ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, May 4, 2025

ಜೀವವನ್ನು ಹಣದಿಂದ ಅಳೆಯುವುದು ಸರಿಯೆ?

ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಸಿರಿವಂತರಾಗಿದ್ಹದವರಿಗೂ  ಪರಿಹಾರ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ.  ಬಡವರಾಗಿದ್ದರೆ  ಉಳಿದವರ ಜೀವನಕ್ಕೆ ಅಗತ್ಯವಿದೆ. ಬಡತನವೆನ್ನುವುದು  ಶಾಪವೋ ವರವೋ ಎಂದರೆ ಜ್ಞಾನವಿದ್ದವರಿಗೆ ಇದು ವರ.ಅಜ್ಞಾನಿಗಳಿಗೆ ಶಾಪ. ಆ ಶಾಪದಿಂದ ಮುಕ್ತಿ ಕೊಡುವುದು ಗುರು.ಜ್ಞಾನದ ಶಿಕ್ಷಣ‌ನೀಡಿ ಸ್ವತಂತ್ರ ವಾಗಿ ಜೀವನ‌ನಡೆಸುವಂತೆ ಮಾಡುವುದೇ ಗುರು. 
ಹೀಗಾಗಿ  ಮಾನವ ಮಹಾತ್ಮನಾಗಬೇಕಾದರೆ ಕಷ್ಟಪಟ್ಟು ಆತ್ಮ ಪರಮಾತ್ಮನೆಡೆಗೆ ಸಾಗಬೇಕಿದೆ.ಅಂತರಂಗಶುದ್ದಿಯ ನಂತರವೇ ಬಹಿರಂಗ ಶುದ್ದಿ ಸಾಧ್ಯ.
ಇದಕ್ಕೆ ಮೊದಲ ಗುರುವಾಗಿರುವ ತಾಯಿಯ ಸುಜ್ಞಾನವೇ‌ಮಕ್ಕಳ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಡಲು ಸಾಧ್ಯ.ಯಾವಾಗ ತಾಯಿಯಲ್ಲಿಯೇ ಅಜ್ಞಾನವಿರುವುದೋ ಹೊರಗಿನ ಗುರುಗಳ ಆಶ್ರಯ ಅಗತ್ಯವಾಗುತ್ತದೆ. ಹೊರಗಿನ ಗುರುವೂ  ಹೊರಗಿನ ರಾಜಕೀಯದೊಳಗಿದ್ದರೆ ಗುರಿ ತಲುಪಲಾಗದು. ಒಟ್ಟಿನಲ್ಲಿ  ಹಣದಿಂದ ಗುರುವನ್ನು ಗುರುತಿಸೋದೆ ಅಜ್ಞಾನ.

ವಿಶ್ವರೂಪ ದರ್ಶನದಲ್ಲಿ ನಾವು ದೇವನೊಬ್ಬನೆ ನಾಮಹಲವು ಎನ್ನುವುದನ್ನು ಅರಿಯಬಹುದಷ್ಟೆ.ಅದೇ ವಾಸ್ತವಕ್ಕೆ ಬಂದರೆ ದೇಶ ಒಂದೇ ಪ್ರಜೆಗಳು ಹಲವು,  ದೇಶ ಒಂದೆಧರ್ಮ  ಹಲವು, ದೇಶ ಒಂದೇ ಶಿಕ್ಷಣ ಹಲವು ದೇವರೊಂದೆ ದೇವಸ್ಥಾನ ಹಲವು, ದೇಶ ಒಂದೇ ಪಕ್ಷ ಹಲವು...ಕೊನೆಯ ಪಕ್ಷಪಾತ ಎಲ್ಲಾ ಹಲವುಗಳಲ್ಲಿ ರಾಜಕೀಯವಾಗಿ ಬೆಳೆಸಿಕೊಂಡು ಹೊರಬಂದಾಗ ರಾಜಯೋಗದ ಅರಿವಿಲ್ಲದೆ ಜೀವನ ರಾಜಕೀಯದ ವಶವಾಗಿ ಛಿದ್ರ ಛಿದ್ರವಾಗುತ್ತದೆ.
