ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Monday, April 28, 2025

ಅಹಿಂಸೋ ಪರಮೋಧರ್ಮ:

ಅಹಿಂಸೋ ಪರಮೋಧರ್ಮ:
ಇಲ್ಲಿ ಯಾವ ಧರ್ಮದಲ್ಲಿ ಹಿಂಸೆಯಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಎಲ್ಲಾ ಧರ್ಮದಲ್ಲೂ ಹಿಂಸೆಯಿದೆ. ಜೀವಹಿಂಸೆ ಪ್ರಾಣಿ ಹಿಂಸೆ, ಮನಸ್ಸಿಗೆ ಹಿಂಸೆ  ಈ ಹಿಂಸೆಯೇ ಅಧರ್ಮಕ್ಕೆ ಕಾರಣ.
ಸತ್ಯ ಹೇಳಿದರೂ ಹಿಂಸೆ ಹೇಳದಿದ್ದರೂ ಹಿಂಸೆ. ಇದರಿಂದ ಮುಕ್ತಿಯಿದೆಯೆ? 
ಈ ಜಗತ್ತಿನಲ್ಲಿ  ನಾನೆಂಬ ಅಹಂಕಾರ ಸ್ವಾರ್ಥ ವೇ ಹಿಂಸೆಯ ಮೂಲ. ಹಾಗಾದರೆ ನಾನ್ಯಾರು? ಈ ಪ್ರಶ್ನೆಗೆ ಉತ್ತರ ಹಿಂಸೆ ಮಾಡಿದವರಿಗೆ ಸಿಗೋದಿಲ್ಲ. ಆ ಉತ್ತರ ಸಿಕ್ಕವರು ಹೇಳಿದರೂ  ಹಿಂಸೆ ತಪ್ಪೋದಿಲ್ಲ.
ಎಷ್ಟೋ ಮಹಾತ್ಮರನ್ನು  ಅರ್ಥ ಮಾಡಿಕೊಳ್ಳದೆ ಈ ಹಿಂಸಾತ್ಮಕ ಜಗತ್ತಿನಲ್ಲಿ ಮೆರೆದವರು  ಪ್ರಖ್ಯಾತರಾದರು.
ನಿಜವಾಗಿಯೂ ಇವರನ್ನು ಪ್ರಖ್ಯಾತ ಮಾಡಿದವರೂ ಹಿಂಸೆ ಮಾಡುವವರೆ ಆಗಿರೋದು ಸತ್ಯ.
ಸತ್ಯವೆನ್ನುವುದು  ಒಂದು ಮರೀಚಿಕೆಯಿದ್ದಂತೆ. ಹತ್ತಿರ ಹೋದರೆ  ನುಣುಚಿಕೊಂಡು ಹೋಗುತ್ತದೆ. ಹಾಗಾಗಿ ಸತ್ಯದ ಬೆನ್ನತ್ತಿದವರಿಗೆ ಕಷ್ಟ ಹೆಚ್ಚು. ಕಷ್ಟಪಡದೆ ಸುಖವಿಲ್ಲ ಎಂದು  ಹಿಂಸೆಯನ್ನು ಸಹಿಸಿಕೊಂಡು  ಸತ್ಯದೆಡೆಗೆ  ನಡೆದರು.
ಇದರಲ್ಲಿ ಸ್ತ್ರೀ ಪುರುಷರಿಬ್ಬರೂ‌ಸಮಾನರೆ. ಆದರೆ ಸ್ತ್ರೀ ಗಾದ ಹಿಂಸೆ ಪುರುಷರಿಗಾಗಿಲ್ಲ. ಸಹನೆ ಎನ್ನುವುದು ಸ್ತ್ರೀ ಗುಣ.
