ಚು ಓದಿದಷ್ಟೂ ಮನಸ್ಸು ಶಾಂತವಾಗೋದಾದರೆ ಉತ್ತಮ.
 ಅಶಾಂತಿಯಿಂದ ಹೊರಗೆ ಬಂದರೆ ಅಧಮ. ಕೇವಲ ಮನರಂಜನೆ, ಸಮಯ ದೂಡುವುದಾಗಿದ್ದರೆ  ವ್ಯರ್ಥ. 
ಮಧ್ಯವರ್ತಿ ಮಾನವನಿಗೆ ತನ್ನೊಳಗೆ ಇದ್ದು
 ಅಡಿಸುವ ಎಷ್ಟೋ ಶಕ್ತಿಗಳ ಪರಿಚಯವಿಲ್ಲ. ಹೊರಗೆ ನಿಂತು ಆಟವಾಡಿಸುವವರ ಪರಿಚಯ ಸಾಕಷ್ಟು ಇದ್ದರೂ  ಅವರನ್ನು ಸರಿಯಾಗಿ ತಿಳಿಯುವ ಜ್ಞಾನವಿಲ್ಲ. 
ಬರವಣಿಗೆಯಿಂದ  ಜನರಲ್ಲಿ ಜ್ಞಾನ ಮೂಡುವಂತಿದ್ದರೆ ಇತ್ತೀಚಿನ ದಿನಗಳಲ್ಲಿ ಅಸಂಖ್ಯಾತ ಪುಸ್ತಕಗಳು ಪ್ರಕಟವಾಗಿ ಮಾರಾಟವಾಗಿ ಜನರ ಕೈ ಸೇರಿ ಓದುತ್ತಿದ್ದಾರೆ.ಆದರೆ, ಬರವಣಿಗೆಯು ತಮ್ಮ ಸ್ವಂತ ಜ್ಞಾನದಿಂದ ಅನುಭವದಿಂದ ತಿಳಿದ ವಿಚಾರವಿದ್ದು ಸಾಮಾನ್ಯಜ್ಞಾನ ಬೆಳೆಸುವಂತಿದ್ದರೆ ಮಾತ್ರ  ಮಾನವೀಯತೆ ಎಂದರೆ ಏನು? ಮಾನವನ ಜನ್ಮಕ್ಕೆ ಕಾರಣವೇನು? ನಾನ್ಯಾರು? ನನ್ನಿಂದ ಏನಾಗಬೇಕು? ಎಲ್ಲಿದ್ದೇನೆ? ಏನು ಮಾಡಿದರೆ ಸರಿ.ಯಾವ ಕಡೆ ನಡೆಯಬೇಕು? ದೇವರು ಯಾರು? ಅಸುರತೆ ಎಲ್ಲಿದೆ? ನನ್ನ ನಾ ತಿಳಿಯೋದೆಂದರೆ ಏನು? ಈ ಎಲ್ಲಾ ಪ್ರಶ್ನೆಗೆ ಉತ್ತರ ಒಳಗಿರುವ ಸತ್ಯಜ್ಞಾನದಿಂದ ಕಂಡುಕೊಳ್ಳಲು ಸಾಧ್ಯವೆನ್ನುವ ದಾಸರು,ಶರಣರು,ಸಂತರು,ಮಹಾತ್ಮರುಗಳು,ದೇವ
ಮಾನವರು,ಶಕ್ತಿ ದೇವತೆಗಳು ಕಾಣಬಹುದಿತ್ತು.ಆದರೆ ವಿಪರ್ಯಾಸವೆಂದರೆ ಅವರನ್ನು ಹೊರಗೆಳೆದು ಮಧ್ಯೆ ನಿಲ್ಲಿಸಿ
ವ್ಯವಹಾರಕ್ಕೆ ಇಳಿದಿರುವ ನಮಗೆ ಹಣ ಇದೆ ಅವರ ಜ್ಞಾನವಿಲ್ಲ. ಅಧಿಕಾರವಿದೆ  ಸರಿಯಾದ ದಾರಿ ಹಿಡಿದಿಲ್ಲ. ದೇಶವಿದೆ ದೇಶದ ಶಿಕ್ಷಣ ಬೆಳೆಸಲಾಗಿಲ್ಲ. ಸಹಕಾರವಿದೆ ಇದಕ್ಕೆ  ಆಂತರಿಕ  ಶಕ್ತಿಯ  ಬೆಂಬಲವಿಲ್ಲ. ಇಲ್ಲ ಇಲ್ಲ ಎನ್ನುವ ಜೊತೆಗೆ ಅಲ್ಲ ಅಲ್ಲ ಎನ್ನುವವರೂ ಬೆಳೆದು  ಅಂತರದಲ್ಲಿ ಮಧ್ಯವರ್ತಿಗಳು ಇವರಿಬ್ಬರ ನಡುವೆ ಅಂತರ ಬೆಳೆಸಿಕೊಂಡು
ಶಿಕ್ಷಣ, ಧರ್ಮ, ದೇಶವನ್ನು ವಿದೇಶ ಮಾಡುತ್ತಾ ಹೋದರೆ ಇಬ್ಬರ  ಜಗಳದಲ್ಲಿ ಮೂರನೆಯವರಿಗೆ   ಲಾಭವಾಗುತ್ತಿದೆ.