ಇದನ್ನು ಒಂದು ಮಾಡೋದೆ ತತ್ವಜ್ಞಾನದ ಉದ್ದೇಶ ವಾಗಿತ್ತು.ಈಗಿದು ತಂತ್ರದೆಡೆಗೆ ನಡೆಯುತ್ತಾ ಅತಂತ್ರಸ್ಥಿತಿಗೆ ಮನುಕುಲವನ್ನು  ನಡೆಸುತ್ತಿದೆ ಎಂದರೆ ಇದಕ್ಕೆ ಸಹಕಾರ ನೀಡಿರುವ ನಮ್ಮ ಅಜ್ಞಾನವೇ ಕಾರಣ.ಅಜ್ಞಾನಕ್ಕೆ ವೈಜ್ಞಾನಿಕ ಶಿಕ್ಷಣದ ಅರ್ಧ ಸತ್ಯವೇ ಕಾರಣ. ಅಸತ್ಯದೊಳಗೆ ಸತ್ಯವಿತ್ತು. ಅಧರ್ಮದೊಳಗೇ ಧರ್ಮ ಸಿಲುಕಿತ್ತು, ಅಜ್ಞಾನವನ್ನು ಜ್ಞಾನವೆಂದು ನಂಬಿಸಲಾಗಿತ್ತು. ವಿದೇಶದೊಳಗೇ ದೇಶವನ್ನು  ಹೊರಗಿನವರು ಬೆಳೆಸುತ್ತಾ ಮೂಲವನರಿಯದೆ ಗುರುವನ್ನು ಹೊರಗಿನಿಂದ  ಹುಡುಕಿ ಹೊರಟವರಿಗೆ ಒಳಗಿದ್ದ ಗುರುವಿನ ಅರಿವಿಲ್ಲದೆ  ಅಂತರ ಬೆಳೆಯಿತು.ಇದೇ ಧರ್ಮಾಂತರ, ಜಾತ್ಯಾಂತರ, ಮತಾಂತರ, ಪಕ್ಷಾಂತರವಾಗಿ ದೇಶಾಂತರ ಹೋದರೆ ಪ್ರಗತಿ ಎನ್ನುವ  ರಾಜಕೀಯಶಕ್ತಿಯ ಹಿಂದೆ ಹೊರಟರೆ ಅಧೋಗತಿ ಎನ್ನುವುದು ವಾಸ್ತವದಲ್ಲಿ ಸರಿಯಾಗಿ ಕಾಣುತ್ತಿದೆ. ಆದರೂ ಅದೇ ಗುರು ಅದೇ ಶಿಕ್ಷಣ ಅದೇ ರಾಜಕೀಯ  ಜನ್ಮಜನ್ಮಾಂತರಕ್ಕೆ ಕಾರಣವಾಗಿದೆ.ಕಲಿಯುಗ ಕಲಿಕೆ ಒಳಗಿನ ಗುರುವಿನತ್ತ ಸಾಗಿದಾಗಲೇ ಗುರಿ ತಲುಪಬಹುದು. ಏನಂತೀರ?

ಅಂತರಂಗದಲ್ಲಿನ ಗುರು ಬಹಿರಂಗದ ಗುರುವಿನೊಂದಿಗೆ ಬೆರೆತಾಗಲೇ ಗುರಿತಲುಪಲಾಗುವುದು. ಇದರಲ್ಲಿ ಮೂರು ವರ್ಗದವರಿರುವರು, ದೈವಗುರು,ಮಾನವಗುರು,ಅಸುರಗುರು, ಯಾರಲ್ಲಿ ದೈವಗುಣವಿರುವುದೋ ಅವರು ದೇವಗುರುಗಳನ್ನು ಆಶ್ರಯಿಸುವರು,ಮಾನವೀಯ ಗುಣವಿದ್ದವರು ಮಾನವೀಯತೆಗೆ ಬೆಲೆಕೊಡುವರು,ಅಸುರಗುಣವಿದ್ದವರಲ್ಲಿ ಅಜ್ಞಾನವೇ ಹೆಚ್ಚಾಗಿದ್ದು ಅಸುರಿಶಕ್ತಿಯ ವಶವಾಗಿರುವರು.