ಹೀಗಿರುವಾಗ  ಸಹಿಸಿಕೊಂಡಷ್ಟೂ ಹಿಂಸೆಯೇ ಎಂದಾಗ ಎಷ್ಟೋ ನಾರಿಯರು‌ ಮಾರಿಯಾಗಿ ಹಿಂಸೆಯಿಂದ ಹೊರಬರುವರು. ಹೊರಗೆ ಬಂದರೂ  ಹೊರಗಿನವರಿಂದ ಹಿಂಸೆಯಾದಾಗ ಒಳನಡೆಯೋ ದಾರಿ ಇದ್ದರೂ ಮನಸ್ಸಿಗೆ ಹಿಂಸೆಯೇ. 
ಯಾವುದನ್ನು ಧರ್ಮ ವೆಂದರೂ ಅದರಿಂದ ಹಿಂಸೆ ಎಂದರೆ  ಧರ್ಮ ಉಳಿಯದು.
ಪುರಾಣಕಾಲದಿಂದಲೂ  ಇದು ನಡೆದಿದೆ.ನಡೆಯುತ್ತಿದೆ ನಡೆದಿರುತ್ತದೆ.ಇದಕ್ಕೆ ಕಾರಣವೇ ಕರ್ಮ ವಾಗಿದೆ. ಯಾವುದನ್ನು ಮಾಡಬಾರದೋ ಅದನ್ನು ಮಾಡಿದರೆ ಹಿಂಸೆ ಅನುಭವಿಸಬೇಕು. ಯಾರನ್ನು ಆಳಬೇಕಿತ್ತೋ ಯಾರನ್ನು ಪ್ರತೀಸಬೇಕೆತ್ತೋ ಯಾರನ್ನು ಪೂಜಿಸಬೇಕಿತ್ತೋ ಯಾವುದನ್ನು ತಿಳಿದು‌ನಡೆಯಬೇಕಿತ್ತೋ ಅದನ್ನು ಬಿಟ್ಟು ಬೇರೆದಾರಿಯಲ್ಲಿ ನಡೆದಷ್ಟೂ ಹಿಂಸೆ ತಪ್ಪಿದ್ದಲ್ಲ.
 ಹಾಗಾಗಿ ಈ ಹಿಂಸೆ ಪದವನ್ನು ಒಂದು ಮಾತಲ್ಲಿ ಹೇಳಲು ಕಷ್ಟ ಹಾಗೆ ಧರ್ಮ ವನ್ನು ಒಂದು ಪದದಲ್ಲಿ ಹೇಳಲು  ಅಹಿಂಸೋ ಪರಮಧರ್ಮ: ಎಂದರು.
ಅವರವರ ಮನೋ ದೌರ್ಬಲ್ಯ ಗಳ ಹಿಂದೆ ಕಾರಣವಿದೆ.
ಮನಸ್ಸಿಗೆ ಹಿಂಸೆ ಎಂದರೆ ಇನ್ಯಾರೋ ಬಂದು ಸರಿಮಾರ್ಗ ತೋರಿಸಬಹುದು. ಮಾರ್ಗದರ್ಶಕರೆ ಹಿಂಸೆಗೆ ಪ್ರಚೋಧನೆ‌ ನೀಡಿದಾಗಲೇ‌  ಬೇಲಿಯೇ   ಎದ್ದು    ಹೊಲಮೇಯ್ದಂತಾ
ಗುವುದು. 
ನಮ್ಮ ಸಮಸ್ಯೆಗೆ ಪರಿಹಾರ ಹೊರಗಿರದು ಒಳಗೇ ಇತ್ತು.
ಒಳಗಿರಲು ಹಿಂಸೆಯಾದರೆ  ಏನೂ ಮಾಡಲಾಗದು.ಏನಂತೀರ?
ಜೀವಾತ್ಮನಿಗೆ ಹಿಂಸೆಯಾದರೆ  ಅದು ಕರ್ಮ ವಾಗಿರುತ್ತದೆ. ಕರ್ಮದಲ್ಲಿ ಸತ್ಯ ಧರ್ಮ ಬೆರೆತಾಗ ಹಿಂಸೆಯಾಗದು.
ಪರಮಾತ್ಮನೊಂದಿಗಿದ್ದವರಿಗೆ ಹಿಂಸೆ ಎನಿಸಲಿಲ್ಲ.

No comments:

Post a Comment