ನಾನ್ಯಾರು?

“ದೇವರೊಂದಿಗೆ ಮಾತನಾಡಲು ಪದಗಳೇ ಬೇಕಿಲ್ಲ… ಕೆಲವೊಮ್ಮೆ ಮೌನವಾಗಿ ಅವನ ನೆಲೆಯಲ್ಲಿ ಕುಳಿತುಕೊಳ್ಳುವುದೇ ಸಾಕು. ನಮ್ಮ ಮನಸ್ಸು ಹೇಳಲಾಗದ್ದನ್ನೂ ಅವನು ಕೇಳುತ್ತಾನೆ. ಹಾಗಾ...

Sunday, August 11, 2024

ಮಾನವನಲ್ಲಿ ದೊಡ್ಡ ಜೀವ ಸಣ್ಣ ಜೀವ ಎನ್ನುವುದು ಇದೆಯೆ?

ಹಿಂದೂಗಳು ವಿದೇಶದಲ್ಲಿ ಸಂಕಟಪಟ್ಟರೆ ನಮ್ಮಲ್ಲಿ ದೊಡ್ಡ ಸಂಕಟವಾಗುತ್ತದೆ.ಅದೇ ಹಿಂದೂ ನಮ್ಮಲ್ಲಿ ನರಳುತ್ತಿದ್ದರೆ ಕೇಳೋರಿಲ್ಲ ಎಂದರೆ ಇಬ್ಬರಿಗೂ ವ್ಯತ್ಯಾಸವೇನು? ಹೊರಹೋದವರೂ ಮಾನವ ಒಳಗಿದ್ದವರೂ ಮಾನವರೆ,ಹೊರಗೆ ನಾವೇ ಕಳಿಸಿದೆವೋ ಅವರೆ ಹೋದರೋ  ಗೊತ್ತಿಲ್ಲ ಒಳಗಿದ್ದವನನ್ನು ನಾವೇ ಹೊರಗೆ ಕಳಿಸಿ ಸಂಕಟಪಡೋದರಲ್ಲಿ ಅರ್ಥ ವಿಲ್ಲ. ಇಲ್ಲಿ ಜೀವ  ಮುಖ್ಯವೆಂದಾಗ ಅದರಲ್ಲಿ ಶ್ರೀಮಂತ ಬಡವ,ಹೊರಗಿನವ ಒಳಗಿನವ  ಎನ್ನುವ ಬೇಧಯಾಕೆ? ತನ್ನ ಸ್ವಾರ್ಥ ಸುಖಕ್ಕಾಗಿ ಎಲ್ಲರನ್ನೂ ಬಿಟ್ಟು ಹೊರಹೋದಾಗ  ಪರದೇಶದಲ್ಲಿರುವ ಪರಮಾತ್ಮನೆ ಕಾಯೋದು.ಹಾಗೆ ಇಲ್ಲಿರುವವರನ್ನೂ ಅವನೆ ಕಾಯೋದು.ಈ ಮಧ್ಯವರ್ತಿ ಮಾನವ ನಾನೇ ಎಲ್ಲಾ ಮಾಡೋದು ಎನ್ನುವ ಅಹಂಕಾರ ಬೆಳೆಸಿಕೊಂಡು ಇವನಮ್ಮವ ಅವನಿಮ್ಮವ ಎಂದು ಬೇರೆ ಮಾಡಿದರೂ ಕಾಯೋನು ಒಬ್ಬನೆ ಎನ್ನುವ ಸತ್ಯತಿಳಿದವರು ಹೊರಗೆ ಹೋದವರನ್ನೂ  ಅವನೆ ರಕ್ಷಣೆ ಮಾಡುವನೆಂಬ ನಂಬಿಕೆ ಬೆಳೆಯಲು ಮೊದಲು ಕಣ್ಣೆದುರೆ ನರಳುತ್ತಿರುವವರ ಸಂಕಟಕ್ಕೆ ಪರಿಹಾರ ಕೊಟ್ಟರೆ ಹೊರಗಿನ ನಮ್ಮ ಮಕ್ಕಳು ಮೊಮ್ಮಕ್ಕಳಿಗೂ  ಅಲ್ಲಿಯೇ ಸುರಕ್ಷೆ ಇರುತ್ತದೆ.
ಮಧ್ಯವರ್ತಿಗಳು ಮಾಧ್ಯಮಗಳು ಹೊರಗಿನವರ ಸಮಸ್ಯೆ ಎತ್ತಿ ಹಿಡಿದು ಪ್ರಚಾರ ಮಾಡುವುದರಿಂದ ಸರ್ಕಾರಗಳು ಹೊರಗಿರುವವರಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬಹುದಷ್ಟೆ.ಆದರೆ ಮಾನವೀಯತೆಯ ದೃಷ್ಟಿಯಿಂದ ಒಳಗಿರುವ ಸಮಸ್ಯೆ ಸಂಕಟಗಳಿಗೆ ಸರಿಯಾದ ಕಾರಣ ಮತ್ತು ಪರಿಹಾರ ಕಂಡುಕೊಳ್ಳಲು  ನಮ್ಮಲ್ಲಿ  ಜ್ಞಾನವಿರಬೇಕು.
ಹೊರಗೆ ಹೋಗುವಾಗ ಸರ್ಕಾರದ ಅನುಮತಿ ಪಡೆದು ದೇಶ ಭಕ್ತಿ ತೊರೆದು  ನಡೆದ ಮೇಲೆ ಜೀವರಕ್ಷಣೆಗೆ ದೇಶ ಬೇಕೆ?
ಅಸಂಖ್ಯಾತ ದೇಶಭಕ್ತರ ಜೀವ ದೇಶರಕ್ಷಣೆಗಾಗಿ ಇದೇ ಭೂಮಿಯಲ್ಲಿದ್ದು ಹೋಗಿರುವಾಗ ವಿದೇಶಕ್ಕೆ ಹೋದವರಿಗೆ ದೇಶಭಕ್ತಿ ಇಲ್ಲದೆ  ಒಳಗೆ ಬಂದರೂ ಕಷ್ಟ ನಷ್ಟ ದೇಶಕ್ಕೆ.ರಕ್ಷಣೆ ಇರಲಿ ಆದರೆ ಒಳಗಿರುವ ರನ್ನು ನಿರ್ಲಕ್ಷ  ಮಾಡುತ್ತಾ ಲಕ್ಷ ಕೋಟಿ  ಸರ್ಕಾರದ ಹಣ ಹೊರಗಿನವರಿಗೆ  ಸುರಿದರೆ ಏನರ್ಥ?
ಕೊರೊನ ಸಮಯದಲ್ಲಿ ಯುದ್ದದ ಸಮಯದಲ್ಲಿ ಸಾಕಷ್ಟು ವಿದೇಶದ ಜನರು ಜೀವರಕ್ಷಣೆಗೆ ಒಳ ಬಂದು ಕೆಲಸವಿಲ್ಲದೆ ಕಾಲಕಳೆದು  ನಂತರ ತಿರುಗಿ ಹೋದರು. ಆ ಸಮಯದಲ್ಲಿ ಎಷ್ಟೋ ನಮ್ಮ ಜನರ ಜೀವ ಪ್ರಾಣ ಹೋಗಿದ್ದರೂ ಯಾರೂ ಕೇಳೋರಿರಲಿಲ್ಲ. ಒಟ್ಟಿನಲ್ಲಿ ಯಾರ ಜೀವವಾದರೂ ಒಂದೇ. ಹಣದಿಂದ  ಜೀವ ಬೆಳೆಯೋದಿಲ್ಲ ಉಳಿಯೋದಿಲ್ಲ. ಗುಣವಿದ್ದರೆ ಅದೇ ದೊಡ್ಡ ಜೀವ.ಬಡವರಲ್ಲಿ ಗುಣವಿರುತ್ತದೆ .ಉಳಿಸಿ ಶಿಕ್ಷಣ ಕೊಟ್ಟರೆ ಅದೇ ದೇಶಕ್ಕೆ ಆಸ್ತಿ.
ಅಸಮಾನತೆಯು ಉಸಿರಿನಲ್ಲಿಯೇ ಜನ್ಮತ: ಒಳಗಿನಿಂದ ಬೆಳೆದಿರುವಾಗ ಹೊರಗಿನ ಸಮಾನತೆಯ ಹೋರಾಟ ಹಾರಾಟ ಮಾರಾಟ ಕೇವಲ ತೋರುಗಾಣಿಕೆಯ ರಾಜಕೀಯವಷ್ಟೆ.ಇದಕ್ಕೆ ಸಹಕರಿಸುವ ಮಾಧ್ಯಮಗಳಂತೂ ತಮ್ಮ  ವ್ಯವಹಾರಕ್ಕೆ  ಹೆಚ್ಚಿನ‌ಬೆಲೆಕೊಟ್ಟರೆ ಧರ್ಮ ಎಲ್ಲಿರುವುದು? 
ಎಲ್ಲೋ ಯುದ್ದ ಕಲಹ  ಹೆಚ್ಚಾದರೆ ಅಲ್ಲಿಗಿಂತ ನಮ್ಮಲ್ಲಿಯೇ ಸುದ್ದಿ ಪ್ರಚಾರ ಹೆಚ್ಚಾಗಿರುತ್ತದೆ ಎಂದರೆ ನಮ್ಮವರ ಮಕ್ಕಳು ಮರಿಗಳು ಹೊರಗೇ ಹೆಚ್ಚಾಗಿರುವರೆಂದರ್ಥ. ಕಳಿಸುವಾಗ ಅವರ ಆಸ್ತಿಯನ್ನು  ಸಮಾಜಕ್ಕೆ ದಾನ ಮಾಡಿದರೆ ದೇಶದ ಋಣವಾದರೂ ತೀರಬಹುದು.ಅಲ್ಲಿಯೂ ಸುಖವಾಗಿರಬಹುದು. ದೇಶದೊಳಗಿನ  ಆಸ್ತಿ ಬೇಕು ದೇಶ ಬೇಡ,ಹಾಗೆ ಪಿತೃಗಳ ಆಸ್ತಿ ಅಂತಸ್ತು ಬೇಕು ಅವರ‌ಧರ್ಮ ಕರ್ಮ ಬೇಡವೆಂದರೆ ಅಜ್ಞಾನ ವಷ್ಟೆ. ಜೀವ ಇದ್ದರೆ ಜೀವನ. ಜೀವಿಸಲು ಬಿಟ್ಟ ಸ್ಥಳ ಬಿಟ್ಟು ದೂರ ಹೋದರೂ ನಾವು ಎಷ್ಟು  ಪಡೆದು ಬಂದಿರುವೆವೋ ಅಷ್ಟೇ ಅನುಭವಿಸೋದು.
ಸುಖ ದು:ಖ ಒಂದೇ ನಾಣ್ಯದ ಎರಡು ಮುಖವಷ್ಟೆ. ಸುಖ ಬಂದಾಗ ದೂರ ಹೋಗೋದು ಕಷ್ಟ ಬಂದಾಗಹತ್ತಿರ ಬರೋದರಲ್ಲಿ  ಯಾವುದೇ  ಧರ್ಮ ವಿಲ್ಲ. 
ವಿದೇಶಿವ್ಯಾಮೋಹ ಬಿಟ್ಟು ಸ್ವದೇಶದಲ್ಲಿದ್ದು ಮೂಲದ ಧರ್ಮ ಕರ್ಮದೊಳಗಿನ ಸೂಕ್ಮ ಸತ್ಯವರಿತು ನಡೆದ ನಮ್ಮ ಹಿಂದಿನ  ಮಹಾತ್ಮರನ್ನು  ನಾವೀಗ‌ಕಾಣೋದು ಕಷ್ಟವಿದೆ.ಕಾರಣ ಅವರು ಅಮರರು ಜೀವನ್ಮುಕ್ತರು. ಆದರೂ ಅವರ  ನಡೆ ನುಡಿಯನರಿತು ಸ್ವಲ್ಪ ನಾವೂ ಇಲ್ಲೇ ಇದ್ದು ನಡೆಯಲು ಕಲಿಯಬಹುದು. ಕಲಿಕೆಯೇ ಹೊರಗಿನದ್ದಾಗಿರುವಾಗ ಹೊರಗೇ ಹೋಗಿ ದುಡಿದು ಸಾಲ ತೀರಿಸೋದು  ಕರ್ಮ ಫಲ.  ಜನ್ಮಕ್ಕೆ ದೇಶ ಆಸರೆ ಕೊಟ್ಟರೆ ಅದರ ಸಾಲ ತೀರಿಸುವ‌ಕರ್ಮ  ಅಥವಾ ಕೆಲಸವನ್ನು ಇಲ್ಲೇ ಮಾಡಿದರೆ ಇಲ್ಲೇ ಮುಕ್ತಿ. ಹಾಗಾಗಿ ಹಿಂದೆ ಜನರು ಇದ್ದಲ್ಲೇ ಒಗ್ಗಟ್ಟಿನ ಬಲದಿಂದ  ಬದುಕಿದ್ದರು. ಈಗ ದೂರಹೋಗಿ ಬದುಕಿದ್ದೂ ಇಲ್ಲದಂತಿರೋದು  ಅಜ್ಞಾನ.ಕಾಲಕ್ಕೆ ತಕ್ಕಂತೆ ನಡೆಯೋದು ಸರಿ. ಆದರೆ ಕಲಿಕೆ  ಉತ್ತಮ ನಡೆ ನುಡಿಯತ್ತ ಇದ್ದರೆ ಎಲ್ಲಿದ್ದರೂ  ಪರಮಾತ್ಮನ  ಕೃಪೆ ಇರುತ್ತದೆ. ಇಷ್ಟಕ್ಕೂ ದೇವಾನುದೇವತೆಗಳು ಅವತಾರವೆತ್ತಿ ಹೋಗಿರುವ ಈಭೂಮಿಯ ಋಣ ತೀರಿಸಲು  ಧರ್ಮ ಮಾರ್ಗ ಅಗತ್ಯ.
ಮೂಲವನ್ನು ಬಿಡುವ‌ಮೊದಲು ಜಾಗೃತರಾಗಿರಬೇಕಷ್ಡೆ.
ಇಲ್ಲಿ ಯಾರನ್ನೂ  ದೋಷಿಸುತ್ತಿಲ್ಲ.ನಮ್ಮ ದೃಷ್ಟಿ ದೋಷ ಎಷ್ಟಿದೆ ಎನ್ನುವ  ಪ್ರಯತ್ನವಾಗಿದೆ.ತಪ್ಪು ಯಾವುದು?ಸರಿ ಎಲ್ಲಿದೆ? ಅವರವರ ಜನ್ಮ ಸ್ಥಳ,ದೇಶೀಯ ಶಿಕ್ಷಣ,ಸಂಸ್ಕಾರ,ಸಂಸ್ಕೃತಿ, ಭಾಷೆಯ ಜೊತೆಗೆ ಸಂಬಂಧ ಹತ್ತಿರವಿದ್ದಷ್ಟೂ ಸುರಕ್ಷಿತ. ದೂರಹೋದಷ್ಟೂ ಅತಂತ್ರ.