ಈ ಮೂರನೆಯವರಿಗೆ ಸರಿಯಾದ ಸತ್ಯಾಸತ್ಯತೆಯನ್ನು  ಅರ್ಥ ಮಾಡಿಕೊಳ್ಳಲು ಕಷ್ಟ. ತಮ್ಮ ಸ್ವಾರ್ಥ ವಷ್ಟೆ ಮುಖ್ಯ.
ಹೀಗಾಗಿ ಮನುಕುಲವು ಅತಂತ್ರಸ್ಥಿತಿಗೆ  ತಲುಪುತ್ತದೆ. ಒಂದು ತತ್ವ ಮೂರಾದರೂ ಕೂಡಿದರೆ ಒಂದೇ. ಆದರೆ ಅಸಂಖ್ಯಾತ ತಂತ್ರವನ್ನು ಒಂದು ಮಾಡಲಾಗದು. ಅದಕ್ಕಾಗಿ ಮೊದಲು ತತ್ವಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಬೇಕಿದೆ ಶಿಕ್ಷಣ. ನಂತರ ಅವರವರ  ಪ್ರತಿಭೆ,ಜ್ಞಾನದಿಂದ ತಂತ್ರವನ್ನಾಗಲಿ,ಯಂತ್ರವನ್ನಾಗಲಿ ಇತಿಮಿತಿಯಲ್ಲಿ ಬಳಸಿದರೆ ಸ್ವತಂತ್ರ ಜ್ಞಾನ‌  ಒಳಗಿರುತ್ತದೆ. ಅರ್ಧ ಸತ್ಯದಲ್ಲಿ ಆಳಿ ಅಳಿಸಿದರೆ ಅತಂತ್ರಸ್ಥಿತಿಗೆ ಜೀವ ತಲುಪಿದರೆ ಭೂತವೆ ಆಗೋದು. ಭೂತವೆಂದರೆ ಗೊತ್ತಲ್ಲ.ಕೇವಲ ಹಿಂದಿನದ್ದನ್ನೇ ಕೆದಕಿಕೊಂಡು ತನಗೂ ಮುಕ್ತಿಯಿಲ್ಲದೆ ಇತರರಿಗೂ ಮುಕ್ತಿ ಕೊಡದೆ  ಅಲೆಯುವುದೆಂದರ್ಥ. ಇಲ್ಲಿ ಸಾಕಷ್ಟು ಭೂತಗಳು‌
ಮಾನವನನ್ನು ಆವರಿಸಿದೆ. ಇವುಗಳ ಉದ್ದೇಶ ಯಾವುದೆನ್ನುವ ಬಗ್ಗೆ ತಿಳಿಯಲು ಜ್ಞಾನವಿರಬೇಕಷ್ಟೆ.ಒಂದೇ ಭೂಮಿಯೊಳಗೆ ದೇವರು,ದೆವ್ವಗಳು,ಭೂತಗಳು, ಪಿತೃಗಳು ನಡೆಸಿರುವ ಈ ಜಗತ್ತನ್ನು ಮಾನವರು ಆಳಲಾಗುವುದೆ? ಆಳಿದರೂ ಅಗೋಚರ ಶಕ್ತಿಯ ಸಹಕಾರವಿಲ್ಲದೆ ಸಾಧ್ಯವಿಲ್ಲ. ಹಾಗಾದರೆ ಇಂದಿನ‌ ಈ ಸ್ಥಿತಿಗೆ ಅಗೋಚರ ಶಕ್ತಿಗಳೇ ಕಾರಣ ನಾನಲ್ಲ. ನಾನ್ಯಾರು ಪ್ರಶ್ನೆಗೆ ಉತ್ತರವಿಷ್ಟೆ ನಾನು ಕಾರಣ
ಮಾತ್ರದ ಒಬ್ಬ ಮಾನವ. ಮಾನವೀಯತೆ ಇರಬೇಕು  ಅದು ಅಮಾನುಷರಿಗೆ ಇಷ್ಟವಾಗುವುದಿಲ್ಲ.ಇದಕ್ಕಾಗಿ  ಈ ಅಧರ್ಮ, ಅನ್ಯಾಯ  ಅಸತ್ಯ,  ಭ್ರಷ್ಟಾಚಾರ  ಮುಗಿಲು
ಮುಟ್ಟಿದೆ. 
