ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, June 1, 2025

ಬ್ರಹ್ಮಜ್ಞಾನಿಗಳು ಬ್ರಾಹ್ಮಣರು

ಇಂದು ಬ್ರಾಹ್ಮಣ ದಿನಾಚರಣೆಯಂತೆ.ನಾನೂ ಒಂದು ಬ್ರಾಹ್ಮಣ ಕುಲದಲ್ಲಿ ಜನಿಸಿರುವ ಕಾರಣದಿಂದ ಬ್ರಾಹ್ಮಣ ಎಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಬ್ರಹ್ಮನನ್ನು ಅರಿತವ ಬ್ರಾಹ್ಮಣನಾಗಿದ್ದಾನೆ. ಮಾನವ ಜನ್ಮವೇ ದೊಡ್ಡದು ಅದರಲ್ಲೂ ಬ್ರಾಹ್ಮಣ ಜನ್ಮ ಅತಿದೊಡ್ಡದು.
ಜ್ಞಾನದಿಂದ ಬ್ರಾಹ್ಮಣನಾಗೋದು ಬಹಳ ಮುಖ್ಯ. ಹಣ ಇಂದಲ್ಲ ನಾಳೆ ಬರುತ್ತದೆ ಹೋಗುತ್ತದೆ.ಇರುತ್ತದೆ ಆದರೆ ಜ್ಞಾನ ಒಮ್ಮೆ ಬಂದ ಮೇಲೆ  ಬ್ರಹ್ಮಲೋಕದೆಡೆಗೆ‌ನಡೆಸುತ್ತದೆ.
ಹೀಗಾಗಿ ಅಹಂ ಬ್ರಹ್ಮಾಸ್ಮಿ ಎಂದರು ಶ್ರೀ ಶಂಕರ ಭಗವತ್ಪಾದರು. ಇದನ್ನು ಅಪಾರ್ಥ ಮಾಡಿಕೊಂಡವರು ಕೆಳಗಿಳಿದರು.ಅರ್ಥ ಮಾಡಿಕೊಂಡವರು  ಜ್ಞಾನದಿಂದ ಮೇಲೇರಿದರು.
ತನ್ನ ಸೃಷ್ಟಿ ಗೆ ಕಾರಣವಾಗಿರುವ ಸೃಷ್ಟಿ ಕರ್ತ ಬ್ರಹ್ಮನ ಅರಿಯದೆ ಸ್ಥಿತಿಯನ್ನು ಸರಿಯಿಲ್ಲವೆಂದರೆ ಲಯವಾಗೋದು ನಿಲ್ಲದು.ಎಲ್ಲಾ ನಿರಂತರವಾಗಿ ನಡೆಯುತ್ತಲೇ ಇರುವ ಕ್ರಿಯೆ.
ಇದರಲ್ಲಿ ಕಾರಣಮಾತ್ರದವನಾದ ಮಾನವ ಮಾತ್ರ ಎಲ್ಲಾ ನನ್ನಿಂದಲೇ ನಡೆದಿರೋದೆನ್ನುವ ಭ್ರಮೆಯಲ್ಲಿ  ಜೀವನ‌ನಡೆಸಿ ಒಮ್ಮೆ ಮಾಯಾಲೋಕದಲ್ಲಿ ಮಾಯವಾಗೋನು. ತನ್ನ ಹಿಂದಿನ ಜನ್ಮದ ಋಣ ಮತ್ತು ಕರ್ಮಾನುಸಾರ ಮತ್ತೆ ಮತ್ತೆ ಜನನ ಮರಣಗಳ ಚಕ್ರದಲ್ಲಿ ತಿರುಗುತ್ತಲೇ ಇರುವನು.
ಇದರಲ್ಲಿ ದೇವತೆಗಳು ಮಾನವರು ಅಸುರರು ಎಂದು ಮೂರು ವರ್ಗ ವಿದೆ.ಯಾರು ದೇವರನ್ನು ಆಶ್ರಯಿಸುವರೋ ಅವರು ದೇವರ ವಶ ಯಾರು ಸಾಮಾನ್ಯ ಮಾನವರನ್ನು ಆಶ್ರಯಿಸುವರೋ ಅವರು ಮಾನವರ  ವಶ, ಯಾರು ಅಸುರರನ್ನು ಆಶ್ರಯಿಸುವರೋ ಅವರ ಜೀವ ಕೊನೆಯಲ್ಲಿ ಅಸುರರ ವಶವಾಗಿ ಹೋಗುತ್ತದೆ.