ಸತ್ಯದಿಂದ ಜ್ಞಾನ ಮಿಥ್ಯದಿಂದ ಹಣ

ಸತ್ಯ ಯಾವುದು ಮಿಥ್ಯ ಯಾವುದು ಎನ್ನುವುದರ ಹಿಂದೆ ಬಿದ್ದ ಮೇಲೆ ಸತ್ಯ ಒಪ್ಪಿಕೊಂಡರೆ ಹಣದ ನಷ್ಟ ಮಿಥ್ಯ ಒಪ್ಪಿದರೆ ಹಣದ ಲಾಭ. ಆದರೆ  ಎಷ್ಟೋ ನಷ್ಟಗಳ ನಂತರ ಜ್ಞಾನದ ಲಾಭವಾದಾಗ ಸ್ವಲ್ಪ ‌ನೆಮ್ಮದಿ ಶಾಂತಿ.ಆದರೂ ಅನುಭವಿಸಿದ ವಿಚಾರಗಳ ಹಿಂದೆ ಇರುವ ರಾಜಕೀಯತೆ ನೋಡಿದರೆ ಅಸಹ್ಯದ ಜೊತೆಗೆ  ಅಸಮಾಧಾನವೂ ಇದೆ.
ಯಾಕಿಷ್ಟು  ಸಂಸಾರದಲ್ಲಿ ಸಮಸ್ಯೆ ಎಂದರೆ ರಾಜಕೀಯ ಎನ್ನುವ ಉತ್ತರ ಬರುತ್ತದೆ.
ರಾಜಕೀಯ ‌ಮನೆ‌ಮನೆಯೊಳಗೇ ಬೆಳೆದಿರುವಾಗ ಹೊರಗೆ ಸರಿಪಡಿಸಲಾಗದು. ಇಲ್ಲಿ ನಾನೇ ಸರಿ ಎನ್ನುವ ಅಹಂಕಾರ ಸ್ವಾರ್ಥ ವೇ  ಮಾನವನ ಅಸುರಿ ಗುಣಕ್ಕೆ ತಕ್ಕಂತೆ ಪಾಠ ಕಲಿಸಿ ಹೊರಗಿನವರು ಬಂದು ಆಳುತ್ತಿರೋದು. 
ಕಣ್ಣಿಗೆ ನಮ್ಮ ದೇಶ ಸ್ವತಂತ್ರ. ಆದರೆ ಎಷ್ಟೋ ಭಾರತೀಯರ ಸ್ಥಿತಿ ಅತಂತ್ರವಾಗಿದೆ. ಜನ್ಮ‌ಕೊಟ್ಟ ತಾಯಿಯನ್ನೇ ದೂರವಿಟ್ಟು ವಿದೇಶದಲ್ಲಿ ಆರಾಮಾಗಿರುವೆ ಎಂದರೆ‌ಕರ್ಮ ಬಿಡುವುದೆ? ಭಾರತೀಯ ಹಿಂದೂಗಳ ಪರಿಸ್ಥಿತಿ ವಿದೇಶದಲ್ಲಿ  ಹೇಗಿದೆ ಎನ್ನುವುದನ್ನು ಪ್ರಸಾರ ಮಾಡುವವರು ಸ್ವದೇಶದಲ್ಲಿ ಯಾರ ಕೈಕೆಳಗಿದ್ದಾರೆ ಎಂದು ಗಮನಿಸಲು ಒಳಗಣ್ಣು ತೆರೆಯಬೇಕಷ್ಟೆ. ಋಣವಿದ್ದ ಕಡೆ ಜೀವನ ನಡೆಸಬೇಕು.ಇದು ತಪ್ಪಲ್ಲ.ಆದರೆ ಮೂಲದ ಋಣ ತೀರಿಸದೆ ಹೊರಗಿನವರ ಋಣ ಬೆಳೆಸಿಕೊಂಡರೆ  ಹೊರಗಿನವರು ಬಿಡುವರೆ?
ಹಿಂದೆ  ಜನರು ಪರದೇಶಿ ಎನ್ನುವ‌ಪದವನ್ನು ಬೈಗುಳಕ್ಕೆ ಬಳಸಿದ್ದರು.ಯಾಕೆಂಬುದರ ಅರಿವು ಈಗ ನಮಗಾಗುತ್ತಿದೆ.
ಯಾವುದೋ ಪರಕೀಯರ ಜೀವರಕ್ಷಣೆ ಭಾರತ ಮಾಡಬೇಕಂತೆ ಭಾರತೀಯರ ರಕ್ಷಣೆ ಮಾಡೋರು ಯಾರು?ಭಾರತೀಯ ತತ್ವಜ್ಞಾನಕ್ಕೂ ವಿದೇಶಿ ತಂತ್ರಕ್ಕೂ ಅಂತರ ಬೆಳೆದು ನಮ್ಮವರ ಬುದ್ದಿವಂತಿಕೆ ಜ್ಞಾನವನ್ನು  ತಂತ್ರದಿಂದ ಅರ್ಥ ಮಾಡಿಕೊಂಡು  ತಮ್ಮ ದೇಶದ ಆಸ್ತಿ ಮಾಡಿಕೊಂಡು ವ್ಯವಹಾರಕ್ಕೆ ಎಳೆದರು. ಪಾಪ ಮಾಡಿದವರು ಇದನ್ನು ಪುಣ್ಯ ಎಂದುಕೊಂಡು ಹೊರ ನಡೆದ ಮೇಲೇ ತಿಳಿದದ್ದು ದೂರದ ಬೆಟ್ಟ ನುಣ್ಣಗೆ ಎಂದು.ಹಾಗಂತ ಎಲ್ಲರಿಗೂ  ಸಮಸ್ಯೆ ಎಂದರೆ ತಪ್ಪಾಗಬಹುದು.
ಭಾರತದ ಧರ್ಮ ಸಂಸ್ಕೃತಿ ಭಾಷೆ ಸಾಹಿತ್ಯ ಪ್ರಚಾರ ಹೊರಗೆ ಮಾಡಿರುವುದರಿಂದ ಹಿಂದಿನ ಸನಾತನಧರ್ಮ ಭೂಮಿಯಲ್ಲಿ ಉಳಿದಿದೆ. ಆದರೆ, ಪ್ರಶ್ನೆ  ಮೂಲ ಭಾರತದ ಶಿಕ್ಷಣ  ವ್ಯವಸ್ಥೆ ಭಾರತದಲ್ಲೇ ಕಡೆಗಣಿಸಲಾಗಿದೆ ಎನ್ನುವ ಸತ್ಯ ಇಷ್ಟು ವರ್ಷ ಗಳಾದರೂ ಇದರ ವಿರುದ್ದ ದ್ವನಿ ಎತ್ತದವರು ಈಗ  ಹಿಂದೂ ಧರ್ಮ  ಹಾಳಾಗಿದೆ‌ ಎಂದರೆ ನಮ್ಮ ಸಹಕಾರ ಇಲ್ಲದೆ ಏನಾದರೂ ನಡೆದಿದೆಯೆ?
ವೈಜ್ಞಾನಿಕ ಜಗತ್ತನ್ನು ಆಳುವುದು ಸುಲಭ.ಅಧ್ಯಾತ್ಮ ಜಗತ್ತನ್ನು ಆಳಲಾಗದು. ಹೀಗಾಗಿ ರಾಜಕೀಯದಿಂದ ಅಧ್ಯಾತ್ಮ  ಜಗತ್ತನ್ನು ಅರ್ಥ ಮಾಡಿಕೊಳ್ಳಲು  ಕಷ್ಟವೆಂದು ಸಂಸಾರ ತೊರೆದು ಹೋದವರೆಷ್ಟೋ  ಮಹಾತ್ಮರು  ಪರದೇಶವನ್ನು ನೋಡೋದಿರಲಿ ಕೇಳಿರಲಿಲ್ಲ. ಎಲ್ಲೋ ಕೆಲವು ರಾಜರುಗಳು ಅಖಂಡ ಭಾರತವನ್ನು ಆಳುವಷ್ಟು ಶಕ್ತಿಹೊಂದಿದ್ದರು. ಈಗ ನಾವು ಪ್ರಜಾಪ್ರಭುತ್ವದ ಪ್ರಜೆಗಳಷ್ಟೆ ರಾಜರಲ್ಲ ಆದರೂ ಇಡೀ ದೇಶ ಆಳುತ್ತೇನೆನ್ನುವ ಅಹಂಕಾರ ದಲ್ಲಿ ಒಳಗೇನು ನಡೆಯುತ್ತಿದೆ‌  ಎಂದು ಗೊತ್ತಿಲ್ಲ.
ಕುಣಿಯಬಾರದವ ನೆಲಡೊಂಕು ಎಂದಂತೆ  ಪ್ರಜೆಗಳಿಗೆ ಸರಿಯಾದ ಶಿಕ್ಷಣ ನೀಡದವರು ಪ್ರಜೆಗಳೇ ಸರಿಯಿಲ್ಲ ಎನ್ನುವರು. ಮಕ್ಕಳ ತಪ್ಪನ್ನು ತಿದ್ದಬೇಕಾದ ಪೋಷಕರೆ ಮಕ್ಕಳು ದಾರಿತಪ್ಪಿದ್ದಕ್ಕೆ ಸರ್ಕಾರ ಕಾರಣವೆಂದರೆ ಸರಿಯೆ?ಇಲ್ಲಿ ಸಹಕಾರ =ಸರ್ಕಾರ ಒಂದೇ. ಎಲ್ಲಿಯವರೆಗೆ ನಾವು ಹೊರಗಿನ ಭ್ರಷ್ಟ ರಾಜಕೀಯಕ್ಕೆ ಸಹಕರಿಸುವೆವೋ ಅಲ್ಲಿಯವರೆಗೆ ಒಳಗೂ ಭ್ರಷ್ಟಚಾರಿ ಇರುವನು.  
ಉಚಿತವಾಗಿ  ಎಲ್ಲಾ ಪಡೆದ ಮೇಲೂ ಸಾಲವಿದೆ ಬಡತನವಿದೆ, ರೋಗವಿದೆ, ಸಮಸ್ಯೆಗಳಿವೆ ಎಂದರೆ  ಅಜ್ಞಾನ ಮಿತಿಮೀರಿದೆ ಎಂದರ್ಥ.
ಪುರಾಣಗಳಿಂದ ತಿಳಿದ ವಿಷಯಗಳಲ್ಲಿಯೂ ರಾಜಕೀಯ ಇತ್ತು.ಆದರೆ ಅದರಲ್ಲಿ ಧರ್ಮ ತತ್ವವಿತ್ತು.ಯಾವಾಗದು ತಂತ್ರಕ್ಕೆ ಬಳಸಿ  ಜನಜೀವನ ಅತಂತ್ರಸ್ಥಿತಿಗೆ ತಲುಪಿತೋ ಆಗ ಯುದ್ದಗಳಾಗಿತ್ತು. ಆದರೂ  ಯುದ್ದ ತಡೆಯುವ ಸಂಧಾನ ಕಾರ್ಯ ವಾಗಿತ್ತು. ಆಗೋದನ್ನು ತಡೆಯಲಾಗದು ಎಂದಂತೆ ಲಯಕ್ಕೆ ಯುದ್ದವಾಗಿತ್ತು. ಅದರಿಂದ ಸೃಷ್ಟಿ ಯಾದ ನೋವು ಹಿಂಸೆ ಸಾವುಗಳಿಂದ ಭೂಮಿ ಗಳಿಸಿದ್ದೇನು? ತಾತ್ಕಾಲಿಕ ಭಾರವಷ್ಟೆ. ನಂತರ‌ಮತ್ತೆ ಅದೇ ಸೃಷ್ಟಿ ನಡೆದಿದೆ. ಉತ್ತಮ ಶಿಕ್ಷಣದ ಮೂಲಕ ಮಾನವ ಮಹಾತ್ಮನಾಗಬಹುದೆನ್ನುವುದೆ ಭಾರತೀಯ ಶಿಕ್ಷಣದ ಗುರಿಯಾಗಿದೆ. ವಾಸ್ತವದಲ್ಲಿ ನಾವು ತಂತ್ರವಿಲ್ಲದೆ ಸ್ವತಂತ್ರ ಜೀವನ‌ನಡೆಸಲು ಕಾಡಿನಲ್ಲಿ ವಾಸ ಮಾಡುವ ಶಕ್ತಿವಂತರಲ್ಲದ ಕಾರಣ‌ಕೊನೆಪಕ್ಷ  ತಂತ್ರಜ್ಞಾನದ ಸದ್ಬಳಕೆ  ಮಾಡಿಕೊಂಡು  ಅಧರ್ಮ ,ಭ್ರಷ್ಟಾಚಾರ, ಅಸತ್ಯ,ಅನ್ಯಾಯವನ್ನು  ತಡೆಯಲಾಗದಿದ್ದರೂ ಸರಿ ಅದಕ್ಕೆ ಸಹಕಾರಕೊಡದಿದ್ದರೆ ಉತ್ತಮ.ಮಕ್ಕಳಿಗೂ ಮನೆಯಲ್ಲಿ ಇದನ್ನು ತಿಳಿಸಿ ತಾವೂ ತಿಳಿದು‌ನಡೆಯಲು ಅವಕಾಶವಿದ್ದರೆ ನಮ್ಮ ಸಂಪಾದನೆಯ ಹಣವನ್ನು ಉತ್ತಮವಾಗಿ ಬಳಸಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಾಗದೆ  ಲಕ್ಮಿಯನ್ನು ಸರಸ್ವತಿಯ ಜ್ಞಾನ ಸಂಪಾದನೆಗೆ ಬಳಸಿ ಸತ್ಯ ತಿಳಿದರೆ ಆತ್ಮಜ್ಞಾನ ಹೊರಗಿಲ್ಲ ಒಳಗೇ ಇತ್ತು ಎನ್ನುವ ಸತ್ಯದರ್ಶನ. ಇದನ್ನು ರಾಜಯೋಗವೆನ್ನಬೇಕೋ ಜ್ಞಾನಯೋಗವೋ ಭಕ್ತಿಯೋಗವೋ ಕರ್ಮ ಯೋಗವೋ‌ಒಟ್ಟಿನಲ್ಲಿ ಯೋಗವಿದ್ದರೆ ಪರಮಾತ್ಮನ ಜ್ಞಾನದ ಭಾಗ್ಯ. ಸರ್ಕಾರದ ಭಾಗ್ಯಗಳಿಂದ ಭೋಗದೆಡೆಗೆ ನಡೆದವರಿಗೆ  ಈ ಯೋಗದ ಬಗ್ಗೆ ತಿಳಿಸುವ ಶಿಕ್ಷಣ ಕೊಡಲು ಸಾಧ್ಯವೆ?
ಸ್ವಯಂ ಶಿಕ್ಷಕರೆ ಭೋಗಕ್ಕೆ ತಿರುಗಿದ್ದರೆ  ಮಕ್ಕಳ ಪಾಡೇನು?
ಒಟ್ಟಿನಲ್ಲಿ ಹಣದ ಹಿಂದೆ ಬಿದ್ದಷ್ಟೂ ಸತ್ಯಜ್ಞಾನದ‌ ನಷ್ಟ.ಸತ್ಯದ ಹಿಂದೆ ನಡೆದಷ್ಟೂ ಹಣದ ನಷ್ಟ. ಯಾವುದು ಶಾಶ್ವತ?

