ಹಿಂದೂ ಸನಾತನ ಧರ್ಮದ ಪ್ರಕಾರ ಭೂಮಿಯಲ್ಲಿ ಜನ್ಮ ಪಡೆಯಲು ಕಾರಣ ಭೂಮಿ ಋಣ ತಾಯಿ ಋಣ..
ಭೂ ಸೇವೆಯಿಂದ ಭೂಋಣ ತೀರುವುದು.ಭೂಮಿಯನ್ನು ದುರ್ಭಳಕೆ ಮಾಡಿಕೊಂಡರೆ ಕೊರೊನ ಹೆಚ್ಚುವುದು.
ಋಣ ಸಂದಾಯ ಮಾಡಲು ಸತ್ಕರ್ಮ ಸ್ವಧರ್ಮ ಸ್ವಾಭಿಮಾನ ಸ್ವಾವಲಂಬನೆ ಸ್ವತಂತ್ರ ಜ್ಞಾನದಿಂದ ಸಾಧ್ಯವೆಂದರು.
ಹಾಗಾದರೆ ಇಂದು ಇದು ಯಾರಿಗೆ ಸಾಧ್ಯವಾಗಿದೆ? ಶಿಕ್ಷಣವೇ ನಮ್ಮದಲ್ಲದ ವಿಚಾರವಾದರೆ ಭಾಷೆಯೂ ಅನ್ಯರದ್ದೆ ಆದರೆ, ವ್ಯವಹಾರವೂ ಹೊರಗಿನವರದ್ದೆ ಹೀಗಿರುವಾಗ ನಮ್ಮ ತಾಯಿ ಋಣ ತೀರುವುದೆ? ಇದರಲ್ಲಿ ಕೇವಲ ಹೆತ್ತ ತಾಯಿ ಮಾತ್ರವಲ್ಲ ದೇಶ, ಭಾಷೆ ,ಸಂಸ್ಕೃತಿ , ಆಚಾರ ವಿಚಾರ ಪ್ರಚಾರಗಳಿಂದ ಸಾಲ ಅಥವಾ ಋಣ ತೀರಿದೆಯೆ ಬೆಳೆದಿದೆಯೆ?
ಸಾಮಾನ್ಯ ಜ್ಞಾನದ ಈ ವಿಚಾರದ ಬಗ್ಗೆ ಚರ್ಚೆ ಆಗದು.
ಅದಕ್ಕಾಗಿ ಇಂದು ಋಣಭಾರಹೊತ್ತು ಜೀವ ಹೋಗುತ್ತಿದೆ ಮತ್ತೆ ಮತ್ತೆ ಜನಗಮ ಪಡೆಯುತ್ತದೆ. ಜನಸಂಖ್ಯೆ ಬೆಳೆದಿದೆ
ಜ್ಞಾನಿಗಳ ಸಂಖ್ಯೆ ಇಳಿಯುತ್ತಿದೆ.
ಏನೇ ಆದರೂ ಋಣ ತೀರಿಸಲು ನಿಸ್ವಾರ್ಥ ನಿರಹಂಕಾರ ದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕೆಂದು ಭಗವದ್ಗೀತೆ ಯಲ್ಲಿ ಸ್ವಯಂ ಪರಮಾತ್ಮನೇ ತಿಳಿಸಿರುವುದಾಗಿದೆ. ಕಲಿಕೆಯ ಪ್ರಭಾವ ಕಲಿಗಾಲ. ಯೋಗದಿಂದ ಸ್ವಾವಲಂಬನೆ ಭೋಗಕ್ಕಾಗಿ ಪರಾವಲಂಬನೆ ಹೆಚ್ಚಾಗಿದೆ.
No comments:
Post a Comment