ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Saturday, May 31, 2025

ಸೇವೆ ಹೇಗಿರಬೇಕು?

ದೇಶಭಕ್ತರು ದೇಶದೊಳಗೆ ಸೇವೆ ಮಾಡಿದರೆ  ದೇಶ ಗೌರವಿಸುವುದಿಲ್ಲ. ಅದೇವಿದೇಶದೊಳಗಿದ್ದು  ಸ್ವದೇಶದ ಸೇವೆ ಮಾಡಿದರೆ ಗೌರವ ಹೆಚ್ಚುವುದು. ಯಾವುದು ಸರಿ?
ಎರಡೂ ಸೇವೆಯೇ ಆಗಿದೆ  ಯಾವುದರಲ್ಲಿ ಪ್ರತಿಫಲಾಪೇಕ್ಷೆ  ಇಲ್ಲವೋ ಅದು ನಿಜವಾದ ಸೇವೆಯಾಗಿರುತ್ತದೆ.
ದೇಶದೊಳಗೆ  ಸೇವೆ ಮಾಡೋದು  ಧರ್ಮ. ಧರ್ಮ ಕಾರ್ಯ ನಿಸ್ವಾರ್ಥ ‌ನಿರಹಂಕಾರದಿಂದ‌ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದರೆ ಪರಮಧರ್ಮ. ಇದು  ಋಣದಿಂದ‌‌ ಬಿಡುಗಡೆ‌ಗೊಳಿಸಿ ಆತ್ಮಕ್ಕೆ ಶಾಂತಿ ಕೊಡುತ್ತದೆ.
ಅಂತರಾತ್ಮನ ಶಾಂತಿಗಾಗಿಯೇ ಪರಮಾತ್ಮನ ಸೇವೆ ಎಂದಾಗ ತಾಯಿ ಸೇವೆ,ಭೂ ಸೇವೆ ಪ್ರಜಾಸೇವೆ,ದೇಶಸೇವೆ,ಸಮಾಜಸೇವೆ, ಸಂಸಾರ ಸೇವೆಯು  ಪರಮಾತ್ಮನಿಗೆ  ಸಲ್ಲಬೇಕೆಂದರೆ  ಸತ್ವ ಸತ್ಯ ತತ್ವದಲ್ಲಿರಬೇಕು.