Monday, August 5, 2024

ಮಾಧ್ಯಮಗಳಿಂದ ಧರ್ಮ ರಕ್ಷಣೆ ಸಾಧ್ಯವೆ?

ನನ್ನ ಲೇಖನಿಯಿಂದ ಹೊರಬರುವ ವಿಷಯಗಳಲ್ಲಿ ಎಲ್ಲಾ ಕ್ಷೇತ್ರದ ವಿಚಾರವಿರುತ್ತದೆ ಹಾಗಾಗಿ ಇದು ಕೇವಲ ಅಧ್ಯಾತ್ಮಿಕ ಲೇಖನವೆನ್ನಲಾಗದು. ಕೆಲವು ಪತ್ರಿಕೆಗಳು ಸುಧಾ , ತರಂಗ , ವಿಜಯಕರ್ನಾಟಕ,ವಿಜಯವಾಣಿ, ಪ್ರಜಾವಾಣಿ... ಕರ್ಮ ವೀರ ಇನ್ನೂ ಹಲವು ಪತ್ರಿಕೆಗಳ  ಅನಿಸಿಕೆಯನ್ನು  ತಿಳಿದು ನೇರವಾಗಿ ಸಮಾಜಕ್ಕೆ  ತಲುಪಿಸುವ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಹಲವು ವರ್ಷಗಳ ನಂತರ ನನಗೇ ಅರ್ಥ ವಾಗಿರದ  ಅಧ್ಯಾತ್ಮ ಸೂಕ್ಮ ಅರಿವಿಗೆ ಬಂದಿದೆ. ಇದರ ಪ್ರಕಾರ ಯಾವುದೇ ವ್ಯವಹಾರ ಬೆಳೆಸಬೇಕಾದರೆ ಸತ್ಯಕ್ಕೆ ಬೆಲೆಕೊಡೋದಿಲ್ಲ ಮಿಥ್ಯಕ್ಕೆ ಬೆಲೆ ಕೊಡೋದು. ಕಾರಣ ಮಿಥ್ಯ ಜನರ ಕಣ್ಣಿಗೆ ಕಾಣುತ್ತದೆ.ಜನಬಲ ಹಣಬಲ ಅಧಿಕಾರ ಬಲವಿದ್ದರೆ ಜೀವನ ನಡೆಯುತ್ತದೆ.  ಆದರೆ ಇದು ಅಧರ್ಮ, ಅನ್ಯಾಯ ಅಸತ್ಯದ ಭ್ರಷ್ಟಾಚಾರಕ್ಕೆ  ಎಳೆದಂತೆಲ್ಲಾ ಜೀವನ ಅಲ್ಲೋಲ ಕಲ್ಲೋಲವಾಗಿ ಅಶಾಂತಿಯ ಗೂಡಾಗಿ ಹೋಳಾಗುತ್ತದೆನ್ನುವ ಅಧ್ಯಾತ್ಮ ಸತ್ಯ  ನಡೆದ ಮೇಲೇ ತಿಳಿಯೋದು. ಮಾಧ್ಯಮ ಮಧ್ಯವರ್ತಿಗಳು  ಮಾನವರಾಗಿ ಮಾನವೀಯ ಮೌಲ್ಯಗಳನ್ನು ಜನರಲ್ಲಿ‌ ಬಿತ್ತಬೇಕಾದರೆ ಮುಖ್ಯವಾಗಿ ಮನೆಯೊಳಗಿರುವ  ಮಂದಿಯ ಸಹಾಯ ಬೇಕಿದೆ. ಸಾಮಾನ್ಯವಾಗಿ ಮನರಂಜನೆಗಾಗಿ  ನೋಡುವ ಕೇಳುವ ಹೇಳುವ ಪ್ರತಿಯೊಂದು  ಮಾತಿನಲ್ಲಿ ಸತ್ಯಸತ್ಯತೆ ಇರುತ್ತದೆ.
ಸತ್ಯವಿಲ್ಲದ ಮನರಂಜನೆಯಿಂದ ಅಜ್ಞಾನ ಬೆಳೆದರೆ ಸತ್ಯದಿಂದ ಜ್ಞಾನ ಬೆಳೆಯುತ್ತದೆ. ಆದರೆ ಅದು ವಾಸ್ತವದಲ್ಲಿ ಯಾವ ಬದಲಾವಣೆಗೆ ಪೂರಕವಾಗಿದೆ ಎನ್ನುವುದರ ಮೇಲೆ ಸುದ್ದಿ ಪ್ರಚಾರವಾಗುತ್ತದೆ. ಈ ಬದಲಾವಣೆಯಿಂದ ಕ್ರಾಂತಿ ಎದ್ದರೆ ಜೀವಹಾನಿ ಮಾನಹಾನಿ...ಶಾಂತಿಯಿದ್ದರೆ ಆತ್ಮಕ್ಕೆ ತೃಪ್ತಿ  ಹೀಗಾಗಿ ಹಿಂದಿನ ಮಹರ್ಷಿಗಳು  ಅಧ್ಯಾತ್ಮ ವಿಚಾರಕ್ಕೆ ಹೆಚ್ಚಿನ ಒತ್ತು ಕೊಟ್ಟು ಕಷ್ಟಪಟ್ಟು  ಸತ್ಯ ವರಿತು ಧರ್ಮ ರಕ್ಷಣೆ ಮಾಡಿದ್ದರು.
ಈಗ ಪ್ರಚಾರವಷ್ಟೆ ಮುಖ್ಯ ಸತ್ಯ ಕೇಳೋರಿಲ್ಲ ಹೇಳೋರಿಗೂ‌ ಬೆಲೆಯಿಲ್ಲದ ಜಗತ್ತನ್ನು ಆಳೋದಕ್ಕೆ ನಿಂತಿರುವ ಅಸುರರಿಗೆ ಸುರರ ಸಹಕಾರ ಬೇರೆ. ಇದರಿಂದ ಯಾರ ಬಲ ಹೆಚ್ಚುವುದೋ ಕುಸಿಯುವುದೋ ಭವಿಷ್ಯವೆ‌ನಿರ್ಧಾರ ಮಾಡುತ್ತದೆ.  ಹಿಂದಿನಂತೆ ಜನ  ಈಗಿಲ್ಲ, ಈಗಿನಂತೆ ಮುಂದೆ ಇರಲ್ಲ ಆದರೂ ಹಿಂದಿನ ಪ್ರಚಾರದಲ್ಲಿ ಸಾಕಷ್ಟು ಹಣಸಂಪಾದನೆಗೆ ಅಡ್ಡಿಯಿಲ್ಲ.ಅಡ್ಡಿ ಇರೋದು ವಾಸ್ತವ ದಲ್ಲಿ  ನಾವೆಲ್ಲಿ ಎಡವಿದ್ದೇವೆನ್ನುವುದರಲ್ಲಿ.ಇದನ್ನು ಸಾಮಾನ್ಯರು ತಿಳಿಸಿದರೆ ಪ್ರಚಾರ ಮಾಡೋದಿಲ್ಲ. ಏನಾದರೂ ಕ್ರೈಮ್ ಸುದ್ದಿಯಿದ್ದರೆ ತಿಳಿಸಿ ಪ್ರಸಾರ ಮಾಡುತ್ತೇವೆಂದು  ಸುದ್ದಿ ಮಾಧ್ಯಮದವರು ತಿಳಿಸುತ್ತಾರೆಂದರೆ  ಅವರ ಬಂಡವಾಳವೇ ಕ್ರೈಮ್ ಆಗಿದೆ. ಹೀಗಿರುವಾಗ  ಉತ್ತಮ ದಿನಗಳನ್ನು ಕಾಣುವ ಕನಸು ನನಸಾಗುವುದೆ?

ಯಾವುದೇ ವಿಷಯವಿದ್ದರೂ ಜನರೆಡೆಗೆ ತಲುಪಿಸುವಾಗ ಅದರ ಪರಿಣಾಮದ ಬಗ್ಗೆ ಚಿಂತನೆ ನಡೆಸುವ ತಾಳ್ಮೆ ಸಹನೆ ಇದ್ದವರು‌ಕೆಟ್ಟಸುದ್ದಿಗಳನ್ನು ಬಿಟ್ಟು ಉತ್ತಮ ಅಗತ್ಯದ ಸುದ್ದಿ ಕಾರ್ಯಕ್ರಮ  ನಡೆಸುತ್ತಾ ದೇಶದ ಜೊತೆಗೆ ಧರ್ಮ ರಕ್ಷಣೆ ಆಗುತ್ತದೆ. ಇದನ್ನು ಮೊದಲು ಪ್ರಾದೇಶಿಕ  ಮಾಧ್ಯಮಗಳು ಮಾಡುತ್ತಿತ್ತು.ಈಗ ಸ್ವಲ್ಪ ಬದಲಾಗಿದ್ದರೂ ಪರವಾಗಿಲ್ಲ. ಆದರೆ ಅದನ್ನು ನೋಡೋರ ಸಂಖ್ಯೆ ಕಡಿಮೆ ಆದರೂ ನೋಡುಗರಿಗೆ ಸಮಸ್ಯೆಯಿಲ್ಲ. 
ಒಟ್ಟಿನಲ್ಲಿ ಒಳ್ಳೆಯದು  ಬೆಳೆಯೋದು ಕಷ್ಟ.ಕೆಟ್ಟದ್ದು ಬೇಗ ಬೆಳೆಯುತ್ತದೆ ಎಂದರೆ ನಮ್ಮ ಸಹಕಾರ ಕೆಟ್ಟದ್ದಕ್ಕೆ ಹೆಚ್ಚು. ಇದರಿಂದ  ಹಣಗಳಿಸಿದರೂ ಸತ್ಯಜ್ಞಾನವಿರದು. ಈ ನಷ್ಟಕ್ಕೆ ತಕ್ಕಂತೆ ಕಷ್ಟವೂ  ಇರುತ್ತದೆನ್ನುತ್ತಾರೆ ಅಧ್ಯಾತ್ಮ ಚಿಂತಕರು.

ಅಧ್ಯಾತ್ಮ ಎಂದರೆ ನಮ್ಮನ್ನು ನಾವರಿಯೋದಷ್ಟೆ. ನಮ್ಮೊಳಗೇ ಇರುವ ಆತ್ಮನ ಬಗ್ಗೆ ಅರಿವಿದ್ದರೆ  ನಾವು ಸ್ವತಂತ್ರರು.ಇಲ್ಲ ಕೆಲಸದಲ್ಲಿರಬೇಕಂತೆ.ಪ್ರಿಂಟ್ ಮಾಧ್ಯಮ ಜನರನ್ನು ನಿಧಾನವಾಗಿ ಎಚ್ಚರಿಸಿದರೆ   ಟಿವಿ ಮಾಧ್ಯಮ ಜನರನ್ನು ಹುಚ್ಚು ಹಿಡಿಸಿ ಹೊರಗೆಳೆಯುತ್ತದೆ. ಒಟ್ಟಿನಲ್ಲಿ ನಾವಿನ್ನೂ ಮನೆಯೊಳಗೆ ಇದ್ದೇವೆ ಎಂದರೆ ಮಾಧ್ಯಮಗಳಿಗೆ ಅಂಟಿಕೊಂಡಿಲ್ಲವೆಂದರ್ಥ. ಕೆಲವರು ಉತ್ತಮ ಸುದ್ದಿ ಪ್ರಸಾರ ಮಾಡುತ್ತಿದ್ದರೂ  ಪ್ರಚಾರಕರಲ್ಲಿ ಜನಸಾಮಾನ್ಯರ ಸ್ಥಿತಿಯನರಿತವರು ಕಡಿಮೆ. ಶಿಕ್ಷಣದಲ್ಲಿಯೇ  ಎಡವಿರುವಾಗ ತಲೆಗೆ ತುಂಬಿದ ವಿಷಯವೇ ಜೀವನ ನಡೆಸುತ್ತದೆ.ಇದರಲ್ಲಿ ಸತ್ಯವಿದೆಯೆ ಮಿಥ್ಯವಿದೆಯೆ ತಿಳಿಯುವುದು ಬಹಳಷ್ಟಿದೆ.

