ಲೇಖನ ಬಹಳ ದೊಡ್ಡದಾಯಿತು ಓದಲು ಕಷ್ಟ ಎನ್ನುವವರು ಓದುವ ಅಗತ್ಯವಿರದು. ಮಕ್ಕಳ ಶಾಲಾ ಪುಸ್ತಕದ ವಿಷಯಗಳು ನಮಗೆ ಸಂಸಂಬಂಧ ವಿಲ್ಲದಿದ್ದರೂ ಓದಿಕೊಂಡು ಒತ್ತಾಯದಿಂದ ಮಕ್ಕಳ ತಲೆಗೆ ತುಂಬುವ ಕೆಲಸಕ್ಕೆ ಹಣ ಕೊಡುವರು. ಆದರೆ ಅಧ್ಯಾತ್ಮ ಸತ್ಯಕ್ಕೆ ಬೆಲೆಕಟ್ಟುವುದಿಲ್ಲ ಹೀಗಾಗಿ ಅಸತ್ಯ ಬೇಗನೇ ಪ್ರಚಾರಕ್ಕೆ ಬರುತ್ತದೆ. ಪ್ರಚಾರಕ್ಕಾಗಿ ಗುರುವನ್ನು ದೇವರನ್ನು ಬಳಸಿದರೆ ಜ್ಞಾನ ಬಂದರೆ ಸರಿ.
ಹಿಂದೂಗಳಲ್ಲಿ ಸಾಕಷ್ಟು ಮಂದಿ ಸಾಯಿಬಾಬಾರನ್ನು ಗುರುವೆಂದು ಅನುಸರಿಸುತ್ತಾರೆ.ಇದನ್ನು ವಿರೋಧಿಸುವವರೂ ಇದ್ದಾರೆ.ಇದರ ಬಗ್ಗೆ ಚಿಂತನೆ ನಡೆಸಿದರೆ ಗುರು ಯಾವತ್ತೂ ಒಂದು ವ್ಯಕ್ತಿಯಾಗಿರುವುದಿಲ್ಲ ಶಕ್ತಿಯಾಗಿ ಜ್ಞಾನವನ್ನು ವಿಜ್ಞಾನವನ್ನು ಭಕ್ತರಿಗೆ ತಿಳಿಸುತ್ತಲಿರುವರು. ಜ್ಞಾನವೆಂದರೆ ತಿಳುವಳಿಕೆ ವಿಜ್ಞಾನ ವಿಶೇಷವಾಗಿರುವ ತಿಳುವಳಿಕೆಯಾಗಿರುತ್ತದೆ.
ವಾಸ್ತವದಲ್ಲಿ ಎಷ್ಟೋ ಗುರುಗಳಿರುವರು.ಭಕ್ತರೂ ಇರುವರು.ಆದರೆ ಅಧ್ಯಾತ್ಮ ಭೌತ ವಿಜ್ಞಾನದಲ್ಲಿ ಅಂತರ ಬೆಳೆದು ಗುರುಗಳ ಶಕ್ತಿಯನರಿತು ತತ್ವದೆಡೆಗೆ ಹೋಗೋರು ಕಡಿಮೆಯಾಗಿರುವ ಕಾರಣದಿಂದಾಗಿ ಹಣದಿಂದ ಗುರುವನ್ನು ಗೌರವಿಸುವರು.
ಗುರು ಬಯಸೋದು ಜ್ಞಾನ. ಜ್ಞಾನವೇ ಗುರು. ಜ್ಞಾನಸರಸ್ವತಿ ಇಲ್ಲದ ಲಕ್ಮಿಯನ್ನು ಜನ ದುರ್ಭಳಕೆ ಮಾಡಿಕೊಂಡು ಆಳುವರು.
