ಎಲ್ಲಿ ನೋಡಿದರೂ ರಾಜಕೀಯದ ಆಟವೇ ನಾನೇ ಗೆಲ್ಲಬೇಕೆಂಬ ಪೈಪೋಟಿ ಸ್ಪರ್ಧೆ ಹೊರಗೆ ಹೋರಾಟ ಹಾರಾಟ ಮಾರಾಟದ ಮಧ್ಯೆ ಮಾನವನ ಜೀವನದ ಆಟ ನಡೆದಿದೆ ಆದರೆ ಇದರ ಹಿಂದೆ ನಿಂತು ಆಡಿಸುವ ಶಕ್ತಿಯ ಮುಖಪರಿಚಯವಿಲ್ಲದ ಮಾನವನಿಗೆ ನಾನು ಸೋಲುತ್ತಿರುವ ಸತ್ಯದ ಅರಿವಿಲ್ಲದೆ ಅಸತ್ಯ ಅನ್ಯಾಯ ಅಧರ್ಮಕ್ಕೆ ಸಹಕಾರ ಕೊಟ್ಟು ಹೆಚ್ಚು ಅಧಿಕಾರ,ಹಣ ಜನಬಲದೆಡೆಗೆ ಮುಂದೆ ಮುಂದೆ ಸಾಗುವಾಗ ಒಳಗೇ ಇದ್ದ ತನ್ನದೇ ಆದ ಆತ್ಮಸಾಕ್ಷಿ ಹಿಂದುಳಿಯುತ್ತದೆ. ಆತ್ಮಸಾಕ್ಷಿಗೆ ವಿರುದ್ದ ನಡೆದವರಿಗೆ ನಿಜವಾದ ಮುಕ್ತಿ ಮೋಕ್ಷ ಸಿಗದೆನ್ನುವ ಅಧ್ಯಾತ್ಮ ದ ವಿಚಾರದಲ್ಲಿ ಯಾರೂ ಯಾರನ್ನೂ ಸ್ಪರ್ಧೆ ಮಾಡುವುದಿಲ್ಲ.ಕಾರಣ ಅವರವರ. ಧರ್ಮ ಕರ್ಮಕ್ಕೆ ತಕ್ಕಂತೆ ಋಣವೂ ಬೆಳೆಯುವಾಗ ಸತ್ಯ ಒಂದೇ ಆಗಿರುತ್ತದೆ. ಆ ಒಂದು ಸತ್ಯದೆಡೆಗೆ ಅವರುನಡೆಯಲು ಬಿಡುವುದೇ ಧರ್ಮ.
ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದರೆ ಆತ್ಮಸಾಕ್ಷಿಯೊಂದಿಗೆ ಒಳಗಿರುವ ಪರಮಾತ್ಮನ ಕಡೆಗೆ ಜೀವಾತ್ಮ ನಡೆಯುವುದೇ ಮುಕ್ತಿ ಮಾರ್ಗ. ಇದಕ್ಕಾಗಿ ಹೊರಜಗತ್ತಿನಲ್ಲಿ ಸನ್ಮಾರ್ಗ ಹಿಡಿದು ಸತ್ಸಂಗ ಸದಾಚಾರ ಸತ್ಯ ಸ್ವಾಭಿಮಾನ ಸ್ವಾವಲಂಬನೆ ಸರಳ ಜೀವನ ನಡೆಸಿದವರು ಮಹಾತ್ಮರಾದರು. ಮಹಾತ್ಮರಲ್ಲಿಯೂ ಬೇರೆ ಬೇರೆ ರೀತಿಯ ಜೀವನನಡೆಸಿದ್ದರೂ ಅವರು ಆತ್ಮಸಾಕ್ಷಿಯೆಡೆಗೆನಡೆದ ಕಾರಣ ಪರಮಾತ್ಮನ ಸತ್ಯವರಿತರು.ಸ್ಪರ್ಧೆ ನಡೆಸೋದಾದರೆ ಸತ್ಯ ಧರ್ಮ ದೆಡೆಗೆ ಹೋರಾಟ ಇರಬೇಕು.ಯಾವಾಗಿದು ಮಾರಾಟಕ್ಕೆ ಸೀಮಿತವಾಗುವುದೋ ಹಣದ ಲಾಭಕ್ಕಾಗಿ ಸತ್ಯ ಬಿಡಬೇಕು.ಸತ್ಯ ಇಲ್ಲದೆ ಧರ್ಮ ಇರದು. ಜೋಡಿಯಾಗಿ ಹೋಗುವುದು ಕಷ್ಟ.ಅದಕ್ಕೆ ಒಂಟಿಯಾಗಿ ಸಂನ್ಯಾಸಿಗಳು ನಡೆದರು.ಇಂದು ಸಂನ್ಯಾಸವೂ ಅಧಿಕಾರಕ್ಕಾಗಿ ಸ್ವೀಕರಿಸುವಮಟ್ಟಕ್ಕೆ ಬಂದಿರೋದು ಕಲಿಯುಗದ ಪ್ರಭಾವ.