ಪುರಾಣವನ್ನೇ ತೆಗೆದುಕೊಂಡರೆ ದೇವರನ್ನು ಆಳೋರೆ  ಜನರನ್ನು ಆಳುತ್ತಿದ್ದಾರೆ. ಶ್ರೀ ಕೃಷ್ಣನ  ಭಗವದ್ಗೀತೆ ಯ ಒಳಗಿನ ವಿಶ್ವ ರೂಪ ದರ್ಶನ  ಆಗ ಎಲ್ಲರಿಗೂ ಆಗಿಲ್ಲವೆಂದರೆ ಸೂಕ್ಮವಾಗಿರುವ ಈ ವಿಶ್ವ ವನ್ನು ಬರಿಗಣ್ಣಿನಲ್ಲಿ ತಿಳಿಯಲಾಗದೆಂದರ್ಥ. ಹೊರನೋಟಕ್ಕೆ ಕಾಣುವ ಜಗತ್ತಿನ ವಿಷಯ ಹರಡಿದರೆ ಹಣ ಸಿಗಬಹುದು ಸತ್ಯಜ್ಞಾನವಿರದು. ಆದರೂ  ಸಮಾನತೆ ಇರಬೇಕು. ಅಧ್ಯಾತ್ಮ ವಿಚಾರವೆಂದು ತಿರಸ್ಕರಿಸಿದಷ್ಟೂ ಅಜ್ಞಾನವೇ ಬೆಳೆಯೋದು.
ಲೇಖನದಿಂದ ಒಂದು ಪೈಸೆ ಸಿಗದಿದ್ದರೂ  ಜ್ಞಾನ ಬಂದಿದೆ  .ಒಂದು ದೇಶದ ಹಿತದೃಷ್ಟಿಯಿಂದ  ಸರಳವಾಗಿ ಸಾಮಾನ್ಯರಂತೆ  ಸತ್ಯದಿಂದ  ಬದುಕೋದೆ ಕಷ್ಟ.ಅದರಲ್ಲಿ ನಮ್ಮವರೆ ನಮಗೆ ಶತ್ರುವಾದಾಗ ಧರ್ಮ ಸಂಕಟ.  ಒಳಗಿನ ಶಕ್ತಿಯ ಕೂಗಿಗೆ ಕಿವಿಗೊಡದಿರಲು  ಏನಾದರೂ ಹೊರಗಿನ ಕೆಲಸದಲ್ಲಿರಬೇಕಂತೆ

Sunday, August 4, 2024

ಪತಿ ಪತ್ನಿ, ಸ್ನೇಹ ಸಂಬಂಧ ಸತ್ವಯುತವಿರಲಿ

ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು ಸ್ನೇಹ ಎನ್ನುವುದು ಒಂದು ಸಾತ್ವಿಕ ಶಕ್ತಿ.ಇದರಲ್ಲಿ ವ್ಯವಹಾರ ಹೆಚ್ಚಾದರೆ ರಾಜಸವಾಗಿ ತಾಮಸಶಕ್ತಿಯಾಗಿ ಕೆಟ್ಟುಹೋಗುತ್ತದೆ. ಯಾವುದೇ ಸಂಬಂಧ ಉತ್ತಮವಾಗಿರಬೇಕಾದರೆ  ಅದು ಸತ್ವ ತತ್ವ ಸತ್ಯದ ಕಡೆಗಿರಬೇಕು. ಯಾವಾಗ ಅದು ಹೊರಗಿನ ರಾಜಕೀಯದ ಕಡೆಗೆ ಹೊರಟು ಸ್ವಾರ್ಥ ಸುಖಕ್ಕೆ ತಿರುಗುವುದೋ ಆಗದು ಕೇವಲ ನಾಟಕವಾಗಿ ವ್ಯವಹಾರಕ್ಕೆ ಬಳಸಿ  ಕೊನೆಯಲ್ಲಿ ಸತ್ವ ಹಾಗು ಸತ್ಯದಿಂದ ದೂರವಾಗುತ್ತದೆ. ಹೀಗಾಗಿ ಸ್ನೇಹಿತರನ್ನು  ಮಾಡಿಕೊಳ್ಳುವ ಅಗತ್ಯವಿಲ್ಲ.‌ಇದ್ದವರನ್ನು ಸ್ನೇಹದಿಂದ ನೋಡಿಕೊಳ್ಳುವುದು  ಅಗತ್ಯ. ಇದು ಅಷ್ಟು ಸುಲಭವಿಲ್ಲ.
ಯಾವಾಗ ನಾವು ನಿಸ್ವಾರ್ಥ ನಿರಹಂಕಾರದಿಂದ  ಸ್ನೇಹಕ್ಕೆ ಬೆಲೆಕೊಟ್ಟು ಮುಂದೆ ನಡೆಯುವೆವೋ  ಅದು ನಮಗೆ ಸಂತೋಷಕೊಟ್ಟರೆ ಸರಿ ದು:ಖವೇ ಕೊಟ್ಟರೆ ನಾವು ಅಪಾರ್ಥರ ಸ್ನೇಹ ಮಾಡಿದ್ದೇವೆಂದರ್ಥ.
ಈಗಿನ ಕಾಲದಲ್ಲಿ ಇಂತಹ ಪವಿತ್ರವಾದ ಸ್ನೇಹ ಸಂಬಂಧ ನೇರವಾಗಿ ನೋಡಲು ಕಷ್ಟ.ಹೀಗಾಗಿ ಪರಮಾತ್ಮನ ಸ್ನೇಹ ಮಾಡಿದರೆ ಎಲ್ಲರಲ್ಲೂ ಅಡಗಿರುವ ಆ ಪರಮಾತ್ಮನಿಗೇ ತಲುಪುತ್ತದೆ.ಅಂದರೆ ವ್ಯಕ್ತಿಯ ಜೊತೆಗೆ ಸ್ನೇಹ ಬೆಳೆಸುವ ಮೊದಲು ಶಕ್ತಿಯ ಬಗ್ಗೆ ಅರಿವಿದ್ದರೆ ಉತ್ತಮ ಎಂದರ್ಥ.
ಯುವಪೀಳಿಗೆ ಇಂದು ದಾರಿತಪ್ಪಿದೆ ಎಂದರೆ ಅವರ ದೃಷ್ಟಿ ವ್ಯಕ್ತಿಯ ಮೇಲೇ ಇದೆ .ತಮ್ಮೊಳಗೇ ಅಡಗಿದ್ದ ಸತ್ಯ ಸತ್ವ ತತ್ವದ ಅರಿವಿಲ್ಲದ ಶಿಕ್ಷಣ ಪಡೆದ ಮೇಲೆ ಹೊರಗಿನ ವ್ಯಕ್ತಿ ಮಾತ್ರ ಕಾಣೋದು.ಹೀಗಾಗಿ ಮನೆಯವರೊಂದಿಗಿನ ಸ್ನೇಹ ಕುಸಿದು ಹೊರಗಿನ ಅನ್ಯರ ಸ್ನೇಹಕ್ಕಾಗಿ ಹಾತೊರೆದು ಮನೆ ಬಿಟ್ಟು ಹೊರನಡೆದವರೆ ಹೆಚ್ಚು. ಆಚರಣೆಯ ಉದ್ದೇಶ ಚೆನ್ನಾಗಿದೆ.ಆದರೆ ಯಾರ ಜೊತೆಗೆ ಆಚರಿಸಬೇಕೆಂಬ ಅರಿವು ಅಗತ್ಯ. ಒಟ್ಟಿನಲ್ಲಿ  ಎಲ್ಲಾ ಸಂಬಂಧ ಗಳು  ವ್ಯವಹಾರಕ್ಕೆ ಸೀಮಿತವಾದರೆ ಧರ್ಮ ವಿರದು. 
ಉತ್ತಮ ವಿಚಾರಕ್ಕೆ ಸಹಕರಿಸುವವರು ಬೆಳೆದರೆ ಸಂಬಂಧ ದ ಜೊತೆಗೆ ಧರ್ಮ ವಿರುತ್ತದೆ. ನಮ್ಮ ದೈಹಿಕ ಸುಖಕ್ಕಾಗಿ ಆತ್ಮವಂಚನೆ ಮಾಡಿಕೊಂಡು ಸ್ನೇಹವನ್ನು ಬೆಳೆಸಿಕೊಂಡರೆ ಆತ್ಮಹತ್ಯೆಯಾಗುತ್ತದೆ.
ಕಣ್ಣಿಗೆ ಕಾಣದ ಪರಮಾತ್ಮನ  ಶುದ್ದ ಸ್ನೇಹ ಕಣ್ಣಿಗೆ ಕಾಣುವ ಅನ್ಯರ  ಸ್ನೇಹ  ಮಾನಸಿಕವಾಗಿ  ಸಂತೋಷ ಕೊಡುವುದೋ  ಇಲ್ಲವೋ ತಿಳಿದು ನಡೆಯುವುದು ಅಗತ್ಯ. 
ಕಷ್ಟಕಾಲದಲ್ಲಿ  ಹಿಡಿದೆತ್ತುವವರೆ ನಿಜವಾದ ಸ್ನೇಹಿತರು.
ಸಮಯ ನೋಡಿಕೊಂಡು ಕೆಳಗೆ ಹಾಕುವವರು ಸ್ನೇಹಿತರಲ್ಲ.

ಇಂದು  ಭೀಮನ ಅಮವಾಸ್ಯೆ. ಉತ್ತಮ ಪತಿ ಸಿಗಲೆಂದು ಪತಿಯ ಆಯಸ್ಸು ಆರೋಗ್ಯ ಶಕ್ತಿವೃದ್ದಿಯಾಗಿ ರಕ್ಷಣೆ ಇರಲೆಂದು ಆ ಪರಶಿವನ ಪೂಜೆ ಮಾಡುವ ಮೂಲಕ‌ ಸ್ತ್ರೀ ವ್ರತ ಮಾಡುವಳು. ಇಂತಹ ಆಚರಣೆ ವ್ರತ ಪೂಜೆಗಳಿಂದ ನಮ್ಮ ಭಾರತದ ಧರ್ಮ ಸಂಸ್ಕೃತಿ ಸಂಪ್ರದಾಯ ಉಳಿದಿದೆ ಎಂದರೆ ತಪ್ಪಿಲ್ಲ.ಹಿಂದಿನ ಕಾಲದಲ್ಲಿ ಪತಿಯ ಸಂಪಾದನೆಯಲ್ಲಿ ಪತ್ನಿ ಜೀವನ‌ನಡೆಸುತ್ತಿದ್ದಳು.ಪತ್ನಿಯ ಪತಿವ್ರತಾ ಶಕ್ತಿಯಿಂದ ಪತಿಯ ರಕ್ಷಣೆಯಾಗುತ್ತಿತ್ತು. ಈಗ ಕಾಲಬದಲಾಗಿದೆ.ಸಂಪಾದನೆ ಎರಡೂ ಕಡೆಯಿಂದ ಆಗುತ್ತಿದೆ ಆದರೆ ಇಬ್ಬರಿಗೂ ರಕ್ಷಣೆ ಕೊಡೋದಕ್ಕೆ ಹೊರಗಿನ ಸರ್ಕಾರ ನಿಂತಿದೆ ಎಂದರೆ ತಪ್ಪು ಯಾರದ್ದು?
ಆರ್ಥಿಕವಾಗಿ  ಸಬಲರಾಗುವ‌ಮೊದಲು ಧಾರ್ಮಿಕವಾಗಿ ಸಬಲರಾಗುವ ಶಿಕ್ಷಣ ಕೊಡದೆ  ಆಳಿದವರು ಹಲವರು.
ಇದೇ ಇಂದಿಗೂ ನಡೆದಿದೆ.  ಒಳಗಿನ ಪೂಜೆ ಯ ಜೊತೆಗೆ ಹೊರಗಿನ  ಶಿಕ್ಷಣಹೊಂದಿಕೆಯಾಗಿದ್ದರೆ  ವಿರೋಧಗಳಿಗೆ ಸ್ಥಳವಿರುತ್ತಿರಲಿಲ್ಲ. ಒಟ್ಟಿನಲ್ಲಿ ಆಚರಣೆಯ ಹಿಂದಿನ ಗುರಿ ಸತ್ವಯುತವಾಗಿದ್ದರೆ ದೈವತ್ವ.