ಭೂಮಿ ಮೇಲಿದ್ದು ಸಾಧಿಸಿದ್ದು ಏನಾಗುತ್ತಿದೆ? 
ಸಾಧನೆ ಅಧ್ಯಾತ್ಮ ದೆಡೆಗೆ ಹೋದರೆ ನಾನಿರೋದಿಲ್ಲ. ಭೌತಿಕದ ರಾಜಕೀಯದೆಡೆಗೆ ಹೋದರೆ ನಾನೇ ಕಾಣೋದು ಅಗೋಚರ ಶಕ್ತಿಯಲ್ಲ. ಸೂಕ್ಮವಾಗಿರುವ  ವಿಚಾರ ವಿಜ್ಞಾನದ ಕಣ್ಣಿಗೆ ಕಾಣದು.ವಿಜ್ಞಾನದ ಕಣ್ಣಿಗೆ ಕಂಡದ್ದು ಕೇವಲ ಭ್ರಮೆ. ಜನಮರುಳೋ ಜಾತ್ರೆಯೋ ಎಂದಂತಿದೆ ಸಮಾಜ. ಒಳಗಿನ ಸತ್ಯ ಬಿಟ್ಟು ಹೊರಗೆ ಹುಡುಕಿದರೆ ಸಿಗೋದಿಲ್ಲ. ತತ್ವ ಬಿಟ್ಟು ತಂತ್ರದಿಂದ ಭೂಮಿಯಲ್ಲಿ  ನಡೆಸೋದು ನಾಟಕವಷ್ಟೆ.
ಪಾತ್ರಧಾರಿಗಳ ಹಿಂದಿನ ಸೂತ್ರಧಾರ ಕಾಣೋದಿಲ್ಲವಲ್ಲ. 
ಇಂದಿನ‌ಪರಿಸ್ಥಿತಿಗೆ ನಮ್ಮ ಸಹಕಾರವೇ ಕಾರಣ. ನಮ್ಮ ಸ್ವಾರ್ಥ ಚಿಂತನೆಗಳೇ ಕಾರಣ ನಾವೇ ಬೆಳೆಸಿಕೊಂಡು ಬಂದ  ಭಿನ್ನಾಭಿಪ್ರಾಯವೆ ಕಾರಣ.  ಇವುಗಳಿಗೆಲ್ಲ ರಾಜಕೀಯವೆ ಕಾರಣವಾದಾಗ  ಅದರ ಹಿಂದೆ ನಿಂತು  ನಮಗಮನಗನು ನಾವು ಬದಲಾಯಿಸಿಕೊಳ್ಳದಿದ್ದರೆ ಬದಲಾವಣೆ ಜನ್ಮ ಜನ್ಮಕ್ಕೆ
ಸಾಧ್ಯವೆ? ಹಿಂದಿನ ಸಾಲವೇ ಬೆಟ್ಟದಷ್ಟಿದೆ ಇದನ್ನು ತೀರಿಸದೆ ಮತ್ತಷ್ಟು ಸಾಲದ ಸುಳಿಗೆ ಜೀವ ಹೋದರೆ ಮುಕ್ತಿ ಎಲ್ಲಿರುತ್ತದೆ? ಮಾನವ‌ಮುಕ್ತಿ ಕೊಡುವನೆ? ತಂತ್ರದಿಂದ ಮುಕ್ತಿ ಸಿಗುವುದೆ? ತತ್ವದಿಂದಲೆ? ಸ್ವತಂತ್ರ ಜ್ಞಾನವನ್ನು ಬಿಟ್ಟು ಹೊರಗಿನ‌ವಿಜ್ಞಾನ ಹಿಡಿದರೆ  ಹೊರಗಿನವರ ಹಿಂದೆ ಹೋಗಬೇಕು. ಒಳಗಿರುವ ಶಕ್ತಿ ಹಿಂದುಳಿಯುವುದು. ಇದನ್ನು ಮಹಾತ್ಮರುಗಳು ‌ತಿಳಿದು ನಡೆದು ನುಡಿದಿದ್ದರು. 