ಇವರಿಗೆ ಸಿಗುವ ಗೌರವಾದರದ ಹಿಂದೆ ರಾಜಕೀಯ ಶಕ್ತಿ ನಿಂತು ಜನರನ್ನು ಹೊರಗೆಳೆದರೆ ಮುಗಿಯಿತು ಧರ್ಮದ ಕಥೆ.
ಜೀವ ಇದ್ದರೆ ಜೀವನ ಆದರೆ ಜೀವಾತ್ಮನ ಅರಿಯದೆ ಮಾನವನಡೆದಷ್ಟೂ ಪರಮಾತ್ಮನ ಆಟ ಅರ್ಥ ವಾಗದೆ ಜೀವ ಹೋಗುತ್ತದೆ. ಜೀವ ಹಿಡಿದುಕೊಂಡು ಸ್ಪರ್ಧೆ ಪೈಪೋಟಿ ನಡೆಸಿದರೆ ಆತ್ಮಕ್ಕೆ ತೃಪ್ತಿ ಸಿಗುವಂತಿದ್ದರೆ ಪ್ರತಿಕ್ಷಣ ಸಾಯುವ ಜೀವದಿಂದ ಎಷ್ಟೋ ಜನಸಂಖ್ಯೆ ಕಡಿಮೆಯಾಗುತ್ತಿತ್ತು. ಎಷ್ಟು ಜೀವ ಹೋದರೂ ಜನನ ಪ್ರಮಾಣದಲ್ಲಿ ಅಡೆತಡೆಗಳಿದ್ದರೂ ಜನಸಂಖ್ಯೆಗೇನೂ ಕೊರತೆಯಾಗಿಲ್ಲ ಎಂದರೆ ಮಾನವನ ಕೈಯಲ್ಲಿ ಏನೂ ಇಲ್ಲ.
ಸೃಷ್ಟಿ ಸ್ಥಿತಿ ಲಯದ ಕಾರ್ಯ ನಿರಂತರವಾಗಿ ಯಾವುದೇ ಸ್ಪರ್ಧೆ ಪೈಪೋಟಿ ಗೆ ಇಳಿಯದೆ ನಡೆಸುತ್ತಿರುವ ಮೇಲಿರುವ ಶಕ್ತಿಯನ್ನು ಮಾನವ ತಡೆಯಬಹುದೆ? ಮೂಲ ಸರಿಯಾಗಿ ತಿಳಿಯದೆ ರೆಂಬೆಕೊಂಬೆಗಳನ್ನು ಬೆಳೆಸಿ ಕಡಿಯುವುದೇ ದೊಡ್ಡ ಸಾಧನೆಯಾಗುತ್ತಿದೆ. ಎಷ್ಟು ಕಡಿದರೂ ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತದೆ. ಹೀಗಿರುವಾಗ ಮೂಲದಬೇರಿನ ಕಡೆಗೆ ನಡೆಯುವುದು ಉತ್ತಮ. ಎಲ್ಲರಿಗೂ ಕಷ್ಟ.ಕಷ್ಟಪಟ್ಟವರಿಗೆ ಸಾಧ್ಯವಾಗಿದೆ. ಈಗಲೂ ಎಷ್ಟೋ ಜನ ಹಿಂದಿರುವ ಸತ್ಯವರಿತು ಹಿಂದಿರುಗುವ ಪ್ರಯತ್ನದಲ್ಲಿದ್ದರೂ ಮುಂದೆ ಹೋದ ಮೇಲೆ ಮಾಡಿದ ಸಾಲ ತೀರಿಸುತ್ತಾ ಹಿಂದೆ ನಡೆದು ಬರೋದಕ್ಕೆ ಮನಸ್ಸು ಕೇಳದು.ಹಾಗಂತ ಒಮ್ಮೆ ಹಿಂದೆ ಬರಲೇಬೇಕಿದೆ.ಇದು ನಮ್ಮ ಹಿಂದಿನ ಗುರು ಹಿರಿಯರ ಋಷಿಮುನಿಗಳ ಋಣ ಸಂದಾಯವಾಗಿರುವಾಗ ಅಧ್ಯಾತ್ಮ ಚಿಂತನೆಯಿಂದಷ್ಟೇ ಸಾಧ್ಯವಾಗುತ್ತದೆ. ಕಣ್ಣಿಗೆ ಕಾಣದ ಋಣ ಕಾಣುವ ಸಾಲದ ಹೊರೆ ಎರಡೂ ಜೀವಾತ್ಮನಿಗೆ ಸವಾಲಾಗಿನಿಂತಿದೆ.ಇದಕ್ಕೆ ಜ್ಞಾನವೇ ಅಡಿಪಾಯವಾದಾಗ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿಯೇ ಋಣ ಸಂದಾಯದ ಮಾರ್ಗ ತೋರಿಸುವ ಗುರುವಿನ ಅಗತ್ಯವಿದೆ. ಯಾವಾಗ ಗುರು ವೇ ಶಿಷ್ಯನಿಗೆ ಹೊರಗಿನ ಮಾರ್ಗ ತೋರಿಸುವ ಸ್ಪರ್ಧೆ ಪೈಪೋಟಿಗಿಳಿಯುವರೋ ಆಗ ಲಯದ ಕಾರ್ಯ ಹೆಚ್ಚುವುದು. ಇಲ್ಲಿ ಒಳಗೆ ಹೊರಗೆ ಸ್ಪರ್ಧೆ ಪೈಪೋಟಿ ಅಜ್ಞಾನದಿಂದ ಬೆಳೆದಷ್ಟೂ ಅಧರ್ಮ ಮಿತಿಮೀರಿ ಅಶಾಂತಿ ಸೃಷ್ಟಿ ಯಾಗುತ್ತದೆ. ಅಶಾಂತಿಯ ಮನಸ್ಸಿಗೆ ಸತ್ಯಜ್ಞಾನ ಅರ್ಥ ಆಗದು.ಸತ್ಯ ಅರ್ಥ ವಾಗದೆ ಧರ್ಮ ವೂ ನಡೆಯದು.