ಇದನ್ನು ಶ್ರೀ ಶಂಕರಾಚಾರ್ಯರ ಕಾಲದಲ್ಲಿ ಶಂಕರರು ಅಧ್ವೈತ ಸಿದ್ದಾಂತವನ್ನು ಪ್ರತಿಪಾದಿಸುವುದರ ಮೂಲಕ ಜನರ ಅಜ್ಞಾನವನ್ನು ಹೋಗಲಾಡಿಸಲೆಂದೇ ಭಾರತದ ನಾಲ್ಕು ದಿಕ್ಕಿನಲ್ಲಿಯೂ ಜ್ಞಾನಪೀಠ ಸ್ಥಾಪನೆ ಮಾಡಿದ್ದರೂ ಇಂದಿಗೂ ಜನರಲ್ಲಿ ವಿಜ್ಞಾನವೆಂದರೆ ಭೌತಿಕ ಸತ್ಯ ಎನ್ನುವ ಅರ್ಧ ಸತ್ಯದಲ್ಲಿ ಗುರುವಂದನೆ ನಡೆದಿರೋದು ದುರಂತ.
ಧಾರ್ಮಿಕ ಕ್ಷೇತ್ರದಲ್ಲಿಯೇ ಹಣವಿದ್ದರಷ್ಟೆ ಗುರುಗಳನ್ನು ನೇರವಾಗಿ ಬೇಟಿ ಮಾಡಲು ಅವಕಾಶ ಹಲವು ಕಡೆ ಇದೆ.
ಶ್ರೀ ಸಾಯಿಬಾಬರ ಚರಿತ್ರೆ ಎಲ್ಲರಿಗೂ ತಿಳಿದಿದೆ. ಮುಸ್ಲಿಂ ಜನಾಂಗದಲ್ಲಿದ್ದು ಅನೇಕ ಪವಾಡಗಳ ಮೂಲಕ ಜನರಿಗೆ ನೀತಿ ಬೋಧನೆ ಮಾಡಿದ್ದ ಮಹಾತ್ಮರು .ಸಾಮಾನ್ಯವಾಗಿ ಬಾಬಾರ ಭಕ್ತರು ಹಣದಿಂದ ಶ್ರೀಮಂತ ರಾಗಿರುವುದನ್ನು ಕಾಣಬಹುದು.
ಹಣವಿದ್ದರೆ ಜನರಿಗೆ ಸಂಸಾರ ನಡೆಸಲು ಸಾಧ್ಯ.
ಹಾಗೆ ಇವರನ್ನು ಶಿವನ ಅವತಾರವೆನ್ನುವರು. ಶ್ರೀ ಶಂಕರಾಚಾರ್ಯರೂ ಶಿವನ ಅವತಾರವೇ ಆಗಿದ್ದರಿಂದ ಶಿವಶಕ್ತಿಯ ಸಮಾನತೆಗಾಗಿ ಜ್ಞಾನಯೋಗದ ಮೂಲಕ ಶಕ್ತಿಪೀಠ ಸ್ಥಾಪನೆ ಮಾಡಿದ್ದರಿಂದಾಗಿ ಭಾರತಇಂದಿಗೂ ವಿಶ್ವ ಗುರು ಎನಿಸಿಕೊಂಡಿದೆ.ಇಲ್ಲಿರುವ ಅಧ್ಯಾತ್ಮ ವಿದ್ಯೆ ಬೇರೆ ಯಾವ ದೇಶದಲ್ಲೂ ಕಾಣೋದಿಲ್ಲ ಆದರೆ ನಮ್ಮ ಶಿಕ್ಷಣ ಇದರಿಂದ ದೂರವಾಗಿರುವ ಕಾರಣದಿಂದ ದೂರದ ದೇಶದಲ್ಲಿ ಭಾರತೀಯ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ.
ಆದರೆ ಮೂಲದಲ್ಲಿ ಇರದಿದ್ದರೆ ಮೂಲ ಗುರು ಕಾಣುವರೆ?
