ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, June 28, 2024

ಯೋಗಕ್ಷೇಮಕ್ಕಾಗಿ ಸ್ತೋತ್ರ

ವಿಷ್ಣು ಸಹಸ್ರನಾಮದ ವಿಶೇಷ ಸ್ತೋತ್ರದಲ್ಲಿ ಎಲ್ಲಾ ಕ್ಷೇಮದಿಂದಿರಲು ಹೇಳಿಕೊಳ್ಳಬೇಕಾದ ಸ್ತೋತ್ರ 64 ನೇ ದಾಗಿದೆಯಂತೆ. ನಾವು ಎಷ್ಟೋ ಪೂಜೆ ಪುನಸ್ಕಾರ,ವ್ರತ ಕಥೆ ಸ್ತೋತ್ರ ಮಂತ್ರ ತಂತ್ರ ಯಂತ್ರಗಳಿಂದ  ಪರಮಾತ್ಮನ ಸೇವೆ ಮಾಡಿದರೂ ಈ ಭಯವೆನ್ನುವುದು ಒಳಗೇ ಇರುತ್ತದೆ ಎಂದರೆ  ಯಾವುದೇ ಸೇವೆ  ಮಾಡುವುದಕ್ಕೆ ನಮಗೆ ಹೊರಗಿನವರೆ ತಿಳಿಸಿರುವರು. ಒಳಗಿರುವವರು ಮಾಡಿಕೊಂಡು ಬಂದಿದ್ದರೂ  ನಮಗೆ ಅದರ ಅರಿವಿರೋದಿಲ್ಲ.ಕಾರಣ ನಮ್ಮ  ವಿಧ್ಯಾಭ್ಯಾಸವೇ  ಹಾಗಿದೆ.
ಮಕ್ಕಳಿಗೆ  ಸಂಸ್ಕಾರ ಸಂಸ್ಕೃತಿ ಭಾಷೆ ಧರ್ಮ ಸತ್ಯವನ್ನು ತಿಳಿಸಿ‌ಬೆಳೆಸುವುದೆ ಪರಮಾತ್ಮನ ಸೇವೆ ಎಂದಾಗ ಮಾತ್ರ
ಅದರೊಂದಿಗೆ ಬೆಳೆದವರಲ್ಲಿ ಭಯವಿರದು. ಹೊರಗೆ ಹೋದರೂ ಕಾಯುವ ಪರಮಾತ್ಮನಿದ್ದಾನೆಂದುಕೊಂಡು ತಮ್ಮ  ಧಾರ್ಮಿಕ ಸೇವೆ ಮಾಡಿಕೊಂಡವರು ನಮ್ಮ ಹಿಂದಿನ ಹಿರಿಯರಾಗಿದ್ದರು. ಅದರಲ್ಲೂ ತುಂಬಾ ದೂರ ಕಳಿಸದೆ ಹತ್ತಿರದಲ್ಲಿದ್ದೇ  ಕುಟುಂಬದ ಸದಸ್ಯರಿಗೆ ಆಶೀರ್ವಾದ ಸಹಕಾರ ಸಹಾಯ ಮಾಡುವ ಕಾಲವಾಗಿತ್ತು.
ಕಾಲಬದಲಾದಂತೆಲ್ಲಾ ಹೊರಗಿನ ಶಿಕ್ಷಣ ಬೆಳೆದಂತೆಲ್ಲಾ ಮಕ್ಕಳು  ಹೊರಗೆ ಹೋಗುತ್ತಾ ದೂರದೂರದ ಊರಿನಲ್ಲಿ ದೇಶದಲ್ಲಿ ನೆಲೆಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ತಮ್ಮ  
ವರು ಸುರಕ್ಷಿತವಾಗಿರಲೆಂದು ಪರಮಾತ್ಮನ ಲ್ಲಿ  ಕೇಳಿಕೊಳ್ಳುವುದಕ್ಕೆ  ಸ್ತೋತ್ರವಿದೆ ಎಂದರೆ ನಮ್ಮ ಮಹಾತ್ಮರುಗಳಿಗೆ ಇಂತಹ ಕಾಲ  ಬರುತ್ತದೆನ್ನುವ ಅರಿವು ಮೊದಲೇ ಇತ್ತು ಎನ್ನಬಹುದು. ಈ ರೀತಿಯಲ್ಲಿ ಅನೇಕ ಸ್ತೋತ್ರಗಳಿವೆ. ಪಠಣ ಮಾಡುವುದರಿಂದ ಪುಣ್ಯ ಬರುತ್ತದೆ.ಅರ್ಥ ಮಾಡಿಕೊಂಡು  ಪ್ರಾರ್ಥನೆ ಮಾಡುವುದರಿಂದ  ಭಯ  ನಿವಾರಣೆಯಾಗಿ ಭಕ್ತಿ ಹೆಚ್ಚುವುದು. ಪ್ರತಿದಿನ 11 ಬಾರಿ ಭಕ್ತಿ ಶ್ರದ್ಧೆಯಿಂದ  ಹೇಳಿದರೆ ಫಲ ಸಿಗುವುದಾದರೆ ನಮ್ಮೊಳಗೇ ಭಕ್ತಿ ಶ್ರದ್ಧೆ 
ನಮಗಾಗಿ ಇರಲೇಬೇಕು,ಇರುತ್ತದೆ.
ಸರ್ವೇ ಜನಾ: ಸುಖಿನೋ ಭವಂತು.

No comments:

Post a Comment