ಒಳಗಿನಿಂದ ಅರಿವು ಮೂಡುವುದಕ್ಕೂ‌ಹೊರಗಿನಿಂದ ಅರಿವು‌ ಬೆಳೆಯುವುದಕ್ಕೂ  ಅಂತರವಿದ್ದರೂ ಎರಡೂ  ಸೇರಿದಾಗ ಒಂದೇ  ಆಗುತ್ತದೆ. ಜ್ಞಾನ ವಿಜ್ಞಾನ ದ ಅಂತರದಲ್ಲಿ ಸಾಮಾನ್ಯ ಜ್ಞಾನ‌ನಿರ್ಲಕ್ಯ ಮಾಡಿದರೆ  ಮಾನವ‌
ಮಾನವನಾಗಿರೋದಿಲ್ಲ. ಮನುಕುಲಕ್ಕೆ ‌ಮಾಧ್ಯಮವಾಗಿರುವ ಭೂಮಿಯನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆಕಾಶಕ್ಕೆ   ಏಣಿ ಹಾಕೋ  ವಿಜ್ಞಾನವೂ ಅಜ್ಞಾನವಾಗುತ್ತದೆ.
ಅಧ್ಯಾತ್ಮ ಸಂಶೋಧನೆಯಾಗದೆ  ಭೌತಿಕದಲ್ಲಿ ಸಂಶೋಧನೆ ಮಾಡುತ್ತಾ ಸೇವೆ ಎಂದರೆ  ಅಸುರರೂ ಬೆಳೆಯುವರು.
ದಾನಧರ್ಮ  ಅಸುರರಿಗೂ  ಇದ್ದರೂ  ಅದರ ಮೂಲ ಗುರಿ ಸ್ವಾರ್ಥ ಅಹಂಕಾರ  ಪ್ರತಿಫಲಾಪೇಕ್ಷೆ  ಆದಾಗ  ಅಧರ್ಮ ಬೆಳೆಯುತ್ತದೆ. ಭ್ರಷ್ಟ ದುಷ್ಟರಲ್ಲಿ‌ಹಣವಿದ್ದರೂ  ಅದರ ದುರ್ಭಳಕೆ ಹೆಚ್ಚಾಗಿರುತ್ತದೆ. ಇತರರಿಗೆ  ಕೊಟ್ಟರೂ  ಅದೂ ಕೂಡ ಪಾಪದ ಹಣವಾಗಿದ್ದು ಪಡೆದವರಿಗೂ ಕಷ್ಟ ನಷ್ಟ.
ಹಾಗಾಗಿ ಹಣದಿಂದ ಸೇವೆ ಮಾಡೋದಕ್ಕೂ ಸತ್ಯಜ್ಞಾನದಿಂದ ಸೇವಕರಾಗೋದಕ್ಕೂ ವ್ಯತ್ಯಾಸವಿದೆ. 
ದೇವರು ಕೇಳಿದ್ದೆಲ್ಲಾ ಕೊಡಬಹುದು. ಕೊಟ್ಟದ್ದನ್ನು ಬಳಸುವ‌ ಜ್ಞಾನ‌ ಮಾನವನಿಗಿರಬೇಕು. ಅಥವಾ  ಏನು ಕೇಳಿದರೆ ಆತ್ಮತೃಪ್ತಿ ಸಿಗಬಹುದೆನ್ನುವ ಆತ್ಮಜ್ಞಾನವಿದ್ದರೆ  ಕೇಳೋದೆ ಇಲ್ಲ. ಕೊಡೋನು‌ ಕೊಡಬಹುದಷ್ಟೆ.
ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ‌ನಾಮ ಒಂದಿದ್ದರೆ ಸಾಕು.. ದಾಸರಂತೆ  ಬದುಕುವುದು ಕಷ್ಟ.ಕೊನೆಪಕ್ಷ ದೇಶ ಸೇವೆಯಲ್ಲಿ ದಾಸರಾಗಿ  ಸತ್ಯ ಧರ್ಮ ಕ್ಕೆ ಸಹಕರಿಸುವ‌ಗುಣ ಇದ್ದರೆ ಈ ದಾಸ್ಯತ್ವದಿಂದ  ಬಿಡುಗಡೆ ಸಾಧ್ಯ.
ಸ್ವತಂತ್ರ ಭಾರತದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ? ಪ್ರಜೆಗಳು ಯಾರ ದಾಸರಾಗಿ   ಸೇವಕರಾಗಿದ್ದಾರೆ? 