ಈ ವಿಚಾರವಾಗಿ ಚರ್ಚೆ ನಡೆಸದಿದ್ದರೆ ಗುರು ಗಳಲ್ಲಿಯೇ ಅಂತರ ಬೆಳೆಯುತ್ತಾ ಗುರಿ ತಲುಪದೆ ಜೀವ ಹೋಗುತ್ತದೆ.
ಒಟ್ಟಿನಲ್ಲಿ ಗುರುವಿನಿಂದ ಹಣ ಸಿಗುವುದೆ ಜ್ಞಾನವೇ ಎಂದು ಜನ ಅರ್ಥ ಮಾಡಿಕೊಳ್ಳಲು ಸತ್ಸಂಗ,ಸದಾಚಾರ,ಸ್ವಾಭಿಮಾನ ಸ್ವಾವಲಂಬನೆ ಸ್ವತಂತ್ರ ಜ್ಞಾನದೆಡೆಗೆ ನಡೆದಾಗಲೇ ಒಳಗಿದ್ದು ದಾರಿತೋರಿಸುವ ಅರಿವೆಂಬ ಗುರುವಿನ ದರ್ಶನ ಆಗುತ್ತದೆ. ಒಳಗಿರುವಗುರು ಬಿಟ್ಟು ಹೊರಗಿನ ಗುರುವನ್ನು ಆಶ್ರಯಿಸಿದರೆ ಹಿಂದಿರುಗಿ ಒಳಗೆ ಬರಲೇಬೇಕೆನ್ನುತ್ತದೆ ಸನಾತನ ಹಿಂದೂಧರ್ಮ.
ಯಾವಾಗ ಒಳಗಿನ ಅರಿವಿಗೆ ವಿರುದ್ದ ವಿಷಯಗಳು ಹೊರಗಿನಿಂದ ಒಳಗೆ ಸೇರಿಸುವ ಮಾನವನ ಪ್ರಯತ್ನಕ್ಕೆ ತಕ್ಕಂತೆ ಫಲ ಇಂದು ಅನುಭವಿಸುವಂತಾಗಿದೆ. ಆದರೆ ಎಲ್ಲಾ ಒಂದೇ ಎನ್ನುವ ಹಾಗಿಲ್ಲ. ಇನ್ನೂ ಎಷ್ಟೋ ಸನಾತನಿಗಳು ಹಿಂದಿರುವ ವಿಜ್ಞಾನವನ್ನು ಅರಿತು ಇದ್ದಲ್ಲಿ ಯೇ ಸಾಧಕರಾಗಿದ್ದಾರೆ. ಒಟ್ಟಿನಲ್ಲಿ ಸತ್ವ ರಜಸ್ಸು ತಮಸ್ಸಿನ ಗುಣಗಳಿಂದ ಜೀವನದಲ್ಲಿ ಬದಲಾವಣೆಗಳಾಗಿವೆ.
ಎಲ್ಲಾ ಪರಮಾತ್ಮನ ಒಳಗಿದ್ದರೂ ಸತ್ವದಿಂದ ಸತ್ಯವರಿತು ಪರಮಾತ್ಮನ ಸೇರೋದು ಮೇಲ್ಮಟ್ಟದಲ್ಲಿರುವುದರಿಂದ ಮೇಲಕ್ಕೆ ಹೋಗೋದು ಕಷ್ಟ. ಕೆಳಗಿಳಿಯುವುದು ಹಿಂದುಳಿಯುವುದು ಸುಲಭ. ಸುಲಭವಾಗಿರೋದನ್ನು ನಾವು ಮಾಡಿದೆವು. ಕಷ್ಟವಾಗಿದ್ದು ಮಹಾತ್ಮರು ಮಾಡಿದ್ದರು. ಪ್ರಯತ್ನ ನಮ್ಮದು ಫಲ ಭಗವಂತನದು.
