ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Wednesday, May 28, 2025

ವಿವೇಚನೆಯಿಂದ ಪಾಂಡಿತ್ಯ

🚩🔯🌸🌄⚛🌅🌸🔯

*ಪರಿಚ್ಛೇದೋ ಹಿ ಪಾಂಡಿತ್ಯಂ* 
*ಯದಾಪನ್ನಾ ವಿಪತ್ತಯಃ ।*
*ಅಪರಿಚ್ಛೇದಕರ್ತೃಣಾಂ* 
*ವಿಪದಃ ಸ್ಯುಃ ಪದೇ ಪದೇ ।।*
(ಸಮಯೋಚಿತ ಪದ್ಯ ಮಾಲಿಕಾ)

ವಿಪತ್ತುಗಳು ಉಂಟಾದರೆ ವಿವೇಚನೆಯಿಂದ ಸಹಿಸುವುದೇ ಪಾಂಡಿತ್ಯ. ವಿವೇಚನೆ ಇಲ್ಲದೆ ಕೆಲಸ ಮಾಡುವವರಿಗೆ 
ಹೆಜ್ಜೆ ಹೆಜ್ಜೆಗೂ ವಿಪತ್ತುಗಳೇ ಉಂಟಾಗುತ್ತವೆ.

ಕೋಪದಿಂದ ಮೂಗು ಕೊಯ್ದುಕೊಂಡರೆ ಮತ್ತೆ ಬರುವುದೆ?ಎನ್ನುವರು. ಕಾಲ ಬದಲಾಗಿದೆ ಮೂಗನ್ನೂ ವೈಧ್ಯಕೀಯ ಜಗತ್ತಿನಲ್ಲಿ ಜೋಡಿಸುವರು.ಆದರೆ ಮೂಲದಲ್ಲಿ ದ್ದ ಮೂಗು ಮತ್ತೆ ಬರೋದಿಲ್ಲ.ಹೀಗೇ ನಮ್ಮ ಮೂಲವನ್ನರಿತು ನಿಧಾನವಾಗಿ  ಮೇಲೇರುವವರಿಗೆವಿವೇಕ ವಿವೇಚನೆ ಇರುತ್ತದೆ. ಬರುವ ಅಡೆಗಡೆಗಳು ವಿಪತ್ತುಗಳನರಿತು ಕೆಲಸ ಮಾಡುವವರಲ್ಲಿ ಸಹನೆಯೂ ಇರುತ್ತದೆ. ಇದನ್ನು ತಾಳಿದವನು ಬಾಳಿಯಾನು ಎಂದಿರುವರು.

No comments:

Post a Comment