ಬ್ರಹ್ಮನ ಸೃಷ್ಟಿ  ಶುದ್ದವಿದ್ದರೂ  ಅದನ್ನು ಸರಿಯಾಗಿ ಅರಿಯದೆ ತಮ್ಮದೇ ಆದ  ಧರ್ಮ, ಜಾತಿ,ಪಂಗಡ,ಪಕ್ಷಗಳ ಸುಳಿಯಲ್ಲಿ  ಮನಸ್ಸು  ಸಿಲುಕಿದರೆ  ಧರ್ಮ ಕರ್ಮ ಸತಿಯಾಗಿ ನಡೆಯದೆ  ಜೀವನ ಮಧ್ಯದಲ್ಲಿ ಸಿಲುಕಿ ಅತಂತ್ರಸ್ಥಿತಿಗೆ  ತಲುಪಿ ದಾರಿತಪ್ಪಬಹುದೆನ್ನುವ ಕಾರಣದಿಂದ ಹಿಂದೆ  ಜನ್ಮದ ಮೂಲದ ಧರ್ಮ ಕರ್ಮ ಕ್ಕೆ  ಬೆಲೆಕೊಟ್ಟು ಮಕ್ಕಳ ಜ್ಞಾನವನ್ನು ಸಂಸ್ಕಾರದ ಶಿಕ್ಷಣದಿಂದ ಬೆಳೆಸುತ್ತಾ ಉತ್ತಮ ಗುಣಗಳನ್ನು  ಗೌರವಿಸುವುದರ ಮೂಲಕ ಬ್ರಾಹ್ಮಣರು ಶಿಕ್ಷಣ ಕ್ಷೇತ್ರದ ಅಧಿಕಾರಿಗಳಾಗಿ ಗುರುಗಳಾಗಿ ಸೇವೆ ಸಲ್ಲಿಸಿದ್ದರು.ಕಾಲಾನಂತರದಲ್ಲಿ ಶಿಕ್ಷಣವೇ  ವಿರುದ್ದ ದಿಕ್ಕಿನಲ್ಲಿ  ತಿರುಗಿದಾಗ  ಭೂಮಿಯೇ ಕಾಣಲಿಲ್ಲ ಇನ್ನು ನಿರಾಕಾರ ಬ್ರಹ್ಮ ಕಾಣುವನೆ?
ಒಟ್ಟಿನಲ್ಲಿ ಬ್ರಾಹ್ಮಣ ಎನ್ನುವುದು ಜಾತಿಯಲ್ಲ. ಜ್ಞಾನದಿಂದ  ಮಾನವ ಬ್ರಾಹ್ಮಣನಾಗುವನು. ಬಹುಜನ ಪ್ರಿಯ ಇರೋದು ಭೋಜನ ಪ್ರಿಯನಾಗಿ  ಹೊಟ್ಟೆಪಾಡಿಗಾಗಿ  ಜೀವನ ನಡೆಸುವ ಪರಿಸ್ಥಿತಿ  ಬಂದಿರೋದು ಒಂದು ದುರಂತ. ಆದರೆ ಬ್ರಾಹ್ಮಣರಲ್ಲಿಯೂ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ  ಕರ್ಮ ದವರಿದ್ದಾರೆ. ಕಲಿಯುಗದಲ್ಲಿ  ಮಹಾಬ್ರಾಹ್ಮಣರಿಲ್ಲ.