ಪ್ರಚಾರಕರ ಮನಸ್ಥಿತಿ,ಪರಿಸ್ಥಿತಿ,ಆರ್ಥಿಕವಾಗಿ ಬೆಳೆಯುತ್ತಿದ್ದರೆ  ಭೌತಿಕ ಸಾಧನೆ. ಜ್ಞಾನದಿಂದ ಬೆಳೆದಿದ್ದರೆ 
ಅಧ್ಯಾತ್ಮ ಸಾಧನೆ. ಇದರ ಬಗ್ಗೆ ಜನಸಾಮಾನ್ಯರು ದೃಷ್ಟಿ ಹರಿಸುವುದಕ್ಕೂ ಬೇಕಿದೆ ಆತ್ಮ ಜ್ಞಾನದ ಶಿಕ್ಷಣ. ಇಲ್ಲವಾದರೆ  ಕೇವಲ ವ್ಯಾಪಾರದ ಶಿಕ್ಷಣವಾಗೇ  ಜೀವ ಮಾರಾಟ
ವಾಗುತ್ತದೆ. ಎಲ್ಲಿಗೆ  ನಡೆದಿದೆ ಮನುಕುಲ? ಆಕಾಶ ಭೂಮಿ ಪಾತಾಳ.ಕೆಳಗಿಳಿದ ಅಜ್ಞಾನ ಜ್ಞಾನದಿಂದ ಮೇಲೇರಲು ಆಂತರಿಕ  ಶಕ್ತಿಯನ್ನು ಅರ್ಥ ಮಾಡಿಕೊಂಡರೆ  ಸಾಧ್ಯ
ವೆನ್ನುವರು ಮಹಾತ್ಮರು.ಜ್ಞಾನ ಬಂದಾಗಿನಿಂದ  ಸತ್ಯವನ್ನು ಅನುಭವದಿಂದ ತಿಳಿದು ಲೇಖನದ ಮೂಲಕ ತಿಳಿಸುವ ಪ್ರಯತ್ನ  ನಡೆದಿದೆ.ಇದನ್ನುಅಪಾರ್ಥ ಮಾಡಿಕೊಂಡವರು 
ಹಲವರು,ರಾಜಕೀಯವಾಗಿ ತಿಳಿದವರು ಹಲವರು,ಅರ್ಥ ವಾಗದೆ ಹೋದವರು ಹಲವರು ಅರ್ಥ ವಾದರೂ  ಪ್ರತಿಕ್ರಿಯೆ ನೀಡದಿರುವವರು ಹಲವರು, ತಡೆಯಲು ಪ್ರಯತ್ನಿಸಿದವರು ಹಲವರು. ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟವರು ಕೆಲವರು,  ಹೀಗೇ‌ ದೇಶದ ಸಮಸ್ಯೆಗಳನ್ನು ‌ನಾನಾ ರೀತಿಯಲ್ಲಿ  ಹೇಳುವವರು  ಹಲವರಿದ್ದರೂ ನಮ್ಮ ಸಮಸ್ಯೆಗೆ ನಾವೇ ಕಾರಣವೆನ್ನುವ ಸತ್ಯ ನಾವೇ ತಿಳಿಯುವುದೇ ಕಷ್ಟ. ಇದನ್ನು ತಿಳಿದು ಪರಿಹಾರ ಒಳಗಿನಿಂದಲೇ ಕಂಡುಕೊಳ್ಳಲು  ಅಧ್ಯಾತ್ಮ ದಿಂದ ಮಾತ್ರ ಸಾಧ್ಯವೆನ್ನುತ್ತಾರೆ  ಮಹಾತ್ಮರುಗಳು. ಯಾವುದೇ ಮಧ್ಯವರ್ತಿಗಳು  ಇದಕ್ಕೆ  ಸಹಕರಿಸಿದರೂ ಪೂರ್ಣ ಸತ್ಯಕ್ಕೆ ನಾವೇ ನೇರವಾಗಿ ಸರಿಮಾರ್ಗ ಹಿಡಿಯುವುದು ಅಗತ್ಯ. ಇದಕ್ಕೆ ನಮ್ಮ ಹಿಂದಿನ ಗುರು ಹಿರಿಯರ ಧರ್ಮ ಕರ್ಮವು ಶುದ್ದವಾಗಿದ್ದರೆ ಸುಲಭ. ಅದರೊಳಗೆ ರಾಜಕೀಯವೆ ಇದ್ದರೆ