Saturday, August 3, 2024

ಅರ್ಧ ಸತ್ಯದ ರಾಜಕೀಯ ದಿಂದಾಗುವ ಲಾಭ ನಷ್ಟ

ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲ.ಕಾಣದ ಸತ್ಯ ಅರ್ಥ ವಾಗಲ್ಲ. ಅಧ್ಯಾತ್ಮ ಭೌತಿಕ ಸತ್ಯದ ಹಿಂದೆ ಮುಂದೆ ನಡೆದಂತೆಲ್ಲಾ ಅರ್ಧ ಸತ್ಯವೇ ಬೆಳೆಯೋದು.
ತತ್ವಜ್ಞಾನಿಗಳಿಗೂ ತಂತ್ರಜ್ಞಾನಿಗಳಿಗೂ ಅಂತರ ಬೆಳೆದರೆ ಅದರಲ್ಲಿ  ಅರ್ಧ ಸತ್ಯದ ರಾಜಕೀಯ ಹೆಚ್ಚಾದರೆ ಅತಂತ್ರ ಭಾರತ.ಆತ್ಮನಿರ್ಭರ ಭಾರತದ ಕನಸನ್ನು ಕಂಡವರಿಗೆ ಈಗಿನ ಪರಿಸ್ಥಿತಿ ಅರ್ಥ ಆಗದು. ಇಲ್ಲಿ ಆತ್ಮಜ್ಞಾನದಿಂದಾಗಬೇಕಾದ ಆತ್ಮನಿರ್ಭರ  ತಂತ್ರಜ್ಞಾನದಿಂದ ಹೊರಗೆ ಬೆಳೆಯುತ್ತಾ ಹೊರಗೆ ಹೋದವರೆ ಹೆಚ್ಚಾದರೆ ಒಳಗಿರುವವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಆತ್ಮ ಒಂದು ಅಗೋಚರ ಶಕ್ತಿ. ಭಾರತ ಒಂದು ದೇಶ.ಆ ದೇಶದೊಳಗಿನ ಅಸಂಖ್ಯಾತ ಅತೃಪ್ತ ಆತ್ಮಗಳು ತನ್ನ  ಶಕ್ತಿ ಪ್ರದರ್ಶನ ಮಾಡಿದರೆ ಕುಣಿದು ಕುಪ್ಪಳಿಸುವವರಿಗೇನೂ ಕೊರತೆಯಿಲ್ಲ. ಅದೇ ತೃಪ್ತಿಯಿಂದ ಬದುಕುವ  ಸಾಮಾನ್ಯ ಜನರನ್ನು  ಹೆದರಿಸಿ ಬೆದರಿಸಿ ಮನೆಯಿಂದ ಹೊರಗೆ ತಂದು ಸಾಲದ ಮಡಿಲಿನಲ್ಲಿ ಮಲಗಿಸುವವರಿಗೂ ಕೊರತೆಯಿಲ್ಲ.
ಕೊರತೆಯಿರೋದು ಅಧ್ಯಾತ್ಮ ದ ಮೂಲ ಅರ್ಥ ತಿಳಿಯದೆ  ಶಿಕ್ಷಣದಲ್ಲಿ  ಮಕ್ಕಳಿಗೆ ತುಂಬಲಾಗುತ್ತಿರುವ  ಅನಾವಶ್ಯಕ ವಿಷಯವನ್ನು ವಿರೋಧಿಸುವ ಪೋಷಕರಲ್ಲಿ. ದೇಶದ ಭವಿಷ್ಯ ಅದರ ಶಿಕ್ಷಣದಲ್ಲಿರುತ್ತದೆನ್ನುವುದು ಸತ್ಯ. ವಿದೇಶದಲ್ಲಿ ನ ಮಕ್ಕಳ ವಿದ್ಯಾಭ್ಯಾಸವು ಅವರ ಪ್ರತಿಭೆ ಜ್ಞಾನವನ್ನು ಅವಲಂಬಿಸಿರುತ್ತದೆನ್ನುವರು. ಆದರೆ ನಮ್ಮ ಭಾರತದಲ್ಲಿ ವಿದೇಶಿಗಳ ಜ್ಞಾನ ಭಾಷೆ,ಸಂಸ್ಕೃತಿ ಯನ್ನು ಎತ್ತಿ ಹಿಡಿಯುವುದೇ  ಪ್ರಗತಿ ಎನ್ನುವ ಮಟ್ಟಿಗೆ ಶಿಕ್ಷಣ ಬೆಳೆದಿದೆ ಎಂದರೆ ಮೂಲ ಜ್ಞಾನವನ್ನು ಗುರುತಿಸದೆ ಹೊರಗಿನಿಂದ ಬೆಳೆಸಿದ್ದೇ ಆತ್ಮದುರ್ಭಲತೆಗೆ ಕಾರಣವೆಂದಾಯಿತು.
ಅಧ್ಯಾತ್ಮ ಪ್ರಚಾರವೆಂದರೆ ಪುರಾಣ ಇತಿಹಾಸದ ಕಥೆಗಳ ಪ್ರಚಾರವೋ , ಪೂಜೆ ಪುನಸ್ಕಾರ ಯಾಗ ಯಜ್ಞ ಹೋಮ ಹವನವೋ  ಎಂದಾಗ ಸಾಕಷ್ಟು ವರ್ಷಗಳ ಕಾಲ ನಡೆಸಿರುವ ಇವುಗಳಿಂದ  ಸತ್ಯಜ್ಞಾನ ಬೆಳೆಯಿತೆ? ಸತ್ಯವನ್ನು ಹೇಳುವುದರಿಂದ ಸಾಕಷ್ಟು ವಿರೋಧಿಗಳು ಜನ್ಮ‌ಪಡೆಯುವರೆಂದರೆ  ಅಸತ್ಯದಿಂದ ಧರ್ಮ ಉಳಿಯಿತೆ?
ಎಲ್ಲೇ ಇದ್ದರೂ ಭೂಮಿಯ ಋಣ ಸಂದಾಯವಾಗೋದಕ್ಕೆ ಧರ್ಮ ದ ಜೊತೆಗೆ ಸತ್ಯವಿರಬೇಕೆಂದರು. ಸತ್ಯವಿಲ್ಲದ ಧರ್ಮ ಕುಂಟು ಧರ್ಮ ವೇ ಇಲ್ಲದ ಸತ್ಯ ಕುರುಡು.
ಇಲ್ಲಿ ಧರ್ಮದ ವಿಚಾರ ಬಂದರೆ ನಿಮ್ಮದು ಯಾವ ಧರ್ಮ? ಪಂಗಡ,ಜಾತಿ ..ಕುಲ ಗೋತ್ರ...ಪ್ರಶ್ನೆ ಏಳುತ್ತದೆ.ಆದರೆ ನೀವು ಯಾವ ಭೂಮಿಯಲ್ಲಿರುವಿರಿ? ಯಾವ ದೇಶದ ಋಣದಲ್ಲಿರುವಿರಿ? ಎಂದು ಪ್ರಶ್ನೆ ಮಾಡಿಕೊಂಡರೆ ಅದರ ಋಣ ತೀರಿಸಲು  ಸತ್ಕರ್ಮ, ಸತ್ಸೇವೆ ಸದಾಚಾರ ಸತ್ಯ ದೆಡೆಗೆ ಆತ್ಮ ನಡೆಯಲೇಬೇಕು. ಸಾಧ್ಯವಿಲ್ಲ ವಾದರೆ  ಪ್ರಚಾರಯಾಕೆ? ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ. ಅದಕ್ಕಿಂತ  ಮೌನವಾಗಿದ್ದು ತನ್ನ ಆಂತರಾತ್ಮನ ಕರೆಗೆ ಓಗೊಟ್ಟು ನಡೆಯುವುದೇ ಶ್ರೇಯಸ್ಕರ. 
ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲಕೋಟಿಗಳು ಉದ್ದರಿಸುವುದು...ಆದರೆ ಕುಲಕೋಟೆಗಳನ್ನು ಬಿಟ್ಟು ಹೊರಬಂದು ಜನರನ್ನು ಹೆದರಿಸುತ್ತಿದ್ದರೆ  ಅನರ್ಥಕ್ಕೆ ಕಾರಣ.ಇದು ರಾಜಕೀಯದಿಂದ ಬೆಳೆದಿರುವಾಗ ರಾಜಕಾರಣಿಗಳಿಗೆ ಉತ್ತಮ ಜ್ಞಾನದ ಶಿಕ್ಷಣ ಕೊಟ್ಟು ದೇಶದ ಅಧಿಕಾರ ಕೊಡಿಸುವುದೇ ಧರ್ಮ ಕಾರ್ಯ ವಾಗಿತ್ತು. ಪ್ರಜಾಪ್ರಭುತ್ವ ಹದಗೆಟ್ಟಿದೆ  ಎಂದರೆ ಪ್ರಜೆಗಳಿಗೆ ಸರಿಯಾದ ಶಿಕ್ಷಣ ಕೊಡುವಲ್ಲಿ  ಸೋತಿದೆ ಎಂದರ್ಥ.

ಸದ್ವಿಚಾರಕ್ಕೆ ಮಾತು ಮುತ್ತಿನಂತಿರಬೇಕೆನ್ನುವರು

ದಿನದಲ್ಲಿ ಒಮ್ಮೆಯಾದರೂ ನಿಮ್ಮ ಜೊತೆ ನೀವೇ  ಮಾತಾಡಿಕೊಳ್ಳಿ,

ಇಲ್ಲದಿದ್ದರೆ ಈ ಪ್ರಪಂಚದಲ್ಲೇ  ಅತ್ಯುತ್ತಮ ವ್ಯಕ್ತಿಯನ್ನು ನೀವು ಕಳೆದು ಕೊಳ್ಳುತ್ತೀರಿ.