ಕ್ಷತ್ರಿಯರು ವೈಶ್ಯರು ಶೂದ್ರರಿದ್ದರೂ ಮೂಲದ ಜ್ಞಾನದ ಕೊರತೆಯಿಂದ ಈಗಲೂ ಎಷ್ಟೋ ಜನ ಬ್ರಾಹ್ಮಣರನ್ನು ದ್ವೇಷ ಮಾಡುವರು. ದ್ವೇಷವೆನ್ನುವುದೆ ಒಂದು ಅಜ್ಞಾನದ ರೋಗ. ಅಜ್ಞಾನ ಬೆಳೆದರೆ  ಅದೇ ಭ್ರಷ್ಟಾಚಾರ ಎನ್ನುವ ರೋಗವಾಗುತ್ತದೆ. ಭ್ರಷ್ಟಾಚಾರ ಎಲ್ಲಿರುವುದೋ ಅಲ್ಲಿ ಬ್ರಹ್ಮಜ್ಞಾನಕ್ಕೆ  ಸ್ಥಳವಿರದು. ಇಂದಿನ ಶಿಕ್ಷಣವೇ  ವ್ಯವಹಾರಕ್ಕೆ ಇಳಿದು ಭ್ರಷ್ಟ ತೆ  ಎದ್ದು ಕಾಣುತ್ತಿದೆ ಆದರೂ ಪೋಷಕರು ಮೌನವಾಗಿ ಅದನ್ನು ಒಳಗೇ ಸೇರಿಸಿಕೊಂಡು ಮಕ್ಕಳಿಗೂ ಕಲಿಸುವುದು ಅನಿವಾರ್ಯ ಆಗಿದೆ ಎಂದರೆ  ಬ್ರಹ್ಮನ ಸೃಷ್ಟಿ ಸರಿಯಿಲ್ಲವೋ ಅಥವಾ ಮಾನವನ ದೃಷ್ಟಿ ಸರಿಯಿಲ್ಲವೋ?
ಒಟ್ಟಿನಲ್ಲಿ  ಬ್ರಾಹ್ಮಣರಿಂದ ಲೋಕೋದ್ದಾರವಾಗುವುದು ಅವರ  ಜ್ಞಾನಶಕ್ತಿಯಿಂದ.ಇಲ್ಲಿ ವ್ಯಕ್ತಿ ಬ್ರಾಹ್ಮಣನಾಗಿ ಜನ್ಮ ಪಡೆದರೂ  ಬ್ರಹ್ಮಜ್ಞಾನದೆಡೆಗೆ ನಡೆಯದಿದ್ದರೆ  ಭೂ ಲೋಕದಿಂದ ಪಾತಾಳಕ್ಕೆ ಇಳಿಯಬಹುದು. ಕೆಲವರು ಶೂದ್ರರಾಗಿ ಜನ್ಮ‌ಪಡೆದರೂ ಉತ್ತಮ ಸಂಸ್ಕಾರದ ವಿದ್ಯೆಗಳಿಸಿನಮ ಬ್ರಹ್ಮನನ್ನು ಅರಿಯಬಹುದು. ಹೀಗಾಗಿ ಯಾರೂ ಮೇಲಲ್ಲ ಕೀಳಲ್ಲ.ಅವರವರ ಅರಿವೇ ಅವರ ಗುರು.
ಬ್ರಾಹ್ಮಣ ಎನ್ನುವ ಮೇಲ್ವರ್ಗ ತಲೆಗೆ ಹೋಲಿಸಿ ಶೂದ್ರರನ್ನು ಪರಮಾತ್ಮನ ಪಾದಕ್ಕೆ ಹೋಲಿಸಿದ್ದರೆಂದರೆ ಉತ್ತಮ ಜ್ಞಾನದಿಂದ ನಡೆದವರು ಬ್ರಹ್ಮಜ್ಞಾನಿಗಳಾಗುವರೆಂದರ್ಥ.