ಆಕಾಶಕ್ಕೆ ಏಣಿ ಹಾಕಿ ಏರೋದಕ್ಕೆ ಕಷ್ಟ. ಏರೋಪ್ಲೇನ್ ಮೂಲಕ ಹೋದರೂ ಭಗವಂತ ಕಾಣೋದಿಲ್ಲ.
ಹೀಗೇ ನಿರಾಕಾರದಲ್ಲಿರುವ ಶಕ್ತಿಯನರಿತು ನಡೆಯೋದು ಅದ್ವೈತ. ಅದನ್ನು ಸಾಕಾರಕ್ಕೆ ತಂದರೆ ದ್ವೈತ. ಇದರಿಂದ ಅದ್ವೈತ ದೆಡೆಗೆ ಸಾಗಿದರೆ ವಿಶಿಷ್ಟಾದ್ವೈತ.
ಹಣದಿಂದ ದೈವತ್ವವಲ್ಲ. ಜ್ಞಾನದಿಂದ ದೈವತ್ವ ಬೆಳೆಸಿದವರು ಗುರುವಾದರು.
ಗುರುವಿನಿಂದ ಶಿಷ್ಯನ ಜ್ಞಾನ ಬೆಳೆದು ದೇವರನ್ನು ಕಾಣುವ ಭಾಗ್ಯ ದೊರೆಯಿತು. ಈಗಲೂ ಗುರುಗಳಿರುವರು.
ನೋಡುವ ದೃಷ್ಟಿ ಕೋನ ಬದಲಾದರೆ ಅವರಲ್ಲಿ ದೇವರು ಕಾಣುವರು. "ಅಹಂ ಬ್ರಹ್ಮಾಸ್ಮಿ"
ನಾನೇ ಬ್ರಹ್ಮನಾದರೆ ಜೊತೆಗೆ ಜ್ಞಾನ ದೇವತೆ ಇರಬೇಕಲ್ಲವೆ? ನಾನೇ ಎಲ್ಲಾ ಎಂದರೆ ಎಲ್ಲರಲ್ಲಿಯೂ ನಾನೇ ಇರೋದಲ್ವ?
ನನ್ನಿಂದಲೇ ಎಲ್ಲಾ ನಡೆದಿದೆ ಎಂದರೆ ಭ್ರಷ್ಟಾಚಾರ ವೂ ಇದರೊಳಗಿದೆಯಲ್ಲ. ಒಟ್ಟಿನಲ್ಲಿ ದೇವಾಸುರರ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ನಾನು ಹೋಗಬೇಕು.
ನಾನಿರುವಾಗಲೇ ಅರಿವನ್ನು ಬೆಳೆಸಿಕೊಂಡು ನಾನೆಂಬ ಅಹಂಕಾರ ಹೋದಾಗಲೇ ನಾನೆಂಬುದಿಲ್ಲ ನಾನು ಕಾರಣಮಾತ್ರನೆನ್ನುವ ಸತ್ಯದ ಅರಿವಿನಲ್ಲಿದ್ದು ಗುರುಗಳ ಮಾರ್ಗದರ್ಶನದಲ್ಲಿ ನೇರವಾಗಿ ಸತ್ಯದೆಡೆಗೆ ಸಾಗಬಹುದು.
ಗುರು ಭಕ್ತರಿಗೆ ಭೌತಿಕದಲ್ಲಿ ಆಸ್ತಿ ಅಂತಸ್ತು ಹಣ ಅಧಿಕಾರ ಎಲ್ಲಾ ಸುಖವಿದ್ದರೂ ಅದನ್ನು ಬಳಸುವ ಜ್ಞಾನವಿದ್ದರೆ ಉತ್ತಮ. ಹಾಗೇ ಎಲ್ಲಾ ಗುರುಗಳ ಶಿಷ್ಯ ವರ್ಗ ಬೇಧ ಬಿಟ್ಟು ನಡೆಯಲಾಗಿಲ್ಲವೆಂದರೆ ಹಣ ಬೇರೆ ಜ್ಞಾನ ಬೇರೆಯಾಗಿರುತ್ತದೆ.
