ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Saturday, May 31, 2025

ದ್ವೇಷದಿಂದ ದೇಶ ಕಟ್ಟಲಾಗದು

ದ್ವೇಷವಿರುವ‌ ಕಡೆ ಜ್ಞಾನ ಬೆಳೆಯೋದಿಲ್ಲ. ಜ್ಞಾನವಿಲ್ಲದ ಕಡೆ ಧರ್ಮ ನಿಲ್ಲೋದಿಲ್ಲ. ಧರ್ಮ ವಿಲ್ಲದ ಕಡೆ ಸತ್ಯವಿರೋದಿಲ್ಲ.ಸತ್ಯವಿಲ್ಲದೆಡೆ ದೈವತ್ವಕ್ಕೆ ಬೆಲೆ ಇರೋದಿಲ್ಲ.
ಹಾಗಾದರೆ  ಯಾವುದು  ಇರಬಾರದು? ಯಾವುದು ಇರಬೇಕು? 
ಪ್ರೀತಿ ವಿಶ್ವಾಸ ಭಕ್ತಿ ಶ್ರದ್ಧೆ  ಭಯ ಇವುಗಳು  ತೋರುಗಾಣಿಕೆಯ ನಾಟಕವಾದಷ್ಟೂ  ಅಪಾಯ ಕಟ್ಟಿಟ್ಟ ಬುತ್ತಿ. ಶಂಖದಿಂದ‌ಬಂದದ್ದಷ್ಟೇ ತೀರ್ಥ ಎಂದರೆ ಶಂಖ ಎಷ್ಟು ಸ್ವಚ್ಚವಿದೆ ಎನ್ನುವ ಜ್ಞಾನವಿದ್ದರೆ ಉತ್ತಮ ತೀರ್ಥ ಪ್ರಸಾದವಾಗಿರುತ್ತದೆ. ಶಂಖನಾದ ಪೂಜೆಗೂ ಮಾಡಬಹುದು.ಯುದ್ದಕ್ಕೂ ಬಳಸಬಹುದು. ಆದರೆ ಇದು ನಮ್ಮ ಮೂಲ  ಧರ್ಮಕ್ಕೆ ವಿರುದ್ದವಿರಬಾರದಷ್ಟೆ.

No comments:

Post a Comment