ಕಷ್ಟ. ರಾಜಪ್ರಭುತ್ವದ ಸಾತ್ವಿಕ ಶಿಕ್ಷಣವಿಲ್ಲ ರಾಜರಂತೆ ಜೀವನ ನಡೆಸಬೇಕೆಂಬ ಆಸೆ. ಪ್ರಜಾಪ್ರಭುತ್ವದ ಅರ್ಥ ತಿಳಿದಿಲ್ಲ.ಕಾಲ ಬದಲಾದಂತೆ  ಮಾನವನ ಜ್ಞಾನವೂ ಬದಲಾಗುತ್ತಿದೆ...ಇದು ಅಜ್ಞಾನವಾದರೆ   ಭೌತಿಕ ಸತ್ಯವಷ್ಟೆ ಕಾಣೋದು.
ಬ್ರಹ್ಮಪುರಾಣ,ವಿಷ್ಣುಪುರಾಣ,ಶಿವಪುರಾಣದಲ್ಲಿ ಶಕ್ತಿ ಪುರಾಣವಿದೆಯೆ? ಇದ್ದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಈ ಹಿಂದಿನ ಇತಿಹಾಸದ ಪುರಾಣಗಳ  ಹಿಂದಿನ ಸತ್ಯ ಅರ್ಥ ವಾಗುತ್ತದೆ.ಭೂಮಿ ಮೇಲೆ ನಿಂತು ಆಳುವ ಮೊದಲು ಜ್ಞಾನವಿರಬೇಕು. ಸ್ಥಿತಿಯನ್ನು ಸರಿಯಾಗಿ ತಿಳಿಯಬೇಕು. ಆಗ ನಾವು ಕೇವಲ ಮಾನವರೆನ್ನುವ   ಸತ್ಯ ತಿಳಿದು ಮಹಾತ್ಮರನ್ನು  ತಿಳಿಯಬಹುದು.ನಾವೇ ದೇವರಾದರೆ ದೈವತ್ವ ಅಗತ್ಯ.ಅಸುರರ ಹಿಂದೆ ನಡೆದರೆ ದೈವ ಶಕ್ತಿ ವ್ಯರ್ಥ. ಯಾರ ಹಿಂದೆ ಯಾರು ನಡೆದಿರೋದು ಗಮನಿಸಿಸಹಕರಿಸಿ ಬೆಳೆಸಿದರೆ ಅದೇ ನಾವಾಗಿರುತ್ತೇವೆ. 
ಭಾರತದೊಳಗಿದ್ದು ವಿದೇಶ ಬೆಳೆಸಿದರೆ? ವಿದೇಶಕ್ಕೆ ಹೋಗಿ ನಾನು ಭಾರತೀಯನೆಂದರೆ ಹೇಗೆ ಕಷ್ಟವೋ ಹಾಗೆ ದೇವರನ್ನು  ಅಸುರರಲ್ಲಿ ಕಾಣಬಹುದೆ? ಒಳಗಿರುವ. ಶಕ್ತಿಯನ್ನು ಹೊರಗೆ ಹುಡುಕಿದರೆ ಸಿಗೋದಿಲ್ಲ. ಸಾಮಾನ್ಯ ಜ್ಞಾನದ ಅಗತ್ಯವಿದೆ.ವಿಶೇಷಜ್ಞಾನ ಹೊರಗಿನಿಂದ ತುಂಬಲಾಗಿದೆ. ಇದನ್ನು ಸ್ವಚ್ಚ ಮಾಡಿಕೊಂಡರೆ ಸ್ವಚ್ಚ ಭಾರತ.

No comments:

Post a Comment