ಮಾನವ ಮಧ್ಯವರ್ತಿ. ಮೊದಲು ಮಾನವನಾಗಿ ನಂತರ ದೈವತ್ವದ ಕಡೆಗೆ ಹೊರಡಬೇಕು.ಯಾವಾಗ ಮೊದಲೇ ಹೊರಗಿನ ರಾಜಕೀಯ ಶಕ್ತಿಯೆಡೆಗೆ ನಡೆಯುವನೋ ಅವನಿಗೆ ತಾನೇ ಪರರ ವಶದಲ್ಲಿರುವ ಸತ್ಯ ತಿಳಿಯದೆ ಹೋಗುತ್ತದೆ. ರಾಜಕೀಯದಲ್ಲಿ ಸತ್ಯ ಧರ್ಮ  ಇರದು.
ಗುರು ವ್ಯಕ್ತಿಯಲ್ಲ ಆತ್ಮಶಕ್ತಿಯಾಗಿದೆ. ಕಣ್ಣಿಗೆ ಕಾಣದ ಶಕ್ತಿಯನ್ನು  ಅನುಭವಿಸಿಯೇ ತಿಳಿದು ನಡೆದವರು ಗುರುವಾದರು. ಇದರಲ್ಲಿ ಮೇಲಿನ ದೈವ ಮಧ್ಯೆ ದ ದೇವರು ಕೆಳಗಿನ ದೇವರೆಂದು  ಮಾನವನೇ ಸೃಷ್ಟಿ ಮಾಡಿಕೊಂಡು  ಆಳುತ್ತಿರುವನಷ್ಟೆ. ಅಳುವವರು ಯಾರು? ಪ್ರಜಾಪ್ರಭುತ್ವದಲ್ಲಿ ರಾಜರು ಎಲ್ಲಿರುವರು? ನಾವ್ಯಾರ ಸೇವಕರು? ಪರಮಾತ್ಮನ ಸೇವಕರೆ ಪರಕೀಯರ ಸೇವಕರೆ?
ಪರಕೀಯರ ಸೇವಕರಿಗೆ ಹಣ ಸಿಗುತ್ತದೆ ಜ್ಞಾನ ಮಾರಾಟವಾಗಿರುತ್ತದೆ. ಪರಮಾತ್ಮನ ಸೇವಕರಿಗೆ ಹಣವಿಲ್ಲದೆಯೇ ಜ್ಞಾನೋದಯವಾಗಿರುತ್ತದೆ. ಮಧ್ಯೆ ನಿಂತಿರುವ ಮಾನವನಿಗೆ ಈ ಕಡೆ ಹಣ ಇನ್ನೊಂದು ಕಡೆ ಜ್ಞಾನವಿಜ್ಞಾನ ಕುಣಿಸುತ್ತಿದೆ. ಇದನ್ನರಿತರೆ  ಧರ್ಮ ನಮ್ಮ ಹತ್ತಿರವೇ ಇದ್ದರೂ  ನಾವೇ ನೋಡದೆ ಹೊರಗೆ ನೋಡುತ್ತಿರುವುದು ಸ್ಪಷ್ಟವಾಗಿ ಅರ್ಥ ವಾಗುತ್ತದೆ.
ಸಂನ್ಯಾಸಿಯಾಗಿದ್ದು ತಿಳಿಸುವ ಸತ್ಯ ಸಂಸಾರಿಗಳಿಗೆ ಅರ್ಥ ಆಗದು. ಹಾಗೆ ಸಂಸಾರದೊಳಗಿಳಿದು ಸಂನ್ಯಾಸಿಗಳಂತೆ ಬದುಕಿದರೂ  ಸಮಾಜ ಕೇಳದು. ಅವರವರ ಮನಸ್ಥಿತಿ ಪರಿಸ್ಥಿತಿ  ಜ್ಞಾನದ ಮೇಲೇ ನಿಂತಿದ್ದರೂ ಜ್ಞಾನದ ಶಿಕ್ಷಣ ಕೊಡದೆ ಜನರನ್ನು ಆಳೋದರಿಂದ ಧರ್ಮ ರಕ್ಷಣೆ ಆಗದು. ಜನಬಲ ಹಣಬಲವೆಲ್ಲವೂ ಗುರುವಿನಲ್ಲಿದ್ದರೂ  ಜ್ಞಾನದಾಸೋಹವಾಗದಿದ್ದರೆ ಧರ್ಮ ಉಳಿಯದು.