ಈಗಲೂ ಇದ್ದಾರೆ. ಆದರೆ  ಮಧ್ಯವರ್ತಿಗಳ ತಂತ್ರಕ್ಕೆ  ಸಿಲುಕಿ ಅತಂತ್ರಸ್ಥಿತಿಗೆ  ಬಂದವರಿದ್ದಾರೆ. ಸ್ವತಂತ್ರ ವಾಗಿ ನಡೆಯುವ ಶಕ್ತಿ  ಕುಸಿದಿದೆ  ಕಾರಣ ರಾಜಕೀಯ‌ ಮತ್ತು ವ್ಯವಹಾರ  ಪ್ರಧಾನವಾಗಿರುವ ಪ್ರಜಾಪ್ರಭುತ್ವದಲ್ಲಿ  ಶಿಕ್ಷಣವೇ  ಇದಕ್ಕೆ ಮೂಲ ಕಾರಣ.ಎಷ್ಟು ಶಾಸ್ತ್ರ ‌ಪುರಾಣ ಕಥೆಗಳನ್ನು ಓದಿದರೂ  ಒಳಗಿರುವ ಸ್ವತಂತ್ರ ಬುದ್ದಿ ಜ್ಞಾನ ಬಳಸದಿದ್ದರೆ ಬ್ರಹ್ಮನಾಗೋದಿಲ್ಲ. ಅಂದರೆ ನಮ್ಮ ಈ ಜನ್ಮಕ್ಕೆ ಕಾರಣವಾಗಿರುವ ಮೂಲ ಶಕ್ತಿಯ ಜ್ಞಾನವನ್ನು ಅರಿಯದ ಶಿಕ್ಷಣದಿಂದ  ಬ್ರಹ್ಮಜ್ಞಾನ ಹಿಂದುಳಿದಿದೆ.ಪ್ರತಿಯೊಂದು ಹಣದಿಂದ ಖರೀದಿಸಲು  ಸಾಧ್ಯ.ಆದರೆ ಸತ್ಯ ಖರೀದಿ ಮಾಡಲಾಗದು.
ಸತ್ಯವಿಲ್ಲದ ಜ್ಞಾನ ಪಡೆದು ಹಣಗಳಿಸಿ ಹೊರಗಿನ ಜಗತ್ತನ್ನು ಆಳಬಹುದು. ಆದರೆ ಒಳಜಗತ್ತಿಗೆ ಆಧಾರವಾಗಿರುವ ಸತ್ಯದ ಹಿಂದೆ ನಡೆದವರು ಬ್ರಾಹ್ಮಣರು. ಆತ್ಮಸಾಕ್ಷಿಗೆ‌ಮೀರಿದ ಸತ್ಯ ಯಾವುದಿದೆ? ಆತ್ಮಜ್ಞಾನಕ್ಕೆ ‌ಮೀರಿದ‌ಜ್ಞಾನ ಯಾವುದಿದೆ?
ಆತ್ಮಜ್ಞಾನಿಗಳನ್ನು ಶ್ರೇಷ್ಠ ರೆಂದರು.ಇದು ಎಲ್ಲರಲ್ಲಿಯೂ ಅಡಗಿದೆ.ಒಳಹೊಕ್ಕಿ ನೋಡುವ  ಶಿಕ್ಷಣದ‌ಕೊರತೆಯಿದೆ.ಸ್ವತಂತ್ರ ಭಾರತಕ್ಕೆ ಸ್ವತಂತ್ರ ಜ್ಞಾನದ ಕೊರತೆಯಿದೆ. ಯಾರದ್ದೋ ಜ್ಞಾನದಲ್ಲಿ ಯಾರನ್ನೂ ಆಳುತ್ತಾ ಯಾರೋ  ಜ್ಞಾನಿಗಳೆಂದರೆ ನಮ್ಮದೇನಿರುತ್ತದೆ? ಕೇವಲ ಬುದ್ದಿ ಕಲಿಯಬಹುದು.ಜ್ಞಾನ ಅದೇ ಬರಬೇಕಿದೆ. ನಾವು ಬ್ರಹ್ಮಲೋಕದಿಂದ‌ಬಂದಿರಬಹುದಷ್ಟೆ ಬ್ರಹ್ಮನೇ ಆಗಲು ಜ್ಞಾನ ಅಗತ್ಯವಿದೆ. ಇದನ್ನು ಶ್ರೀ ಶಂಕರಭಗವತ್ಪಾದರಂತಹ ಮಹಾಜ್ಞಾನಿಗಳು ಅನುಭವಿಸಿ  ನಾನೇ ಬ್ರಹ್ಮನಾಗಿರುವೆ ಎಂದರು ಕಾರಣ ಅವರ ಜ್ಞಾನ ಬ್ರಹ್ಮನಲ್ಲಿ ಐಕ್ಯವಾಗಿತ್ತು.