ರಾಜಕೀಯ ಕ್ಷೇತ್ರದಲ್ಲಿ ಹಣದ ದುರ್ಭಳಕೆ ಆದರೆ ಜನ ಪ್ರಶ್ನೆ ಮಾಡುತ್ತಾರೆ.ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಆದರೆ ಜನ ಪ್ರಶ್ನೆ ಮಾಡೋದಿಲ್ಲ. ದೇವರು ಉತ್ತರ ಕೊಡುತ್ತಾರೆ.
ಹಾಗೆ ಗುರುವನ್ನು ದಾರಿತಪ್ಪಿಸಲಾಗದು. ಜನ ಅರ್ಥ ಮಾಡಿಕೊಳ್ಳದೆ ದಾರಿತಪ್ಪಬಹುದಷ್ಟೆ.
ಭೌತಿಕದ ದೃಷ್ಟಿಯಲ್ಲಿ ಗುರು ವ್ಯಕ್ತಿಯಾಗಿ ಕಾಣಬಹುದಷ್ಟೆ ಅಧ್ಯಾತ್ಮ ದ ದೃಷ್ಟಿಯಿಂದ ನೋಡಿದಾಗಲೇ ಗುರುವಿನಶಕ್ತಿ ಅರಿವಿಗೆ ಬರುತ್ತದೆ.
ಬೇಧವಿಲ್ಲದ ತತ್ವವೇ ಅಧ್ವೈತ. ಬೇಧ ಹೆಚ್ಚಾದರೆ ಭಿನ್ನಾಭಿಪ್ರಾಯ ದ್ವೇಷದ ಅಂತರದಲ್ಲಿ ಅಸುರಿ ಶಕ್ತಿಯ ಸಾಮ್ರಾಜ್ಯ ವಾಗುತ್ತದೆ. ಒಟ್ಟಿನಲ್ಲಿ ಕಣ್ಣಿಗೆ ಕಾಣುವ ದೇವರು ಗುರು. ಮೊದಲ ಗುರು ತಾಯಿ.ತಾಯಿಯನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಬೇಕು.ತಾಯಿಯೇ ಅಜ್ಞಾನದಲ್ಲಿ ಇದ್ದರೆ ಸರಿಯಾದ ಶಿಕ್ಷಣ ಸ್ತ್ರೀ ಗೆ ಕೊಡಬೇಕಿತ್ತು. ಭಾರತದಲ್ಲಿ ಇದು ಎಷ್ಟರಮಟ್ಟಿಗೆ ನಡೆದಿದೆ?
ಹೆಣ್ಣೊಂದು ಕಲಿತರೆ ಸಂಸಾರವೇ ಕಲಿತಂತೆ ಎಂದರು.ಆದರೆ ಕಲಿಕೆ ವಿಚಾರ ಹೊರಗಿನದ್ದಾದರೆ ಒಳಗಿನ ಸತ್ಯ ತತ್ವ ಸತ್ವ ಹಿಂದುಳಿದಂತೆಯೇ ಸರಿ.
ಪುರಾಣ ಇತಿಹಾಸದ ಕಥೆ ಹಿಡಿದು ಹಣ ಮಾಡಬಹುದು.
ಆದರೆ ಅದರೊಳಗಿದ್ದ ಧರ್ಮ ಸೂಕ್ಮತೆ ಅರ್ಥ ಆಗಬೇಕಾದರೆ ಸರಿಯಾದ ಆಧ್ಯಾತ್ಮಿಕ ವಿಜ್ಞಾನ ದ ಅರಿವು ಅಗತ್ಯವಿದೆ. ಎಷ್ಟು ಹಣವಿದ್ದರೂ ಸದ್ಬಳಕೆ ಆಗದೆ ಆಡಂಬರ,ವೈಭೋಗಕ್ಕೆ ಬಳಸಿದರೆ ಸಾಲ ತೀರದು. ಸಾಲವೇ ಶೂಲ ಯಾವುದಿದರ ಮೂಲ ಎಂದರೆ ಅಜ್ಞಾನವೇ ಇದರ ಮೂಲವಾಗಿದೆ.
