ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Saturday, July 26, 2025

ಕೋಟಿ ವಿದ್ಯೆಗಿಂತ ಮೇಟಿ‌ವಿದ್ಯೆಯೇ‌ ಮೇಲು

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವಪೀಳಿಗೆ ಸಾಲ ಮಾಡಿ ಓದಿ ವಿದೇಶ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು  ಜೀವನ‌ನಡೆಸುವಾಗ ಮಧ್ಯದಲ್ಲಿ ‌ಕಂಪನಿಯವರು ಹೊರಗೆ ಕಳಿಸುವುದು ಅಥವಾ ಕಂಪನಿಯೇ‌ಮುಚ್ಚಿ ಹೋಗೋದು ಸಾಮಾನ್ಯವಾಗುತ್ತಿದೆ.ಕೊರೊನ ಸಮಯದಲ್ಲಿ ಇದರ ಅನುಭವ ಆದವರು ಹಿಂದಿರುಗಿ  ಸ್ವಸ್ಥಾನದಲ್ಲಿ ಭೂ ಸೇವೆ ಮಾಡಲು  ಬಂದಿರೋದು ಅದೃಷ್ಟ ವಷ್ಟೆ. ಕೆಲವರು ಭೂಮಿ ಮಾರಿ  ವಿದ್ಯೆಗೆ ಸಾಲ‌ಮಾಡಿದ್ದಾಗ ಏನೂ‌ಮಾಡಲಾಗದೆ  ಪರದಾಡುವ ಪರಿಸ್ಥಿತಿ ಬರುತ್ತದೆ. ಹೀಗಾಗಿನಮ ನಾವು ನಮ್ಮ ಮೂಲ ಶಿಕ್ಷಣ ಧರ್ಮ/ ಕರ್ಮ ಭೂಮಿಯ ಋಣ ತೀರಿಸಲು  ಹತ್ತಿರವಿರುವ ವಿದ್ಯೆ ಕಲಿತು ಸ್ವಾವಲಂಬನೆ ಸರಳ ಜೀವನ ಸ್ವಾಭಿಮಾನದ ಜೀವನ ನಡೆಸುವಂತಿದ್ದರೆ ವಿದ್ಯೆಗೆ ಕೋಟಿ ಕೊಡುವ ಅಗತ್ಯವಿಲ್ಲ. 
ಇದರ ಬಗ್ಗೆ ಚಿಂತನೆ ‌ನಡೆಸೋದೇ‌ಕಷ್ಟವೆಂದಾಗ ಹಿಂದಿರುಗೋದು ಬಹಳ ಕಷ್ಟ.ಕೊನೆಪಕ್ಷ  ಇದ್ದವರನ್ನು ಸ್ವತಂತ್ರ ವಾಗಿ‌ ಬದುಕಲು ಬಿಟ್ಟರೆ ಅದೇ ಪುಣ್ಯದ ಕೆಲಸ.

ಕೋಟಿ ವಿದ್ಯೆಗಿಂತ ಮೇಟಿವಿದ್ಯೆಯೇ ಮೇಲೆಂದು ಹಿಂದೆಯೇ ತಿಳಿಸಿರುವರು. ಕೋಟಿ ಕೊಟ್ಟು ಕಲಿಯುವ ಬದಲು ಅದನ್ನು ಕಲಿಯದೆ ಕೋಟಿ ಉಳಿಸುವುದು ಸುಜ್ಞಾನ.
ನಮ್ಮ ಭಾರತೀಯ ಶಿಕ್ಷಣ ಇದೇ ಆಗಿತ್ತು.ವಿದೇಶಿಗಳ ಹಿಂದೆ ‌ನಡೆದು ದೇಶ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಅವಿದ್ಯೆ.

ಕಲಿತ ವಿಷಯಕ್ಕೆ ಸರಿಯಾದ ಕೆಲಸ ಸಿಗದೆ ಅನ್ಯರ ಕೆಳಗೆ ದುಡಿಯುವ ಎಷ್ಟೋ ಯುವ ಪೀಳಿಗೆ ಜೀವನದ ಸತ್ಯ ಅರ್ಥ ಆಗದಿರೋದು ದುರಂತ. ಲಕ್ಷ ಲಕ್ಷ ಸಂಪಾದಿಸಿ ಮಕ್ಕಳ ಶಿಕ್ಷಣಕ್ಕೆ  ಕೊಟ್ಟು  ಸಾಲ ತೀರಿಸಲಾಗದೆ ಮಹಿಳೆಯೂ ಮನೆಯಿಂದ ಹೊರಬಂದಾಗ ಮಕ್ಕಳ ಮೇಲೆ ಅಲಕ್ಷ್ಯ. ಯಾರೋ ಹೊರಗಿನವರು ಬಂದು ನಮ್ಮ ‌ಸಾಲ ತೀರಿಸಲಾಗದು. ನಮ್ಮ ಸಾಲಕ್ಕೆ ನಾವೇ ಜವಾಬ್ದಾರರು.
ಇನ್ನು ಸರ್ಕಾರಗಳಂತೂ ವಿದೇಶಿ ಬಂಡವಾಳ ಸಾಲ ವ್ಯವಹಾರಕ್ಕೆ  ದೇಶವನ್ನು ಬಿಟ್ಟುಕೊಟ್ಟು ಜನರನ್ನು ಆಳಲು ಹೊರಟಿರೋದಕ್ಕೆ ಕಾರಣವೇ ಜನರ ಸಹಕಾರ.ಪ್ರಜಾಪ್ರಭುತ್ವ ದಲ್ಲಿ  ದೇಶ ಬಡವಾಗುತ್ತಿದೆ.ಜನರ ಸಾಲ  ಮಿತಿಮೀರಿದೆ ಎಂದರೆ ಅಜ್ಞಾನದ ಲಕ್ಷಣ.