ಹಾಗೆ ಶ್ರೀ  ಕೃಷ್ಣ  ನಾನೇ ಮಹಾವಿಷ್ಣು ಎಂದರೆ ಒಪ್ಪಿಕೊಳ್ಳುತ್ತೇವೆ. ಇದನ್ನು ಅದ್ವೈತ ಎನ್ನುವುದು. ನಾನು ಹೋದರೆ ಪರಮಾತ್ಮ ಕಾಣುವನು. ಪರಮಾತ್ಮನ ಒಂದು ಸಣ್ಣ ಅಣುಗಾತ್ರದ ಜೀವಹೊತ್ತು ಭೂಮಿಯಲ್ಲಿ ಜನ್ಮ ಪಡೆಯುವುದು ಋಣ ಭಾರದಿಂದ. ಈ ಋಣ ತೀರಿಸಲು ಜ್ಞಾನ ಅಗತ್ಯವಿದೆ. ಜ್ಞಾನದಲ್ಲಿ ಸತ್ಯಾಸತ್ಯಗಳಿವೆ.ಯಾವಾಗ ಅಸತ್ಯ ಬೆಳೆಯುವುದೋ ಋಣಭಾರವೂ ಹೆಚ್ಚುವುದು. ಸತ್ಯ ಬೆಳೆದಂತೆಲ್ಲಾ ಋಣ ತೀರುತ್ತಾ ಜೀವಾತ್ಮನು ಪರಲೋಕಕ್ಕೆ ಏರಲು ಸಾಧ್ಯವಾಗುವುದು.ಅದಕ್ಕೆ ಮೇಲಿರುವ ಲೋಕ ಕಣ್ಣಿಗೆ ಕಾಣದು.ಹಾಗೆ ಕೆಳಗಿರುವ ಲೋಕವೂ ಬೆಳೆದಿದೆ.
ಎರಡರ ಮಧ್ಯೆ ಇರುವ ಭೂಲೋಕ ಮಾತ್ರ ಜೀವ ಸಂಕುಲಗಳಿಗೆ ಆಧಾರವಾಗಿದೆ. ಭೂಮಿಗೆ ಬರಲು ಕಾರಣವಾಗಿರುವ ಋಣವನ್ನು ತೀರಿಸಲು ಸತ್ಕರ್ಮ ಸ್ವಧರ್ಮ ಸರಳ ಜೀವನ,ಸ್ವಾಭಿಮಾನ, ಸ್ವಾವಲಂಬನೆ ಸ್ವತಂತ್ರ ಜ್ಞಾನ ವನ್ನು ಒಳಗಿನಿಂದ ಬೆಳೆಸಿಕೊಳ್ಳುವುದೆ ನಿಜವಾದ ಜೀವನವಾಗಿತ್ತು. ಆಗಿತ್ತು ಎನ್ನುವ ಕಾಲದಲ್ಲಿ ನಾವಿದ್ದೇವೆಂದರೆ ಹಿಂದಿರುಗಿ ನಡೆದರೆ  ಹಿಂದೂಬ್ರಾಹ್ಮಣ.
ಮುಂದೆ ಮುಂದೆ ಹೋದಷ್ಟೂ  ಸಂಕಷ್ಟವೇ  .ತತ್ವದಿಂದ ಅರಿತು ನಡೆಯೋದು  ಕಷ್ಟ ತಂತ್ರದಿಂದ ನಡೆಯೋದು ಸುಲಭ ಆದರೆ ಅಜ್ಞಾನವೂ ಅದರ ಹಿಂದೆ ಇರುತ್ತದೆ.
ಕೆಲವು ಸತ್ಯ ನಮ್ಮ ಅರಿವಿಗೆ ಅರ್ಥ ವಾದರೂ ಪರಿಸ್ಥಿತಿ ಮನಸ್ಥಿತಿ ಆರ್ಥಿಕ ಸ್ಥಿತಿ ಹದಗೆಟ್ಟಾಗ  ದಿಕ್ಕು ತೋರಿಸಿದ ಕಡೆ ಮಾನವ ನಡೆಯುವುದು  ಕಾಲ ಪ್ರಭಾವ.ಕಾಲು ತಲೆ ಹೇಳಿದಂತೆ ನಡೆಯುತ್ತದೆ. ತಲೆಗೆ ತುಂಬುವ ವಿಚಾರವೇ ಬುದ್ದಿ ಕಲಿಸುತ್ತದೆ. ಬುದ್ದಿ ಕಲಿತವರು  ಜ್ಞಾನಿಗಳಾಗುವರು.