ಇದನ್ನು ಹೊರಗಿನ ಗುರುವಾಗಲಿ ಸರ್ಕಾರವಾಗಲಿ ದೇವರಾಗಲಿ ಶಿಕ್ಷಣವಾಗಲಿ ವ್ಯವಹಾರವಾಗಲಿ ಸಾಲವಾಗಲಿ ತೀರಿಸಲಾಗದು.ಒಳಗಿನವರೆ ಎಚ್ಚರವಾದರೆ ಸಾಧ್ಯವಿದೆ.
ಒಳಗಿರುವ. ಅಸಮಾನ್ಯವಾದ ಅರಿವಿಗೆ ಪೂರಕವಾದ ವಿದ್ಯೆ ಕಲಿಸಿ ನಡೆಸುವವರೆ ಗುರುವಾಗಿರುವರು.
ಹಿಂದೆ ಗುರುಕುಲಗಳಲ್ಲಿ ಶಿಷ್ಯರಲ್ಲಿದ್ದ ಆಸಕ್ತಿ ಪ್ರತಿಭೆ ಜ್ಞಾನಕ್ಕೆ ಧರ್ಮ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನು ನೀಡುತ್ತಿದ್ದರೆಂದರೆ ರಾಷ್ಟ್ರ ವಿಶ್ವ ಗುರು ವಾಗಲು ಅಧ್ಯಾತ್ಮ ವಿದ್ಯೆಯೇ ಮೂಲಾಧಾರವಾಗಿತ್ತು.
ಈಗ ಕಾಲಬದಲಾಗಿದೆ. ಜ್ಞಾನ ವಿಜ್ಞಾನ ಬೇರೆ ಎಂದಾಗಿದೆ.
ಸ್ತ್ರೀ ಪುರುಷರ ನಡುವೆ ಅಂತರದಲ್ಲಿ ರಾಜಕೀಯ ಮನೆ ಮಾಡಿದೆ. ಅಜ್ಞಾನದೊಳಗಿರುವ ಜ್ಞಾನ,ಅಧರ್ಮದಲ್ಲಿ ಧರ್ಮ, ಅಸತ್ಯದಲ್ಲಿ ಸತ್ಯ,ವಿದೇಶದಲ್ಲಿ ದೇಶವನ್ನು ಸೇರಿಸಿ ತಾನೇ ಸರಿ ಎನ್ನುವ ಅಹಂಕಾರ ಸ್ವಾರ್ಥ ಮಾನವನಲ್ಲಿ ಇನ್ನಷ್ಟು ಅಜ್ಞಾನವನ್ನು ಬೆಳೆಸಿಕೊಂಡು ಗುರುವನ್ನು ಗುರುತಿಸೋದರಲ್ಲಿ ಸೋತಿರುವಾಗ ಸ್ವಯಂ ಪ್ರಕಾಶಕರಾಗಿ ಬೆಳಗಲು ಕಷ್ಟ. ಮಾನವ ಮನಸ್ಸು ಮಾಡಿದರೆ ಏನುಬೇಕಾದರೂ ಸಾಧನೆ ಮಾಡಬಹುದು. ಆದರೆ ಗುರು ಆಗೋದಕ್ಕೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಳಗಿನ ಸತ್ಯ ಧರ್ಮ ದೆಡೆಗೆ ನಡೆಯುವುದು ಮುಖ್ಯ ಎಂದಿರುವರು ಮಹಾತ್ಮರಾದ ಯೋಗಿಗಳು.