ಸತ್ತವರಿಗೆ ಹಣ ಕೊಡುವ‌ಬದಲು ಇದ್ದವರಿಗೆ ಜ್ಞಾನಕೊಟ್ಟರೆ  ಉತ್ತಮ ಬದಲಾವಣೆ ಸಾಧ್ಯವಿದೆ. 
ಭಾರತ ವಿಶ್ವಗುರು ಹಿಂದೆ ಆಗಿತ್ತು.ಈಗ ವಿಶ್ವದ ಎಲ್ಲಾ ರೀತಿಯ ಶಿಕ್ಷಣ ದೇಶದಲ್ಲಿದೆ ಆದರೆ  ಜನರಲ್ಲಿ ಅಧ್ಯಾತ್ಮ ಶಿಕ್ಷಣದ ಕೊರತೆಯಿದೆ. ಇದಕ್ಕೆ  ಕಾರಣವೇ  ಒಳಗಿದ್ದ ಗುರುವನ್ನು ಮರೆತು ಹೊರಗೆ ನಡೆದಿರೋದು.
ಮನೆ ಮನೆ ಗುರುಕುಲವಾಗಿತ್ತು.ತಾಯಿಯೇ ಮೊದಲ ಗುರುವಾಗಿದ್ದಳು .ಈಗ ಎಲ್ಲಾ ಹೊರಗೆ ಬೆಳೆದಿದೆ.ಮನೆ ಖಾಲಿಸ್ಥಾನ ವಾಗುತ್ತಿದೆ  ಎಂದರೆ  ಅರಿವಿನಕೊರತೆ ಒಳಗಿದೆ.

ಪುರಾಣ ಇತಿಹಾಸದ ಕಾಲ ಹಿಂದೆ ಧರ್ಮ ಸೂಕ್ಮದ ಜೊತೆಗೆ ಸತ್ಯವಿತ್ತು. ಈಗ ಧರ್ಮ ವೂ ಇಲ್ಲ ಸತ್ಯವೂ ಇಲ್ಲ ಎಲ್ಲಾ ಹೊರಮುಖವಾಗಿ ವ್ಯವಹಾರಕ್ಕೆ ಇಳಿದಿವೆ. ಹಣದಿಂದ  ಗುರುವಾಗಬಹುದೆ? 

ಶ್ರೀ ಕೃಷ್ಣ ಪರಮಾತ್ಮ ತಿಳಿಸಿದಂತೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಕಾಯೋನು ಒಳಗೇ ಅಡಗಿಕುಳಿತಿದ್ದರೂ ಹೊರಗಿನವರ ಹಿಂದೆ ಹೋದರೆ  ಅನರ್ಥ.
ಎಷ್ಟೋ ಬಡವರ ಹಣವನ್ನು  ಯಾರೋ ಶ್ರೀಮಂತ ರಿಗೆ ಹಂಚಿದರೆ  ಅಧರ್ಮ ವಷ್ಟೆ.
ಜ್ಞಾನವನ್ನು ಹಣದಿಂದ ಅಳೆಯುವುದೇ ಅಜ್ಞಾನ. ಸರಸ್ವತಿಯನ್ನು ಲಕ್ಮಿ ಯಂತೆ ವೈಭೋಗದಲ್ಲಿ  ಕಾಣುವುದೇ ಅಜ್ಞಾನ. ಹೊರಗೆ ತಳುಕುಬಳುಕು ಒಳಗೇ ಹುಳುಕು.
 ಯಾತ್ರಾಸ್ಥಳ ವನ್ನು ಪ್ರವಾಸಿತಾಣ ಮಾಡಿ ರಾಜಕೀಯ ನಡೆಸಬಹುದಷ್ಟೆ ಜನರಿಗೆ ಜ್ಞಾನ ಬರೋದಿಲ್ಲ.ಭಕ್ತಿಯೂ ಬರೋದಿಲ್ಲ ಕಾರಣ ವ್ಯವಹಾರದಲ್ಲಿ  ಹಣವೇ ಸರ್ವಸ್ವ. 