ಆತ್ಮನಿರ್ಭರ ಅಧ್ಯಾತ್ಮ ಸಂಶೋಧನೆಯಲ್ಲಿದೆ. ವೈಜ್ಞಾನಿಕ ಸಂಶೋಧನೆಗೆ ಕೋಟಿ ಕೋಟಿ ಬಳಸಲಾದರೆ ಸಾಲ ತೀರಿಸುವವರು ಯಾರು? 
ಹಿಂದಿನ ದಾಸ ಶರಣರು ಮಹಾತ್ಮರು ಯೋಗದಿಂದ  ಪರಮಾತ್ಮನ ಸೇರಿದ್ದರೆ ಈಗಿನ‌ಯುವಪೀಳಿಗೆ ಭೋಗಕ್ಕೆ ಸಿಲುಕಿ ಪರದೇಶಿಗಳಿಗೆ ಪರಕೀಯರಿಗೆ ದಾಸ ಶರಣರಾಗಿ ಸೇವಕರಾಗುತ್ತಿರೋದನ್ನು ಪ್ರಗತಿ ಎನ್ನಬಹುದೆ?
ಆತ್ಮಾವಲೋಕನ  ಅಗತ್ಯವಿದೆ. ದೇವರನ್ನು ಹೊರಗೆಳೆದಷ್ಟೂ ದೈವತ್ವ  ಬೆಳೆಯುವುದೆ? ದೈವತ್ವ ಇರೋದು ಒಳಗೇ ಆದಾಗ ಒಳಗಿನಿಂದ  ಸ್ವಯಂ ಪ್ರಕಾಶಕರಾಗುವ ಸುಜ್ಞಾನದ ವಿದ್ಯೆ ಅಗತ್ಯವಿದೆ. ಮನೆ‌ಮನೆ ಗುರುಕುಲವಾಗಿದ್ದ ವಿಶ್ವಗುರು ಭಾರತ ಇಂದು ದೊಡ್ಡ ಮನೆಯಲ್ಲಿ ಸಣ್ಣ ಮನಸ್ಸಿನ ಮಾನವನಿಂದ  ನಡೆದಿದೆ. 
ಮನೆಯು ಸಣ್ಣದಾದರೂ ಮನಸ್ಸು ದೊಡ್ಡದಾಗಿದ್ದರೆ ಮಕ್ಕಳು ಮರಿಗಳೂ ಉತ್ತಮವಾಗಿ  ಬೆಳೆಯುವರು.ಆದರೆ  ಮಕ್ಕಳೇ‌ಬೇಡ ಎನ್ನುವ ಮನಸ್ಥಿತಿಯಲ್ಲಿದ್ದವರಿಗೆ ಏನೂ ಮಾಡಲಾಗದು. ಒಟ್ಟಿನಲ್ಲಿ ಗುರುಹಿರಿಯರ ಸಹಕಾರ ಸಹಾಯ ಹೊರಗೆ ಬೆಳೆದಷ್ಟೂ ಒಳಗಿನ ದೊಡ್ಡತನ ಬೆಳೆಯದು. ಸಹಕಾರ  ಹಣದಿಂದ ಆದಷ್ಟೂ ಗುಣಜ್ಞಾನ ಹೊರಬರದು.‌ಎಲ್ಲೋ  ಒಳಗೇ ಒಂದು ಸಣ್ಣ ಬೆಳಕು ಕಾಣುತ್ತದೆ. ಅದನ್ನು ಹಿಡಿದು  ಹಿಂದೆ ನಡೆದರೆ  ಉತ್ತಮ.
ಆತ್ಮಜ್ಯೋತಿ  ಎಲ್ಲರೊಳಗಿರುವ ದೇವರು. ಆ ದೀಪ ಎಲ್ಲರ ಕಣ್ಣಿಗೆ ಕಾಣದ ಕಾರಣ‌ಹೊರಗಿನ ದೀಪ ಹೆಚ್ಚುತ್ತಿದೆ.  ದೀಪಕ್ಕೆ ಉತ್ತಮ ಎಣ್ಣೆ  ಅಗತ್ಯವಿದೆ.ಅದೇ ಶಿಕ್ಷಣ.

No comments:

Post a Comment