ಆದರೆ ಆತ್ಮಜ್ಞಾನ ವಿಜ್ಞಾನವಾದಾಗ  ಇದ್ದಲ್ಲೇ ಇದ್ದು ಸತ್ಯ ತಿಳಿಯುವರು. ಅಲೆದಾಡುತ್ತಿದ್ದರೆ  ಕಷ್ಟ. ಮನಸ್ಸನ್ನು ಹಿಡಿದಿಟ್ಟುಕೊಳ್ಳುವ  ಶಕ್ತಿ  ಬ್ರಾಹ್ಮಣರಿಗೆ ಹೆಚ್ಚಾಗಿದೆ. ಇದನ್ನು ದೈವಶಕ್ತಿ ಎಂದರು.ಹಾಗಾಗಿ ಬ್ರಾಹ್ಮಣರು ದೇವರ ಸಮಾನ.
ದೇವರಾಗೋದಕ್ಕೆ  ಹಾಗೇ ನಡೆಯಬೇಕಿದೆ.  
ನಮ್ಮ ಜ್ಞಾನಕ್ಕೆ ನಾವೇ ಸರಿಯಾದ ಶಿಕ್ಷಣ ಕೊಡದಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಒಟ್ಟಿನಲ್ಲಿ ಬದುಕಬೇಕು. ಜೀವನದ ರಹಸ್ಯವರಿತು ಬದುಕಿದರೆ ಮುಕ್ತಿ ಮೋಕ್ಷ. ಮೋಕ್ಷ ಎಂದರೆ ಮೋಹದ ಕ್ಷಯ. ಮೋಹಮಾಯೆಯೊಳಗೆ ಸಿಲುಕಿದ ಮನಸ್ಸನ್ನು  ಹಿಡಿದಿಡಲು ಇರುವ‌ಒಂದೇ ಮಾರ್ಗ ಯೋಗ.
ಇದರಲ್ಲಿ ಜ್ಞಾನಯೋಗ ರಾಜಯೋಗ,ಭಕ್ತಿಯೋಗ,ಕರ್ಮ ಯೋಗ ಯಾವುದಾದರೂ  ಸರಿ ಪರಮಾತ್ಮನ ಕಡೆಗೆ ನಡೆಸುತ್ತದೆ. ಜ್ಞಾನವು ಸ್ವತಂತ್ರ ವಾಗಿಸಬೇಕಿದೆ ಇದು ಮುಖ್ಯ.
ನಂತರ ನಮ್ಮನ್ನು ನಾವರಿತು ಭಕ್ತಿ ಶ್ರದ್ಧೆ ಯಿಂದ  ದುಡಿದು ಹಣಗಳಿಸಿ ನಮ್ಮ ಋಣ ತೀರಿಸಿ ಮುಕ್ತರಾಗಬಹುದು.
ಎಷ್ಟೋ ಜನ್ಮಗಳ ಲೆಕ್ಕಾಚಾರ ಚುಕ್ತ ಮಾಡಲು ಒಂದು ಜನ್ಮದಲ್ಲಿ ಕಷ್ಟ.ಆದರೂ ಪ್ರಯತ್ನ ಪಟ್ಟರೆ  ಸಾಧ್ಯ ಎಂದು ಮಹಾಬ್ರಾಹ್ಮಣರಾದವರು  ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ  ಇಲ್ಲದೆ ಪರಮಾತ್ಮನ ಸೇವೆ ಮಾಡುತ್ತಾ ಸರ್ವಜ್ಞ ರಾಗಿ ಮೋಕ್ಷ ಪಡೆದರು.ಇದೀಗ ಸಾಧ್ಯವಿಲ್ಲ. ಸಾಧ್ಯವಾದಷ್ಟು  ಮಟ್ಟಿಗೆ  ಪ್ರಯತ್ನ ನಡೆಸಬಹುದು.
ಯಾವುದೂ ಯಾರ ಕೈಯಲ್ಲಿ ಇಲ್ಲ.ಅವರವರ ಜ್ಞಾನದಲ್ಲಿದೆ.ಅದನ್ನು ಯಾರೂ ಕದಿಯಲಾಗದು.
