ಸಿದ್ದಿ ಪಡೆದ ಸಿದ್ದರು

ಅತೀಂದ್ರಿಯ ಲೋಕದ ರಹಸ್ಯ.. ಸಿದ್ಧಿ ಮತ್ತು ಸಿದ್ಧರ ವಾಸ್ತವ ಸತ್ಯಗಳು: ಬಾಹ್ಯಾಕಾಶದ ಅನಂತತೆಯನ್ನು ಅಳೆಯಲು ಹೊರಟಿರುವ ನವೀನ ವಿಜ್ಞಾನಕ್ಕೇ ಸವಾಲೆಸೆಯುವ, ಪ್ರಕೃತಿಯ ನಿಯಮ...

Wednesday, May 28, 2025

ವಿವೇಚನೆಯಿಂದ ಪಾಂಡಿತ್ಯ

🚩🔯🌸🌄⚛🌅🌸🔯

*ಪರಿಚ್ಛೇದೋ ಹಿ ಪಾಂಡಿತ್ಯಂ* 
*ಯದಾಪನ್ನಾ ವಿಪತ್ತಯಃ ।*
*ಅಪರಿಚ್ಛೇದಕರ್ತೃಣಾಂ* 
*ವಿಪದಃ ಸ್ಯುಃ ಪದೇ ಪದೇ ।।*
(ಸಮಯೋಚಿತ ಪದ್ಯ ಮಾಲಿಕಾ)

ವಿಪತ್ತುಗಳು ಉಂಟಾದರೆ ವಿವೇಚನೆಯಿಂದ ಸಹಿಸುವುದೇ ಪಾಂಡಿತ್ಯ. ವಿವೇಚನೆ ಇಲ್ಲದೆ ಕೆಲಸ ಮಾಡುವವರಿಗೆ 
ಹೆಜ್ಜೆ ಹೆಜ್ಜೆಗೂ ವಿಪತ್ತುಗಳೇ ಉಂಟಾಗುತ್ತವೆ.

ಕೋಪದಿಂದ ಮೂಗು ಕೊಯ್ದುಕೊಂಡರೆ ಮತ್ತೆ ಬರುವುದೆ?ಎನ್ನುವರು. ಕಾಲ ಬದಲಾಗಿದೆ ಮೂಗನ್ನೂ ವೈಧ್ಯಕೀಯ ಜಗತ್ತಿನಲ್ಲಿ ಜೋಡಿಸುವರು.ಆದರೆ ಮೂಲದಲ್ಲಿ ದ್ದ ಮೂಗು ಮತ್ತೆ ಬರೋದಿಲ್ಲ.ಹೀಗೇ ನಮ್ಮ ಮೂಲವನ್ನರಿತು ನಿಧಾನವಾಗಿ  ಮೇಲೇರುವವರಿಗೆವಿವೇಕ ವಿವೇಚನೆ ಇರುತ್ತದೆ. ಬರುವ ಅಡೆಗಡೆಗಳು ವಿಪತ್ತುಗಳನರಿತು ಕೆಲಸ ಮಾಡುವವರಲ್ಲಿ ಸಹನೆಯೂ ಇರುತ್ತದೆ. ಇದನ್ನು ತಾಳಿದವನು ಬಾಳಿಯಾನು ಎಂದಿರುವರು.

No comments:

Post a Comment