         - ಸ್ವಾಮಿವಿವೇಕಾನಂದ
ಎಲ್ಲಾ ದ್ಯಾನಗಳಲ್ಲಿ ಶ್ರೇಷ್ಠ ವಾದದ್ದೆ ಮೌನ ದ್ಯಾನ. ಮೌನವಾಗಿರುವಾಗಷ್ಟೆ ನಮ್ಮ ಆತ್ಮಾವಲೋಕನ.  ಯಾವುದೇ ಹೊರಗಿನ  ದೇವರು,ಧರ್ಮ ದೇಶ ಭಾಷೆ, ಸಂಸ್ಕೃತಿ, ಸಂಪ್ರದಾಯ,ಸಾಹಿತ್ಯ ಸಂಗೀತ ಕಲೆ  ಶಿಕ್ಷಣ ಮೌನವಾಗಿ ಬೆಳೆದಿಲ್ಲ ಹಾಗಾಗಿ ಇಂದಿಗೂ ಮಾನವನ ಮಾತೇ ಶಾಸನವಾಗಿ  ಮಾತು‌ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂದಂತಾಗಿದೆ.ಹಾಗಾದರೆ ಮಾತಿನಿಂದ ಕೆಲಸ ಆಗೋದಿಲ್ಲವೆ ಎಂದರೆ ಮಾತಿನಿಂದಲೇ ಕೆಲಸ ನಡೆಯೋದು.ಆದರೆ  ಅನಾವಶ್ಯಕ ಮಾತು ಹರಟೆ ಚರ್ಚೆ ವಾದ ವಿವಾದಗಳಿಂದ ಕೆಲಸ ಕೆಡುವುದೇ ಹೆಚ್ಚು. ಇಲ್ಲಿ ಅವಶ್ಯಕವಿದ್ದ ಕಡೆ ಮಾತನಾಡೋರು ಕಡಿಮೆ ಅನಾವಶ್ಯಕ ಮಾತನಾಡೋರ ಹಿಂದೆ ಬಿದ್ದವರು ಹೆಚ್ಚು. 
ಮಾಧ್ಯಮ ಗಳಲ್ಲಿ ಪ್ರಸಾರವಾಗುವ ಎಷ್ಟೋ ಕಾರ್ಯಕ್ರಮವಾಗಲಿ, ಹೊರಗಿನ ಕಾರ್ಯಕ್ರಮಗಳಲ್ಲಿ ಮಾತನಾಡುವ ಎಷ್ಟೋ ರಾಜಕೀಯ ಭಾಷಣವಾಗಲಿ ,ಹಾಗೆ ಮಕ್ಕಳಿಗೆ ತಿಳಿಸಲಾಗುತ್ತಿರುವ ಎಷ್ಟೋ ವಿಷಯವಾಗಲಿ ಇದರಲ್ಲಿ ಸತ್ಯವೇ ಇರೋದಿಲ್ಲವಾದಾಗ ಇದರಿಂದಾಗಿ ಮಕ್ಕಳ ಭವಿಷ್ಯ ಉತ್ತಮವಾಗುವುದೆ? ಅಥವಾ ನಮ್ಮ ಸಂಸಾರದಲ್ಲಿ ಶಾಂತಿಯಿರುವುದೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕಾದವರೆ ಮೌನವಹಿಸಿ  ನನಗೂ ಇದಕ್ಕೂ ಸಂಬಂಧ ವಿಲ್ಲವೆನ್ನುವಂತಿದ್ದರೆ ಅದ್ವೈತ ವಾಗದು. ಒಟ್ಟಿನಲ್ಲಿ ನಾವೆಲ್ಲರೂ ಮಾತನಾಡುವ ಮನುಷ್ಯರೆ ಆಗಿದ್ದರೂ ಕೆಲವೇ ಕೆಲವರ ಮಾತಿಗೆ ಹೆಚ್ಚು ಸಹಕಾರ ಸಹಾಯ ಪ್ರೋತ್ಸಾಹ ದೊರೆತು ನಿಜವಾಗಿಯೂ ಮೌನವಾಗಿರುವವರ ಸತ್ಯ ಹೊರ ಬರದಂತೆ  ತಡೆಯುವುದರಿಂದ  ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಸತ್ಯ ಕೊನೆಯಲ್ಲಿ ಅರ್ಥ ವಾಗುತ್ತದೆ.
ಮಕ್ಕಳ ಮಾತಿನಲ್ಲಿ ಸತ್ಯವಿರುತ್ತದೆ.ಆದರೆ ದೊಡ್ಡವರು ಅದನ್ನು ನಿರ್ಲಕ್ಷ್ಯ ಮಾಡಿ ತಡೆಯುವರು.ಅದೇ ದೊಡ್ಡವರಲ್ಲಿ ಸತ್ಯವಿಲ್ಲದಿದ್ದರೂ ಮಕ್ಕಳು ಮಾತು ಕೇಳದಿದ್ದರೆ ಶಿಕ್ಷೆ ನೀಡುವರು.ಹೇಗಿದೆ ನಮ್ಮ ರಾಜಕೀಯ ಬುದ್ದಿವಂತಿಕೆ.
ಮೌನದಿಂದ ಏನೂ ಸಾಧನೆಯಾಗದು ಎನ್ನುವರು.ಇದು ಭೌತಿಕದಲ್ಲಿ ಸತ್ಯವಾದರೂ ಅಧ್ಯಾತ್ಮ ದಲ್ಲಿ ಮೌನದ್ಯಾನವೇ ಶ್ರೇಷ್ಠ ವಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದ್ಯಾನದ ಶಿಬಿರಗಳು ನಡೆಯುತ್ತಿದೆ. ಎಲ್ಲೆಲ್ಲಿಂದಲೋ ಜನರು ಶಿಬಿರಕ್ಕೆ ಬಂದು ದ್ಯಾನ ಕಲಿತು ಹೋಗುತ್ತಿದ್ದಾರೆ. ಮನೆಗೆ ಹೋದನಂತರ ಮೌನವಾಗಿರಬಹುದೆ? ವ್ಯವಹಾರಕ್ಕೆ ಇಳಿದ‌ಮನಸ್ಸಿಗೆ ಇದು ಅಸಾಧ್ಯ. ಕೊನೆಪಕ್ಷ ನಮ್ಮ ಮನೆಯೊಳಗೆ ‌ಮೌನವಾಗಿರೋಣವೆಂದರೂ ದ್ಯಾನಕ್ಕೆ ಹೋಗದವರ ಜೊತೆಗೆ ಅಸಾಧ್ಯ. ಒಬ್ಬರೆ ಇದ್ದಾಗ ಸಾಧ್ಯವಿದೆ.ಹಿಂದಿನ ಋಷಿಮುನಿಗಳ ಆಂತರಿಕ ಜ್ಞಾನಶಕ್ತಿ ತಪಸ್ಸಿನಿಂದ ಮೌನದಿಂದ  ವೃದ್ದಿಯಾಗಿತ್ತು.ಒಳಗೇ ಅಡಗಿರುವಜಗತ್ತನ್ನು ಮೌನವಾಗಿ ಅರ್ಥ ಮಾಡಿಕೊಂಡು ಹೊರಜಗತ್ತನ್ನು ತಿದ್ದುವ ಪ್ರಯತ್ನ ನಡೆಸಿದ್ದರು. ಯಾವಾಗ ಕಲಿಕೆಯ ದಾರಿ ಹೊರಗೆ ಹೆಚ್ಚಾಯಿತೋ ದ್ಯಾನವೂ ಹಿಂದುಳಿಯಿತು.ವ್ಯವಹಾರ ಬೆಳೆಯಿತು.ಮೌನವಾಗಿ  ಹಣಗಳಿಸುವ ತಂತ್ರ ಹೆಚ್ಚಾಗಿ ತತ್ವ‌ಕುಸಿಯಿತು. ಇದೇ ಇಂದಿಗೂ ಮಾನವನಿಗೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಒಟ್ಟಿನಲ್ಲಿ ಮೌನವಾಗಿದ್ದಷ್ಟೂ ಶಾಂತಿ ಎನ್ನುವರು. ಮಾತು ಬೆಳೆದಷ್ಟೂ ಅಶಾಂತಿ. ನಾವೆಲ್ಲರೂ ಮಾನವರೆ ಎನ್ನುವ ಸತ್ಯವನ್ನು ಅಲ್ಲಗೆಳೆಯುವುದೇ  ಮಾತಿಗೆ ಕಾರಣವಾಗಿದೆ.
ನಮ್ಮ ಮನಸ್ಸು ಇದಕ್ಕೆ ಒಪ್ಪದಿರೋದೆ ಇದರ ಮೂಲ. ಹಾಗಾದರೆ ಇದರಲ್ಲಿ ಸತ್ಯವಿಲ್ಲವೆ? ಸತ್ಯ ಇದ್ದರೂ ಯಾಕೆ ಒಪ್ಪಲಾಗದು? ಕಾರಣ ನಾವು ಹೊರಗಿನಿಂದ ಸತ್ಯ ತಿಳಿದು ಒಳಗೇ‌ಮೌನವಾಗಿರುವ ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟ.
ಒಳಗೆ ಶುದ್ದವಿದ್ದರೂ ಹೊರಗಿನ ಅಶುದ್ದತೆಗೆ ಹೆಚ್ಚು ಮಾತು .
ಯಾವಾಗ ಈ ಅಶುದ್ದ ಮಾತು‌ಹರಡುವುದೋ ಒಳಗಿದ್ದ ಶುದ್ದತೆ ಹಾಳಾಗುವುದು. ಇದೇ ಕಾರಣಕ್ಕಾಗಿ ಅಧ್ಯಾತ್ಮ ಸಾಧಕರು ಮಾತು ಕಡಿಮೆ ಮೌನ ಹೆಚ್ಚು ಮಾಡಿಕೊಂಡು ಶಾಂತವಾಗಿರುವರು. ಯಾವಾಗ ಸತ್ಯ ತಿಳಿದೂ ಮಾತಾಡದೆ ಇರುವರೋ ಅದನ್ನು ದುರ್ಭಳಕೆ ಮಾಡಿಕೊಳ್ಳುವ ಮಾತುಗಾರರು ಅಸತ್ಯ ಅನ್ಯಾಯ ಅಧರ್ಮವನ್ನು ಹೊರಗೆ ಹರಡುತ್ತಾ ಜನರೊಳಗಿದ್ದ ಸತ್ಯಕ್ಕೆ ಬೆಲೆಕೊಡದೆ ಜನರನ್ನು ಆಳಾಗಿ ಬಳಸಿ ರಾಜಾರೋಷದಿಂದ ಭೂಮಿಯನ್ನು ತನ್ನ ವಶಕ್ಕೆ ಪಡೆಯಲು ಮಹಿಳೆ ಮಕ್ಕಳನ್ನೂ ಬಿಡದೆ ಮನೆಯಿಂದ ಹೊರಗೆಳೆದು ದುಡಿಸಿಕೊಳ್ಳುವರು. ಯಾವಾಗ ಸ್ತ್ರೀ ಮನೆ ಹೊರಗೆ ಬರುವುದು ಅನಿವಾರ್ಯ ವಾಗುವುದೋ  ಹೊರಗೆ ಮಾತು ಬೆಳೆಯುತ್ತಾ ಮೌನಕ್ಕೆ ಬೆಲೆಯಿಲ್ಲವಾಗೋದು. ಹೆಚ್ಚು ಮಾತು ಮನಸ್ಸಿಗೆ ಕಿರಿಕಿರಿಯಾದಾಗ ಮತ್ತೆ ಮೌನದ್ಯಾನದ ಮೊರೆ ಹೋದರೂಬನ ಒಳಗೇ ಬೆಳೆದ ಮಾತಿನಶಕ್ತಿ ಇದನ್ನು ಒಪ್ಪದು.ತಾತ್ಕಾಲಿಕ ಶಾಂತಿ ಬೇಕೋ ಶಾಶ್ವತ ಶಾಂತಿಯೋ ಇದರ ಬಗ್ಗೆ ನಾವೇ ಮೌನವಾಗಿ ಅರಿತು ಬಾಳಿದರೆ ನಮ್ಮ ಮಾತಿನಿಂದ ಯಾರಿಗೆ ಲಾಭ‌ನಷ್ಟ ಎಂದು ತಿಳಿಯಬಹುದು.
ಮಾತೇ ಬಂಡವಾಳ ಮಾಡಿಕೊಂಡವರಜೀವನದಲ್ಲಿ ಶಾಂತಿ ಇರದು. ಆದರೂ ಮಾತಿನಲ್ಲಿ ಸತ್ಯ ಧರ್ಮ ನ್ಯಾಯ ನೀತಿಯಿದ್ದರೆ  ಮೌನವಾಗಿಯಾದರೂ  ಹಿಂದೆ  ಧರ್ಮರಕ್ಷಣೆ ಸಾಧ್ಯ.ಹಿಂದೂಗಳ ಈ ಸ್ಥಿತಿಗೆ ಅನ್ಯಧರ್ಮದವರ ನಕಾರಾತ್ಮಕ ವಿಚಾರದ ಮಾತೇ ಕಾರಣ. ಅದೇ ನಮ್ಮ ಧರ್ಮದವರ ಬಗ್ಗೆಯೂ ಇದೆ ಎಂದರೆ ಸಕಾರಾತ್ಮಕ ಚಿಂತನೆ ನಮ್ಮಲ್ಲಿ ಕುಸಿದಿದೆ. ಅಧಿಕಾರ ಹಣ ಸ್ಥಾನವಿದ್ದರೆ ಏನು ಬೇಕಾದರೂ ಮಾತನಾಡಬಹುದು ಮಾಡಬಹುದು,ಯಾರನ್ನಾದರೂ ಆಳಬಹುದೆನ್ನುವುದೆ ಅಜ್ಞಾನ. ಇದನ್ನು ಮೌನವಾಗಿ ಪರಮಾತ್ಮ ನೋಡುತ್ತಿರುವ ಸತ್ಯದ ಅರಿವಿಲ್ಲದೆ  ಮೌನವಾಗಿರುವವರನ್ನೂ ಬಡಿದೆಬ್ಬಿಸಿ ಹೊರಗೆ ಹೋರಾಟ ಹಾರಾಟ‌ಮಾರಾಟದ ಮಾತು ಆಡಿದರೆ ಧರ್ಮ ಹಿಂದುಳಿಯೋದಿಲ್ಲ  ಜನರೆ ಹಿಂದುಳಿಯುವರು.
ಯಾರದ್ದೋ ವಿಚಾರ ತಿಳಿದು ತಿಳಿಸಿ ಬೆಳೆಸಿದರೆ ಅದು ನನ್ನ ವಿಚಾರವಾಗುವುದೆ? ಮೊದಲು ನಮ್ಮ ಆತ್ಮಕ್ಕೆ ಯಾವ ವಿಷಯ ಬೇಕೆಂಬುದನ್ನರಿತು  ಅದನ್ನು ಮೌನವಾಗಿ ತಿಳಿದು ನಡೆಯುವುದರಿಂದ  ಹೊರಗಿರುವ ನಕಾರಾತ್ಮಕ ವಿಷಯದಿಂದ  ಮೌನವಾಗಿ ದೂರವಿರಲು ಸಾಧ್ಯ. ಎಷ್ಟೋ ದೇವತೆಗಳ ದ್ಯಾನ ಮಾಡಿದರೂ ಮೂಲದ ಒಂದೇ ದೇವರ ಕಡೆಗೆ ಮನಸ್ಸು ಹೋಗದಿದ್ದರೆ‌ಮಾತೇ ಬೆಳೆಯೋದು.
ಎಲ್ಲಾ ದೇವತೆಗಳು ಮಾತನಾಡದೆಯೇ ಕೆಲಸ ಮಾಡುವರು.ಅಸುರ ಶಕ್ತಿಯೇ  ಇದರ ವಿರುದ್ದ ನಿಂತು ಕೂಗೋದು. ಕೂಗಿದವರಿಗೆ ಸಾಕಷ್ಟು ಸಹಕಾರ ಹೊರಗೆ ಸಿಗಬಹುದು.ಆದರೆ ಒಳಗಿರುವ ಶಕ್ತಿ ಇದಕ್ಕೆ ವಿರುದ್ದವಿದ್ದರೆ ಯುದ್ದವಾಗುತ್ತದೆ ಜೀವ ಹೋಗುತ್ತದೆ. ಮೌನವಾಗಿ  ಇದನ್ನು ಓದಿ ಪ್ರತಿಕ್ರಿಯೆ  ಮೌನವಾಗಿಯೇ ನೀಡಬಹುದು. 
ಮಾತಿಗಿಂತ ಕೃತಿಯೇ ಮೇಲು.  ಮಾತು ಬಲ್ಲವನಿಗೆ ಜಗಳವಿಲ್ಲ. ಮೌನವಾಗಿದ್ದವರಿಗೆ ಜಗವೇ ಎಲ್ಲಾ. ಜಗತ್ತಿನಲ್ಲಿ ಇದ್ದೂ ಇಲ್ಲದಂತವರ ಮೌನ  ಯಾರಿಗೂ ತಿಳಿಯಲ್ಲ.

Sunday, July 28, 2024

ವೇದಾಂತಗಳಲ್ಲಿ ಅಂತರವಿದೆಯೆ?