ವ್ಯಕ್ತಿ ಹೋದರೂ ಜ್ಞಾನಶಕ್ತಿ ಇರುವುದು.ಹೀಗಾಗಿ ಎಷ್ಟೋ ಜ್ಞಾನಿಗಳು ಮೌನವಾಗಿಯೇ ಜಗತ್ತನ್ನು ಅರಿತು ಗುರಿ ತಲುಪಿದ್ದಾರೆ... ಈಗ ಪ್ರಚಾರವೇ ಹೆಚ್ಚು.ಆಚಾರ ವಿಚಾರದಲ್ಲಿ ಶುದ್ದತೆ ಕುಸಿದಿದೆ ಎಂದರೆ ಪರಮಾತ್ಮನಿಗೆ ತಲುಪಿದೆಯೆ? ಗುರುಕೃಪೆ ಆಗಿದೆಯೆ? ಪ್ರಶ್ನೆ ಮಾಡಿದರೂ ತಪ್ಪು ಮಾಡದಿದ್ದರೂ ತಪ್ಪು. ಒಟ್ಟಿನಲ್ಲಿ ನಮಗೆ ತಪ್ಪು ಅರಿವಿಗೆ ಬಂದರೂ ಹಿಂದಿರುಗಿ ಹೋಗಲು ಕಷ್ಟವೆಂದರೆ ಅರ್ಧ ಸತ್ಯದ ಮಧ್ಯವರ್ತಿ ಮಾನವರಿಗೆ ಈ ಕಡೆ ಸುರರು ಇನ್ನೊಂದು ಕಡೆ ಅಸುರರಲ್ಲಿ ಸರಿ ಯಾರು ಎಂದು ತಿಳಿಯದೆ ಅತಂತ್ರಸ್ಥಿತಿಗೆ ಜೀವನ ತಲುಪಿದೆ ಎಂದರ್ಥ.
ಏನೂ ಇಲ್ಲ ಅತಿಯಾಗಿದ್ದನ್ನು ಬಿಟ್ಟು ಹೊರಡಬೇಕಷ್ಟೆ.
ಜ್ಞಾನವಾಗಲಿ ಹಣವಾಗಲಿ ಅತಿಯಾದರೆ ಸ್ವತಂತ್ರವಿರದು.
ಅವರವರ ಮೂಲದ ಗುರುಹಿರಿಯರ ಧರ್ಮ ಕರ್ಮಕ್ಕೆ ತಕ್ಕಂತೆ ನಡೆಯೋದನ್ನು ಕಲಿಸದ ವಿದ್ಯೆ ಅವಿದ್ಯೆಯಾಗಿ ಸಾಲ ಮಿತಿಮೀರಿದೆ. ಭೂಮಿಯನ್ನು ಆಳೋದಕ್ಕೆ ಅಧರ್ಮ ಅನ್ಯಾಯ ಅಸತ್ಯ ಬೆಳೆದಿದೆ. ತನ್ನ ತಾನರಿತು ನಡೆಯೋ ಜ್ಞಾನಶಕ್ತಿ ಬೆಳೆಸದ ಶಿಕ್ಷಣ ಹೊರಗಿನಿಂದ ಪಡಯಲಾಗಿದೆ.
ಹೊರಗಿನಿಂದ ಪಡೆದದ್ದು ಹೊರಗೆ ಕೊಟ್ಟು ಒಳಗಿಳಿಯಬೇಕು. ಒಳಗಿಳಿದಷ್ಟೂ ಕತ್ತಲೆಯೇ .ಆ ಕತ್ತಲಲ್ಲಿ ಬೆಳಕನ್ನು ತೋರಿಸುವವರೆ ಗುರು. ಗುರುವಾದವರಿಗೆ ಇದರ ಅನುಭವ ಇದ್ದರೆ ಶಿಷ್ಯರನ್ನು ಆ ದಾರಿಯಲ್ಲಿ ನಡೆಸಬಹುದು.
