ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, April 27, 2025

ಸ್ವತಂತ್ರ ಜ್ಞಾನ ಒಳಗಿತ್ತೋ ಹೊರಗಿರತ್ತೋ

ಅಧ್ಯಾತ್ಮ ಸಂಪತ್ತಿನಿಂದ ಬುದ್ದಿವಂತಿಕೆ ಬೆಳೆಸಿಕೊಂಡು ಭೂಮಿಯ ಋಣ ತೀರಿಸುವ ಧರ್ಮ ಕರ್ಮದ ಕಡೆಗೆ ತಾಳ್ಮೆಯಿಂದ ‌ನಡೆದವರು ದೈವೀಕ ಗುಣಜ್ಞಾನವನ್ನರಿತು ನಂಬಿಕೆಯೇ ದೇವರೆಂದರಿತು ಕಷ್ಟದಲ್ಲೂ ಸುಖವನ್ನು ಕಂಡವರು ನಗುತ್ತಲೇ  ದುಡ್ಡಿಲ್ಲದಿದ್ದರೂ  ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲವೆಂದು ಅರ್ಥ ಮಾಡಿಕೊಂಡು ಇರುವ ಆಸ್ತಿ ಹಣವೆಲ್ಲವನ್ನೂ ದಾನ ಮಾಡಿ  ಕೊನೆಯಲ್ಲಿ ಒಳಗೇ ಇದ್ದ ಪರಮಾತ್ಮನ  ಸತ್ಯಕ್ಕೆ ಶರಣಾದರು ದಾಸರಾದರು. ಇದು ಸನಾತನ ಧರ್ಮವನ್ನು ಉಳಿಸಿ‌ಬೆಳೆಸಿತ್ತು.ಈಗ ಹೇಗಿದೆ?  ಎಲ್ಲರೂ ಒಂದು ರೀತಿಯಲ್ಲಿ ಬಂಧನಕ್ಕೆ ಒಳಗಾಗಿರುವ ಕೈದಿಗಳೇ ಆಗಿದ್ದರೂ  ಸ್ವತಂತ್ರವೆನ್ನುವ ಭ್ರಮೆಯಲ್ಲಿ ಹೊರಗೆ ಓಡಾಡುತ್ತಿದ್ದೇವೆ.

No comments:

Post a Comment