ವೇದಾಂತಗಳ ಅಂತರದಲ್ಲಿ ತ್ರಿಮೂರ್ತಿಗಳನ್ನೂ ಸಮಾನವಾಗಿ ಕಾಣುವ ತತ್ವ ಅದ್ವೈತ. ಸೃಷ್ಟಿ  ಸ್ಥಿತಿ ಲಯವಿಲ್ಲದೆ ಜಗತ್ತಿಲ್ಲವೆ ನ್ನುವುದನ್ನು ತಿಳಿಯುವುದಕ್ಕೆ ತತ್ವದರ್ಶನವಾಗ ಬೇಕೇಹೊರತು ಅದರೊಳಗಿರುವ ತಂತ್ರವಲ್ಲ. ತಂತ್ರ ಬೆಳೆದಾಗಲೇ ಅತಂತ್ರ ಜೀವನವಾಗೋದು ಕಲಿಯುಗದ ಶಿಕ್ಷಣವೇ ತಂತ್ರಮಯವಾಗಿದ್ದರೆ‌ ತತ್ವ ಹೇಗೆ ಕಾಣಿಸುತ್ತದೆ? ವ್ಯವಹಾರಕ್ಕೆ ಸೀಮಿತವಾದರೆ ಹಣ ಅಗತ್ಯ.ಧರ್ಮಕ್ಕೆ ಸೀಮಿತವಾದರೆ‌ ಸತ್ಯಜ್ಞಾನ ಅಗತ್ಯ.
ಸತ್ಯ ಕಣ್ಣಿಗೆ ಕಾಣೋದಿಲ್ಲ ಅರಿವಿಗೆ ಅರ್ಥ ವಾಗಬೇಕಷ್ಟೆ.ಅರಿವಾಗೋದು ಅನುಭವಿಸಿದ ಮೇಲೇ. ಸತ್ಯದ ದಾರಿ‌ಕಠಿಣವಾದ್ದರಿಂದ ಅಸತ್ಯದ ಸುಲಭದ ದಾರಿ ಹಿಡಿಯೋದರಿಂದ ಹೆಚ್ಚಿನ ಹಣದ‌ಲಾಭವಾಗುತ್ತದೆ ಎನ್ನುವ ಸತ್ಯಕ್ಕೆ ಬೆಲೆಹೆಚ್ಚು.
ಭೂಮಿ ನಡೆದಿರೋದೆ ಸತ್ಯ ಧರ್ಮದ ಅಡಿಪಾಯದಲ್ಲಿ. ಈ ಅಡಿಪಾಯ ಹಾಕಿದವರು ಉನ್ನತ ಮಟ್ಟಕ್ಕೆ ಏರಿದ್ದರೂಕಾಣೋದಿಲ್ಲ ಗ್ರಹನಕ್ಷತ್ರಗಳ ಚಲನವಲನಗಳ ಹಿಂದಿನ ವಿಜ್ಞಾನ ಕಣ್ಣಿಗೆ ಕಾಣದು. ಭೂಮಿ ಒಂದು ಗ್ರಹವಷ್ಟೆ. ಈ ಗ್ರಹದ ಋಣ ತೀರಿಸಲು  ಮನುಕುಲದ ಜನನ.ಹಾಗಾದರೆ ನಮ್ಮ ಜನನದಿಂದ ಭೂಮಿಗೆ ಲಾಭ ನಷ್ಟವಿದೆಯೆ? ಭೂಮಿಯನ್ನು ಆಳುವುದಕ್ಕೆ ಸಾಕಷ್ಟು ತಂತ್ರ ಪ್ರಯೋಗವಾಗಿದ್ದರೂ ಯಾವುದೇ ತತ್ವದ ಮೂಲ ಗುರಿ ತಲುಪಲಿಲ್ಲ. ಜನಜೀವನದಲ್ಲಿ ಸಾಕಷ್ಟು ಹೊರಮುಖದ ಬದಲಾವಣೆ ಒಳಮುಖದ ದರ್ಶನ ವಾಗದಂತಾಗಿದೆ.
ಎಷ್ಟು ಜನಬಲ ಹಣಬಲ. ಅಧಿಕಾರಬಲವಿದ್ದರೂ ದೈವಬಲಕ್ಕೆ ಸರಿಸಾಟಿಯಲ್ಲ. ದೈವತ್ವಕ್ಕೆ ಎದುರಾಗಿ‌ನಿಂತು  ಒಗ್ಗಟ್ಟನ್ನು  ಬೆಳೆಸುವೆ ಎಂದಾಗಲೂ ದೈವಶಕ್ತಿ ತನ್ನದೇ ಆದ ರೀತಿಯಲ್ಲಿ  ನಡೆದು ಬಂದಿರುತ್ತದೆ.ಅಂದರೆ ಆತ್ಮವೇ ದೇವರು ಎಂದಾಗ ಎಲ್ಲರ ಆತ್ಮ ಪರಿಶುದ್ದವೆ ಆದರೆ ಜೀವನದಲ್ಲಿ ತತ್ವವಿದೆಯೆ ತಂತ್ರವಿದೆಯೆ ಎನ್ನುವ ಹಂತಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಸರ್ಕಾರ ಅಗತ್ಯವಿಲ್ಲ.
ನಮ್ಮ ಮನಸ್ಸು ಆತ್ಮದೊಂದಿಗಿದ್ದರೆ ಅದೇ ಅಧ್ಯಾತ್ಮ ಚಿಂತನೆ.
ಅದ್ವೈತ ಎಲ್ಲರನ್ನೂ ಕೂಡಿಸುವಾಗ ದ್ವೈತವಿರದು. ಆಳುವಾಗ ದ್ವೈತವಿರುತ್ತದೆ ಆದರೆ, ಆಳುವವರ ದೃಷ್ಟಿ ಅಧ್ಯಾತ್ಮ  ಪ್ರಗತಿಯಾದಾಗ  ಒಂದೇ ಆಗುತ್ತದೆ. ದ್ವೈತಾದ್ವೈತ ಒಂದೇ ನಾಣ್ಯದ ಎರಡು ಮುಖಗಳು. 


ಶ್ರೀ ಗುರುಗಳು ನಂಬಿದ ದೇವರ ನ
 ನಾನೂ ನಂಬಿ ನಡೆದರೆ ಕಲ್ಯಾಣ.  ಗುರುವನ್ನೇ ನಾನು  ನಡೆಸಿರೋದೆನ್ನುವ ಅಹಂಕಾರ ವಿದ್ದರೆ  ? ಮರಣ.

ಮಕ್ಕಳಿರುವಾಗಲ್ಲಿ ಆತ್ಮಜಾಗೃತವಾಗಿರುತ್ತದೆ

ಸಣ್ಣ ವಯಸ್ಸಿರುವಾಗ ನನಗೆ ಎಲ್ಲೋ ಮೂಲೆಯಲ್ಲಿರುವ ಒಂದು ಕೂಗು ಕೇಳುತ್ತಿತ್ತು. ಅದರೊಂದಿಗೆ ‌ಮೌನವಾಗಿ ಮಾತನಾಡಿದರೂ ಹೊರಗಿನ‌ಮಾತು ಕಥೆ ಬಗ್ಗೆ ಹೆಚ್ಚಿನ ಗಮನ ಕೊಡುವಾಗ  ಒಳಗಿನ ದ್ವನಿ ಅಡಗಿ ಹೋಗಿತ್ತು.
ಹೀಗೇ ಬೆಳೆದಂತೆ  ಒಮ್ಮೊಮ್ಮೆ  ಎಲ್ಲೋ ಸರಿಯಿಲ್ಲ.ಸತ್ಯಕ್ಕೆ ‌ಬೆಲೆಯಿಲ್ಲ.ಅಸತ್ಯ ಹೇಳಿದರೆ ನಂಬುವರು ಎಂದಾಗ ಅಸತ್ಯ ಹೇಳೋದರಿಂದ ಯಾರಿಗೂ ಬೇಸರವಾಗದು ಎನ್ನುವುದರ ಅರಿವಾಯಿತು.ಪ್ರತಿಯೊಂದು  ಅಸತ್ಯದ ನುಡಿಗೆ ತಕ್ಷಣದ ಪ್ರತಿಕ್ರಿಯೆ ಬರಲು ಪ್ರಾರಂಭವಾದಾಗ ಸತ್ಯವೇ ಉತ್ತಮ ಬೈಸಿಕೊಂಡರೂ ಸರಿ ಎನ್ನುವ ಹಾಗಾಯಿತು. ಆದರೆ ನಮ್ಮ ಆಸೆ ಆಕಾಂಕ್ಷೆಗಳನ್ನು  ಬದಿಗಿಟ್ಟು ಸತ್ಯದ ಪರ ನಿಲ್ಲುವುದು ಸುಲಭ ವಿಲ್ಲ. ಕೊನೆಪಕ್ಷ ಬೇರೆಯವರ ಆಸೆಗಾಗಿ ಅಸತ್ಯ ನುಡಿದರೂ  ಸಂತೋಷವೆನಿಸುತ್ತಾ  ಬೇರೆಯವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯ? ವಿದ್ಯೆಯಲ್ಲಿ ಅಂತಹ ವಿಚಾರವಿದ್ದರೆ‌ಅಳವಡಿಸಿಕೊಳ್ಳಬಹುದು. ಆಗಲೇ ಪುಸ್ತಕದ‌ವಿಷಯದ‌ಬಗ್ಗೆ ಗಮನಿಸುವ  ಅಭ್ಯಾಸ. ಅದರಲ್ಲಿ ಅಂತಹ ವಿಷಯ ಕಾಣದಾದಾಗ ಇದನ್ನು ಓದಿ ಯಾವ‌ಕೆಲಸ ಸಿಗಬಹುದು ಎನ್ನುವ ಪ್ರಶ್ನೆಗೆ ಉತ್ತರ ಕೊನೆಗೂ ಸಿಗಲಿಲ್ಲ.
ಡಿಗ್ರಿ ಮಾಡೋವರೆಗೂ ಒಳಗಿನ‌ಕೂಗು ಹೊರಗಿನ‌ನೋವು ಯಾರಿಗೂ ಅರ್ಥ ವಾಗದೆ‌ ತನ್ನದೇ ‌ಜಗತ್ತಿನಲ್ಲಿ ನಾನು ಒಬ್ಬಂಟಿ. ಕೊನೆಯಲ್ಲಿ  ಹೊಸಜಗತ್ತಿನ ಪರಿಚಯ ಒಳಗೇ ಆದಾಗಂತೂ ಹೊರಗಿನ ಜಗತ್ತಿನಲ್ಲಿ ಸಿಲುಕಿಕೊಂಡಿರುವ ಸತ್ಯ ತಿಳಿದು‌ನಿದಾನವಾಗಿ ಹಿಂದಿರುಗಲು ಸತ್ಯದ  ಕಡೆಗೆ‌ ನಡಿಗೆ.
ಈಗಲೂ ಎಷ್ಟೋ ವಿಚಾರಗಳಲ್ಲಿ ರುವ ಗೊಂದಲಕ್ಕೆ  ಗುರುಗಳಿಂದ ಸಿಗುವುದೆನ್ನುವ ಕಾರಣದಿಂದ ಓಡಾಟ‌ನಡೆದರೂ  ಸರಿಯಾದ ಉತ್ತರ ಹೊರಗಿನಿಂದ ಸಿಗದೆ ಒಳಗೇ ಸಿಕ್ಕಿದೆ. ಆದರೂ ಆತ್ಮ ತೃಪ್ತಿ ಗೆ ಸ್ವತಂತ್ರ ವಿರಬೇಕು.ನಾವೇ ಬಂಧನದಲ್ಲಿರುವಾಗ ಬೇರೆಯವರಿಗೆ ಸ್ವತಂತ್ರ ಗೊಳಿಸಲಾಗದು. ಅದಕ್ಕೆ ಹೇಳೋದು ನಿನ್ನೊಳಗೆ ಎಲ್ಲಾ ಸತ್ಯ ಅಡಗಿದೆ.ದೇವರಿದ್ದಾರೆ ಧರ್ಮವಿದೆ ಹುಡುಕಬೇಕು ಎಂದು.ಇದನ್ನು ಹೊರಜಗತ್ತಿನಲ್ಲಿ ಹುಡುಕಿದರೂ ಸಿಗದು.ಇಲ್ಲಿ ಯಾರೋ ಹೊರಗಿನಿಂದ ಬಂದು ಸತ್ಯ ತುಂಬಲಾಗದು.ಶಿಕ್ಷಣ  ನೀಡಿದರೂ ಮೂಲದಲ್ಲಿ ಉತ್ತಮ ಸಂಸ್ಕಾರವಿದ್ದರೆ‌ ಸುಲಭವಾಗಿ ಸ್ವಚ್ಚವಾಗುತ್ತದೆ. ಮುದಿತನದಲ್ಲಿ ಎಲ್ಲಾ ‌ತುಂಬಿಕೊಂಡ ಮೇಲೆ  ಸಂಸ್ಕಾರ ಮಾಡೋದು ಕಷ್ಟವಾದರೂ ಅನುಭವ ದಿಂದ  ಶುದ್ದವಾಗುತ್ತದೆ. 

