ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Saturday, September 3, 2022

ಎಲ್ಲಿರೋದು ರಾಮರಾವಣರು?

ಸತ್ಯ ಕಠೋರವಾಗುವುದು ಅಸತ್ಯ ಬೆಳೆದಾಗ ಮಾತ್ರ.ಹಾಗೆ ನೋವು ಹೆಚ್ಚಾಗುವುದು ಅಧರ್ಮ ಬೆಳೆದಾಗ ಇನ್ನು ಭೌತಿಕ ವಿಜ್ಞಾನ ಬೆಳೆಯೋದು ಅಧ್ಯಾತ್ಮ ದ ಹಿಂದಿರುವ ಸತ್ಯ ತಿಳಿಯುವ ಪ್ರಯತ್ನ ನಡೆಯದಿದ್ದಾಗ.ಇದಕ್ಕೆ ಕಾರಣವೇ ಅರ್ಧ ಸತ್ಯದ ರಾಜಕೀಯ ಪ್ರಭಾವ. ಇದು ಧಾರ್ಮಿಕ ಕ್ಷೇತ್ರವನ್ನೇ ಆವರಿಸಿದರೆ ಸದ್ಗತಿ ದೊರೆಯುವುದು ಬಹಳ ಕಷ್ಟ.ದೇಶ ಹಿಂದುಳಿಯೋದು ವಿದೇಶ ವ್ಯಾಮೋಹದಿಂದ.
ಅಸುರರೊಳಗಿರುವ ಸುರ, ಅಜ್ಞಾನದೊಳಗಿನ ಜ್ಞಾನ, ಅಧರ್ಮದೊಳಗಿನ ಧರ್ಮ, ಅಸತ್ಯದೊಳಗಿನ ಸತ್ಯವು
ಜೊತೆಗಿದ್ದರೂ  ಬೇರೆ ಬೇರೆ ಕಾಣುತ್ತದೆ ಹಾಗೆ ಅದ್ವೈತ ದ ಜೊತೆಗೆ ದ್ವೈತ ವೂ ಇದೆ. ಇದನ್ನು ಒಳಹೊಕ್ಕಿ ನೋಡಲು ಬೇಕು ಸ್ವತಂತ್ರ ಜ್ಞಾನ.ರಾಮರಾವಣರನ್ನು ಮಾನವರು ಬೇರೆ ಬೇರೆ ಕಂಡರೂ ರಾಮನೊಳಗೇ ರಾವಣನಿರೋವಾಗ ಬೇರೆ ಮಾಡಲು  ನಮ್ಮೊಳಗಿನ ಅಸುರಿ ಗುಣಬಿಡಬೇಕಷ್ಟೆ. ಇಡೀ ಬ್ರಹ್ಮಾಂಡದ  ಸೃಷ್ಟಿ, ಸ್ಥಿತಿ ಲಯವನ್ನು ತಡೆಯಲಾಗದು. 

No comments:

Post a Comment