ಜೀವನ‌ನಡೆಸಲು ಹೆಣವನ್ನೂ ಮಾರುವ  ವ್ಯವಹಾರ ಕಲಿಕೆಯಲ್ಲಿಯೇ ಅಡಗಿ ಕಲಿಯುಗದ  ಶಿಕ್ಷಣದಾರಿತಪ್ಪಿದ ಹಳಿಯಾಗುತ್ತಿದೆ. ರೈಲು  ಹೊರಗೆ ಓಡಿದರೂ  ಒಳಗಿದ್ದ ಕೊಂಡಿ ಕಳಚಿದರೆ ಅಪಘಾತ ತಪ್ಪಿದ್ದಲ್ಲ. ಹಾಗೆ  ಸಂಸಾರದಲ್ಲಿ  ಒಳಗಿನ ಋಣ ತೀರಿಸದೆ ಹೊರಗೆ ಋಣ ಬೆಳೆದಂತೆಲ್ಲಾ  ಜೀವನ ರಣಾಂಗಣವಾಗುತ್ತದೆ.
ಇದಕ್ಕೆ ಕಾರಣವೇ  ಆ ಋಣ.ಋಣಭಾರ ಹೆಚ್ಚಾದಂತೆ ಆತ್ಮರಕ್ಷಣೆ ಕಷ್ಟ. ಅಂತರದಲ್ಲಿ ಮಧ್ಯವರ್ತಿಗಳು ನಿಂತು ತಮ್ಮ  ಜೀವನದ ಜೊತೆಗೆ ಪರರ ಜೀವನವನ್ನು ಹಾಳು ಮಾಡಿದರೂ ಕೇಳೋರಿಲ್ಲ. ಮಾನವನೊಳಗೆ ಇರುವ‌ ದೇವಾಸುರರ  ಶಕ್ತಿಯನ್ನು  ಗುರುತಿಸಿ ದೈವಶಕ್ತಿಗೆ ಸರಿಯಾದ ಶಿಕ್ಷಣ ಕೊಟ್ಟರೆ  ಮೇಲ್ಮಟ್ಟದ ಅಧ್ಯಾತ್ಮ ಚಿಂತನೆ ಯಿಂದ ಸತ್ಯ ತಿಳಿಯುತ್ತದೆ. ಕೆಳಗಿನವರಿಗೆ ಸಹಕರಿಸಿದಷ್ಟೂ ಇನ್ನಷ್ಟು ಭ್ರಷ್ಟ ದುಷ್ಟರು ಬೆಳೆದು  ದೇವತೆಗಳನ್ನು ಆಳುವರು.
ಬ್ರಹ್ಮಜ್ಞಾನವನ್ನು ಓದಿ ತಿಳಿಯುವುದೇ  ಬೇರೆ  ಅನುಭವಿಸಿ ತಿಳಿದು ತಿಳಿಸಿ ನಡೆಸೋದೇ ಬೇರೆ. ಸ್ವತಂತ್ರ ಭಾರತದಲ್ಲಿ ಭಾರತೀಯರಿಗೇ ಸ್ವತಂತ್ರ ವಿಲ್ಲವಾದರೆ ಪರಕೀಯರ ವಶದಲ್ಲಿ  ದೇಶವಿದೆ ಎಂದರ್ಥ .ಇದಕ್ಕೆ ಕಾರಣಪ್ರಜಾ ಸಹಕಾರ. ನಿಮ್ಮ ನಿಮ್ಮ ಮನೆಯ ಮನವ ತನುವ ಜೀವದ ಹೊಣೆಗಾರಿಕೆ ನಿಮ್ಮದೇ ಜ್ಞಾನದೊಳಗಿದೆ ಎಂದರು ಮಹಾತ್ಮರು ಗುರುಗಳು.‌ಈಗ‌ಹೇಗಿದೆ ನಮ್ಮ ಜ್ಞಾನ.ಎತ್ತ ಸಾಗಿದೆ‌  ಜ್ಞಾನ,?
ಸಾಮಾನ್ಯಜ್ಞಾನ ವಿಲ್ಲದೆ ವಿಶೇಷಜ್ಞಾನ ಬೆಳೆಸಿದರೆ ಆಗೋದೆ ಹೀಗೆ.
ಭೂ ತತ್ವ ತಿಳಿಯದೆ ಆಕಾಶದೆತ್ತರ ಹಾರಿದರೆ ಆಗೋದೆ ಹೀಗೆ.