ಅಸತ್ಯದೊಳಗಿರುವ ಸತ್ಯ ಸಂಶೋಧನೆ ಒಳಗೇ ಆಗಬೇಕು

ಮೊದಲೆಲ್ಲಾ ಸತ್ಯ ಯಾವುದೆನ್ನುವ  ಗೊಂದಲ ದಲ್ಲಿ ಅಸತ್ಯವನ್ನು ಒಪ್ಪಿಕೊಂಡಿದ್ದರೂ  ಸತ್ಯ ತಿಳಿದ ನಂತರ ಅಸತ್ಯದಿಂದ ದೂರವಿರೋದು ಕಷ್ಟವಾಗುತ್ತದೆ.ಆದರೂ  ಅಸತ್ಯದೊಳಗೂ ಸೂಕ್ಮವಾಗಿರುವ ಸತ್ಯ ತಿಳಿದಾಗಲೇ ಸತ್ಯ ಒಂದೇ ಇರುವ ಸತ್ಯದ ಅರಿವಾಗೋದು.
ಇದನ್ನು ದೇವನೊಬ್ಬನೆ ನಾಮ ಹಲವು ಎನ್ನುವರು. ಒಬ್ಬ‌ದೇವನಿಗಾಗಿ ಹಲವು ದೇವರ ಸೃಷ್ಟಿ ಯಾಗಿದ್ದರೂ ಒಗ್ಗಟ್ಟು ಇಲ್ಲವಾದರೆ ಆ ಒಬ್ಬನನ್ನು ಅರ್ಥ ಮಾಡಿಕೊಳ್ಳಲು ಕಷ್ಟ. 
ಅದ್ವೈತ ದೊಳಗೇ ದ್ವೈತವಿದ್ದರೂ ಎರಡೂ‌ಬೇರೆ ಎನಿಸುತ್ತದೆ ಆದರೆ ಎರಡೂ ಒಂದೇ ಎಂದಾಗ ಸಮಾಧಾನ ಶಾಂತಿ. ಹಾಗೆ ಅಸುರರೊಳಗೆ ಸುರರು ಸೇರಿದ್ದರೂ ಸುರರು‌ಮಾಡೋದು ಸರಿ,ಅಸುರರು ಮಾಡೋದು ತಪ್ಪು ಎನಿಸುತ್ತದೆ. ಆದರೆ ಸುರರ ಉದ್ದೇಶಕ್ಕೂ ಅಸುರರ ದುರುದ್ದೇಶಕ್ಕೂ ವ್ಯತ್ಯಾಸ‌ ಕಂಡಾಗ ಸುರರಿಗೆ ಸಹಕಾರ‌ ಕೊಡುವ ಮನಸ್ಸಾಗುತ್ತದೆ.
ಈ. ಮನಸ್ಸು‌ಹೊರಮುಖವಾಗಿದ್ದರೆ  ಒಳಮುಖವಾಡ ತಿಳಿಯದು.
ಇಬ್ಬರೂ ಭೂಮಿ ಆಳಬೇಕು.ಆದರೆ ಆಳೋರಲ್ಲಿ ಸತ್ಯಧರ್ಮ ಜ್ಞಾನ ಎಷ್ಟಿದೆ.ಅವರ ಉದ್ದೇಶ ಏನಿದೆ ಎನ್ನುವ ಬಗ್ಗೆ ನಮ್ಮಲ್ಲಿ  ಜ್ಞಾನವಿದ್ದರೆ ಸರಿ. ಅಜ್ಞಾನ ವೇ ಇದ್ದು ತನ್ನ ಸ್ವಾರ್ಥ ಚಿಂತನೆಗಾಗಿಯೇ ಅಸುರರೊಂದಿಗೆ ಸೇರಿಕೊಂಡಿದ್ದರೆ  ಅಧರ್ಮ ಕ್ಕೆ ಜಯ.
ಒಂದೇ ದೇಶದಲ್ಲಿ  ಎರಡು ಮೂರು‌ನಾಲ್ಕು ಐದು.....ಹೀಗೇ ಧರ್ಮ ಪಂಗಡ ವಿದ್ದರೂ ಎಲ್ಲಾ ಧರ್ಮ ಗಳ ತತ್ವ ಒಂದೇ ಎನ್ನಲಾಗದು. ಹೀಗಾದಾಗ ನಮ್ಮ ಮೂಲವನರಿತು ನಮ್ಮ ಆತ್ಮರಕ್ಷಣೆಗಾಗಿ  ಸತ್ಯ ದೆಡೆಗೆ ನಡೆದವರನ್ನು ಮಹಾತ್ಮರೆಂದರು. ಆ ಮಹಾತ್ಮರ ಹಿಂದೆ ‌ನಡೆದವರೂ ಮಹಾತ್ಮರೆ ಆಗಿದ್ದರು ಹಾಗೆ ಎಷ್ಟೋ ಮಹಾತ್ಮರುಗಳ ಹಿಂದೆ ಹಿಂದೂಗಳು‌ನಡೆದರೂ ಧರ್ಮ ಯಾಕೆ ಇಂದು ಕುಸಿದಿದೆ ಎಂದರೆ  ಹಿಂದೆ ನಡೆದವರ ಬಡತನವನ್ನು ಎತ್ತಿ ಹಿಡಿದವರ ರಾಜಕೀಯ ಕಾರಣ. ಇಲ್ಲಿ ಬಡತನ ಹಣದ ಮೂಲಕ ಜನರಿಗೆ ತೋರಿಸಲಾಗಿದೆ. ಜ್ಞಾನದ ಶಿಕ್ಷಣ ತಡೆ ಹಿಡಿದು ಜನರನ್ನು ತಮ್ಮ ವಶಕ್ಕೆ ಬಳಸಿಕೊಂಡು ವಿದೇಶದೆಡೆಗೆ ನಡೆದಿದೆ. ಹಾಗಂತ ವಿದೇಶದೊಳಗೆ ಅಡಗಿರುವ  ದೇಶ ‌ಕಾಣಲಿಲ್ಲವೆ?  ಕಂಡರೂ ಅದನ್ನು ಪ್ರಗತಿ ಎಂದು ಬೆಳೆಸಿದ ಮೇಲೆ  ಅದನ್ನು ‌ವಿರೋಧಿಸುವುದರಲ್ಲಿ ಅರ್ಥ ವಿರದು.
ಋಣ ಯಾವ ದೇಶದ್ದಾದರೂ ಸರಿ ಅದನ್ನು ತೀರಿಸಲು ಅಲ್ಲಿಯ ಸೇವೆ ಮಾಡಲೇಬೇಕು. ನಮ್ಮ ಜ್ಞಾನದ ಪ್ರಕಾರ‌ಕರ್ಮ ಅಥವಾ ಕೆಲಸ ಮಾಡುವಾಗ ಅದು ಒಳ್ಳೆಯದೋ ಕೆಟ್ಟದ್ದೋ  ಹಣ ಬಂದರೆ ಸರಿ ಎನ್ನುವ ಮಟ್ಟಿಗೆ  ಮಾನವ ಹಣಗಳಿಸುತ್ತಾ ಅದನ್ನು ಸದ್ಬಳಕೆ ಮಾಡಿಕೊಂಡರೆ ಅಧ್ಯಾತ್ಮ ಪ್ರಗತಿ. ಇಲ್ಲವಾದರೆ ಭೌತಿಕ ಪ್ರಗತಿ. ಕಲ್ಲು ಮಣ್ಣು ಚರಾಚರದಲ್ಲಿಯೂ ಪರಮಾತ್ಮನ ಸೃಷ್ಟಿ ‌ಕಾಣೋದು ಬಹಳ ಕಷ್ಟ. ಭೂಮಿಯಲ್ಲಿ ಹೇಗೆ ಜೀವನ‌ನಡೆಸಬೇಕೆಂಬ‌ ಅರಿವಿದ್ದವರಿಗೆ  ಎಲ್ಲದರಲ್ಲೂ  ಸತ್ಯ ಕಾಣುತ್ತದೆ .ಮಿಥ್ಯದಲ್ಲೂ ಸತ್ಯ ಕಾಣುತ್ತದೆ ಆದರೆ ಇದು ತಾತ್ಕಾಲಿಕ ವಾಗಿರುತ್ತದೆ.ಹೀಗಾಗಿ ಅವಿದ್ಯೆಯ ಒಳಗೇವಿದ್ಯೆ ಇದ್ದರೂ ಅದು ತಾತ್ಕಾಲಿಕ ವಷ್ಟೆ.
ಇಂದಿನ ಹೆಚ್ಚಿನ ಮಕ್ಕಳಿಗೆ ಅವಿದ್ಯೆಯ ಶಿಕ್ಷಣ‌
ಕೊಡಲಾಗುತ್ತಿದೆ.  ಅಂತಹ ಪೋಷಕರು ಮಕ್ಕಳ ಶಿಕ್ಷಣ ಸರಿಪಡಿಸದೆ ಸರ್ಕಾರದ ವಿರುದ್ದ ದೇಶದ ವಿರುದ್ದ ನಿಂತರೂ ವ್ಯರ್ಥ ಪ್ರಯತ್ನ.ಇದರಿಂದಾಗಿ ಅವರ ಸ್ವಂತಬುದ್ದಿ ಜ್ಞಾನದ ಸದ್ಬಳಕೆ ಆಗುವುದೆ ಇಲ್ಲವೆ ಎನ್ನುವ ಚಿಂತನೆ ಪೋಷಕರೆ ಮಾಡೋದಕ್ಕೂ ಪೋಷಕರಿಗೆ ಸದ್ವಿದ್ಯೆ ಇರಬೇಕು. ಕಲಿಗಾಲದ  ಶಿಕ್ಷಣ ಧರ್ಮಯುಕ್ತವಾಗಿದ್ದರೆ ಧರ್ಮ ರಕ್ಷಣೆ ಆಗುತ್ತದೆ.ಅದರಲ್ಲಿ ರಾಜಕೀಯ‌ ವಿಚಾರವೇ ತುಂಬಿ  ತಂತ್ರವೇ ಇದ್ದು, ರಾಜಯೋಗದ ವಿಚಾರದಿಂದ ದೂರವಿದ್ದರೆ  ಅಜ್ಞಾನದ ಜೀವನ.
ಯೋಗವೆಂದರೆ ಸೇರೋದು. ಪರಮಾತ್ಮನ ಜೀವಾತ್ಮ ಸೇರೋದು‌ಮಹಾಯೋಗ.ಇದು ಸ್ವಂತ ಜ್ಞಾನದಿಂದಲೋ  ರಾಜಯೋಗದಿಂದಲೋ,ಭಕ್ತಿಯಿಂದಲೋ ಕರ್ಮ ದಿಂದಲೋ  ಆದಾಗಲೇ  ಸತ್ಯದ ಜೊತೆಗೆ ಧರ್ಮ ವಿರುತ್ತದೆ.
ಇಲ್ಲವಾದರೆ  ಸತ್ಯವಿಲ್ಲದ ಧರ್ಮ ಕುಂಟುತ್ತದೆ.ಧರ್ಮ ಇಲ್ಲದ ಸತ್ಯ ಕುರುಡು ಜಗತ್ತನ್ನು ಆಳುತ್ತದೆ.‌
ಪ್ರೀತಿ‌ಪ್ರೇಮ ವಿಶ್ವಾಸ  ನಮ್ಮ ಶ್ವಾಸದ ಮೂಲಕ ಹೃದಯದಿಂದ ಜನ್ಮ ಪಡೆದಾಗಲೇ ಯೋಗವಾಗೋದು. ಕೇವಲ  ಹೊರಗಿನ ನಾಟಕದಿಂದ ಹುಟ್ಟಿದ್ದರೆ  ಯೋಗವಾಗದು. ಅದು ತಾತ್ಕಾಲಿಕವಷ್ಟೆ.

Wednesday, July 24, 2024

ವೇದವಿಜ್ಞಾನ.. ವೈದೀಕ ವಿಜ್ಞಾನ

ವೇದ ವಿಜ್ಞಾನದಿಂದ ವೈದೀಕ ವಿಜ್ಞಾನದವರೆಗೂ ನಮ್ಮ ಸನಾತನಧರ್ಮ ಬೆಳೆದಿದೆ. ವೈದೀಕ ಪರಂಪರೆಯಲ್ಲಿ ಪಿತೃಋಣವನ್ನು ಎತ್ತಿ ಹಿಡಿದರೆ ವೇದವಿಜ್ಞಾನದಲ್ಲಿ ಋಷಿಋಣವಿದೆ. ಋಷಿಪರಂಪರೆಯಿಂದ ಬೆಳೆದಿರುವ ಮನುಕುಲವೀಗ ಯಾವ ಋಣವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರೋದಕ್ಕೆ ಕಾರಣವೇ ಶಿಕ್ಷಣಪದ್ದತಿ ಎಂದಾಗ ನಾವು ಮೊದಲು ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕಲಿಸಬೇಕೆನ್ನುವುದನ್ನು  ತಿಳಿದು ಕಲಿತು ಕಲಿಸುವುದೇ ಧರ್ಮ.
 ಸರ್ಕಾರ ದ ಋಣ ಮಿತಿಮೀರಿದೆ. ಅದನ್ನು ತೀರಿಸಲು ಕಷ್ಟಪಟ್ಟು ಕೆಲಸ ಮಾಡಬೇಕಿದೆ.ಕೆಲಸ ಮಾಡುವ ಶಕ್ತಿಯಿಲ್ಲದೆ ಬೇಡೋರಿಗೆ ಸರಿಯಾದ ಯೋಗಶಿಕ್ಷಣ ಉಚಿತ ನೀಡಲು ಧಾರ್ಮಿಕ ವರ್ಗ ಮುಂದಾದರೆ  ಅದರಲ್ಲಿ ರಾಜಕೀಯ ಬೆರೆತರೆ  ಮಕ್ಕಳ ಜ್ಞಾನ ಗುರುತಿಸೋದೆ ಕಷ್ಟ.
ಜಾತಿ ರಾಜಕೀಯತೆಯಿಂದಾಗಿ ಅಜ್ಞಾನದಿಂದ ಮಾನವ ಬಡವ ಶ್ರೀಮಂತ ಎನ್ನುವ ಅಂತರ‌ಬೆಳೆಸಿಕೊಂಡರೆ ಒಳಗಿನ ಆತ್ಮಜ್ಞಾನ ಕಾಣಿಸದು. ಎಲ್ಲೋ‌ಕೆಲವರಷ್ಟೆ ಉತ್ತಮ ಮಾರ್ಗ ಹಿಡಿಯಲು ಸಾಧ್ಯವಾಗಿದ್ದರೆ ಅದನ್ನು ವಿರೋಧಿಸುವವರೆ ಹೆಚ್ಚಾಗಿರೋದು  ಕಲಿಕೆಯ ಪ್ರಭಾವ.
ನಮ್ಮ ಋಣ ತೀರಿಸಲು‌ಬಂದ ಜೀವಕ್ಕೆ ಇನ್ನಷ್ಟು ಋಣ ಏರಿಸಿ ಆತ್ಮಹತ್ಯೆಯಾದರೆ  ಅತೃಪ್ತ ಆತ್ಮಗಳ ಸಾಮ್ರಾಜ್ಯ ಸಹಜವಾಗಿರುತ್ತದೆ.ಒಟ್ಟಿನಲ್ಲಿ ಹಣದಿಂದ ತೃಪ್ತಿ ಸಿಗದು ಜ್ಞಾನದಿಂದ ತೃಪ್ತಿ ಸಿಗುತ್ತದೆ.ಅದು ಸತ್ಯಧರ್ಮ ದಲ್ಲಿರಬೇಕೆನ್ನುವುದು ಸನಾತನಧರ್ಮ.
ಏನೇ ಇರಲಿ ಎಷ್ಟು ಮೇಲೇರಿದರೂ ಭೂ ಋಣ ತೀರಿಸದೆ  ಜೀವನ್ಮುಕ್ತಿಯಿಲ್ಲವೆನ್ನುವುದೇ ಮಹರ್ಷಿಗಳು ತಿಳಿದು ತಿಳಿಸಿರುವಾಗ ಸೇವೆಯಿಂದ ಸಾಧ್ಯ.
ಪರಮಾತ್ಮನ ಸೇವೆಗೆ ಸತ್ಯಜ್ಞಾನ ಬೇಕು. ಪಿತೃಗಳ ಋಣ ತೀರಿಸಲು   ಅವರ ಆಸ್ತಿ ಧರ್ಮ ಕರ್ಮ ವನ್ನು ಸರಿಯಾಗಿ ತಿಳಿದು  ಸದ್ಬಳಕೆ  ಆಗೋದಕ್ಕೂ ಶಿಕ್ಷಣವೇ ಸರಿಯಿಲ್ಲದೆ   ಭೌತಿಕ ವಿಜ್ಞಾನ ಅಧ್ಯಾತ್ಮ ವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನವೇ  ಜನರಲ್ಲಿ  ಇಲ್ಲವಾದರೆ  ವಿಶೇಷಜ್ಞಾನದಿಂದ ಉಒಯೋಗವಿಲ್ಲ.  ಯಾರನ್ನು ಯಾರೋ ಆಳಿದರೆ ಋಣ ತೀರುವುದೆ? 
ಮಾತಾಪಿತರಿಲ್ಲದೆ ಋಷಿಗಳ ಜ್ಞಾನ ಬರುವುದೆ? 
ಮೂಲವರಿತು ನಡೆಯೋದೆ ಹಿಂದೂ ಧರ್ಮ.