"ಸರ್ಕಾರದ ಕೆಲಸ ದೇವರ‌ ಕೆಲಸ" ಎಂದರು ಈಗ ಹೇಗಿದೆ?
ದೈವತ್ವದ ವಿರುದ್ದವಿದ್ದರೆ  ಸೇವೆ ಯಾರದ್ದಾಗುತ್ತದೆ?
ಸತ್ಯದ ವಿರುದ್ದವಿದ್ದರೆ  ದೇವರು ಕಾಣುವರೆ?
ದೇಶ ಒಂದೇ ಇದ್ದರೂ  ಅದರ ಒಳಗಿದ್ದು ವಿದೇಶ ಸೇವೆ ಮಾಡಿದರೆ  ಋಣ ತೀರುವುದೆ? ಭೂಮಿಯನ್ನು ಮಾರಿಕೊಂಡು ಹಣಗಳಿಸಿ   ಭೂ ತಾಯಿಯ ಮಕ್ಕಳನ್ನು ಆಳಿದರೆ  ಭೂ ಸೇವೆ ಆಗುವುದೆ? ಹೀಗೇ ಪ್ರತಿಯೊಂದು ಧರ್ಮ , ಜಾತಿ,ಪಂಗಡ,ಭಾಷೆ, ಸಂಸ್ಕೃತಿ ಶಾಸ್ತ್ರ  ಮಾನವನ ಸೃಷ್ಟಿ. ಮೂಲವನ್ನರಿಯದೆ ಹೊರಗೆ ಬೆಳೆದಿರುವ ಹಲವುಗಳು  ಮೂಲಶಕ್ತಿಯಿಂದ ದೂರವಾದಷ್ಟೂ  ಅಜ್ಞಾನ ಆಗುತ್ತದೆ. ಅಂತರ‌ಬೆಳೆದಷ್ಟೂ ಅವಾಂತರ ಸೃಷ್ಟಿ ಮಾಡುವ ಮಧ್ಯವರ್ತಿಗಳು  ಅತಂತ್ರಸ್ಥಿತಿಗೆ  ತಲುಪಿದಾಗ  ಇದನ್ನು ಸರಿಪಡಿಸಲು ಮಹಾತ್ಮರ ಜನ್ಮಗಳಾಗಿವೆ. ಆ ಮಹಾತ್ಮರ ಸೇವೆ ಪರಮಾತ್ಮನೆಡೆಗೆ ನಡೆಸಿತ್ತು .ಯಾವಾಗಿದು ದೇಶ ಬಿಟ್ಟು ವಿದೇಶಕ್ಕೆ  ಹೋಯಿತೋ  ದೇಶ ಹಿಂದುಳಿಯಿತು. ಒಟ್ಟಿನಲ್ಲಿ ತತ್ವದಿಂದ ಸಮಾನತೆ ಬೆಳೆಯಬೇಕು. ಸಮಾನತೆ ಶಾಂತಿಯೆಡೆಗೆ ನಡೆಸುತ್ತದೆ. ಶಾಂತಿಯಿಂದ  ಮನಸ್ಸು ಧ್ಯಾನ ಕ್ಕೆ  ಇಳಿಯುತ್ತದೆ. ಧ್ಯಾನದಿಂದ ಆತ್ಮಜ್ಞಾನ.ಆತ್ಮಜ್ಞಾನದಿಂದ ಆತ್ಮಾವಲೋಕನ. ಆತ್ಮಾವಲೋಕನದಿಂದ ಮಾನವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅರಿವೇ ಗುರು.ಗುರು ಸೇವೆಯೇ  ಶ್ರೇಷ್ಠ ವಾಗಿರುತ್ತದೆ. ಇದರಲ್ಲಿ ತಾಯಿಯೇ ಮೊದಲ ಗುರು.‌ತಂದೆ ಎರಡನೇ ಗುರು.ಯಾವಾಗ ತಂದೆತಾಯಿಯರಿಗೆ  ಜ್ಞಾನ ಬರುವುದೋ ಮಕ್ಕಳು ಅದೇ ಮಾರ್ಗ ಹಿಡಿಯುವರು. ಇದರ ಮೂಲ ಶಿಕ್ಷಣ ವಾಗಿದೆ.
ಒಂದು ದೇಶದ ಸೇವೆ ಮಾಡೋದು ಸುಲಭವಿಲ್ಲ. ಮೊದಲು ಮನೆಯೊಳಗೆ  ಸೇವೆಯ ಅರ್ಥ ತಿಳಿದವರು ಸಮಾಜ ಮತ್ತು ದೇಶ ಸೇವೆಯನ್ನು ಮನೆಯೊಳಗೆ ಇದ್ದೂ ಮಾಡುವರು. ಅಂದರೆ ಇದು ತೋರುಗಾಣಿಕೆಯಾಗಿರದು.

No comments:

Post a Comment