ಇಂದು ಅವಕಾಶಗಳಿಗೇನೂ ಕಡಿಮೆಯಿಲ್ಲ.ಆದರೆ ನಮ್ಮ ಚಿಂತನೆಯನ್ನು ಬಳಸಿಕೊಂಡು ಮುನ್ನೆಡೆಯುವ ಅವಕಾಶ ಕಡಿಮೆಯಿದೆ. ಉತ್ತಮ ಚಿಂತನೆಗಳು ಹೊರಗೆ ಬರಲು ಉತ್ತಮರ ಸಹಕಾರದ ಜೊತೆಗೆ ಅವಕಾಶ ಅಧಿಕಾರ ಅಗತ್ಯ.
ಅದೃಷ್ಟ ಯಾವಾಗಲೂ ಒಂದೇ ರೀತಿಯಿರದು. ಬುದ್ದಿಶಕ್ತಿ ಇರಬಹುದು. ಬುದ್ದಿವಂತಿಕೆಯಿಂದ ಅವಕಾಶಗಳನ್ನು ಆರಿಸಿಕೊಳ್ಳಬೇಕಿದೆ. ಎಲ್ಲಾ ಅವಕಾಶಗಳೂ ಬುದ್ದಿಶಕ್ತಿಯನ್ನು ಹೆಚ್ಚಿಸಲಾಗದು.
ನಾಟಕ ಮಾಡೋರಿಗೆ ಅವಕಾಶಗಳಿಗೇನೂ ಕೊರತೆಯಿಲ್ಲ. ನೋಡೋರು ಮಾತ್ರ ಬುದ್ದಿವಂತರಾಗಿರಬೇಕು.
No comments:
Post a Comment