ಒಟ್ಟಿನಲ್ಲಿ ಎಲ್ಲರಲ್ಲಿಯೂ ಬ್ರಹ್ಮನಿದ್ದಾನೆ  ಬ್ರಹ್ಮಜ್ಞಾನವೂ ಅಡಗಿದೆ ಆದರೆ ಅದನ್ನು  ಎಲ್ಲಾ ಗುರುಗಳೂ ಬೆಳೆಸಲಾಗಿಲ್ಲ.
ಸ್ವಾಗತಭಾಷಣ ಕೇವಲ ಸ್ವಾರ್ಥ ಕ್ಕೆ ಸೀಮಿತವಾದರೆ ಉಪನ್ಯಾಸ ಅನರ್ಥ ವಾಗಿರುತ್ತದೆ. ಕೊನೆಯ  ವಂದನಾರ್ಪಣೆ ಕಾಟಾಚಾರವಾಗಿ  ಸಾವನ್ನು ಅಪಾರ್ಥ ಮಾಡಿಕೊಂಡು  ವಿಜೃಂಬಿಸುವ  ಅಶಾಂತಿಯೆಡೆಗೆ  ಜನರನ್ನು ಹೊರಗೆಳೆಯಲಾಗುತ್ತದೆ.  ಇದ್ದಾಗ  ಕೊಡದ ಗೌರವ ಸತ್ತ ಹೆಣಕ್ಕೆ ಕೊಟ್ಟರೆ ಆತ್ಮಕ್ಕೆ ತೃಪ್ತಿ ಸಿಗುವುದೆ? ಇನ್ನಷ್ಟು ಋಣ ಹೊತ್ತು  ಹೋಗುತ್ತದೆ ಅಷ್ಟೇ. 
ಇದನ್ನು  ಭಾರತೀಯರು  ಅರ್ಥ ಮಾಡಿಕೊಂಡರೆ ಸಾಕು. ಪರಮಾತ್ಮ  ಎಷ್ಟೋ ನಮಗೆ ಹತ್ತಿರವೇ ಕೊಟ್ಟಿದ್ದರೂ ದೂರದ ಬೆಟ್ಟ ನುಣ್ಣಗೆ ಕಾಣುವುದೆಂದು ದೂರ ಹೋಗಿ ಸಾಯುತ್ತಿರುವವರನ್ನು ತಡೆಯಬಹುದು.
ಸಾವು ನಿಶ್ಚಿತ ಹಾಗೆ ಜನನವೂ ಇದೆ. ಇದರ ನಡುವಿನ ಜೀವನದ ರಹಸ್ಯವನ್ನು ಹಣದಿಂದ ತಿಳಿಯಲಾಗದೆನ್ನುವುದು ಸರ್ವ ಕಾಲಿಕ ಸತ್ಯವಾಗಿದೆ. ಜ್ಞಾನಶಕ್ತಿಯನ್ನು ಯಾರೂ ಕದಿಯಲಾಗದು.ಅದನ್ನು ಹಣದಿಂದ ಖರೀದಿಸಿದರೂ ಸದ್ಬಳಕೆ ಮಾಡಿಕೊಳ್ಳದಿದ್ದರೆ ಅಜ್ಞಾನವೇ ಬೆಳೆಯೋದು.
ಹೀಗಿರುವಾಗ  ಸಾಲ ಮಾಡಿ ಮಕ್ಕಳ ತಲೆಮೇಲೆ ಏರಿಸುವ ಶಿಕ್ಷಣದ ವಿಷಯದಲ್ಲಿ ನಮ್ಮ ಜ್ಞಾನವಿದೆಯೆ? ಇದರ ಬಗ್ಗೆ ಪೋಷಕರೆ  ಒಳಗಿದ್ದು ಆತ್ಮಾವಲೋಕನ ಮಾಡಿಕೊಳ್ಳಲು ಒಳಗಿನ ಗುರುಬಲ ಅಗತ್ಯವಿದೆ. ಒಳಗೆ ಗುರುವಿಲ್ಲವಾದರೆ ಹೊರಗಿನ ಗುರು ಏನೂ ಮಾಡಲಾಗದು.

No comments:

Post a Comment