ಧರ್ಮಕ್ಕೆ ಚ್ಯುತಿ ಬರುವ ಸ್ಪರ್ಧೆ ಪೈಪೋಟಿ ಗಳಿಂದಮನುಕುಲದ ಉದ್ದಾರವಾಗದು. ಒಟ್ಟಿನಲ್ಲಿ ಮಾನವ ಆಟಕ್ಕುಂಟು ಲೆಕ್ಕಕ್ಕಿಲ್ಲದ ದೇವಾಸುರರ ಮಧ್ಯವರ್ತಿ .ಇಲ್ಲಿ ಯಾರು ಯಾರನ್ನು ಸೋಲಿಸಿದರೂ ಸೋಲೇ ಆಗುವುದು. ಹೀಗಿರುವಾಗ ನಮ್ಮ ಆತ್ಮರಕ್ಷಣೆಗಾಗಿ ಆತ್ಮಾವಲೋಕನ ಮಾಡಿಕೊಂಡರೆ ಅಲ್ಪಸ್ವಲ್ಪ ನೆಮ್ಮದಿ ಶಾಂತಿ ಒಳಗಿರುತ್ತದೆ.ಹೊರಗೆ ಬಂದಷ್ಟೂ ಅಲ್ಲೊಲ ಕಲ್ಲೊಲ.
ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೇ ಇದೆ ಆ ರತುನ...ವಿವೇಕದಿಂದ ವಿವೇಕಾನಂದ. ಅವಿವೇಕದ ಸ್ಪರ್ಧೆ ಪೈಪೋಟಿ ಯಲ್ಲಿರುವ ಆನಂದದ ಹಿಂದೆ ನಡೆದವರನ್ನು ಜಗತ್ತು ಎತ್ತಿ ಏಣಿಗೇರಿಸಿದಷ್ಟೂ ಎಲ್ಲೋ ಕೆಳಗೆ ಬಿದ್ದುಮರೆಯಾಗೋದನ್ನು ಯಾರೂ ತಪ್ಪಿಸಲಾಗದು. ಸಾಧನೆ ಒಳಗಿನ ಶುದ್ದಿಯೆಡೆಗೆ ನಡೆದರೆ ಸ್ಪರ್ಧೆ ಇರದು. ಕಾರಣ ನಮ್ಮ ಕರ್ಮಕ್ಕೆ ತಕ್ಕಂತೆ ಫಲ ಅನುಭವಿಸಬೇಕೆನ್ನುವುದನ್ನು ತಡೆದಷ್ಟೂ ಸಮಸ್ಯೆ ಹೆಚ್ಚುವುದೆನ್ನುವುದು ಅಧ್ಯಾತ್ಮ ಸತ್ಯ. ತಡೆಯಲು ಸಾಕಷ್ಟು ಮಂತ್ರ ತಂತ್ರ ಯಂತ್ರಗಳಿದ್ದರೂ ಯಾವುದೂ ಸ್ವತಂತ್ರ ವಲ್ಲ.ಎಲ್ಲಾ ಪರಮಾತ್ಮನ ಅಧೀನದಲ್ಲಿರುವಾಗ. ಅನಾವಶ್ಯಕ ಸ್ಪರ್ಧೆ ಪೈಪೋಟಿಗಳಿಂದ ಜೀವಾತ್ಮ ಪರಮಾತ್ಮನಿಂದ ದೂರ ಉಳಿಯುವುದು ಸತ್ಯ.
No comments:
Post a Comment