ಭೂ ಋಣ ತೀರಿದಾಗ ಮುಕ್ತಿ
ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನನಡೆಸುತ್ತಾ ...
Tuesday, August 23, 2022
ಆತ್ಮಜ್ಞಾನಿ=ಭೌತವಿಜ್ಞಾನಿ?
ಅಧ್ಯಾತ್ಮ ವಿಜ್ಞಾನ ಮತ್ತು ಭೌತ ವಿಜ್ಞಾನ ಎರಡೂ ಸೇರೋದೂ ಒಂದೇ ಕಡೆ. ಆಕಾಶತತ್ವವನ್ನು ಭೂಮಿ ಮೇಲಿದ್ದೇ ಯಾವುದೇ ಜೀವ ಜಂತುಗಳಿಗೆ ತೊಂದರೆ ಕೊಡದೆ ತಪ್ಪಸ್ಸಿನಿಂದ ತಿಳಿದ ಆತ್ಮಜ್ಞಾನಿಗಳಿಗೂ, ಆಕಾಶದೆತ್ತರ ಹಾರಿ,ಬೇರೆ ಬೇರೆ ಗ್ರಹಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ ಭೂಮಿಯ ಮೇಲಿದ್ದರೂ ಆಕಾಶದೆತ್ತರ ದ ಚಿಂತನೆಯಲ್ಲಿಯೆ ಜೀವನ ನಡೆಸುವ ಭೌತ ವಿಜ್ಞಾನಿಗೂ ವ್ಯತ್ಯಾಸವಿಷ್ಡೆ. ಇವರಿಂದ ಅಲ್ಪ ಸ್ವಲ್ಪ ಜ್ಞಾನಪಡೆದು ಭೂಮಿಯಲ್ಲಿ ಜೀವನನಡೆಸುವ ಮಾನವರಿಗೆ ಮಾತ್ರ ಇಬ್ಬರ ಶಕ್ತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅರ್ಧ ಸತ್ಯದ ರಾಜಕೀಯದಲ್ಲಿಯೇ ಕಾಲಹರಣ ಮಾಡಿಕೊಂಡು ಜೀವನದ ಸತ್ಯಾಸತ್ಯತೆಯನ್ನು ತಿಳಿಯಲಾಗದೆ ಭೂಮಿಯಲ್ಲಿ ಸಮಸ್ಯೆಗಳೇ ಬೆಳೆಸಿರೋದು. ಆ ಸಮಸ್ಯೆಯೊಳಗೇ ಜೀವನ ನಡೆಸೋ ಏಕೈಕ ಪ್ರಾಣಿಸಂಸಾರಿ. ಸಸ್ಯಗಳನ್ನು ತಿಂದು ಬದುಕಿದವರು ಸಸ್ಯಹಾರಿ, ಪ್ರಾಣಿಗಳನ್ನು ತಿಂದು ಬದುಕಿದವರು ಶಾಕಾಹಾರಿಗಳು,ಸಮಸ್ಯೆಗಳನ್ನು ತಿಂದು ಬದುಕಿದವರೆ ಸಂಸಾರಿಗಳು. ಒಟ್ಟಿನಲ್ಲಿ ಸಂಸಾರಿಗಳಿಗಿರುವಷ್ಡು ಸಮಸ್ಯೆ ಯಾವ ಆತ್ಮಜ್ಞಾನಿಗೂ ಇಲ್ಲ ವಿಜ್ಞಾನಿಗೂ ಇಲ್ಲ. ಇದಕ್ಕೆ ಕಾರಣವೇ ಯಾರೋ ಕಂಡುಹಿಡಿದಸತ್ಯವನ್ನು ನಾನು ಕಂಡು ಹಿಡಿದೆ ಎನ್ನುವ ಅಹಂಕಾರ,ಸ್ವಾರ್ಥ ದ ವ್ಯವಹಾರ ಜ್ಞಾನ. ಅತಿಯಾದರೆ ಗತಿಗೇಡು.
Subscribe to:
Post Comments (Atom)
-
ಅಧ್ಯಾತ್ಮ ಸಂಶೋದನೆಯ ತತ್ವಮಸಿಯ ಅರ್ಥ ತಿಳಿದವರು ನೀನು ಅದೇ ಆಗಿದ್ದೀಯ ಎನ್ನುವ ಸತ್ಯದೆಡೆಗೆ ಬ್ರಹ್ಮಜ್ಞಾನದ ಕಡೆಗೆ ದೈವತ್ವದೆಡೆಗೆ ಸಾಗಿದ್ದರು. ಈಗಲೂ ತತ್ವಮಸಿ ಪದವಿದೆ....
-
ದ್ವೇಷ ಸೇಡು ಕೋಪ ಹಠ ಎಲ್ಲವೂ ಸಾಧನೆಗೆ ಅಡೆತಡೆಗಳನ್ನು ಸೃಷ್ಟಿ ಮಾಡುವುದೆನ್ನುವುದು ಅಧ್ಯಾತ್ಮ ಸತ್ಯ. ಹಾಗಾದರೆ ವಾಸ್ತವದಲ್ಲಿ ಇವೆಲ್ಲವೂ ರಾರಾಜಿಸುತ್ತಿವೆ ಹರಡುತ್ತಿದ...
-
ಸಾಮಾನ್ಯ ಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಾಮಾನ್ಯರಂತೆ ನಡೆಯುವುದೇ ಪ್ರಜಾಪ್ರಭುತ್ವದ ವಿಶೇಷ ಜ್ಞಾನ.ಆದರಿದು ಕಷ್ಟಪಡುವ ಸ್ಥಿತಿಯಲ್ಲಿದೆ ಎಂದರೆ ನಮ್ಮ ಸಹಕಾರ ಅದಮಾನ್ಯರ...
No comments:
Post a Comment