ಒಗ್ಗಟ್ಟಿನಿಂದ ನಡೆದರಷ್ಟೆ ಇದು ಸಾಧ್ಯ ವಿದೆ. ಜ್ಞಾನಕ್ಕೆ ಬೇಧವಿದೆಯೆ? ಬ್ರಹ್ಮನೊಬ್ಬನೆ ಆದರೂ ಬ್ರಾಹ್ಮಣ ಹಲವರು.ದೇವನೊಬ್ಬನೆ ಆದರೂ ನಾಮ ಹಲವು.
ಆದರೆ ವಾಸ್ತವದಲ್ಲಿ ನಾವೆಲ್ಲರೂ ಭಾರತೀಯರಾಗಲು ಭಾರತೀಯ ಜ್ಞಾನದ ಶಿಕ್ಷಣ ನಮ್ಮೊಳಗಿದೆಯೆ ಎಂದು ಪ್ರಶ್ನೆ ಮಾಡಿಕೊಂಡರೆ ಉತ್ತಮ. ಬ್ರಹ್ಮನಾಗೋದಕ್ಕೆ ಬ್ರಹ್ಮಜ್ಞಾನ ಅಗತ್ಯ.ಬ್ರಹ್ಮನೊಂದಿಗಿರುವ ಜ್ಞಾನ ದೇವತೆಯನ್ನು ದೂರ ಇಟ್ಟರೆ ಜ್ಞಾನ ಬರುವುದೆ? ಲಿಂಗಬೇಧ ಧರ್ಮ ಬೇಧ ಜಾತಿ ಬೇಧ ಪಕ್ಷ ಬೇದದಿಂದ ವೇದ ಅರ್ಥ ಆಗದು.ಅದರಿಂದ ಹೊರ ಬಂದು ನೋಡಿದವರಿಗೆ ಬ್ರಹ್ಮಾಂಡ ಕಾಣುವುದು.ಇದನ್ನು ಬ್ರಹ್ಮಜ್ಞಾನ ಎಂದರು...
ಕ್ಷಮಿಸಿ  ಏನಾದರೂ ತಪ್ಪು ಕಂಡರೆ ದಯವಿಟ್ಟು ತಿಳಿಸಿ. ಸರಿ ಎನಿಸಿದರೆ ಹಂಚಿಕೊಂಡರೆ ಉತ್ತಮ ಜೀವನ.
ಬ್ರಾಹ್ಮಣ ಯಾರನ್ನೂ ಆಳುವುದಿಲ್ಲ ಕಾರಣವಿಷ್ಟೆ ಆಳಿದವನು ಆಳಾಗಿ ಜನ್ಮ ಪಡೆಯಲೇಬೇಕು.ಜ್ಞಾನ ಬಂದ‌ಮೇಲೆ ಮೌನವಾಗಿನಮ ಪರಮಾತ್ಮನ ಕಡೆಗೆ ಹೋಗುವನು ಮಾನವ. ಆದರೆ ಅಧರ್ಮ ವನ್ನು ಸಹಿಸಿಕೊಂಡು  ಇದ್ದಷ್ಟೂ ಧರ್ಮ ಕ್ಷೀಣವಾಗುವುದು. ಅಜ್ಞಾನಿಗಳು ಜ್ಞಾನಿಗಳನ್ನು ಆಳುವರಷ್ಟೆ.‌ಸ್ಥಿತಪ್ರಜ್ಞಾವಂತರಾದರೆ‌  ಈ ವಿಷಯ ಅರ್ಥ ಆಗುತ್ತದೆ. ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟ ಜನರಿಗೆ ಸುಭಿಕ್ಷ ಕಾಲ ಎಂದ ದಾಸರ ಕಾಲ ಈಗಲೂ ಇದೆ.ಆದರೆ ಸರ್ಕಾರದ ದಾಸರ ಸಂಖ್ಯೆ ಮಿತಿಮೀರಿದೆ. ಎಲ್ಲಾ ಉಚಿತವಾದಷ್ಟೂ ಸಾಲ ಖಚಿತ.

No comments:

Post a Comment