ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, September 9, 2022

ಸಂನ್ಯಾಸಿ ×ಸಂಸಾರಿ?

ಅದ್ವೈತ ಸಿದ್ದಾಂತ ವನ್ನು ಸಂನ್ಯಾಸಿಯಾಗಿದ್ದುತಿಳಿಯುವುದೇ ಬೇರೆ,ಸಂಸಾರದಲ್ಲಿದ್ದು ತಿಳಿಸುವುದೇ ಬೇರೆ. ಶ್ರೀ ಶ್ರೀ ಶಂಕರಾಚಾರ್ಯರಂತಹ ಮಹಾಯೋಗಿಗಳ  ಅನುಭವವನ್ನು ಈಗಿನ   ರಾಜಕೀಯದಿಂದ ಅರ್ಥ ಮಾಡಿಕೊಳ್ಳಲು ಕಷ್ಟ.ರಾಜಯೋಗದಿಂದ ಸಾಧ್ಯವಿದೆ. ತತ್ವಜ್ಞಾನವನ್ನು ತಂತ್ರಜ್ಞಾನದ ಮಾಧ್ಯಮದಿಂದ ಪ್ರಚಾರ ಮಾಡಬಹುದು. ಅದರ ಆಳಕ್ಕೆ ಇಳಿಯಲು ಸ್ವತಂತ್ರ ಜ್ಞಾನದ ಅಗತ್ಯವಿದೆ. ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನ
ಅಗತ್ಯವಾಗಿ ಇಂದು ಬೇಕಾಗಿದೆ. ರಾಜಯೋಗ ತನ್ನ ತಾನರಿತು ನಡೆಯೋದಕ್ಕೆ ಪರಮಾತ್ಮನೆಡೆಗೆ ನಡೆಸುತ್ತದೆ.
ರಾಜಕೀಯ ತನ್ನ ತಾನರಿಯದೆ ಪರರನ್ನು  ನಡೆಸುವತ್ತ ನಡೆಸಿ ಪರಕೀಯರಾಗಿಸಬಹುದು. ಅಧರ್ಮ,ಅಸತ್ಯ,ಅನ್ಯಾಯ,ವಿದೇಶ, ಅಜ್ಞಾನ,ಅದ್ವೈತ ಹೀಗೇ  ಮೊದಲನೆಯ ಅ ಪದವನ್ನು  ಬಿಟ್ಟು ಆ ಕಡೆ ನಡೆದವರು ಮಹಾತ್ಮರು. ಅಹಂಕಾರ, ಅಸಹಕಾರ,
ಅಸಹಾಯಕತೆಯೇ  ಇದಕ್ಕೆ ಕಾರಣ.ಇದನ್ನು ಆತ್ಮವಿಶ್ವಾಸ
,ಆತ್ಮಸಮಾಲೋಚನೆ,ಆತ್ಮಾವಲೋಕನ ದಿಂದ
ಮೆಟ್ಟಿ ನಿಂತು  ಆತ್ಮಜ್ಞಾನದ ಸಾಧನೆ ಮಾಡಿದ್ದಾರೆ ಮಹಾತ್ಮರು.

No comments:

Post a Comment