ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Wednesday, May 28, 2025

ವಾಸ್ತವ ಸತ್ಯ ಅರಿತು ನಡೆಯಬೇಕು

*...🌹.*ಸ್ಪೂರ್ತಿ ಕಿರಣ*✍️
        *ವಾಸ್ತವ ಹೇಗಿದೆಯೋ ಹಾಗೆಯೇ ಅದನ್ನು ಎದುರಿಸಿ. ಅದು ಹೀಗಿರಬೇಕಿತ್ತು, ಹಾಗಿರಬೇಕಿತ್ತು ಅಂತ ಅಂದುಕೊಳ್ಳುವುದು ವ್ಯರ್ಥ. ವಾಸ್ತವ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಸಹನೀಯಗೊಳಿಸುವುದೇ ಬದುಕಿನಲ್ಲಿ ಅಡಗಿರುವ ಸ್ವಾರಸ್ಯ.* *ನನ್ನನ್ನು ನಂಬಿ ಎಂದು ಯಾರನ್ನೂ ಕೇಳಿಕೊಳ್ಳಬಾರದು* *ನಮ್ಮ ನಡೆ-ನುಡಿಯಿಂದ ಬೇರೆಯವರೇ ನಮ್ಮನ್ನು ನಂಬುವಂತಾಗಬೇಕು.ಜೀವನದಲ್ಲಿ ಶಾಂತವಾಗಿರಬೇಕೆಂದರೆ ಮರೆಯಲಾಗದ ವ್ಯಕ್ತಿಗಳನ್ನು ಕ್ಷಮಿಸಿಬಿಡಬೇಕು,ಕ್ಷಮಿಸಲಾಗದ ವ್ಯಕ್ತಿಗಳನ್ನು ಮರೆತುಬಿಡಬೇಕು*. *. 
ಮರೆಯುವುದು ಒಂದು ರೋಗವೆನ್ನುವರು.ಆದರೆ ಕೆಟ್ಟದ್ದನ್ನು ಮರೆಯುವುದು ಆರೋಗ್ಯದ ಲಕ್ಷಣ. ಒಳ್ಳೆಯದನ್ನು ‌ಮರೆಯಬಾರದು. ವಾಸ್ತವದಲ್ಲಿ ಬದುಕೋದಕ್ಕೆ ಭೂತ ಭವಿಷ್ಯದ ಅರಿವಿರೋದು ಉತ್ತಮವಾದರೂ ಅದರೊಳಗೆ ಇದ್ದು  ವಾಸ್ತವ ಮರೆತರೆ  ಕಷ್ಟ.
ಎಷ್ಟೋ ಮಂದಿ  ಜೀವನವಿಡೀ ಹಣಸಂಪಾದನೆಯನ್ನೇ ಗುರಿಯಾಗಿಸಿಕೊಂಡರೆ ಹಲವರಿಗೆ ಹಣದ್ದೇ ಚಿಂತೆ. ಎಷ್ಟು  ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೆಂದರೆ ಹಣದ ಬಳಕೆಯಲ್ಲಿ ದೋಷವಿದೆ ಎಂದಾಗುತ್ತದೆ. ಆಸೆಯೇ ದು:ಖದ ಮೂಲ ಇದು ಅತಿಆಸೆಯಾದಾಗ  ಹಣ ದುರ್ಭಳಕೆ ಆಗುತ್ತದೆ. ಭ್ರಷ್ಟ ದುಷ್ಟರಲ್ಲಿ ಹಣವಿರುತ್ತದೆ ಆದರೆ ಜ್ಞಾನವಿರದ ಕಾರಣದಿಂದಾಗಿ  ಹಣಕ್ಕಾಗಿ  ಅಡ್ಡದಾರಿ ಹಿಡಿದು  ಹಿಂದಿರುಗಲಾಗದೆ  ಅತಂತ್ರಸ್ಥಿತಿಗೆ ತಾವೂ ತಲುಪಿ ಅವರ ಹಿಂದೆ ನಡೆದವರನ್ನೂ ದಾರಿತಪ್ಪಿಸುವರು.
ಹಾಗೆ ದಾರಿತಪ್ಪಿದಾಗ  ಯಾರನ್ನೂ ಕಾರಣವೆನ್ನುವುದು  ತಪ್ಪು ಸರಿದಾರಿ ಹಿಡಿದು ಶಾಂತವಾಗಿದ್ದರೆ  ದಾರಿಸುಗಮವಾಗುತ್ತದೆ. ಅಂತಹ  ಮನಸ್ಥಿತಿ  ಬರಲು  ಕಷ್ಟ.
ಆಗೋದೆಲ್ಲಾ ಒಳ್ಳೆಯದಕ್ಕೆ ಅನುಭವಿಸಿದ ಮೇಲೇ ತಿಳಿಯೋದು ಒಳ್ಳೆಯದು‌ಕೆಟ್ಟದ್ದು ಎರಡೂ ಒಳಗಿರುವ ಬುದ್ದಿ  ಬಳಸಿದಂತಿರುತ್ತದೆಂದು.
ಬುದ್ದಿವಂತಿಕೆ   ಸ್ವಂತ ಜ್ಞಾನದಿಂದ ಬೆಳೆದರೆ ಉತ್ತಮ.

No comments:

Post a Comment