ಕಾಲ ಬದಲಾಗಿದೆ. ಹೀಗಾಗಿ ಕಾಲಕ್ಕೆ ತಕ್ಕಂತೆ ಜ್ಞಾನವೂ ಬದಲಾಗುತ್ತದೆ. ಆದರೆ ಮೂಲ ಸತ್ಯ ಒಂದೇ ಇರುತ್ತದೆ. ಭೂಮಿ ಒಂದೇ, ದೇಶ ಒಂದೇ, ಧರ್ಮ. ದೇವರು, ಜಾತಿ,ಭಾಷೆ ತಾಯಿ ಒಬ್ಬರೆ ಆದರೂ ಒಂದನ್ನು ಬಿಟ್ಟು ಹೊರಬಂದಾಗ ಹಲವು ಹಲವುಗಳಾಗಿ ಕವಲು ಒಡೆಯೋದು ಸಹಜ. ಒಡೆದದ್ದನ್ನು ಒಂದು ಮಾಡೋ ಶಕ್ತಿ ಗುರುಗಳಿಗಿದ್ದರೆ ತತ್ವ. ಇನ್ನಷ್ಟು ಬಿರುಕು ಭಿನ್ನಾಭಿಪ್ರಾಯ ಬೆಳೆಸಿದರೆ ತಂತ್ರ ಅತಂತ್ರಸ್ಥಿತಿಗೆ ತಲುಪಿಸುತ್ತದೆ. ಇಷ್ಟೇ ಜೀವನ.
ಊಟ ಉಪಚಾರ ಉಪಕಾರ ಹೊರಗಿನವರಿಗೆ ಮಾಡಿದರೆ ಪ್ರತಿಯಾಗಿ ಉಡುಗೊರೆ ಸಿಗುತ್ತದೆ. ಆದರೆ ಒಳಗಿನವರಿಗೆ ಮಾಡಿದರೆ ಇನ್ನಷ್ಟು ತಿರಸ್ಕಾರ ಅವಮಾನ, ಅಪಮಾನಕ್ಕೆ ಗುರಿಯಾದಂತೆಲ್ಲಾ ಮಾನವನ ಮನಸ್ಸು ಹದಗೆಡುತ್ತದೆ.
ಹೀಗಾಗಿ ತೋರುಗಾಣಿಕೆಯ ನಾಟಕವೇ ಪ್ರಧಾನವಾಗಿ ಸತ್ಯ ತಿಳಿಯದೆ ಅನುಭವಕ್ಕೆ ಬರದೆ ಜೀವ ಹೋಗುತ್ತದೆ. ಭೂಮಿಯಲ್ಲಿ ಜನಸಂಖ್ಯೆ ಬೆಳೆಯಲು ಅಜ್ಞಾನ ಕಾರಣ. ಜನಸಂಖ್ಯೆ ನಿಯಂತ್ರಣ ಕಾನೂನಿದೆ ಆದರೆ ಜ್ಞಾನದ ಶಿಕ್ಷಣ ಕಡ್ಡಾಯ ಮಾಡೋ ಕಾನೂನಿನ ಕೊರತೆಯಿದೆ. ಹೀಗಾಗಿ ಗುರಿ ತಲುಪದ ಜೀವಾತ್ಮ ಅತೃಪ್ತ ಆತ್ಮಗಳಾಗಿ ಅಲೆಯುವಂತಾಗಿದೆ.ಕಾಣದ ಆತ್ಮ ಕಾಣುವ ದೇಹದೊಳಗೆ ಸೇರಿಕೊಂಡು ಕುಣಿಸುತ್ತಿವೆ. ಕುಡಿತಕುಣಿತದಿಂದ ಪರಮಾತ್ಮ ಕಾಣುವನೆ?
ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು...